Thursday, June 25, 2015

ಹೈದರಾಬಾದ್ ನ ಸಾಯಿ ಭಕ್ತರಿಂದ ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ 12.5 ಲಕ್ಷದ ಅಗ್ನಿಶಾಮಕ ವಾಹನದ ಕೊಡುಗೆ - ಕೃಪೆ: ಸಾಯಿಅಮೃತಧಾರಾ.ಕಾಂ

ಹೈದರಾಬಾದ್ ನ ಸಾಯಿ ಭಕ್ತರಾದ ಶ್ರೀ.ಬಿ.ಪಿ.ಎಸ್.ರೆಡ್ಡಿಯವರು ಇದೇ ತಿಂಗಳ 25ನೇ ಜೂನ್ 2015, ಗುರುವಾರ ದಂದು ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ 12.5 ಲಕ್ಷ ಬೆಲೆಬಾಳುವ ಅಗ್ನಿಶಾಮಕ ವಾಹನವನ್ನು ಕಾಣಿಕೆಯಾಗಿ ನೀಡಿದರು. ಅಗ್ನಿಶಾಮಕ ವಾಹನದ ಪೂಜೆಯನ್ನು ಮಹಾರಾಷ್ಟ್ರ ಸದನದ ವಿರೋಧ ಪಕ್ಷದ ನಾಯಕರಾದ ಶ್ರೀ.ರಾಧಾಕೃಷ್ಣ ವಿಕ್ಹೆ ಪಾಟೀಲ್ ರವರು ನೆರವೇರಿಸಿದರು. ಆ ಸಂದರ್ಭದಲ್ಲಿ ದಾನಿಗಳಾದ ಶ್ರೀ.ಬಿ.ಪಿ.ಎಸ್.ರೆಡ್ಡಿ, ಶ್ರೀ.ರಾಧಾಕೃಷ್ಣ ವಿಕ್ಹೆ ಪಾಟೀಲ್ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. 

 
ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, June 6, 2015

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ನ ವತಿಯಿಂದ ವಿಶ್ವ ಪರಿಸರ ದಿನದ ಆಚರಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ವತಿಯಿಂದ  ಇದೇ ತಿಂಗಳ 6ನೇ ಜೂನ್ 2015, ಶನಿವಾರ ದಂದು ವಿಶ್ವ ಪರಿಸರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಅಧ್ಯಕ್ಷರು ಹಾಗೂ ಮುಖ್ಯ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ವಿನಯ್ ಜೋಷಿಯವರು ಶ್ರೀ ಸಾಯಿ ಧರ್ಮಶಾಲೆಯ ಆವರಣದಲ್ಲಿ ಸಸಿಯನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ವಿಧ್ಯುಕ್ತ ಚಾಲನೆ ನೀಡಿದರು. ಸಂದರ್ಭದಲ್ಲಿ ಕಾರ್ಯಕಾರಿ  ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಆಡಳಿತಾಧಿಕಾರಿಗಳಾದ ಶ್ರೀ.ಸುಭಾಷ್ ಗಾರ್ಕಲ್, ಶ್ರೀ.ಉತ್ತಮ್ ರಾವ್ ಗೋಂದಕರ್, ಶ್ರೀ.ದಿಲೀಪ್ ಉಗಳೆ ಹಾಗೂ ಸಂಸ್ಥಾನದ ಹಲವು ಅಧಿಕಾರಿಗಳು ಸಹ ಉಪಸ್ಥಿತರಿದ್ದರು


ಕನ್ನಡ ಅನುವಾದ: ಶ್ರೀಕಂಠ ಶರ್ಮ