Friday, January 28, 2011

ಬೆಂಗಳೂರಿನ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿ ಮಂದಿರ, 892/1, 1ನೇ ಅಡ್ಡ ರಸ್ತೆ, 1ನೇ ಮುಖ್ಯ ರಸ್ತೆ, ಸರ್ಕಾರಿ ಆಸ್ಪತ್ರೆಯ ಹತ್ತಿರ, ಚೆನ್ನಕೇಶವನಗರ, ಬೆಂಗಳೂರು-560 100. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ

ಈ ಮಂದಿರವು ಬೆಂಗಳೂರಿನ ಹೊರವಲಯದ ಹೊಸೂರು ರಸ್ತೆಯಲ್ಲಿ ಸಿಗುವ ಚೆನ್ನಕೇಶವನಗರ ಎಂಬಲ್ಲಿರುತ್ತದೆ. ಈ ಮಂದಿರದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ. 

ಮಂದಿರದ ವಿಶೇಷತೆಗಳು:

ಈ ದೇವಾಲಯವನ್ನು ಅನೇಕ ಸಾಯಿಭಕ್ತರೆಲ್ಲರ ಸಹಕಾರದೊಂದಿಗೆ 30ನೇ ಮೇ 2004 ರಂದು ಪ್ರಾರಂಭಿಸಲಾಯಿತು.

ಈ ದೇವಾಲಯದಲ್ಲಿ ಶಿರಡಿ ಸಾಯಿಬಾಬಾರವರ ಒಂದು ಸಣ್ಣ ಮತ್ತು ಒಂದು ದೊಡ್ಡದಾದ ಸುಂದರ ಅಮೃತ ಶಿಲೆಯ ವಿಗ್ರಹಗಳಿವೆ.  

ದೇವಾಲಯದ ಹೊರಗಡೆ ಸಾಯಿಬಾಬಾರವರ ವಿಗ್ರಹಕ್ಕೆ ಎದುರಾಗಿ ನಂದಿಯ ಅಮೃತ ಶಿಲೆಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.  

ಪವಿತ್ರ ಧುನಿಯನ್ನು ದೇವಾಲಯದ ಹೊರ ಆವರಣದಲ್ಲಿ ಸ್ಥಾಪಿಸಲಾಗಿದೆ. 




    ದೇವಾಲಯದ ಕಾರ್ಯಚಟುವಟಿಕೆಗಳು:

    ದಿನನಿತ್ಯದ ಕಾರ್ಯಕ್ರಮಗಳು:

    ಆರತಿಯ ಸಮಯ:
    ಕಾಕಡಾ ಆರತಿ : ಬೆಳಿಗ್ಗೆ 6:30 ಕ್ಕೆ
    ಮಧ್ಯಾನ್ಹ ಆರತಿ : ಮಧ್ಯಾನ್ಹ 12 ಘಂಟೆಗೆ
    ಧೂಪಾರತಿ : ಸಂಜೆ 6:30 ಕ್ಕೆ
    ಶೇಜಾರತಿ: ರಾತ್ರಿ 8 ಘಂಟೆಗೆ  

    ಪ್ರತಿದಿನ ಬೆಳಿಗ್ಗೆ 7:30ಕ್ಕೆ ಪಂಚಲೋಹದ ಸಾಯಿಬಾಬಾರವರ ವಿಗ್ರಹಕ್ಕೆ ಅಭಿಷೇಕ ಕಾರ್ಯಕ್ರಮವಿರುತ್ತದೆ. ಸೇವಾಶುಲ್ಕ 150/- ರುಪಾಯಿಗಳು. 

    ವಿಶೇಷ ಉತ್ಸವದ ದಿನಗಳು: 
    1. ಪ್ರತಿ ವರ್ಷದ 30ನೇ ಮೇ ಯಂದು ದೇವಾಲಯದ ವಾರ್ಷಿಕೋತ್ಸವ.
    2. ಶ್ರೀರಾಮನವಮಿ .
    3. ಗುರುಪೂರ್ಣಿಮ.
    4. ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ). 
    5. ಪ್ರತಿ ವರ್ಷದ 1ನೇ ಜನವರಿ.
    ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


    ಸ್ಥಳ:
    ಸರ್ಕಾರಿ ಆಸ್ಪತ್ರೆಯ ಬಳಿ, ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲ ಹತ್ತಿರ.
    ವಿಳಾಸ:  
    ಶ್ರೀ ಶಿರಡಿ ಸಾಯಿ ಮಂದಿರ, 
    892/1, 1ನೇ ಅಡ್ಡ ರಸ್ತೆ, 1ನೇ ಮುಖ್ಯ ರಸ್ತೆ, 
    ಸರ್ಕಾರಿ ಆಸ್ಪತ್ರೆಯ ಹತ್ತಿರ, ಚೆನ್ನಕೇಶವನಗರ, 
    ಬೆಂಗಳೂರು-560 100. ಕರ್ನಾಟಕ.

    ಸಂಪರ್ಕಿಸಬೇಕಾದ ವ್ಯಕ್ತಿಗಳು:
    ಶ್ರೀ.ವೆಂಕಟೇಶ್/ ಶ್ರೀ.ರಮೇಶ್/ ಶ್ರೀ.ಲಕ್ಷ್ಮಣ್.


    ದೂರವಾಣಿ: 
    +91 98868 76576 / +91 98454 84804 / +91 97400 08021

    ಮಾರ್ಗಸೂಚಿ: 
    ಹೊಸೂರು ರಸ್ತೆಯಲ್ಲಿ ಸಿಗುವ ಹೊಸ ರೋಡ್ ಬಸ್ ನಿಲ್ದಾಣದ ಬಳಿ ಇಳಿದು ಹಿಂದೆ  5 ನಿಮಿಷ ನಡೆದರೆ  ಈ ಮಂದಿರ ಸಿಗುತ್ತದೆ. ಈ ಮಂದಿರವು ಸರ್ಕಾರಿ ಆಸ್ಪತ್ರೆಯ ಹತ್ತಿರ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲ ಪಕ್ಕದ ರಸ್ತೆಯಲ್ಲಿ ಇರುತ್ತದೆ. ಎಲೆಕ್ಟ್ರಾನಿಕ್ ಸಿಟಿಗೆ  ಹೋಗುವ ಎಲ್ಲಾ ಬಸ್ ಗಳು ಹೊಸ ರೋಡ್ ನಲ್ಲಿ ನಿಲ್ಲುತ್ತವೆ. 


    ಕನ್ನಡ ಅನುವಾದ: ಶ್ರೀಕಂಠ ಶರ್ಮ

    No comments:

    Post a Comment