Sunday, January 2, 2011

ಸಮಾಧಿ ನಂತರದ ಸಾಯಿಬಾಬಾನ ಲೀಲೆಗಳ ಕನ್ನಡ ಪುಸ್ತಕ "ಶ್ರೀ ಸಾಯಿಯ ಪವಾಡ" ಬಿಡುಗಡೆ - 1ನೇ ಜನವರಿ 2011 - ಕೃಪೆ: ಸಾಯಿ ಅಮೃತಧಾರಾ.ಕಾಂ 

ಸಾಯಿ ಭಕ್ತರಿಗೊಂದು ಸಿಹಿ ಸುದ್ದಿ. ಶಿರಡಿ ಸಾಯಿಬಾಬಾರವರ ಸಮಾಧಿ ನಂತರದ ಲೀಲೆಗಳನ್ನು ಸಂಗ್ರಹ ಹೊಂದಿರುವ  "ಶ್ರೀ ಸಾಯಿಯ ಪವಾಡ" ಎನ್ನುವ ಕನ್ನಡ ಪುಸ್ತಕವನ್ನು ಇದೇ ತಿಂಗಳ 1ನೇ ಜನವರಿ 2011 ರಂದು ಬೆಂಗಳೂರಿನ ತ್ಯಾಗರಾಜನಗರದ ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರದ ಅಧ್ಯಕ್ಷ ಶ್ರೀ.ಶೇಷಾದ್ರಿಯವರು ಬಿಡುಗಡೆ ಮಾಡಿದರು. 

ಈ ಸುಂದರ ಸಾಯಿ ಲೀಲೆಗಳ ಸಂಗ್ರಹವನ್ನು ಹೈದರಾಬಾದ್ ನ ಸಾಯಿಭಕ್ತರಾದ  ಶ್ರೀಯುತ.ಅಲೇಟಿ ರಣಧೀರ್ ಕುಮಾರ್ ರವರು ತಮ್ಮ ಅಂತರ್ಜಾಲ ತಾಣ http://www.miraclesofsai.org/ ಮುಖಾಂತರ ಹಾಗೂ ಸಾಯಿಭಕ್ತರ ನೇರ ಸಂಪರ್ಕದ ಮುಖೇನ ಸಂಗ್ರಹಿಸಿ ಸಾಯಿಭಕ್ತರಿಗಾಗಿ ಪ್ರಕಟಿಸಿರುತ್ತಾರೆ. 


ಈ ಸುಂದರ ಸಾಯಿಲೀಲೆಗಳ ಪುಸ್ತಕವು ಕನ್ನದಲ್ಲಿ ಮಾತ್ರವಲ್ಲದೇ ಇಂಗ್ಲೀಷ್, ತೆಲುಗು, ತಮಿಳು ಭಾಷೆಗಳಲ್ಲಿ ಕೂಡ ಲಭ್ಯವಿದೆ. ಅಲ್ಲದೇ, ಹಿಂದಿ ಮತ್ತು ಓರಿಯಾ ಭಾಷೆಗಳಲ್ಲಿ ಕೂಡ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. 

ಈ ಪುಸ್ತಕದ ಪ್ರತಿಯನ್ನು ಪಡೆಯಲು ಇಚ್ಚಿಸುವ ಸಾಯಿಭಕ್ತರು ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದು:

ಶ್ರೀ.ಅಲೇಟಿ ರಣಧೀರ್ ಕುಮಾರ್
ಸದ್ಗುರು ಪಬ್ಲಿಕೇಷನ್ಸ್,
303,  ಕ್ಯುಪಿಡ್ ಕರ್ವ್ ಬಹುಮಹಡಿ ಸಂಕೀರ್ಣ,
ರೋಡ್ ನಂ.1, ಬಂಜಾರ ಹಿಲ್ಸ್,
ಹೈದರಾಬಾದ್ -500 034
ಆಂಧ್ರ ಪ್ರದೇಶ .
ದೂರವಾಣಿ : +91 40 3062 7888 / 99851 22 888 / 9618546012
ಇಮೇಲ್ : mymiracle@miraclesofsai.org / miraclesofsai@gmail.com
ವೆಬ್ ಸೈಟ್ : http://www.miraclesofsai.org/

ಕನ್ನಡ ಅನುವಾದ:ಶ್ರೀಕಂಠ ಶರ್ಮ

No comments:

Post a Comment