Sunday, January 30, 2011

ಬೆಂಗಳೂರಿನ ಸಾಯಿಬಾಬಾ ಮಂದಿರ - ಶ್ರೀ ಸಾಯಿಬಾಬಾ  ಮಂದಿರ, ದತ್ತಾತ್ರೇಯ ದೇವಸ್ಥಾನದ ಮುಖ್ಯರಸ್ತೆ, ವಿವೇಕಾನಂದ ಬ್ಲಾಕ್, ಈಜುಕೊಳ ಬಡಾವಣೆ, ಮಲ್ಲೇಶ್ವರಂ, ಬೆಂಗಳೂರು-560 003. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ .

ಈ ಮಂದಿರವು ಬೆಂಗಳೂರಿನ ಪ್ರಸಿದ್ದ ಬಡಾವಣೆಯಾದ ಮಲ್ಲೇಶ್ವರಂನ ಈಜುಕೊಳ ಬಡಾವಣೆಯಲ್ಲಿರುತ್ತದೆ. ಈ ಮಂದಿರದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

ಮಂದಿರದ ವಿಶೇಷತೆಗಳು:
  • ಈ ಮಂದಿರವನ್ನು 2005ನೇ ಇಸವಿಯಲ್ಲಿ ಶ್ರೀ.ರಮೇಶ್ ರವರು ಸ್ಥಳೀಯ ಆಟೋ ಚಾಲಕರ ಸಂಘದವರು ಮತ್ತು ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಪ್ರಾರಂಭಿಸಿರುತ್ತಾರೆ.  
  • ಈ ಮಂದಿರದಲ್ಲಿ ಸುಂದರ ಅಮೃತ ಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ.
  • ಈ ಮಂದಿರವು ದತ್ತಾತ್ರೇಯ ದೇವಸ್ಥಾನದ ಬಸ್ ನಿಲ್ದಾಣದ ಪಕ್ಕದಲ್ಲಿ ರಸ್ತೆಯ ಬದಿಯಲ್ಲಿ ಸಣ್ಣ ಗುಡಿಯನ್ನು ಕಟ್ಟಿ ಪ್ರತಿಷ್ಟಾಪನೆ ಮಾಡಿರುತ್ತಾರೆ.   





ದೇವಾಲಯದಲ್ಲಿ ನಡೆಯುವ ಸೇವೆಯ ವಿವರಗಳು 
  1. ಪ್ರತಿ ಗುರುವಾರ ಸಂಜೆ 7:30 ಕ್ಕೆ ಸಾಯಿಬಾಬಾರವರಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ.
  2. ಎಲ್ಲಾ ಹಬ್ಬದ ದಿನಗಳಲ್ಲಿ ಸಾಯಿಬಾಬಾರವರಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 
ದತ್ತಾತ್ರೇಯ ದೇವಸ್ಥಾನದ ಬಸ್ ನಿಲ್ದಾಣದ ಪಕ್ಕದಲ್ಲಿ ಮತ್ತು ಸಾಂಸ್ಕೃತಿಕ ಕೇಂದ್ರದ ಎದುರುಗಡೆ. ಈಜುಕೊಳ ಬಡಾವಣೆ.  

ವಿಳಾಸ: 
ಶ್ರೀ ಸಾಯಿಬಾಬಾ  ಮಂದಿರ, 
ದತ್ತಾತ್ರೇಯ ದೇವಸ್ಥಾನದ ಮುಖ್ಯರಸ್ತೆ, ವಿವೇಕಾನಂದ ಬ್ಲಾಕ್, 
ಈಜುಕೊಳ ಬಡಾವಣೆ, ಮಲ್ಲೇಶ್ವರಂ, ಬೆಂಗಳೂರು-560 003. ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ರಮೇಶ್ / ಶ್ರೀ.ಪ್ರಭು / ಶ್ರೀ.ಶ್ರೀನಾಥ್ - ಅರ್ಚಕರು.

ದೂರವಾಣಿ: 
+91 98809 58988 – ಶ್ರೀ.ಪ್ರಭು  +91 94480 01696 –ಶ್ರೀ.ಶ್ರೀನಾಥ್, ಅರ್ಚಕರು.

ಮಾರ್ಗಸೂಚಿ:   
ಈಜು ಕೊಳ ಬಡಾವಣೆ ಮುಖ್ಯ ರಸ್ತೆಯಲ್ಲಿ ದತ್ತಾತ್ರೇಯ ದೇವಸ್ಥಾನದ ಬಸ್ ನಿಲ್ದಾಣದ ಬಳಿ ಇಳಿಯುವುದು. ದೇವಾಲಯವು ಬಸ್ ನಿಲ್ದಾಣದ ಪಕ್ಕದಲ್ಲಿ ಮತ್ತು ಸಾಂಸ್ಕೃತಿಕ ಕೇಂದ್ರದ ಎದುರುಗಡೆ ಇದೆ. ಬಸ್ ಗಳು ಮೆಜಿಸ್ಟಿಕ್ ನಿಂದ : 104 ಗಿರಿನಗರದಿಂದ : 36B, ವಿಜಯನಗರದಿಂದ: 176 ಮಹಾಲಕ್ಷ್ಮಿ ಬಡಾವಣೆಯಿಂದ: 187.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment