Sunday, January 30, 2011

ಬೆಂಗಳೂರಿನ ಸಾಯಿಬಾಬಾ ಮಂದಿರ - ಶ್ರೀ ಉತ್ತರಾಯಣ ಸಾಯಿ ಮಂದಿರ, ಸಂಸ್ಕೃತಿ ಕೇಂದ್ರ, ಉತ್ತರಾಯಣ ಮಂದಿರ, ನಂ.3, 5ನೇ ಅಡ್ಡರಸ್ತೆ, ಸುಧೀಂದ್ರ ನಗರ, ಈಜುಕೊಳ ಬಡಾವಣೆ, ಮಲ್ಲೇಶ್ವರಂ, ಬೆಂಗಳೂರು-560 003. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ.

ಈ ಮಂದಿರವು ಬೆಂಗಳೂರಿನ ಪ್ರಸಿದ್ದ ಬಡಾವಣೆಯಾದ ಮಲ್ಲೇಶ್ವರಂನ ಈಜುಕೊಳ ಬಡಾವಣೆಯಲ್ಲಿರುತ್ತದೆ. ಈ ಮಂದಿರದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

ಮಂದಿರದ ವಿಶೇಷತೆಗಳು:
ಈ ಮಂದಿರವನ್ನು 1955ನೇ ಇಸವಿಯಲ್ಲಿ ಮಂದಿರದ ಸಂಸ್ಥಾಪಕ ಅಧ್ಯಕ್ಷರಾದ ದಿವಂಗತ ಶ್ರೀ.ಎಸ್.ಆರ್.ಸುಬ್ರಮಣ್ಯಮ್ ರವರು ಪ್ರಾರಂಭಿಸಿದರು.   

ಈ ಮಂದಿರದಲ್ಲಿ ಕಪ್ಪು ಶಿಲೆಯ ಗಣಪತಿ, ಸುಬ್ರಮಣ್ಯ, ಶ್ರೀಲಕ್ಷ್ಮೀ ವೆಂಕಟೇಶ್ವರ, ಈಶ್ವರ, ನಂದಿ, ಪಾರ್ವತಿ, ಭಕ್ತಾಂಜನೇಯ, ಪತ್ನಿ ಸಮೇತರಾದ ನವಗ್ರಹ ದೇವರುಗಳನ್ನು ಪ್ರತಿಷ್ಟಾಪಿಸಲಾಗಿದೆ. ಅಲ್ಲದೇ, ಸುಂದರ ಅಮೃತ ಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಇತ್ತೀಚಿಗೆ ಸ್ಥಾಪಿಸಲಾಗಿದೆ. 









    ದೇವಾಲಯದ ಸಮಯ: 
    ಬೆಳಿಗ್ಗೆ 6:30 ರಿಂದ 11:00 ಘಂಟೆಯವರೆಗೆ
    ಸಂಜೆ 5:30 ರಿಂದ ರಾತ್ರಿ 8:30 ರವರೆಗೆ

    ದೇವಾಲಯದಲ್ಲಿ ನಡೆಯುವ ಸೇವೆಯ ವಿವರಗಳು 
    1. ಸಾಯಿಬಾಬಾರವರಿಗೆ ಅರ್ಚನೆಯನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 3/- ರುಪಾಯಿಗಳು.
    2. ಸಾಯಿಬಾಬಾರವರಿಗೆ ಪಂಚಾಮೃತ ಅಭಿಷೇಕವನ್ನು ಪ್ರತಿದಿನ ಮಾಡಲಾಗುತ್ತದೆ. ಸೇವಾ ಶುಲ್ಕ 70/- ರುಪಾಯಿಗಳು.
    3. ಸಾಯಿಬಾಬಾರವರಿಗೆ ರುದ್ರಾಭಿಷೇಕವನ್ನು ಪ್ರತಿದಿನ ಮಾಡಲಾಗುತ್ತದೆ. ಸೇವಾ ಶುಲ್ಕ 130/- ರುಪಾಯಿಗಳು.
    4. ಪ್ರತಿ ತಿಂಗಳ ತ್ರಯೋದಶಿಯಂದು ಸಂಜೆ 6 ಘಂಟೆಗೆ ಪ್ರದೋಷ ಪೂಜೆಯನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 35/- ರುಪಾಯಿಗಳು. 
    5. ಪ್ರತಿ ತಿಂಗಳ ಹುಣ್ಣಿಮೆಯಂದು ಬೆಳಿಗ್ಗೆ 9:30 ಕ್ಕೆ ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 40/- ರುಪಾಯಿಗಳು. 
    6. ಪ್ರತಿ ತಿಂಗಳ ಮೊದಲ ಶುಕ್ರವಾರದಂದು "ಅನ್ನ ಪ್ರಸನ್ನ" ಯೋಜನೆಯ ಅಡಿಯಲ್ಲಿ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಚಿಸುವ ಭಕ್ತರು 100/- ರುಪಾಯಿ ಅಥವಾ ಅದಕ್ಕೆ ಮೇಲ್ಪಟ್ಟು ಎಷ್ಟು ಬೇಕಾದರೂ ದೇಣಿಗೆಯನ್ನು ನೀಡಿ ಯೋಜನೆಯಲ್ಲಿ ಭಾಗವಹಿಸಬಹುದು. 
    7. ಪ್ರತಿ ತಿಂಗಳು ಗಣ ಹೋಮ ಸಹಿತ ಸಂಕಷ್ಟ ಚತುರ್ಥಿಯನ್ನು ಸಂಜೆ 5:30 ಕ್ಕೆ ಆಚರಿಸಲಾಗುತ್ತದೆ. ಸೇವಾ ಶುಲ್ಕ 50/- ರುಪಾಯಿಗಳು. 
    8. ಪ್ರತಿ ತಿಂಗಳ ಅಮಾವಾಸ್ಯೆಯಂದು ಸಂಜೆ 6 ಘಂಟೆಗೆ ಧನ್ವಂತರಿ ಹೋಮವನ್ನು ಏರ್ಪಡಿಸಲಾಗುತ್ತದೆ. ಸೇವಾ ಶುಲ್ಕ 35/- ರುಪಾಯಿಗಳು. 
    9. ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣೋತ್ಸವವನ್ನು ಮಂದಿರದಲ್ಲಿ ಆಚರಿಸಲಾಗುತ್ತದೆ. ಸೇವೆಯಲ್ಲಿ ಭಾಗವಹಿಸಲು ಇಚ್ಚಿಸುವ ಭಕ್ತರು 150/- ರುಪಾಯಿಗಳನ್ನು ನೀಡಿ ರಸೀದಿಯನ್ನು ಪಡೆಯತಕ್ಕದ್ದು. 
    10. ಶಿರಡಿ ಸಾಯಿಬಾಬಾರವರಿಗೆ ಸಾರ್ಥಕ ಗುರುವಾರ ಸೇವೆ (ಸಜ್ಜಿಗೆ ಸೇವೆ) ಯನ್ನು ಪ್ರತಿ ಗುರುವಾರ ಆಯೋಜಿಸಲಾಗಿದೆ. ಸೇವೆಯಲ್ಲಿ ಭಾಗವಹಿಸಲು ಇಚ್ಚಿಸುವ ಭಕ್ತರು 1 ಗುರುವಾರಕ್ಕೆ 50/- ರುಪಾಯಿಗಳು, 4 ಗುರುವಾರಗಳಿಗೆ 200/- ರುಪಾಯಿಗಳು, 12 ಗುರುವಾರಗಳಿಗೆ 500/- ರುಪಾಯಿಗಳು, 24 ಗುರುವಾರಗಳಿಗೆ 1000/- ರುಪಾಯಿಗಳು ಮತ್ತು 48 ಗುರುವಾರಗಳಿಗೆ 2000/- ರುಪಾಯಿಗಳನ್ನು ಕೊಟ್ಟು ಸೇವೆಯಲ್ಲಿ ಪಾಲ್ಗೊಳ್ಳಬಹುದು. 
    11. ಪ್ರತಿ ದಿನ ಬೆಳಿಗ್ಗೆ 8:30 ಕ್ಕೆ ಲಕ್ಷ್ಮೀ ವೆಂಕಟೇಶ್ವರನಿಗೆ ಸಹಸ್ರನಾಮವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 20/- ರುಪಾಯಿಗಳು. 
    12. ಪ್ರತಿ ಕುಮಾರ ಷಷ್ಠಿಯ ದಿನ ಬೆಳಿಗ್ಗೆ 9 ಘಂಟೆಗೆ ಸುಬ್ರಮಣ್ಯ ದೇವರಿಗೆ ಸಹಸ್ರನಾಮವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 20/- ರುಪಾಯಿಗಳು.
    13. ಪ್ರತಿ ವರ್ಷದ ರಥ ಸಪ್ತಮಿಯಂದು ಬೆಳಿಗ್ಗೆ 9 ಘಂಟೆಗೆ ಸೂರ್ಯನಾರಾಯಣ ಸ್ವಾಮಿಗೆ ಸಹಸ್ರನಾಮವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 20/- ರುಪಾಯಿಗಳು.
     ವಿಶೇಷ ಉತ್ಸವದ ದಿನಗಳು:

    1. ಗಣೇಶ ಚತುರ್ಥಿ.
    2. ವೈಕುಂಠ ಏಕಾದಶಿ.
    3. ಶಿವರಾತ್ರಿ. 
    4. ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ).
    ದೇವಾಲಯದಲ್ಲಿ ನಡೆಯುವ ಸಾಮಾಜಿಕ ಕಾರ್ಯಚಟುವಟಿಕೆಗಳು: 

    1. ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 6 ಘಂಟೆಯಿಂದ 7 ಘಂಟೆಯವರೆಗೆ ಯೋಗ ತರಗತಿಯನ್ನು ನಡೆಸಲಾಗುತ್ತಿದೆ. 
    2. ಪ್ರತಿ ದಿನ ಸಂಜೆ 6 ಘಂಟೆಗೆ ಸಾಮುಹಿಕ ವಿಷ್ಣು ಸಹಸ್ರನಾಮ ಪಾರಾಯಣ ನಡೆಸಲಾಗುತ್ತಿದೆ. 
    3. ಪ್ರತಿ ಭಾನುವಾರ ಬೆಳಿಗ್ಗೆ 9 ಘಂಟೆಗೆ ಮಕ್ಕಳಿಂದ ಭಗವದ್ಗೀತಾ ಪಠಣವನ್ನು ನಡೆಸಲಾಗುತ್ತಿದೆ. 
    4. ದೇವಾಲಯದ ವತಿಯಿಂದ ದೇವಾಲಯದ ಪಕ್ಕದಲ್ಲೇ ಒಂದು ಛತ್ರವನ್ನು ಕಟ್ಟಲಾಗಿದ್ದು ಅದನ್ನು ಮದುವೆ, ಮುಂಜಿ ಮತ್ತಿತರ ಶುಭ ಸಮಾರಂಭಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಬಾಡಿಗೆಗೆ ನೀಡಲಾಗುತ್ತಿದೆ. 
    ದೇಣಿಗೆ ನೀಡಲು ಕಳಕಳಿಯ ಮನವಿ:  

    ದೇವಾಲಯದ ಆಡಳಿತ ಮಂಡಳಿಯು 2011 ರಲ್ಲಿ 3 ವಿಶೇಷ ಯೋಜನೆಗಳನ್ನು ಹಮ್ಮಿಕೊಂಡಿದ್ದು ಅದರ ವಿವರಗಳು ಈ ಕೆಳಕಂಡಂತೆ ಇವೆ:

    1. ದೇವಾಲಯದ ಒಳಾಂಗಣದಲ್ಲಿ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ. 
    2. ಪತಂಜಲಿ ಯೋಗ ಮತ್ತು ಸ್ಮೃತಿ ಭವನದ ನಿರ್ಮಾಣದ ಯೋಜನೆ (PAYASM).
    3. ದೇವಾಲಯದ ಸಾಯಿಬಾಬಾ ವಿಗ್ರಹವನ್ನು ಹೊರತುಪಡಿಸಿ ಉಳಿದ ಎಲ್ಲಾ 7 ದೇವರುಗಳ ಗರ್ಭಗುಡಿಯಲ್ಲಿ ವಿಗ್ರಹಗಳ ಹಿಂಭಾಗ ಖಾಲಿ ಇರುವ ಜಾಗದಲ್ಲಿ ಹಿತ್ತಾಳೆಯ ಆಳೆತ್ತರದ ವಿಗ್ರಹಗಳನ್ನು ಸ್ಥಾಪಿಸುವ ಯೋಜನೆ.
    ಮೇಲಿನ ಈ ಎಲ್ಲಾ ಯೋಜನೆಗಳಿಗೆ ದೇಣಿಗೆ ನೀಡಲು ಬಯಸುವ ದಾನಿಗಳು ಚೆಕ್ ಅಥವಾ ಡಿ.ಡಿ.ರೂಪದಲ್ಲಿ "ಸಂಸ್ಕೃತಿ ಕೇಂದ್ರ, ಬೆಂಗಳೂರು" ಇವರ ಹೆಸರಿಗೆ ಸಂದಾಯವಾಗುವಂತೆ ದೇಣಿಗೆ ನೀಡಬಹುದು. 

    ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 
    ಸ್ಥಳ:
    ದತ್ತಾತ್ರೇಯ ದೇವಸ್ಥಾನದ ಬಸ್ ನಿಲ್ದಾಣದ ಪಕ್ಕದಲ್ಲಿ. ಈಜುಕೊಳ ಬಡಾವಣೆ.  

    ವಿಳಾಸ:  
    ಶ್ರೀ ಉತ್ತರಾಯಣ ಸಾಯಿ ಮಂದಿರ, ಸಂಸ್ಕೃತಿ ಕೇಂದ್ರ, 
    ಉತ್ತರಾಯಣ ಮಂದಿರ, ನಂ.3, 5ನೇ ಅಡ್ಡರಸ್ತೆ, 
    ಸುಧೀಂದ್ರ ನಗರ, ಈಜುಕೊಳ ಬಡಾವಣೆ, 
    ಮಲ್ಲೇಶ್ವರಂ, ಬೆಂಗಳೂರು-560 003. ಕರ್ನಾಟಕ.

    ಸಂಪರ್ಕಿಸಬೇಕಾದ ವ್ಯಕ್ತಿಗಳು: 
    ಶ್ರೀ.ಎಸ್.ಆರ್.ಮಂಜುನಾಥ್ / ಶ್ರೀಮತಿ.ಉಮಾ.

    ದೂರವಾಣಿ:  
    +91 80 2334 2145 / +91 98454 31954 / +91 95351 11637

    ಮಾರ್ಗಸೂಚಿ:
    ಈಜು ಕೊಳ ಬಡಾವಣೆ ಮುಖ್ಯ ರಸ್ತೆಯಲ್ಲಿ ದತ್ತಾತ್ರೇಯ ದೇವಸ್ಥಾನದ ಬಸ್ ನಿಲ್ದಾಣದ ಬಳಿ ಇಳಿಯುವುದು. ದೇವಾಲಯವು ಬಸ್ ನಿಲ್ದಾಣದ ಪಕ್ಕದಲ್ಲಿದೆ. ಬಸ್ ಗಳು ಮೆಜಿಸ್ಟಿಕ್ ನಿಂದ : 104 ಗಿರಿನಗರದಿಂದ : 36B, ವಿಜಯನಗರದಿಂದ: 176 ಮಹಾಲಕ್ಷ್ಮಿ ಬಡಾವಣೆಯಿಂದ: 187.  

    ಕನ್ನಡ ಅನುವಾದ: ಶ್ರೀಕಂಠ ಶರ್ಮ

    No comments:

    Post a Comment