Monday, December 31, 2012

ಪ್ರಖ್ಯಾತ ಸಾಯಿ ಬರಹಗಾರ ಹಾಗೂ ಶಿಕ್ಷಣತಜ್ಞ ಡಾಕ್ಟರ್ ಸುಬೋಧ್ ಅಗರವಾಲ್  - ಕೃಪೆ: ಸಾಯಿಅಮೃತಧಾರಾ.ಕಾಂ


ಡಾಕ್ಟರ್ ಸುಬೋಧ್ ಅಗರವಾಲ್ ರವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರು. ಇವರು ಪ್ರಖ್ಯಾತ  ಬರಹಗಾರರೂ  ಹಾಗೂ ಶಿಕ್ಷಣತಜ್ಞರಾಗಿದ್ದಾರೆ.

ಡಾಕ್ಟರ್ ಸುಬೋಧ್ ಅಗರವಾಲ್ ರವರು 1ನೇ ಮಾರ್ಚ್ 1950 ರಂದು ಉತ್ತರಖಂಡ ರಾಜ್ಯದ ಹರಿದ್ವಾರ ಜಿಲ್ಲೆಯ ಮಂಗಲೋರ್ ಪಟ್ಟಣದಲ್ಲಿ ಶ್ರೀಮತಿ.ಕಾಂತಾದೇವಿ ಹಾಗೂ ಶ್ರೀ.ಮಹೇಂದ್ರ ಕುಮಾರ್ ರವರ ಪುತ್ರನಾಗಿ ಜನಿಸಿರುತ್ತಾರೆ.

ಇವರು ಎಂ.ಎ.(ಆಂಗ್ಲ ಸಾಹಿತ್ಯ), ಎಂ.ಎ. (ಇತಿಹಾಸ), ಪಿ.ಹೆಚ್.ಡಿ. (ಆಂಗ್ಲ ಸಾಹಿತ್ಯ), ಪಿ.ಹೆಚ್.ಡಿ. (ಇತಿಹಾಸ), ಡಿ.ಲಿಟ್ (ಆಂಗ್ಲ ಸಾಹಿತ್ಯ) ಹಾಗೂ ಡಿ.ಲಿಟ್ (ಇತಿಹಾಸ) ಪದವಿಗಳನ್ನು ಗಳಿಸಿರುತ್ತಾರೆ.

ಇವರು ಡೆಹರಾಡೂನ್ ನ ಡಿ.ಎ.ವಿ.ಸ್ನಾತಕೋತ್ತರ ಕಾಲೇಜಿನಲ್ಲಿ ಹಲವಾರು ವರ್ಷಗಳ ಕಾಲ ಆಂಗ್ಲ ಸಾಹಿತ್ಯ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಪೆಸರ್ ಮತ್ತು ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುತ್ತಾರೆ.

ಇವರು 1985 ನೇ ಇಸವಿಯಲ್ಲಿ ಸಾಯಿಬಾಬಾರವರ ಭಕ್ತರಾಗಿ ರೂಪುಗೊಂಡು ಸಾಯಿಬಾಬಾರವರ ಬಗ್ಗೆ ಪ್ರಕಟವಾಗುವ ಪತ್ರಿಕೆಗಳಾದ ಸಾಯಿ ಅಮೃತ್ (ಗಜಿಯಾಬಾದ್, ಉತ್ತರಪ್ರದೇಶ), ಸಾಯಿ ಸುಧಾ (ಚನ್ನೈ, ತಮಿಳುನಾಡು), ಶ್ರೀ.ಸಾಯಿ ಸೇವಾ (ಅಲಹಾಬಾದ್ ಮತ್ತು ಕಾನ್ಪುರ, ಉತ್ತರಪ್ರದೇಶ) ಸಾಯಿ ಅರ್ಪಣ್ (ಮೊರದಾಬಾದ್, ಉತ್ತರಪ್ರದೇಶ) ಹಾಗೂ ಶಿರಡಿ ಸಾಯಿಬಾಬಾ ಸಂಸ್ಥಾನದಿಂದ ಪ್ರಕಟವಾಗುವ ಶ್ರೀ.ಸಾಯಿಲೀಲಾ ದ್ವೈಮಾಸಿಕ ಪತ್ರಿಕೆಗಳಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ಆಂಗ್ಲ ಭಾಷೆಯಲ್ಲಿ ಸಾಯಿಬಾಬಾರವರ ಬಗ್ಗೆ ಲೇಖನಗಳನ್ನು ಬರೆಯುತ್ತಾ ಬಂದಿದ್ದಾರೆ.

ಇವರು ಶ್ರೀಮತಿ.ಉಷಾ ಅಗರವಾಲ್ ರವರನ್ನು ವಿವಾಹವಾಗಿದ್ದು ಇವರಿಗೆ ಡಾಕ್ಟರ್.ಕುಮಾರಿ.ವಿಭೂತಿ ಅಗರವಾಲ್ ಎಂಬ ಹೆಣ್ಣು ಮಗಳಿದ್ದಾಳೆ.

ಪ್ರಸ್ತುತ ಇವರು ಡೆಹರಾಡೂನ್ ನಗರದ ಸ್ವಗೃಹದಲ್ಲಿ ತಮ್ಮ ಧರ್ಮಪತ್ನಿ ಹಾಗೂ ಮಗಳೊಂದಿಗೆ ಸುಖೀಜೀವನವನ್ನು ನಡೆಸುತ್ತಿದ್ದಾರೆ.

ಡಾಕ್ಟರ್ ಸುಬೋಧ್ ಅಗರವಾಲ್ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:


ವಿಳಾಸ:

ಡಾಕ್ಟರ್ ಸುಬೋಧ್ ಅಗರವಾಲ್
"ಶಿರಡಿ ಸಾಯಿಧಾಮ್",ನಂ.29,  ತಿಲಕ್ ರಸ್ತೆ,
ಡೆಹರಾಡೂನ್ - 248 001, 
ಉತ್ತರಖಂಡ, ಭಾರತ

ದೂರವಾಣಿ ಸಂಖ್ಯೆಗಳು:

+91 135 2622810 (ಫ್ಯಾಕ್ಸ್)/+91 98972 02810 (ಮೊಬೈಲ್)

ಇ-ಮೈಲ್ ವಿಳಾಸ:
subodhagarwal27@gmail.com


ಕನ್ನಡ ಅನುವಾದ: ಶ್ರೀಕಂಠ ಶರ್ಮ
ಸುಪ್ರಸಿದ್ಧ ಶಿರಡಿಯ ಚಾವಡಿ ಉತ್ಯವದ ಬ್ಯಾಂಡ್ ಸೆಟ್ ತಂಡದ ಮುಖ್ಯಸ್ಥ - ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ - ಕೃಪೆ: ಸಾಯಿಅಮೃತಧಾರಾ.ಕಾಂ



ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರು ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಪ್ರತಿ ಗುರುವಾರ ಹಾಗೂ ಹಬ್ಬದ ದಿನಗಳಂದು ನಡೆಸುತ್ತಿರುವ ಸುಪ್ರಸಿದ್ಧ ಚಾವಡಿ ಉತ್ಯವದ ಬ್ಯಾಂಡ್ ಸೆಟ್ ತಂಡದ ಮುಖ್ಯಸ್ಥ. ಇವರದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ.   ಇವರು ಉತ್ತಮ ಗಾಯಕರು, ಡ್ರಮ್ಮರ್, ಗೀತರಚನಕಾರರು ಹಾಗೂ ನಟರೂ ಆಗಿರುತ್ತಾರೆ.  ಇವರು 26ನೇ ಫೆಬ್ರವರಿ 1969 ರಂದು ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ಶಿರಡಿಯಲ್ಲಿ  ಶ್ರೀಮತಿ.ಅಮೀನಾ ಹಾಗೂ ದಿವಂಗತ ಶ್ರೀ.ಗುಲ್ಜಾರ್ ಅನ್ವರ್ ಪಠಾಣ್ ರವರ ಮಗನಾಗಿ ಜನ್ಮ ತಳೆದರು.

ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರು 1980ನೇ ಇಸವಿಯಲ್ಲಿ ತಮ್ಮ 11ನೇ ಎಳೆಯ ವಯಸ್ಸಿಯನಲ್ಲಿಯೇ ಶಿರಡಿಯ ಪ್ರಖ್ಯಾತ ಪಾರ್ಸಿ ಸಂತರಾದ ಶ್ರೀ.ಹೋಮಿಬಾಬಾರವರಿಂದ ಆಕರ್ಷಿತರಾಗಿ ಅವರನ್ನು ತಮ್ಮ ಭೌತಿಕ ಗುರುಗಳನ್ನಾಗಿ ಸ್ವೀಕರಿಸಿ 1985 ನೇ ಇಸವಿಯಲ್ಲಿ ಅವರ ಸಮಾಧಿಯಾಗುವವರೆವಿಗೂ ಅವರ ಸೇವೆಯನ್ನು ನಿಸ್ವಾರ್ಥತೆಯಿಂದ ಮಾಡಿದರು. ಪ್ರಸ್ತುತ ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರು ಹೋಮಿಬಾಬಾ ಅಶ್ರಮದ ಮೇಲ್ವಿಚಾರಣೆಯನ್ನು ಸ್ವಯಂಸೇವಕರಾಗಿ ನಿರ್ವಹಿಸುತ್ತಿದ್ದಾರೆ.

ಇವರು ಡ್ರಮ್ಮಿಂಗ್ ವಿದ್ಯೆಯನ್ನು ಯಾವ ಗುರುಗಳ ಬಳಿಯೂ ತರಬೇತಿ ಪಡೆದಿರದೆ, ಬದಲಿಗೆ ಕೇವಲ ಸಾಯಿಬಾಬಾರವರ ಆಶೀರ್ವಾದದಿಂದಲೇ ಕಲಿತಿರುವುದಾಗಿ ಅತ್ಯಂತ ವಿನಮ್ರ ಭಾವದಿಂದ ಹೇಳುತ್ತಾರೆ.

ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರು ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಪ್ರತಿ ಗುರುವಾರ ಹಾಗೂ ಹಬ್ಬದ ದಿನಗಳಂದು ನಡೆಸುತ್ತಿರುವ ಸುಪ್ರಸಿದ್ಧ ಚಾವಡಿ ಉತ್ಯವದ ಬ್ಯಾಂಡ್ ಸೆಟ್ ತಂಡವನ್ನು ತಯಾರಿ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾ ಬಂದಿದ್ದಾರೆ. ಇವರು ತಮ್ಮ 10ನೇ ವಯಸ್ಸಿನಿಂದಲೇ ತಮ್ಮ ತಂದೆಯವರ ಜೊತೆಯಲ್ಲಿ ಚಾವಡಿ ಉತ್ಸವದಲ್ಲಿ ಪಾಲ್ಗೊಳ್ಳಲು ಪ್ರಾರಂಭಿಸಿದ್ದು ಸುಮಾರು 30 ವರ್ಷಗಳಿಗೂ ಹೆಚ್ಚು ಕಾಲದಿಂದ ಈ ನಿಸ್ವಾರ್ಥ ಸೇವಯನ್ನು ಮಾಡುತ್ತಾ ಬಂದಿದ್ದಾರೆ.

ಚಾವಡಿ ಉತ್ಯವದ ದಿನಗಳಂದು ಇವರ ಬ್ಯಾಂಡ್ ಸೆಟ್ ತಂಡದ ಪ್ರತಿಯೊಬ್ಬ ಸದಸ್ಯರೂ ಬಿಳಿಯ ಪ್ಯಾಂಟ್ ಹಾಗೂ ಕೇಸರಿ ಬಣ್ಣದ ಪಲ್ಲಕ್ಕಿಯ ಚಿತ್ರವನ್ನು ಹೊಂದಿರುವ ಟಿ-ಶರ್ಟ್ ಧರಿಸುತ್ತಾರೆ. ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರು  ತಮ್ಮ ಕಣ್ಣಿನ ಸನ್ನೆಯಿಂದ, ಮುಖದಲ್ಲಿ ತೋರ್ಪಡಿಸುವ ಹಾವ-ಭಾವಗಳಿಂದ ಹಾಗೂ ಕೈಗಳ ಚಲನೆಯಿಂದಲೇ ತಮ್ಮ ತಂಡದ ಎಲ್ಲಾ ಸದಸ್ಯರಿಗೂ ಸೂಚನೆಗಳನ್ನು ಬಹಳ ಸುಂದರವಾಗಿ ನೀಡುತ್ತಾರೆ ಹಾಗೂ ತಂಡದ ಎಲ್ಲಾ ಸದಸ್ಸರುಗಳೂ ಇವರ ಸೂಚನೆಗಳನ್ನು ತಪ್ಪದೇ ಪಾಲಿಸುತ್ತಾರೆ.

ಬ್ಯಾಂಡ್ ಸೆಟ್ ತಂಡದ ಸದಸ್ಯರುಗಳು ಪ್ರತಿ ಗುರುವಾರ ಸಂಜೆ 7 ಗಂಟೆಗೆ ಸರಿಯಾಗಿ ಶಿರಡಿಯ ಸಮಾಧಿ ಮಂದಿರದ ಮಧ್ಯದ ಹಾಲ್ ನಲ್ಲಿ ಸೇರಿ ಬ್ಯಾಂಡ್ ಅನ್ನು ಬಾರಿಸಲು ಪ್ರಾರಂಭಿಸುತ್ತಾರೆ. ಸುಮಾರು 8:30 ಕ್ಕೆ ಚಾವಡಿ ಉತ್ಸವವು ಸಮಾಧಿ ಮಂದಿರದಿಂದ ಪ್ರಾರಂಭವಾಗುತ್ತದೆ. ಉತ್ಸವವು ಸಮಾಧಿ ಮಂದಿರದಿಂದ ಹೊರಟು ದ್ವಾರಕಾಮಾಯಿಗೆ ತೆರಳಿ ಅಲ್ಲಿಂದ ಚಾವಡಿ ಸೇರುತ್ತದೆ. ಚಾವಡಿಯಲ್ಲಿ ಸಾಯಿಬಾಬಾರವರಿಗೆ ಆರತಿ ಮಾಡಲಾಗುತ್ತದೆ. ನಂತರ ಉತ್ಸವವು ಚಾವಡಿಯಿಂದ ಹೊರಟು ಶಿರಡಿ ಗ್ರಾಮದ ಪ್ರದಕ್ಷಿಣೆ ಮಾಡಿದ ನಂತರ ಪುನಃ ಸಮಾಧಿ ಮಂದಿರಕ್ಕೆ ಬಂದು ಸೇರುತ್ತದೆ. ಹೀಗೆ ಸುಮಾರು 3 ಗಂಟೆಯ ಕಾಲ ಉತ್ಸವ ಕಾರ್ಯಕ್ರಮ ನಡೆಯುತ್ತದೆ. ಈ ರೀತಿಯಲ್ಲಿ ಸತತ 3 ಗಂಟೆಗಳ ಕಾಲ ಬ್ಯಾಂಡ್ ಸೆಟ್ ತಂಡದ ಸದಸ್ಯರುಗಳು ಎಡೆಬಿಡದೆ ವೈವಿಧ್ಯಮಯವಾಗಿ ಬ್ಯಾಂಡ್ ಅನ್ನು ಬಾರಿಸುತ್ತಾರೆ. ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರ ಮಾರ್ಗದರ್ಶನದಲ್ಲಿ ಈ ರೀತಿ ವೈವಿಧ್ಯಮಯವಾಗಿ ಬ್ಯಾಂಡ್ ಬಾರಿಸುವ ಆ ತಂಡವನ್ನು ನೋಡಲು ಎರಡು ಕಣ್ಣುಗಳು ಸಾಲದು ಎಂದರೆ ಉತ್ಪ್ರೇಕ್ಷೆಯಲ್ಲ!!!

ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರು ಒಂದು ಹಿಂದಿ ಚಲನಚಿತ್ರ "ಪ್ರಣಾಮ್ ವಾಲೇ ಕುಂ" ಹಾಗೂ ಎರಡು ಹಿಂದಿ ವೀಡಿಯೋಗಳಾದ "ಸಾಯಿನಾಥ ಮೇರೆ" ಮತ್ತು "ಸಾಯಿ ಸಿಮರ್ಲೋ" ಗಳಲ್ಲಿ ನಟರಾಗಿ ಅಭಿನಯಿಸಿದ್ದಾರೆ.

ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರು ಶಿರಡಿ, ಸೂರತ್, ದೆಹಲಿ, ಮೀರತ್, ಬದಾಯೂನ್ ಹಾಗೂ ಗ್ವಾಲಿಯರ್ ನಗರಗಳಲ್ಲಿ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಇವರು ನೀಡಿದ ಸಾಯಿ ಭಜನೆಯ ಕಾರ್ಯಕ್ರಮಕ್ಕಾಗಿ ಸೂರತ್ ನ "ಸಾಯಿ ಸೇವಕ್ ಮಂಡಲ್" ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರನ್ನು ಸನ್ಮಾನಿಸಿರುತ್ತದೆ.

ಪ್ರಸ್ತುತ ಇವರು ತಮ್ಮ ಧರ್ಮಪತ್ನಿ ಹಾಗೂ ತಮ್ಮ ಮಕ್ಕಳೊಂದಿಗೆ ಶಿರಡಿಯ ತಮ್ಮ ನಿವಾಸದಲ್ಲಿ ಸುಖೀಜೀವನವನ್ನು ನಡೆಸುತ್ತಿದ್ದಾರೆ.

 ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:


ವಿಳಾಸ:

ಹೋಮಿಬಾಬಾ ಆಶ್ರಮ,
ಪಿಂಪಲವಾಡಿ ರಸ್ತೆ, ಗೋಬಿಂದ್ ಧಾಮ್ ನ ಪಕ್ಕ,
ಶಿರಡಿ - 423 109,
ರಹತಾ ತಾಲ್ಲೂಕು, ಅಹಮದ್ ನಗರ ಜಿಲ್ಲೆ,
ಮಹಾರಾಷ್ಟ್ರ, ಭಾರತ.

ದೂರವಾಣಿ ಸಂಖ್ಯೆ:

+91 94204 70868 / +91 98504 49728


ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, December 27, 2012

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ದತ್ತ ಜಯಂತಿಯ ಆಚರಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ದತ್ತ ಜಯಂತಿ ಉತ್ಸವದ ಅಂಗವಾಗಿ  27ನೇ ಡಿಸೆಂಬರ್ 2012, ಗುರುವಾರದಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಡಾ.ಯಶವಂತರಾವ್ ಮಾನೆ ಹಾಗೂ ಅವರ ಧರ್ಮಪತ್ನಿಯವರು ಉಯ್ಯಾಲೆಯಲ್ಲಿ ದತ್ತಾತ್ರೇಯರನ್ನು ಇಟ್ಟು ತೂಗುವ  ಮೂಲಕ ದತ್ತ ಜಯಂತಿ ಉತ್ಸವವನ್ನು ಉದ್ಘಾಟಿಸಿದರು.



ದತ್ತ ಜಯಂತಿ ಉತ್ಸವದ ಅಂಗವಾಗಿ  27ನೇ ಡಿಸೆಂಬರ್ 2012, ಗುರುವಾರದಂದು  ದೆಹಲಿಯ ಸಾಯಿ ಭಕ್ತರಾದ ಶ್ರೀ.ರಾಜೇಂದ್ರ ದಾಂಗ್ ರವರು ನೀಡಿದ ಕಾಣಿಕೆಯಿಂದ ಶಿರಡಿ ಸಾಯಿಬಾಬಾ ಸಂಸ್ಥಾನದ ಸಮಾಧಿ ಮಂದಿರ ಹಾಗೂ ಪ್ರಾಂಗಣವನ್ನು ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು.



 ಕನ್ನಡ ಅನುವಾದ: ಶ್ರೀಕಂಠ ಶರ್ಮ 

Wednesday, December 5, 2012

ಬಹುಮುಖ ಪ್ರತಿಭೆಯ ಸಾಯಿಬಂಧು ಶ್ರೀ.ಎಸ್.ಲಕ್ಷ್ಮೀನರಸಿಂಹನ್ - ಕೃಪೆ: ಸಾಯಿಅಮೃತಧಾರಾ.ಕಾಂ




ಶ್ರೀ.ಎಸ್.ಲಕ್ಷ್ಮೀನರಸಿಂಹನ್ ರವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರು ಹಾಗೂ 2002 ರಲ್ಲಿ ಪ್ರಾರಂಭಿಸಲಾಗಿರುವ ತಮಿಳು ತ್ರೈಮಾಸಿಕ ಪತ್ರಿಕೆಯಾದ "ಶ್ರೀ.ಸಾಯಿ ಮಾರ್ಗಮ್" ನ ಸಂಪಾದಕರು.  ಇವರು ಖ್ಯಾತ ಬರಹಗಾರರಾಗಿದ್ದು ಸಾಯಿಬಾಬಾರವರ ಬಗ್ಗೆ ತಮಿಳಿನಲ್ಲಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅಷ್ಟೇ ಅಲ್ಲದೇ, ಚನ್ನೈನ "ಸಾಯಿ ಪ್ರಚಾರ ಸೇವಾ ಟ್ರಸ್ಟ್" ಹಾಗೂ "ಶಿರಡಿ ಸಾಯಿ ಲಿಖಿತ ನಾಮಜಪ ಬ್ಯಾಂಕ್" ನ ಸಂಸ್ಥಾಪಕರೂ ಆಗಿದ್ದಾರೆ.


ಶ್ರೀ.ಎಸ್.ಲಕ್ಷ್ಮೀನರಸಿಂಹನ್ ರವರು 17ನೇ ಡಿಸೆಂಬರ್ 1967 ರಂದು ತಮಿಳುನಾಡಿನ ಪುದುಕೋಟೆ ಪಟ್ಟಣ ಹಾಗೂ ಜಿಲ್ಲೆಯಲ್ಲಿ ಶ್ರೀಮತಿ.ಎಸ್.ಸುಬ್ಬಲಕ್ಷ್ಮೀ ಹಾಗೂ ದಿವಂಗತ ಶ್ರೀ.ಆರ್.ಸುಬ್ರಮಣಿಯನ್ ರವರ ಪುತ್ರನಾಗಿ ಜನಿಸಿರುತ್ತಾರೆ. ಇವರ ತಂದೆಯವರು ಪುದುಕೋಟೆಯ ಪೂಜ್ಯ ಶ್ರೀ.ಅಪ್ಪಾ ಗೋಪಾಲಕೃಷ್ಣ ಭಾಗವತರ್ ರವರ ಪುತ್ರ ಪೂಜ್ಯ ಶ್ರೀ.ಸಂಜೀವಿ ಭಾಗವತರ್ ರವರ ಸಮಕಾಲೀನರಾಗಿದ್ದರು.

ಇವರು 1988 ನೇ ಇಸವಿಯಲ್ಲಿ ತಮಿಳುನಾಡಿನ ತಿರುಚಿಯ ಭಾರತೀದಾಸನ್ ವಿಶ್ವವಿದ್ಯಾಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಬಿ.ಎ.ಪದವಿಯನ್ನು ಗಳಿಸಿರುತ್ತಾರೆ.


ಇವರು ತಮ್ಮದೇ ಸ್ವಂತ ಪತ್ರಿಕೆಯಾದ ಶ್ರೀ ಸಾಯಿ ಮಾರ್ಗಮ್ ನ ಸಂಪಾದಕರಾಗುವುದಕ್ಕೆ ಪೂರ್ವದಲ್ಲಿ ಹಿರಿಯ ಪತ್ರಕರ್ತರಾಗಿ 15 ವರ್ಷಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ.


ಇವರು ಶಿರಡಿ ಸಾಯಿಬಾಬಾರವರ ಸಮಕಾಲೀನ ಭಕ್ತರುಗಳಾದ ಹೇಮಾಡಪಂತ, ಮಹಾಳಸಾಪತಿ, ಶ್ಯಾಮ, ನಿಮೋಣಕರ್, ತರ್ಕಡ್ ಮತ್ತು ಲಕ್ಷ್ಮೀಬಾಯಿ ಶಿಂಧೆಯ ವಂಶಸ್ಥರನ್ನು ಮುಖತಃ ಭೇಟಿ ಮಾಡಿ ಅವರ ಸಂದರ್ಶನವನ್ನು ಮಾಡಿರುತ್ತಾರೆ. 


ಇವರು ಪ್ರಖ್ಯಾತ ಸಾಯಿ ವ್ಯಕ್ತಿಗಳಾದ ಗುರೂಜಿ ಶ್ರೀ.ಸಿ.ಬಿ.ಸತ್ಪತಿ, ನಾರಾಯಣ ಬಾಬಾ, ಕರೂರು ನರಸಿಂಹ ಬಾಬಾ, ಕುಮಾರ ಬಾಬಾ, ಸಾಯಿಮಾತಾ ಶಿವ ಬೃಂದಾದೇವಿ, ಮಲೇಶಿಯಾ ವಾಸುದೇವನ್ ಮತ್ತು ಸಾಯಿಬಾಬಾ ಸಂಸ್ಥಾನದ ಪದಾಧಿಕಾರಿಗಳನ್ನು ಮುಖತಃ ಭೇಟಿ ಮಾಡಿ ಅವರ ಸಂದರ್ಶನವನ್ನು ಮಾಡಿರುತ್ತಾರೆ. 


ಇವರು ಸಾಯಿಬಾಬಾರವರ ಬಗ್ಗೆ ತಮಿಳಿನಲ್ಲಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳೆಂದರೆ: Bayappadadhe Naan Irukkiren, Kadavulidam Pesum Kavidhaihal,Shirdikku Izukkappatta Sittukkuruvihal,Baba Amirtham,Baba Yugam,Sai Madham,Thamizaha Baba Aalayangal,Baba Irukka Bayam Een?,Sainath Bagavatham,Sai Dhyanam ಮತ್ತು Viboothi Baba Parayanam.


ಇವರು ಸಾಯಿಬಾಬಾರವರ ಬಗ್ಗೆ ಅಷ್ಟೇ ಅಲ್ಲದೇ ಇತರ ವಿಷಯಗಳ ಬಗ್ಗೆಯೂ ಅನೇಕ ಪುಸ್ತಕಗಳನ್ನು ಬರಿದಿದ್ದಾರೆ: ಅವುಗಳೆಂದರೆ: Pambu Chuvaduhal - a collection of Poetry,Jayanarasimhan Kathaihal,Ezuththalar Dairy,Penniam Samookam ಮತ್ತು Kelvi Neram.


ಇವರು ಸಾಯಿಬಾಬಾರವರ ಬಗ್ಗೆ ಬರೆಯಲಾದ ಮೂರು ಪುಸ್ತಗಳ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಅವುಗಳೆಂದರೆ: Baba Swami Ponmozihal,Punya Karma by Guruji C.P.Sathpathy ಮತ್ತು Sathguru Charanam.


ಇವರು ತಮ್ಮದೇ ಆದ ಶ್ರೀ ಸಾಯಿ ಮಾರ್ಗಮ್ ಎಂಬ ಹೆಸರಿನ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ ಅದರ ಮುಖಾಂತರ Sath Sarithiram Kattum Padhai,SaiMananam – B.V.Narasimha Swamiji,Sai Sakthiyum Prabancha Sakthiyum ಮತ್ತು Saibaba Kadhaihal ಎಂಬ ನಾಲ್ಕು ಗ್ರಂಥಗಳನ್ನು ಪ್ರಕಾಶನಗೊಳಿಸಿರುತ್ತಾರೆ.


ಇವರು ಸಾಯಿ ಮಾರ್ಗಮ್ ತ್ರೈಮಾಸಿಕ ಪತ್ರಿಕೆಯ ಅಡಿಯಲ್ಲಿ "Sri Sai Marggam Diwali Malarhal Pathham Aandu Sadhanai Malar" ಎಂಬ ದೀಪಾವಳಿ ವಿಶೇಷ ಸಂಚಿಕೆಯನ್ನು ಹೊರತಂದಿದ್ದಾರೆ.


ಇವರು "ಶಿರಡಿ ಸಾಯಿ ಲಿಖಿತ ನಾಮಜಪ ಬ್ಯಾಂಕ್"  ನ ಅಡಿಯಲ್ಲಿ "Arulum Porulum pera…." ಎಂಬ ಹೆಸರಿನ ನಾಮಜಪ ಬ್ಯಾಂಕ್ ಅನ್ನು ಪ್ರಾರಂಭಿಸಿ ಚನ್ನೈ ನಗರದಲ್ಲಿ ಪ್ರತಿ ವರ್ಷ  "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ವಿಶೇಷ ನಾಮಜಪ ಯಜ್ಞಗಳನ್ನು ನಡೆಸುತ್ತಾ ಬಂದಿದ್ದಾರೆ.


ಇವರು ಪ್ರಖ್ಯಾತ ಗಾಯಕ ಮಲೇಶಿಯಾ ವಾಸುದೇವನ್ ರವರು ಹಾಡಿರುವ ಸಾಯಿಬಾಬಾರವರ ಬಗ್ಗೆ ಹಾಡಿರುವ "ಸಾಯಿ ನವಜ್ಯೋತಿ" ಎಂಬ ಆಡಿಯೋ ಸಿಡಿಯನ್ನು ಹೊರತಂದಿದ್ದಾರೆ.


ಇವರು ತಮ್ಮ "ಸಾಯಿ ಪ್ರಚಾರ ಸೇವಾ ಟ್ರಸ್ಟ್" ನ ಅಡಿಯಲ್ಲಿ ದೇಶದ ವಿವಿಧ ಕಡೆಗಳಲ್ಲಿ ವಿಶೇಷ ಹೋಮಗಳು, ಭಜನೆಗಳು, ಮತ್ತು ಅಭಿಷೇಕಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳುತ್ತಿದ್ದಾರೆ; ಹಲವಾರು ಬಡ ವಿದ್ಯಾರ್ಥಿಗಳ ಶಿಕ್ಷಣ ವೆಚ್ಚವನ್ನು ಭರಿಸುತ್ತಿದ್ದಾರೆ; ಸಾಯಿಬಾಬಾರವರ ವಿಶೇಷ ಉತ್ಸವದ ಸಂದರ್ಭಗಳಲ್ಲಿ ಅನ್ನದಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ; ಹಾಗೂ ಪ್ರತಿ ವರ್ಷ ಹಲವಾರು ಬಾರಿ ಶಿರಡಿ ಯಾತ್ರೆಯನ್ನು ಕೈಗೊಂಡು ಅನೇಕ ಹೊಸ ಸಾಯಿಭಕ್ತರು ರೂಪುಗೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ಅತ್ಯುತ್ತಮ ರೀತಿಯಲ್ಲಿ ಸಾಯಿ ಪ್ರಚಾರವನ್ನು ತಮ್ಮದೇ ಆದ ರೀತಿಯಲ್ಲಿ ಮಾಡುತ್ತಾ ಬಂದಿದ್ದಾರೆ.


ಇವರು ಶ್ರೀ ಸಾಯಿ ಮಾರ್ಗಮ್ ಪ್ರಶಸ್ತಿಯನ್ನು ಪ್ರಾರಂಭಿಸಿ ಅದರ ಅಡಿಯಲ್ಲಿ ಅನೇಕ ಪ್ರಸಿದ್ಧ ಸಾಯಿ ವ್ಯಕ್ತಿಗಳ ಸನ್ಮಾನ ಮಾಡಿದ್ದಾರೆ.


ಇವರು ತಮಿಳು ಪತ್ರಿಕಾ ರಂಗಕ್ಕೆ ಸಲ್ಲಿಸಿದ ನಿಸ್ವಾರ್ಥ ಸೇವೆಗಾಗಿ ಇವರಿಗೆ "Idhazial Chemmal" ಎಂಬ ಪ್ರತಿಷ್ಟಿತ ಪ್ರಶಸ್ತಿ ಲಭಿಸಿರುತ್ತದೆ. ಅಲ್ಲದೇ, ಬೆಂಗಳೂರಿನ ಸಾಯಿ ಮಹಾಭಕ್ತರೂ, ಪರಮಪೂಜ್ಯ ಶ್ರೀ.ಬಿ.ವಿ.ನರಸಿಂಹ ಸ್ವಾಮಿಗಳ ಶಿಷ್ಯರೂ ಹಾಗೂ ಬೆಂಗಳೂರಿನ ತ್ಯಾಗರಾಜ ನಗರದಲ್ಲಿರುವ "ಸಾಯಿ ಆಧ್ಯಾತ್ಮಿಕ ಕೇಂದ್ರ" ದ ಸಂಸ್ಥಾಪಕರೂ ಆದ ಸಾಯಿಪಾದಾನಂದ ಶ್ರೀ.ರಾಧಾಕೃಷ್ಣ ಸ್ವಾಮೀಜಿಯವರ ಶಿಷ್ಯರಾದ ದಿವಂಗತ ಶ್ರೀ.ಸಾಯಿಆನಂದರವರಿಂದ "ಸಾಯಿ ಆತ್ಮ ಸ್ವರೂಪಿ" ಎಂಬ ಬಿರುದಿಗೆ ಭಾಜನರಾಗಿದ್ದಾರೆ. 


ಇವರು ತಮ್ಮ "ಸಾಯಿ ಪ್ರಚಾರ ಸೇವಾ ಟ್ರಸ್ಟ್" ನ ಅಡಿಯಲ್ಲಿ ತಮಿಳುನಾಡಿನ ಚನ್ನೈ ನಗರದ ಸಮೀಪದಲ್ಲಿರುವ ಕಂಚೀಪುರಂ ನಲ್ಲಿ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಪಿರಮಿಡ್ ಆಕಾರದಲ್ಲಿ ಹಸಿರು ಅಮೃತಶಿಲೆಯ ಸಾಯಿಬಾಬಾ ಮಂದಿರವನ್ನು ನಿರ್ಮಾಣ ಮಾಡುತ್ತಿದ್ದಾರೆ.




ಇವರು ಶ್ರೀಮತಿ.ಎಲ್.ಪದ್ಮಪ್ರಭಾರವರನ್ನು ವಿವಾಹವಾಗಿದ್ದು ಇವರಿಗೆ ಶ್ರೀಮತಿ.ಎಲ್.ಸುಹೃದ ಹಾಗೂ ಶ್ರೀಮತಿ.ಎಲ್.ಸಾಯೀಶ್ವರೀ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.


ಪ್ರಸ್ತುತ ಇವರು ಚನ್ನೈ ನಗರದ ಸ್ವಗೃಹದಲ್ಲಿ  ತಮ್ಮ ಧರ್ಮಪತ್ನಿ ಹಾಗೂ ಮಕ್ಕಳೊಂದಿಗೆ ಸುಖೀಜೀವನವನ್ನು ನಡೆಸುತ್ತಿದ್ದಾರೆ.

ಶ್ರೀ.ಎಸ್.ಲಕ್ಷ್ಮೀನರಸಿಂಹನ್ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:


ವಿಳಾಸ:

ಶ್ರೀ.ಎಸ್.ಲಕ್ಷ್ಮೀನರಸಿಂಹನ್
ನಂ.2ಎ/2,  ತಾರಾಚಂದ ನಗರ ಮುಖ್ಯರಸ್ತೆ,
ವಿರುಗಂಬಾಕ್ಕಂ, 
ಚನ್ನೈ - 600 092,, 
ತಮಿಳುನಾಡು, ಭಾರತ

ದೂರವಾಣಿ ಸಂಖ್ಯೆಗಳು:

+91 44 2377 3311 (ಮನೆ)/+91 98403 25245 (ಮೊಬೈಲ್)/+91 44 4255 0604 (ಕಛೇರಿ)

ಇ-ಮೈಲ್ ವಿಳಾಸ:

slnsaimarg@yahoo.com/sailakshminarasimhan@gmail.com


ಅಂತರ್ಜಾಲ ತಾಣ:

http://saimarggam.blogspot.in/


ಕನ್ನಡ ಅನುವಾದ: ಶ್ರೀಕಂಠ ಶರ್ಮ

Friday, November 30, 2012

ರಾಜಸ್ಥಾನದ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಸಿ-26, ಜೆ.ಕೆ.ಲಕ್ಷ್ಮೀ ಸಿಮೆಂಟ್ ಕ್ವಾರ್ಟರ್ಸ್,  ಜೆ.ಕೆ.ಪುರಂ,  ಸಿರೋಹಿ ಜಿಲ್ಲೆ, ರಾಜಸ್ಥಾನ-307 019,ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ರಾಜಸ್ಥಾನ ರಾಜ್ಯದ ಸಿರೋಹಿ ಜಿಲ್ಲೆಯ ಜೆ.ಕೆ.ಪುರಂನಲ್ಲಿರುವ ಜೆ.ಕೆ.ಲಕ್ಷ್ಮೀ ಸಿಮೆಂಟ್ ಕ್ವಾರ್ಟರ್ಸ್ ನಲ್ಲಿ ಇರುತ್ತದೆ.

ದೇವಾಲಯದ ಉದ್ಘಾಟನೆಯನ್ನು 14ನೇ ಏಪ್ರಿಲ್ 2011 ರಂದು ಶ್ರೀಮತಿ.ಭಾಗ್ಯವಂತಿ ದೇವಿಯವರು ಹಲವಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ದೇವಾಲಯದಲ್ಲಿ  4-1/2 ಅಡಿ ಎತ್ತರದ ಗನ್ ಮೆಟಲ್ ನಲ್ಲಿ ಮಾಡಿರುವ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ. 






ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ : 6:45 ರಿಂದ 8:00.
ಸಂಜೆ : 5:30 ರಿಂದ 10:00.

ಆರತಿಯ ಸಮಯ:

ಬೆಳಿಗ್ಗೆ : 07:35
ಸಂಜೆ: 07:15

ವಿಶೇಷ ಉತ್ಸವದ ದಿನಗಳು:

ಪ್ರತಿವರ್ಷದ 14ನೇ ಏಪ್ರಿಲ್ ದೇವಾಲಯದ ವಾರ್ಷಿಕೋತ್ಸವ.
ನವರಾತ್ರಿ - ಒಂಬತ್ತು ದಿನಗಳು ವಿಶೇಷ ಪೂಜೆ ನಡೆಯುತ್ತವೆ.
ಪ್ರತಿವರ್ಷ ಎರಡು ಬಾರಿ ಉದಯಪುರದ ಜಗನ್ನಾಥ ದೇವಾಲಯದಲ್ಲಿ ನಡೆಯುವ ರಥಯಾತ್ರೆಯಲ್ಲಿ ಪಾಲ್ಗೊಳ್ಳಲಾಗುತ್ತದೆ.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ಜೆ.ಕೆ.ಲಕ್ಷ್ಮೀ ಸಿಮೆಂಟ್ ಕ್ವಾರ್ಟರ್ಸ್, ಜೆ.ಕೆ.ಪುರಂ, ಮೌಂಟ್ ಅಬುವಿನ ಹತ್ತಿರ, ರಾಜಸ್ಥಾನ.
.

ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ,
ಸಿ-26, ಜೆ.ಕೆ.ಲಕ್ಷ್ಮೀ ಸಿಮೆಂಟ್ ಕ್ವಾರ್ಟರ್ಸ್, 
ಜೆ.ಕೆ.ಪುರಂ,  ಸಿರೋಹಿ ಜಿಲ್ಲೆ,
ರಾಜಸ್ಥಾನ-307 019,ಭಾರತ.

ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀ.ಪ್ರದೀಪ್ ಕುಮಾರ್ ಪಾಲಿವಾಲ್ - ಸಂಸ್ಥಾಪಕರು

ದೂರವಾಣಿ ಸಂಖ್ಯೆಗಳು:
+91 97854 55634


ಇ ಮೇಲ್ ವಿಳಾಸ:
pkpaliwal@lc.jkmail.com/paliwal.pradeep23@gmail.com


ಮಾರ್ಗಸೂಚಿ:
ಈ ದೇವಾಲಯವು ರಾಜಸ್ಥಾನ ರಾಜ್ಯದ ಸಿರೋಹಿ ಜಿಲ್ಲೆಯ ಜೆ.ಕೆ.ಪುರಂನಲ್ಲಿರುವ ಜೆ.ಕೆ.ಲಕ್ಷ್ಮೀ ಸಿಮೆಂಟ್ ಕ್ವಾರ್ಟರ್ಸ್ ನಲ್ಲಿ ಇರುತ್ತದೆ. ಈ ಸ್ಥಳವು ಜಗತ್ಪ್ರಸಿದ್ಧ ಮೌಂಟ್ ಅಬುವಿನ ಹತ್ತಿರವಿರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

Wednesday, November 28, 2012

ಕಾನ್ಪುರದ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಹನುಮಾನ್ ಸಾಯಿ ಮಂದಿರ, ಪರ್ದೇವನಪುರ, ರಾಮೇಶ್ವರ ಧಾಮ್ ಮಂದಿರದ ಹತ್ತಿರ, ಕಾನ್ಪುರ-208 007, ಉತ್ತರಪ್ರದೇಶ, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಉತ್ತರಪ್ರದೇಶ ರಾಜ್ಯದ ಕಾನ್ಪುರ ಪಟ್ಟಣದ ಪರ್ದೇವನಪುರದಲ್ಲಿ ಇರುತ್ತದೆ. ದೇವಾಲಯವು ರಾಮೇಶ್ವರ ಧಾಮ್ ಮಂದಿರ ಹಾಗೂ ಜಿತೇನ್ ಗ್ಯಾಸ್ ಏಜೆನ್ಸಿಯ ಹತ್ತಿರವಿರುತ್ತದೆ. 

ದೇವಾಲಯದ ಉದ್ಘಾಟನೆಯನ್ನು 1ನೇ ಮೇ 2011 ಯಂದು ದೇವಾಲಯದ ಪ್ರಧಾನ ಪುರೋಹಿತರಾದ ಶ್ರೀ.ಐ.ಎನ್.ಝಾರವರು ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ಶ್ರೀ.ವಿನೀತ್ ಕುಮಾರ್ ರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಶ್ರೀ.ಹನುಮಾನ್ ಸಾಯಿ ಭಕ್ತ ಸೇವಾ ಸಮಿತಿಯ ಸದಸ್ಯರುಗಳು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದ ಗರ್ಭಗುಡಿಯಲ್ಲಿ ಸುಂದರವಾದ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ.




ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ : 5:00 ರಿಂದ 01:00
ಸಂಜೆ : 4:00 ರಿಂದ 10:00

ಆರತಿಯ ಸಮಯ:

ಬೆಳಿಗ್ಗೆ: 8:00 ರಿಂದ 10:00
ಸಂಜೆ: 5:00 ರಿಂದ 7:00

ವಿಶೇಷ ಉತ್ಸವದ ದಿನಗಳು:

ಶಿವರಾತ್ರಿ.
ಪ್ರತಿವರ್ಷದ 1ನೇ ಮೇ ಯಂದು ದೇವಾಲಯದ ವಾರ್ಷಿಕೋತ್ಸವ.
ಗುರುಪೂರ್ಣಿಮೆ.
ಕೃಷ್ಣ ಜನ್ಮಾಷ್ಟಮಿ.
ದೀಪಾವಳಿ.
ಹೋಳಿ ಹುಣ್ಣಿಮೆ.
ವಿಜಯದಶಮಿ.

ದೇಣಿಗೆಗೆ ಮನವಿ:

ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕಾಗಿ ಹಾಗೂ ಅಭಿವೃದ್ಧಿ ಕಾರ್ಯಗಳಿಗಾಗಿ ದೇಣಿಗೆಯನ್ನು ಸ್ವೀಕರಿಸಲಾಗುತ್ತದೆ. ದೇಣಿಗೆಯನ್ನು ನೀಡಲು ಇಚ್ಚಿಸುವ ಸಾಯಿ ಭಕ್ತರು ಈ ಕೆಳಕಂಡ ಬ್ಯಾಂಕ್ ಖಾತೆಗೆ ನಗದು/ಚೆಕ್/ಡಿಡಿ ರೂಪದಲ್ಲಿ ದೇಣಿಗೆಯನ್ನು ಕಳುಹಿಸಬಹುದಾಗಿದೆ.

ಖಾತೆ ಹೆಸರು: ಅಥರ್ವ ಕುಮಾರ್
ಬ್ಯಾಂಕ್ ಹೆಸರು: ಬ್ಯಾಂಕ್ ಆಫ್ ಇಂಡಿಯಾ
ಬ್ಯಾಂಕ್ ಶಾಖೆ: ಡಿಫೆನ್ಸ್ ಕಾಲೋನಿ ಶಾಖೆ
ಖಾತೆ ಸಂಖ್ಯೆ: 697610110003691


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ರಾಮೇಶ್ವರ ಧಾಮ್ ಮಂದಿರ ಹಾಗೂ ಜಿತೇನ್ ಗ್ಯಾಸ್ ಏಜೆನ್ಸಿಯ ಹತ್ತಿರ, ಕಾನ್ಪುರ.
.

ವಿಳಾಸ:
ಶ್ರೀ ಹನುಮಾನ್ ಸಾಯಿ ಮಂದಿರ,
ಪರ್ದೇವನಪುರ, ರಾಮೇಶ್ವರ ಧಾಮ್ ಮಂದಿರದ ಹತ್ತಿರ,
ಕಾನ್ಪುರ-208 007,
ಉತ್ತರಪ್ರದೇಶ, ಭಾರತ.

ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀ.ವಿನೀತ್ ಕುಮಾರ್

ದೂರವಾಣಿ ಸಂಖ್ಯೆಗಳು:
+91 96219 96396/+91 96964 96635/+91 96160 21835


ಇ ಮೇಲ್ ವಿಳಾಸ:
shashinigam12365@rediffmail.com



ಮಾರ್ಗಸೂಚಿ:
ಪರ್ದೇವನಪುರ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಉತ್ತರಪ್ರದೇಶ ರಾಜ್ಯದ ಕಾನ್ಪುರ ಪಟ್ಟಣದ ಪರ್ದೇವನಪುರದಲ್ಲಿ ಇರುತ್ತದೆ. ದೇವಾಲಯವು ರಾಮೇಶ್ವರ ಧಾಮ್ ಮಂದಿರ ಹಾಗೂ ಜಿತೇನ್ ಗ್ಯಾಸ್ ಏಜೆನ್ಸಿಯ ಹತ್ತಿರವಿರುತ್ತದೆ. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Friday, November 23, 2012

ಸ್ವಯಂಭು ಸಾಯಿಬಾಬಾ ಮಂದಿರ, ಇಬ್ರಾಹಿಂ ಪಟ್ಟಣಂ, ಹೈದರಾಬಾದ್ ನ ವತಿಯಿಂದ ಶಿರಡಿ ಸಾಯಿಬಾಬಾ ವಿಗ್ರಹದ ಪ್ರಾಣ ಪ್ರತಿಷ್ಟಾಪನಾ ಮಹೋತ್ಸವ ಕಾರ್ಯಕ್ರಮ - ಕೃಪೆ:ಸಾಯಿಅಮೃತಧಾರಾ.ಕಾಂ

ಸ್ವಯಂಭು ಸಾಯಿಬಾಬಾ ಮಂದಿರ, ಇಬ್ರಾಹಿಂ ಪಟ್ಟಣಂ, ಹೈದರಾಬಾದ್ ನ ವತಿಯಿಂದ ಇದೇ ತಿಂಗಳ 30ನೇ ನವೆಂಬರ್ 2012 (ಶುಕ್ರವಾರ) ದಿಂದ ಮುಂದಿನ ತಿಂಗಳ 3ನೇ ಡಿಸೆಂಬರ್ 2012 (ಸೋಮವಾರ) ದವರೆಗೆ ನೂತನ ಶಿರಡಿ ಸಾಯಿಬಾಬಾ ವಿಗ್ರಹದ ಪ್ರಾಣ ಪ್ರತಿಷ್ಟಾಪನಾ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 




ಸಾಯಿ ಭಕ್ತರು ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ.

ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ವಿಳಾಸವನ್ನು ಸಾಯಿಭಕ್ತರು ಸಂಪರ್ಕಿಸತಕ್ಕದ್ದು.

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್
ಮಂಗಳಪಲ್ಲಿ, "ಎಕ್ಸ್" ರಸ್ತೆ,
ಸಾಗರ ರಸ್ತೆ, ಇಬ್ರಾಹಿಂ ಪಟ್ಟಣಂ,
ಆರ್.ಆರ್.ಜಿಲ್ಲೆ, ಹೈದರಾಬಾದ್ - 508 211,
ಆಂಧ್ರಪ್ರದೇಶ, ಭಾರತ,
ಸಂಪರ್ಕಿಸಬೇಕಾದ ವ್ಯಕ್ತಿ: ಶ್ರೀ.ಮೋಹನ ಗಂಧಮ್ (ಸಂಸ್ಥಾಪಕರು),
ದೂರವಾಣಿ ಸಂಖ್ಯೆಗಳು:  +91 93482 56944 / +91 98480 24606
ಇ ಮೈಲ್ ವಿಳಾಸ: info@shirdisaibabamangalpally.org
ಅಂತರ್ಜಾಲ ತಾಣ: www.shirdisaibabamangalpally.org
  
ಕನ್ನಡ ಅನುವಾದ: ಶ್ರೀಕಂಠ ಶರ್ಮ

Sunday, November 18, 2012

ಶಿರಡಿ  ಸಾಯಿಬಾಬಾ  ಸಂಸ್ಥಾನದಿಂದ ಪ್ರಕಟವಾಗುವ ತಮಿಳು ಶ್ರೀ ಸಾಯಿ ಸಚ್ಚರಿತ್ರೆಯ ಅನುವಾದಕ ಶ್ರೀ.ಚೊಕ್ಕಲಿಂಗಮ್ ಸುಬ್ರಮಣಿಯನ್ - ಕೃಪೆ: ಸಾಯಿಅಮೃತಧಾರಾ.ಕಾಂ


ಶ್ರೀ.ಚೊಕ್ಕಲಿಂಗಮ್ ಸುಬ್ರಮಣಿಯನ್ ರವರು ದಿವಂಗತ ಶ್ರೀ.ಗೋವಿಂದ್ ರಘುನಾಥ್ ದಾಬೋಲ್ಕರ್ ರವರ ಶ್ರೀ ಸಾಯಿ ಸಚ್ಚರಿತ್ರೆಯನ್ನು ತಮಿಳು ಭಾಷೆಯಲ್ಲಿ ಅನುವಾದ ಮಾಡಿರುತ್ತಾರೆ. ಈ ತಮಿಳು ಗ್ರಂಥವನ್ನು ಶಿರಡಿ ಸಾಯಿಬಾಬಾ ಸಂಸ್ಥಾನವು ಪ್ರಕಟಣೆಗೊಳಿಸುತ್ತಿದೆ. 

ಶ್ರೀ.ಚೊಕ್ಕಲಿಂಗಮ್ ಸುಬ್ರಮಣಿಯನ್ ರವರು 19ನೇ ಜನವರಿ 1944 ರಂದು ತಮಿಳುನಾಡಿನ ಪುದುಕೋಟೆ ಪಟ್ಟಣದಲ್ಲಿ ದಿವಂಗತ ಶ್ರೀಮತಿ.ವೇದಂಬಾಳ್ ಹಾಗೂ ದಿವಂಗತ ಶ್ರೀ.ಆರ್.ಚೊಕ್ಕಲಿಂಗಮ್ ರವರ ಪುತ್ರನಾಗಿ ಜನಿಸಿರುತ್ತಾರೆ. ಇವರು ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿ.ಇ.(ಸಿವಿಲ್) ಪದವಿಯನ್ನು ಗಳಿಸಿರುತ್ತಾರೆ.

ಶ್ರೀ.ಚೊಕ್ಕಲಿಂಗಮ್ ಸುಬ್ರಮಣಿಯನ್ ರವರು ದಿವಂಗತ ಖಾಪರ್ಡೆಯವರ "ಶಿರಡಿ ಡೈರಿ", ಆರ್ಥರ್ ಓಸ್ಬರ್ನ್ ರವರ "ಇನ್ಕ್ರೆಡಿಬಲ್ ಸಾಯಿಬಾಬಾ" ಹಾಗೂ ಡಾ.ಬ್ರಿಜ್ ಕಿಶೋರ್ ರವರ "ಸೋಲಮ್ ಪ್ಲೆಡ್ಜ್" ಗ್ರಂಥಗಳನ್ನು ತಮಿಳು ಭಾಷೆಗೆ ಅನುವಾದ ಮಾಡಿರುತ್ತಾರೆ.

ಅಲ್ಲದೇ, ಶಿರಡಿ ಸಾಯಿಬಾಬಾ ಸಂಸ್ಥಾನದಿಂದ ಬಿಡುಗಡೆ ಮಾಡಿರುವ ತಮಿಳು ಸಾಯಿ ಸಚ್ಚರಿತ್ರೆ ಧ್ವನಿಸುರಳಿ ಡಿವಿಡಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ.

ಪ್ರಸ್ತುತ ಇವರು ತಮ್ಮ ಧರ್ಮಪತ್ನಿ ಶ್ರೀಮತಿ.ಎಸ್.ಯೋಗರಾಣಿಯವರೊಂದಿಗೆ ಕುಂಭಕೋಣಂ ನ ತಮ್ಮ ಸ್ವಗೃಹದಲ್ಲಿ  ಸುಖೀಜೀವನವನ್ನು ನಡೆಸುತ್ತಿದ್ದಾರೆ.ಇವರಿಗೆ ಶ್ರೀಮತಿ.ಲಕ್ಷ್ಮೀ ರಮ್ಯ ಎಂಬ ಹೆಣ್ಣು ಮಗಳು ಹಾಗೂ ಶ್ರೀ.ಎಸ್.ಸಾಯಿ ಕದಿರೇಶನ್ ಎಂಬ ಗಂಡು ಮಗನಿದ್ದು  ಅವರುಗಳಿಗೆ ವಿವಾಹವಾಗಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ.

ಶ್ರೀ.ಚೊಕ್ಕಲಿಂಗಮ್ ಸುಬ್ರಮಣಿಯನ್ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:



ವಿಳಾಸ:

ಶ್ರೀ.ಚೊಕ್ಕಲಿಂಗಮ್ ಸುಬ್ರಮಣಿಯನ್
ಜಿ.ಎಲ್.ಹೌಸ್, 5/168, 
ಸೀತಾರಾಮ ನಗರ,ಸಕ್ಕೋಟೈ, 
ಕುಂಭಕೋಣಂ - 612 401, 
ತಂಜಾವೂರು ಜಿಲ್ಲೆ,
ತಮಿಳುನಾಡು, ಭಾರತ

ದೂರವಾಣಿ ಸಂಖ್ಯೆಗಳು:

+91 435 2414330 (ಸ್ಥಿರ ದೂರವಾಣಿ)/+91 90954 23909 (ಮೊಬೈಲ್)

ಇ-ಮೈಲ್ ವಿಳಾಸ:

chocksubbu@gmail.com

ಕನ್ನಡ ಅನುವಾದ: ಶ್ರೀಕಂಠ ಶರ್ಮ

Friday, November 16, 2012

ಖ್ಯಾತ ಬರಹಗಾರ ಹಾಗೂ ಉಪನ್ಯಾಸಕ - ಶ್ರೀ.ಮದನ ಗೋಪಾಲ್ ಗೋಯಲ್  - ಕೃಪೆ:ಸಾಯಿಅಮೃತಧಾರಾ.ಕಾಂ




ಶ್ರೀ.ಮದನ ಗೋಪಾಲ್ ಗೋಯಲ್ ರವರು ಸಾಯಿಬಾಬಾರವರ ಮೇಲೆ ರಚಿಸಲಾಗಿರುವ "Saibaba -“Sadguru Shri Sain Nath-Dharatal par Adbhut Avataran” ಎಂಬ ಹಿಂದಿ ಪುಸ್ತಕದ ರಚನಕಾರರು.  ಇವರು ಪ್ರಖ್ಯಾತ ಬರಹಗಾರರು, ಉಪನ್ಯಾಸಕರು ಹಾಗೂ ಅನನ್ಯ ಸಾಯಿಭಕ್ತರೂ ಆಗಿದ್ದಾರೆ.

ಇವರು 30ನೇ ಏಪ್ರಿಲ್ 1936 ರಂದು ರಾಜಸ್ಥಾನದ ಬೂಂದಿ ಜಿಲ್ಲೆಯ ಇಂದ್ರಘರ್ ನಲ್ಲಿ ಜನಿಸಿದರು. ಇವರ ತಾಯಿ ದಿವಂಗತ ಶ್ರೀಮತಿ.ದ್ರಾಕ್ಷಾ ದೇವಿ ಹಾಗೂ ತಂದೆ ದಿವಂಗತ ಶ್ರೀ.ಕಲ್ಯಾಣ್ ಬಕ್ಷ್ ಗೋಯಲ್.

ಇವರು ರಾಜಸ್ಥಾನದ ವಿಶ್ವವಿದ್ಯಾಲಯದಿಂದ ಎಂ.ಎ, ಬಿ.ಎಡ್ ಹಾಗೂ ಧರ್ಮ ವಿಶಾರದ ಪದವಿಗಳನ್ನು ಪಡೆದಿರುತ್ತಾರೆ.

ಇವರು ರಾಜಸ್ಥಾನದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲರಾಗಿ ಹಲವಾರು ವರ್ಷಗಳ ಕಾಲ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ ಬಳಿಕ 1994 ಇಸವಿಯಲ್ಲಿ ನಿವೃತ್ತಿ ಹೊಂದಿದರು.

ಇವರು ಸಾಯಿಬಾಬಾರವರ ಬಗ್ಗೆ ಹಿಂದಿ ಭಾಷೆಯಲ್ಲಿ ನೂರಾರು ಲೇಖನಗಳನ್ನು ಬರೆದಿದ್ದು ಅವುಗಳು ಪ್ರಖ್ಯಾತ ದಿನಪತ್ರಿಕೆಗಳು, ನಿಯತಕಾಲಿಕಗಳಷ್ಟೇ ಅಲ್ಲದೇ ಶಿರಡಿ ಸಾಯಿಬಾಬಾ ಸಂಸ್ಥಾನದ ಪ್ರಕಟಣೆಯಾದ ಶ್ರೀ ಸಾಯಿಲೀಲಾ ದ್ವೈಮಾಸಿಕದಲ್ಲೂ ಪ್ರಕಟಣೆಗೊಂಡಿವೆ.

ಅಷ್ಟೇ ಅಲ್ಲದೇ, ರಾಜಸ್ಥಾನದ ಹಲವಾರು ಕಡೆಗಳಲ್ಲಿ ಸಾಯಿಬಾಬಾರವರ ಬಗ್ಗೆ ಉಪನ್ಯಾಸ ಕಾರ್ಯಕ್ರಮಗಳನ್ನು ಕೂಡ ನೀಡಿದ ಹೆಗ್ಗಳಿಕೆ ಇವರದು.

ಶ್ರೀ.ಮದನ ಗೋಪಾಲ್ ಗೋಯಲ್ ರವರು ಶ್ರೀಮತಿ.ಕಮಲಾದೇವಿ ಗೋಯಲ್ ರವರನ್ನು ವಿವಾಹವಾಗಿದ್ದು ಇವರಿಗೆ ಶ್ರೀ.ಲಲಿತ್ ಗೋಪಾಲ್ ಗೋಯಲ್, ಶ್ರೀ.ರಾಜೇಂದ್ರ ಕುಮಾರ್ ಗೋಯಲ್ ಮತ್ತು ಶ್ರೀ.ಮನೀಶ್ ಗೋಯಲ್ ಎಂಬ ಮೂರು ಗಂಡು ಮಕ್ಕಳೂ ಹಾಗೂ ಶ್ರೀಮತಿ.ವಿದ್ಯಾವತಿ ಎಂಬ ಮಗಳೂ ಇದ್ದಾರೆ. ಸಾಯಿಬಾಬಾರವರ ಕೃಪೆ ಹಾಗೂ ಆಶೀರ್ವಾದದಿಂದ ಪ್ರಸ್ತುತ  ಇವರು ರಾಜಸ್ಥಾನದ ಬೂಂದಿ ನಿವಾಸದಲ್ಲಿ ತಮ್ಮ ಪತ್ನಿ ಹಾಗೂ ಗಂಡು ಮಕ್ಕಳೊಂದಿಗೆ ಸುಖೀ ಜೀವನವನ್ನು ನಡೆಸುತ್ತಿದ್ದಾರೆ.

ಶ್ರೀ.ಮದನ ಗೋಪಾಲ್ ಗೋಯಲ್ ರವರ ಸಂಪರ್ಕದ ವಿವರಗಳನ್ನು  ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:

ವಿಳಾಸ:

ಶ್ರೀ.ಮದನ ಗೋಪಾಲ್ ಗೋಯಲ್
ಶ್ರೀ ರಾಮ ಆಯನ್, ಇಂದ್ರಘರ್ ಜಿಲ್ಲೆ, ಬೂಂದಿ
ರಾಜಸ್ಥಾನ - 323 613.

ಓಲ್ಡ್ ಪವರ್ ಹೌಸ್ ರಸ್ತೆ,
ನಯಪುರ, ಕೋಟಾ,
ರಾಜಸ್ಥಾನ - 324 001.

ನಂ.1-ಸಿ-21, ಹೌಸಿಂಗ್ ಬೋರ್ಡ್ ಕಾಲೋನಿ,
ಕುನ್ಹಾಡಿ, ಕೋಟಾ,
ರಾಜಸ್ಥಾನ - 324 008.

ದೂರವಾಣಿ ಸಂಖ್ಯೆಗಳು:

+91 92520 60991/+91 94605 94890/+91 78917 63884

ಇ-ಮೈಲ್ ವಿಳಾಸ:

gopalgoyal1963@gmail.com

ಫೇಸ್ ಬುಕ್ ವಿಳಾಸ:

https://www.facebook.com/madan.g.goyal

ಕನ್ನಡ ಅನುವಾದ: ಶ್ರೀಕಂಠ ಶರ್ಮ
ಶಿರಡಿಯಲ್ಲಿ ಗಿನ್ನೀಸ್ ದಾಖಲೆಯ ಪ್ರಪ್ರಥಮ ಲಕ್ಷ ದೀಪೋತ್ಸವ ಕಾರ್ಯಕ್ರಮ - ಒಂದು ವರದಿ - ಕೃಪೆ:ಸಾಯಿಅಮೃತಧಾರಾ.ಕಾಂ

ಶಿರಡಿಯ ಸಾಯಿಭಕ್ತ ಲಕ್ಷ್ಮೀಬಾಯಿ ಶಿಂಧೆ ಟ್ರಸ್ಟ್, ಇದೇ ತಿಂಗಳ ದೀಪಾವಳಿ ಹಬ್ಬದ ನಡುವೆ ಬರುವ ಅಮಾವಾಸ್ಯೆಯ ದಿನದಂದು ಆಚರಿಸುವ ಲಕ್ಷ್ಮೀ ಕುಬೇರ ಪೂಜೆಯ ಪರಮ ಪವಿತ್ರ ದಿನವಾದ 13ನೇ ನವೆಂಬರ್ 2012, ಮಂಗಳವಾರದಂದು ಸಂಜೆ 7:00 ಗಂಟೆಗೆ ಶಿರಡಿಯ ಬಸ್ ನಿಲ್ದಾಣದ ಎದುರುಗಡೆ ಇರುವ ಸಾಯಿನಗರ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.  ಈ ಕಾರ್ಯಕ್ರಮದಲ್ಲಿ 15,000 ಸಾಯಿ ಭಕ್ತರು ಪಾಲ್ಗೊಂಡು ಏಕ ಕಾಲದಲ್ಲಿ 1 ಲಕ್ಷ 8 ಸಾವಿರ ದೀಪಗಳನ್ನು ಕೇವಲ 30 ಸೆಕೆಂಡ್ ಗಳಲ್ಲಿ ಹಚ್ಚಿ ಒಂದು ಹೊಸ ವಿಶ್ವ ದಾಖಲೆಗೆ ಕಾರಣವಾದರು.  ಈ ಕಾರ್ಯಕ್ರಮವು ಹೊಸ ಗಿನ್ನೀಸ್ ದಾಖಲೆಯನ್ನು ಸೃಷ್ಟಿಸುವುದರೊಂದಿಗೆ ಇತಿಹಾಸದ ಪುಟಗಳನ್ನು ಸೇರಿದುದು ಒಂದು ವಿಶೇಷವೇ ಸರಿ!!!!!!

ಶಿರಡಿಯ ಸಾಯಿಭಕ್ತ ಲಕ್ಷ್ಮೀಬಾಯಿ ಶಿಂಧೆ ಟ್ರಸ್ಟ್ ನ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದರ ಯಶಸ್ಸಿಗೆ ಕಾರಣರಾದ ಎಲ್ಲಾ ಸಾಯಿ ಭಕ್ತರು, ಶಿರಡಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ನಿವಾಸಿಗಳು, ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳು, ಶಿರಡಿ ನಗರ ಪಂಚಾಯತಿಯ ಅಧಿಕಾರಿಗಳು, ಶಿರಡಿ ಪೋಲಿಸ್ ಅಧಿಕಾರಿಗಳು, ಶಿರಡಿ ಸಾಯಿ ಟ್ರಸ್ಟ್ (ಚನ್ನೈ), ಸಾಯಿ ಪ್ರೇರಣಾ ಟ್ರಸ್ಟ್ (ನವದೆಹಲಿ), ಎಲ್ಲಾ ಪತ್ರಿಕೆಗಳು ಹಾಗೂ ಮಾಧ್ಯಮದವರಿಗೆ ತನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುವುದನ್ನು ಮರೆಯಲಿಲ್ಲ. 






ಕನ್ನಡ ಅನುವಾದ: ಶ್ರೀಕಂಠ ಶರ್ಮ
ಹಿರಿಯ ಸಾಯಿಭಕ್ತ - ಶ್ರೀ.ರಾಮಚಂದ್ರ ಎಂ.ಅಡ್ಕರ್ - ಕೃಪೆ: ಸಾಯಿಅಮೃತಧಾರಾ.ಕಾಂ



ಶ್ರೀ.ರಾಮಚಂದ್ರ ಎಂ.ಅಡ್ಕರ್ ರವರು ಪ್ರತಿನಿತ್ಯ ಸಾಯಿಬಾಬಾರವರ ಮಧ್ಯಾನ್ಹ ಹಾಗೂ ಸಂಜೆಯ ಆರತಿಯ ಸಮಯದಲ್ಲಿ  ಹಾಡುವ ಸುಪ್ರಸಿದ್ಧ "ಆರತಿ ಸಾಯಿಬಾಬಾ ಸೌಖ್ಯ ದಾತಾರ ಜೀವ" ದ ರಚನಕಾರರಾದ ಶ್ರೀ.ಮಾಧವ ವಾಮನ ರಾವ್ ಅಡ್ಕರ್ ರವರ ಪುತ್ರರು. ಇವರು 14ನೇ ಮಾರ್ಚ್ 1915 ರಂದು ದಿವಂಗತ ಶ್ರೀಮತಿ.ಗಂಗಾಬಾಯಿ ಅಡ್ಕರ್ ಹಾಗೂ ದಿವಂಗತ ಶ್ರೀ.ಮಾಧವ ವಾಮನ ರಾವ್ ಅಡ್ಕರ್ ವರ ಪುತ್ರನಾಗಿ ಜನಿಸಿದರು. 



ಶ್ರೀ.ರಾಮಚಂದ್ರ ಎಂ.ಅಡ್ಕರ್ ರವರು ಸಾಯಿಬಾಬಾರವರ ದಯೆಯಿಂದ 14ನೇ ಮಾರ್ಚ್ 1915 ರಂದು ಜನಿಸಿದರು. ಅದರ ಸಾರಾಂಶವನ್ನು ಸಾಯಿಭಕ್ತರ ಅವಗಾಹನೆಗಾಗಿ ಈ ಕೆಳಗೆ ಕೊಡಲಾಗಿದೆ:

ಮಾಧವ ರಾವ್ ರವರು ಪ್ರತಿ ವರ್ಷ ಪಂಡರಾಪುರದ ಯಾತ್ರೆಯನ್ನು ಕೈಗೊಳ್ಳುತ್ತಿದ್ದರು. ಒಮ್ಮೆ ಅವರು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸೇವೆಯನ್ನು ಮಾಡುತ್ತಿದ್ದರು. ಒಂದು ದಿನ ಅವರು ದ್ವಾರಕಾಮಾಯಿಯಲ್ಲಿ ಸಾಯಿಬಾಬಾರವರ ಸೇವೆಯನ್ನು ಮಾಡುತ್ತಾ ಕುಳಿತಿದ್ದಾಗ ಸಾಯಿಬಾಬಾರವರು "ಮಾಧವ ರಾವ್, ನಿನ್ನನ್ನು ಮನೆಗೆ ಕರೆದುಕೊಂಡು ಹೋಗಲು ಇಬ್ಬರು ಬರುತ್ತಾರೆ. ನೀನು ಅವರೊಡನೆ ಹೋಗು. ನಿನಗೆ ಅತಿ ಶೀಘ್ರದಲ್ಲೇ ಒಬ್ಬ ಮಗನು ಹುಟ್ಟುತ್ತಾನೆ. ಅವನಿಗೆ ರಾಮ್ ಎಂದು ಹೆಸರಿಡು" ಎಂದು ಭವಿಷ್ಯ ನುಡಿದರು. ಸಾಯಿಬಾಬಾರವರು ಹೀಗೆ ನುಡಿದ ಸ್ವಲ್ಪ ಹೊತ್ತಿನಲ್ಲೇ ಅವರ ತಂದೆ ಹಾಗೂ ಮಾವನವರು ದ್ವಾರಕಾಮಾಯಿಗೆ ಬಂದರು. ಅವರುಗಳು "ಬಾಬಾ, ದಯವಿಟ್ಟು ಈ ಮಾಧವನನ್ನು ಮನೆಗೆ ಕಳುಹಿಸಿಕೊಡಿ. ಇವನಿಗೆ ಮದುವೆಯಾಗಿದ್ದರೂ ಕೊಡ ಸ್ವಲ್ಪವೂ ಜವಾಬ್ದಾರಿಯಿಲ್ಲ" ಎಂದು ಬೇಡಿಕೊಂಡರು. ಅದಕ್ಕೆ ಉತ್ತರವಾಗಿ ಸಾಯಿಬಾಬಾರವರು "ಈ ಮಾಧವ ನಿಮ್ಮೊಂದಿಗೆ ಮನೆಗೆ ಬರುತ್ತಾನೆ" ಎಂದು ನುಡಿದರು. ಸಾಯಿಬಾಬಾರವರ ಆಜ್ಞೆಯಂತೆ ಮಾಧವ ಅವರಿಬ್ಬರ ಜೊತೆಯಲ್ಲಿ ಮನೆಗೆ ವಾಪಾಸಾದನು. ಸಾಯಿಬಾಬಾರವರು ನುಡಿದಂತೆ ಸರಿಯಾಗಿ ಒಂದು ವರ್ಷದ ಒಳಗಾಗಿ ಅವನಿಗೆ ಗಂಡು ಮಗುವಿನ ಜನನವಾಯಿತು. ಅವನಿಗೆ ರಾಮಚಂದ್ರ ಎಂದು ನಾಮಕರಣ ಮಾಡಲಾಯಿತು.

ಶ್ರೀ.ರಾಮಚಂದ್ರ ಎಂ.ಅಡ್ಕರ್ ರವರು 5ನೇ ತರಗತಿಯವರೆಗೂ ಮರಾಠಿ ಮಾಧ್ಯಮದಲ್ಲಿ ಅಭ್ಯಾಸ ಮಾಡಿದರು. ಇವರ ತಂದೆ ಒಳ್ಳೆಯ ಭಾಷಾ ತಜ್ಞರಾಗಿದ್ದರು. ಅವರು ಇವರಿಗೆ ಉರ್ದು ಭಾಷೆಯನ್ನು ಓದಲು ಹಾಗೂ ಬರೆಯಲು ಕಲಿಸಿದರು. ಇವರು ವಿದ್ಯೆಯನ್ನು ಪೂರ್ಣಗೊಳಿಸಿ ಅಧ್ಯಾಪಕ ವೃತ್ತಿಯನ್ನು ಕೈಗೊಳ್ಳಬೇಕೆಂದು ಅಂದುಕೊಂಡಿದ್ದರು. ಆದರೆ ಇವರಿಗೆ ಅದಕ್ಕಿಂತ ಉನ್ನತ ಹುದ್ದೆಯಾದ ಮುಖ್ಯೋಪಾಧ್ಯಾಯರ ಹುದ್ದೆ ದೊರೆಯಿತು. ಇವರು ನಾಲ್ಕು ಶಾಲೆಗಳಿಗೆ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೆಲಸ ದೊರಕಿದ ಮೂರು ತಿಂಗಳಿನಲ್ಲೇ ಇವರು ಶ್ರೀಮತಿ.ಮಥುರಾ ಬಾಯಿ ಕುಲಕರ್ಣಿಯವರನ್ನು ವಿವಾಹವಾದರು. ಇವರು ತಮ್ಮ ತಂದೆಯ ಊರಾದ ಬರ್ಸಿಯಲ್ಲಿ ತಮ್ಮ ತಂದೆಯ ಮನೆಯಲ್ಲಿ ಇದ್ದುಕೊಂಡು ಮುಖ್ಯೋಪಾಧ್ಯಾಯರ ಹುದ್ದೆಯನ್ನು ನಿರ್ವಹಿಸುತ್ತಿದ್ದರು. ಕಾಲಾನಂತರದಲ್ಲಿ ಇವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಮೂರು ಹೆಣ್ಣು ಮಕ್ಕಳು ಜನಿಸಿದರು. ಇವರು 1972 ನೇ ಇಸವಿಯಲ್ಲಿ ನೌಕರಿಯಿಂದ ನಿವೃತ್ತರಾದರು ಹಾಗೂ 1980 ನೇ ಇಸವಿಯಲ್ಲಿ ಪುಣೆಗೆ ಬಂದು ಶಾಶ್ವತವಾಗಿ ನೆಲೆಸಿದರು. 



ಶ್ರೀ.ರಾಮಚಂದ್ರ ಅಡ್ಕರ್ ರವರಿಗೆ ಈಗ ಬಹಳ ವಯಸ್ಸಾಗಿರುವ ಕಾರಣ ಸಾಯಿಬಾಬಾರವರ ಮುಖ ಸರಿಯಾಗಿ ಜ್ಞಾಪಕಕ್ಕೆ ಬರುತ್ತಿಲ್ಲ. "ಆದರೆ, ಇಂದಿಗೂ ನನಗೆ ಸಾಯಿಬಾಬಾರವರ ಪವಿತ್ರ ಪಾದಗಳ ನೆನಪು ಚೆನ್ನಾಗಿದೆ" ಎಂದು ಅವರನ್ನು ಇತ್ತೀಚೆಗೆ ಭೇಟಿ ಮಾಡಿದ ಪುಣೆಯ ಸಾಯಿ ಭಕ್ತರಾದ ಶ್ರೀ.ನಾಗರಾಜ್ ಅನ್ವೇಕರ್ ರವರಿಗೆ ಸ್ವತಃ ಅವರೇ ಹೇಳಿರುತ್ತಾರೆ.

ಸಾಯಿಬಾಬಾರವರ ದಯೆ ಹಾಗೂ ಆಶೀರ್ವಾದದಿಂದ ಶ್ರೀ.ರಾಮಚಂದ್ರ ಅಡ್ಕರ್ ರವರು ತಮ್ಮ ಧರ್ಮಪತ್ನಿ ಹಾಗೂ ಮಕ್ಕಳೊಂದಿಗೆ ಪುಣೆಯ ತಮ್ಮ ನಿವಾಸದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ.

ಶ್ರೀ.ರಾಮಚಂದ್ರ ಎಂ.ಅಡ್ಕರ್ ರವರ ಸಂಪರ್ಕದ ವಿವರಗಳನ್ನು  ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:

ವಿಳಾಸ:

ಶ್ರೀ.ರಾಮಚಂದ್ರ ಎಂ.ಅಡ್ಕರ್
ಶಾಂತಾ ಸೊಸೈಟಿ, ಸಂತ ಸಂಗ್ ಬಂಗ್ಲೆ,
ಸೇನಾಪತಿ ಬಾಪಟ್ ರಸ್ತೆ,
ಪುಣೆ - 411 016,
ಮಹಾರಾಷ್ಟ್ರ, ಭಾರತ

ಮಾರ್ಗಸೂಚಿ:

ಚತುರಶ್ರೀ ದೇವಸ್ಥಾನದ ಎದುರುಗಡೆ ರಸ್ತೆಯಲ್ಲಿ ನೇರವಾಗಿ ಸ್ವಲ್ಪ ದೂರ ಕ್ರಮಿಸಿದರೆ ಸಿಂಬಯಾಸಿಸ್ ಸಂಸ್ಥೆ ಸಿಗುತ್ತದೆ. ಅಲ್ಲಿಂದ ಸ್ವಲ್ಪವೇ ದೂರದಲ್ಲಿ ದೇನಾ ಬ್ಯಾಂಕ್ ವೃತ್ತ ಸಿಗುತ್ತದೆ. ದೇನಾ ಬ್ಯಾಂಕ್ ವೃತ್ತದಲ್ಲಿ ಎಡಕ್ಕೆ ತಿರುಗಿ ಸ್ವಲ್ಪ ಮುಂದೆ ಹೋಗಿ ಮೊದಲ ಬಲ ತಿರುವಿನಲ್ಲಿ ತಿರುಗಿದರೆ ಶ್ರೀ.ರಾಮಚಂದ್ರ ಅಡ್ಕರ್ ರವರ್ ನಿವಾಸ ಸಿಗುತ್ತದೆ. 

ದೂರವಾಣಿ ಸಂಖ್ಯೆಗಳು:

+91 20 3092 8078 / +91 98220 30201

ಕನ್ನಡ ಅನುವಾದ: ಶ್ರೀಕಂಠ ಶರ್ಮ

Monday, November 5, 2012


ಶಿರಡಿಯಲ್ಲಿ ಪ್ರಪ್ರಥಮ ಲಕ್ಷ ದೀಪೋತ್ಸವ ಕಾರ್ಯಕ್ರಮ - ಕೃಪೆ:ಸಾಯಿಅಮೃತಧಾರಾ.ಕಾಂ

ದೀಪಾವಳಿಯ ಪರಮ ಪವಿತ್ರ ದಿನದಂದು ಸಾಯಿಬಾಬಾರವರು ಶಿರಡಿಯ ದ್ವಾರಕಾಮಾಯಿಯಲ್ಲಿ ನೀರಿನಿಂದ ದೀಪಗಳನ್ನು  ಬೆಳಗಿಸಿದ ಅದ್ಭುತ ಚಮತ್ಕಾರ ಎಲ್ಲಾ ಸಾಯಿಭಕ್ತರಿಗೂ ತಿಳಿದಿದೆ. ಈ ಅದ್ಭುತ ಚಮತ್ಕಾರದಿಂದ ಪ್ರೇರೇಪಿತರಾದ ಶಿರಡಿಯ ಸಾಯಿಭಕ್ತ ಲಕ್ಷ್ಮೀಬಾಯಿ ಶಿಂಧೆ ಟ್ರಸ್ಟ್, ಇದೇ ತಿಂಗಳ ಲಕ್ಷ್ಮೀ ಕುಬೇರ ಪೂಜೆಯ ಪರಮ ಪವಿತ್ರ ದಿನವಾದ 13ನೇ ನವೆಂಬರ್ 2012, ಮಂಗಳವಾರದಂದು ಸಂಜೆ 7:00 ಗಂಟೆಗೆ ಶಿರಡಿಯ ಬಸ್ ನಿಲ್ದಾಣದ ಎದುರುಗಡೆ ಇರುವ ಸಾಯಿನಗರ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ವಿಶೇಷ ಕಾರ್ಯಕ್ರಮಕ್ಕೆ 2500 ಲೀಟರ್ ಎಣ್ಣೆಯನ್ನು ಬಳಸಲಾಗುತ್ತಿದೆ. ಈ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಗಿನ್ನೀಸ್ ದಾಖಲೆಗೆ ಸೇರಿಸಬೇಕೆಂದು ಸಾಯಿಭಕ್ತ ಲಕ್ಷ್ಮೀಬಾಯಿ ಶಿಂಧೆ ಟ್ರಸ್ಟ್ ಅಂದುಕೊಂಡಿದೆ. ಅದಕ್ಕೆ ಬೇಕಾದ ಎಲ್ಲಾ ಅಗತ್ಯ ದಾಖಲೆಗಳನ್ನು ಲಕ್ಷ್ಮೀಬಾಯಿ ಶಿಂಧೆ ಟ್ರಸ್ಟ್ ಗಿನ್ನೀಸ್  ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅಧಿಕಾರಿಗಳಿಗೆ ಈಗಾಗಲೇ ನೀಡಿರುತ್ತದೆ.



ಈ ವಿಶೇಷ ಕಾರ್ಯಕ್ರಮದಲ್ಲಿ ಗಿನ್ನೀಸ್  ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನ ಅಧಿಕಾರಿಗಳು, ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳು ಹಾಗೂ ಶಿರಡಿ ನಗರಪಾಲಿಕೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.


ಈ ಅಪರೂಪದ ಹಾಗೂ ಜಗದ್ವಿಖ್ಯಾತ ಕಾರ್ಯಕ್ರಮದಲ್ಲಿ ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಾಯಿಭಕ್ತ ಲಕ್ಷ್ಮೀಬಾಯಿ ಶಿಂಧೆ ಟ್ರಸ್ಟ್ ನ ಪದಾಧಿಕಾರಿಗಳು ಈ ಮೂಲಕ ಮನವಿ ಮಾಡಿಕೊಳ್ಳುತ್ತಾರೆ.

ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಯಾವುದೇ ರೀತಿಯಲ್ಲಿ ಸಹಾಯ ಮಾಡಲು ಇಚ್ಚಿಸುವ ಸಾಯಿ ಭಕ್ತರು ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಬಹುದಾಗಿದೆ.

ಶ್ರೀ.ಅರುಣ್ ಗಾಯಕವಾಡ್ - ಟ್ರಸ್ಟಿ
ಸಾಯಿಭಕ್ತ ಲಕ್ಷ್ಮೀಬಾಯಿ ಶಿಂಧೆ ಟ್ರಸ್ಟ್, ಶಿರಡಿ
ಶ್ರೀ ಶಿರಡಿ ಸಾಯಿ ಡೆವಲಪರ್ಸ್,
ಎಲ್.ಐ.ಸಿ.ಕೌಂಟರ್ ಹತ್ತಿರ, ಸಾಯಿ ಪ್ರಸಾದ ಸಂಕೀರ್ಣ,
ಸಾಯಿ ಸಂಜೀವನಿ ಹೋಟೆಲ್ ಹತ್ತಿರ,
ನ್ಯೂ ಪಿಂಪಲವಾಡಿ ರಸ್ತೆ, ಶಿರಡಿ - 423 109,
ಅಹಮದ್ ನಗರ ಜಿಲ್ಲೆ, ಮಹಾರಾಷ್ಟ್ರ, ಭಾರತ,
ಮೊಬೈಲ್ ಸಂಖ್ಯೆಗಳು: +91 99602 65819 / +91 93703 09888
ಇ ಮೈಲ್ ವಿಳಾಸ: arung_shirdi@yahoo.com
ಫೇಸ್ ಬುಕ್ ವಿಳಾಸ: facebook.com/saibhakta laxmibaishindetrust,shirdi
ಅಂತರ್ಜಾಲ ತಾಣ: www.sai9coins.org

ಕನ್ನಡ ಅನುವಾದ: ಶ್ರೀಕಂಠ ಶರ್ಮ

Friday, November 2, 2012


ಸಾಯಿ ದರ್ಬಾರದ ಅಲಂಕಾರಕರು - ಶ್ರೀ.ಮಹೀಂದರ್ ಕೆ.ವರ್ಮ - ಕೃಪೆ: ಸಾಯಿಅಮೃತಧಾರಾ.ಕಾಂ


ಶ್ರೀ.ಮಹೀಂದರ್ ಕೆ.ವರ್ಮರವರು ಸುಪ್ರಸಿದ್ಧ ಸಾಯಿ ದರ್ಬಾರದ ಅಲಂಕಾರಕರು ಹಾಗೂ ಸಾಯಿಬಾಬಾರವರಿಗೆ ಸಂಬಂಧಿಸಿದ ವಸ್ತುಗಳನ್ನು ವಿಕ್ರಯಿಸುವ ಮಳಿಗೆಯ ಒಡೆಯರು ಆಗಿದ್ದಾರೆ. ಇವರು 15ನೇ ಮೇ 1962 ರಂದು  ನವದೆಹಲಿಯಲ್ಲಿ ಶ್ರೀಮತಿ.ಕಪೂರಿ ಮತ್ತು ದಿವಂಗತ ಶ್ರೀ.ಪಿ.ಎಲ್.ವರ್ಮರವರ ಮಗನಾಗಿ ಜನಿಸಿದರು.

ಇವರು ದೆಹಲಿ ವಿಶ್ವವಿದ್ಯಾಲಯದಿಂದ ಪದವಿಯನ್ನು ಗಳಿಸಿರುತ್ತಾರೆ. ಇವರು ತಮ್ಮ ಧರ್ಮಪತ್ನಿ ಶ್ರೀಮತಿ.ಗೀತಾ ವರ್ಮರವರ ಸಹಯೋಗದೊಂದಿಗೆ ದೆಹಲಿಯ ದ್ವಾರಕಾದಲ್ಲಿ "ಸಾಯಿ ಸಂಪದ ದರ್ಬಾರ್ ಡೆಕೋರೇಟರ್ಸ್" ಎಂಬ ಮಳಿಗೆಯನ್ನು ನಡೆಸುತ್ತಿದ್ದಾರೆ. ಇವರು ಕೃತಕವಾಗಿ ಸಾಯಿಬಾಬಾರವರ ದರ್ಬಾರ್ ಅನ್ನು ನಿರ್ಮಾಣ ಮಾಡುವುದರಲ್ಲಿ ಸಿದ್ಧಹಸ್ತರು. ಒಂದು ಸಣ್ಣ ಕೋಣೆಯ ಗಾತ್ರದಿಂದ ಹಿಡಿದು 350 ಅಡಿ ಎತ್ತರದವರೆವಿಗೂ ಸಾಯಿ ದರ್ಶನ ದರ್ಬಾರನ್ನು ನಿರ್ಮಾಣ ಮಾಡುವುದರಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಅಲ್ಲದೇ, ಸಾಯಿಬಾಬಾ ಸಿಂಹಾಸನ, ಛತ್ರಿ, ಗೋಡೆಗಳು ಮತ್ತು ಪಲ್ಲಕ್ಕಿಯ ಕೃತಕ ಮಾದರಿಯನ್ನು ನಿರ್ಮಾಣ ಮಾಡುವುದರಲ್ಲೂ ಕೂಡ ಪರಿಣತಿಯನ್ನು ಹೊಂದಿದ್ದಾರೆ. ಇವರ ಬಳಿಗೆ ಬರುವ ಪ್ರತಿಯೊಬ್ಬರ ಹಣಕಾಸಿನ ಪರಿಸ್ಥಿತಿಗೆ ಅನುಗುಣವಾಗಿ ಕೆಲಸ ಮಾಡಿಕೊಡುವುದು ಇವರ ವೈಶಿಷ್ಟ್ಯ.

ಇವರು ಭಾರತದ ಉದ್ದಗಲಕ್ಕೂ ಸಂಚರಿಸಿ ಹಲವಾರು ವಿಶಾಲ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮಗಳಿಗೆ ಕೃತಕ ಸಾಯಿ ದರ್ಶನ ದರ್ಬಾರನ್ನು ನಿರ್ಮಾಣ ಮಾಡಿಕೊಟ್ಟಿರುತ್ತಾರೆ. ಮುಂದಿನ ದಿನಗಳಲ್ಲಿ ವಿದೇಶಗಳಿಗೂ ತೆರಳಿ ಅಲ್ಲಿ ನಡೆಯುವ ಸಾಯಿ ಭಜನ ಸಂಧ್ಯಾಗಳಿಗೂ ಕೂಡ ಕೃತಕ ಸಾಯಿ ದರ್ಬಾರನ್ನು ನಿರ್ಮಾಣ ಮಾಡಿಕೊಡುವ ಹೆಬ್ಬಯಕೆ ಇವರದು.

ಪ್ರಸುತ ಇವರು ತಮ್ಮ ಧರ್ಮಪತ್ನಿ ಶ್ರೀಮತಿ.ಗೀತಾ ವರ್ಮ, ಮಗ ಅಮನ್ ವರ್ಮ ಹಾಗೂ ಮಗಳು ಆಕಾಂಕ್ಷ ವರ್ಮರೊಂದಿಗೆ ತಮ್ಮ ನವದೆಹಲಿಯ ಸ್ವಗೃಹದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ.

ಶ್ರೀ.ಮಹೀಂದರ್ ಕೆ.ವರ್ಮರವರ ಸಂಪರ್ಕದ ವಿವರಗಳನ್ನು  ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:


ವಿಳಾಸ:
ಶ್ರೀ.ಮಹೀಂದರ್ ಕೆ.ವರ್ಮ
ಫ್ಲಾಟ್ ಸಂಖ್ಯೆ:55,ದಿ ಪಾಮ್ಸ್ ವಸತಿಸಂಕೀರ್ಣ,
13-ಬಿ, ಸೆಕ್ಟರ್-6, ದ್ವಾರಕಾ,
ನವದೆಹಲಿ-110 075, ಭಾರತ

ದೂರವಾಣಿ ಸಂಖ್ಯೆಗಳು:
+91 99585 69393/+91 98103 49554/+91 98103 77964

ಇ-ಮೈಲ್ ವಿಳಾಸ:
sai_sampada@yahoo.com

ಫೇಸ್ ಬುಕ್ ವಿಳಾಸ:
www.facebook.com/saisampadadarbardecorators


ಕನ್ನಡ ಅನುವಾದ: ಶ್ರೀಕಂಠ ಶರ್ಮ

Tuesday, October 30, 2012


ಶ್ರೀಲಂಕಾ ಕ್ರಿಕೆಟ್ ಪಟು ಅರ್ಜುನ ರಣತುಂಗ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀಲಂಕಾ ಕ್ರಿಕೆಟ್ ಪಟು ಅರ್ಜುನ ರಣತುಂಗರವರು ಇದೇ ತಿಂಗಳ 30ನೇ ಅಕ್ಟೋಬರ್ 2012, ಮಂಗಳವಾರದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.



ಕನ್ನಡ ಅನುವಾದ: ಶ್ರೀಕಂಠಶರ್ಮ

Saturday, October 27, 2012


ಸುಮಧುರ ಕಂಠದ ಸಾಯಿ ಭಜನ ಗಾಯಕ - ಶ್ರೀ.ಚಿಂಟು ಪಂಡಿತ್ - ಕೃಪೆ: ಸಾಯಿಅಮೃತಧಾರಾ.ಕಾಂ 


ಶ್ರೀ.ಚಿಂಟು ಪಂಡಿತ್ (ದೀಕ್ಷಿತ್) ರವರು ಪಂಜಾಬ್ ಮೂಲದ ಪ್ರಸಿದ್ಧ ಸಾಯಿ ಭಜನ ಗಾಯಕರು. ಇವರು 30ನೇ ಡಿಸೆಂಬರ್ 1987 ರಂದು  ಪಂಜಾಬ್ ನ ಲೂಧಿಯಾನಾದಲ್ಲಿ ಶ್ರೀಮತಿ.ಬ್ರಿಜ್ ಲತಾ ದೀಕ್ಷಿತ್ ಮತ್ತು ಶ್ರೀ.ರಾಮರೂಪ್ ದೀಕ್ಷಿತ್ ರವರ ಮಗನಾಗಿ ಜನಿಸಿದರು.

ಇವರು ಆಗ್ರಾದ ಡಾ.ಭೀಮರಾವ್ ಅಂಬೇಡ್ಕರ್ ಯೂನಿವರ್ಸಿಟಿಯಿಂದ ಪದವಿಯನ್ನು ಗಳಿಸಿರುತ್ತಾರೆ. ಅಲ್ಲದೇ, ಲೂಧಿಯಾನಾದ ಪ್ರಾಚೀನ ವಿದ್ಯಾ ಕೇಂದ್ರದಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪ್ರಥಮ ದರ್ಜೆಯನ್ನು ಗಳಿಸಿರುತ್ತಾರೆ. ಇವರು ಚಂಡೀಘಡ - ಸೆಕ್ಟರ್ 32, ಲೂಧಿಯಾನಾ, ಫ್ಲೋರ್, ಜಲಂಧರ್ ಮತ್ತು ಇನ್ನು ಹಲವಾರು ಕಡೆಗಳಲ್ಲಿ ತಮ್ಮ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.

ತಮ್ಮ ಸಾಯಿ ಭಜನೆಯ ಮೂಲಕ ಪ್ರಪಂಚದಾದ್ಯಂತ ಸಾಯಿ ಲೀಲೆಗಳನ್ನು ಪ್ರಚಾರ ಮಾಡುವ ಹೆಬ್ಬಯಕೆ ಇವರದು.

ಪ್ರಸುತ ಇವರು ತಮ್ಮ ತಂದೆ, ತಾಯಿ, ಧರ್ಮಪತ್ನಿ ಹಾಗೂ ಮಗನೊಂದಿಗೆ ತಮ್ಮ ಲೂಧಿಯಾನಾ ದ ಗೃಹದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ.

ಶ್ರೀ.ಚಿಂಟು ಪಂಡಿತ್ (ದೀಕ್ಷಿತ್) ರವರ ಸಂಪರ್ಕದ ವಿವರಗಳನ್ನು  ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:

ವಿಳಾಸ:
ಶ್ರೀ.ಚಿಂಟು ಪಂಡಿತ್ (ದೀಕ್ಷಿತ್)
ಸಾಯಿಬಾಬಾ ಮಂದಿರ, ಗಲ್ಲಿ ನಂ.10,
ಸತ್ ಜೋತ್ ನಗರ, ಜೋಸಫ್ ಶಾಲೆಯ ಹಿಂಭಾಗ,
ದುಗ್ರಿ ದಂಡ್ರಾ ರಸ್ತೆ,
ಲೂಧಿಯಾನಾ - 141 002, ,
ಪಂಜಾಬ್, ಭಾರತ

ದೂರವಾಣಿ ಸಂಖ್ಯೆಗಳು:
+91 97808 22945, +91 90233 52853

ಇ-ಮೈಲ್ ವಿಳಾಸ:
chintupandit87@gmail.com

ಫೇಸ್ ಬುಕ್ ವಿಳಾಸ:
http://facebook.com/chintu.pandit3


ಕನ್ನಡ ಅನುವಾದ: ಶ್ರೀಕಂಠ ಶರ್ಮ


ಶ್ರೀ ಶಿವಸಾಯಿ ಟ್ರಸ್ಟ್ ನ ವತಿಯಿಂದ ಸಾಯಿಬಾಬಾರವರ 94ನೇ ಮಹಾಸಮಾಧಿ ದಿವಸ ಹಾಗೂ ವಿಜಯದಶಮಿ ಉತ್ಸವದ ಆಚರಣೆ - ಕೃಪೆ: ಸಾಯಿ ಪರಮೇಶ್ ಕುಮಾರ್, ಬಂಗಾರಪೇಟೆ

ಶ್ರೀ ಶಿವಸಾಯಿ ಟ್ರಸ್ಟ್ ಇದೇ ತಿಂಗಳ 24ನೇ ಅಕ್ಟೋಬರ್ 2012, ಬುಧವಾರದಂದು ಬಂಗಾರಪೇಟೆಯ ಶಿರಡಿ ಸಾಯಿಬಾಬಾ ದೇವಾಲಯದಲ್ಲಿ ಸಾಯಿಬಾಬಾರವರ  94ನೇ ಮಹಾಸಮಾಧಿ ದಿವಸ ಹಾಗೂ ವಿಜಯದಶಮಿ ಉತ್ಸವದ ಅಂಗವಾಗಿ ವಿಶೇಷ ಪೂಜೆ, ಅಲಂಕಾರ, ಭಜನೆ ಹಾಗೂ ಅನ್ನದಾನ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಿತು. 

ಟ್ರಸ್ಟ್ ನ ಪದಾಧಿಕಾರಿಗಳಾದ ಶ್ರೀ.ಪರಮೇಶ್ ಕುಮಾರ್, ಸ್ಥಳೀಯ ಸಾಯಿ ಭಕ್ತರುಗಳಾದ ಶಿವಕುಮಾರ್, ರತ್ನಮ್ಮ ಚಂದ್ರಪ್ಪ, ವರುಣ್, ಉಮೇಶ್, ಅನಿಲ್, ಸಂಪಂಗಿರಾಮ ಗುಪ್ತಾ, ರಾಮಕೃಷ್ಣಪ್ಪ, ಬಾಬು, ರಾಕೇಶ್, ಮಣಿ, ನಾಗರಾಜ್, ರಾಮಚಂದ್ರಪ್ಪ ಮತ್ತು ಇನ್ನು ಹಲವಾರು ಟ್ರಸ್ಟ್ ನ ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಕಾರ್ಯಕ್ರಮದ ಬಗ್ಗೆ ಪ್ರಕಟವಾದ ವಿವಿಧ ಪತ್ರಿಕಾ ವರದಿಗಳನ್ನು ಸಾಯಿ ಭಕ್ತರ ಅವಗಾಹನೆಗಾಗಿ ಈ ಕೆಳಗೆ ಲಗತ್ತಿಸಲಾಗಿದೆ.







ಕನ್ನಡ ಅನುವಾದ: ಶ್ರೀಕಂಠ ಶರ್ಮ 

Thursday, October 25, 2012

ಚನ್ನೈನ ಶಿರಡಿ ಸಾಯಿ ಟ್ರಸ್ಟ್ ನ ವತಿಯಿಂದ  ಸಾಯಿ ಭಕ್ತರಿಗಾಗಿ ನಿರ್ಮಿಸಲಾದ ವಸತಿ ಸಮುಚ್ಚಯ "ಸಾಯಿ ಆಶ್ರಮ" -  ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ಹಸ್ತಾಂತರ - ಕೃಪೆ:ಸಾಯಿಅಮೃತಧಾರಾ.ಕಾಂ

ಚನ್ನೈನ ಶಿರಡಿ ಸಾಯಿ ಟ್ರಸ್ಟ್ ನ ವತಿಯಿಂದ  ಸಾಯಿ ಭಕ್ತರಿಗಾಗಿ ನಿರ್ಮಿಸಲಾದ ವಸತಿ ಸಮುಚ್ಚಯ "ಸಾಯಿ ಆಶ್ರಮ" ವನ್ನು ಇದೇ ತಿಂಗಳ ಪವಿತ್ರ ವಿಜಯದಶಮಿಯ ದಿನವಾದ 24ನೇ ಅಕ್ಟೋಬರ್ 2012, ಬುಧವಾರದಂದು ಮಧ್ಯಾನ್ಹ 3:00 ಗಂಟೆಗೆ ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ಹಸ್ತಾಂತರ ಮಾಡಲಾಯಿತು. ಮಧ್ಯಾನ್ಹ ಆರತಿಯ ನಂತರ ಶಿರಡಿಯ ಸಮಾಧಿ ಮಂದಿರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಿರಡಿ ಸಾಯಿ ಟ್ರಸ್ಟ್ ನ ಸಂಸ್ಥಾಪಕರೂ ಹಾಗೂ ಟ್ರಸ್ಟಿಗಳಾದ ಶ್ರೀ.ಕೆ.ವಿ.ರಮಣಿಯವರು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರೂ ಹಾಗೂ ಅಹಮದ್ ನಗರ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಜಯಂತ್ ಡಿ.ಕುಲಕರ್ಣಿಯವರಿಗೆ ವಸತಿ ಸಮುಚ್ಚದ ದಾಖಲೆ ಪತ್ರಗಳನ್ನು ನೀಡಿದರು. ಸಂಸತ್ ಸದಸ್ಯರಾದ ಶ್ರೀ.ಬಿ.ಆರ್.ವಾಕ್ಚುರೆ, ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಯಾದ ಶ್ರೀ.ಕಿಶೋರ್ ಮೋರೆ, ಶಿರಡಿ ಸಾಯಿಬಾಬಾ ಸಂಸ್ಥಾನದ ಹಿಂದಿನ ಅಧ್ಯಕ್ಷರೂ ಹಾಗೂ ತಮ್ಮ ಕಾರ್ಯಾವಧಿಯಲ್ಲಿ ಸಾಯಿ ಆಶ್ರಮದ ನಿರ್ಮಾಣಕ್ಕೆ ಚಾಲನೆಯನ್ನು ಪ್ರಾರಂಭಿಸಿದ ಕೀರ್ತಿಗೆ ಭಾಜನರಾದ ಶ್ರೀ.ಜಯಂತ್ ಮುರಳೀಧರ ಸಾಸನೆ ಹಾಗೂ ಹಲವಾರು ಗಣ್ಯವಕ್ತಿಗಳು ಈ ಸರಳ ಸಮಾರಂಭದಲ್ಲಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ.ಕೆ.ವಿ.ರಮಣಿಯವರು ಪ್ರಪಂಚದ ಎಲ್ಲಾ ಮೂಲೆಗಳಿಂದ ಸಾಯಿಬಾಬಾರವರ ದರ್ಶನಕ್ಕೆಂದು ಶಿರಡಿಗೆ ಹರಿದು ಬರುತ್ತಿರುವ ಸಾಯಿಭಕ್ತ ಸಾಗರಕ್ಕೆ ಅತ್ಯಂತ ಕಡಿಮೆ ದರದಲ್ಲಿ ವಸತಿಯನ್ನು ಒದಗಿಸುವ ಸಲುವಾಗಿ ಈ ದತ್ತಿ ಸೇವಾ ಯೋಜನೆಯನ್ನು ಕೈಗೊಳ್ಳಲಾಯಿತು ಎಂದು ತಿಳಿಸಿದರು. 25 ಕೋಟಿ ರೂಪಾಯಿ ವೆಚ್ಚದಲ್ಲಿ 6 ಲಕ್ಷ ಚದರ ಅಡಿಯ ವಿಶಾಲ ಪ್ರದೇಶದಲ್ಲಿ 18 ತಿಂಗಳುಗಳಲ್ಲಿ 10000 ಕ್ಕೂ ಹೆಚ್ಚು ಸಾಯಿಭಕ್ತರಿಗೆ ವಸತಿಯನ್ನು ಕಲ್ಪಿಸುವ ಸಲುವಾಗಿ ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದ್ದ ಈ ಸಾಯಿ ಆಶ್ರಮದ ನಿರ್ಮಾಣದ ಒಡಂಬಡಿಕೆ ಪತ್ರಕ್ಕೆ 4ನೇ ಫೆಬ್ರವರಿ 2006 ರಂದು ಸಹಿ ಹಾಕಲಾಯಿತು. ವಸತಿ ಸಮುಚ್ಚಯ ನಿರ್ಮಾಣಕ್ಕೆ ಬೇಕಾದ 19.68 ಎಕರೆ ಭೂಮಿಯನ್ನು ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನವು ಶಿರಡಿಯ ಎರಡು ಕಡೆಗಳಲ್ಲಿ ಜುಲೈ 2007 ರಲ್ಲಿ ನೀಡಿತು.

ಶಿರಡಿ ಸಾಯಿ ಟ್ರಸ್ಟ್ ಸೆಪ್ಟೆಂಬರ್ 2007 ರಲ್ಲಿ ನಿರ್ಮಾಣ ಕಾರ್ಯವನ್ನು ಆರಂಭಿಸಿ ಈಗ ಈ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ. ಸಾಯಿ ಆಶ್ರಮ - 1 ರಲ್ಲಿ 1536 ಕೊಠಡಿಗಳು ಮತ್ತು ಸಾಯಿ ಅಶ್ರಮ - 2 ರಲ್ಲಿ 192 ವಿಶಾಲವಾದ ಹಾಲ್ ಗಳನ್ನು ನಿರ್ಮಿಸಲಾಗಿದ್ದು ಒಟ್ಟು 14,000 ಸಾಯಿ ಭಕ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆಯಿರುತ್ತದೆ. ಈ ವಸತಿ ಸಮುಚ್ಚಯಗಳನ್ನು 9.60 ಲಕ್ಷ ಚದರ ಅಡಿಯಷ್ಟು ವಿಶಾಲವಾದ ಭೂಪ್ರದೇಶದಲ್ಲಿ ಸುಮಾರು 110 ಕೋಟಿ ರೂಪಾಯಿಗಳನ್ನು ವಿನಿಯೋಗಿಸಿ ನಿರ್ಮಾಣ ಮಾಡಲಾಗಿದೆ.  

ಈ ಸಾಯಿ ಆಶ್ರಮ ಯೋಜನೆಗೆ ತಗುಲಿರುವ ಸಂಪೂರ್ಣ ನಿರ್ಮಾಣ ವೆಚ್ಚವನ್ನು ಯಾವುದೇ ವ್ಯಕ್ತಿ ಅಥವಾ ಸಂಘ-ಸಂಸ್ಥೆಗಳಿಂದ ದೇಣಿಗೆಯನ್ನು ಸ್ವೀಕರಿಸದೇ ಚನ್ನೈನ ಶಿರಡಿ ಸಾಯಿ ಟ್ರಸ್ಟ್ ಸ್ವತಃ ಭರಿಸಿರುತ್ತದೆ.

ಈ ವಸತಿ ಯೋಜನೆಯಲ್ಲಿ 12 ಗುತ್ತಿಗೆದಾರರು ಕಾರ್ಯ ನಿರ್ವಹಿಸಿರುತ್ತಾರೆ.  18 ತಿಂಗಳುಗಳಲ್ಲಿ ಪೂರ್ಣಗೊಳಿಸಬೇಕೆಂದುಕೊಂಡಿದ್ದ ಈ ಯೋಜನೆಯು ನಿರ್ಮಾಣ ಉದ್ಯಮದಲ್ಲಿನ ಆರ್ಥಿಕ ಹಿಂಜರಿತ, ಉಕ್ಕು, ಸಿಮೆಂಟ್ , ಮರಳು, ಇಟ್ಟಿಗೆ,ನುರಿತ ಕಾರ್ಮಿಕರ ಕೊರತೆ, ಯೋಜನೆಯ ಗಾತ್ರ 6 ಲಕ್ಷ ಚದರ ಅಡಿಯಿಂದ 9.60 ಲಕ್ಷ ಚದರ ಅಡಿಗಳಿಗೆ ಹೆಚ್ಚಾದದ್ದು ಮತ್ತು ಯೋಜನೆಯ ಮೊತ್ತ 25 ಕೋಟಿ ರೂಪಾಯಿಗಳಿಂದ 110 ಕೋಟಿ ರೂಪಾಯಿಗಳಿಗೆ ಹೆಚ್ಚಾದ ಕಾರಣಗಳಿಂದ ತಡವಾಗಿ ಪೂರ್ಣಗೊಂಡಿತು.  ಶಿರಡಿ ಸಾಯಿ ಟ್ರಸ್ಟ್ ಯೋಜನೆ ಮೊತ್ತವನ್ನು ಕಡಿತಗೊಳಿಸದೇ ನಿರ್ಮಾಣದಲ್ಲಿ ಉತ್ತಮ ಗುಣಮಟ್ಟದ ನಿರ್ಮಾಣ ಸಾಮಗ್ರಿಗಳನ್ನು ಬಳಸಿ ಎರಡೂ ವಸತಿ ಸಮುಚ್ಚಯಗಳನ್ನು ಉತ್ತಮವಾಗಿ ನಿರ್ಮಾಣ ಮಾಡಿರುತ್ತದೆ ಎಂದು ಶ್ರೀ.ಕೆ.ವಿ.ರಮಣಿಯವರು ತಿಳಿಸಿದರು.

ಶಿರಡಿ ಸಾಯಿಬಾಬಾ ಸಂಸ್ಥಾನವು ಬಾಹ್ಯ ಸೇವೆಗಳಾದ ಉತ್ತಮ ರಸ್ತೆ, ಪಾದಚಾರಿ ಮಾರ್ಗ, ವಿದ್ಯುತ್, ಬೀದಿ ದೀಪ ಹಾಗೂ ನೀರಿನ ವ್ಯವಸ್ಥೆಗಳನ್ನು 45 ಕೋಟಿ ರೂಪಾಯಿಗಳನ್ನು ವಿನಿಯೋಗಿಸಿ ಮಾಡಿರುತ್ತದೆ.

ಸಾಯಿ ಆಶ್ರಮ - 1 ರಲ್ಲಿ 1536 ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದ್ದು ಸುಮಾರು 9000 ಭಕ್ತರು ಉಳಿದುಕೊಳ್ಳಲು ವ್ಯವಸ್ಥೆಯಿರುತ್ತದೆ. ಒಂದು ಸಾಮಾನ್ಯ ಸೇವಾ ಬ್ಲಾಕ್ ಅನ್ನು ನಿರ್ಮಿಸಲಾಗಿದ್ದು ಅಲ್ಲಿ ಭಕ್ತರಿಗೆ ರೆಸ್ಟೋರೆಂಟ್ ನಿರ್ಮಾಣ ಮಾಡಲಾಗಿದೆ. ಅಲ್ಲದೆ, ಒಂದು ಓಪನ್ ಏರ್ ಥಿಯೇಟರ್ ಅನ್ನು ಕೂಡ ನಿರ್ಮಾಣ ಮಾಡಲಾಗಿದ್ದು ಇಲ್ಲಿ ಸುಮಾರು 2000 ಸಾಯಿ ಭಕ್ತರು ಒಂದೆಡೆ ಕುಳಿತು ಸಾಯಿ ಭಜನೆ, ಕೀರ್ತನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಗಳು ಇಲ್ಲದ ಸಮಯದಲ್ಲಿ ಈ ಸ್ಥಳದಲ್ಲಿ ಸಾಯಿಬಾಬಾ ಪಲ್ಲಕ್ಕಿ ಯಾತ್ರಿಗಳು ಮತ್ತು ಪಾದಯಾತ್ರಿಗಳು ಉಳಿದುಕೊಳ್ಳಲು ಅವಕಾಶ ನೀಡಲಾಗುತ್ತದೆ.

ಸಾಯಿ ಅಶ್ರಮ - 2 ರಲ್ಲಿ 192 ವಿಶಾಲವಾದ ಹಾಲ್ ಗಳನ್ನು ನಿರ್ಮಿಸಲಾಗಿದ್ದು ಸುಮಾರು 5000 ಸಾಯಿ ಭಕ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆಯಿರುತ್ತದೆ. ಅಲ್ಲದೇ, ಒಂದು ಸಾಮಾನ್ಯ ಸೇವಾ ಬ್ಲಾಕ್ ಅನ್ನು ನಿರ್ಮಿಸಲಾಗಿದ್ದು ಅಲ್ಲಿ ಭಕ್ತರಿಗೆ ರೆಸ್ಟೋರೆಂಟ್ ನಿರ್ಮಾಣ ಮಾಡಲಾಗಿದೆ.

ಸಾಯಿ ಆಶ್ರಮ - 1 ಮತ್ತು 2 ರ ಖಾಲಿ ಸ್ಥಳದಲ್ಲಿ ವಿವಿಧ ಬಗೆಯ 1,350 ಮರಗಳು, 50,000 ಗಿಡಗಳು ಮತ್ತು 27,000 ಚದರ ಅಡಿಯಲ್ಲಿ ವಿಶಾಲವಾದ ಹುಲ್ಲುಗಾವಲನ್ನು ನಿರ್ಮಿಸಲಾಗಿದ್ದು ಭಕ್ತರಿಗೆ ಉಳಿದುಕೊಳ್ಳಲು ಒಳ್ಳೆಯ ವಾತಾವರಣವನ್ನು ನಿರ್ಮಿಸಲಾಗಿದೆ.

ಸಾಯಿ ಆಶ್ರಮ - 1 ರ ಮೂರು ಬ್ಲಾಕ್ ಗಳಲ್ಲಿ ನಿರ್ಮಾಣ ಮಾಡಲಾಗಿರುವ 384 ಕೊಠಡಿಗಳು ಸಂಪೂರ್ಣ ಹವಾನಿಯಂತ್ರಿತವಾಗಿರುತ್ತವೆ.  ಸಾವಿರಾರು ದ್ವಿಚಕ್ರ ವಾಹನಗಳು, ಕಾರ್ ಗಳು ಹಾಗೂ ಬಸ್ ಗಳನ್ನು ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ನೈಸರ್ಗಿಕ ಸಮತೋಲವನ್ನು ಕಾಯ್ದುಕೊಳ್ಳುವ ಸಲುವಾಗಿ ಎರಡು ಬೃಹತ್ ಸೆಪ್ಟಿಕ್ ಟ್ಯಾಂಕ್ ಗಳನ್ನು ನಿರ್ಮಿಸಲಾಗಿದ್ದು ಶುದ್ಧೀಕರಣಗೊಳಿಸಿದ ನೀರನ್ನು ಶೌಚಾಲಯ ಹಾಗೂ ಇನ್ನಿತರ ಕಾರ್ಯಗಳಿಗೆ ಬಳಸಲಾಗುವಂತೆ ವ್ಯವಸ್ಥೆ ಮಾಡಲಾಗಿದೆ. ವಸತಿ ಸಮುಚ್ಚಯದ ಎಲ್ಲಾ ಕೊಠಡಿಗಳಲ್ಲಿ ಸೌರಶಕ್ತಿ ಚಾಲಿತ ನೀರಿನ ಹೀಟರ್ ಗಳನ್ನು ಇರಿಸಲಾಗಿದೆ.

ಶ್ರೀ ಸಾಯಿಬಾಬಾ ಸಂಸ್ಥಾನವು ಈ ಎರಡೂ ವಸತಿ ಸಮುಚ್ಚಯಗಳ ಮೇಲ್ವಿಚಾರಣೆಯನ್ನು ಹಾಗೂ ಭದ್ರತಾ ವ್ಯವಸ್ಥೆಯನ್ನು ನೋಡಿಕೊಳ್ಳಲು ಸಿಬ್ಬಂದಿಗಳನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಿದ್ದು ಅತಿ ಶೀಘ್ರದಲ್ಲಿಯೇ ಈ ವಸತಿ ಸಮುಚ್ಚಯಗಳನ್ನು ಲೋಕಾರ್ಪಣೆ ಮಾಡಲಿದೆ.

ಈ ವಸತಿ ಸಮುಚ್ಚಯಗಳನ್ನು ಪ್ರಾರಂಭಿಸಿದ ನಂತರ ಸಾಯಿ ಭಕ್ತರು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಾಲಯದಲ್ಲಿ ಇಲ್ಲಿನ ಕೊಠಡಿಗಳನ್ನು ಕಾದಿರಿಸಬಹುದಾಗಿದೆ. ಅಲ್ಲದೆ, ಮುಂಬೈ, ಚನ್ನೈ, ಸಿಕಂದರಾಬಾದ್ ಮತ್ತು ಬೆಂಗಳೂರಿನಲ್ಲಿರುವ ಸಂಸ್ಥಾನದ ಮಾಹಿತಿ ಕೇಂದ್ರಗಳ ಮುಖಾಂತರ ಹಾಗೂ ಸಂಸ್ಥಾನದ ಅಂತರ್ಜಾಲ ತಾಣದ ಮೂಲಕ ಆನ್ ಲೈನ್ ಮುಖಾಂತರ ಕೂಡ ಇಲ್ಲಿನ ಕೊಠಡಿಗಳನ್ನು ಕಾದಿರಿಸಬಹುದಾಗಿದೆ.

ಶಿರಡಿ ಸಾಯಿ ಟ್ರಸ್ಟ್, ಚನ್ನೈ ಈ ವಸತಿ ಸಮುಚ್ಚಯಗಳ ನಿರ್ಮಾಣ ಕಾರ್ಯವನ್ನು ಸಂಪೂರ್ಣಗೊಳಿಸಿ ಶಿರಡಿ ಸಾಯಿಬಾಬಾರವರ ಪಾದಗಳಿಗೆ ಸಮರ್ಪಣೆಯನ್ನಾಗಿ ನೀಡಿರುತ್ತದೆ. ಶಿರಡಿ ಸಾಯಿ ಟ್ರಸ್ಟ್, ತಾನು ಯಾವುದೇ ಅಧಿಕಾರವನ್ನು  ಇಟ್ಟುಕೊಳ್ಳದೇ ಈ ಎರಡೂ ವಸತಿ ಸಮುಚ್ಚಯಗಳ ಎಲ್ಲಾ ಜಾಗವನ್ನು ಹಾಗೂ ಎಲ್ಲಾ ಸಂಬಂಧಪಟ್ಟ ದಾಖಲೆಗಳನ್ನು ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ಹಸ್ತಾಂತರ ಮಾಡಿರುತ್ತದೆ. ಕೇವಲ ಸೇವಾ ಮನೋಭಾವದಿಂದ ಈ ಕಾರ್ಯವನ್ನು ಶಿರಡಿ ಸಾಯಿ ಟ್ರಸ್ಟ್ ಮಾಡಿರುತ್ತದೆ.

ಶಿರಡಿ ಸಾಯಿ ಟ್ರಸ್ಟ್ ನ ಈ ಉತ್ತಮ ಕಾರ್ಯದಿಂದ ಪ್ರಪಂಚದ ಎಲ್ಲಾ ಮೂಲೆಗಳಿಂದ ಪ್ರತಿನಿತ್ಯ ಸಾಯಿಬಾಬಾರವರ ದರ್ಶನಕ್ಕೆಂದು ಶಿರಡಿಗೆ ಹರಿದು ಬರುತ್ತಿರುವ ಸಾಯಿಭಕ್ತ ಸಾಗರಕ್ಕೆ ಅತ್ಯಂತ ಕಡಿಮೆ ದರದಲ್ಲಿ ವಸತಿಯನ್ನು ಒದಗಿಸುವ  ಶಿರಡಿ ಸಾಯಿಬಾಬಾ ಸಂಸ್ಥಾನದ ಬಹುದಿನಗಳ ಕನಸು ನನಸಾಗುತ್ತಿದೆ.

ಶಿರಡಿ ಸಾಯಿಬಾಬಾರವರಿಗೆ, ಸಾಯಿಬಾಬಾ ಸಂಸ್ಥಾನಕ್ಕೆ ಹಾಗೂ ಸಾಯಿ ಭಕ್ತರಿಗೆ ಸೇವೆಯನ್ನು ಸಲ್ಲಿಸುವ ಈ ಜೀವಮಾನದ ಅವಕಾಶವನ್ನು ನೀಡಿದ್ದಕ್ಕಾಗಿ ಶಿರಡಿ ಸಾಯಿ ಟ್ರಸ್ಟ್, ಚನ್ನೈ ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ತನ್ನ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

Tuesday, October 23, 2012

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಶ್ರೀ ಸಾಯಿಬಾಬಾರವರ 94ನೇ ಪುಣ್ಯತಿಥಿಯ ಆಚರಣೆಯ ಒಂದು ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾರವರ 94ನೇ ಪುಣ್ಯತಿಥಿಯ ಅಂಗವಾಗಿ 23ನೇ ಅಕ್ಟೋಬರ್ 2012, ಮಂಗಳವಾರದಂದು ನಡೆದ ಮೊದಲ ದಿನದ ಕಾರ್ಯಕ್ರಮದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆಯವರು ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಮೊದಲನೇ ಅಧ್ಯಾಯವನ್ನು ಪಾರಾಯಣ ಮಾಡುವ ಮೂಲಕ ಅಖಂಡ ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣವನ್ನು ಉದ್ಘಾಟಿಸಿದರು. 



ಶ್ರೀ ಸಾಯಿಬಾಬಾರವರ 94ನೇ ಪುಣ್ಯತಿಥಿಯ ಅಂಗವಾಗಿ 23ನೇ ಅಕ್ಟೋಬರ್ 2012, ಮಂಗಳವಾರದಂದು ನಡೆದ ಮೊದಲ ದಿನದ ಕಾರ್ಯಕ್ರಮದಲ್ಲಿ ಶ್ರೀ ಸಾಯಿಬಾಬಾರವರ ವಿಗ್ರಹ, ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆ ಹಾಗೂ ವೀಣೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಈ ಮೆರವಣಿಗೆಯಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆ, ಉಪ ಕಾರ್ಯಕಾರಿ ಅಧಿಕಾರಿಗಳಾದ ಡಾ.ಯಶವಂತರಾವ್ ಮಾನೆ ಹಾಗೂ ದೇವಾಲಯದ ಮೇಲ್ವಿಚಾರಕರಾದ ಶ್ರೀ.ರಾಮರಾವ್ ಶೆಲ್ಕೆಯವರು ಭಾಗವಹಿಸಿದ್ದರು.  



ಕನ್ನಡ ಅನುವಾದ:ಶ್ರೀಕಂಠ ಶರ್ಮ  

Sunday, October 14, 2012

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಸಾಯಿ ಧಾಮ, ಶ್ರೀ ಶಿರಡಿ ಸಾಯಿಬಾಬಾ ಸಮರ್ಪಣ ಸಮಿತಿ (ನೋಂದಣಿ), ತಾವರೆಕೆರೆ - ನೆಲಮಂಗಲ ಮುಖ್ಯರಸ್ತೆ, ದಾಸನಪುರ ಹೋಬಳಿ, ಸೊಂಡೇಕೊಪ್ಪ, ಬೆಂಗಳೂರು ಉತ್ತರ ತಾಲ್ಲೂಕು - 562 130, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕರ್ನಾಟಕ, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರು ಉತ್ತರ ತಾಲ್ಲೂಕಿನ ತಾವರೆಕೆರೆ - ನೆಲಮಂಗಲ ಮುಖ್ಯರಸ್ತೆಯಲ್ಲಿರುವ ಸೊಂಡೇಕೊಪ್ಪದಲ್ಲಿ ಇರುತ್ತದೆ.  ದೇವಾಲಯವು ಶ್ರೀ ಚೆನ್ನಕೇಶವ ದೇವಾಲಯದ ಎದುರುಗಡೆಯ ರಸ್ತೆಯಲ್ಲಿದ್ದು ಸೊಂಡೇಕೊಪ್ಪ ಬಸ್ ನಿಲ್ದಾಣದಿಂದ 0.5 ಕಿಲೋಮೀಟರ್ , ತಾವರೆಕೆರೆ ಗ್ರಾಮದಿಂದ 7 ಕಿಲೋಮೀಟರ್ ಹಾಗೂ ನೆಲಮಂಗಲ ಗ್ರಾಮದಿಂದ 9  ಕಿಲೋಮೀಟರ್ ಗಳ ಅಂತರದಲ್ಲಿ ಇರುತ್ತದೆ.

ದೇವಾಲಯವನ್ನು ಸ್ಥಳೀಯ ಗ್ರಾಮಸ್ಥರಾದ ಶ್ರೀ.ಬೆಟ್ಟಯ್ಯನವರು ದಾನವಾಗಿ ನೀಡಿರುವ 17 ಗುಂಟೆ ವಿಶಾಲವಾದ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿದೆ.

ದೇವಾಲಯದ ಭೂಮಿಪೂಜೆಯನ್ನು 27ನೇ ಜುಲೈ 2009 ರಂದು ನೆರವೇರಿಸಲಾಗಿರುತ್ತದೆ.

ದೇವಾಲಯದ ಉದ್ಘಾಟನೆಯನ್ನು 29ನೇ ಫೆಬ್ರವರಿ 2012 ರಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಪುರೋಹಿತರಾದ ಶ್ರೀ.ಮುಕುಂದ ಕಫ್ರೆಯವರು ಟ್ರಸ್ಟ್ ನ ಸದಸ್ಯರು ಹಾಗೂ ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ಶ್ರೀ.ರವೀಂದ್ರ ಮುಸುಡಿರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ದೇವಾಲಯದ ಟ್ರಸ್ಟ್ ನ ಆಡಳಿತ ಮಂಡಳಿಯವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದ ಗರ್ಭಗುಡಿಯಲ್ಲಿ 6 ಅಡಿ ಎತ್ತರದ ಸುಂದರ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ವಿಗ್ರಹದ ಮುಂಭಾಗದಲ್ಲಿ ಅಮೃತಶಿಲೆಯ ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿದೆ.

ದೇವಾಲಯದ ಬಲಭಾಗದಲ್ಲಿ ಅಭಿಷೇಕ ಮಂದಿರವನ್ನು ಸ್ಥಾಪಿಸಲಾಗಿದ್ದು ಇಲ್ಲಿ ಪುಟ್ಟದಾದ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಅಮೃತಶಿಲೆಯ ವೇದಿಕೆಯ ಮೇಲೆ ಪ್ರತಿಷ್ಟಾಪಿಸಲಾಗಿದೆ. ದೇವಾಲಯಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಸಾಯಿ ಭಕ್ತರಿಗೂ ಈ ಅಮೃತ ಶಿಲೆಯ ವಿಗ್ರಹಕ್ಕೆ "ಜಲಾಭಿಷೇಕ" ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ.

ದೇವಾಲಯದ ಹಿಂಭಾಗದಲ್ಲಿರುವ ಸ್ಥಳದಲ್ಲಿ ಗುರುಸ್ಥಾನವಿದ್ದು ಇಲ್ಲಿ ಪವಿತ್ರ ಬೇವಿನ ಮರದ ಕೆಳಗಡೆ ಆಳೆತ್ತರದ "ಕಲ್ಲಿನ ಮೇಲೆ ಕುಳಿತಿರುವ ಸಾಯಿಬಾಬಾ" ರವರ ಭಾವಚಿತ್ರವನ್ನು ಇರಿಸಲಾಗಿದೆ.

ದೇವಾಲಯದ ಎಡಭಾಗದಲ್ಲಿ ದ್ವಾರಕಾಮಾಯಿಯನ್ನು ನಿರ್ಮಿಸಲಾಗಿದ್ದು ಇಲ್ಲಿ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ. ಅಲ್ಲದೇ, ದ್ವಾರಕಾಮಾಯಿ ಸಾಯಿಬಾಬಾರವರ ಆಳೆತ್ತರದ ಭಾವಚಿತ್ರ, ಅಮೃತಶಿಲೆಯ ದ್ವಾರಕಾಮಾಯಿ ಸಾಯಿಬಾಬಾರವರ ವಿಗ್ರಹ, ಅಮೃತಶಿಲೆಯ ಪಾದುಕೆಗಳು, ನಂದಾದೀಪ ಹಾಗೂ ಬೀಸುವ ಕಲ್ಲು ಗಳನ್ನು ಸಾಯಿ ಭಕ್ತರು ನೋಡಬಹುದಾಗಿದೆ.

ದ್ವಾರಕಾಮಾಯಿಯ ಎದುರುಗಡೆ "ಕಲ್ಲಿನ ಮೇಲೆ ಕುಳಿತಿರುವ ಸಾಯಿಬಾಬಾ" ರವರ ಆಳೆತ್ತರದ ಭಾವಚಿತ್ರವನ್ನು ಶಿರಡಿಯ ದ್ವಾರಕಾಮಾಯಿಯಲ್ಲಿ ಇರುವಂತೆ ಕಲ್ಲಿನ ಮೇಲೆ ಇರಿಸಲಾಗಿದೆ.

ದೇವಾಲಯದ ಆವರಣದಲ್ಲಿ ಧ್ಯಾನಮಂದಿರವಿದ್ದು ಇಲ್ಲಿ "ಸಾಯಿಬಾಬಾರವರ ಜೀವನವನ್ನು ಚಿತ್ರಿಸುವ ಗೊಂಬೆ" ಗಳು, ಅಮೃತಶಿಲೆಯ ಶ್ರೀರಾಮ ಪರಿವಾರ ವಿಗ್ರಹಗಳು ಮತ್ತು ಆಂಜನೇಯನ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಈ ಸ್ಥಳವನ್ನು ಸಾಯಿ ಭಕ್ತರು ಧ್ಯಾನ ಮಾಡಲು ಹಾಗೂ ಉಚಿತ ಸಂಸ್ಕೃತ ತರಗತಿಗಳನ್ನು ನಡೆಸಲು ಬಳಸಲಾಗುತ್ತಿದೆ.





















ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ        : 6:00 ರಿಂದ 1:00 ರವರೆಗೆ.
ಸಂಜೆ        : 5:30 ರಿಂದ ರಾತ್ರಿ 8:30 ರವರೆಗೆ.

ಗುರುವಾರ ಮತ್ತು ಭಾನುವಾರಗಳಂದು ಬೆಳಿಗ್ಗೆ 6:00 ರಿಂದ ರಾತ್ರಿ 8:30 ರವರೆಗೆ.


ಆರತಿಯ ಸಮಯ:

ಕಾಕಡಾ ಆರತಿ  : 6:30 ಗಂಟೆ.
ಛೋಟಾ ಆರತಿ : 8:30 ಗಂಟೆ.
ಮಧ್ಯಾನ್ಹ ಆರತಿ: 12:00 ಗಂಟೆ.
ಧೂಪಾರತಿ      : 6:00 ಗಂಟೆ.
ಶೇಜಾರತಿ       : 8:00 ಗಂಟೆ.

ಪ್ರತಿದಿನ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಕ್ಷೀರಾಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 51/- ರೂಪಾಯಿಗಳು.

ಪ್ರತಿದಿನ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 101/- ರೂಪಾಯಿಗಳು.

ದೇವಾಲಯದಲ್ಲಿ ಶಾಶ್ವತ ಪೂಜೆಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೇವಾ ಶುಲ್ಕ 10000/- ರೂಪಾಯಿಗಳು.

ದೇವಾಲಯದಲ್ಲಿ ಒಂದು ದಿನದ ಅನ್ನದಾನ ಸೇವೆಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೇವಾ ಶುಲ್ಕ 1008/- ರೂಪಾಯಿಗಳು.

ದೇವಾಲಯದಲ್ಲಿ ಪ್ರಸಾದ ಸೇವೆಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೇವಾ ಶುಲ್ಕ 201/- ರೂಪಾಯಿಗಳು.

ದೇವಾಲಯದಲ್ಲಿ ವಸ್ತ್ರದಾನ ಸೇವೆಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೇವಾ ಶುಲ್ಕ 51/- ರೂಪಾಯಿಗಳು.

ದೇವಾಲಯದಲ್ಲಿ ಪ್ರತಿ ತಿಂಗಳ ಹುಣ್ಣಿಮೆಯಂದು ಮಧ್ಯಾನ್ಹ 2:30 ರಿಂದ ಸಂಜೆ 5:00 ಗಂಟೆಯವರೆಗೆ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಸೇವಾ ಶುಲ್ಕ 51/- ರೂಪಾಯಿಗಳು.


ವಿಶೇಷ ಉತ್ಸವದ ದಿನಗಳು:

ಶ್ರೀರಾಮನವಮಿ.
ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷ 30ನೇ ಜನವರಿ.
ಗುರುಪೂರ್ಣಿಮೆ.
ವಿಜಯದಶಮಿ.

ದೇವಾಲಯದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಚಟುವಟಿಕೆಗಳು: 

ದೇವಾಲಯಕ್ಕೆ ಬರುವ ಎಲ್ಲಾ ಸಾಯಿ ಭಕ್ತರಿಗೂ ಪ್ರತಿದಿನ ಅನ್ನದಾನವನ್ನು ಮಾಡಲಾಗುತ್ತಿದೆ.
ಪ್ರತಿವರ್ಷ ಎರಡು ಬಾರಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ.
ದೇವಾಲಯದ ಆವರಣದಲ್ಲಿ ಉಚಿತ ಸಂಸ್ಕೃತ ತರಗತಿಯನ್ನು ನಡೆಸಲಾಗುತ್ತಿದೆ.
ಮಧುಮೇಹ ರೋಗಿಗಳಿಗಾಗಿ ಉಚಿತ ತಪಾಸಣ ಶಿಬಿರವನ್ನು ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.
ದೇವಾಲಯದ ಟ್ರಸ್ಟ್ ನ ವತಿಯಿಂದ ಅನೇಕ ವೃದ್ಧಾಶ್ರಮಗಳಿಗೆ ಧನಸಹಾಯವನ್ನು ಮಾಡಲಾಗುತ್ತಿದೆ.
ದೇವಾಲಯದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.


ದೇಣಿಗೆಗೆ ಮನವಿ:
ದೇವಾಲಯದ ಟ್ರಸ್ಟ್ ನ ವತಿಯಿಂದ ಮಾಡಲಾಗುತ್ತಿರುವ ನಿತ್ಯ ಅನ್ನದಾನಕ್ಕೆ ಹಾಗೂ ದೇವಾಲಯದ ಇತರ ಅಭಿವೃದ್ಧಿ ಕಾರ್ಯಗಳಿಗೆ ದೇಣಿಗೆಯನ್ನು ನೀಡಲು ಇಚ್ಚಿಸುವ ಸಾಯಿ ಭಕ್ತರು "ಶ್ರೀ ಶಿರಡಿ ಸಾಯಿಬಾಬಾ ಸಮರ್ಪಣ ಸಮಿತಿ (ನೋಂದಣಿ), ಸೊಂಡೇಕೊಪ್ಪ" ಐ.ಎನ್.ಜಿ ವೈಶ್ಯ ಬ್ಯಾಂಕ್, ಸೊಂಡೇಕೊಪ್ಪ ಖಾತೆ ಸಂಖ್ಯೆ:186010036027 ಗೆ ಸಂದಾಯವಾಗುವಂತೆ ದೇಣಿಗೆಯನ್ನು ನೀಡಬಹುದಾಗಿದೆ.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ಚೆನ್ನಕೇಶವ ದೇವಾಲಯದ ಎದುರು ರಸ್ತೆ, ತಾವರೆಕೆರೆ - ನೆಲಮಂಗಲ ಮುಖ್ಯರಸ್ತೆ, ಸೊಂಡೇಕೊಪ್ಪ.

ವಿಳಾಸ:
ಸಾಯಿ ಧಾಮ
ಶ್ರೀ ಶಿರಡಿ ಸಾಯಿಬಾಬಾ ಸಮರ್ಪಣ ಸಮಿತಿ (ನೋಂದಣಿ),
ತಾವರೆಕೆರೆ - ನೆಲಮಂಗಲ ಮುಖ್ಯರಸ್ತೆ, ದಾಸನಪುರ ಹೋಬಳಿ,
ಸೊಂಡೇಕೊಪ್ಪ, ಬೆಂಗಳೂರು ಉತ್ತರ ತಾಲ್ಲೂಕು - 562 130,
ಬೆಂಗಳೂರು ಗ್ರಾಮಾಂತರ ಜಿಲ್ಲೆ,
ಕರ್ನಾಟಕ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಬೆಟ್ಟಯ್ಯ/ ಶ್ರೀ.ಕೆ.ವಿ.ನಾಗೇಂದ್ರ / ಶ್ರೀ.ಕೆ.ನಾರಾಯಣ ಮೂರ್ತಿ / ಡಾ.ಎಸ್.ಬಿ.ಹರೀಶ್ / ಶ್ರೀ.ದಾಮು ಬಿ.ಪುರುಷೋತ್ತಮ್ / ಶ್ರೀ.ಬಿ.ಚಂದ್ರಶೇಖರ್ / ಶ್ರೀ.ಎಸ್.ಶಂಕರನಾರಾಯಣ. 

ದೂರವಾಣಿ ಸಂಖ್ಯೆಗಳು:
+91 94490 18243 / +91 98458 21313 / +91 96326 93828 / +91 99020 02145 / +91 93412 75056 / +91 80 2660 8243 ಮತ್ತು +91 80 2676 2516 – ಸ್ಥಿರ ದೂರವಾಣಿ.

ಇ-ಮೈಲ್ ವಿಳಾಸ:
hareeshdoc@gmail.com / nagkv99@gmail.com

ಮಾರ್ಗಸೂಚಿ: 
ಸೊಂಡೇಕೊಪ್ಪ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಚೆನ್ನಕೇಶವ ದೇವಾಲಯದ ಎದುರುಗಡೆ ರಸ್ತೆಯಲ್ಲಿ ಇರುತ್ತದೆ.  ದೇವಾಲಯವು ಸೊಂಡೇಕೊಪ್ಪ ಬಸ್ ನಿಲ್ದಾಣದಿಂದ ಅರ್ಧ ಕಿಲೋಮೀಟರ್, ತಾವರೆಕೆರೆಯಿಂದ 7  ಕಿಲೋಮೀಟರ್ ಹಾಗೂ ನೆಲಮಂಗಲದಿಂದ 9 ಕಿಲೋಮೀಟರ್ ಗಳ ಅಂತರದಲ್ಲಿ ಇರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ