Wednesday, April 29, 2015

ಮಹಾರಾಷ್ಟ್ರ ರಾಜ್ಯದ ಪರಿಸರ ಖಾತೆ ಸಚಿವ ಶ್ರೀ.ರಾಮದಾಸ್ ಕದಂರವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರ ರಾಜ್ಯದ ಪರಿಸರ ಖಾತೆ ಸಚಿವ ಶ್ರೀ.ರಾಮದಾಸ್ ಕದಂರವರು ಇದೇ ತಿಂಗಳ 29ನೇ ಏಪ್ರಿಲ್ 2015, ಬುಧವಾರದಂದು  ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ; ಶ್ರೀಕಂಠ ಶರ್ಮ 

Sunday, April 26, 2015

ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಅಧ್ಯಕ್ಷ ಶ್ರೀ.ರಾಜ್ ಠಾಕ್ರೆಯವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಅಧ್ಯಕ್ಷ ಶ್ರೀ.ರಾಜ್ ಠಾಕ್ರೆಯವರು ಇದೇ ತಿಂಗಳ 26ನೇ ಏಪ್ರಿಲ್ 2015, ಭಾನುವಾರದಂದು  ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಮಹಾರಾಷ್ಟ್ರ ರಾಜ್ಯದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಶ್ರೀ.ಚಂದ್ರಶೇಖರ್ ಬವನಕುಲೆ ರವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರ ರಾಜ್ಯದ ಹೊಸ ಮತ್ತು ನವೀಕರಿಸಬಹುದಾದ ಇಂಧನ  ಖಾತೆ ರಾಜ್ಯ ಸಚಿವ ಶ್ರೀ.ಚಂದ್ರಶೇಖರ್ ಬವನಕುಲೆಯವರು ಇದೇ ತಿಂಗಳ 26ನೇ ಏಪ್ರಿಲ್ 2015, ಭಾನುವಾರದಂದು  ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Thursday, April 23, 2015

ಮಹಾರಾಷ್ಟ್ರ ರಾಜ್ಯದ ಗೃಹ, ಕಾರ್ಮಿಕ ಮತ್ತು ಗಣಿ ಖಾತೆ ರಾಜ್ಯ ಸಚಿವ ಶ್ರೀ.ಪ್ರಕಾಶ್ ಮೆಹ್ತಾ ರವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರ ರಾಜ್ಯದ ಗೃಹ, ಕಾರ್ಮಿಕ  ಮತ್ತು ಗಣಿ ಖಾತೆ ರಾಜ್ಯ ಸಚಿವ ಶ್ರೀ.ಪ್ರಕಾಶ್ ಮೆಹ್ತಾ ರವರು ಇದೇ ತಿಂಗಳ 23ನೇ ಏಪ್ರಿಲ್ 2015, ಗುರುವಾರ  ದಂದು  ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Saturday, April 18, 2015

ಮಹಾರಾಷ್ಟ್ರ ರಾಜ್ಯದ ಹಣಕಾಸು, ಯೋಜನೆ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವ ಶ್ರೀ.ದೀಪಕ್ ಕೇಸರಕರ ರವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರ ರಾಜ್ಯದ ಹಣಕಾಸು, ಯೋಜನೆ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವರಾದ ಶ್ರೀ.ದೀಪಕ್ ಕೇಸರಕರ ರವರು ಇದೇ ತಿಂಗಳ 18ನೇ ಏಪ್ರಿಲ್ 2015, ಶನಿವಾರ ದಂದು  ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Saturday, April 11, 2015

ಖ್ಯಾತ ಚಲನಚಿತ್ರ ತಾರೆ ಶ್ರೀಮತಿ.ಜಯಪ್ರದಾ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಖ್ಯಾತ ಪಂಚಭಾಷಾ ಚಲನಚಿತ್ರ ತಾರೆ ಶ್ರೀಮತಿ.ಜಯಪ್ರದಾರವರು ಇದೇ ತಿಂಗಳ 11ನೇ ಏಪ್ರಿಲ್ 2015, ಶನಿವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ.ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Friday, April 3, 2015

4ನೇ ಏಪ್ರಿಲ್ 2015, ಶನಿವಾರದಂದು ಚಂದ್ರಗ್ರಹಣದ ಪ್ರಯುಕ್ತ ದರ್ಶನ ಮತ್ತು ಆರತಿಯ ಸಮಯದಲ್ಲಿ ಬದಲಾವಣೆ - ಕೃಪೆ: ಸಾಯಿಅಮೃತಧಾರಾ.ಕಾಂ

4ನೇ ಏಪ್ರಿಲ್ 2015, ಶನಿವಾರದಂದು ಮಧ್ಯಾನ್ಹ  3.30 ರಿಂದ  ರಾತ್ರಿ 7.15 ರವರೆಗೆ  ಖಗ್ರಾಸ ಚಂದ್ರಗ್ರಹಣ ಸಂಭವಿಸಲಿರುವ ಪ್ರಯುಕ್ತ  ದರ್ಶನ ಮತ್ತು ಆರತಿಯ ಸಮಯದಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆಯಿರುತ್ತದೆ ಎಂದು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಇದೇ ತಿಂಗಳ 1ನೇ ಏಪ್ರಿಲ್ 2015, ಬುಧವಾರ ದಂದು ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಸುದ್ಧಿಗಾರರಿಗೆ ತಿಳಿಸಿದರು. 

ಪ್ರತಿ ವರ್ಷದಂತೆ, ಈ ವರ್ಷವೂ 4ನೇ ಏಪ್ರಿಲ್ 2015, ಶನಿವಾರದಂದು ಶ್ರೀ ಮಾರುತಿ ಮಂದಿರದಲ್ಲಿ ಹನುಮಾನ್ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ದಿನದಂದು ಖಗ್ರಾಸ ಚಂದ್ರಗ್ರಹಣ ಸಂಭವಿಸಲಿರುವ ಪ್ರಯುಕ್ತ  ಸಮಾಧಿ ಮಂದಿರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಇರುತ್ತದೆ. ಮಧ್ಯಾನ್ಹ 3.30 ದಿಂದ ಸರಿಯಾಗಿ ಹದಿನೈದು ನಿಮಿಷಗಳ ಕಾಲ ದರ್ಶನವನ್ನು ಸ್ಥಗಿತಗೊಳಿಸಲಾಗುತ್ತದೆ. ಮಧ್ಯಾನ್ಹ 3.45 ರಿಂದ ರಾತ್ರಿ 7.15 ರವರೆಗೆ ಸಂಸ್ಥಾನದ ಪುರೋಹಿತರುಗಳು ಮಂತ್ರೊಚ್ಛಾರಣೆಯನ್ನು ಮಾಡಲಿದ್ದಾರೆ. ಈ ಸಮಯದಲ್ಲಿ ಸಾಯಿ ಭಕ್ತರಿಗೆ ಸಮಾಧಿ ಮಂದಿರದ ಒಳಭಾಗಕ್ಕೆ ಪ್ರವೇಶವಿರುವುದಿಲ್ಲ ಎಂದು ಶ್ರೀ ಜಾಧವ್ ತಿಳಿಸಿದರು. 


ಗ್ರಹಣದ ಸಮಾಯದಲ್ಲಿ ಸಾಯಿ ಭಕ್ತರು ನಂದಿಯ ವಿಗ್ರಹದವರೆಗೆ ಸರತಿ ಸಾಲಿನಲ್ಲಿ ಬಂದು ದೂರದಿಂದಲೇ ಸಾಯಿಬಾಬಾರವರ ದರ್ಶನ ಮಾಡಿ ಅಲ್ಲಿಯೇ ಪಕ್ಕದಲ್ಲಿರುವ ದಕ್ಷಿಣ ದ್ವಾರದ ಮೂಲಕ ಹೊರಗೆ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಮಂತ್ರೊಚ್ಛಾರಣೆ ಮುಗಿದ ನಂತರ ರಾತ್ರಿ  7.25 ಕ್ಕೆ ಶ್ರೀ ಸಾಯಿಬಾಬಾರವರ ವಿಗ್ರಹಕ್ಕೆ ಮಂಗಳಸ್ನಾನವನ್ನು ಹಮ್ಮಿಕೊಳ್ಳಲಾಗಿದೆ.  ರಾತ್ರಿ 7.35 ಕ್ಕೆ ಶಿರಡಿ ಮಾಜೇ ಪಂಢರಪುರ ಛೋಟಾ ಆರತಿ ನಡೆಯುತ್ತದೆ. ರಾತ್ರಿ 7.45 ಕ್ಕೆ ಧೂಪಾರತಿ ನಡೆಸಲಾಗುತ್ತದೆ. ಆನಂತರ ಎಂದಿನಂತೆ ದರ್ಶನ ಪುನಃ ಪ್ರಾರಂಭವಾಗುತ್ತದೆ. ರಾತ್ರಿ 10.30 ಕ್ಕೆ ಎಂದಿನಂತೆ ಶೇಜಾರತಿ ಕಾರ್ಯಕ್ರಮವಿರುತ್ತದೆ. ಸಾಯಿ ಭಕ್ತರು ಸಮಾಧಿ ಮಂದಿರದ ಕಾರ್ಯಕ್ರಮದಲ್ಲಿ ಆಗಿರುವ ಸ್ವಲ್ಪ ಮಟ್ಟಿನ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಂತೆಯೇ ಸಹಕರಿಸಬೇಕೆಂದು ಶ್ರೀ.ರಾಜೇಂದ್ರ ಜಾಧವ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು 
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ 

Wednesday, April 1, 2015

ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ನಿವೃತ್ತ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀ.ಬಾವು ಸಾಹೇಬ್ ದಾಜೀಬ್ ಸಬಲೆಯವರಿಗೆ ಸನ್ಮಾನ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನವು ಇತ್ತೀಚಿಗೆ ಸೇವೆಯಿಂದ ನಿವೃತ್ತರಾದ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀ. ಬಾವು ಸಾಹೇಬ್ ದಾಜೀಬ್ ಸಬಲೆಯವರಿಗೆ ಇದೇ ತಿಂಗಳ 1ನೇ ಏಪ್ರಿಲ್ 2015, ಬುಧವಾರ ದಂದು ಸನ್ಮಾನ ಮಾಡಿತು. ಈ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀ.ಸುಭಾಷ್ ಗಾರ್ಕಲ್, ಶ್ರೀ.ಸುರ್ಯಭಾನು ಗಮೆ , ಶ್ರೀ.ಉತ್ತಮರಾವ್ ಗೋಂದ್ಕರ್ ಮತ್ತು ಶ್ರೀ.ದಿಲೀಪ್ ಉಗಳೆ ಯವರುಗಳು ಕೂಡ ಉಪಸ್ಥಿತರಿದ್ದರು.  


ಕನ್ನಡ ಅನುವಾದ: ಶ್ರೀಕಂಠ ಶರ್ಮ