Saturday, December 28, 2013

ಶ್ರೀ ಸರ್ವಧರ್ಮ ಪ್ರಿಯ ಸಾಯಿ ದ್ವಾರಕಾಮಾಯಿ ಮಂದಿರ, ಬೆಂಗಳೂರು ವತಿಯಿಂದ ಜೀರ್ಣೋದ್ಧಾರ ಮಾಡಲ್ಪಟ್ಟ "ಪ್ರೇಮ ದ್ವಾರ" ಸಾಯಿ ಮಂದಿರದ ಉದ್ಘಾಟನೆ ಕಾರ್ಯಕ್ರಮ - ಕೃಪೆ: ಸಾಯಿಅಮೃತಧಾರಾ.ಕಾಂ


ಶ್ರೀ ಸರ್ವಧರ್ಮ ಪ್ರಿಯ ಸಾಯಿ ದ್ವಾರಕಾಮಾಯಿ ಮಂದಿರ, ಬೆಂಗಳೂರು ನೂತನವಾಗಿ ಜೀರ್ಣೋದ್ಧಾರ ಮಾಡಲ್ಪಟ್ಟ "ಪ್ರೇಮ ದ್ವಾರ"  ಸಾಯಿ ಮಂದಿರದ ಉದ್ಘಾಟನೆ ಕಾರ್ಯಕ್ರಮವನ್ನು ಮುಂದಿನ ತಿಂಗಳ 11ನೇ ಜನವರಿ 2014, ಶನಿವಾರದಂದು ಬೆಳಿಗ್ಗೆ 5:30ಕ್ಕೆ ಹಮ್ಮಿಕೊಂಡಿದೆ. 

ದೇವಾಲಯದ ವಿಳಾಸ ಈ ಕೆಳಕಂಡಂತೆ ಇದೆ: 

ಶ್ರೀ  ಸರ್ವಧರ್ಮಪ್ರಿಯ ಸಾಯಿ ದ್ವಾರಕಾಮಾಯಿ ಮಂದಿರ
ನಂ.4 ಮತ್ತು 5, ಸಾಯಿ ಮಂದಿರ ರಸ್ತೆ, 
ಕಾವೇರಿ ಬಡಾವಣೆ, ಹೆಚ್.ಎ.ಫಾರ್ಮ್ ಪೋಸ್ಟ್, 
ಬೆಂಗಳೂರು-24. 

ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾರಂಭದಲ್ಲಿ ಭಾಗವಹಿಸಿ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಟ್ರಸ್ಟ್ ನ ಆಡಳಿತ ಮಂಡಳಿಯ ಸದಸ್ಯರುಗಳು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, December 26, 2013

ಚಿಕ್ಕಬಳ್ಳಾಪುರದ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಸಿದ್ಧಿವಿನಾಯಕ ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಶ್ರೀ ಸಿದ್ಧಿವಿನಾಯಕ ದೇವಾಲಯ ಟ್ರಸ್ಟ್ (ನೋಂದಣಿ), ಮುನಿಸಿಪಲ್ ಲೇಔಟ್, 6ನೇ ವಾರ್ಡ್, ಎಂ.ಜಿ.ರಸ್ತೆ, ಚಿಕ್ಕಬಳ್ಳಾಪುರ-562 101, ಕರ್ನಾಟಕ, ಭಾರತ-ಕೃಪೆ: ಸಾಯಿಅಮೃತಧಾರಾ.ಕಾಂ


ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಪಟ್ಟಣದ ಎಂ.ಜಿ.ರಸ್ತೆಯ ಮುನಿಸಿಪಲ್ ಲೇಔಟ್ ನಲ್ಲಿರುವ ಮಕ್ಕಳ ಉದ್ಯಾನವನದ ಪಕ್ಕದಲ್ಲಿ ಇರುತ್ತದೆ. ಈ ದೇವಾಲಯವನ್ನು ಚಿಕ್ಕಬಳ್ಳಾಪುರ ನಗರಸಭೆಯವರು ದೇವಾಲಯದ ಟ್ರಸ್ಟ್ ಗೆ ನೀಡಿರುವ 60x100 ಚದರ ಅಡಿ ಸ್ಥಳದಲ್ಲಿ ನಿರ್ಮಿಸಲಾಗಿದೆ. 

ಸಿದ್ಧಿವಿನಾಯಕ ದೇವಾಲಯದ ಭೂಮಿ ಪೂಜೆಯನ್ನು 14ನೇ ಅಕ್ಟೋಬರ್ 2000 ದಂದು ನೆರವೇರಿಸಲಾಯಿತು. 

ಮೊದಲಿಗೆ ಸಿದ್ಧಿವಿನಾಯಕ ದೇವಾಲಯದ ಉದ್ಘಾಟನೆಯನ್ನು 28ನೇ ಫೆಬ್ರವರಿ 2003 ರಂದು ನೆರವೇರಿಸಲಾಯಿತು.ಸಿದ್ಧಿವಿನಾಯಕ ದೇವಾಲಯದ ಗರ್ಭಗುಡಿಯಲ್ಲಿ ಸುಮಾರು 3 ಅಡಿ ಎತ್ತರದ ಕಪ್ಪು ಶಿಲೆಯ ಸಿದ್ಧಿವಿನಾಯಕನ ವಿಗ್ರಹವನ್ನು ಸ್ಥಾಪಿಸಲಾಯಿತು ಹಾಗೂ ದಿನನಿತ್ಯದ ಪೂಜಾ ಕೈಂಕರ್ಯಗಳನ್ನು ಪ್ರಾರಂಭ ಮಾಡಲಾಗುತ್ತಿತ್ತು. ಸಿದ್ಧಿವಿನಾಯಕ ದೇವಾಲಯದ ಗರ್ಭಗುಡಿಯ ಹೊರಭಾಗದಲ್ಲಿ ಸುಮಾರು 2-1/2 ಅಡಿ ಎತ್ತರದ ಪಂಚಲೋಹದ ಗಣೇಶನ ವಿಗ್ರಹವನ್ನು ಇರಿಸಲಾಗಿದ್ದು ಈ ವಿಗ್ರಹವನ್ನು ಸಂಕಷ್ಟ ಚತುರ್ಥಿಯಂದು ಹಾಗೂ ವಿಶೇಷ ಉತ್ಸವದ ದಿನಗಳಂದು ಪೂಜೆಗೆ ಬಳಸಲಾಗುತ್ತದೆ.

ಶಿರಡಿ ಸಾಯಿಬಾಬಾ ದೇವಾಲಯದ ಉದ್ಘಾಟನೆಯನ್ನು 28ನೇ ನವೆಂಬರ್ 2013 ರಂದು ಟ್ರಸ್ಟ್ ನ ಸದಸ್ಯರುಗಳು ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ. 
ದೇವಾಲಯದ ಟ್ರಸ್ಟ್ ನ ಆಡಳಿತ ಮಂಡಳಿಯ ಸದಸ್ಯರುಗಳು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ಸಿದ್ಧಿ ವಿನಾಯಕ ದೇವಾಲಯದ ಗರ್ಭಗುಡಿಯ ಪಕ್ಕದಲ್ಲಿರುವ ಖಾಲಿ ಸ್ಥಳದಲ್ಲಿ
3 ಅಡಿ ಎತ್ತರದ ಸುಂದರ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ. ಅಲ್ಲದೇ, ಸಾಯಿಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಅಮೃತಶಿಲೆಯ ಪಾದುಕೆಗಳನ್ನು ಕೂಡ ಸ್ಥಾಪಿಸಲಾಗಿದೆ. 

ಶಿರಡಿ ಸಾಯಿಬಾಬಾ ದೇವಾಲಯದ ಪಕ್ಕದಲ್ಲಿ ನಿರ್ಮಿಸಲಾಗಿರುವ ದೇವಾಲಯದ ಗರ್ಭಗುಡಿಯಲ್ಲಿ ಕಪ್ಪು ಶಿಲೆಯ ನವಗ್ರಹ ದೇವರುಗಳ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.









ದೇವಾಲಯದ ಕಾರ್ಯಚಟುವಟಿಕೆಗಳು:
 
ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:
ಬೆಳಿಗ್ಗೆ : 06:30 ರಿಂದ 12:00.
ಸಂಜೆ : 05:30  ರಿಂದ 08:30.

ಆರತಿಯ ಸಮಯ:
ಕಾಕಡಾ ಆರತಿ : 06:30 ಗಂಟೆ
ಮಧ್ಯಾನ್ಹ ಆರತಿ:12:00 ಗಂಟೆ 
ಧೂಪಾರತಿ     : 06:00 ಗಂಟೆ
ಶೇಜಾರತಿ      : 08:00 ಗಂಟೆ

ಪ್ರತಿ ತಿಂಗಳ ಬಹುಳ ಚತುರ್ಥಿಯಂದು ಸಂಜೆ 06:30 ರಿಂದ 08:00 ರವರಗೆ ಸಂಕಷ್ಟ ಚತುರ್ಥಿ ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಸೇವಾ ಶುಲ್ಕ 30/- ರೂಪಾಯಿಗಳು. 

ಪ್ರತಿ ತಿಂಗಳ ಹುಣ್ಣಿಮೆಯಂದು ಸಂಜೆ 06:30 ರಿಂದ 08:00 ರವರಗೆ ಶ್ರೀ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಸೇವಾ ಶುಲ್ಕ 30/- ರೂಪಾಯಿಗಳು.
 
 
ವಿಶೇಷ ಉತ್ಸವದ ದಿನಗಳು:
ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷ 28ನೇ ಫೆಬ್ರವರಿಯಂದು.
ಗುರುಪೂರ್ಣಿಮೆ.
ವಿನಾಯಕ ಚತುರ್ಥಿ. 
ಶ್ರೀರಾಮನವಮಿ. 
ವಿಜಯದಶಮಿ. 

ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳು:
ದೇವಾಲಯದ ಟ್ರಸ್ಟ್ ನ ಆಡಳಿತ ಮಂಡಳಿಯು ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿವರ್ಷದ ಗಾಂಧಿ ಜಯಂತಿಯಂದು ಬಡಾವಣೆಯನ್ನು ಶುಚಿಗೊಳಿಸುವ "ಶ್ರಮದಾನ" ಕಾರ್ಯಕ್ರಮ, ಮತ್ತು ರಕ್ತದಾನ ಶಿಬಿರಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳುತ್ತಾ ಬಂದಿರುತ್ತದೆ.

ದೇಣಿಗೆಗೆ ಮನವಿ:
ದೇವಾಲಯದ ಟ್ರಸ್ಟ್ ತಾನು ನಿಯಮಿತವಾಗಿ  ಹಮ್ಮಿಕೊಳ್ಳುತ್ತಿರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಮಾಜಿಕ ಕಾರ್ಯಚಟುವಟಿಕೆಗಳಿಗಾಗಿ ಹಾಗೂ ದೇವಾಲಯದ ಅಭಿವೃದ್ಧಿ ಕಾರ್ಯಗಳಿಗಾಗಿ   ದೇಣಿಗೆಯನ್ನು ಸ್ವೀಕರಿಸುತ್ತದೆ. ದೇಣಿಗೆಯನ್ನು ನೀಡಲು ಬಯಸುವ ಸಾಯಿಭಕ್ತರು "ಶ್ರೀ ಸಿದ್ಧಿವಿನಾಯಕ ದೇವಾಲಯ ಟ್ರಸ್ಟ್  (ನೋಂದಣಿ)", ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಎ.ಪಿ.ಎಂ.ಸಿ ಶಾಖೆ, ಎಮ್.ಜಿ.ರಸ್ತೆ, ಚಿಕ್ಕಬಳ್ಳಾಪುರ, ಚಾಲ್ತಿ ಖಾತೆ ಸಂಖ್ಯೆ: 64026998693 ಐ.ಎಫ್.ಎಸ್.ಸಿ. ಸಂಖ್ಯೆ:SBMY0040414, ಇವರಿಗೆ ಸಂದಾಯವಾಗುವಂತೆ ಹಣವನ್ನು ನಗದು, ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮುಖಾಂತರವಾಗಿ ಕಳುಹಿಸಬಹುದಾಗಿದೆ.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:

ಸ್ಥಳ:
ಎಂ.ಜಿ.ರಸ್ತೆಯ ಮುನಿಸಿಪಲ್ ಲೇಔಟ್ ನ ಮಕ್ಕಳ ಉದ್ಯಾನವನದ ಪಕ್ಕ.


ವಿಳಾಸ: 
ಶ್ರೀ ಸಿದ್ಧಿವಿನಾಯಕ ಶ್ರೀ ಶಿರಡಿ ಸಾಯಿಬಾಬಾ ಮಂದಿರ, 
ಶ್ರೀ ಸಿದ್ಧಿವಿನಾಯಕ ದೇವಾಲಯ ಟ್ರಸ್ಟ್ (ನೋಂದಣಿ),                                                                             
ಮುನಿಸಿಪಲ್ ಲೇಔಟ್, 6ನೇ ವಾರ್ಡ್, ಎಂ.ಜಿ.ರಸ್ತೆ,
ಚಿಕ್ಕಬಳ್ಳಾಪುರ-562 101,
ಕರ್ನಾಟಕ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಎಲ್. ರವಿ/ ಶ್ರೀ.ಆರ್.ಸಂತೋಷ್/ ಶ್ರೀ.ಆರ್.ಸಂದೀಪ್/ಶ್ರೀ.ಸಿ.ಎಲ್. ಹರೀಶ್/ ಶ್ರೀ.ಸಿ.ಎಲ್. ರಂಜಿತ್/ ಶ್ರೀ.ಕೆ.ಎನ್. ಮಂಜುನಾಥ್ 
 
ದೂರವಾಣಿ ಸಂಖ್ಯೆಗಳು:
+91 87108 32521/+91 98804 24527/91 90365 59976/+91 98457 58884/+91 97432 25331/+91 99809 88140

ಇ-ಮೈಲ್ ವಿಳಾಸ:
ssvssbt@gmail.com

ಮಾರ್ಗಸೂಚಿ:
ದೇವಾಲಯವು ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಿಂದ ಸುಮಾರು 1 ಕಿಲೋಮೀಟರ್ ದೂರದಲ್ಲಿದೆ. ದೇವಾಲಯವು ಗೌರಿಬಿದನೂರಿಗೆ ಹೋಗುವ ದಾರಿಯಲ್ಲಿರುವ ಎಂ.ಜಿ.ರಸ್ತೆಯ ಮುನಿಸಿಪಲ್ ಬಡಾವಣೆಯಲ್ಲಿರುವ ಲಿಯೋಕರ್ ಬಿಲ್ಡಿಂಗ್ ಹಾಗೂ ಓವರ್ ಹೆಡ್  ಟ್ಯಾಂಕ್ ಹತ್ತಿರದಲ್ಲಿ ಹಾಗೂ ಮಕ್ಕಳ ಉದ್ಯಾನವನದ ಪಕ್ಕದಲ್ಲಿ ಇರುತ್ತದೆ.ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಿಂದ ಹೇರಳವಾಗಿ ನಗರ ಬಸ್ ಗಳು ಹಾಗೂ ಆಟೋಗಳು ಸಿಗುತ್ತವೆ. ಎ.ಪಿ.ಎಮ್.ಸಿ/ಮುನಿಸಿಪಲ್ ಬಡಾವಣೆಯ ಬಸ್ ನಿಲ್ದಾಣದಲ್ಲಿ ಇಳಿದು 2 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ.


ಕನ್ನಡ ಅನುವಾದ: ಶ್ರೀಕಂಠ ಶರ್ಮ

Monday, December 23, 2013

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಹೊಸ ವರ್ಷದ ಆಚರಣೆ - ಪತ್ರಿಕಾ ಪ್ರಕಟಣೆ - ಕೃಪೆ: ಸಾಯಿಅಮೃತಧಾರಾ.ಕಾಂ



ವರ್ಷದ ಕೊನೆಯ ರಜಾ ದಿನಗಳ ಪ್ರಯುಕ್ತ ಹಾಗೂ ಹೊಸ ವರ್ಷದ ಆಚರಣೆಯ ಅಂಗವಾಗಿ  31ನೇ ಡಿಸೆಂಬರ್ 2013, ಮಂಗಳವಾರ ದಂದು ರಾತ್ರಿಯಿಡಿ ಸಮಾಧಿ ಮಂದಿರವನ್ನು ದರ್ಶನಕ್ಕಾಗಿ ತೆರೆದಿಡಲಾಗುತ್ತದೆ. ಆದ ಕಾರಣ, 25ನೇ ಡಿಸೆಂಬರ್ 2013 ರಿಂದ  1ನೇ ಜನವರಿ 2014 ರವರೆಗೆ ವಿಐಪಿ ಹಾಗೂ ವಿವಿಐಪಿ ಪಾಸ್ ಗಳನ್ನು ನೀಡಲಾಗುವುದಿಲ್ಲ ಎಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸುದ್ದಿಗಾರರಿಗೆ ತಿಳಿಸಿದರು. 

ಪ್ರತಿವರ್ಷ  ಹೊಸ ವರ್ಷದ ಪ್ರಾರಂಭದಲ್ಲಿ ಸಾಯಿಬಾಬಾರವರ ದರ್ಶನವನ್ನು ಪಡೆಯಲು ಶಿರಡಿಗೆ ಬರುವ ಭಕ್ತರ ಸಂಖ್ಯೆ ಬಹಳ ಹೆಚ್ಚಾಗಿರುತ್ತದೆ. ಹಾಗೆ ಬರುವ ಎಲ್ಲಾ ಭಕ್ತರಿಗೆ ದರ್ಶನದ ಸೌಲಭ್ಯ ದೊರಕಿಸಿಕೊಡಲು ಹಾಗೂ ಭಕ್ತರ ಜನದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ 31ನೇ ಡಿಸೆಂಬರ್ 2013, ಮಂಗಳವಾರ ದಂದು ರಾತ್ರಿಯಿಡಿ ಸಮಾಧಿ ಮಂದಿರವನ್ನು ದರ್ಶನಕ್ಕಾಗಿ ತೆರೆದಿಡಲಾಗುತ್ತದೆ. ಆದ್ದರಿಂದ 31ನೇ ಡಿಸೆಂಬರ್ 2013 ರಂದು ರಾತ್ರಿ ಶೇಜಾರತಿ ಹಾಗೂ  1ನೇ ಜನವರಿ 2014 ರಂದು ಬೆಳಗ್ಗೆ  ಕಾಕಡಾ ಆರತಿ ಕಾರ್ಯಕ್ರಮವಿರುವುದಿಲ್ಲ.  31ನೇ ಡಿಸೆಂಬರ್ 2013 ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ 6.30 ರಿಂದ ರಾತ್ರಿ 8.30  ರವರೆಗೆ  ಮುಂಬೈನ ಪ್ರಸಿದ್ಧ ಕಲಾವಿದರಾದ ಶ್ರೀ.ಸಚ್ಚಿದಾನಂದ ಅಪ್ಪಾರವರಿಂದ ಭಕ್ತಿ ಸಂಗೀತ ಕಾರ್ಯಕ್ರಮವಿರುತ್ತದೆ. ರಾತ್ರಿ 8.45 ರಿಂದ 10.15 ರವರೆಗೆ ಶಿರಡಿಯ ಕಲಾವಿದರುಗಳಾದ ಶ್ರೀ.ಪಾರಸ್ ಜೈನ್, ಶ್ರೀ.ಪ್ರವೀಣ್ ಮಹಾಮುನಿ ಹಾಗೂ ಶ್ರೀ.ಜಿಮ್ಮಿ ಶರ್ಮ ರವರುಗಳಿಂದ ಸಾಯಿ ಭಜನೆಯ ಕಾರ್ಯಕ್ರಮವಿರುತ್ತದೆ ಹಾಗೂ ರಾತ್ರಿ  10.30 ರಿಂದ 12.00 ರವರೆಗೆ ಥಾಣೆಯ ಜಗದೀಶ್ ಮಾರುತಿ ಪಾಟೀಲ್  ರವರಿಂದ ಸಾಯಿ ಭಜನೆಯ ಕಾರ್ಯಕ್ರಮವಿರುತ್ತದೆ ಎಂದು ಶ್ರೀ.ಅಜಯ್ ಮೋರೆಯವರು ತಿಳಿಸಿದರು. 

ಸಾಯಿ ಭಕ್ತರ ಹಿತದೃಷ್ಠಿಯಿಂದ ಸಮಾಧಿ ಮಂದಿರದ ಪ್ರಾಂಗಣದಲ್ಲಿ ಪಟಾಕಿ ಹಚ್ಚುವುದನ್ನು ಹಾಗೂ ಸಂಗೀತ ವಾದ್ಯಗಳನ್ನು ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ಸಾಯಿಭಕ್ತರು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಈ ಮುಖಾಂತರ ಮನವಿ ಮಾಡಿಕೊಳ್ಳಲಾಗಿದೆ.

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀಮತಿ.ಸುವರ್ಣ ನಾಗರಾಜ್ ಅನ್ವೇಕರ್  
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ

Sunday, December 22, 2013

ಚಿನ್ನದ ನಾಡು ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಪ್ರಪ್ರಥಮ ಬಾರಿಗೆ ಶ್ರೀ ಬಬ್ಲೂ ದುಗ್ಗಲ್ ಮತ್ತು ತಂಡದವರಿಂದ ಶ್ರೀ ಸಾಯಿ ಸಚ್ಚರಿತ್ರೆ ಆಧಾರಿತ ನೃತ್ಯ ನಾಟಕ "ಏಕ್ ಶಾಮ್ ಸಾಯಿ ಕೇ ನಾಮ್" ನ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಚಿನ್ನದ ನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾದ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಪ್ರಪ್ರಥಮ ಬಾರಿಗೆ ಶಿರಡಿಯ ಬಳಿಯ ಶ್ರೀರಾಮಪುರದ ಖ್ಯಾತ ನಾಟಕ ತಂಡವಾದ ಶ್ರೀ ಬಬ್ಲೂ ದುಗ್ಗಲ್ ಮತ್ತು ತಂಡದವರಿಂದ ಶ್ರೀ ಸಾಯಿ ಸಚ್ಚರಿತ್ರೆ ಆಧಾರಿತ ನೃತ್ಯ ನಾಟಕ "ಏಕ್ ಶಾಮ್ ಸಾಯಿ ಕೇ ನಾಮ್" ಅನ್ನು ಮುಂದಿನ ತಿಂಗಳ 16ನೇ ಜನವರಿ 2014, ಗುರುವಾರದಂದು ಸಂಜೆ 4:00 ಘಂಟೆಯಿಂದ  ರಾತ್ರಿ 8:30 ರವರೆಗೆ ಬಂಗಾರಪೇಟೆಯ ಕೆ.ಜಿ.ಎಫ್. ಮುಖ್ಯರಸ್ತೆಯಲ್ಲಿರುವ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ.

ಈ ಕಾರ್ಯಕ್ರಮವನ್ನು ಶ್ರೀ ಶಿರಡಿ ಸಾಯಿ ಡ್ರಾಮಾ ಸೇವಾ ಸಮಿತಿ, ಬಂಗಾರಪೇಟೆ, ಶ್ರೀ ಅಯ್ಯಪ್ಪ ದೇವಾಲಯ ಸೇವಾ ಸಮಿತಿ (ನೋಂದಣಿ), ಬಂಗಾರಪೇಟೆ, ಶ್ರೀ ಸಾಯಿ ಸಮರ್ಥ ಟ್ರಸ್ಟ್, ಬೆಂಗಳೂರು ಹಾಗೂ ಶ್ರೀ ಶಿವ ಸಾಯಿ ಟ್ರಸ್ಟ್, 100 ಫೀಟ್ ಬಾಬಾ, ತಿರುವಲಂಗಾಡು, ಚನ್ನೈ ಜಂಟಿಯಾಗಿ ಆಯೋಜಿಸಿದೆ. 


ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಸುಂದರ ನೃತ್ಯ ನಾಟಕವನ್ನು ವೀಕ್ಷಿಸಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಮೇಲಿನ ಟ್ರಸ್ಟ್ ಗಳ ಸಮಿತಿಯ ಎಲ್ಲಾ ಸದಸ್ಯರುಗಳು ವಿನಂತಿ ಮಾಡಿಕೊಳ್ಳುತ್ತಾರೆ.

ಈ ನೃತ್ಯ ನಾಟಕವನ್ನು www.shirdisaibhaktmandal.com ನ ಮುಖಾಂತರವಾಗಿ ಅಂತರ್ಜಾಲ ತಾಣದಲ್ಲಿ ನೇರವಾಗಿ ಕೂಡ ವೀಕ್ಷಿಸಬಹುದಾಗಿದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, December 21, 2013

ದೈಹಿಕ ಹಾಗೂ ಮಾನಸಿಕ ತೊಂದರೆಗಳನ್ನು ನಿವಾರಣೆ ಮಾಡಿದ ಅತ್ಯಾಶ್ಚರ್ಯಕರ ಸಾಯಿ ಲೀಲೆ - ಕೃಪೆ: ಸಾಯಿಅಮೃತಧಾರಾ.ಕಾಂ


ಶಿರಡಿ ಸಾಯಿಬಾಬಾರವರ ಅಪ್ಪಣೆಯನ್ನು ಪಡೆದು ನಾನು ನನ್ನ ಅನುಭವಗಳನ್ನು ಹೇಳಲು ಪ್ರಾರಂಭಿಸುತ್ತೇನೆ. ನನಗೆ ಮತ್ತು ನನ್ನ ಕುಟುಂಬದ ಸದಸ್ಯರಿಗೆ  ಯಾವುದೇ ತೊಂದರೆಯಾದಾಗ ಸಾಯಿಬಾಬಾ ನಮ್ಮನ್ನು ಕಾಪಾಡಿದ್ದಾರೆ. 

ಕೆಲವು ವರ್ಷಗಳ ಹಿಂದಿನ ಮಾತು. ನಾನು ನನ್ನ ಸ್ವಂತ ಕಾರ್ಯಗಳಲ್ಲಿ ಮಾತ್ರ ಗಮನ ಹರಿಸುತ್ತಾ ಸ್ವಾರ್ಥ ಜೀವನವನ್ನು ನೆಡೆಸುತ್ತಿದ್ದೆ. ನನ್ನ ಸ್ವಂತ ಯಶಸ್ಸು, ಬ್ಯಾಂಕ್ ಬ್ಯಾಲೆನ್ಸ್ ಗಳ ಬಗ್ಗೆ ಮಾತ್ರ ಗಮನ ಹರಿಸುತ್ತಾ ಸಾಮಾಜಿಕವಾಗಿ ಯಾರೊಡನೆ ಬೆರೆಯದೇ, ಯಾವುದೇ ಸಾಮಾಜಿಕ ಕಾರ್ಯಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳದೇ ಜೀವನ ನೆಡೆಸುತ್ತಿದ್ದೆ. ಆಗ ನನಗೆ ಶಿರಡಿಗೆ ಬರುವಂತೆ ಸಾಯಿಬಾಬಾರವರಿಂದ ಬುಲಾವ್ ಬಂದಿತು. ನನ್ನ ಬುದ್ಧಿಯನ್ನು ಸರಿ ಮಾಡಲು ಸಾಯಿಬಾಬಾ ನನ್ನನ್ನು ಕರೆಸಿಕೊಂಡಿರಬಹುದು ಎಂಬುದು ನನ್ನ ಅನಿಸಿಕೆ. 

ಅಕ್ಟೊಬರ್ 5, 2003  ರಂದು ನಾನು ಹಾಗೂ ನನ್ನ ಮನೆಯವರು ಶಿರಡಿಯನ್ನು ತಲುಪಿದೆವು. ನನ್ನ ಧರ್ಮಪತ್ನಿಯು ದೈಹಿಕ ತೊಂದರೆಯಿಂದ ಬಳಲುತ್ತಿದ್ದಳು. ಆದರೆ ನಾನು ಅದರ ಕಡೆಗೆ ಸ್ವಲ್ಪವೂ ಗಮನ ಹರಿಸಲಿಲ್ಲ. ನಾವು ಶಿರಡಿಗೆ ಸಮೀಪದಲ್ಲಿರುವ ಕೋಪರಗಾವ್ ಎಂಬ ಗ್ರಾಮವನ್ನು ತಲುಪಿದೆವು. ಅಲ್ಲಿ ಒಬ್ಬ ಆಟೋ ಚಾಲಕನೊಂದಿಗೆ 60/- ರೂಪಾಯಿ ಶುಲ್ಕ ಎಂಬ  ಒಪ್ಪಂದ ಮಾಡಿಕೊಂಡು ಆಟೋ ಹತ್ತಿದೆವು. ಆದರೆ ಶಿರಡಿ ತಲುಪಿದ ನಂತರ ಆಟೋ ಚಾಲಕ 80/-ರೂಪಾಯಿ ನೀಡಬೇಕೆಂದು ಗಲಾಟೆ ಮಾಡಲು ಪ್ರಾರಂಭಿಸಿದ. ನನಗೆ ಕೋಪ ಬಂದು ವಿಷಯವನ್ನು ಪೊಲೀಸರಿಗೆ ತಿಳಿಸುವುದಾಗಿ ಬೆದರಿಸಿದೆ. ಅದಕ್ಕೆ ಆ ಆಟೋ ಚಾಲಕ "ಈ ಹಣವನ್ನೂ ನೀವೇ ಇಟ್ಟುಕೊಳ್ಳಿ. ಸಾಯಿಬಾಬಾರವರ ಒಬ್ಬ ಭಿಕ್ಷುಕನಿಗೆ ಹಣವನ್ನು ನೀಡಿದೆ ಎಂದು ನಾನು ತಿಳಿದುಕೊಳ್ಳುತ್ತೇನೆ" ಎಂದು ಹೇಳಿ ಹಣವನ್ನು ಪಡೆಯದೇ ಹಾಗೆಯೇ ಹೊರಟುಹೋದ. 

ಇದು ಶಿರಡಿಗೆ ನಮ್ಮ ಮೊದಲ ಭೇಟಿಯಾಗಿತ್ತು. ಆದರೆ ಅತ್ಯಂತ ತ್ವರಿತ ಗತಿಯಲ್ಲಿ ದರ್ಶನವನ್ನು ಮಾಡಿದೆವು. ಆದ ಕಾರಣ ನಾವು ದ್ವಾರಕಾಮಾಯಿಯ 3 ಮೆಟ್ಟಿಲುಗಳನ್ನು ಕೂಡ ಹತ್ತುವುದನ್ನು ಮರೆತೆವು. ಆದರೆ, ಸಾಯಿಬಾಬಾರವರ ಅಪ್ಪಣೆಯಿಲ್ಲದೆ ಯಾರೂ ಕೂಡ 3 ಮೆಟ್ಟಿಲುಗಳನ್ನು ಹತ್ತಲಾಗುವುದಿಲ್ಲ ಮತ್ತು ಹಾಗೆ ಹತ್ತಿಳಿದ ಯಾವುದೇ ವ್ಯಕ್ತಿಯ ಬಯಕೆಗಳು ಖಂಡಿತವಾಗಿ ಪೂರ್ಣವಾಗುವುದು ಎಂದು ಮನಗಂಡೆವು. 

ಶಿರಡಿಯಿಂದ ವಾಪಸ್  ಬಂದ ನಂತರ ನಾನು ಮತ್ತೆ ನನ್ನ ಕೆಲಸಗಳಲ್ಲಿ ಮುಳುಗಿ ಹೋದೆ. ದಿನ ಕಳೆದಂತೆ ನನ್ನ ಪತ್ನಿಯ ಆರೋಗ್ಯ ಹದಗೆಡಲು ಪ್ರಾರಂಭವಾಯಿತು. ಆದರೂ ಕೂಡ ನಾನು ಅವಳ ಬಗ್ಗೆ ಸ್ವಲ್ಪವೂ ಗಮನ ಹರಿಸಲಿಲ್ಲ. ಡಿಸೆಂಬರ್  4, 2003 ರಂದು ನನ್ನ ಪತ್ನಿ ನನಗೆ  ಫೋನ್ ಮಾಡಿ ಅಳಲು ಪ್ರಾರಂಭಿಸಿದಳು. ನಾನು ಕೂಡಲೇ ಮನೆಗೆ ಓಡಿದೆ. ನಾನು ಹಾಗೂ ನಾನು ಬಾಡಿಗೆಗೆ ಇದ್ದ ಮನೆಯ ಮಾಲೀಕರು ಸೇರಿ ನನ್ನ ಪತ್ನಿಯನ್ನು ವೊಕಾರ್ಡ್  ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿ ಡಾ.ಚಂದ್ರಶೇಖರ್ ರವರು ಕೊಲೊನೋಸ್ಕೋಪಿ ಹಾಗೂ ಬಯಾಪ್ಸಿ ಮಾಡಿ ಕ್ಯಾನ್ಸರ್ ಕಾಯಿಲೆ ಇರಬಹುದು ಎಂಬ ಸಂದೇಹದಿಂದ ತ್ವರಿತವಾಗಿ ಸಿಟಿ ಸ್ಕ್ಯಾನ್ ಮಾಡಿಸಬೇಕೆಂದು ಸಲಹೆ ನೀಡಿದರು. ನಮ್ಮ ಕುಟುಂಬದ ತೊಂದರೆಯ ದಿನಗಳು ಈ ರೀತಿಯಲ್ಲಿ ಪ್ರಾರಂಭವಾಯಿತು. ಬೆಂಗಳೂರಿನ ಮಲ್ಯ ಆಸ್ಪತ್ರೆಯ ಪ್ರಸಿದ್ಧ ಕ್ಯಾನ್ಸರ್ ತಜ್ಞರಾದ ಡಾ.ನಂದಕುಮಾರ್ ಜಯರಾಂ ರವರನ್ನು ಕೂಡಲೇ ಕಾಣಬೇಕೆಂದು ಡಾ.ಚಂದ್ರಶೇಖರ್ ರವರು ನನಗೆ ಸಲಹೆ ನೀಡಿದರು. ಅವರ ಸಲಹೆಯಂತೆ ನಾನು ನನ್ನ ಪತ್ನಿಯನ್ನು ಡಿಸೆಂಬರ್ 9 ರಂದು ಮಲ್ಯ ಆಸ್ಪತ್ರೆಗೆ ದಾಖಲು ಮಾಡಿದೆ. ನನ್ನ ಪತ್ನಿಗೆ ಅದೇ ದಿನವೇ ಶಸ್ತ್ರಚಿಕಿತ್ಸೆ ಕೂಡ ಮಾಡಲಾಯಿತು. ಅಂದಿನಿಂದ ನಾನು ಸಾಯಿ ತಾರಕ ಮಂತ್ರವಾದ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ಯನ್ನು ಹೇಳಿಕೊಳ್ಳಲು ಪ್ರಾರಂಭಿಸಿದೆ. ಶಸ್ತ್ರಚಿಕಿತ್ಸೆಯಾದ ನಂತರದ ದಿನದಿಂದ ಕೀಮೊಥಿರೆಪಿ ಹಾಗೂ ರೇಡಿಯೋಥಿರೆಪಿ ಚಿಕಿತ್ಸೆ ಪ್ರಾರಂಭಿಸಬೇಕಾಗಿತ್ತು. ಆದರೆ, ಬೆಂಗಳೂರಿನಲ್ಲಿ ನಮ್ಮ ಬಂಧುಗಳು ಯಾರೂ ಇಲ್ಲದ ಕಾರಣದಿಂದ ಹಾಗೂ ಹೆಚ್ಚು ಸ್ನೇಹಿತರು ಇಲ್ಲದ ಕಾರಣದಿಂದ  ನನಗೆ ಒಂಟಿತನ ಹಾಗೂ ಅಸಹಾಯಕತೆ ಕಾಡಲು ಪ್ರಾರಂಭವಾಯಿತು. ಆದ ಕಾರಣ ಹೆಚ್ಚಿನ ಚಿಕಿತ್ಸೆಯನ್ನು ನನ್ನ ಸ್ವಂತ ಸ್ಥಳವಾದ ಕೋಲ್ಕತ್ತಾದಲ್ಲಿ ಮಾಡಿಸಲು ತೀರ್ಮಾನ ಮಾಡಿದೆ. ನಮ್ಮ ಬಳಿ ಇದ್ದ ಎಲ್ಲಾ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಿ ಹಣವನ್ನು ತೆಗೆದುಕೊಂಡು ಕೊಲ್ಕತ್ತಾಗೆ ತೆರಳಿದೆ. 

ಆದರೆ ಕೊಲ್ಕತ್ತಾದಲ್ಲಿ ರೇಡಿಯೋಥಿರೆಪಿ ಚಿಕಿತ್ಸೆ ವ್ಯವಸ್ಥೆ ಅಷ್ಟು  ಸರಿ ಇಲ್ಲದ ಕಾರಣ ನಾನು ಮತ್ತೆ ಬೆಂಗಳೂರಿಗೆ ವಾಪಾಸಾಗಿ ಮಲ್ಯ ಆಸ್ಪತ್ರೆಯಲ್ಲಿ ಕೀಮೊಥಿರೆಪಿ ಹಾಗೂ ರೇಡಿಯೋಥಿರೆಪಿ ಚಿಕಿತ್ಸೆಯನ್ನು  ಮಾಡಿಸಲು ಪ್ರಾರಂಭಿಸಿದೆ. ಕೆಲವೇ ದಿನಗಳಲ್ಲಿ ನಾವು ಅತ್ಯಂತ ದಯನೀಯ ಸ್ಥಿತಿಯನ್ನು ತಲುಪಿದೆವು. ಆಗ ನನಗೆ ಶಿರಡಿಯಲ್ಲಿ ಆ ಆಟೋ ಚಾಲಕ ಹೇಳಿದ ಮಾತುಗಳು ನೆನಪಿಗೆ ಬಂದು ದುಃಖ ಉಮ್ಮಳಿಸಿ ಬಂದಿತು. ಆ ದಿನದಿಂದ ಮನೆಯವರೆಲ್ಲರೂ ಹಗಲಿರುಳೂ ಸಾಯಿ ಧ್ಯಾನವನ್ನು ಮಾಡಲು ಪ್ರಾರಂಭಿಸಿದೆವು. 

ಡಾ.ನಂದಕುಮಾರ್ ಜಯರಾಂ ರವರು ನಮಗೆ ಕೀಮೊಥಿರೆಪಿ ಚಿಕಿತ್ಸೆಗೆ ಡಾ.ನಳಿನಿ ಕಿಲಾರ ಬಳಿ ಹೋಗುವಂತೆ ಸೂಚನೆ ನೀಡಿದರು. ಅದರಂತೆ ನಾವು ಡಾ.ನಳಿನಿ ಕಿಲಾರರವರನ್ನು ಭೇಟಿ ಮಾಡಿದಾಗ ಅವರು ಶಸ್ತ್ರಚಿಕಿತ್ಸೆಯಾಗಿದ್ದರೂ ಸಹ ಕೀಮೊಥಿರೆಪಿ ಚಿಕಿತ್ಸೆಯಿಂದ ಕ್ಯಾನ್ಸರ್ ಗೆಡ್ಡೆಯನ್ನು ಸಂಪೂರ್ಣವಾಗಿ ಗುಣಪಡಿಸುವ ಸಾಧ್ಯತೆ ಬಹಳ ಕಡಿಮೆ ಇದೆ; ಕೇವಲ ಪವಾಡದಿಂದ ಮಾತ್ರ ಗುಣವಾಗಿ ನಿಮ್ಮ  ಪತ್ನಿ ಬದುಕುಳಿಯಬಹುದು ಎಂಬ ಮಾತುಗಳನ್ನು ಪದೇ ಪದೇ ಪುನರುಚ್ಚರಿಸಿದರು. 

ಡಾಕ್ಟರ್ ರವರ ಈ ಮಾತನ್ನು ಕೇಳಿ ನನ್ನ ಪತ್ನಿ ದುಃಖದಿಂದ ಅಳಲು ಪ್ರಾರಂಭಿಸಿದಳು ಹಾಗೂ ತನಗೆ  ಕೀಮೊಥಿರೆಪಿ ಚಿಕಿತ್ಸೆ ಮಾಡಿಸಬೇಡಿ ಎಂದು ಬೇಡಿಕೊಂಡಳು. ಆಗ ನಾನು "ಪವಾಡದಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ಸಾಯಿಬಾಬಾರವರ ಪಾದ ಕಮಲಗಳಲ್ಲಿ ಸಂಪೂರ್ಣ ಶರಣಾಗತರಾಗಿ ಎಲ್ಲಾ ಒಳಿತು ಕೆಡುಕುಗಳನ್ನು ಅವರ ಮರ್ಜಿಗೆ ಬಿಟ್ಟುಬಿಡೋಣ. ಯಾವ ದಾರಿಗಳೂ ನಮಗೆ ಕಾಣದೇ ಹೋದಾಗ ಸಾಯಿಬಾಬಾರವರು ನಮಗೆ ದಾರಿಯನ್ನು ಖಂಡಿತ ತೋರಿಸುತ್ತಾರೆ " ಎಂದು ಧೃಡವಾಗಿ ಹೇಳಿದೆ. 

ಒಟ್ಟಾರೆ 6 ಕೀಮೊಥಿರೆಪಿ ಚಿಕಿತ್ಸೆಗಳನ್ನು ಮಾಡಿಸಬೇಕಾಗಿತ್ತು. ಅದರಲ್ಲಿ 3  ಕೀಮೊಥಿರೆಪಿ ಚಿಕಿತ್ಸೆಗಳು ಮುಗಿದು ರಕ್ತ ಪರೀಕ್ಷೆಯನ್ನು ಮಾಡಲಾಯಿತು. ಆಗ ಕ್ಯಾನ್ಸರ್ ಕಾಯಿಲೆಯು ಪ್ರತಿಶತ 75.9 ರಿಂದ ಪ್ರತಿಶತ 1.9 ಕ್ಕೆ ಒಮ್ಮೆಲೇ ಇಳಿದಿತ್ತು. ಈ ಅಧ್ಬುತ ಪವಾಡವನ್ನು ಕಂಡು ಡಾಕ್ಟರ್ ಗಳು ತಮ್ಮ ಅಚ್ಚರಿಯನ್ನು ವ್ಯಕ್ತಪಡಿಸಿದರು ಹಾಗೂ ಇದೊಂದು ಅತ್ಯಂತ ಅಪರೂಪದ ವಿಷಯವಾದ್ದರಿಂದ ಸಂತಸವನ್ನು ಸಹ ವ್ಯಕ್ತಪಡಿಸಿದರು. ಉಳಿದ  3 ಕೀಮೊಥಿರೆಪಿ ಚಿಕಿತ್ಸೆಯನ್ನು ಸಹ ಮುಗಿಸಿ ಸಿಟಿ ಸ್ಕ್ಯಾನ್ ಮಾಡಿ ನೋಡಿದಾಗ ಮತ್ತೊಂದು ಪವಾಡ ನಡೆದಿತ್ತು. ಒಂದೇ ಒಂದು ಕ್ಯಾನ್ಸರ್ ಗೆಡ್ಡೆಯು ಸಹ ಕಂಡು ಬರಲಿಲ್ಲ. ಕೀಮೊಥಿರೆಪಿ ಚಿಕಿತ್ಸೆಯನ್ನು ಮಾಡಿದಾಗ ಕೂದಲು ಉದುರುವುದು, ತೂಕ ಕಳೆದುಕೊಳ್ಳುವುದು ಹಾಗೂ ದೇಹದ ಆರೋಗ್ಯದಲ್ಲಿ ಏರುಪೇರು ಕಂಡು ಬರುವುದು ಸರ್ವೇ ಸಾಮಾನ್ಯ. ಆದರೆ ಸಾಯಿಬಾಬಾರವರ ದಯೆಯಿಂದ ನನ್ನ ಪತ್ನಿಗೆ ಈ ರೀತಿಯ ಯಾವುದೇ ಅಡ್ಡ ಪರಿಣಾಮಗಳು ಆಗಲಿಲ್ಲ ಎನ್ನುವುದು ಮಹದಾಶ್ಚರ್ಯದ ಸಂಗತಿ.   

ಇಂದು ನಾನು, ನನ್ನ ಪತ್ನಿ ಹಾಗೂ ನನ್ನ ಮಗಳು ಸಾಯಿಬಾಬಾರವರ ಸಂಪೂರ್ಣ ಕೃಪೆ ಹಾಗೂ ಆಶೀರ್ವಾದವನ್ನು ಪಡೆದಿದ್ದೇವೆ. ಅಲ್ಲದೆ, "ಯಾವುದಾದರೂ ಒಂದು ರೀತಿಯಲ್ಲಿ ಸಮಾಜ ಸೇವೆಯನ್ನು ಮಾಡಿ ಸಮಾಜದ ಋಣವನ್ನು ತೀರಿಸಬೇಕೆಂಬ ಸತ್ಯವನ್ನು ನಾನು ಈ ಘಟನೆಯಿಂದ ಅರಿತುಕೊಂಡೆ"- ಶ್ರೀ.ಸುಬ್ರತೋ ಬ್ಯಾನರ್ಜಿ ಯವರ ಸ್ವಂತ ಅನುಭವ. 


ಹಿಂದಿಯಿಂದ ಇಂಗ್ಲೀಷ್ ಗೆ ಅನುವಾದ: ರೋಹಿಣಿ ತ್ರಿಭುವನ್ 
ಇಂಗ್ಲೀಷ್ ನಿಂದ ಕನ್ನಡಕ್ಕೆ  ಅನುವಾದ: ಶ್ರೀಕಂಠ ಶರ್ಮ


Friday, December 20, 2013

ಭಾರತ ಸರ್ಕಾರದ ಅಸಂಪ್ರದಾಯಿಕ ಇಂಧನಗಳ ಸಚಿವಾಲಯದಿಂದ ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ಪ್ರಶಸ್ತಿ - ಕೃಪೆ: ಸಾಯಿಅಮೃತಧಾರಾ.ಕಾಂ

ಭಾರತ ಸರ್ಕಾರದ ಅಸಂಪ್ರದಾಯಿಕ ಇಂಧನಗಳ ಸಚಿವರಾದ ಶ್ರೀ.ಫರೂಕ್ ಅಬ್ದುಲ್ಲಾರವರು ಶಿರಡಿ ಸಾಯಿಬಾಬಾ ಸಂಸ್ಥಾನದ ಸೌರ ಉಗಿ ಅಡುಗೆ ಯೋಜನೆಯನ್ನು ಧಾರ್ಮಿಕ ಸಂಸ್ಥೆಗಳಲ್ಲಿಯೇ ಅತ್ಯಂತ ಬೃಹತ್ ಯೋಜನೆ ಎಂದು ಗುರುತಿಸಿ  ಇದೇ ತಿಂಗಳ 17ನೇ ಡಿಸೆಂಬರ್ 2013, ಮಂಗಳವಾರ ದಂದು ನವದೆಹಲಿಯ ಅಶೋಕ ಹೋಟೆಲ್ ನಲ್ಲಿ ನಡೆದ  ಸಮಾರಂಭದಲ್ಲಿ  ಪ್ರಶಸ್ತಿಯನ್ನು ನೀಡಿ ಗೌರವಿಸಿದರು. 

 
ಶಿರಡಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಯಾಂತ್ರಿಕ ಅಧಿಕಾರಿಗಳಾದ  ಶ್ರೀ.ಅಮೃತ್  ಜಗ್ತಪ್ ರವರು ಈ ಪ್ರಶಸ್ತಿಯನ್ನು ಸಚಿವರಿಂದ ಸ್ವೀಕರಿಸಿದರು. ಅಸಂಪ್ರದಾಯಿಕ ಇಂಧನಗಳ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಾದ ಡಾ.ಸತೀಶ್ ಅಗ್ನಿಹೋತ್ರಿ ಹಾಗೂ ಜಂಟಿ ಕಾರ್ಯದರ್ಶಿಗಳಾದ ಶ್ರೀ.ತರುಣ್ ಕಪೂರ್ ಮತ್ತಿತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, December 19, 2013

ಹಿರಿಯ ಸಂಸತ್ ಸದಸ್ಯ ಶ್ರೀ. ರಾಮ್ ಜೇತ್ಮಲಾನಿ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಹಿರಿಯ ಸಂಸತ್ ಸದಸ್ಯರಾದ ಶ್ರೀ. ರಾಮ್ ಜೇತ್ಮಲಾನಿಯವರು ಇದೇ ತಿಂಗಳ 19ನೇ ಡಿಸೆಂಬರ್ 2013, ಗುರುವಾರ ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು ಕೂಡ ಉಪಸ್ಥಿತರಿದ್ದರು. 
 
 
ಕನ್ನಡ ಅನುವಾದ: ಶ್ರೀಕಂಠ ಶರ್ಮ

Wednesday, December 18, 2013

ಶ್ರೀ ಸಾಯಿ ಸುಮಿರನ್ ಟೈಮ್ಸ್ ನ ವತಿಯಿಂದ 100ನೇ ಸಂಚಿಕೆಯ ಬಿಡುಗಡೆ ಸಮಾರಂಭ -ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿ ಸುಮಿರನ್ ಟೈಮ್ಸ್, ನವದೆಹಲಿಯು ಜನವರಿ 2014 ರಲ್ಲಿ ತನ್ನ 100ನೇ ಸಂಚಿಕೆಯನ್ನು ಹೊರತರುತ್ತಿದೆ. ಅದರ ಸವಿ ನೆನಪಿಗಾಗಿ ಪತ್ರಿಕೆಯು ನವದೆಹಲಿಯ ಸರ್ವೆಂಟ್ಸ್ ಆಫ್ ಶಿರಡಿ ಸಾಯಿ (SOS) ಸಂಸ್ಥೆಯ ಸಹಯೋಗದೊಂದಿಗೆ ಮುಂದಿನ ತಿಂಗಳ 19ನೇ ಜನವರಿ 2014, ಭಾನುವಾರ ದಂದು ಸಂಜೆ 6:00 ಘಂಟೆಯಿಂದ ರಾತ್ರಿ 9:30 ರ ವರೆಗೆ ನವದೆಹಲಿಯ ಲೋಧಿ ರಸ್ತೆಯಲ್ಲಿರುವ ಚಿನ್ಮಯ ಮಿಷನ್ ಸಭಾಂಗಣದಲ್ಲಿ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಿದೆ.  

ಈ ಸಂದರ್ಭದಲ್ಲಿ ನವದೆಹಲಿಯ ಸ್ಟರ್ಲಿಂಗ್ ಪಬ್ಲಿಷರ್ಸ್ ಪ್ರೈವೇಟ್ ಲಿಮಿಟೆಡ್ ನವರು ಪ್ರಕಟಣೆ ಮಾಡುತ್ತಿರುವ "ಸಾಯಿ ಸುಮಿರನ್" (ಭಕ್ತರ ಅನುಭವ) ಎಂಬ ಪುಸ್ತಕವನ್ನು ಕೂಡ ಲೋಕಾರ್ಪಣೆ ಮಾಡಲಾಗುತ್ತಿದೆ. ಈ ಪುಸ್ತಕದಲ್ಲಿ ಸಾಯಿ ಸುಮಿರನ್ ಪತ್ರಿಕೆಯ ಹಳೆಯ ಸಂಚಿಕೆಯಿಂದ ಆಯ್ದ ಭಕ್ತರ ಅನುಭವಗಳು ಹಾಗೂ ಸಂಪಾದಕೀಯಗಳ ಸಂಗ್ರಹವಿರುತ್ತದೆ. 
 
ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ  ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಪತ್ರಿಕೆಯ ಆಡಳಿತ ಮಂಡಳಿಯು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

ಸಾಯಿ ಭಜನ ಗಾಯಕ ಹಾಗೂ ಗೀತ ರಚನಕಾರ ಶ್ರೀ.ಎಂ.ವೀರಭದ್ರಪ್ಪ - ಕೃಪೆ: ಸಾಯಿಅಮೃತಧಾರಾ.ಕಾಂ

 


ಶ್ರೀ.ಎಂ.ವೀರಭದ್ರಪ್ಪ ನವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರು ಹಾಗೂ ಖ್ಯಾತ ಸಾಯಿಭಜನ ಗಾಯಕ ಹಾಗೂ ಗೀತ ರಚನಕಾರರು. 

ಇವರು  1ನೇ ಜುಲೈ 1952 ರಂದು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಅಧೋನಿಯಲ್ಲಿ ಜನಿಸಿರುತ್ತಾರೆ.

ಇವರು 1972 ನೇ ಇಸವಿಯಲ್ಲಿ ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿಯನ್ನು ಗಳಿಸಿರುತ್ತಾರೆ. ಅಲ್ಲದೇ  ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಚನ್ನೈನಿಂದ  ಹಿಂದಿ ಪ್ರವೇಶಿಕ ಪದವಿಯನ್ನು ಸಹ ಗಳಿಸಿದ್ದಾರೆ.

ಇವರು ಬೆಂಗಳೂರಿನ ಎಸ್.ವಿ. ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಆಡಿಟಿಂಗ್ ಸಂಸ್ಥೆಯಲ್ಲಿ ಕಳೆದ 40 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಇವರು ಭಜನೆಯನ್ನು ಹಾಡುವುದಷ್ಟೇ ಅಲ್ಲದೇ ಗೀತ ರಚನೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರು ಕನ್ನಡ, ತೆಲುಗು, ಹಿಂದಿ ಹಾಗೂ ತಮಿಳು ಭಾಷೆಗಳಲ್ಲಿ ಸಾಯಿ ಭಜನೆಯನ್ನು ಸುಶ್ರಾವ್ಯವಾಗಿ ಹಾಡಬಲ್ಲವರಾಗಿದ್ದಾರೆ.

ಸಾಯಿಭಜನ ಗಾಯಕರಾಗಿ ಇವರು ಶಿರಡಿ ಸಾಯಿಬಾಬಾ ಸಂಸ್ಥಾನದಲ್ಲಿ 3 ಬಾರಿ ಸಾಯಿ ಭಜನೆಯ ಕಾರ್ಯಕ್ರಮವನ್ನು ನೀಡಿದ್ದಾರೆ. ಬೆಂಗಳೂರಿನ ಜಯನಗರ 9ನೇ ಬಡಾವಣೆಯ ಸಾಯಿ ಮಂದಿರ ಹಾಗೂ ಅಲಸೂರಿನ ಕೇಂಬ್ರಿಡ್ಜ್ ಬಡಾವಣೆಯ ಸಾಯಿ ಮಂದಿರಗಳಲ್ಲಿ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಅಲ್ಲದೇ, ಬಿಟಿಎಂ ಬಡಾವಣೆಯ ಸಾಯಿ ಮಂದಿರ ಹಾಗೂ ಜಯನಗರ ಪೂರ್ವ ಬಡಾವಣೆಯ ಶ್ರೀ ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರಗಳಲ್ಲಿ "ಸಾಯಿ ನಾಮ ಜಪ" ಕಾರ್ಯಕ್ರಮಗಳನ್ನು ನಿಯಮಿತವಾಗಿ ನೀಡುತ್ತಾ ಬಂದಿದ್ದಾರೆ.

ಇವರು ಶ್ರೀಮತಿ.ಎಂ.ವಿ.ನೀಲವೇಣಿ ಅವರನ್ನು ವಿವಾಹವಾಗಿದ್ದು ಇವರಿಗೆ  ಶ್ರೀ.ಎಂ.ವಿ.ಶಿವರಾಜ್ ಹಾಗೂ ಕುಮಾರಿ. ಎಂ.ವಿ. ಸ್ವಪ್ನ ಎಂಬ ಹೆಸರಿನ ಇಬ್ಬರು ಮಕ್ಕಳಿದ್ದಾರೆ.

ಪ್ರಸ್ತುತ ಇವರು ತಮ್ಮ  ತಾಯಿ, ಧರ್ಮಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನ ಅರಕೆರೆ ಬಡಾವಣೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ.

ಶ್ರೀ.ಎಂ.ವೀರಭದ್ರಪ್ಪ ನವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:


ವಿಳಾಸ:
ಶ್ರೀ.ಎಂ.ವೀರಭದ್ರಪ್ಪ
ನಂ.9, ಶ್ರೀ ಆದಿ ಬಸವೇಶ್ವರ ನಿಲಯ,
ಚಾಮುಂಡೇಶ್ವರಿ ಬಡಾವಣೆ,
ಅರಕೆರೆ,ಬನ್ನೇರುಘಟ್ಟ ರಸ್ತೆ,
ಬೆಂಗಳೂರು - 560 076,
ಕರ್ನಾಟಕ, ಭಾರತ



ದೂರವಾಣಿ ಸಂಖ್ಯೆ:

 +91 99869 52737/ +91 80 2648 1163

ಇ-ಮೈಲ್ ವಿಳಾಸ:




ಕನ್ನಡ ಅನುವಾದ: ಶ್ರೀಕಂಠ ಶರ್ಮ

Monday, December 16, 2013

ಶ್ರೀ ಶಿರಡಿ ಸಾಯಿ ವಾಸವಿ ಚಾರಿಟಬಲ್ ಟ್ರಸ್ಟ್ (ನೋಂದಣಿ), ಬೆಂಗಳೂರು ವತಿಯಿಂದ ಅಖಂಡ ಸಾಯಿ ಭಜನೆ ಹಾಗೂ ಹಾಲಿನ ಅಭಿಷೇಕ ಕಾರ್ಯಕ್ರಮ "ಸಾಯಿ ಅಮೃತಧಾರೆ" ಯ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಶಿರಡಿ ಸಾಯಿ ವಾಸವಿ ಚಾರಿಟಬಲ್ ಟ್ರಸ್ಟ್ (ನೋಂದಣಿ), ಬೆಂಗಳೂರು ವತಿಯಿಂದ ಮುಂದಿನ ತಿಂಗಳ 12ನೇ ಜನವರಿ 2014, ಭಾನುವಾರ ದಂದು ಬೆಳಿಗ್ಗೆ 9:00 ಘಂಟೆಯಿಂದ ರಾತ್ರಿ 9:00 ಘಂಟೆಯವರೆಗೆ ಬೆಂಗಳೂರಿನ ವಿಶ್ವೇಶ್ವರಪುರಂನಲ್ಲಿರುವ ವಾಸವಿ ಕನ್ವೆನ್ಷನ್ ಹಾಲ್ ನಲ್ಲಿ   ಅಖಂಡ ಸಾಯಿ ಭಜನೆ ಹಾಗೂ ಹಾಲಿನ ಅಭಿಷೇಕ ಕಾರ್ಯಕ್ರಮ "ಸಾಯಿ ಅಮೃತಧಾರೆ" ಯನ್ನು  ಆಯೋಜಿಸಲಾಗಿದೆ.


ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಸಾಯಿ ಭಕ್ತರ ಅವಗಾಹನೆಗಾಗಿ ಈ ಕೆಳಗೆ ಲಗತ್ತಿಸಲಾಗಿದೆ: 


ಸಾಯಿ ಭಜನೆ ಕಾರ್ಯಕ್ರಮದ ವಿವರ ಈ ಕೆಳಕಂಡಂತೆ ಇದೆ:

ಬೆಳಿಗ್ಗೆ 10:00ಕ್ಕೆ           - ಪ್ರಾಜ್ಞ ತಂಡ
ಬೆಳಿಗ್ಗೆ  11:00ಕ್ಕೆ          - ಆರ್ಡಿಕ್  ಸಾಯಿ ಭಜನ ಮಂಡಲಿ
ಮಧ್ಯಾನ್ಹ  12:30ಕ್ಕೆ     - ಶ್ರೀ.ರಾಧಾಕೃಷ್ಣ ಮತ್ತು ವೃಂದ
ಮಧ್ಯಾನ್ಹ  01:30ಕ್ಕೆ     - ಗೌರಿಬಿದನೂರು ಸಾಯಿ ಮಂದಿರ ಭಜನ ಮಂಡಲಿ
ಮಧ್ಯಾನ್ಹ 02:30ಕ್ಕೆ      - ಶ್ರೀ.ಕೃಷ್ಣಪ್ಪ ಮತ್ತು ಶ್ರೀ.ಅರುಣ್ ಸಹೋದರರು
ಮಧ್ಯಾನ್ಹ 03:30ಕ್ಕೆ      - ವಾಸವಿ ಮಹಿಳಾ ಮಂಡಲಿ, ರಾಜಾಜಿನಗರ, ಬೆಂಗಳೂರು
ಸಂಜೆ 04:30ಕ್ಕೆ           - ಶ್ರೀಮತಿ.ಅಂಕಿತ, ಸದ್ಗುರು ಭಜನ ಮಂಡಲಿ, ಬೆಂಗಳೂರು
ಸಂಜೆ 06:00 ಕ್ಕೆ          - ಆವೋ ಸಾಯಿ ಭಜನ ವೃಂದ
ಸಂಜೆ 07:00ಕ್ಕೆ           - ಶ್ರೀಮತಿ.ಶಿವಾನಿ ಮತ್ತು ವೃಂದ
ರಾತ್ರಿ 08:00ಕ್ಕೆ            - ಶ್ರೀಮತಿ.ನಾಗಶ್ರೀ ಮತ್ತು ವೃಂದ
ರಾತ್ರಿ 08:30ಕ್ಕೆ            - ಸಾಯಿ ಭಜನ ಮಂಡಲಿ, ಕುಮಾರಸ್ವಾಮಿ ಲೇಔಟ್, ಬೆಂಗಳೂರು


ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಟ್ರಸ್ಟ್ ನ ಆಡಳಿತ ಮಂಡಳಿಯ ಸದಸ್ಯರು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, December 14, 2013

ಶಿರಡಿ ಸಾಯಿಬಾಬಾ ಸಂಸ್ಥಾನದ ಸೌರ ಉಗಿ ಅಡುಗೆ ಯೋಜನೆ ಧಾರ್ಮಿಕ ಸಂಸ್ಥೆಗಳಲ್ಲಿಯೇ ಅತ್ಯಂತ ಬೃಹತ್ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರ ಹಾಗೂ ಪ್ರಶಸ್ತಿಗೆ ಪಾತ್ರ - ಕೃಪೆ: ಸಾಯಿಅಮೃತಧಾರಾ.ಕಾಂ



ಶಿರಡಿ ಸಾಯಿಬಾಬಾ ಸಂಸ್ಥಾನದ ಸೌರ ಉಗಿ ಅಡುಗೆ ಯೋಜನೆಯನ್ನು ಭಾರತ ಸರ್ಕಾರದ ಅಸಂಪ್ರದಾಯಿಕ ಇಂಧನಗಳ ಸಚಿವಾಲಯವು ಧಾರ್ಮಿಕ ಸಂಸ್ಥೆಗಳಲ್ಲಿಯೇ ಅತ್ಯಂತ ಬೃಹತ್ ಯೋಜನೆ ಎಂದು ಗುರುತಿಸಿದೆ.ಇದೇ ತಿಂಗಳ 17ನೇ ಡಿಸೆಂಬರ್ 2013, ಮಂಗಳವಾರ ದಂದು ಅಸಂಪ್ರದಾಯಿಕ ಇಂಧನಗಳ ಖಾತೆಯ ಸಚಿವರಾದ ಶ್ರೀ. ಫರೂಕ್ ಅಬ್ದುಲ್ಲಾರವರು ಶಿರಡಿಗೆ ಸಾಯಿಬಾಬಾ ಸಂಸ್ಥಾನಕ್ಕೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ ಎಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ. ಅಜಯ್ ಮೋರೆಯವರು ಸುದ್ಧಿಗಾರರಿಗೆ ತಿಳಿಸಿದರು.

ಸಾಯಿ ಪ್ರಸಾದಾಲಯವು  ಪ್ರಸಾದದ ಅಡುಗೆಯನ್ನು ಮಾಡಲು ಪ್ರತಿನಿತ್ಯ ಬಳಸಲಾಗುತ್ತಿದ್ದ ಇಂಧನದ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ ಪ್ರಪಂಚದಲ್ಲಿಯೇ ಅತಿ ಬೃಹತ್ ಸೌರ ಅಡುಗೆ ಯೋಜನೆಯನ್ನು 30ನೇ ಜುಲೈ 2009 ರಂದು ಶ್ರೀ ಸಾಯಿಬಾಬಾ ಸಂಸ್ಥಾನವು ಪ್ರಾರಂಭಿಸಿತು. ಈ ಯೋಜನೆಯನ್ನು ಪ್ರಾರಂಭಿಸಿದ್ದರಿಂದ ಪ್ರತಿನಿತ್ಯ ಸುಮಾರು 21,000 ರೂಪಾಯಿ ಬೆಲೆಬಾಳುವ 20 ಕೆಜಿ ಅಡುಗೆ ಅನಿಲದ ಉಳಿತಾಯವಾಗುತ್ತಿದೆ. ಹಾಗಾಗಿ, ಯೋಜನೆಯ ಪ್ರಾರಂಭದ ದಿನದಿಂದ ಇಲ್ಲಿಯವರೆಗೆ ಸುಮಾರು 39 ಲಕ್ಷ ರೂಪಾಯಿಗಳ ಉಳಿತಾಯವಾಗಿದೆ. ಮುಂಬರುವ ವರ್ಷಗಳಲ್ಲಿ ಅಡುಗೆ ಅನಿಲವು ಇನ್ನಷ್ಟು ದುಬಾರಿಯಾಗಲಿರುವ ಕಾರಣ ಉಳಿತಾಯದ ಮೊತ್ತವು ಮತ್ತಷ್ಟು ಹೆಚ್ಚಾಗಲಿದೆ ಎಂದು ಶ್ರೀ.ಅಜಯ್ ಮೋರೆಯವರು ತಿಳಿಸಿದರು.

ಭಾರತೀಯ ಬಾಯ್ಲರ್ ಕಾಯಿದೆಯ ಅಡಿಯಲ್ಲಿ ರೂಪಿಸಲಾದ ಈ ಯೋಜನೆಯನ್ನು ಇತ್ತೀಚೆಗಷ್ಟೇ ಸಂಪೂರ್ಣಗೊಳಿಸಲಾಯಿತು. ಹಲವಾರು ಯೋಜನಾ ಸಲಹೆಗಾರರು ಯೋಜನೆಯಲ್ಲಿನ ಸುರಕ್ಷತೆಯ ಲೋಪ-ದೋಷಗಳನ್ನು ಸರಿಪಡಿಸುವ ಸಲುವಾಗಿ  ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರಲ್ಲಿ ಕೊಲ್ಹಾಪುರದ  ಡಾ.ಎಂ.ಜಿ.ತಕ್ವಾಲೆ, ಶ್ರೀ.ಬಿ.ಎನ್.ವಾಕ್ಚುರೆ, ಶ್ರೀ.ಬದ್ಧೆ, ಶ್ರೀ.ಜಿ.ಟಿ.ಚೌಗಲೆ,ಶ್ರೀ.ಬೊಕಾರೆ, ಶ್ರೀ.ಮಾನಕರ್ ಬಷ್ಪಾಕೆ ಸಂಚಲನಾಲಯ್, ಇಂಧನ ಖಾತೆ ಕಾರ್ಯದರ್ಶಿಗಳಾದ ಶ್ರೀ.ತರುಣ್ ಕಪೂರ್, UNDP ಯೋಜನೆಯ ಮ್ಯಾನೇಜರ್ ಡಾ.ಎ.ಕೆ.ಸಿಂಘಾಲ್, ಕೇಂದ್ರ ಬಾಯ್ಲರ್ ಬೋರ್ಡ್ ನ ಕಾರ್ಯದರ್ಶಿಗಳಾದ ಶ್ರೀ.ಟಿ.ಜಿ.ನಾರಾಯಣ್ ಮತ್ತು ಇನ್ನು ಹಲವಾರು ಸಲಹೆಗಾರರು ಪ್ರಮುಖ ಪಾತ್ರವನ್ನು ವಹಿಸಿದ್ದರು. 

ಈ ಯೋಜನೆಯನ್ನು ಒಂದು ಅನನ್ಯ ಪ್ರದರ್ಶನಾತ್ಮಕ ಯೋಜನೆಯೆಂದು ಗುರುತಿಸಿ 13,30,000/- ರೂಪಾಯಿಗಳ ಸಬ್ಸಿಡಿಯನ್ನು ಮಂಜೂರು ಮಾಡಲಾಗಿದೆ. ಅಲ್ಲದೇ, ಶಿರಡಿ ಸಾಯಿಬಾಬಾ ಸಂಸ್ಥಾನವು ಈ ಬೃಹತ್   ಸೌರ ಅಡುಗೆ ಯೋಜನೆಯನ್ನು ಪ್ರಾರಂಭಿಸಿರುವುದನ್ನು ಗುರುತಿಸಿ ಅಸಂಪ್ರದಾಯಿಕ ಇಂಧನಗಳ ಖಾತೆಯ ಸಚಿವರಾದ ಶ್ರೀ.ಫರೂಕ್ ಅಬ್ದುಲ್ಲಾರವರು ಶಿರಡಿಗೆ ಸಾಯಿಬಾಬಾ ಸಂಸ್ಥಾನಕ್ಕೆ ಈ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದಾರೆ.  ಈ ಪ್ರಶಸ್ತಿಯನ್ನು 17ನೇ ಡಿಸೆಂಬರ್ 2013, ಮಂಗಳವಾರ ದಂದು ನವದೆಹಲಿಯ ಅಶೋಕ ಹೋಟೆಲ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ನೀಡಲಾಗುವುದು. ಆ ದಿನ ನಡೆಯಲಿರುವ ಸಮಾರಂಭದಲ್ಲಿ ಉಪಸ್ಥಿತರಿರುವಂತೆ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧಿಕಾರಿಗಳಿಗೆ ಅಸಂಪ್ರದಾಯಿಕ ಇಂಧನಗಳ ಸಚಿವಾಲಯವು ತಾಕೀತು ಮಾಡಿದೆ.

ಈ ಯೋಜನೆಯಲ್ಲಿ ಪಾಲ್ಗೊಂಡ ನಿರ್ವಾಹಕ ಅಧಿಕಾರಿ ಶ್ರೀ.ಉತ್ತಮ್ ಗೋಂದ್ಕರ್, ಮುಖ್ಯ ಯಾಂತ್ರಿಕ ಅಧಿಕಾರಿ ಶ್ರೀ.ಅಮೃತ್  ಜಗ್ತಪ್ ಮತ್ತು ಇನ್ನಿತರ ಕೆಲಸಗಾರರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಹಾಗೂ ಮುಖ್ಯ ನ್ಯಾಯಾಧೀಶರಾದ ಶ್ರೀ.ಜಯಂತ್ ಕುಲಕರ್ಣಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ.ಸಂಜಯ್ ಕುಮಾರ್ ಮತ್ತು ತಹಶೀಲ್ದಾರ್ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ವಿಶೇಷವಾಗಿ ಅಭಿನಂದಿಸಿದ್ದಾರೆ.


ಮರಾಠಿಯಿಂದ ಆಂಗ್ಲ ಭಾಷೆಗೆ ತರ್ಜುಮೆ: ಶ್ರೀ.ರಾಜೇಶ್ ಶೇಲಾತ್ಕರ್, ಮುಂಬೈ
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ
 

Friday, December 13, 2013

ಮಹೀಂದ್ರ ಅಂಡ್ ಮಹೀಂದ್ರ ಗ್ರೂಪ್ ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀ.ಆನಂದ್ ಮಹೀಂದ್ರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಮಹೀಂದ್ರ ಅಂಡ್ ಮಹೀಂದ್ರ ಗ್ರೂಪ್ ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀ.ಆನಂದ್ ಮಹೀಂದ್ರರವರು ಇದೇ ತಿಂಗಳ 13ನೇ ಡಿಸೆಂಬರ್ 2013, ಶುಕ್ರವಾರ ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಕೂಡ ಉಪಸ್ಥಿತರಿದ್ದರು.

 ಕನ್ನಡ ಅನುವಾದ: ಶ್ರೀಕಂಠ ಶರ್ಮ

 

Sunday, December 8, 2013

ಐವತ್ತು ಮಲೇಶಿಯಾ ಸಾಯಿ ಭಕ್ತರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಐವತ್ತು ಮಲೇಶಿಯಾ ಸಾಯಿ ಭಕ್ತರು ಇದೇ ತಿಂಗಳ 8ನೇ ಡಿಸೆಂಬರ್ 2013, ಭಾನುವಾರ ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಮಲೇಶಿಯಾ ಸಾಯಿ ಭಕ್ತರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು ಕೂಡ ಉಪಸ್ಥಿತರಿದ್ದರು. 
 
 
ಕನ್ನಡ ಅನುವಾದ: ಶ್ರೀಕಂಠ ಶರ್ಮ

Wednesday, December 4, 2013

ಶ್ರೀ ಸಾಯಿ ಸಚ್ಚರಿತ್ರೆಯು ಒಂದು ಸಾಯಿ ವಿಶ್ವವಿದ್ಯಾಲಯ: ಶ್ರೀಮತಿ ಉಜ್ವಲ ಬೋರ್ಕರ್

 
 
ಶ್ರೀಮತಿ ಉಜ್ವಲ ಬೋರ್ಕರ್ ರವರು ಸಾಯಿ ಮಹಾಭಕ್ತೆ ದಿವಂಗತ ಚಂದ್ರಬಾಯಿ ಬೋರ್ಕರ್ ರವರ ಮೊಮ್ಮಗಳು. ಇವರ ಜೀವನದಲ್ಲೂ ಸಹ ಅಸಂಖ್ಯಾತ ಸಾಯಿ ಲೀಲೆಗಳು ನಡೆದಿವೆ. ಅಂತಹ ಒಂದು ಸಾಯಿ ಲೀಲೆ ಎಂದರೆ ಶ್ರೀ ಸಾಯಿ ಸಚ್ಚರಿತ್ರೆ  ಎಂದು ಅವರು ಅಭಿಪ್ರಾಯ ಪಡುತ್ತಾರೆ. ಶ್ರೀ ಸಾಯಿ ಸಚ್ಚರಿತ್ರೆಯು ಒಂದು ಸಾಯಿ ವಿಶ್ವವಿದ್ಯಾಲಯ ಹಾಗೂ ಶ್ರೀ ಸಾಯಿಬಾಬಾರವರು ಆ ವಿಶ್ವವಿದ್ಯಾಲಯದ ಕುಲಪತಿಗಳು ಎಂದು ಅವರು ಹೇಳುತ್ತಾರೆ. 

ನಾನು "ಮಾಧವ ರಾವ್ ದೇಶಪಾಂಡೆ, ಬಾಯಿಜಾಬಾಯಿ, ತಾತ್ಯಾ ಕೋತೆ ಪಾಟೀಲ್, ಲಕ್ಷ್ಮಿಬಾಯಿ ಶಿಂಧೆ, ಕಾಕಾ ಸಾಹೇಬ್ ದೀಕ್ಷಿತ್, ಚಂದ್ರಾಬಾಯಿ ಬೋರ್ಕರ್ ಹಾಗೂ ಇನ್ನೂ ಹಲವಾರು ಸಾಯಿಭಕ್ತರು ಹೇಗೆ ತಮ್ಮ ಜೀವನದಲ್ಲಿ ಏಳಿಗೆಯನ್ನು ಕಂಡಿದ್ದಾರೆ ಎಂಬ ವಿಷಯವನ್ನು ಸ್ವತಃ ಮನಗಂಡಿದ್ದೇನೆ ಮತ್ತು ಗೋವಿಂದರಾವ್ ದಾಭೋಲ್ಕರ್ ರವರ ಶ್ರೀ ಸಾಯಿ ಸಚ್ಚರಿತ್ರೆ ಎಂಬ ವಿಶ್ವವಿದ್ಯಾಲಕ್ಕೆ 18ನೇ  ಮೇ  1974 ರಂದು ಸೇರಿಕೊಂಡೆ " ಎಂದು ಹೇಳುತ್ತಾರೆ.

ಸಾಯಿಬಾಬಾರವರು ಗೋವಿಂದರಾವ್ ದಾಭೋಲ್ಕರ್ ರವರನ್ನು ಈ ವಿಶ್ವವಿದ್ಯಾಲಯ ಸ್ಥಾಪಿಸುವಂತೆ ಪ್ರೇರೇಪಿಸಿದರು. ಈ ವಿಶ್ವವಿದ್ಯಾಲಯದಲ್ಲಿ ಒಟ್ಟು 53 ತರಗತಿ (ಅಧ್ಯಾಯ) ಗಳಿವೆ. ಆಶ್ಚರ್ಯದ ಸಂಗತಿ ಏನೆಂದರೆ ದಾಭೋಲ್ಕರ್ ರವರು ಮೊದಲಿಗೆ ಸಾಯಿಬಾಬಾರವರನ್ನು ಕುಲಪತಿಗಳೆಂದು ಸ್ವೀಕರಿಸಲು ಸಿದ್ಧರಿರರಿಲ್ಲ. ಅವರು ಹೆಚ್ಚಿನ  ವ್ಯಾಸಂಗ ಮಾಡಿದ್ದ ಕಾರಣ ಮನುಷ್ಯರು ತಮ್ಮ ಸ್ವಪ್ರಯತ್ನದಿಂದ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯ ಎಂದು ಬಲವಾಗಿ ನಂಬಿದ್ದರು. ಅವರ ಮನಸ್ಸು ಕರ್ಮ ಮಾರ್ಗವೇ ಸರಿಯಾದ ಮಾರ್ಗವೆಂದು ಬಲವಾಗಿ ನಂಬಿತ್ತು.  ಕಾಕಾ ಸಾಹೇಬ್ ದೀಕ್ಷಿತ್, ನಾನಾ ಚಂದೋರ್ಕರ್, ಭಾಟೆ ಮತ್ತು ನೂಲ್ಕರ್ ಎಂಬ ತರಗತಿಯ ವಿದ್ಯಾರ್ಥಿಗಳು ದಾಭೋಲ್ಕರ್ ರವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು. ಈ ವಿದ್ಯಾರ್ಥಿಗಳು ಸಂಪೂರ್ಣ ಧೂಳು ತುಂಬಿದ್ದ ದಾರಿಯ ಮಧ್ಯದಲ್ಲೇ ಸಾಯಿಬಾಬಾರವರಿಗೆ ಸಾಷ್ಟಾಂಗ ಪ್ರಣಾಮವನ್ನು ಸಲ್ಲಿಸುತ್ತಿದ್ದರು. ಇದನ್ನು ನೋಡಿ ದಾಭೋಲ್ಕರ್ ರವರಿಗೆ ಆಶ್ಚರ್ಯವಾಗುತ್ತಿತ್ತು, ಆದರೆ ಅವರ ಮನಸ್ಸಿನ ಮೇಲೆ ಯಾವುದೇ ಪರಿಣಾಮವಾಗಲಿಲ್ಲ. ದೀಕ್ಷಿತ್ ರವರು ಪ್ರಪಂಚವನ್ನೆಲ್ಲಾ ಸುತ್ತಿ ಬಂದಿದ್ದರೂ, ಹಲವಾರು ಧಾರ್ಮಿಕ ಗ್ರಂಥಗಳನ್ನು ಓದಿದ್ದರೂ ಏಕೆ ಹೀಗೆ ಸಾಯಿಬಾಬಾರವರಿಗೆ ತಲೆ ಬಾಗುತ್ತಿದ್ದಾರೆ ಎಂದು ಯೋಚಿಸುತ್ತಿದ್ದರು. ಈ ಬುದ್ಧಿವಂತರು ಬಡ ಫಕೀರನಲ್ಲಿ ಏನನ್ನು ಕಂಡು ಅವನನ್ನು ಗುರುವೆಂದು ಸ್ವೀಕರಿಸಿದ್ದಾರೆ ಎಂದು ಯೋಚಿಸುತ್ತಿದ್ದರು. 

ಆದರೆ ದಾಭೋಲ್ಕರ್ ರವರು ಒಮ್ಮೆ ಸಾಯಿಬಾಬಾರವರು ಬೀಸುವ ಕಲ್ಲಿನ ಮೇಲೆ ಗೋಧಿಯ ಕಾಳುಗಳನ್ನು ಹಾಕಿಕೊಡು ಬೀಸುತ್ತಾ ಕುಳಿತಿರುವುದನ್ನು ನೋಡಿದರು. ಅಲ್ಲದೇ, ಹಾಗೆ ಬೀಸಿ ಪುಡಿ ಮಾಡಿದ ಗೋಧಿಯ ಹಿಟ್ಟನ್ನು ಶಿರಡಿ ಗ್ರಾಮದ ಹೊರಭಾಗದಲ್ಲಿ ಚಲ್ಲಿದ್ದರಿಂದ ಶಿರಡಿ ಗ್ರಾಮದಲ್ಲಿ ಹರಡಿದ್ದ ಕಾಲರಾ ಮಹಾಮಾರಿ ಮಾಯವಾದದ್ದನ್ನು ಸಹ ಕಣ್ಣಾರೆ ಕಂಡರು. ಈ ಘಟನೆ ಅವರ ಮನ ಪರಿವರ್ತನೆಗೆ ಕಾರಣವಾಯಿತು. ಈ ಘಟನೆಯು ಸಾಯಿ ಸಚ್ಚರಿತ್ರೆ ಎಂಬ ವಿಶ್ವವಿದ್ಯಾಲಯದ ಶಂಕುಸ್ಥಾಪನೆಗೆ ನಾಂದಿ ಹಾಡಿತು. ದಾಭೋಲ್ಕರ್ ರವರಿಗೆ ತಮ್ಮಲ್ಲಿ  ಇದ್ದ ನಂಬಿಕೆ ಧೃಡವಾದದ್ದನ್ನು ಕಂಡ ಸಾಯಿಬಾಬಾರವರು ದಾಭೋಲ್ಕರ್ ರವರ ತಲೆಯ ಮೇಲೆ ತಮ್ಮ  ಅಭಯ ಹಸ್ತವನ್ನು ಇರಿಸಿ ಅವರನ್ನು ಆಶೀರ್ವದಿಸಿ ಸಾಯಿ ಸಚ್ಚರಿತ್ರೆಯನ್ನು ಬರೆಯುವುದಕ್ಕೆ ಅನುಮತಿ ನೀಡುವ ಮುಖಾಂತರ ಸಾಯಿ ವಿಶ್ವವಿದ್ಯಾಲಯವೆಂಬ ಕಟ್ಟಡದ ನಿರ್ಮಾಣಕ್ಕೆ ತಮ್ಮ ಹಸಿರು ನಿಶಾನೆಯನ್ನು ತೋರಿಸಿದರು. 

ಈ ವಿಶ್ವವಿದ್ಯಾಲಯದಲ್ಲಿ ಹೇಳಿಕೊಡುವ ಪ್ರಮುಖ ನೀತಿ ಪಾಠಗಳೆಂದರೆ: 1) ಶ್ರದ್ಧೆ ಹಾಗೂ ತಾಳ್ಮೆ ಯಾವಾಗಲೂ ನಿಮ್ಮೊಂದಿಗಿರಲಿ. 2)ಜೀವನದಲ್ಲಿ ನೀವು ನೆಮ್ಮದಿಯಿಂದ ಬಾಳಬೇಕೆಂದುಕೊಂಡಿದ್ದರೆ ಕ್ರಮೇಣವಾಗಿ ಅಭ್ಯಾಸ ಮಾಡುವ ಮುಖಾಂತರ ನಿಮ್ಮ ಬಯಕೆಗಳನ್ನು ಹತ್ತಿಕ್ಕುವುದನ್ನು ಅಥವಾ ಕಡಿಮೆ ಮಾಡಿಕೊಳ್ಳುವುದನ್ನು ಕಲಿಯಿರಿ. ಬೇರೆಯವರ ವಸ್ತುವನ್ನು ಕದಿಯಲು ಹೋಗಬೇಡಿ. ಶ್ರಮಪಟ್ಟು ಕೆಲಸ ಮಾಡಿ. ನೀವು ಬಿತ್ತಿದ್ದನ್ನೇ ಬೆಳೆಯುತ್ತೀರಿ. ಈ ಗುಣಗಳೇ ನಿಮ್ಮನ್ನು ಕಾಪಾಡುತ್ತವೆ. 3)ಒಬ್ಬ ಮನುಷ್ಯ ದುಡಿಯುತ್ತಾನೆ, ಉಳಿದವರು ಅದರ ಫಲವನ್ನು ಪಡೆಯುತ್ತಾರೆ ಎಂಬ ನೀತಿಯು ಇಲ್ಲಿ ನೆಡೆಯುವುದಿಲ್ಲ. ಯಾವ ಪ್ರಯತ್ನವನ್ನೂ ಪಡದೆ ಸುಮ್ಮನೆ ಮನೆಯಲ್ಲಿ ಕುಳಿತು ಮಜಾ ಮಾಡುತ್ತಾ ಲಂಚವನ್ನು ನೀಡಿ ನೀವು ಮೊದಲನೇ ದರ್ಜೆಯನ್ನು ಪಡೆಯಲು ಈ ವಿಶ್ವವಿದ್ಯಾಲಯದಲ್ಲಿ ಅವಕಾಶವಿಲ್ಲ. ಯಾರಿಗೆ ಓದಲು ಇಷ್ಟವಿದೆಯೋ ಅವರಿಗೆ ಸ್ವತಃ ಕುಲಪತಿಗಳೇ ಮಾರ್ಗದರ್ಶನ ಮಾಡುತ್ತಾರೆ ಹಾಗೂ ಶಿಷ್ಯರು ತಮ್ಮ ಮನದಲ್ಲಿ ಏಳುವ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಪಡೆಯುತ್ತಾರೆ.  4)ನಿಮ್ಮ ಅಹಂಕಾರವನ್ನು ಸಂಪೂರ್ಣವಾಗಿ ತೊಡೆದು ಹಾಕಿ. ಯಾರಿಗೆ ಬ್ರಹ್ಮಜ್ಞಾನವನ್ನು ಪಡೆಯಬೇಕೆಂಬ ಆಶೆಯಿರುವುದೋ ಅವರು ಎಲ್ಲಾ ರೀತಿಯ ಮೋಹವನ್ನು ಸಂಪೂರ್ಣವಾಗಿ ಬಿಡಬೇಕಾಗುತ್ತದೆ. 
ಈ ವಿಶ್ವವಿದ್ಯಾಲಕ್ಕೆ ಸೇರಲು ಯಾವುದೇ ಖರ್ಚು ಮಾಡಬೇಕಾಗಿಲ್ಲ ಅಥವಾ ಯಾವುದೇ ಪ್ರವೇಶ ಧನ ಇರುವುದಿಲ್ಲ. ಈ ವಿಶ್ವವಿದ್ಯಾಲಯದ ವಿಶೇಷತೆ ಏನೆಂದರೆ ಇದು ಹಗಲಿರುಳೆನ್ನದೇ ಇಪ್ಪತ್ತನಾಲ್ಕು ಗಂಟೆಗಳೂ ಕಾರ್ಯ ನಿರ್ವಹಿಸುತ್ತದೆ. ನೀವು ಈ ವಿಶ್ವವಿದ್ಯಾಲಯದಲ್ಲಿ ಕಲಿತಿದ್ದನ್ನು ಜೀವನವೆಂಬ ಸ್ಥಳದಲ್ಲಿ ಓರೆಗೆ ಹಚ್ಚಬೇಕಾಗಿರುತ್ತದೆ.

ಪ್ರತಿಯೊಬ್ಬ ವಿದ್ಯಾರ್ಥಿಯು ಅನನ್ಯ ವ್ಯಕ್ತಿತ್ವವನ್ನು ಹೊಂದಿದ್ದು ಚಾಣಾಕ್ಷ ಕುಲಪತಿಗಳು ಪ್ರತಿಯೊಬ್ಬರನ್ನು ಪ್ರತ್ಯೇಕವಾಗಿ ಗಮನವಿಟ್ಟು ನೋಡಿಕೊಳ್ಳುತ್ತಾರೆ. ಕೆಲವರಿಗೆ ಕನಸಿನ ಮುಖಾಂತರವಾಗಿ ಹಾಗೂ ಇನ್ನಿತರರಿಗೆ ವಿವಿಧ ರೀತಿಯಲ್ಲಿ  ಸೂಚನೆ ನೀಡುವ ಮುಖಾಂತರ ಮಾರ್ಗದರ್ಶನ ನೀಡುತ್ತಾರೆ. "ನಾನು ಸಶರೀರನಾಗಿ ಇಲ್ಲಿ ಇದ್ದರೂ, ನೀವು ಸಪ್ತ ಸಾಗರಗಳ ಆಚೆಯಿದ್ದರೂ ಸಹ ನೀವು ಮಾಡುವ ಪ್ರತಿಯೊಂದು ವಿಷಯವನ್ನೂ ನಾನು ಇಲ್ಲಿಂದಲೇ ತಿಳಿದುಕೊಳ್ಳಬಲ್ಲೆ" ಎಂಬ ವಿಷಯವನ್ನು ಜ್ಞಾಪಕದಲ್ಲಿಡಿ" ಎಂದು ಕುಲಪತಿಗಳಾದ ಸಾಯಿಬಾಬಾ ನುಡಿಯುತ್ತಾರೆ.

ಈ ವಿಶ್ವವಿದ್ಯಾಲಯವು ಹಲವಾರು ಸ್ವಾರಸ್ಯಕರವಾದ ಘಟನೆಗಳಿಗೆ ಸಾಕ್ಷಿಯಾಗಿದ್ದು ಅವುಗಳಿಂದ ನಾವು ಕಲಿಯಬೇಕಾದದ್ದು ಬಹಳ ಇದೆ. ಒಮ್ಮೆ ಕಾಕಾ ಸಾಹೇಬ್ ದೀಕ್ಷಿತ್ ರವರನ್ನು ಈ ವಿಶ್ವವಿದ್ಯಾಲದಲ್ಲಿ ಕಠಿಣ ಪರೀಕ್ಷೆಗೆ ಗುರಿಪಡಿಸಲಾಗಿತ್ತು. ಅದೇನೆಂದರೆ, ಅವರು ಗುರುವಿನ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುವರೋ ಅಥವಾ ಇಲ್ಲವೋ ಎಂದು ತಿಳಿಯಬೇಕಾಗಿತ್ತು. ಹೇಗೆ ಬೆಂಕಿಯಲ್ಲಿ ಪುಟವಿಟ್ಟ ನಂತರ ಚಿನ್ನವು ಅಪರಂಜಿಯಾಗುವುದೋ ಅದೇ ರೀತಿ ಕಾಕಾ ಸಾಹೇಬ್ ದೀಕ್ಷಿತರು ಸಾಯಿಬಾಬಾರವರ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಸಾಯಿಬಾಬಾರವರ ಆಜ್ಞೆಯ ಮೇರೆಗೆ ಶುದ್ಧ ಬ್ರಾಹ್ಮಣರಾದ ಕಾಕಾ ಸಾಹೇಬ್ ದೀಕ್ಷಿತರು ಕತ್ತಿಯನ್ನು ಮೇಲಕ್ಕೆ ಎತ್ತಿ ಮೇಕೆಯನ್ನು ಕೊಲ್ಲಲು ಸಿದ್ಧರಾದರು. ಆಗ ಸಾಯಿಬಾಬಾರವರು ಅವರನ್ನು ತಡೆದರು. ಈ ರೀತಿಯಲ್ಲಿ ಕುಲಪತಿಗಳ ಅಂದರೆ ಸಾಯಿಬಾಬಾರವರ ಪರೀಕ್ಷೆಯಲ್ಲಿ ಕಾಕಾ ಸಾಹೇಬ್ ದೀಕ್ಷಿತರು ತೇರ್ಗಡೆ ಹೊಂದಿದರು. ಈ ವಿಶ್ವವಿದ್ಯಾಲಯದಲ್ಲಿ ನಾವು ಮಾಡುವ ಕಾರ್ಯದ ಒಳಿತು ಅಥವಾ  ಕಡುಕಿನ ಬಗ್ಗೆ ವಿವೇಚನೆಯನ್ನು ಮಾಡದೆ ಗುರುವಿನ ಪಾದಗಳಲ್ಲಿ ಸಂಪೂರ್ಣವಾಗಿ ಶರಣಾಗತರಾಗಿ ಗುರುವಿನ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುವುದಷ್ಟೇ ನಮ್ಮ ಕರ್ತವ್ಯ.

ನಾವುಗಳು ಅಹಂಭಾವರಹಿತರಾಗಿ ಕಾರ್ಯವನ್ನು ಮಾಡಿದರೆ ದೈವಸಾಕ್ಷಾತ್ಕಾರ ತುಂಬಾ ಸುಲಭವಾಗಿ ಆಗುತ್ತದೆ. ಪುಂಡಲೀಕ ರಾವ್ ಎಂಬ ವಿದ್ಯಾರ್ಥಿಗೆ "ನೀನು ಅಹಂಕಾರರಹಿತನಾಗಿ ಕಾರ್ಯವನ್ನು ಮಾಡಿದರೆ ಮಾತ್ರ ಆತ್ಮ ಸಾಕ್ಷಾತ್ಕಾರ ಆಗುತ್ತದೆ. ನೀನು ಬಹಳ ಸುಲಭದಲ್ಲಿ ಭವ ಸಾಗರವನ್ನು ದಾಟಬಹುದು. " ಎಂದು ಸಾಯಿಬಾಬಾರವರು ಉಪದೇಶವನ್ನು ಮಾಡಿದ್ದರು. "ಯಾವ ವಿದ್ಯಾರ್ಥಿ ಚೆನ್ನಾಗಿ ಕಲಿಯುತ್ತಾನೋ ಅವನು ತನ್ನ ಯೋಗ್ಯತೆಗೆ ತಕ್ಕಂತೆ ಫಲವನ್ನು ಪಡೆಯುತ್ತಾನೆ. ಪ್ರತಿಯೊಬ್ಬರೂ ಅವರವರ ಯೋಗ್ಯತೆಗೆ ತಕ್ಕಂತೆ ಪ್ರತಿಫಲವನ್ನು ಪಡೆಯುತ್ತಾರೆ. ಈ ವಿಶ್ವವಿದ್ಯಾಲಯದಲ್ಲಿ ಎಲ್ಲರಿಗೂ ಸಹಾಯ ದೊರಯುತ್ತದೆ. ನೀವು ನಿಮ್ಮನ್ನು ಬೇರೆಯವರ ಜೊತೆಗೆ ಹೊಲಿಸಿಕೊಳ್ಳಬೇಡಿ. ಈ ವಿಶ್ವವಿದ್ಯಾಲಯದಲ್ಲಿ ಮೋಸಗಾರರಿಗೆ ಅವಕಾಶವಿಲ್ಲ. ಈ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗುವುದಕ್ಕೆ  ಶ್ರದ್ಧೆ ಹಾಗೂ ಭಕ್ತಿ ಅತ್ಯಾವಶ್ಯಕ. ಈ ಎಲ್ಲಾ ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಯಶಸ್ಸು ಕಂಡಿತ" ಎಂದು ವಿಶ್ವವಿದ್ಯಾಲಯದ ಕುಲಪತಿಗಳು ವಿದ್ಯಾರ್ಥಿಗಳಿಗೆ ಅಭಯ ನೀಡಿದ್ದಾರೆ.

ಈ ವಿಶ್ವವಿದ್ಯಾಲಯದಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿದರೂ ಪಡೆಯಲಾಗದಂತಹ  ಸಂತೋಷ, ಮತ್ತು ಮನಶ್ಯಾಂತಿಯನ್ನು ಹೇಗೆ ಪಡೆಯಬಹುದು ಎಂದು ವಿದ್ಯಾರ್ಥಿಗೆ ಹೇಳಿಕೊಡಲಾಗುತ್ತದೆ. 

ಯಾರೂ ಈಗಿನ ನಮ್ಮ ಸಂತೋಷದ ಕ್ಷಣ ಅಥವಾ ನಮ್ಮ ಹಿಂದಿನ ಕರ್ಮಗಳ ಫಲವನ್ನು ಅನುಭವಿಸುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾವು ನಿರಂತರವಾಗಿ ಮಾಡುವ ಸಾಯಿಬಾಬಾರವರ ನಾಮಸ್ಮರಣೆಯಿಂದ ನಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಬಹುದಾಗಿದೆ.

ಆಂಗ್ಲ ಲೇಖನ ಹಾಗೂ ಛಾಯಾಚಿತ್ರ : ಶಂಷಾದ್  ಆಲಿ ಬೇಗ್, ಪತ್ರಕರ್ತೆ, ನವಿ ಮುಂಬೈ
ಕನ್ನಡ ಅನುವಾದ: ಶ್ರೀಕಂಠ ಶರ್ಮ



Tuesday, December 3, 2013

ಸುಪ್ರಸಿದ್ಧ ಹಿಂದಿ ಚಲನಚಿತ್ರ ನಟ, ನಿರ್ಮಾಪಕ ಹಾಗೂ ನಿರ್ದೇಶಕ ಶ್ರೀ.ರಾಕೇಶ್ ರೋಷನ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ


ಸುಪ್ರಸಿದ್ಧ ಹಿಂದಿ ಚಲನಚಿತ್ರ ನಟ, ನಿರ್ಮಾಪಕ ಹಾಗೂ ನಿರ್ದೇಶಕರಾದ ಶ್ರೀ.ರಾಕೇಶ್ ರೋಷನ್ ರವರು ಇದೇ ತಿಂಗಳ 3ನೇ ಡಿಸೆಂಬರ್ 2013, ಮಂಗಳವಾರ ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಕೂಡ ಉಪಸ್ಥಿತರಿದ್ದರು.
 
 
ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಶ್ರೀ.ರಾಕೇಶ್ ರೋಷನ್ ರವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸನ್ಮಾನಿಸಿದರು.
 
 
ಕನ್ನಡ ಅನುವಾದ:  ಶ್ರೀಕಂಠ ಶರ್ಮ

Monday, December 2, 2013

ಐವತ್ತು ಜರ್ಮನ್ ಸಾಯಿ ಭಕ್ತರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಐವತ್ತು ಜರ್ಮನ್ ಸಾಯಿ ಭಕ್ತರು ಇದೇ ತಿಂಗಳ 2ನೇ ಡಿಸೆಂಬರ್ 2013, ಸೋಮವಾರ ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಜರ್ಮನ್ ಸಾಯಿ ಭಕ್ತರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು ಕೂಡ ಉಪಸ್ಥಿತರಿದ್ದರು. 
 
 
ಕನ್ನಡ ಅನುವಾದ :ಶ್ರೀಕಂಠ ಶರ್ಮ

Saturday, November 30, 2013

ಹಿಂದಿ ಚಲನಚಿತ್ರ ತಾರೆ ಶ್ರೀಮತಿ.ಸೋನಾಲಿ ಕುಲಕರ್ಣಿ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಹಿಂದಿ ಚಲನಚಿತ್ರ ತಾರೆ ಶ್ರೀಮತಿ.ಸೋನಾಲಿ ಕುಲಕರ್ಣಿಯವರು ಇದೇ ತಿಂಗಳ 30ನೇ  ನವೆಂಬರ್  2013, ಶನಿವಾರ ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಕೂಡ ಉಪಸ್ಥಿತರಿದ್ದರು.
 
 
ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಶ್ರೀಮತಿ.ಸೋನಾಲಿ ಕುಲಕರ್ಣಿಯವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸನ್ಮಾನಿಸಿದರು.
 
 
ಕನ್ನಡ ಅನುವಾದ: ಶ್ರೀಕಂಠ ಶರ್ಮ

Friday, November 29, 2013

ಚನ್ನೈನ ಸಾಯಿ ಭಕ್ತೆಯಿಂದ ಸಾಯಿಬಾಬನಿಗೆ ನಲವತ್ತು ಲಕ್ಷ ರೂಪಾಯಿಗಳ ಕಾಣಿಕೆ - ಕೃಪೆ: ಕೃಪೆ: ಸಾಯಿಅಮೃತಧಾರಾ.ಕಾಂ

ಚನ್ನೈನ ಸಾಯಿ ಭಕ್ತೆ ಶ್ರೀಮತಿ. ಸರಳಾ ದೇವಿಯವರು ಇದೇ ತಿಂಗಳ 29ನೇ  ನವೆಂಬರ್  2013, ಶುಕ್ರವಾರ ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬನಿಗೆ 40,000,00/- (ನಲವತ್ತು ಲಕ್ಷ) ರೂಪಾಯಿಗಳ ಕಾಣಿಕೆಯನ್ನು ಅರ್ಪಿಸಿದರು. ಅವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು ಕೂಡ ಉಪಸ್ಥಿತರಿದ್ದರು. 

 
ಕನ್ನಡ ಅನುವಾದ: ಶ್ರೀಕಂಠ ಶರ್ಮ

ಮಹಾರಾಷ್ಟ್ರ ರಾಜ್ಯದ ಜಲ ಸಂಪನ್ಮೂಲ ಸಚಿವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರ ರಾಜ್ಯದ  ಜಲ ಸಂಪನ್ಮೂಲ ಸಚಿವರಾದ ಶ್ರೀ.ಶಶಿಕಾಂತ್ ಶಿಂಧೆಯವರು ಇದೇ ತಿಂಗಳ 29ನೇ  ನವೆಂಬರ್  2013, ಶುಕ್ರವಾರ ದಂದು ತಮ್ಮ ಧರ್ಮಪತ್ನಿಯವರೊಂದಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಜಲ ಸಂಪನ್ಮೂಲ ಸಚಿವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸನ್ಮಾನಿಸಿದರು.
 
 
 ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, November 28, 2013

ಎಸ್. ಕೆ.ವಿ. ಫಿಲಂಸ್ ನ ವತಿಯಿಂದ ಶಿರಡಿಯಲ್ಲಿ ಹಿಂದಿ ಚಲನಚಿತ್ರ "ಶಿರಡಿ ಜೈ ಸಾಯಿರಾಂ" ನ ಧ್ವನಿಸುರಳಿ ಬಿಡುಗಡೆ ಸಮಾರಂಭದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ


ಎಸ್. ಕೆ.ವಿ. ಫಿಲಂಸ್  ಇದೇ ತಿಂಗಳ 28ನೇ ನವೆಂಬರ್ 2013, ಗುರುವಾರ ದಂದು ಮಧ್ಯಾನ್ಹ 3:30 ಕ್ಕೆ ಶಿರಡಿಯ ಸಮಾಧಿ ಮಂದಿರದ ಆವರಣದಲ್ಲಿ ತನ್ನ ಹೊಸ ಹಿಂದಿ ಚಲನಚಿತ್ರ "ಶಿರಡಿ ಜೈ ಸಾಯಿರಾಂ" ನ ಧ್ವನಿಸುರಳಿ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿದೆ. 

ಚಲನಚಿತ್ರದ ಧ್ವನಿಸುರಳಿಯನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಬಿಡುಗಡೆ ಮಾಡಲಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು ವಹಿಸಲಿದ್ದಾರೆ. 

 
ಚಲನಚಿತ್ರವನ್ನು ಶ್ರೀಮತಿ.ವಿ.ರಾಧಿಕಾ ಹಾಗೂ ಶ್ರೀಮತಿ. ಸಾಯಿ ವೆಂಕಟೇಶ್ವರಮ್ಮ ರವರು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. 

ಚಲನಚಿತ್ರದಲ್ಲಿ ಶಿರಡಿ ಸಾಯಿಬಾಬಾರವರ ಅವತರಣ ಕಾಲದಲ್ಲಿ ಜರುಗಿದ ಅಪರೂಪದ ಘಟನೆಗಳನ್ನು ಚಿತ್ರಿಸಲಾಗಿದ್ದು ಇದುವರೆಗೂ  ಸಾಯಿಬಾಬಾರವರ ಬಗ್ಗೆ ಬಿಡುಗಡೆಯಾದ ಯಾವ ಚಿತ್ರದಲ್ಲೂ ಈ ದೃಶ್ಯಗಳನ್ನು ಚಿತ್ರಣ ಮಾಡಿರುವುದಿಲ್ಲ ಎಂದು ನಿರ್ಮಾಪಕರು ಪತ್ರಕರ್ತರಿಗೆ ತಿಳಿಸಿದರು. 

ಸಾಯಿಬಾಬಾರವರು ತಮ್ಮ ಸಮಾಧಿಯಾಗುವುದಕ್ಕೆ ಮುಂಚೆ ಭಕ್ತೆ ಲಕ್ಷ್ಮಿಭಾಯಿಗೆ ಒಂಬತ್ತು ರೂಪಾಯಿಗಳನ್ನು ದಾನವಾಗಿ ನೀಡಿದಂತೆ ಈ ಚಲನಚಿತ್ರದಲ್ಲಿ ಒಂಬತ್ತು ಸುಂದರ ಹಾಡುಗಳಿರುತ್ತವೆ

ಸಾಯಿ ಭಕ್ತರಿಗೆಲ್ಲಾ ತಿಳಿದಿರುವಂತೆ ಸಾಯಿಬಾಬಾರವರು ಎಲ್ಲಾ ತರಹದ ಯೋಗಾಸನಗಳಲ್ಲೂ ಪರಿಣತಿಯನ್ನು ಹೊಂದಿದ್ದರು. ಸಾಯಿಬಾಬಾರವರ ಬಗ್ಗೆ ಇದುವರೆಗೂ ಬಿಡುಗಡೆಯಾಗಿರುವ ಯಾವುದೇ ಚಿತ್ರದಲ್ಲೂ ಚಿತ್ರಣ ಮಾಡಿರದ ಖಂಡ ಯೋಗ ದೃಶ್ಯವನ್ನು ಈ ಚಲನಚಿತ್ರದಲ್ಲಿ ಸೇರಿಸಲಾಗಿದೆ ಎಂದು ನಿರ್ಮಾಪಕರು ತಿಳಿಸಿದರು. 

ಚಲನಚಿತ್ರದ ಕಲಾ ನಿರ್ದೇಶಕರಾದ ಪದ್ಮಶ್ರೀ ತೋಟಾ ತರಾಣಿಯವರು ಈ ಚಲನಚಿತ್ರಕ್ಕೆಂದೇ ವಿಶೇಷವಾದ ಸೆಟ್ ಗಳನ್ನು ನಿರ್ಮಾಣ ಮಾಡಿದ್ದು ಸಾಯಿ ಭಕ್ತರನ್ನು ಸಾಯಿಬಾಬಾರವರ ಅವತರಣ ಕಾಲಕ್ಕೆ ಕೊಂಡೊಯ್ಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ನಿರ್ಮಾಪಕಿಯರು ಅಭಿಪ್ರಾಯ ಪಡುತ್ತಾರೆ. 

ಚಲನಚಿತ್ರದಲ್ಲಿ ತಾತಾ ರೆಡ್ಡಿ, ನಾರಾಯಣ ರಾವ್, ರಾಜಕುಮಾರ್, ದಿವಂಗತ ಸುತ್ತಿವೇಲು, ಸೂರ್ಯ ಭಗವಾನ್ ರಾಜ್, ಮುರಳಿ, ಭಾವನಾ, ವಿಜಯ್ ಕುಟ್ಟಿ  ಹಾಗೂ ಇನ್ನೂ ಹಲವಾರು ಕಲಾವಿದರು ಪಾತ್ರವಹಿಸುತ್ತಿದ್ದು ಛಾಯಾಗ್ರಹಣ ಹಾಗೂ ನಿರ್ದೇಶನದ ಹೊಣೆಯನ್ನು ಶ್ರೀ.ಪಿ.ಭಾಸ್ಕರ ಬಾಬಾರವರು ಹೊತ್ತಿದ್ದಾರೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

ಖ್ಯಾತ ಹಿಂದಿ ಚಲನಚಿತ್ರ ತಾರೆ ಶ್ರೀಮತಿ.ಮೌಸಮಿ ಚಟರ್ಜಿ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ


ಖ್ಯಾತ ಹಿಂದಿ ಚಲನಚಿತ್ರ ತಾರೆ ಶ್ರೀಮತಿ.ಮೌಸಮಿ ಚಟರ್ಜಿಯವರು ಇದೇ ತಿಂಗಳ 28ನೇ  ನವೆಂಬರ್  2013, ಗುರುವಾರ ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಕೂಡ ಉಪಸ್ಥಿತರಿದ್ದರು.


 ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಶ್ರೀಮತಿ.ಮೌಸಮಿ ಚಟರ್ಜಿಯವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸನ್ಮಾನಿಸಿದರು.


ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, November 23, 2013

ಮಹಾರಾಷ್ಟ್ರ ರಾಜ್ಯದ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರ ರಾಜ್ಯದ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವರಾದ ಶ್ರೀ.ರಾಜೇಶ್ ತೋಪೆಯವರು ಇದೇ ತಿಂಗಳ 23ನೇ  ನವೆಂಬರ್  2013, ಶನಿವಾರ ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ  ಶ್ರೀ.ಮೋಹನ್ ಯಾದವ್ ರವರು ಕೂಡ ಉಪಸ್ಥಿತರಿದ್ದರು.

 
ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಶಿಕ್ಷಣ ಸಚಿವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸನ್ಮಾನಿಸಿದರು.


 ಕನ್ನಡ ಅನುವಾದ: ಶ್ರೀಕಂಠ ಶರ್ಮ

Friday, November 22, 2013

ಮರಾಠಿ ಚಲನಚಿತ್ರ ನಟ ಶ್ರೀ. ಭರತ್ ಜಾಧವ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಖ್ಯಾತ ಮರಾಠಿ ಚಲನಚಿತ್ರ ನಟರಾದ  ಶ್ರೀ.ಭರತ್ ಜಾಧವ್ ರವರು ಇದೇ ತಿಂಗಳ 22ನೇ ನವೆಂಬರ್  2013, ಶುಕ್ರವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ ಶಿರಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.  
 
 
 ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, November 21, 2013

ಅತಿ ಸಣ್ಣ ಹಾಗೂ ಸಣ್ಣ ಕೈಗಾರಿಕೆ ಕೇಂದ್ರ ಸಚಿವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಅತಿ ಸಣ್ಣ ಹಾಗೂ ಸಣ್ಣ ಕೈಗಾರಿಕೆ ಕೇಂದ್ರ ಸಚಿವರಾದ ಶ್ರೀ.ಕೆ.ಹೆಚ್. ಮುನಿಯಪ್ಪನವರು ಇದೇ ತಿಂಗಳ 21ನೇ ನವೆಂಬರ್  2013, ಗುರುವಾರ ದಂದು ತಮ್ಮ  ಪರಿವಾರದೊಂದಿಗೆ ಶಿರಡಿಗೆ ಭೇಟಿ ನೀಡಿ ಶ್ರೀ ಶಿರಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.  ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಕೂಡ ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Wednesday, November 20, 2013

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಉಚಿತ ದರ್ಶನ ಹಾಗೂ ಆರತಿ ಪಾಸುಗಳಿಗೆ ಕಡಿವಾಣ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿಬಾಬಾ ಸಂಸ್ಥಾನವು ಇದುವರೆಗೆ ಚಾಲ್ತಿಯಲ್ಲಿದ್ದ ಉಚಿತ ದರ್ಶನ ಹಾಗೂ ಆರತಿ ಪಾಸುಗಳಿಗೆ ಕಡಿವಾಣ ಹಾಕಲು ನಿರ್ಧರಿಸಿ ಇದೇ ತಿಂಗಳ 18ನೇ ನವೆಂಬರ್ 2013 ರಿಂದ ಎಲ್ಲಾ ನಾಲ್ಕು ಆರತಿಗಳಿಗೂ ಶುಲ್ಕ ವಿಧಿಸಲು ನಿರ್ಧರಿಸಿದೆ ಎಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ. ಅಜಯ್ ಮೋರೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

ಶಿರಡಿ ಸಾಯಿಬಾಬಾ ಸಂಸ್ಥಾನದ ಆಡಳಿತ ಸಮಿತಿಯ ಸದಸ್ಯರುಗಳು 26ನೇ ಜನವರಿ 2010 ರಂದು ಸಭೆ ನಡೆಸಿ ಶನಿವಾರ ಹಾಗೂ ಭಾನುವಾರಗಳಂದು ಶುಲ್ಕ ಸಹಿತ ದರ್ಶನ ಹಾಗೂ ಆರತಿ ಪಾಸುಗಳನ್ನು ಸಾರ್ವಜನಿಕ ಸಂಪರ್ಕ ಕಾರ್ಯಾಲಯದ ವತಿಯಿಂದ ನೀಡಲು ನಿರ್ಧಾರವನ್ನು ಕೈಗೊಂಡಿದ್ದರು. ಸಮಿತಿಯ ಈ ನಿರ್ಧಾರದಿಂದ ಶನಿವಾರ ಹಾಗೂ ಭಾನುವಾರಗಳಂದು ಶುಲ್ಕ ಸಹಿತ ದರ್ಶನ ಹಾಗೂ ಆರತಿ ಪಾಸುಗಳನ್ನು ಪಡೆಯುವವರ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು.  ಇದರಿಂದ ಸಾಮಾನ್ಯ ಸರತಿಯಲ್ಲಿ ಬಂದು ದರ್ಶನ ಪಡೆಯುವವರಿಗೆ ಲಾಭವಾಗಿತ್ತು ಹಾಗೂ ಸೋಮವಾರದಿಂದ ಶುಕ್ರವಾರದವರೆಗೆ ಶುಲ್ಕ ಸಹಿತ ದರ್ಶನ ಹಾಗೂ ಆರತಿ ಪಾಸುಗಳನ್ನು ಪಡೆಯುವವರ ಸಂಖ್ಯೆಯು ಹೆಚ್ಚಾಗಿತ್ತು. 

ಮೇಲಿನ ಈ ಬೆಳವಣಿಗೆಗಳನ್ನು ಗಮನಿಸಿದ ಶ್ರೀ ಸಾಯಿಬಾಬಾ ಸಂಸ್ಥಾನ, ಶಿರಡಿಯ ತ್ರಿಸದಸ್ಯ ಸಮಿತಿಯು ಇದೇ ತಿಂಗಳ 14ನೇ ನವೆಂಬರ್ 2013 ರಂದು ಸಭೆ ಸೇರಿ 18ನೇ ನವೆಂಬರ್ 2013 ರಿಂದ ಎಲ್ಲಾ ನಾಲ್ಕು ಆರತಿಗಳಿಗೂ ಶುಲ್ಕ ವಿಧಿಸಲು ನಿರ್ಧಾರ ಕೈಗೊಂಡಿತು. ಆದ ಕಾರಣ ಮುಂದಿನ ದಿನಗಳಲ್ಲಿ  ಸಾಮಾನ್ಯ ಸರತಿಯಲ್ಲಿ ಬಂದು ದರ್ಶನ ಪಡೆಯುವವರನ್ನು ಹೊರತುಪಡಿಸಿ ವಿಐಪಿ ವರ್ಗೀಕರಣಕ್ಕೆ ಸೇರಿದವರನ್ನೂ ಒಳಗೊಂಡು ಎಲ್ಲರೂ ನಾಲ್ಕು ಆರತಿಗಳಿಗೂ ಶುಲ್ಕ ನೀಡಬೇಕಾಗಿರುತ್ತದೆ. 

ಶ್ರೀ ಸಾಯಿಬಾಬಾ ಸಂಸ್ಥಾನ, ಶಿರಡಿಯ ತ್ರಿಸದಸ್ಯ ಸಮಿತಿಯ ಈ ನಿರ್ಧಾರದಿಂದ ಸಾಮಾನ್ಯ ಸರತಿಯಲ್ಲಿ ಬಂದು ದರ್ಶನ ಪಡೆಯುವ  ಹಾಗೂ ಆರತಿಯನ್ನು ನೋಡ ಬಯಸುವ  ಸಾಯಿ ಭಕ್ತರಿಗೆ ಬಹಳ ಅನುಕೂಲವಾಗುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ