Thursday, December 30, 2010

ಬೆಂಗಳೂರಿನ ಸಾಯಿಬಾಬಾ ಮಂದಿರ - ಶ್ರೀ.ಸಾಯಿರಾಮ ದೇವಸ್ಥಾನ, ಓಂ ಶಕ್ತಿ ದೇವಸ್ಥಾನ ಟ್ರಸ್ಟ್ ( ನೋಂದಣಿ), 7ನೇ ಮುಖ್ಯರಸ್ತೆ, 12ನೇ ಅಡ್ಡರಸ್ತೆ, ಗುರುರಾಜ ಬಡಾವಣೆ, ಬನಶಂಕರಿ 3ನೇ ಹಂತ, ತ್ಯಾಗರಾಜನಗರ, ಬೆಂಗಳೂರು-560 028. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ 

ಈ ದೇವಾಲಯವು ಬೆಂಗಳೂರಿನ ದಕ್ಷಿಣ ಭಾಗದ ಪ್ರತಿಷ್ಟಿತ ಬಡಾವಣೆಯಾದ ಬನಶಂಕರಿ 3ನೇ ಹಂತದಲ್ಲಿದೆ. ಈ ದೇವಾಲಯದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ. 

ದೇವಾಲಯದ ವಿಶೇಷತೆಗಳು: 

ಓಂ ಶಕ್ತಿ ದೇವಾಲಯದ ಭೂಮಿಪೂಜೆಯು 12ನೇ ಮಾರ್ಚ್ 1991 ರಲ್ಲಿ ಹಾಗೂ ಶಿರಡಿ ಸಾಯಿಬಾಬಾ ದೇವಾಲಯದ ಭೂಮಿ ಪೂಜೆಯು 12ನೇ ಮಾರ್ಚ್ 2009 ರಲ್ಲಿ ನಡೆಯಿತು. 

ಓಂ ಶಕ್ತಿ ದೇವಾಲಯವನ್ನು 12ನೇ ಮಾರ್ಚ್ 1992 ರಂದು ಆದಿಚುಂಚನಗಿರಿ ಮಠದ ಸ್ವಾಮೀಜಿಯವರು ಉದ್ಘಾಟಿಸಿದರು. ಶಿರಡಿ ಸಾಯಿಬಾಬಾ ದೇವಾಲಯವನ್ನು 17ನೇ ಅಕ್ಟೋಬರ್ 2010 ರ ವಿಜಯದಶಮಿಯಂದು ಶ್ರೀಮತಿ.ಶ್ರೀದೇವಿ ಮತ್ತು ಶ್ರೀ.ಮಾರುತಿಯವರು ಉದ್ಘಾಟಿಸಿದರು. 

ಈ ದೇವಾಲಯದ ಪ್ರಾಂಗಣದಲ್ಲಿ ಓಂ ಶಕ್ತಿಯ ಎರಡು ದೇವಾಲಯಗಳು (ಒಂದು ಸಣ್ಣ ವಿಗ್ರಹ ಮತ್ತೊಂದು ದೊಡ್ಡ ವಿಗ್ರಹ), ಪಂಚಮುಖಿ ಅಂಜನೇಯನ ದೇವಾಲಯ, ಶಿವನ ದೇವಾಲಯ, ಗಣಪತಿ ದೇವಾಲಯ, ಕಾಳಿಕಾ ದೇವಿಯ ಭವ್ಯವಾದ ವಿಗ್ರಹ, ನವಗ್ರಹಗಳು ಎಡಭಾಗದಲ್ಲಿದ್ದು, ಶಿರಡಿ ಸಾಯಿಬಾಬಾರವರ ದೇವಾಲಯವು ಬಲಭಾಗದಲ್ಲಿದೆ. ಇಲ್ಲಿ ಶಿರಡಿ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವಿದೆ. 

     ದೇವಾಲಯದ ಹೊರನೋಟ 

     ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹ 

     ಅಮೃತ ಶಿಲೆಯ ಪಾದುಕೆಗಳು 

     ಓಂ ಶಕ್ತಿ ಅಮ್ಮನವರ ವಿಗ್ರಹ 

     ಕಾಳಿಕಾ ದೇವಿಯ ವಿಗ್ರಹ 

     ಗಣಪತಿಯ ವಿಗ್ರಹ ಮತ್ತು ನಾಗರ ಹುತ್ತ 

    ಕರುಣಾಮಯ ಶಿವನ ವಿಗ್ರಹ 

    ಪಂಚಮುಖಿ ಅಂಜನೇಯನ ವಿಗ್ರಹ 

    ದೇವಾಲಯದ ಕಾರ್ಯಚಟುವಟಿಕೆಗಳು: 


    ದಿನನಿತ್ಯದ ಕಾರ್ಯಕ್ರಮಗಳು: 

    ಆರತಿಯ ಸಮಯ: 
    ಕಾಕಡಾ ಆರತಿ: ಬೆಳಿಗ್ಗೆ 6 ಘಂಟೆಗೆ
    ಮಧ್ಯಾನ್ಹ ಆರತಿ: ಮಧ್ಯಾನ್ಹ 12 ಘಂಟೆಗೆ
    ಧೂಪಾರತಿ: ಸಂಜೆ 6 ಘಂಟೆಗೆ
    ಶೇಜಾರತಿ: ರಾತ್ರಿ 9 ಘಂಟೆಗೆ


    ಪ್ರತಿ ಗುರುವಾರದಂದು ಶೇಜಾರತಿಯು ರಾತ್ರಿ 9:30 ಕ್ಕೆ ನಡೆಯುತ್ತದೆ. ಉಳಿದ ಎಲ್ಲಾ ಆರತಿಗಳು ಬೇರೆ ದಿನಗಳಂತೆಯೇ ನಿಗದಿತ ಸಮಯದಲ್ಲಿ ನಡೆಯುತ್ತದೆ. 

    ಪ್ರತಿನಿತ್ಯ ಬೆಳಗಿನ ಜಾವ 7 ಘಂಟೆಗೆ ಸಾಯಿಬಾಬಾರವರ ಬೆಳ್ಳಿಯ ವಿಗ್ರಹಕ್ಕೆ ಅಭಿಷೇಕ ಮಾಡಲಾಗುತ್ತದೆ. ಸೇವಾಶುಲ್ಕ 51/- ರುಪಾಯಿಗಳು. ಪ್ರತಿನಿತ್ಯ 6 ಘಂಟೆಗೆ ಓಂ ಶಕ್ತಿ ಅಮ್ಮನವರಿಗೆ ಅಭಿಷೇಕ ಮಾಡಲಾಗುತ್ತದೆ. ಸೇವಾ ಶುಲ್ಕ 101/- ರುಪಾಯಿಗಳು.

    ಪ್ರತಿ ತಿಂಗಳ ಹುಣ್ಣಿಮೆಯಂದು ಬೆಳಿಗ್ಗೆ 11:30 ಕ್ಕೆ ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 25/- ರುಪಾಯಿಗಳು. ಪ್ರತಿ ಹುಣ್ಣಿಮೆಯ ದಿನ ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಅನ್ನದಾನ ಕಾರ್ಯಕ್ರಮವಿರುತ್ತದೆ. 

    ಪ್ರತಿ ತಿಂಗಳ ಅಮಾವಾಸ್ಯೆಯಂದು ಮಧ್ಯಾನ್ಹ 3:30ಕ್ಕೆ ಓಂ ಶಕ್ತಿ ಅಮ್ಮನವರಿಗೆ ಸಾಮುಹಿಕ ಅಭಿಷೇಕ ಕಾರ್ಯಕ್ರಮವಿರುತ್ತದೆ. ಸೇವಾ ಶುಲ್ಕ 51/- ರುಪಾಯಿಗಳು. ಅದೇ ದಿನ ಬೆಳಿಗ್ಗೆ 6 ಘಂಟೆಯಿಂದ 7:30 ರವರೆಗೆ ಕಾಳಿಕಾ ಹೋಮ ಮತ್ತು ನವಗ್ರಹ ಹೋಮ ನಡೆಯುತ್ತದೆ. ಅದೇ ದಿನ ರಾತ್ರಿ 12 ಘಂಟೆಗೆ ಕಾಳರಾತ್ರಿ ಕಾಳಿಕಾ ಪೂಜೆ ನಡೆಯುತ್ತದೆ. ಅಮಾವಾಸ್ಯೆಯ ದಿನ ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಅನ್ನದಾನ ಕಾರ್ಯಕ್ರಮವಿರುತ್ತದೆ.

    ಪ್ರತಿ ಶುಕ್ರವಾರ ಮಧ್ಯಾನ್ಹ 12:30 ಕ್ಕೆ  ಓಂ ಶಕ್ತಿಯ ಪಲ್ಲಕ್ಕಿ ಉತ್ಸವ ಜರುಗುತ್ತದೆ. ಆಷಾಢ ಮಾಸದ 3ನೇ ಶುಕ್ರವಾರದಂದು ಬೆಳಿಗ್ಗೆ 7 ರಿಂದ 10:30 ರವರೆಗೆ ಓಂ ಶಕ್ತಿ ಅಮ್ಮನವರಿಗೆ ಸಾಮುಹಿಕ ಹಾಲಿನ ಅಭಿಷೇಕ ಮತ್ತು ಬೆಂಕಿ ಮಡಿಕೆ ಸೇವಾ ಇರುತ್ತದೆ. ಸೇವಾಶುಲ್ಕ 101/- ರುಪಾಯಿಗಳು. 

    ದೇವಾಲಯದಲ್ಲಿ ನಡೆಯುವ ವಿಶೇಷ ಉತ್ಸವದ ದಿನಗಳು:

    1. ಪ್ರತಿ ವರ್ಷದ ಮಾರ್ಚ್ ತಿಂಗಳ 12, 13, 14 ರಂದು ದೇವಾಲಯದ ವಾರ್ಷಿಕೋತ್ಸವ - 13 ಮಾರ್ಚ್ ರಂದು ಹೂವಿನ ಕರಗ ಮತ್ತು 14 ಮಾರ್ಚ್ ರಂದು ಸಾಮುಹಿಕ ಕಲಶಾಭಿಷೇಕ ನಡೆಯುತ್ತದೆ. 
    2. ವಿಜಯದಶಮಿ (ಸಾಯಿಬಾಬಾರವರ ಮಹಾಸಮಾಧಿ ದಿವಸ). 
    3. ಶ್ರೀ ರಾಮನವಮಿ. 
    4. ಹನುಮಜ್ಜಯಂತಿ.
    5. ಶಿವರಾತ್ರಿ - ಬೆಳಿಗ್ಗೆ ಮತ್ತು ಸಂಜೆ ರುದ್ರಾಭಿಷೇಕ ಮತ್ತು ಸಂಜೆ ರುದ್ರಹೋಮ.

    ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

    ಸ್ಥಳ:
    ವಿದ್ಯಾಪೀಠ ವೃತ್ತದ ಬಳಿ, ಬನಶಂಕರಿ 3ನೇ ಹಂತ.

    ವಿಳಾಸ: 
    ಶ್ರೀ.ಸಾಯಿರಾಮ ದೇವಸ್ಥಾನ,
    ಓಂ ಶಕ್ತಿ ದೇವಸ್ಥಾನ ಟ್ರಸ್ಟ್ ( ನೋಂದಣಿ),
    7ನೇ ಮುಖ್ಯರಸ್ತೆ, 12ನೇ ಅಡ್ಡರಸ್ತೆ,
    ಗುರುರಾಜ ಬಡಾವಣೆ, ಬನಶಂಕರಿ 3ನೇ ಹಂತ,
    ತ್ಯಾಗರಾಜನಗರ, ಬೆಂಗಳೂರು-560 028. ಕರ್ನಾಟಕ.

    ಸಂಪರ್ಕಿಸಬೇಕಾದ ವ್ಯಕ್ತಿ: 
    ಶ್ರೀ.ಜಯಪ್ರಕಾಶ್ 

    ದೂರವಾಣಿ ಸಂಖ್ಯೆ:
    +9196200 99999

    ಈ ಮೇಲ್ ವಿಳಾಸ:
    jpbosslion@yahoo.co.in

    ಮಾರ್ಗಸೂಚಿ: 
    ವಿದ್ಯಾಪೀಠ ವೃತ್ತದ ಬಳಿಯ ಬಸ್ ನಿಲ್ದಾಣದಲ್ಲಿ ಇಳಿದು 5 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ.

    ಕನ್ನಡ ಅನುವಾದ: ಶ್ರೀಕಂಠ ಶರ್ಮ

    Sunday, December 26, 2010

    ಸಾಯಿ ಸಂಗೀತ ನಿರ್ದೇಶಕ - ಶ್ರೀ.ಸುಧಾಂಶು ಪರಶುರಾಮ್ - ಕೃಪೆ: ಸಾಯಿಅಮೃತಧಾರಾ.ಕಾಂ

    ಶಿರಡಿ ಸಾಯಿಬಾಬಾ ಸಂಸ್ಥಾನದ ಅಧಿಕೃತ ಸಂಗೀತ ನಿರ್ದೇಶಕ ಶ್ರೀ.ಸುಧಾಂಶು ಪರಶುರಾಮ್ 

    ಶ್ರೀ.ಸುಧಾಂಶು ಪರಶುರಾಮ್ ರವರು ಅನನ್ಯ ಸಾಯಿ ಭಕ್ತರು. ಇವರು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧಿಕೃತ ಸಂಗೀತ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು 2 ನೇ ಜೂನ್ 1967 ರಂದು ಮುಂಬೈನಲ್ಲಿ ಜನಿಸಿದರು.ಇವರ ತಂದೆ ಶ್ರೀ.ಪರಶುರಾಮ್ ಮತ್ತು ತಾಯಿ ಶ್ರೀಮತಿ.ವಸುಧಾ. ಇವರು ಎಂ.ಎ.(ಸಾಮಾಜಿಕ ಶಾಸ್ತ್ರ) ಪದವಿಯನ್ನು ಮುಂಬೈ ವಿಶ್ವವಿದ್ಯಾನಿಲಯದಿಂದ ಪಡೆದಿರುತ್ತಾರೆ. ಇವರು ತಮ್ಮ 12ನೇ ವಯಸ್ಸಿನಿಂದಲೇ ಸಂಗೀತ ಶಿಕ್ಷಣವನ್ನು ಪ್ರಾರಂಭಿಸಿದರು. ಇವರು ಪಿಟೀಲು ವಾದನವನ್ನು ಪಂಡಿತ್ ಪುತ್ತೂರು ದೇವದಾಸ ಜೋಷಿ, ಶ್ರೀ.ಡಿ.ಬಾಬಾನಂದ್ ಮತ್ತು ಪಂಡಿತ್ ಮಾಧವ ಡೊಂಗ್ರೆಯವರ ಬಳಿ ಕಲಿತಿರುತ್ತಾರೆ. 1989 ರಿಂದ ಸ್ವತಂತ್ರವಾಗಿ ಸಂಗೀತ ನಿರ್ದೇಶನ ಮಾಡುತ್ತಾ ಬಂದಿದ್ದಾರೆ. ಇವರು ಪ್ರಪ್ರಥಮವಾಗಿ ಅಲ್ಟ್ರಾ ವೀಡಿಯೋ ಸಂಸ್ಥೆಯವರು ಶ್ರೀ.ಗಜಾನನ ಮಹಾರಾಜರವರ ಮೇಲೆ ಹೊರತಂದ ಧ್ವನಿಸುರಳಿಗೆ ಸಂಗೀತ ನಿರ್ದೇಶನ ನೀಡಿರುತ್ತಾರೆ. ಇವರು ಸಂಗೀತ ಸಂಸ್ಥೆಗಳಾದ ಅಲ್ಟ್ರಾ ವೀಡಿಯೋ, ಕಷಿನ್ ಕ್ಯಾಸೆಟ್ ಕಂಪನಿ, ರಿದಂ ಆಡಿಯೋ, ಹೆಚ್.ಎಂ.ವಿ., ಟಿ-ಸೀರಿಸ್, ವೀನಸ್ ಆಡಿಯೋ ಮತ್ತು ಇನ್ನು ಹಲವಾರು ಪ್ರತಿಷ್ಟಿತ ಸಂಗೀತ ಸಂಸ್ಥೆಗಳಿಗೆ ಸಂಗೀತ ನಿರ್ದೇಶಕರಾಗಿ ದುಡಿದಿದ್ದಾರೆ. ಖ್ಯಾತ ಗಾಯಕರುಗಳಾದ ಶ್ರೀ.ಕುಮಾರ್ ಸಾನು, ಕವಿತಾ ಕೃಷ್ಣಮುರ್ತಿ, ವಿನೋದ್ ರಾತೋಡ್, ರವಿಂದ್ರ ಬಿಜೂರ್, ಸಾಧನಾ ಸರ್ಗಮ್ ಮತ್ತು ಇನ್ನು ಹಲವಾರು ಗಾಯಕರುಗಳು ಇವರ ಸಂಗೀತ ನಿರ್ದೇಶನದಲ್ಲಿ ಹಾಡಿದ್ದಾರೆ. ಇವರು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿರುವ ನಾನಿಜ್  ಕ್ಷೇತ್ರದ ಜಗದ್ಗುರುಗಳಾದ ಶ್ರೀ.ನರೇಂದ್ರ ಮಹಾರಾಜ್ ರವರ ಆಶ್ರಮದ ಅಧಿಕೃತ ಸಂಗೀತ ನಿರ್ದೇಶಕರು ಎಂಬುದು ಒಂದು ವಿಶೇಷ. 

    ಇವರು ಸಹ್ಯಾದ್ರಿ ವಾಹಿನಿಯಲ್ಲಿ ಪ್ರಸಾರವಾದ "ಸಂತ ತುಕಾರಾಮ" ಮರಾಠಿ ಧಾರಾವಾಹಿಗೆ ಸಂಗೀತ ನಿರ್ದೇಶನ ಮಾಡಿರುತ್ತಾರೆ. ಆದಿತ್ಯ ಪಾಂಚಾಲಿ ನಟಿಸಿದ್ದ ಹಿಂದಿ ಚಲನಚಿತ್ರ "ಜಂಜೀರ್ ದ ಚೈನ್" ಎಂಬ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಜ್ಯೂನಿಯರ್ ಮಹಮುದ್ ನಿರ್ದೇಶನದ 3 ಮರಾಠಿ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುತ್ತಾರೆ. 

    ಇವರು ಸಂಗೀತ ನಿರ್ದೇಶನ ಮಾಡಿದ ಶಿರಡಿ ಸಾಯಿಬಾಬಾ ಸಂಸ್ಥಾನದ "ಆರತಿ" ಆಡಿಯೋ ಮತ್ತು ವೀಡಿಯೊ ಮತ್ತು ತೋಡ ಧ್ಯಾನ್ ಲಗಾ ಧ್ವನಿಸುರಳಿಗಳು ದಾಖಲೆ ಮಾರಾಟವಾಗಿ ಇವರಿಗೆ ಬಹಳ ಒಳ್ಳೆಯ ಹೆಸರು ಮತ್ತು ಕೀರ್ತಿಯನ್ನು ತಂದುಕೊಟ್ಟಿವೆ.

    ಪ್ರಸ್ತುತ ಇವರು ಖ್ಯಾತ ಗಾಯಕ ಶ್ರೀ.ಹರಿಹರನ್ ರವರ ಜೊತೆಗೂಡಿ ಶಿರಡಿ ಸಾಯಿಬಾಬಾರವರ ಮೇಲೆ  ಹೊಸ ಧ್ವನಿಸುರಳಿ ತರುವ ಪ್ರಯತ್ನದಲ್ಲಿದ್ದಾರೆ. 

    ಇವರು ತಮ್ಮ ಮುಂದಿನ ದಿನಗಳಲ್ಲಿ ಸಂಪೂರ್ಣ ಸಾಯಿ ಸಚ್ಚರಿತೆಯ ವೀಡಿಯೋವನ್ನು ಆಂಗ್ಲ, ಜರ್ಮನ್, ಸ್ಪಾನಿಶ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ತರುವ ಇಚ್ಚೆಯನ್ನು ಹೊಂದಿದ್ದಾರೆ. 

    ಇವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

    ಸಂಪರ್ಕದ ವಿವರಗಳು:

    ಹೆಸರು: 

    ಶ್ರೀ.ಸುಧಾಂಶು ಪರಶುರಾಮ್

    ವಿಳಾಸ: 

    ಫ್ಲಾಟ್ - ಐ-234, ಅರ್ಥ್ ರೆಸಿಡೆನ್ಸಿ, ಡಿ.ಎನ್.ದುಬೆ ರಸ್ತೆ, ದಹಿಸಾರ್ ಪೂರ್ವ, ಮುಂಬೈ-400 068.

    ದೂರವಾಣಿ ಸಂಖ್ಯೆ:

    92243 27105 

    ಇಮೇಲ್ ವಿಳಾಸ: 

    Sudhaunshu.mudi@gmail.com


    ಅಲ್ಬಮ್ ಗಳು: 

    ಶಿರಡಿ ಸಾಯಿಬಾಬಾ ಸಂಸ್ಥಾನದವರು ಹೊರತಂದಿರುವ ಆರತಿ ಆಡಿಯೋ ಮತ್ತು ವಿಡಿಯೋ, ತೋಡಾ ಧ್ಯಾನ್ ಲಗಾ, ಸಾಯಿ ಕೆ ಚರಣೋ ಮೇ, ಸಾಯಿ ತೇರೇ ಕೃಪಾ ಸೇ, ಗ್ಲಿಮ್ಸಸ್ ಆಫ್ ಸಾಯಿಬಾಬಾ ಡಿವಿಡಿ, ಸಾಯಿ ಸದ್ಗುರು ಮೇರೆ ಸಾಯಿ, ಸಚ್ಚಿದಾನಂದ ಸಾಯಿನಾಥ ಮತ್ತು ಇನ್ನು ಹಲವಾರು ಧ್ವನಿಸುರಳಿಗಳು. 


    ಕನ್ನಡ ಅನುವಾದ: ಶ್ರೀಕಂಠ ಶರ್ಮ
    ಸಾಯಿ ಭಜನ ಗಾಯಕ - ಶ್ರೀ.ಸಂಜೀವ್ ಅರೋರ (ಕೃಷ್ಣಾ ಜೀ) - ಕೃಪೆ: ಸಾಯಿಅಮೃತಧಾರಾ.ಕಾಂ


    ಸಾಯಿ ಭಜನ ಗಾಯಕ ಶ್ರೀ.ಸಂಜೀವ್ ಅರೋರ

    ಅನನ್ಯ ಸಾಯಿ ಭಕ್ತರಾದ ಶ್ರೀ.ಸಂಜೀವ್ ಅರೋರ ಅವರು 2004 ರಿಂದ ಭಾರತದ ನವದೆಹಲಿ ಮತ್ತು ಎನ್.ಸಿ.ಆರ್. ಪ್ರದೇಶಗಳಲ್ಲಿ ತಮ್ಮ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಇವರು 9ನೇ ಸೆಪ್ಟೆಂಬರ್ 1972 ರಂದು ನವದೆಹಲಿಯಲ್ಲಿ ಜನಿಸಿದರು. ಇವರ ತಂದೆ ಶ್ರೀ.ವಿನೋದ್ ಅರೋರ ಮತ್ತು ತಾಯಿ ಶ್ರೀಮತಿ.ಚಂದ್ರಪ್ರಭ. ಇವರು ಬಿ.ಎ.(ಆಂಗ್ಲ ಭಾಷೆ), ಬಿಎಡ್, ಎಂಬಿಎ ಹಾಗೂ ಮಕ್ಕಳ ಮನಶ್ಯಾಸ್ತ್ರದಲ್ಲಿ ಡಿಪ್ಲೋಮಾ ಪದವಿಯನ್ನು ಡೆಹರಾಡೂನ್ ವಿಶ್ವವಿದ್ಯಾನಿಲಯದಿಂದ ಪಡೆದಿರುತ್ತಾರೆ. ಇಲ್ಲಿಯವರೆವಿಗೂ ಇವರು ಸರಿ ಸುಮಾರು 100ಕ್ಕೂ ಹೆಚ್ಚು ಭಜನ ಸಂಧ್ಯಾ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಇವರು ತಮ್ಮ ಯಾವುದೇ ಕಾರ್ಯಕ್ರಮಗಳಿಗೆ ಹಣವನ್ನು ಪಡೆಯುವುದಿಲ್ಲ ಎಂಬುದು ಒಂದು ವಿಶೇಷ ಸಂಗತಿ. ಇವರು ಮಕ್ಕಳ ಮನಶ್ಯಾಸ್ತ್ರ ತಜ್ಞರಾಗಿ ಕೆಲಸ ನಿರ್ವಹಿಸುತ್ತಿದ್ದು ಅನಂತ ಸಾಯಿ ಇನ್ಸ್ಟಿಟ್ಯೂಟ್ ಮತ್ತು ಕನ್ಸಲ್ಟೆಂಟ್ ಎಂಬ ತಮ್ಮದೇ ಆದ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಇವರು ಅನೇಕ ಪ್ರಶಸ್ತಿಗಳನ್ನು ಕೂಡ ಪಡೆದಿರುತ್ತಾರೆ.

    ಇವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

    ಸಂಪರ್ಕದ ವಿವರಗಳು:

    ಗಾಯಕರ ಹೆಸರು :

    ಶ್ರೀ.ಸಂಜೀವ್ ಅರೋರ (ಕೃಷ್ಣಾ ಜೀ)

    ವಿಳಾಸ :

    ಮನೆ: 1544, ದೀನಾನಾಥ್ ಬಿಲ್ಡಿಂಗ್, ಚಂದ್ರವಾಲ್ ರಸ್ತೆ, ಸಬ್ಜಿ ಮಂಡಿ, ನವದೆಹಲಿ-110 007.
    ಕಚೇರಿ: ಅನಂತ ಸಾಯಿ ಇನ್ಸ್ಟಿಟ್ಯೂಟ್ ಮತ್ತು ಕನ್ಸಲ್ಟೆಂಟ್, ಫ್ಲಾಟ್ ನಂ.2, 1ನೇ ಮಹಡಿ, ರಾಮದುರ್ಗ ಬಿಲ್ಡಿಂಗ್, ಜವಾಹರ್ ನಗರ, ಮಲ್ಕಾಗಂಜ್ ವೃತ್ತ, ನಾರ್ತ್ ಕ್ಯಾಂಪಸ್, ದೆಹಲಿ ವಿಶ್ವವಿದ್ಯಾನಿಲಯ, ನವದೆಹಲಿ-110 007.

    ದೂರವಾಣಿ ಸಂಖ್ಯೆಗಳು:

    99900 01001 / 92119 96655 / 93508 07847 / 99909 01001

    ಇಮೇಲ್ ವಿಳಾಸ:

    asicindia@gmail.com
    asicdelhi@gmail.com

    ಕನ್ನಡ ಅನುವಾದ: ಶ್ರೀಕಂಠ ಶರ್ಮ
    ಶಿರಡಿ ಸಾಯಿಬಾಬನಿಗೆ ಚಿನ್ನದ ಕಿರೀಟ ಕಾಣಿಕೆಯಾಗಿ ನೀಡಿದ ಹೈದರಾಬಾದ್ ಸಾಯಿ ಭಕ್ತರು - 25ನೇ ಡಿಸೆಂಬರ್ 2010 - ಕೃಪೆ: ಸಾಯಿ ಅಮೃತಧಾರಾ.ಕಾಂ 

    ಹೈದರಾಬಾದ್ ನ ಸಾಯಿಭಕ್ತರುಗಳಾದ ಶ್ರೀ.ಯಜ್ಞ ನಾರಾಯಣ ಶರ್ಮ ಮತ್ತು ಶ್ರೀ.ಪವನ್ ಕುಮಾರ್ ಶರ್ಮ ರವರುಗಳು ಜಂಟಿಯಾಗಿ ಶಿರಡಿ ಸಾಯಿಬಾಬಾ ಅವರಿಗೆ 230 ಗ್ರಾಂ ತೂಕದ ಸುಮಾರು 4 ಲಕ್ಷ 32 ಸಾವಿರ ಬೆಲೆ ಬಾಳುವ ಚಿನ್ನದ ಕಿರೀಟವನ್ನು ಕಾಣಿಕೆಯಾಗಿ ಅರ್ಪಿಸಿದರು.

    ಶಿರಡಿ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹದ ಮೇಲೆ ರಾರಾಜಿಸುತ್ತಿರುವ ಚಿನ್ನದ ಕಿರೀಟ 

    ಕನ್ನಡ ಅನುವಾದ: ಶ್ರೀಕಂಠ ಶರ್ಮ

    Saturday, December 25, 2010

    ಟವೇರಾ ಆಂಬುಲೆನ್ಸ್ ಕಾಣಿಕೆಯಾಗಿ ನೀಡಿದ ಜನರಲ್ ಮೋಟಾರ್ಸ್ ಇಂಡಿಯಾ (ಪುಣೆ) - 20ನೇ ಡಿಸೆಂಬರ್ 2010 - ಕೃಪೆ : ಸಾಯಿ ಅಮೃತಧಾರಾ.ಕಾಂ 

    ಜನರಲ್ ಮೋಟಾರ್ಸ್ ಇಂಡಿಯಾ (ಪುಣೆ) ಘಟಕದ ಮ್ಯಾನೇಜರ್ ಶ್ರೀ.ರಾಕೇಶ್ ಸಬರ್ವಾಲ್ ರವರು ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ಇದೇ ತಿಂಗಳ 20ನೇ ಡಿಸೆಂಬರ್ 2010 ರಂದು ಟವೇರಾ ಆಂಬುಲೆನ್ಸ್ ಕಾಣಿಕೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿ ಡಾ.ಏಕನಾಥ್ ಗೊಂಡಕರ್ ರವರು ಶ್ರೀ.ರಾಕೇಶ್ ಸಬರ್ವಾಲ್ ಮತ್ತು ಶ್ರೀಮತಿ.ನೀರಾ ಸಬರ್ವಾಲ್ ರವರನ್ನು ಸನ್ಮಾನಿಸಿದರು. ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ಮತ್ತು ಶ್ರೀ.ಪ್ರೀತೇಶ್ ಷಾ ರವರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 





    ಕನ್ನಡ ಅನುವಾದ : ಶ್ರೀಕಂಠ ಶರ್ಮ

    Tuesday, December 14, 2010

    ಸಾಯಿ ಭಜನ ಗಾಯಕಿ - ಶ್ರೀಮತಿ.ಸುವೇದಿತಾ  ಶ್ರೀಧರ್  - ಕೃಪೆ: ಸಾಯಿಅಮೃತಧಾರಾ.ಕಾಂ

    ಶ್ರೀಮತಿ ಸುವೇದಿತಾ ಶ್ರೀಧರ್ ತಮ್ಮ "ಸಾಯಿ ಶಂಕರ ಭಜನ ವೃಂದ" ದ ಸದಸ್ಯರೊಂದಿಗೆ 

    ಶ್ರೀಮತಿ ಸುವೇದಿತಾ ಶ್ರೀಧರ್ ರವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರು ಮತ್ತು ಅತ್ಯುತ್ತಮ ಸಾಯಿ ಭಜನ ಗಾಯಕಿಯಾಗಿದ್ದಾರೆ. ಇವರು ಕರ್ನಾಟಕ ಶಾಸ್ತ್ರೀಯ ಸಂಗೀತದ ಶಿಕ್ಷಣವನ್ನು ಸರ್ಕಾರಿ ಸಂಗೀತ ಶಾಲೆಯಲ್ಲಿ ಶ್ರೀ.ನೂಕಾಲ ಸತ್ಯನಾರಾಯಣರವರ ಬಳಿ ಕಲಿತರು. ಇವರು "ಸಾಯಿ ಶಂಕರ ಭಜನ ವೃಂದ" ಎಂಬ ಭಜನ ವೃಂದವನ್ನು ಹುಟ್ಟುಹಾಕಿ ಅದರ ಅಡಿಯಲ್ಲಿ ಕರ್ನಾಟಕದ ಅನೇಕ ಶಿರಡಿ ಸಾಯಿಬಾಬಾ ಮಂದಿರಗಳಲ್ಲಿ ತಮ್ಮ ಭಜನ ವೃಂದದೊಡನೆ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರು ತಮ್ಮ ಮನೆಯಲ್ಲೇ ಸೌಂದರ್ಯ ಲಹರಿ, ಸಂಸ್ಕೃತ ಶ್ಲೋಕಗಳು, ಸ್ತೋತ್ರಗಳು ಮತ್ತು ಸಾಯಿ ಭಜನೆಯ ತರಗತಿಗಳನ್ನು ಪ್ರತಿದಿನ ತಪ್ಪದೆ ನಡೆಸುತ್ತಿದ್ದಾರೆ. ಇವರು ಇತ್ತೀಚಿಗೆ ಡಿಸೆಂಬರ್ 2010 ರಲ್ಲಿ ಸೌಂದರ್ಯ ಲಹರಿ ಸಪ್ತಾಹ, ಗುರು ಮತ್ತು ದಶಶ್ಲೋಕಿ ಸುಪ್ರಭಾತ ಕಾರ್ಯಕ್ರಮಗಳನ್ನು ತಮ್ಮ ಮನೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಿದ್ದಾರೆ. ಇವರು ಅನೇಕ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಇವರು ಭಗವಾನ್ ಶ್ರೀ. ಸತ್ಯಸಾಯಿ ಬಾಬಾ ರವರ ಸಮ್ಮುಖದಲ್ಲಿ ಭಾಷಣವನ್ನು ಕೂಡ ಮಾಡಿರುತ್ತಾರೆ. 

    ಇವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

    ಸಂಪರ್ಕದ ವಿವರಗಳು

    ಗಾಯಕಿಯ ಹೆಸರು
    ಸುವೇದಿತಾ ಶ್ರೀಧರ್
    ವಿಳಾಸ
    ಸಾಯಿ ಶಂಕರ ಭಜನ ವೃಂದ, ನಂ.1608/ಎ, ದೇವಿ ನಿಲಯಂ, 17ನೇ  ಮುಖ್ಯರಸ್ತೆ, 2ನೇ  ಹಂತ, ಜೆ.ಪಿ.ನಗರ, ಬೆಂಗಳೂರು-560 078. ಕರ್ನಾಟಕ.
    ದೂರವಾಣಿ ಸಂಖ್ಯೆ
    080-2658 3705 / +91 97420 59107
    ಈ ಮೇಲ್ ವಿಳಾಸ
    ಇಲ್ಲ
    ವೆಬ್ ಸೈಟ್
    ಇಲ್ಲ
    ಆಲ್ಬಮ್ ಗಳು
    ಇಲ್ಲ 
    ಭಜನೆಗಳು
    ಇಲ್ಲ


    ಕನ್ನಡ ಅನುವಾದ: ಶ್ರೀಕಂಠ ಶರ್ಮ

    Monday, December 13, 2010

    ಬೆಂಗಳೂರಿನ ಸಾಯಿಬಾಬಾ ಮಂದಿರ - ಶ್ರೀ ಮುತ್ತುರಾಯಸ್ವಾಮಿ ಸನ್ನಿಧಿ ಮತ್ತು ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ್ (ನೋಂದಣಿ), ನಂ.50 , ಬಿ.ಎಂ.ಎಸ್.ಇಂಜಿನಿಯರಿಂಗ್ ಕಾಲೇಜ್ ಪಕ್ಕ, ಆವಲಹಳ್ಳಿ, ದೊಡ್ಡಬಳ್ಳಾಪುರ ಮುಖ್ಯರಸ್ತೆ, ಬೆಂಗಳೂರು-560 064. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ

    ಈ ದೇವಾಲಯವು ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ತೆರಳುವ ಮುಖ್ಯರಸ್ತೆಯಲ್ಲಿ ಇರುತ್ತದೆ. ಈ ದೇವಾಲಯದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ:


    ದೇವಾಲಯದ ವಿಶೇಷತೆಗಳು:

    • ಈ ದೇವಾಲಯವನ್ನು 25ನೇ ಅಕ್ಟೋಬರ್ 2007 ರಂದು ಸಾಯಿಮಾತಾ ಶ್ರೀಮತಿ.ಐ.ವಿ.ಸಂಪತ್ ಕುಮಾರಿಯವರು ಉದ್ಘಾಟಿಸಿದರು. 
    • ಈ ದೇವಾಲಯದಲ್ಲಿ ಶಿರಡಿ ಸಾಯಿಬಾಬಾರವರ ಅಮೃತ ಶಿಲೆಯ ಸುಂದರ ವಿಗ್ರಹವನ್ನು ಸಾಯಿಭಕ್ತರು ನೋಡಬಹುದು. ಅಲ್ಲದೇ, ದತ್ತಾತ್ರೇಯರ ಅಮೃತ ಶಿಲೆಯ ವಿಗ್ರಹ, ಕಪ್ಪು ಶಿಲೆಯ ಆಂಜನೇಯ, ಗಣಪತಿ, ಸುಬ್ರಮಣ್ಯ, ನವಗ್ರಹ, ನಾಗ ದೇವತೆಗಳ ವಿಗ್ರಹಗಳನ್ನು ಕೂಡ ಸಾಯಿಭಕ್ತರು ನೋಡಬಹುದು. 
    • ಸಾಯಿಬಾಬಾರವರ ವಿಗ್ರಹಕ್ಕೆ ಎದುರಾಗಿ ಅಮೃತ ಶಿಲೆಯ ನಂದಿಯ ವಿಗ್ರಹವನ್ನು ಶಿರಡಿಯಲ್ಲಿರುವಂತೆ ಸ್ಥಾಪಿಸಲಾಗಿದೆ. 
    • ಪವಿತ್ರ ಧುನಿ ಮಾ ಮತ್ತು ನಂದಾದೀಪವನ್ನು ಕೂಡ ಈ ಮಂದಿರದ ಹೊರ ಆವರಣದಲ್ಲಿ ಸ್ಥಾಪಿಸಲಾಗಿದೆ.
    • ದೇವಾಲಯದ ನೆಲಮಾಳಿಗೆಯಲ್ಲಿ ಧ್ಯಾನಮಂದಿರವನ್ನು ಸ್ಥಾಪಿಸಲಾಗಿದ್ದು ಅಲ್ಲಿ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹವನ್ನು ಸ್ಥಾಪಿಸಲಾಗಿದೆ. 

     ದೇವಾಲಯದ ರಾಜಗೋಪುರಗಳು 

     ಗಣೇಶನ ವಿಗ್ರಹ 

     ಆಂಜನೇಯನ ವಿಗ್ರಹ 

     ಸುಬ್ರಮಣ್ಯ ದೇವರ ವಿಗ್ರಹ 

     ನವಗ್ರಹಗಳು 

     ದತ್ತಾತ್ರೇಯ ದೇವರ ವಿಗ್ರಹ 

    ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹ

    ಸಾಯಿಬಾಬಾರವರ ಪಲ್ಲಕ್ಕಿ 

     ನಂದಿಯ ವಿಗ್ರಹ 

     ನಂದಾದೀಪ 

     ಪವಿತ್ರ ಧುನಿ ಮಾ

     ನಾಗ ದೇವರುಗಳ ವಿಗ್ರಹ 

    ನೆಲಮಾಳಿಗೆಯ ಧ್ಯಾನ ಮಂದಿರದಲ್ಲಿರುವ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹ 

    ದೇವಾಲಯದ ಕಾರ್ಯಚಟುವಟಿಕೆಗಳು:

    ದಿನನಿತ್ಯದ ಕಾರ್ಯಕ್ರಮಗಳು:

    ಆರತಿಯ ಸಮಯ:
    ಕಾಕಡಾ ಆರತಿ: ಬೆಳಿಗ್ಗೆ 6:30 ಕ್ಕೆ  
    ಮಧ್ಯಾನ್ಹ ಆರತಿ: ಮಧ್ಯಾನ್ಹ 12 ಘಂಟೆಗೆ
    ಧೂಪಾರತಿ: ಸಂಜೆ 6 ಘಂಟೆಗೆ
    ಶೇಜಾರತಿ: ರಾತ್ರಿ 8 ಘಂಟೆಗೆ


    ಪ್ರತಿನಿತ್ಯ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಕ್ಷೀರಾಭಿಷೇಕ ಮಾಡಲಾಗುತ್ತದೆ. ಸೇವಾಶುಲ್ಕ 101/- ರುಪಾಯಿಗಳು.

    ಪ್ರತಿನಿತ್ಯ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ ಮಾಡಲಾಗುತ್ತದೆ. ಸೇವಾಶುಲ್ಕ 151/- ರುಪಾಯಿಗಳು.

    ಈ ಮಂದಿರದಲ್ಲಿ ಶಾಶ್ವತ ಪೂಜೆಗೆ ಅವಕಾಶವಿದ್ದು ಅದರ ಸೇವಾ ಶುಲ್ಕ 2001/- ರುಪಾಯಿಗಳಾಗಿರುತ್ತದೆ.

    ಪ್ರತಿ ತಿಂಗಳು ಸಂಕಷ್ಟ ಚತುರ್ಥಿಯನ್ನು ಸಂಜೆ 5:30 ರಿಂದ ಆಚರಿಸಲಾಗುತ್ತದೆ. ಸೇವಾ ಶುಲ್ಕ 51/- ರುಪಾಯಿಗಳು.

    ಪ್ರತಿ ತಿಂಗಳ ಹುಣ್ಣಿಮೆಯಂದು ಬೆಳಿಗ್ಗೆ 9:30 ರಿಂದ ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತದೆ.ಸೇವಾ ಶುಲ್ಕ 51/- ರುಪಾಯಿಗಳು.

    ವಿಶೇಷ ಉತ್ಸವದ ದಿನಗಳು:

    1. ಪ್ರತಿ ವರ್ಷದ 25ನೇ ಅಕ್ಟೋಬರ್ ದೇವಾಲಯದ ವಾರ್ಷಿಕೋತ್ಸವ.
    2. ಶ್ರೀರಾಮನವಮಿ. 
    3. ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ).
    4. ಗುರುಪೂರ್ಣಿಮೆ.
    5. ಹನುಮಜ್ಜಯಂತಿ. 

    ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:

    ಸ್ಥಳ:  
    ಬಿ.ಎಂ.ಎಸ್.ಇಂಜಿನಿಯರಿಂಗ್ ಕಾಲೇಜ್ ಪಕ್ಕ, ಎಂ.ಹೆಚ್.ಗೌಡ ಎಂಟರ್ ಪ್ರೈಸಸ್ - ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಎದುರು, ದೊಡ್ಡಬಳ್ಳಾಪುರ ಮುಖ್ಯರಸ್ತೆ.

    ವಿಳಾಸ: 
    ಶ್ರೀ ಮುತ್ತುರಾಯಸ್ವಾಮಿ ಸನ್ನಿಧಿ ಮತ್ತು ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ್ (ನೋಂದಣಿ), 
    ನಂ.50 , ಬಿ.ಎಂ.ಎಸ್.ಇಂಜಿನಿಯರಿಂಗ್ ಕಾಲೇಜ್ ಪಕ್ಕ, 
    ಆವಲಹಳ್ಳಿ, ದೊಡ್ಡಬಳ್ಳಾಪುರ ಮುಖ್ಯರಸ್ತೆ, ಬೆಂಗಳೂರು-560 064. ಕರ್ನಾಟಕ.

    ಸಂಪರ್ಕಿಸಬೇಕಾದ ವ್ಯಕ್ತಿಗಳು:
    ಶ್ರೀ.ಕೆ.ಸಿ.ಎಂ.ಗೌಡ - ಅಧ್ಯಕ್ಷರು / ಶ್ರೀ.ಸಂತೋಷ್ ಕುಮಾರ್ - ದೇವಾಲಯದ ಮ್ಯಾನೇಜರ್ 

    ದೂರವಾಣಿ ಸಂಖ್ಯೆ: 
    +91 93428 62303 / +91 76763 12606    

    ಮಾರ್ಗಸೂಚಿ:  
    ಆವಲಹಳ್ಳಿ ಬಸ್ ನಿಲ್ದಾಣದಲ್ಲಿ ಇಳಿಯುವುದು. ಈ ದೇವಾಲಯವು ಬಿ.ಎಂ.ಎಸ್.ಇಂಜಿನಿಯರಿಂಗ್ ಕಾಲೇಜ್ ಪಕ್ಕ, ಎಂ.ಹೆಚ್.ಗೌಡ ಎಂಟರ್ ಪ್ರೈಸಸ್ - ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಎದುರು, ದೊಡ್ಡಬಳ್ಳಾಪುರ ಮುಖ್ಯರಸ್ತೆಯಲ್ಲಿ ಇರುತ್ತದೆ. ಬಸ್ ಸಂಖ್ಯೆ 285 ರ ಎಲ್ಲಾ ಶ್ರೇಣಿಗಳು ಮತ್ತು ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ತೆರಳುವ ಎಲ್ಲಾ ಬಸ್ ಗಳಿಗೆ ದೇವಾಲಯದ ಮುಂಭಾಗದಲ್ಲಿ ನಿಲುಗಡೆ ಇದೆ. 



    ಕನ್ನಡ ಅನುವಾದ: ಶ್ರೀಕಂಠ ಶರ್ಮ

    Sunday, December 12, 2010

    ಬೆಂಗಳೂರಿನ ಸಾಯಿಬಾಬಾ ಮಂದಿರ - ಶ್ರೀ ನಾಗಲಿಂಗೇಶ್ವರ ಸ್ವಾಮಿ ಮತ್ತು ಶಿವ ಸಾಯಿಬಾಬಾ ಮಂದಿರ ಟ್ರಸ್ಟ್ (ನೋಂದಣಿ), ಪಿಡಬ್ಲ್ಯೂಡಿ ಕಚೇರಿ ಆವರಣ, ಎಸ್.ಸಿ.ರಸ್ತೆ, ಆನಂದ ರಾವ್ ವೃತ್ತ, ಬೆಂಗಳೂರು-560 009. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ  

    ಈ ದೇವಾಲಯವು ಬೆಂಗಳೂರಿನ ಹೃದಯ ಭಾಗವಾದ ಮಜೆಸ್ಟಿಕ್ ಬಳಿಯ ಆನಂದ ರಾವ್ ವೃತ್ತದ ಬಳಿ ಇರುತ್ತದೆ. ಈ ದೇವಾಲಯದ ವಿಶೇಷತೆಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ. 

    ದೇವಾಲಯದ ವಿಶೇಷತೆಗಳು:

    • ಈ ದೇವಾಲಯದ ಭೂಮಿ ಪೂಜೆಯನ್ನು 26ನೇ ಫೆಬ್ರವರಿ 1985 ರಂದು ನೆರವೇರಿಸಲಾಯಿತು. 
    • ಈ ದೇವಾಲಯದ ಉದ್ಘಾಟನೆಯನ್ನು 26ನೇ ಏಪ್ರಿಲ್ 2001 ರಂದು ಶ್ರೀ.ಶ್ರೀ.ಶ್ರೀ.ಶಿವರಾತ್ರೀಶ್ವರ ಸ್ವಾಮೀಜಿ, ಶ್ರೀ.ಶ್ರೀ.ಶ್ರೀ.ಬಾಲಗಂಗಾಧರನಾಥ ಸ್ವಾಮೀಜಿ, ಶ್ರೀ.ಶ್ರೀ.ಶ್ರೀ.ವಿಶ್ವೇಶ್ವರ ತೀರ್ಥ ಸ್ವಾಮೀಜಿ ಮತ್ತು ಬೇಲಿ ಮಠದ ಶ್ರೀ.ಶ್ರೀ.ಶ್ರೀ.ಶಿವರುದ್ರ ಸ್ವಾಮೀಜಿ ಯವರುಗಳು ನೆರವೇರಿಸಿದರು. 
    • ದೇವಾಲಯದಲ್ಲಿ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವಿದೆ. ಅಲ್ಲದೇ, ಕಪ್ಪು ಶಿಲೆಯ ನಾಗಲಿಂಗೇಶ್ವರ, ಪಾರ್ವತಿ ದೇವಿ, ಗಣಪತಿ, ನವಗ್ರಹ, ನಾಗ ದೇವರುಗಳು ಮತ್ತು ಶನೀಶ್ವರ ಸ್ವಾಮಿಯ ವಿಗ್ರಹಗಳಿವೆ. 
    • ದೇವಾಲಯದಲ್ಲಿ ಪವಿತ್ರ ಧುನಿ ಮಾ ಮತ್ತು ನಂದಾ ದೀಪ ಇರುತ್ತದೆ. 
    ದೇವಾಲಯದ ಹೊರನೋಟ 

    ದೇವಾಲಯದ ರಾಜಗೋಪುರ 

     
    ಗಣಪತಿಯ ವಿಗ್ರಹ 

    ಪಾರ್ವತಿ ದೇವಿಯ ವಿಗ್ರಹ 

     
    ನಾಗ ಲಿಂಗೇಶ್ವರ ಸ್ವಾಮಿಯ ವಿಗ್ರಹ 

    ಶಿರಡಿ ಸಾಯಿಬಾಬಾರವರ ವಿಗ್ರಹ ಮತ್ತು ಪಾದುಕೆಗಳು 

     
    ಪವಿತ್ರ ಧುನಿ ಮಾ 

    ನವಗ್ರಹ ದೇವರುಗಳು 

    ನಾಗದೇವರುಗಳ ವಿಗ್ರಹ 

     
     ಶನೇಶ್ವರ ಸ್ವಾಮಿಯ ವಿಗ್ರಹ

    ದೇವಾಲಯದ ಕಾರ್ಯಚಟುವಟಿಕೆಗಳು:

    ದಿನನಿತ್ಯದ ಕಾರ್ಯಕ್ರಮಗಳು: 


    ಆರತಿಯ ಸಮಯ:
    ಕಾಕಡಾ ಆರತಿ: ಪ್ರತಿದಿನ ಬೆಳಿಗ್ಗೆ 7 ಘಂಟೆಗೆ ಮತ್ತು ಗುರುವಾರ ಬೆಳಿಗ್ಗೆ 6 ಘಂಟೆಗೆ  
    ಮಧ್ಯಾನ್ಹ ಆರತಿ: ಪ್ರತಿದಿನ ಮಧ್ಯಾನ್ಹ 12 ಘಂಟೆಗೆ 
    ಧೂಪಾರತಿ: ಪ್ರತಿದಿನ ಸಂಜೆ 6 ಘಂಟೆಗೆ 
    ಶೇಜಾರತಿ: ಪ್ರತಿದಿನ ರಾತ್ರಿ  8 ಘಂಟೆಗೆ ಮತ್ತು ಗುರುವಾರ ರಾತ್ರಿ 10 ಘಂಟೆಗೆ 


    ಪ್ರತಿನಿತ್ಯ ಅಭಿಷೇಕ ಕಾರ್ಯಕ್ರಮವಿರುತ್ತದೆ.

    ಪ್ರತಿ ತಿಂಗಳ ಚತುರ್ಥಿಯಂದು ಸಾಯಂಕಾಲ ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತದೆ.

    ಪ್ರತಿ ತಿಂಗಳ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತದೆ.

    ಪ್ರತಿ ಶನಿವಾರ ಬೆಳಿಗ್ಗೆ ಶನೇಶ್ವರ ದೇವರಿಗೆ ವಿಶೇಷ ತೈಲಾಭಿಷೇಕ ನಡೆಯುತ್ತದೆ.

    ಪ್ರತಿ ತಿಂಗಳ ಅಮಾವಾಸ್ಯೆಯಂದು ವಿಶೇಷ ಹೋಮವನ್ನು ಮಾಡಲಾಗುತ್ತದೆ.

    ವಿಶೇಷ ಉತ್ಸವದ ದಿನಗಳು: 

    1. ಶಿವರಾತ್ರಿ - ದೇವಾಲಯದ ವಾರ್ಷಿಕೋತ್ಸವ.
    2. ಶ್ರೀರಾಮನವಮಿ.
    3. ಗುರುಪೂರ್ಣಿಮ.
    4. ವಿಜಯದಶಮಿ - ಸಾಯಿಬಾಬಾ ಸಮಾಧಿ ದಿವಸ - ಸಾಯಿಬಾಬಾರವರ ವಿಗ್ರಹದ ಮೆರವಣಿಗೆ ಕಾರ್ಯಕ್ರಮ.


    ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:

    ಸ್ಥಳ:  
    ಪಿಡಬ್ಲ್ಯೂಡಿ ಕಚೇರಿ ಆವರಣ, ಎಸ್.ಸಿ.ರಸ್ತೆ, ಆನಂದ ರಾವ್ ವೃತ್ತ.

    ವಿಳಾಸ: 
    ಶ್ರೀ ನಾಗಲಿಂಗೇಶ್ವರ ಸ್ವಾಮಿ ಮತ್ತು ಶಿವ ಸಾಯಿಬಾಬಾ ಮಂದಿರ ಟ್ರಸ್ಟ್ (ನೋಂದಣಿ), 
    ಪಿಡಬ್ಲ್ಯೂಡಿ ಕಚೇರಿ ಆವರಣ, ಎಸ್.ಸಿ.ರಸ್ತೆ, 
    ಆನಂದ ರಾವ್ ವೃತ್ತ, ಬೆಂಗಳೂರು-560 009. ಕರ್ನಾಟಕ.

    ಸಂಪರ್ಕಿಸಬೇಕಾದ ವ್ಯಕ್ತಿ:
    ಶ್ರೀ.ಎಲ್.ಮಹದೇವಪ್ಪ.

    ದೂರವಾಣಿ ಸಂಖ್ಯೆ: 
    080-2337 6948 / 98458 33138   

    ಮಾರ್ಗಸೂಚಿ: 
    ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಇಳಿಯುವುದು. ಬಸ್ ನಿಲ್ದಾಣದಿಂದ ಕೇವಲ 5 ನಿಮಿಷಗಳ ನಡಿಗೆ. ದೇವಾಲಯವು ಆನಂದ ರಾವ್ ವೃತ್ತದ ಬಳಿಯಿರುವ ಪಿಡಬ್ಲ್ಯೂಡಿ ಕಚೇರಿ ಆವರಣದಲ್ಲಿ ಇರುತ್ತದೆ.

    ಕನ್ನಡ ಅನುವಾದ: ಶ್ರೀಕಂಠ ಶರ್ಮ
    ಮಹಾರಾಷ್ಟ್ರ ಗೃಹ ಮಂತ್ರಿ ಶ್ರೀ.ಸತೇಜ್ ಪಾಟೀಲ್ ಶಿರಡಿ ಭೇಟಿ - 12ನೇ ಡಿಸೆಂಬರ್ 2010 - ಕೃಪೆ: ಸಾಯಿಅಮೃತಧಾರಾ.ಕಾಂ

    ಮಹಾರಾಷ್ಟ್ರ ಸರ್ಕಾರದ ಗೃಹ ಮಂತ್ರಿ ಶ್ರೀ.ಸತೇಜ್ ಪಾಟೀಲ್ ರವರು ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನ ಪಡೆದರು. ಆ ಸಂದರ್ಭದಲ್ಲಿ ಗೃಹ ಮಂತ್ರಿಗಳು ಮತ್ತು ಅವರ ಧರ್ಮಪತ್ನಿಯವರು ಸಾಯಿಬಾಬಾರವರ ಪಾದ ಪೂಜೆಯನ್ನು ನೆರವೇರಿಸಿದರು. ಸಮಾಧಿ ದರ್ಶನ ಮತ್ತು ಪಾದ ಪೂಜೆಯ ನಂತರ ಗೃಹ ಮಂತ್ರಿಗಳನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆಯವರು ಸನ್ಮಾನಿಸಿದರು. 

    ಶಿರಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆಯುತ್ತಿರುವ ಮಹಾರಾಷ್ಟ್ರ ಸರ್ಕಾರದ ಗೃಹ ಮಂತ್ರಿ ಶ್ರೀ.ಸತೇಜ್ ಪಾಟೀಲ್

    ಸಾಯಿಬಾಬಾರವರ ಪಾದಪೂಜೆ ನೆರವೇರಿಸುತ್ತಿರುವ ಗೃಹ ಮಂತ್ರಿ ಶ್ರೀ.ಸತೇಜ್ ಪಾಟೀಲ್ ಮತ್ತು ಅವರ ಪತ್ನಿ

    ಮಹಾರಾಷ್ಟ್ರ ಸರ್ಕಾರದ ಗೃಹ ಮಂತ್ರಿ ಶ್ರೀ.ಸತೇಜ್ ಪಾಟೀಲ್ ರವರನ್ನು ಸನ್ಮಾನಿಸುತ್ತಿರುವ ಶ್ರೀ.ಜಯಂತ್ ಸಾಸನೆ 

    ಕನ್ನಡ ಅನುವಾದ: ಶ್ರೀಕಂಠ ಶರ್ಮ

    Friday, December 10, 2010

    ಬೆಂಗಳೂರಿನ ಸಾಯಿ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ ಟ್ರಸ್ಟ್ (ನೋಂದಣಿ), ಸಹಕಾರ ನಗರ ಪೋಸ್ಟ್, ಕೊಡಿಗೆಹಳ್ಳಿ, ಬೆಂಗಳೂರು-560 092. ಕರ್ನಾಟಕ - ಕೃಪೆ: ಸಾಯಿ ಅಮೃತಧಾರಾ.ಕಾಂ

    ಈ ದೇವಾಲಯವು ಬೆಂಗಳೂರಿನ ಸಹಕಾರ ನಗರದಲ್ಲಿರುವ ಕೊಡಿಗೆಹಳ್ಳಿಯ ಕೊನೆಯ ಬಸ್ ನಿಲ್ದಾಣದ ಬಳಿ ಇರುತ್ತದೆ. ಈ ದೇವಾಲಯದ ವಿಶೇಷತೆಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ. 


    ದೇವಾಲಯದ ವಿಶೇಷತೆಗಳು:
    • ಈ ದೇವಾಲಯವು 3ನೇ ಮಾರ್ಚ್ 2004 ರಂದು ಉದ್ಘಾಟನೆಗೊಂಡಿತು. 
    • ದೇವಾಲಯದಲ್ಲಿ ಬೆಳ್ಳಿಯ ಸಿಂಹಾಸನದ ಮೇಲೆ ಕುಳಿತಿರುವ ಮತ್ತು ಹಿಂಭಾಗದಲ್ಲಿ ಬೆಳ್ಳಿಯ ಪ್ರಭಾವಳಿಯನ್ನು ಹೊಂದಿರುವ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹವನ್ನು ಸಾಯಿಭಕ್ತರು ನೋಡಬಹುದು. 
    • ದೇವಾಲಯದ ಗರ್ಭಗುಡಿಯ ಹೊರಗಡೆ ಸಾಯಿಬಾಬಾರವರ ವಿಗ್ರಹಕ್ಕೆ ಎದುರಾಗಿ ಇರುವಂತೆ ಸಾಯಿಬಾಬಾರವರ ಅಮೃತ ಶಿಲೆಯ ಪಾದುಕೆ ಮತ್ತು ನಂದಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. 
    • ಸಾಯಿಬಾಬಾರವರ ವಿಗ್ರಹ ಮತ್ತು ನಂದಿಯ ನಡುವೆ ಇರುವ ದೇವಾಲಯದ ಮದ್ಯಭಾಗದಲ್ಲಿ ಅಮೃತಶಿಲೆಯ ಕೂರ್ಮವನ್ನು  ಸ್ಥಾಪಿಸಲಾಗಿದೆ. 
    • ದೇವಾಲಯದ ಹೊರಭಾಗದಲ್ಲಿ ಮಹಾದ್ವಾರದ ಬಳಿ ಕಪ್ಪು ಶಿಲೆಯ ಅಂಜನೇಯ, ದತ್ತಾತ್ರೇಯ, ಶಿವಲಿಂಗ ಮತ್ತು ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ. 
    • ದೇವಾಲಯದ ಹೊರಭಾಗದಲ್ಲಿರುವ ಪವಿತ್ರ ಅರಳಿ ಮರದ ಕೆಳಗಡೆ ಕಪ್ಪು ಶಿಲೆಯ ಗಣಪತಿ, ನಾಗದೇವರುಗಳ ವಿಗ್ರಹಗಳನ್ನು ಸ್ಥಾಪಿಸಲಾಗಿದೆ.

    ದೇವಾಲಯದ ಹೊರನೋಟ 

    ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹ 

    ಅಮೃತ ಶಿಲೆಯ ನಂದಿ ಮತ್ತು ಪಾದುಕೆಗಳು 

    ಪವಿತ್ರ ಧುನಿ ಮಾ 

    ಆಂಜನೇಯ, ದತ್ತಾತ್ರೇಯ ಮತ್ತು ಈಶ್ವರ ಲಿಂಗ

     ಗಣಪತಿಯ ವಿಗ್ರಹ 

    ನಾಗದೇವರುಗಳ ವಿಗ್ರಹ

    ದೇವಾಲಯದ ಕಾರ್ಯಚಟುವಟಿಕೆಗಳು:



    ದಿನನಿತ್ಯದ ಕಾರ್ಯಕ್ರಮಗಳು:


    ಆರತಿಯ ಸಮಯ:

    ಆರತಿ
    ಸಮಯ
    ಕಾಕಡಾ ಆರತಿ
    6:30 AM
    ಮಧ್ಯಾನ್ಹ ಆರತಿ
    12:00 PM
    ಧೂಪಾರತಿ
    6:00 PM
    ಶೇಜಾರತಿ
    8:00 PM

    ಪ್ರತಿನಿತ್ಯ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾಶುಲ್ಕ 40/- ರುಪಾಯಿಗಳು.

    ಪ್ರತಿ ತಿಂಗಳ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತದೆ. ಸೇವಾಶುಲ್ಕ 30/- ರುಪಾಯಿಗಳು.

    ವಿಶೇಷ ಉತ್ಸವದ ದಿನಗಳಂದು ಸಾಯಿ ಭಕ್ತರು ಪ್ರಸಾದ ಸೇವೆ, ವಸ್ತ್ರ ಸೇವೆ ಮತ್ತು ಹೂವಿನ ಅಲಂಕಾರಗಳಿಗೆ ಉದಾರವಾಗಿ ದೇಣಿಗೆಯನ್ನು ನೀಡಬಹುದು. 

    ಪ್ರತಿನಿತ್ಯ ಸಂಜೆ 6:30 ರಿಂದ 8:00 ಘಂಟೆಯವರೆಗೆ ವಿವಿಧ ಸಾಯಿ ಭಜನ ಮಂಡಳಿಯವರಿಂದ ಸಾಯಿ ಭಜನೆ ಕಾರ್ಯಕ್ರಮವಿರುತ್ತದೆ.

    ವಿಶೇಷ ಉತ್ಸವದ ದಿನಗಳು: 

    1. ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ 3ನೇ ಮಾರ್ಚ್.
    2. ಸಂಕ್ರಾಂತಿ.
    3. ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ).
    4. ದತ್ತ ಜಯಂತಿ.
    5. ವೈಕುಂಠ ಏಕಾದಶಿ.
    6. ಗುರು ಪೂರ್ಣಿಮಾ.
    7. ಹನುಮಜ್ಜಯಂತಿ.
    ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ

    ಸ್ಥಳ: 


    ರಾಜ್ ಮುರಳಿ ಚಿತ್ರಮಂದಿರದ ಬಳಿ, ಕೊಡಿಗೆಹಳ್ಳಿ ಕಡೆ ಬಸ್ ನಿಲ್ದಾಣದ ಹತ್ತಿರ

    ವಿಳಾಸ:
    ಶ್ರೀ ಶಿರಡಿ ಸಾಯಿಬಾಬಾ ಮಂದಿರ ಟ್ರಸ್ಟ್ (ನೋಂದಣಿ), ಸಹಕಾರ ನಗರ ಪೋಸ್ಟ್, ಕೊಡಿಗೆಹಳ್ಳಿ, ಬೆಂಗಳೂರು-560 092. ಕರ್ನಾಟಕ.

    ಸಂಪರ್ಕಿಸಬೇಕಾದ ವ್ಯಕ್ತಿಗಳು: 
     

    ಶ್ರೀ.ನಂಜುಂಡಪ್ಪ - ಅಧ್ಯಕ್ಷರು / ಶ್ರೀ.ನಂಜಪ್ಪ - ಕಾರ್ಯದರ್ಶಿ / ಶ್ರೀಮತಿ.ಮೈಥಿಲಿ ರಾಘವನ್ - ಖಚಾಂಚಿ / ಶ್ರೀ.ಪ್ರಶಾಂತ್ ಆಚಾರ್ಯ

    ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:

    95389 02041 / 99160 39193
     
    ಮಾರ್ಗಸೂಚಿ:

    ಕೊಡಿಗೆಹಳ್ಳಿ ಕಡೆಯ ಬಸ್ ನಿಲ್ದಾಣದಲ್ಲಿ ಇಳಿಯುವುದು. ಬಸ್ ನಿಲ್ದಾಣದಿಂದ ಕೇವಲ 5 ನಿಮಿಷಗಳ ನಡಿಗೆ. ದೇವಾಲಯವು ರಾಜ್ ಮುರಳಿ ಚಿತ್ರಮಂದಿರದ ಬಳಿ ಇರುತ್ತದೆ. 



    ಕನ್ನಡ ಅನುವಾದ: ಶ್ರೀಕಂಠ ಶರ್ಮ
    ಬೆಂಗಳೂರಿನ ಸಾಯಿ ಮಂದಿರ - ಸಾಯಿ ಮಂದಿರ, ಶ್ರೀ ಶಿರಡಿ ಸಾಯಿ ಸೇವಾ ಟ್ರಸ್ಟ್ (ನೋಂದಣಿ), ನಂ.69, 2ನೇ ಮುಖ್ಯರಸ್ತೆ, ಮಾತೃ ಬಡಾವಣೆ, ಯಲಹಂಕ ನ್ಯೂ ಟೌನ್, ಜಿ.ಕೆ.ವಿ.ಕೆ.ಪೋಸ್ಟ್, ಬೆಂಗಳೂರು-560 065. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ

    ಈ ದೇವಾಲಯವನ್ನು ಬೆಂಗಳೂರಿನ ಯಲಹಂಕ ನ್ಯೂ ಟೌನ್ ನಲ್ಲಿರುವ ಪ್ರತಿಷ್ಟಿತ "ಮದರ್ ಡೈರಿ" ಯ ಪಕ್ಕದಲ್ಲಿರುವ ಮಾತೃ ಬಡಾವಣೆಯಲ್ಲಿ ಸ್ಥಾಪಿಸಲಾಗಿದೆ. ಈ ದೇವಾಲಯದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

    ದೇವಾಲಯದ ವಿಶೇಷತೆಗಳು:

    • ಈ ದೇವಾಲಯದ ಭೂಮಿ ಪೂಜೆಯನ್ನು ಡಿಸೆಂಬರ್ 2003 ರಲ್ಲಿ ಮಾಡಲಾಯಿತು. 
    • ಈ ದೇವಾಲಯವನ್ನು 23ನೇ ಡಿಸೆಂಬರ್ 2003 ರಂದು ಹೇಮಾಡಪಂತರ ಸಾಯಿ ಸಚ್ಚರಿತೆಯನ್ನು ಕನ್ನಡಕ್ಕೆ ತರ್ಜುಮೆ ಮಾಡಿರುವ ಶ್ರೀ.ಎನ್.ಎಸ್.ಅನಂತರಾಮು ರವರು ಉದ್ಘಾಟಿಸಿದರು. 
    • ಈ ದೇವಾಲಯದಲ್ಲಿ ಸುಮಾರು 83 ಕೆಜಿ ತೂಕದ ಮತ್ತು ಸುಮಾರು 3 ಅಡಿ ಎತ್ತರದ ಸುಂದರ ಪಂಚಲೋಹದ ವಿಗ್ರಹವನ್ನು ಸ್ಥಾಪಿಸಲಾಗಿದೆ. ಅಲ್ಲದೇ, ಅಮೃತಶಿಲೆಯ ಚಿಕ್ಕ ವಿಗ್ರಹವು ಕೂಡ ದೇವಾಲಯದಲ್ಲಿದ್ದು ಅದನ್ನು ದಿನನಿತ್ಯದ ಅಭಿಷೇಕಕ್ಕೆ ಬಳಸಲಾಗುತ್ತದೆ. ಪಂಚಲೋಹದ ಸಾಯಿಬಾಬಾರವರ ವಿಗ್ರಹದ ಮುಂದೆ ಅಮೃತಶಿಲೆಯ ಸುಂದರ ಪಾದುಕೆಗಳನ್ನು ಸ್ಥಾಪಿಸಲಾಗಿದೆ. 
     ದೇವಾಲಯದ ಹೊರನೋಟ

     ಸಾಯಿಬಾಬಾರವರ ಪಂಚಲೋಹದ ವಿಗ್ರಹ 

    ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹ

    ಅಮೃತ ಶಿಲೆಯ ಪಾದುಕೆಗಳು

    ದೇವಾಲಯದ ಕಾರ್ಯಚಟುವಟಿಕೆಗಳು:

    ದಿನನಿತ್ಯದ ಕಾರ್ಯಕ್ರಮಗಳು:

    ಆರತಿಯ ಸಮಯ:
    ಕಾಕಡಾ ಆರತಿ : ಬೆಳಿಗ್ಗೆ 6:30 ಕ್ಕೆ
    ಮಧ್ಯಾನ್ಹ ಆರತಿ: ಮಧ್ಯಾನ್ಹ 12 ಘಂಟೆಗೆ
    ಧೂಪಾರತಿ: ಸಂಜೆ 6:30 ಕ್ಕೆ
    ಶೇಜಾರತಿ: ರಾತ್ರಿ 8:30 ಕ್ಕೆ


    ಪ್ರತಿನಿತ್ಯ ಸಾಯಿಬಾಬಾರವರಿಗೆ ಅರ್ಚನೆಯನ್ನು ಮಾಡಲಾಗುತ್ತದೆ. ಸೇವಾಶುಲ್ಕ 5/- ರುಪಾಯಿಗಳು.

    ಪ್ರತಿನಿತ್ಯ ಸಾಯಿಬಾಬಾರವರ ವಿಗ್ರಹಕ್ಕೆ ಬೆಳಿಗ್ಗೆ 8:30 ಕ್ಕೆ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾಶುಲ್ಕ 51/- ರುಪಾಯಿಗಳು.ವಿಶೇಷ ಉತ್ಸವದ ದಿನಗಳಲ್ಲಿ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ ಸಾಯಿಭಕ್ತರೆ ಸ್ವತಃ ಅಭಿಷೇಕವನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೇವಾಶುಲ್ಕ 101/- ರುಪಾಯಿಗಳು.

    ಪ್ರತಿ ತಿಂಗಳ ಹುಣ್ಣಿಮೆಯಂದು ಬೆಳಿಗ್ಗೆ 9:00 ಘಂಟೆಗೆ ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ.  ಸೇವಾಶುಲ್ಕ 25/- ರುಪಾಯಿಗಳು.

    ವಿಶೇಷ ಉತ್ಸವದ ದಿನಗಳಲ್ಲಿ ವಿಶೇಷ ಹೋಮಗಳನ್ನು ಮಾಡಲಾಗುತ್ತದೆ. ಸೇವಾಶುಲ್ಕ 101/- ರುಪಾಯಿಗಳು.

    ವಿಶೇಷ ಉತ್ಸವದ ದಿನಗಳಲ್ಲಿ ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಇರುತ್ತದೆ.

    ವಿಶೇಷ ಉತ್ಸವದ ದಿನಗಳು:

    1. ಶ್ರೀರಾಮನವಮಿ 
    2. ಗುರುಪೂರ್ಣಿಮೆ 
    3. ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ)
    4. ದತ್ತ ಜಯಂತಿ
    5. ಪ್ರತಿ ವರ್ಷದ 31ನೇ ಡಿಸೆಂಬರ್ ಹೊಸ ವರ್ಷದ ಅಂಗವಾಗಿ ರಾತ್ರಿ 9 ಘಂಟೆಯಿಂದ ವಿಶೇಷ ಗಾಯತ್ರಿ ಹೋಮವನ್ನು   ಆಚರಿಸಲಾಗುತ್ತದೆ.

    ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:

    ಸ್ಥಳ: 
    ಮದರ್ ಡೈರಿ ವೃತ್ತದ ಹತ್ತಿರ, ಯಲಹಂಕ ನ್ಯೂ ಟೌನ್.

    ವಿಳಾಸ:  
    ಸಾಯಿ ಮಂದಿರ 
    ಶ್ರೀ ಶಿರಡಿ ಸಾಯಿ ಸೇವಾ ಟ್ರಸ್ಟ್ (ನೋಂದಣಿ)
    ನಂ.69, 2ನೇ  ಮುಖ್ಯರಸ್ತೆ, ಮಾತೃ ಬಡಾವಣೆ, 
    ಯಲಹಂಕ ನ್ಯೂ ಟೌನ್, ಜಿ.ಕೆ.ವಿ.ಕೆ.ಪೋಸ್ಟ್, ಬೆಂಗಳೂರು-560 065. ಕರ್ನಾಟಕ.

    ಸಂಪರ್ಕಿಸಬೇಕಾದ ವ್ಯಕ್ತಿಗಳು: 
    ಶ್ರೀ ಡಿ.ಲಕ್ಷ್ಮಯ್ಯ / ಶ್ರೀ.ಪುಟ್ಟಸ್ವಾಮಿ ಗೌಡ / ಶ್ರೀ.ರಾಮಪ್ಪ.

    ದೂರವಾಣಿ ಸಂಖ್ಯೆಗಳು: 
    080-2846 3790 / +91 94483 13097 / +91 76763 88175  

    ಈ ಮೇಲ್ ವಿಳಾಸ: 
    aravind0pinky@gmail.com

    ಮಾರ್ಗಸೂಚಿ: 
    ಮದರ್ ಡೈರಿ ವೃತ್ತ,ಯಲಹಂಕ ನ್ಯೂ ಟೌನ್ ಬಸ್ ನಿಲ್ದಾಣದಲ್ಲಿ ಇಳಿಯುವುದು. 2 ನಿಮಿಷದ ನಡೆದರೆ ದೇವಾಲಯ ಸಿಗುತ್ತದೆ. ಮೆಜಿಸ್ಟಿಕ್ ನಿಂದ ಬಸ್ ಗಳು: 284-A,D,401D; ಮಾರುಕಟ್ಟೆ:284-A,401-D; ಶಿವಾಜಿನಗರ: 284-B; ಯಶವಂತಪುರದಿಂದ: 401-A,B,H.


    ಕನ್ನಡ ಅನುವಾದ: ಶ್ರೀಕಂಠ ಶರ್ಮ