Wednesday, December 31, 2014

ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ಉಚಿತ ಲಿಥೋಟ್ರಿಪ್ಸಿ ಶಿಬಿರದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

 ಶ್ರೀ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ 4ನೇ ಡಿಸೆಂಬರ್ 2014 ರಿಂದ 8ನೇ ಡಿಸೆಂಬರ್ 2014 ರವರಗೆ ಸಂಸ್ಥಾನದ ವತಿಯಿಂದ ನಡೆಸಲಾಗುತ್ತಿರುವ ಶ್ರೀ ಸಾಯಿನಾಥ ಆಸ್ಪತ್ರೆಯಲ್ಲಿ ಅಹಮದಾಬಾದ್ ನ  ಖ್ಯಾತ ಲೇಸರ್ ಶಸ್ತ್ರಚಿಕಿತ್ಸಾ ತಜ್ಞರಾದ ಡಾ.ಕೇತನ್  ಶುಕ್ಲಾರವರ ನೇತೃತ್ವದಲ್ಲಿ ಉಚಿತ ಲಿಥೋಟ್ರಿಪ್ಸಿ ಶಿಬಿರವನ್ನು ಆಯೋಜಿಸಿತ್ತು ಎಂದು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಇದೇ ತಿಂಗಳ 30ನೇ  ಡಿಸೆಂಬರ್ 2014, ಮಂಗಳವಾರದಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸುದ್ಧಿಗಾರರಿಗೆ ತಿಳಿಸಿದರು. ಈ ಶಿಬಿರದಲ್ಲಿ ಒಟ್ಟು 37 ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಿ ಮೂತ್ರಕೋಶದ  ಕಲ್ಲುಗಳನ್ನು ಹೊರತೆಗೆಯಲಾಯಿತು. 

ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ನಡೆಸಲಾಗುತ್ತಿರುವ ಶ್ರೀ ಸಾಯಿನಾಥ ಆಸ್ಪತ್ರೆ ಮತ್ತು ಸಾಯಿಬಾಬಾ ಆಸ್ಪತ್ರೆಗಳಲ್ಲಿ ವರ್ಷದುದ್ದಕ್ಕೂ ನಿಯಮಿತವಾಗಿ ಕೃತಕ ಕಣ್ಣಿನ ಮಸೂರ ಶಸ್ತ್ರಚಿಕಿತ್ಸಾ ಶಿಬಿರ, ಕೃತಕ ಜೈಪುರದ ಕಾಲುಗಳ ಜೋಡಣೆ ಶಿಬಿರ, ಪ್ಲಾಸ್ಟಿಕ್ ಸರ್ಜರಿ ಶಿಬಿರ, ಹೋಮಿಯೋಪತಿ ಶಿಬಿರ, ಸಂಧಿವಾತ ಮತ್ತು ಕೀಲುನೋವು ಶಿಬಿರ,   ಹಲವಾರು ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಹಿಳೆಯರಿಗಾಗಿ ವಿಶೇಷ ಲ್ಯಾಪ್ರೋಸ್ಕೋಪಿ ಶಿಬಿರ, ರೋಗ ನಿರ್ಣಯ ಶಿಬಿರ, ಮೂಗು ಚಿಕಿತ್ಸಾ ಶಿಬಿರ, ಎಂಡೋಸ್ಕೋಪಿ ಶಿಬಿರ, ಕ್ಯಾನ್ಸರ್ ಪತ್ತೆ ಶಿಬಿರ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಶಿಬಿರ, ಮೆಳ್ಳುಗಣ್ಣು ಪತ್ತೆ ಶಿಬಿರ ಹಾಗೂ ಲಿಥೋಟ್ರಿಪ್ಸಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಶ್ರೀ.ಜಾಧವ್ ತಿಳಿಸಿದರು. 

ಇತ್ತೀಚೆಗೆ ಹಮ್ಮಿಕೊಳ್ಳಲಾದ ಲಿಥೋಟ್ರಿಪ್ಸಿ ಶಿಬಿರದಲ್ಲಿ 19 ರೋಗಿಗಳ ಮೂತ್ರಕೋಶದಲ್ಲಿದ್ದ ಸುಮಾರು 1 ರಿಂದ 1.5 ಸೆಂಟಿಮೀಟರ್ ಗಾತ್ರದ ಸಣ್ಣ ಕಲ್ಲುಗಳನ್ನು ಲಿಥೋಟ್ರಿಪ್ಸಿ ಧ್ವನಿ ತರಂಗಗಳ ಮೂಲಕ ಯಶಸ್ವಿಯಾಗಿ ಹೊರತೆಗೆಯಲಾಯಿತು.  ಅದೇ ರೀತಿಯಲ್ಲಿ  18 ರೋಗಿಗಳ  ಮೂತ್ರಕೋಶದಲ್ಲಿದ್ದ ದೊಡ್ಡ ಗಾತ್ರದ ಕಲ್ಲುಗಳನ್ನು ಪರ್ಕ್ಯುಟೇನಿಯಸ್ ನೆಪ್ರೊಲಿಥೋಟೋಮಿ ಶಸ್ತ್ರಚಿಕಿತ್ಸೆಯ ಸಹಾಯದಿಂದ ಹೊರತೆಗೆಯಲಾಯಿತು. ಅಹಮದಾಬಾದ್ ನ ಖ್ಯಾತ ಯೂರೋಸರ್ಜನ್ ಆದ ಡಾ.ಕೇತನ್  ಶುಕ್ಲಾರವರು ತಮ್ಮ ವೈದ್ಯರ ತಂಡ ಹಾಗೂ ಆಂಬ್ಯುಲೆನ್ಸ್ ಶಸ್ತ್ರಚಿಕಿತ್ಸೆ ವ್ಯಾನ್ ನೊಂದಿಗೆ ಶಿರಡಿಯಲ್ಲಿ ನಡೆದ ಈ ಶಿಬಿರಕ್ಕೆ ಆಗಮಿಸಿ ಉಚಿತ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. 

ಸಾಮಾನ್ಯ ಶಸ್ತ್ರಚಿಕಿತ್ಸಾ ತಜ್ಞರಾದ ಡಾ.ರಾಮ್ ನಾಯಕ್, ಅರವಳಿಕೆ ತಜ್ಞರು, ಶ್ರೀ ಸಾಯಿನಾಥ ಆಸ್ಪತ್ರೆಯ ಸಿಬ್ಬಂದಿಗಳು ಈ ಶಿಬಿರವು ಯಶಸ್ವಿಯಾಗಿ ನಡೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.  ಈ ಶಸ್ತ್ರ ಚಿಕಿತ್ಸೆಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ 25,000 ದಿಂದ 30,000 ರೂಪಾಯಿಗಳವರೆಗೆ ಖರ್ಚು ತಗುಲಲಿದ್ದು ಶ್ರೀ ಸಾಯಿನಾಥ ಆಸ್ಪತ್ರೆಯು ಉಚಿತವಾಗಿ ಈ ಸೇವೆಯನ್ನು ರೋಗಿಗಳಿಗೆ ಒದಗಿಸಿತು. ಅಷ್ಟೆ ಅಲ್ಲದೆ ಎರಡು ಹೊತ್ತು ಉಚಿತ ಊಟ ಮತ್ತು ಟೀ  ಸೇವೆಯನ್ನು ಸಹ ಆಸ್ಪತ್ರೆಯ ವತಿಯಿಂದ ರೋಗಿಗಳಿಗೆ ನೀಡಲಾಯಿತು. 

ಈ ಶಿಬಿರವು ಯಶಸ್ವಿಯಾಗಿ ನಡೆಯುವ ನಿಟ್ಟಿನಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರೂ ಹಾಗೂ ಅಹಮದ್ ನಗರ ಜಿಲ್ಲಾ ನ್ಯಾಯಾಧೀಶರೂ ಅದ ಶ್ರೀ.ಶಶಿಕಾಂತ್ ಕುಲಕರ್ಣಿ, ತ್ರಿ-ಸದಸ್ಯ  ಸಮಿತಿಯ ಸದಸ್ಯರು ಹಾಗೂ ಮುಖ್ಯ ಜಿಲ್ಲಾ ನ್ಯಾಯಾಧೀಶರಾದ ಶ್ರೀ.ಅನಿಲ್ ಕಾವಡೆಯವರ ಮಾರ್ಗದರ್ಶನದಲ್ಲಿ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ವೈದ್ಯಕೀಯ ನಿರ್ದೇಶಕರಾದ ಡಾ.ಪ್ರಭಾಕರ ರಾವ್, ವೈದ್ಯಕೀಯ ಅಧೀಕ್ಷಕರಾದ ಡಾ.ಕೌಶಿಕ್ ಮಕ್ವಾನ, ವೈದ್ಯಕೀಯ ಅಧಿಕಾರಿಗಳು ಮತ್ತು ಶ್ರೀ ಸಾಯಿಬಾಬಾ ಸಂಸ್ಥಾನದ ಎಲ್ಲಾ ನೌಕರರೂ ಬಹಳ ಶ್ರಮವಹಿಸಿ ಕೆಲಸ ಮಾಡಿರುತ್ತಾರೆ ಎಂದು ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಜಾಧವ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

ಮರಾಠಿಯಿಂದ ಆಂಗ್ಲಭಾಷೆಗೆ:ಶ್ರೀ ನಾಗರಾಜ್ ಅನ್ವೇಕರ್, ಬೆಂಗಳೂರು 
ಆಂಗ್ಲಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ  

Saturday, December 27, 2014

ವಿಶ್ವ ವಿಖ್ಯಾತ ಭಾರತೀಯ ಕುಸ್ತಿ ಪಟು ಶ್ರೀ.ಸುಶೀಲ್ ಕುಮಾರ್ ಸೋಲಂಕಿ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಇತ್ತೀಚೆಗಷ್ಟೆ ಮುಕ್ತಾಯವಾದ  ಒಲಂಪಿಕ್  ಕ್ರೀಡಾ ಕೂಟದಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡ ವಿಶ್ವ ವಿಖ್ಯಾತ ಭಾರತೀಯ ಕುಸ್ತಿ ಪಟು ಶ್ರೀ.ಸುಶೀಲ್ ಕುಮಾರ್ ಸೋಲಂಕಿಯವರು ಇದೇ ತಿಂಗಳ 27ನೇ ಡಿಸೆಂಬರ್ 2014, ಶನಿವಾರದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.  


ಕನ್ನಡ ಅನುವಾದ:  ಶ್ರೀಕಂಠ ಶರ್ಮ 

Friday, December 26, 2014

ತಲೆಯ ಮೇಲೆ 25 ಕೆಜಿ ತೂಕದ ನೀರು ತುಂಬಿದ ತಾಮ್ರದ ಕೊಡವನ್ನು ಹೊತ್ತುಕೊಂಡು 300 ಕ್ಕೂ ಹೆಚ್ಚು ಕಿಲೋಮೀಟರ್ ಗಳ ದೂರದ ಶಿರಡಿಗೆ ಪಾದಯಾತ್ರೆ ಮಾಡಿದ ಗರ್ದನಖೇಡ್ ನ ಸಾಯಿ ಭಕ್ತ ದಂಪತಿಗಳು - ಕೃಪೆ: ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಔಸ ತಾಲೂಕಿನ ಗರ್ದನಖೇಡ್ ನ ಸಾಯಿ ಭಕ್ತ ದಂಪತಿಗಳಾದ ಶ್ರೀಮತಿ ಮತ್ತು ಶ್ರೀ. ಇರಾಜಿ ಅಪ್ಪಾಸೋ ಶಿಂಧೆಯವರುಗಳು ತಮ್ಮ ತಲೆಯ ಮೇಲೆ 25 ಕೆಜಿ ತೂಕದ ನೀರು ತುಂಬಿದ ತಾಮ್ರದ ಕೊಡವನ್ನು ಹೊತ್ತುಕೊಂಡು  ತಮ್ಮ ಸ್ಥಳದಿಂದ ಕಳೆದ ಎರಡು ತಿಂಗಳ ಹಿಂದೆ ಹೊರಟು 300 ಕ್ಕೂ ಹೆಚ್ಚು ಕಿಲೋಮೀಟರ್ ಗಳ ದೂರದ ಪಾದಯಾತ್ರೆಯನ್ನು ಮಾಡಿ ಇದೇ ತಿಂಗಳ  25ನೇ ಡಿಸೆಂಬರ್ 2014, ಗುರುವಾರ ದಂದು ಶಿರಡಿಗೆ ತಲುಪಿ ತಮ್ಮ ಹರಕೆಯನ್ನು ಪೂರೈಸಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 



ಮರಾಠಿಯಿಂದ ಅಂಗ್ಲಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್ , ಬೆಂಗಳೂರು 
ಕನ್ನಡ ಅನುವಾದ: ಶ್ರೀಕಂಠ ಶರ್ಮ 

Tuesday, December 23, 2014

ಶ್ರೀ ಸಾಯಿಬಾಬಾ ಜ್ಯೂನಿಯರ್ ಕಾಲೇಜ್ ನ ವತಿಯಿಂದ ವಾರ್ಷಿಕ ಕ್ರೀಡಾ ದಿನದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿಯ ಶ್ರೀ ಸಾಯಿಬಾಬಾ ಜ್ಯೂನಿಯರ್ ಕಾಲೇಜ್ ನ ವತಿಯಿಂದ ಇದೇ ತಿಂಗಳ 12ನೇ ಡಿಸೆಂಬರ್ 2014, ಶುಕ್ರವಾರದಂದು ವಾರ್ಷಿಕ ಕ್ರೀಡಾ ದಿನವನ್ನು ಆಯೋಜಿಸಲಾಗಿತ್ತು. ಈ ಕ್ರೀಡಾಕೂಟದ ಉದ್ಘಾಟನೆಯನ್ನು ಶ್ರೀ ಸಾಯಿಬಾಬಾ ಸಂಸ್ಥಾನ ಶಿರಡಿಯ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ.ವಿಕಾಸ್ ಶಿವಗಜೆಯವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. 


ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ.ರಾಜೇಂದ್ರ ಜಾಧವ್ ರವರು ಕ್ರೀಡೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ದೈಹಿಕ ಮತ್ತು ವೈದ್ಯಕೀಯ ಸಾಮರ್ಥ್ಯ ಉತ್ತಮಗೊಳ್ಳುತ್ತದೆ. ಅಲ್ಲದೇ ಯುವ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನಕ್ಕೆ ಬೇಕಾದ ಸರಿಯಾದ ಮಾರ್ಗದರ್ಶನವನ್ನು ಈ ಕ್ರೀಡೆಗಳು ನೀಡುತ್ತವೆ. ಆದ ಕಾರಣ, ಎಲ್ಲಾ ಶಾಲೆಗಳಲ್ಲೂ ಕ್ರೀಡಾಕೂಟವನ್ನು ತಪ್ಪದೇ ಆಯೋಜಿಸಬೇಕು ಎಂದು ತಿಳಿಸಿದರು. 

ಶ್ರೀ.ರಾಜೇಂದ್ರ ಜಾಧವ್ ರವರು ತಮ್ಮ ಮಾತನ್ನು ಮುಂದುವರಿಸುತ್ತಾ ಭಾರತದ 30 ರಿಂದ 40 ವರ್ಷದ ಒಳಗಿನ 70 ಪ್ರತಿಶತ ಜನರು ಪ್ರತಿನಿತ್ಯ  ದೈಹಿಕ ವ್ಯಾಯಾಮಗಳನ್ನು ಮಾಡುವ ಅಭ್ಯಾಸವನ್ನು ಇರಿಸಿಕೊಂಡಿಲ್ಲ. ಹಾಗಾಗಿ, ಬಹಳಷ್ಟು ಯುವ ಜನರು ಹೃದಯಾಘಾತಕ್ಕೆ  ಒಳಗಾಗುತ್ತಿದ್ದಾರೆ ಎಂದು ತಿಳಿಸಿದರು. 

ಕ್ರೀಡಾಕೂಟಗಳಲ್ಲಿ ಸಕ್ರೀಯವಾಗಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ದೈಹಿಕ  ಸಾಮರ್ಥ್ಯ ಹೆಚ್ಚುವುದಲ್ಲದೇ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ. ಆದುದರಿಂದ ವಿದ್ಯಾರ್ಥಿಗಳಿಗೆ ಆಟದ ಮೈದಾನದ ಅವಶ್ಯಕತೆ ಇದೆ ಎಂದು ತಿಳಿಸಿದ ಶ್ರೀ.ರಾಜೇಂದ್ರ ಜಾಧವ್ ರವರು ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿಗಳಿಗೆ ಆಟದ ಮೈದಾನದ ಸೌಲಭ್ಯವನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.  ಅಷ್ಟೇ ಅಲ್ಲದೆ "ನೀವು ಆಟಗಳಲ್ಲಿ ಭಾಗವಹಿಸಿ ಅದರಲ್ಲಿ ಸೋತರೆ ಅದನ್ನು ಸೋಲೆಂದು ಪರಿಗಣಿಸಬೇಡಿ. ಬದಲಿಗೆ ನೀವು ನಿಮ್ಮ ಆತ್ಮವಿಶ್ವಾಸವನ್ನು ಕಳೆದುಕೊಂಡಲ್ಲಿ ಅದು ನಿಜವಾದ ಸೋಲು ಎಂಬುದನ್ನು ತಿಳಿಯಿರಿ" ಎಂಬ ಮಹೋನ್ನತ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಿದರು. 

ಶ್ರೀ ಸಾಯಿಬಾಬಾ ಜ್ಯೂನಿಯರ್  ಕಾಲೇಜ್ ತನ್ನ ವಿದ್ಯಾರ್ಥಿಗಳಿಗಾಗಿ ವಾಲಿಬಾಲ್, ಕಬಡ್ಡಿ, ನಿಧಾನಗತಿಯ ಸೈಕಲ್ ತುಳಿತ ಕ್ರೀಡೆಗಳನ್ನು ಆಯೋಜಿಸಿದ್ದರು. ಅಲ್ಲದೇ ಅಡಿಗೆ ಮತ್ತು ರಂಗೋಲಿ ಸ್ಪರ್ಧೆಗಳನ್ನು ಸಹ ಆಯೋಜಿಸಿದ್ದರು. ರಂಗೋಲಿ ಸ್ಪರ್ಧೆಯಲ್ಲಿ ಕುಮಾರಿ ಶ್ರದ್ಧಾ ಶೇಲರ್, ಕುಮಾರಿ ಸ್ವರೂಪ ಸೊಂಟಕ್ಕೆ, ಕುಮಾರಿ ಭಾಗ್ಯಶ್ರೀ ಸೋನಾವಾನೆ ಕ್ರಮವಾಗಿ ಮೊದಲನೇ, ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಗಳಿಸಿದರು. ಅಡಿಗೆ ಸ್ಪರ್ಧೆಯಲ್ಲಿ ಕುಮಾರಿ ಸ್ನೇಹಾ ತೋರಟ್, ಕುಮಾರಿ ರುಚಿತಾ ಓಸ್ವಾಲ್ ಮತ್ತು ಶ್ರೀ.ಹಿತೇಶ್ ಘಡಿವಾಲ್ ರವರು ಕ್ರಮವಾಗಿ ಮೊದಲನೇ, ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಗಳಿಸಿದರು.

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು, 
ಕನ್ನಡಕ್ಕೆ: ಶ್ರೀಕಂಠ ಶರ್ಮ 

Friday, November 28, 2014

ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಬುಡಕಟ್ಟು ಅಭಿವೃದ್ಧಿ ರಾಜ್ಯ ಸಚಿವ ಶ್ರೀ. ದಿಲೀಪ್ ಕುಂಬ್ಳೆಯವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಬುಡಕಟ್ಟು ಅಭಿವೃದ್ಧಿ ರಾಜ್ಯ ಸಚಿವರಾದ ಶ್ರೀ.ದಿಲೀಪ್ ಕುಂಬ್ಳೆಯವರು ಇದೇ ತಿಂಗಳ 28ನೇ ನವೆಂಬರ್ 2014, ಶುಕ್ರವಾರ ದಂದು ತಮ್ಮ ಕುಟುಂಬ ವರ್ಗದವರೊಡನೆ  ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನ (ಶಿರಡಿ) ಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು ಕೂಡ ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Wednesday, November 26, 2014

ಮಹಿಳಾ ಕ್ರೀಡಾ ಕೂಟದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕವನ್ನು ತನ್ನದಾಗಿಸಿಕೊಂಡ ಶ್ರೀ ಸಾಯಿಬಾಬಾ ಹುಡುಗಿಯರ ಶಾಲೆಯ ವಿದ್ಯಾರ್ಥಿನಿ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನದ ಶೈಕ್ಷಣಿಕ ಯೋಜನೆಯ ಅಡಿಯಲ್ಲಿ ನಡೆಸಲಾಗುತ್ತಿರುವ  ಶ್ರೀ ಸಾಯಿಬಾಬಾ ಹುಡುಗಿಯರ ಶಾಲೆಯ ವಿದ್ಯಾರ್ಥಿನಿಯಾದ ಕುಮಾರಿ ಗಾಯತ್ರಿ ವಾಮನ ತಕ್ರೆ ಇದೇ ತಿಂಗಳ 18ನೇ ನವೆಂಬರ್ 2014, ಮಂಗಳವಾರದಂದು ನಡೆದ ಮಹಿಳಾ ಕ್ರೀಡಾ ಕೂಟದ 100 ಮೀಟರ್ ಹರ್ಡಲ್ ಓಟದ ಸ್ಪರ್ಧೆಯಲ್ಲಿ ಎರಡನೆಯವಳಾಗಿ ಬರುವ ಮೂಲಕ ಬೆಳ್ಳಿಯ ಪದಕವನ್ನು ತನ್ನದಾಗಿಸಿಕೊಂಡಳು. ಈ ವಿಷಯವನ್ನು  ಶ್ರೀ ಸಾಯಿಬಾಬಾ ಸಂಸ್ಥಾನದ ಅಧಿಕಾರಿಗಳು 25ನೇ ನವೆಂಬರ್ 2014, ಮಂಗಳವಾರದಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸುದ್ಧಿಗಾರರಿಗೆ ತಿಳಿಸಿದರು. 

ಮಹಾರಾಷ್ಟ್ರ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆಯು  ಇದೇ ತಿಂಗಳ 18ನೇ ನವೆಂಬರ್ 2014, ಮಂಗಳವಾರದಂದು ಸ್ವಾಮಿ ವಿವೇಕಾನಂದ ರಾಜ್ಯ ಮಹಿಳೆಯರ ಕ್ರೀಡಾ ಸ್ಪರ್ಧೆ 2014-15 ಎಂಬ ಹೆಸರಿನ  ಈ ರಾಜ್ಯ ಮಟ್ಟದ ಈ ಮಹಿಳಾ ಕ್ರೀಡಾಕೂಟವನ್ನು ಆಯೋಜಿಸಿತ್ತು. ಇದರಲ್ಲಿ  ಶ್ರೀ ಸಾಯಿಬಾಬಾ ಹುಡುಗಿಯರ ಶಾಲೆಯ ವಿದ್ಯಾರ್ಥಿನಿಯರಾದ ಕುಮಾರಿ ಗಾಯತ್ರಿ ವಾಮನ ತಕ್ರೆ ಮತ್ತು ಕುಮಾರಿ ಪಲ್ಲವಿ ಆರ್ಕಾಸ್ ರವರುಗಳು ಭಾಗವಹಿಸಿದ್ದರು. ಈ ಕ್ರೀಡಾಕೂಟದ 100 ಮೀಟರ್ ಹರ್ಡಲ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕುಮಾರಿ ಗಾಯತ್ರಿ ವಾಮನ ತಕ್ರೆ ಎರಡನೆಯವಳಾಗಿ ಬರುವ ಮೂಲಕ ಬೆಳ್ಳಿಯ ಪದಕವನ್ನು ತನ್ನದಾಗಿಸಿಕೊಂಡಳು. ಇವಳ ಈ ಯಶಸ್ಸಿಗೆ ಈಕೆಯ ತರಬೇತುದಾರರಾದ ಶ್ರೀ.ಸುಜಯ್ ಬಬ್ಬರ್ ರವರ ಅತ್ಯಮೂಲ್ಯ ಮಾರ್ಗದರ್ಶನವೇ ಕಾರಣವೆಂದು ಹೇಳಬಹುದು. 

ಶ್ರೀ ಸಾಯಿಬಾಬಾ ಸಂಸ್ಥಾನದ ತ್ರಿ-ಸದಸ್ಯ ಸಮಿತಿಯ ಅಧ್ಯಕ್ಷ ಮತ್ತು ಜಿಲ್ಲಾ ನ್ಯಾಯಾಧೀಶರಾದ ಶ್ರೀ.ಶಶಿಕಾಂತ್ ಕುಲಕರ್ಣಿ, ತ್ರಿ-ಸದಸ್ಯ ಸಮಿತಿಯ ಸದಸ್ಯರು ಹಾಗೂ ಜಿಲ್ಲಾ ಕಲೆಕ್ಟರ್ ಆದ ಶ್ರೀ.ಅನಿಲ್ ಕಾವಡೆ, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀ.ದಿಲೀಪ್ ಉಗಳೆ, ಪ್ರಾಂಶುಪಾಲೆಯಾದ ಶ್ರೀಮತಿ.ನೀತಾ ಚಾವಂಕೆ ಇಬ್ಬರು ವಿದ್ಯಾರ್ಥಿಗಳಿಗೂ ಅಭಿನಂದನೆ ಸಲ್ಲಿಸಿದ್ದಷ್ಟೇ ಅಲ್ಲದೇ  ಅವರ ಮುಂದಿನ ವ್ಯಾಸಂಗಕ್ಕೆ ಶುಭವನ್ನು ಸಹ ಕೋರಿದರು. 

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು 
ಅಂಗ್ಲ ಭಾಷೆಯಿಂದ ಕನ್ನಡಕ್ಕೆ : ಶ್ರೀಕಂಠ ಶರ್ಮ 

Tuesday, November 25, 2014

ಎಪ್ಪತ್ತು ಜರ್ಮನ್ ಸಾಯಿ ಭಕ್ತರಿಂದ ಶ್ರೀ ಶಿರಡಿ ಸಾಯಿಬಾಬಾರವರ ಸಮಾಧಿಯ ದರ್ಶನ - ಕೃಪೆ: ಸಾಯಿಅಮೃತಧಾರಾ.ಕಾಂ

ಎಪ್ಪತ್ತು ಜರ್ಮನ್ ಸಾಯಿ ಭಕ್ತರು ಇದೇ ತಿಂಗಳ 25ನೇ ನವೆಂಬರ್ 2014, ಮಂಗಳವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಸಮಾಧಿಯ ದರ್ಶನದ ನಂತರ ಅವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ ಹಾಗೂ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರುಗಳು ಕೂಡ ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Saturday, November 15, 2014

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಮಕ್ಕಳ ದಿನಾಚರಣೆಯ ಆಚರಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ 14ನೇ ನವೆಂಬರ್ 2014, ಶುಕ್ರವಾರ ದಂದು ಪಂಡಿತ್ ಜವಾಹರ್ ಲಾಲ್ ನೆಹರೂರವರ ಜನ್ಮ ದಿನದ ಅಂಗವಾಗಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು "ಸ್ವಚ್ಛ ಭಾರತ ಅಭಿಯಾನ" ಕಾರ್ಯಕ್ರಮವು ಅತ್ಯಂತ ಯಶಸ್ವಿ ಹಾಗೂ ಸಾಕಾರವಾಗಬೇಕಾದರೆ ಭಾರತದ ಪ್ರತಿಯೊಬ್ಬ ಪ್ರಜೆಯೂ ಸಹ ಶ್ರದ್ಧೆಯಿಂದ ಮುಂದಾಳತ್ವ ತೆಗೆದುಕೊಳ್ಳಬೇಕಾದ ಅವಶ್ಯಕತೆಯಿದೆ. ಆಗ ಮಾತ್ರ  ಸಂಪೂರ್ಣ ಭಾರತವು ಸ್ವಚ್ಛವಾಗುತ್ತದೆ ಎಂದು ನಾವುಗಳು ಅಂದುಕೊಳ್ಳಬಹುದಾಗಿರುತ್ತದೆ  ಎಂದು ನುಡಿದರು.     



ಶಿರಡಿ ಸಾಯಿಬಾಬಾ ಸಂಸ್ಥಾನವು ತನ್ನ ಶೈಕ್ಷಣಿಕ ಯೋಜನೆಯ ಅಡಿಯಲ್ಲಿ ಪಂಡಿತ್ ಜವಾಹರ್ ಲಾಲ್ ನೆಹರೂರವರ ಜನ್ಮ ದಿನದ ಅಂಗವಾಗಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು  ಈ ಸಂಧರ್ಭದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು. ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ನಿರ್ವಾಹಕ ಅಧಿಕಾರಿಗಳಾದ ಶ್ರೀ.ಸುಭಾಷ್ ಗಾರ್ಕಲ್, ಶ್ರೀ.ದಿಲೀಪ್ ಉಗಳೆ, ಪ್ರಾಂಶುಪಾಲರಾದ ಶ್ರೀ.ವಿಕಾಸ್ ಶಿವಗಜೆ, ಶ್ರೀ.ಶಿವಲಿಂಗ್ ಪಟಾಣೆ, ಶ್ರೀಮತಿ.ನೀತಾ ಚವಾಂಕೆ, ಶ್ರೀ.ಆಸೀಫ್ ತಂಬೋಲಿ, ಸಹಾಯಕ ಅಭಿಯಂತರರಾದ ಶ್ರೀ.ದಿನಕರ್ ದೇಸಾಯಿ, ಗೋಡೆ ಭಿತ್ತಿಪತ್ರ ಚಳುವಳಿಯ ಮುಖ್ಯಸ್ಥರಾದ ಶ್ರೀ.ಸುಶಾಂತ್ ಗೋಡ್ಕೆ, ಉಪಾಧ್ಯಾಯರುಗಳು, ಶಾಲಾ ಸಿಬ್ಬಂದಿ ವರ್ಗದವರು ಮತ್ತು ಶಾಲೆಯ ಮಕ್ಕಳು ಸಹಸ್ರ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 


ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ.ರಾಜೇಂದ್ರ ಜಾಧವ್ ರವರು ಪ್ರತಿಯೊಬ್ಬರೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿ ಇರಿಸಿಕೊಂಡಲ್ಲಿ ಸ್ವಚ್ಛತೆಯ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ಆದುದರಿಂದ ನಾವುಗಳೆಲ್ಲರೂ ಈ ನಿಟ್ಟಿನಲ್ಲಿ ಕೈಜೋಡಿಸಿ ಕ್ರಮವನ್ನು ಕೈಗೊಳ್ಳುವ ಅಗತ್ಯವಿದೆ. 2ನೇ ಅಕ್ಟೋಬರ್ 2014 ರಂದು ನಾವುಗಳೆಲ್ಲರೂ ಮಾಡಿದ ಶಪಥದ ಒಳಾರ್ಥವನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ. ಇದನ್ನು ಸಾಕಾರಗೊಳಿಸಬೇಕಾದರೆ ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇರಿಸಿಕೊಳ್ಳಬೇಕೆಂಬುದನ್ನು ಸದಾಕಾಲ ಮನದಲ್ಲಿ ಇರಿಸಿಕೊಳ್ಳಬೇಕಾದ ಅಗತ್ಯತೆ ಇದೆ. ಪ್ರತಿಯೊಬ್ಬರೂ ಪ್ರತಿನಿತ್ಯ ಸ್ನಾನ ಮಾಡುವುದು ಹಾಗೂ ತಮ್ಮ ಉಗುರನ್ನು ಕತ್ತರಿಸಿಕೊಂಡು ಶುಚಿಯಾಗಿ ಇರಬೇಕಾದ ಅಗತ್ಯವಿದೆ ಎಂದು ನುಡಿದರು. ಅಲ್ಲದೇ ಮಕ್ಕಳ ದಿನಾಚರಣೆಯ ಅಂಗವಾಗಿ ಸಭೆಯಲ್ಲಿ ನರೆದಿದ್ದ ಎಲ್ಲಾ ಮಕ್ಕಳಿಗೂ ಶುಭ ಕೋರಿದರು. ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಸ್ವಚ್ಛತೆಯ ಸಂದೇಶವನ್ನು ಸಾರುವ  ಬಾಲ ಸ್ವಚ್ಛ ಭಾರತ ಅಭಿಯಾನದ ಸ್ಟಿಕರ್  ಅನ್ನು ಬಿಡುಗಡೆಗೊಳಿಸಲಾಯಿತು ಹಾಗೂ ಎಲ್ಲಾ ಮಕ್ಕಳಿಗೂ ವಿತರಿಸಲಾಯಿತು. ಈ ವಿಶೇಷ ಸ್ಟಿಕರ್ ಅನ್ನು ಜಿಲ್ಲಾ ಕಲೆಕ್ಟರ್ ಆದ ಶ್ರೀ.ಅನಿಲ್ ಕಾವಡೆಯವರ ಮಾರ್ಗದರ್ಶನದಲ್ಲಿ ತಯಾರಿಸಲಾಗಿರುತ್ತದೆ.  ಅಂತೆಯೇ  ಸ್ವಚ್ಛತೆಯ ಸಂದೇಶವನ್ನು ಸಾರುವ ಗೋಡೆಯ ಮೇಲೆ ಅಂಟಿಸಬಹುದಾದ ಭಿತ್ತಿಪತ್ರವನ್ನು ಸಹ ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಾಯಿಬಾಬಾ ಶಾಲೆಯ ಕುಮಾರಿ.ವಸಂತ ವಾಣಿಯವರು ಮಕ್ಕಳ ಪದ್ಯವೊಂದರ ವಾಚನ ಮಾಡಿದರು.  ಪ್ರಾಂಶುಪಾಲರಾದ ಶ್ರೀ.ವಿಕಾಸ್ ಶಿವಗಜೆಯವರು ಉದ್ಘಾಟನಾ ಭಾಷಣ ಮಾಡಿದ್ದಷ್ಟೇ ಅಲ್ಲದೇ ವಂದನಾರ್ಪಣೆಯನ್ನು ಸಹ ನೆರವೇರಿಸಿದರು. 

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು 
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ  

Sunday, October 26, 2014

ಶ್ರೀ ಸಾಯಿಬಾಬಾ ಸಂಸ್ಥಾನದ ಪ್ರಸಾದಾಲಯಕ್ಕೆ ISO 22000-2005 ಪ್ರಮಾಣಪತ್ರದ ನೀಡಿಕೆ – ಆಧಾರ: ಸಾಯಿಅಮೃತಧಾರಾ. ಕಾಂ

ಇದೇ ತಿಂಗಳ  24ನೇ ಅಕ್ಟೋಬರ್ 2014, ಶುಕ್ರವಾರ ದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು  ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ನಡೆಸಲಾಗುತ್ತಿರುವ ಶ್ರೀ ಸಾಯಿ ಪ್ರಸಾದಾಲಯದಲ್ಲಿ  ISO 22000-2005 (Food Safety Standard)  ಪ್ರಮಾಣಪತ್ರವನ್ನು ನೀಡುವ ಸಲುವಾಗಿ ಪರಿಶೋಧನೆಯನ್ನು ಹಮ್ಮಿಕೊಳ್ಳಲಾಗಿತ್ತು ಹಾಗೂ ಅಂತಿಮ ತಪಾಸಣೆಯ ನಂತರ ಶ್ರೀ ಸಾಯಿಬಾಬಾ ಸಂಸ್ಥಾನದ ಪ್ರಸಾದಾಲಯಕ್ಕೆ ISO 22000-2005 (Food Safety Standard)  ಪ್ರಮಾಣಪತ್ರವನ್ನು 15ನೇ ಸೆಪ್ಟೆಂಬರ್ 2014 ರಿಂದ 29ನೇ ಸೆಪ್ಟೆಂಬರ್ 2016 ರವರೆಗೂ ಅನ್ವಯವಾಗುವಂತೆ ನೀಡಲಾಗಿದೆ ಎಂದು ತಿಳಿಸಿದರು.

ಶ್ರೀ ಸಾಯಿಬಾಬಾ ಸಂಸ್ಥಾನದ ಪ್ರಸಾದಾಲಯಕ್ಕೆ ISO 22000-2005 (Food Safety Standard)  ಪ್ರಮಾಣಪತ್ರವನ್ನು ಇದೇ ತಿಂಗಳ 18ನೇ ಅಕ್ಟೋಬರ್ 2014 ರಂದು ನಡೆದ ಕಾರ್ಯಕ್ರಮದಲ್ಲಿ ನೀಡಲಾಗಿತ್ತು. ಆ ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ವಹಿಸಿದ್ದರು. ಈ ಸಂದರ್ಭದಲ್ಲಿ ISO ಪ್ರಮಾಣಪತ್ರದ ಸಲಹೆಗಾರರೂ ಹಾಗೂ ಬೆಂಗಳೂರಿನ ಸಾಯಿ ಭಕ್ತರೂ ಆದ ಶ್ರೀ.ಕೇಶವ ಮೂರ್ತಿ, ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀ.ಡಿ.ಟಿ.ಉಗಳೆ, ಪ್ರಸಾದಾಲಯದ ಹಂಗಾಮಿ ಮೇಲ್ವಿಚಾರಕರಾದ ಶ್ರೀ.ವಿಜಯ ಸಿನ್ನಾರ್, ಲಾಡು ಪ್ರಸಾದ ತಯಾರಿಕಾ ಘಟಕದ ಹಂಗಾಮಿ  ಅಧ್ಯಕ್ಷರಾದ ಶ್ರೀ.ಸಂಜಯ ಧನೇಶ್ವರ್ ಹಾಗೂ ಇನ್ನು ಹಲವಾರು ಗಣ್ಯರು ಭಾಗವಹಿಸಿದ್ದರು. ಪ್ರಸಾದಾಲಯಕ್ಕೆ ಬರುವ ಎಲ್ಲಾ ಸಾಯಿ ಭಕ್ತರು ಹೆಚ್ಚು ಹೊತ್ತು ಸರತಿ ಸಾಲಿನಲ್ಲಿ ಕಾಯದೇ, ರುಚಿಯಾದ ಹಾಗೂ ಪರಿಶುದ್ಧವಾದ ಪ್ರಸಾದ ಭೋಜನವನ್ನು ಪರಿಶುದ್ಧವಾದ ವಾತವರಣದಲ್ಲಿ ಸ್ವೀಕರಿಸುವಂತೆ ಮಾಡುವ ಬಯಕೆ ಶ್ರೀ ಸಾಯಿಬಾಬಾ ಸಂಸ್ಥಾನದ್ದಾಗಿತ್ತು. ಈ  ISO 22000-2005 (Food Safety Standard)  ಪ್ರಮಾಣಪತ್ರದ ನವೀಕರಣವಾಗಿರುವುದು ಶ್ರೀ ಸಾಯಿಬಾಬಾ ಸಂಸ್ಥಾನದ ಯಶಸ್ಸೆಂಬ ಕಿರೀಟಕ್ಕೆ ಸಿಕ್ಕಿರುವ ಮತ್ತೊಂದು ಹೆಮ್ಮೆಯ ಗರಿಯೆಂದೇ ಹೇಳಬಹುದು.  ಇದರಿಂದ ಶ್ರೀ ಸಾಯಿಬಾಬಾ ಸಂಸ್ಥಾನದ ಖ್ಯಾತಿ ಪ್ರಪಂಚದಾದ್ಯಂತ ಹರಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಸಾಯಿಭಕ್ತರ ಅನುಕೂಲಕ್ಕಾಗಿ ಶ್ರೀ ಸಾಯಿಬಾಬಾ ಸಂಸ್ಥಾನವು ಹತ್ತು ಹಲವು ಜನಪ್ರಿಯ ಯೋಜನೆಗಳನ್ನು ರೂಪಿಸಿದ್ದು ಬೃಹತ್  ಶ್ರೀ ಸಾಯಿ ಪ್ರಸಾದಾಲಯದ ಪ್ರಾರಂಭವು ಅಂತಹ ಯೋಜನೆಗಳಲ್ಲಿ ಒಂದಾಗಿರುತ್ತದೆ. ಶ್ರೀ ಸಾಯಿಬಾಬಾರವರು ತಮ್ಮ ಅವತರಣ ಕಾಲದಲ್ಲಿ ಸ್ವತಃ ತಮ್ಮ ಕೈಯಾರೆ ಅಡುಗೆಯನ್ನು ಮಾಡಿ ತಮ್ಮ ಬಳಿಗೆ ಬರುತ್ತಿದ್ದ ಭಕ್ತರಿಗೆ ಬಡಿಸುತ್ತಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನೆಡೆಯುವ ಸಲುವಾಗಿ ಶ್ರೀ ಸಾಯಿಬಾಬಾ ಸಂಸ್ಥಾನವು ಪ್ರಪ್ರಥಮ ಬಾರಿಗೆ 1ನೇ ಜನವರಿ 1973 ರಂದು ದೀಕ್ಷಿತವಾಡದ ಪಕ್ಕದಲ್ಲಿದ್ದ ಸ್ಥಳದಲ್ಲಿ ಸಾಯಿ ಭಕ್ತರಿಗೆ ಪ್ರಸಾದ ಭೋಜನವನ್ನು ನೀಡುವ ವ್ಯವಸ್ಥೆಯನ್ನು ಮಾಡಿತ್ತು.  ಅಂದಿನ ದಿನಗಳಲ್ಲಿ ಪ್ರತಿನಿತ್ಯ ಸರಿ ಸುಮಾರು 500 ರಿಂದ 2500 ಸಾಯಿ ಭಕ್ತರು  ಪ್ರಸಾದ ಭೋಜನವನ್ನು ಸವಿಯುತ್ತಿದ್ದರು.  ಭಕ್ತರಿಗೆ ಹೆಚ್ಚಿನ ಸೌಲಭ್ಯವನ್ನು ನೀಡುವ ಸಲುವಾಗಿ ಹಾಗೂ ದಿನೇ ದಿನೇ ಹೆಚ್ಚುತ್ತಿದ್ದ ಭಕ್ತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು  25ನೇ ಜನವರಿ 1980 ರಿಂದ ಅನ್ವಯವಾಗುವಂತೆ  ಪ್ರಸಾದಾಲಯವನ್ನು ಅಲ್ಲಿಂದ ಗೇಟ್ ಸಂಖ್ಯೆ:1 ರ ಪಕ್ಕದಲ್ಲಿರುವ ಸಾಯಿ ಪ್ರಸಾದ ಕಟ್ಟಡಕ್ಕೆ ವರ್ಗಾಯಿಸಲಾಯಿತು. ಈ ಸ್ಥಳದಲ್ಲಿ ಪ್ರತಿನಿತ್ಯ ಸರಿ ಸುಮಾರು 22,000 ಭಕ್ತರು ಪ್ರಸಾದ ಭೋಜನವನ್ನು ಸವಿಯುತ್ತಿದ್ದರು. ನಂತರ ಭವಿಷ್ಯದಲ್ಲಿ ಬೃಹತ್ ಆಗಿ ಬೆಳೆಯಲಿದ್ದ ಶಿರಡಿ ಪಟ್ಟಣವನ್ನು ಗಮನದಲ್ಲಿಟ್ಟುಕೊಂಡು ಸಂಸ್ಥಾನದ ಆಡಳಿತ ಮಂಡಳಿಯು  ಒಂದು ಬೃಹತ್ ಪ್ರಸಾದಾಲಯ ಕಟ್ಟಡವನ್ನು ದಾಖಲೆ ಸಮಯದಲ್ಲಿ ನಿರ್ಮಿಸಿತು. ಈ ಹೊಸ ಶ್ರೀ ಸಾಯಿ ಪ್ರಸಾದಾಲಯವನ್ನು 8ನೇ ಜನವರಿ 2009 ರಂದು ಪ್ರಾರಂಭಿಸಲಾಗಿದ್ದು ಇಲ್ಲಿ ಒಂದೇ ಬಾರಿಗೆ ಸುಮಾರು 5000 ಭಕ್ತರು ಕುಳಿತು ಊಟವನ್ನು ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ.

ಇಂದು ಏಷಿಯಾದ ಬೃಹತ್ ಪ್ರಸಾದಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾದ ಶ್ರೀ ಸಾಯಿ ಪ್ರಸಾದಾಲಯದಲ್ಲಿ ಸಾಯಿ ಭಕ್ತರು ಹೆಚ್ಚು ಹೊತ್ತು ಸರತಿ ಸಾಲಿನಲ್ಲಿ ಕಾಯದೇ, ರುಚಿಯಾದ ಹಾಗೂ ಪರಿಶುದ್ಧವಾದ ಪ್ರಸಾದ ಭೋಜನವನ್ನು ಪರಿಶುದ್ಧವಾದ ವಾತವರಣದಲ್ಲಿ ಸ್ವೀಕರಿಸುತ್ತಿದ್ದಾರೆ. ಹಾಗಾಗಿ ಟ್ರಾನ್ಸ್ ಪ್ಲಾಸ್ಟಿಕ್ ಸರ್ಟಿಫಿಕೇಷನ್  ಲಿಮಿಟೆಡ್ (TCL) ಸಂಸ್ಥೆಯು 30ನೇ  ಸೆಪ್ಟೆಂಬರ್ 2013 ರಂದು ISO-22000-2005 (Food Safety standard) ಪ್ರಮಾಣ ಪತ್ರವನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಶ್ರೀ ಸಾಯಿ ಪ್ರಸಾದಾಲಯಕ್ಕೆ  ಮುಂದಿನ ಮೂರು ವರ್ಷಗಳಿಗೆ ಅನ್ವಯವಾಗುವಂತೆ ನೀಡಿತ್ತು. ಪ್ರತಿ ವರ್ಷ ಈ ಪ್ರಮಾಣ ಪತ್ರದ ನವೀಕರಣ ಮಾಡುವುದು ಕಡ್ಡಾಯವಾಗಿರುತ್ತದೆ. ಆದ ಕಾರಣ, ಟ್ರಾನ್ಸ್ ಪ್ಲಾಸ್ಟಿಕ್ ಸರ್ಟಿಫಿಕೇಷನ್ ಲಿಮಿಟೆಡ್ (TCL) ಸಂಸ್ಥೆಯ ಪರಿಶೋಧಕರು ಶ್ರೀ ಸಾಯಿ ಪ್ರಸಾದಾಲಯಕ್ಕೆ ಭೇಟಿ ನೀಡಿ ಪರಿಶೋಧನೆ ನಡೆಸಿ ಏನಾದರೂ ನಿಯಮದ ಉಲ್ಲಂಘನೆಯಾಗಿದ್ದ ಪಕ್ಷದಲ್ಲಿ ಅದನ್ನು ಮೇಲಧಿಕಾರಿಗಳಿಗೆ ತಿಳಿಸಿ ಅದನ್ನು ಆ ಕೂಡಲೇ ಸರಿಪಡಿಸಿ ಮತ್ತೊಮ್ಮೆ ಪರಿಶೋಧನೆ ನಡೆಸಿದ ನಂತರ ಪ್ರಮಾಣ ಪತ್ರವನ್ನು ನವೀಕರಿಸಲಾಗುತ್ತದೆ. ಶ್ರೀ ಸಾಯಿ ಪ್ರಸಾದಾಲಯದ ಈ ನವೀಕರಣ ಕಾರ್ಯಕಾಗಿ  ಅಹಾರ ಸುರಕ್ಷತಾ ಸಲಹೆಗಾರರಾದ ಹೈದರಾಬಾದ್ ನ  ಶ್ರೀ.ದಿಲೀಪ್ ಕುಮಾರ್ ನಂದಿಕೊಂಡ, ಟ್ರಾನ್ಸ್ ಪ್ಲಾಸ್ಟಿಕ್ ಸರ್ಟಿಫಿಕೇಷನ್ ಲಿಮಿಟೆಡ್ (TCL) ಸಂಸ್ಥೆಯ ಮುಖ್ಯ ಪರಿಶೋಧಕರಾದ ಶ್ರೀ. ಚಂದ್ರಶೇಖರ ರೆಡ್ದಿಯವರನ್ನು ವಿಶೇಷ ಸಲಹೆಗಾರರಾಗಿ ನೇಮಕ ಮಾಡಲಾಗಿತ್ತು. ಈ ಇಬ್ಬರು ಮಹನೀಯರ ಮಾರ್ಗದರ್ಶನದಲ್ಲಿ ಶ್ರೀ ಸಾಯಿ ಪ್ರಸಾದಾಲಯದಲ್ಲಿ ಸೂಕ್ತ ಬದಲಾವಣೆ ಹಾಗೂ ತಿದ್ದುಪಡಿಗಳನ್ನು ಮಾಡಲಾಯಿತು. ನಂತರ ಟ್ರಾನ್ಸ್ ಪ್ಲಾಸ್ಟಿಕ್ ಸರ್ಟಿಫಿಕೇಷನ್  ಲಿಮಿಟೆಡ್ (TCL) ಸಂಸ್ಥೆಯು  ISO-22000-2005 (Food Safety Standard) ಪ್ರಮಾಣ ಪತ್ರವನ್ನು ನೀಡುವ ಸಲುವಾಗಿ ಪರಿಶೋಧನೆಯನ್ನು ಮಾಡಿತ್ತು. ಇದರ ಅಂಗವಾಗಿ ಇತ್ತೀಚೆಗಷ್ಟೇ  ಅಂತಿಮ ತಪಾಸಣೆಯನ್ನು ನಡೆಸಿದ ಸಂಸ್ಥೆಯು ಶ್ರೀ ಸಾಯಿಬಾಬಾ ಸಂಸ್ಥಾನದ ಪ್ರಸಾದಾಲಯಕ್ಕೆ ISO 22000-2005 (Food Safety Standard)  ಪ್ರಮಾಣಪತ್ರವನ್ನು 15ನೇ ಸೆಪ್ಟೆಂಬರ್ 2014 ರಿಂದ 29ನೇ ಸೆಪ್ಟೆಂಬರ್ 2016 ರವರೆಗೂ ಅನ್ವಯವಾಗುವಂತೆ ನೀಡಿರುತ್ತದೆ. ಈ ಪ್ರಮಾಣ ಪತ್ರದ ನವೀಕರಣವಾದ  ನಂತರದಲ್ಲಿ ಶ್ರೀ ಸಾಯಿ ಪ್ರಸಾದಾಲಯದಲ್ಲಿ  ಆಹಾರ ಸುರಕ್ಷತಾ ಕ್ರಮಗಳನ್ನು ವ್ಯವಸ್ಥಿತವಾಗಿ ಮಾಡಲಾಗಿರುತ್ತದೆ.  ಈ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರೂ ಹಾಗೂ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಶಶಿಕಾಂತ ಕುಲಕರ್ಣಿ, ತ್ರಿ-ಸದಸ್ಯ ಸಮಿತಿಯ ಸದಸ್ಯರೂ ಹಾಗೂ ಜಿಲ್ಲಾ ಕಲೆಕ್ಟರ್ ಆದ ಶ್ರೀ.ಅನಿಲ್ ಕಾವಡೆ, ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಸಂಸ್ಥಾನದ ಅಧಿಕಾರಿಗಳು ಹಾಗೂ ಶ್ರೀ ಸಾಯಿ ಪ್ರಸಾದಾಲಯದ ಆಡಳಿತಕ್ಕೆ ಸಂಬಂಧಿಸಿದ ಸಿಬ್ಬಂದಿ ವರ್ಗದವರ ಪ್ರಯತ್ನವನ್ನು ಶ್ಲಾಘಿಸಲಾಯಿತು.

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ ಅನ್ವೇಕರ್,ಬೆಂಗಳೂರು 
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ 

Thursday, October 23, 2014

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಲಕ್ಷ್ಮೀಪೂಜೆ ಹಾಗೂ ದೀಪೋತ್ಸವದ ಆಚರಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿಬಾಬಾ ಸಂಸ್ಥಾನವು ದೀಪಾವಳಿ ಹಬ್ಬದ ಅಂಗವಾಗಿ ಇದೇ ತಿಂಗಳ 23ನೇ ಅಕ್ಟೋಬರ್ 2014, ಗುರುವಾರ  ದಂದು ಲಕ್ಷ್ಮೀಪೂಜೆ ಹಾಗೂ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. 

ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ಮತ್ತು ಅವರ ಧರ್ಮಪತ್ನಿಯವರು ಸಮಾಧಿ ಮಂದಿರದಲ್ಲಿ ಲಕ್ಷ್ಮೀ ಪೂಜೆಯನ್ನು ವಿಧ್ಯುಕ್ತವಾಗಿ ನೆರವೇರಿಸಿದರು. 



ಇದಾದ ನಂತರ ಸಾವಿರಾರು ಸಾಯಿ ಭಕ್ತರು ಲೇಂಡಿ ಉದ್ಯಾನವನದಲ್ಲಿ ದೀಪಗಳನ್ನು ಬೆಳಗಿ ಬೆಳಕಿನ ಹಬ್ಬವನ್ನು ಸಾರ್ಥಕಗೊಳಿಸಿದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Friday, October 10, 2014

ಗುಲ್ಬರ್ಗಾದ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್, ಜೇವರ್ಗಿ ರಸ್ತೆ, ರಾಮ ಮಂದಿರದ ಹತ್ತಿರ, ಕರುಣೇಶ್ವರ ನಗರ, ಗುಲ್ಬರ್ಗ-585 103,ಕರ್ನಾಟಕ, ಭಾರತ

ಮಂದಿರದ ವಿಶೇಷತೆಗಳು: 

ಈ ಶಿರಡಿ ಸಾಯಿಬಾಬಾ ಮಂದಿರವು ಕರ್ನಾಟಕ ರಾಜ್ಯದ ಗುಲ್ಬರ್ಗ ನಗರದ ಜೇವರ್ಗಿ ರಸ್ತೆಯಲ್ಲಿರುವ ಕರುಣೇಶ್ವರ ನಗರದಲ್ಲಿರುವ ರಾಮ ಮಂದಿರದ ಹತ್ತಿರ ಇರುತ್ತದೆ. ಮಂದಿರವು ಗುಲ್ಬರ್ಗ ಬಸ್ ನಿಲ್ದಾಣದಿಂದ 2 ಕಿಲೋಮೀಟರ್ ದೂರದಲ್ಲೂ ಹಾಗೂ ರೈಲು ನಿಲ್ದಾಣದಿಂದ 2 ಕಿಲೋಮೀಟರ್ ದೂರದಲ್ಲೂ ಇರುತ್ತದೆ.

ಈ ಮಂದಿರವನ್ನು 17ನೇ ಫೆಬ್ರವರಿ 2000 ದಂದು  ಶ್ರೀ.ಸದಾಶಿವ ಮಹಾರಾಜ್ ರವರು ಮಂದಿರದ ಟ್ರಸ್ಟ್ ನ ಸದಸ್ಯರುಗಳು ಹಾಗೂ ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ಈ ಮಂದಿರವನ್ನು ಮಂದಿರದ ಟ್ರಸ್ಟ್ ಗೆ ಸೇರಿರುವ ಒಂದು ಎಕರೆಯಷ್ಟು ವಿಶಾಲವಾದ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿರುತ್ತದೆ.

ಶ್ರೀ.ಸತೀಶ್ ವಿ.ಗುತ್ತೇದಾರ್ ರವರು ಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಮಂದಿರದ ಟ್ರಸ್ಟ್ ನ ಸದಸ್ಯರುಗಳು   ಮಂದಿರದ ದಿನ ನಿತ್ಯದ ಆಗುಹೋಗುಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ಮಂದಿರದಲ್ಲಿ 5 ಅಡಿ ಎತ್ತರದ ಸುಂದರವಾದ ಅಮೃತಶಿಲೆಯಲ್ಲಿ ಮಾಡಿದ ಸಾಯಿಬಾಬಾರವರ ವಿಗ್ರಹವನ್ನು ಸಾಯಿ ಭಕ್ತರು ನೋಡಬಹುದು.





ಮಂದಿರದ ದಿನನಿತ್ಯದ ಕಾರ್ಯಕ್ರಮಗಳು 

ಮಂದಿರದ ಸಮಯ:

ಮಂದಿರವನ್ನು  ಪ್ರತಿದಿನ ಬೆಳಿಗ್ಗೆ 5:15 ರಿಂದ ರಾತ್ರಿ 10:30 ರವರೆಗೆ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ.

ಆರತಿಯ ಸಮಯ:

ಕಾಕಡಾ ಆರತಿ   : 5:15 AM
ಛೋಟಾ ಆರತಿ  : 7:15 AM
ಮಧ್ಯಾನ್ಹ ಆರತಿ : 12:00 
ಧೂಪಾರತಿ       :  6:30 PM
ಶೇಜಾರತಿ        : 10:00 PM

ವಿಶೇಷ ಉತ್ಸವದ ದಿನಗಳು: 

1.ಪ್ರತಿ ವರ್ಷದ 17ನೇ ಫೆಬ್ರವರಿ ಮಂದಿರದ ವಾರ್ಷಿಕೋತ್ಸವ.
2.ಶ್ರೀರಾಮನವಮಿ.
3.ಗುರುಪೂರ್ಣಿಮೆ.
4.ವಿಜಯದಶಮಿ.

ಮಂದಿರದ ವಿಳಾಸ ಹಾಗೂ ಮಾರ್ಗಸೂಚಿ: 


ಸ್ಥಳ: 

ಈ ಶಿರಡಿ ಸಾಯಿಬಾಬಾ ಮಂದಿರವು ಕರ್ನಾಟಕ ರಾಜ್ಯದ ಗುಲ್ಬರ್ಗ ನಗರದ ಜೇವರ್ಗಿ ರಸ್ತೆಯಲ್ಲಿರುವ ಕರುಣೇಶ್ವರ ನಗರದಲ್ಲಿರುವ ರಾಮ ಮಂದಿರದ ಹತ್ತಿರ ಇರುತ್ತದೆ. ಮಂದಿರವು ಗುಲ್ಬರ್ಗ ಬಸ್ ನಿಲ್ದಾಣದಿಂದ 2 ಕಿಲೋಮೀಟರ್ ದೂರದಲ್ಲೂ ಹಾಗೂ ರೈಲು ನಿಲ್ದಾಣದಿಂದ 2 ಕಿಲೋಮೀಟರ್ ದೂರದಲ್ಲೂ ಇರುತ್ತದೆ.

ವಿಳಾಸ:

ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್, 
ಜೇವರ್ಗಿ ರಸ್ತೆ, ರಾಮ ಮಂದಿರದ ಹತ್ತಿರ,
ಕರುಣೇಶ್ವರ ನಗರ,
ಗುಲ್ಬರ್ಗ-585 103,
ಕರ್ನಾಟಕ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಡಾ.ಎನ್.ಜಿ.ಗಚ್ಚಿಮನಿ/ಶ್ರೀ.ರಾಜು ಬಿ.ಕುಲಕರ್ಣಿ

ದೂರವಾಣಿ ಸಂಖ್ಯೆ: 

+91 98453 84774/+91 98807 85872


ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಗುಲ್ಬರ್ಗಾದ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಉಮಾ ಅಂದೋಳ ಆಸ್ಪತ್ರೆಯ ಪಕ್ಕ, ಗುಬ್ಬಿ ಕಾಲೋನಿ, ಎಂ.ಜಿ.ರಸ್ತೆ, ಗುಲ್ಬರ್ಗ-585 101,ಕರ್ನಾಟಕ, ಭಾರತ

ಮಂದಿರದ ವಿಶೇಷತೆಗಳು: 

ಈ ಶಿರಡಿ ಸಾಯಿಬಾಬಾ ಮಂದಿರವು ಕರ್ನಾಟಕ ರಾಜ್ಯದ ಗುಲ್ಬರ್ಗ ನಗರದ ಎಂ.ಜಿ. ರಸ್ತೆಯಲ್ಲಿರುವ ಗುಬ್ಬಿ ಕಾಲೋನಿಯಲ್ಲಿರುವ ಉಮಾ ಅಂದೋಳ ಆಸ್ಪತ್ರೆಯ ಪಕ್ಕದಲ್ಲಿರುತ್ತದೆ. ಮಂದಿರವು ಗುಲ್ಬರ್ಗ ಬಸ್ ನಿಲ್ದಾಣದಿಂದ 3 ಕಿಲೋಮೀಟರ್ ದೂರದಲ್ಲೂ ಹಾಗೂ ರೈಲು ನಿಲ್ದಾಣದಿಂದ 2.5 ಕಿಲೋಮೀಟರ್ ದೂರದಲ್ಲೂ ಇರುತ್ತದೆ.

ಈ ಮಂದಿರದ ಭೂಮಿ ಪೂಜೆಯನ್ನು 26ನೇ ಆಗಸ್ಟ್  2007 ರಂದು ನೆರವೇರಿಸಲಾಯಿತು.

ಈ ಮಂದಿರವನ್ನು 15ನೇ ಡಿಸೆಂಬರ್ 2009 ರಂದು  ಮಂದಿರದ ಟ್ರಸ್ಟ್ ನ ಸದಸ್ಯರುಗಳು ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ಈ ಮಂದಿರವನ್ನು ಮಂದಿರದ ಟ್ರಸ್ಟ್ ಗೆ ಸೇರಿರುವ 80x120 ಚದರ ಅಡಿ ವಿಸ್ತೀರ್ಣವಿರುವ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿರುತ್ತದೆ.

ಶ್ರೀ.ಎ.ಬಿ.ನರಸಿಂಹಾಚಾರ್ಯ ಅವರು ಮಂದಿರದ ಮುಖ್ಯ ಪುರೋಹಿತರಾಗಿರುತ್ತಾರೆ. ಅವರೇ  ಮಂದಿರದ ದಿನ ನಿತ್ಯದ ಆಗುಹೋಗುಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ಮಂದಿರದಲ್ಲಿ 4 ಅಡಿ ಎತ್ತರದ ಸುಂದರವಾದ ಅಮೃತಶಿಲೆಯಲ್ಲಿ ಮಾಡಿದ ಸಾಯಿಬಾಬಾರವರ ವಿಗ್ರಹವನ್ನು ಸಾಯಿ ಭಕ್ತರು ನೋಡಬಹುದು. ಸಾಯಿಬಾಬಾರವರ ವಿಗ್ರಹದ ಎದುರುಗಡೆಯಲ್ಲಿ ಅಮೃತ ಶಿಲೆಯಲ್ಲಿ ಮಾಡಿದ ಪವಿತ್ರ ಪಾದುಕೆಗಳನ್ನು ಸ್ಥಾಪಿಸಲಾಗಿದೆ.





ಮಂದಿರದ ದಿನನಿತ್ಯದ ಕಾರ್ಯಕ್ರಮಗಳು 

ಮಂದಿರದ ಸಮಯ:

ಮಂದಿರವು ಪ್ರತಿ ಗುರುವಾರದಂದು ಬೆಳಿಗ್ಗೆ 6:00 ರಿಂದ 11:00 ಗಂಟೆಯವರೆಗೆ ಹಾಗೂ ಪುನಃ ಸಾಯಂಕಾಲ 5:30 ರಿಂದ ರಾತ್ರಿ 9:00 ಗಂಟೆಯವರೆಗೆ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ. ಇನ್ನಿತರ ದಿನಗಳಲ್ಲಿ ಮಂದಿರವು ಬೆಳಿಗ್ಗೆ 7:00 ರಿಂದ 9:00 ಗಂಟೆಯವರೆಗೆ ಹಾಗೂ ಪುನಃ ಸಾಯಂಕಾಲ 6:00 ರಿಂದ 8:00 ಗಂಟೆಯವರೆಗೆ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ. 

ಆರತಿಯ ಸಮಯ:

ಸಂಜೆ : 6:30 ಗಂಟೆ

ಪ್ರತಿ ಗುರುವಾರಗಳಂದು ವಿಶೇಷ ಅಭಿಷೇಕವನ್ನು ಮಾಡಲಾಗುತ್ತದೆ. ಅಲ್ಲದೇ, ಶ್ರಾವಣ ಮಾಸದಲ್ಲಿ ಪ್ರತಿನಿತ್ಯ ವಿಶೇಷ ಅಭಿಷೇಕವನ್ನು ಹಮ್ಮಿಕೊಳ್ಳಲಾಗುತ್ತದೆ. 

ವಿಶೇಷ ಉತ್ಸವದ ದಿನಗಳು: 

1.ಪ್ರತಿ ವರ್ಷದ 26ನೇ ಆಗಸ್ಟ್ ಮಂದಿರದ ವಾರ್ಷಿಕೋತ್ಸವ. 
2.ಹೊಸವರ್ಷ. 
3.ಯುಗಾದಿ. 

ಮಂದಿರದ ವಿಳಾಸ ಹಾಗೂ ಮಾರ್ಗಸೂಚಿ: 


ಸ್ಥಳ: 

ಈ ಶಿರಡಿ ಸಾಯಿಬಾಬಾ ಮಂದಿರವು ಕರ್ನಾಟಕ ರಾಜ್ಯದ ಗುಲ್ಬರ್ಗ ನಗರದ ಎಂ.ಜಿ. ರಸ್ತೆಯಲ್ಲಿರುವ ಗುಬ್ಬಿ ಕಾಲೋನಿಯಲ್ಲಿರುವ ಉಮಾ ಅಂದೋಳ ಆಸ್ಪತ್ರೆಯ ಪಕ್ಕದಲ್ಲಿರುತ್ತದೆ. ಮಂದಿರವು ಗುಲ್ಬರ್ಗ ಬಸ್ ನಿಲ್ದಾಣದಿಂದ 3 ಕಿಲೋಮೀಟರ್ ದೂರದಲ್ಲೂ ಹಾಗೂ ರೈಲು ನಿಲ್ದಾಣದಿಂದ 2.5 ಕಿಲೋಮೀಟರ್ ದೂರದಲ್ಲೂ ಇರುತ್ತದೆ. 

ವಿಳಾಸ:

ಶ್ರೀ ಶಿರಡಿ ಸಾಯಿಬಾಬಾ ಮಂದಿರ, 
ಉಮಾ ಅಂದೋಳ ಆಸ್ಪತ್ರೆಯ ಪಕ್ಕ, 
ಗುಬ್ಬಿ ಕಾಲೋನಿ, ಎಂ.ಜಿ.ರಸ್ತೆ,  
ಗುಲ್ಬರ್ಗ-585 101,
ಕರ್ನಾಟಕ, ಭಾರತ. 

ಸಂಪರ್ಕಿಸಬೇಕಾದ ವ್ಯಕ್ತಿ: 

ಶ್ರೀ.ಎ.ಬಿ.ನರಸಿಂಹಾಚಾರ್ಯ  - ಪುರೋಹಿತರು

ದೂರವಾಣಿ ಸಂಖ್ಯೆ: 

+91 97317 75345


ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಗುಲ್ಬರ್ಗಾದ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಮಾರುಕಟ್ಟೆ ರಸ್ತೆ, ಮಿಲನ್ ಚೌಕ್, ಮಕ್ತಾಂಪುರ, ಗುಲ್ಬರ್ಗ-585 101,ಕರ್ನಾಟಕ, ಭಾರತ

ಮಂದಿರದ ವಿಶೇಷತೆಗಳು: 

ಈ ಶಿರಡಿ ಸಾಯಿಬಾಬಾ ಮಂದಿರವು ಕರ್ನಾಟಕ ರಾಜ್ಯದ ಗುಲ್ಬರ್ಗ ನಗರದ ಮಾರುಕಟ್ಟೆ ರಸ್ತೆಯಲ್ಲಿರುವ ಮಿಲನ್ ಚೌಕ್ ಹತ್ತಿರದ ಮಕ್ತಾಂಪುರದಲ್ಲಿರುತ್ತದೆ. ಮಂದಿರವು ಗುಲ್ಬರ್ಗ ಬಸ್ ನಿಲ್ದಾಣದಿಂದ 2 ಕಿಲೋಮೀಟರ್ ದೂರದಲ್ಲೂ ಹಾಗೂ ರೈಲು ನಿಲ್ದಾಣದಿಂದ 0.5 ಕಿಲೋಮೀಟರ್ ದೂರದಲ್ಲೂ ಇರುತ್ತದೆ. 

ಈ ಮಂದಿರದ ಭೂಮಿ ಪೂಜೆಯನ್ನು 19ನೇ ಫೆಬ್ರವರಿ 1999 ರಂದು ನೆರವೇರಿಸಲಾಯಿತು.

ಈ ಮಂದಿರವನ್ನು 25ನೇ ಜುಲೈ 2001 ರಂದು  ಮಂದಿರದ  ಸಂಸ್ಥಾಪಕ ಅಧ್ಯಕ್ಷರಾದ ಶ್ರೀ.ಅರುಣ್ ಜಟ್ಲಿಯವರು ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ. 

ಈ ಮಂದಿರವನ್ನು ಮಂದಿರದ ಟ್ರಸ್ಟ್ ಗೆ ಸೇರಿರುವ 40x60 ಚದರ ಅಡಿ ವಿಸ್ತೀರ್ಣವಿರುವ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿರುತ್ತದೆ. 

ಶ್ರೀ.ಅರುಣ್ ಜಟ್ಲಿಯವರು ಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಮಂದಿರದ ಪುರೋಹಿತರಾದ ಶ್ರೀ.ಶ್ರೀನಿವಾಸ ಸರ್ದಗಿಯವರು ಮಂದಿರದ ದಿನ ನಿತ್ಯದ ಆಗುಹೋಗುಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. 

ಮಂದಿರದಲ್ಲಿ 5 ಅಡಿ ಎತ್ತರದ ಸುಂದರವಾದ ಅಮೃತಶಿಲೆಯಲ್ಲಿ ಮಾಡಿದ ಸಾಯಿಬಾಬಾರವರ ವಿಗ್ರಹವನ್ನು ಸಾಯಿ ಭಕ್ತರು ನೋಡಬಹುದು. ಸಾಯಿಬಾಬಾರವರ ವಿಗ್ರಹದ ಎದುರುಗಡೆಯಲ್ಲಿ ಅಮೃತ ಶಿಲೆಯಲ್ಲಿ ಮಾಡಿದ ಪವಿತ್ರ ಪಾದುಕೆಗಳನ್ನು ಸ್ಥಾಪಿಸಲಾಗಿದೆ.



ಮಂದಿರದ ದಿನನಿತ್ಯದ ಕಾರ್ಯಕ್ರಮಗಳು 

ಮಂದಿರದ ಸಮಯ:

ಮಂದಿರವು ಬೆಳಿಗ್ಗೆ 6:00 ರಿಂದ 10:00 ಗಂಟೆಯವರೆಗೆ ಹಾಗೂ ಪುನಃ ಸಾಯಂಕಾಲ 5:00 ರಿಂದ ರಾತ್ರಿ 8:00 ಗಂಟೆಯವರೆಗೆ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ. 

ಆರತಿಯ ಸಮಯ:

ಬೆಳಿಗ್ಗೆ: 7:00 ಗಂಟೆ
ರಾತ್ರಿ: 7:00 ಗಂಟೆ


ವಿಶೇಷ ಉತ್ಸವದ ದಿನಗಳು: 

1.ಪ್ರತಿ ವರ್ಷದ ಫೆಬ್ರವರಿ ತಿಂಗಳಿನಲ್ಲಿ ವಿಶೇಷ ಪೂಜೆ ಹಾಗೂ ಅನ್ನದಾನ ಹಮ್ಮಿಕೊಳ್ಳಲಾಗುತ್ತದೆ.
2.ಶ್ರೀರಾಮನವಮಿ. 
3.ಗುರುಪೂರ್ಣಿಮೆ. 
4.ವಿಜಯದಶಮಿ. 

ಮಂದಿರದ ವಿಳಾಸ ಹಾಗೂ ಮಾರ್ಗಸೂಚಿ: 


ಸ್ಥಳ: 

ಈ ಶಿರಡಿ ಸಾಯಿಬಾಬಾ ಮಂದಿರವು ಕರ್ನಾಟಕ ರಾಜ್ಯದ ಗುಲ್ಬರ್ಗ ನಗರದ ಮಾರುಕಟ್ಟೆ ರಸ್ತೆಯಲ್ಲಿರುವ ಮಿಲನ್ ಚೌಕ್ ಹತ್ತಿರದ ಮಕ್ತಾಂಪುರದಲ್ಲಿರುತ್ತದೆ. ಮಂದಿರವು ಗುಲ್ಬರ್ಗ ಬಸ್ ನಿಲ್ದಾಣದಿಂದ 2 ಕಿಲೋಮೀಟರ್ ದೂರದಲ್ಲೂ ಹಾಗೂ ರೈಲು ನಿಲ್ದಾಣದಿಂದ 0.5 ಕಿಲೋಮೀಟರ್ ದೂರದಲ್ಲೂ ಇರುತ್ತದೆ.

ವಿಳಾಸ:

ಶ್ರೀ ಶಿರಡಿ ಸಾಯಿಬಾಬಾ ಮಂದಿರ,
ಮಾರುಕಟ್ಟೆ ರಸ್ತೆ,
ಮಿಲನ್ ಚೌಕ್, ಮಕ್ತಾಂಪುರ,
ಗುಲ್ಬರ್ಗ-585 101,
ಕರ್ನಾಟಕ, ಭಾರತ 

ಸಂಪರ್ಕಿಸಬೇಕಾದ ವ್ಯಕ್ತಿ: 

ಶ್ರೀ.ಶ್ರೀನಿವಾಸ ಸರ್ದಗಿ - ಪುರೋಹಿತರು

ದೂರವಾಣಿ ಸಂಖ್ಯೆ: 

+91 84539 72803

ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಶ್ರೀಲಂಕಾದ ಕೊಲಂಬೋದಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ತಲೆ ಎತ್ತುತ್ತಿರುವ ಸಾಯಿಬಾಬಾ ಮಂದಿರ - ಕೃಪೆ: ಸಾಯಿಅಮೃತಧಾರಾ.ಕಾಂ

ಇತ್ತೀಚಿನ ದಿನಗಳಲ್ಲಿ ಶ್ರೀ ಶಿರಡಿ ಸಾಯಿಬಾಬಾರವರ ಕೀರ್ತಿ ಮತ್ತು ವೈಭವ ಪ್ರಪಂಚದಾದ್ಯಂತ ಹರಡಿದೆ. ಅದಕ್ಕೆ ಶ್ರೀಲಂಕಾ ಕೂಡ ಹೊರತಾಗಿಲ್ಲ. ಶ್ರೀಲಂಕಾದ ಕೊಲಂಬೋ ನಗರದಲ್ಲಿರುವ ಶಿರಡಿ ಸಾಯಿ ಸೆಂಟರ್ ಆಫ್ ಶ್ರೀಲಂಕಾದ ಅಧ್ಯಕ್ಷರಾದ ಶ್ರೀ.ಎಸ್.ಎನ್.ಉದಯನಯಂರವರು ಇದೇ ತಿಂಗಳ 8ನೇ ಅಕ್ಟೋಬರ್ 2014, ಬುಧವಾರ ದಂದು ಶಿರಡಿಯಲ್ಲಿ  ಮಾತನಾಡುತ್ತಾ ಶ್ರೀಲಂಕಾದಲ್ಲಿ ಸುಮಾರು 30 ಶಿರಡಿ ಸಾಯಿಬಾಬಾ ಮಂದಿರಗಳಿವೆ  ಹಾಗೂ  ಕೊಲಂಬೋ ನಗರದಲ್ಲಿ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಸಾಯಿಬಾಬಾ ಮಂದಿರ ತಲೆ ಎತ್ತುತ್ತಿದೆ ಎಂದು ಸುದ್ಧಿಗಾರರೊಂದಿಗೆ ತಿಳಿಸಿದರು. 

ಶಿರಡಿ ಸಾಯಿ ಸೆಂಟರ್ ಆಫ್ ಶ್ರೀಲಂಕಾದ ಅಧ್ಯಕ್ಷರಾದ ಶ್ರೀ.ಎಸ್.ಎನ್.ಉದಯನಯಂರವರನ್ನು ಒಳಗೊಂಡ ಒಟ್ಟು  27 ಸಾಯಿ ಭಕ್ತರ ತಂಡವು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆಯಿತು. ಶಿರಡಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ ಮೋಹನ್ ಯಾದವ್ ರವರು  ತಂಡದ ಸದಸ್ಯರಿಗೆ ಸ್ವಾಗತವನ್ನು ಕೋರಿದರು. ಈ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಶ್ರೀ.ಎಸ್.ಎನ್.ಉದಯನಯಂ ಮತ್ತು ಪ್ರತಿನಿಧಿಗಳಾದ ಶ್ರೀ.ಸೆಂಥಿಲ್ ರವರುಗಳು ಶ್ರೀಲಂಕಾದ ಜಾಫ್ನಾ, ಬಾಟಿಕುಲ, ಕ್ಯಾಂಡಿ ಮತ್ತು ಗೇಲೆ ಪ್ರಾಂತ್ಯಗಳಲ್ಲಿ ಸುಮಾರು 30 ಶಿರಡಿ ಸಾಯಿಬಾಬಾ ಮಂದಿರಗಳು ಈಗಾಗಲೇ ತಲೆ ಎತ್ತಿವೆ. ಈ ಮಂದಿರಗಳಿಗೆ ಭೇಟಿ ನೀಡುತ್ತಿರುವ ಸಾಯಿ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲಿದೆ. ಈ ಎಲ್ಲಾ ಮಂದಿರಗಳಲ್ಲಿ ಶ್ರೀ ಸಾಯಿಬಾಬಾರವರ ದೈನಂದಿನ ಪೂಜಾ ವಿಧಿ ವಿಧಾನಗಳು ನಿಯಮಿತವಾಗಿ ನಡೆಯುತ್ತಲಿದೆ. ಅಲ್ಲದೇ, ಕೊಲಂಬೋ ನಗರವನ್ನು ಪ್ರತಿನಿಧಿಸುತ್ತಿರುವ ಮಂತ್ರಿಗಳಾದ ಶ್ರೀ.ಅರುಮುಂಗನ್ ರವರು ತಮ್ಮ ಸ್ವಂತ ಹಣದಿಂದ ಸುಮಾರು ಐದು ಎಕರೆ ವಿಸ್ತೀರ್ಣದಷ್ಟು ಬೃಹತ್ ಜಾಗವನ್ನು ಸಾಯಿ ಮಂದಿರದ ನಿರ್ಮಾಣಕ್ಕೋಸ್ಕರವಾಗಿ ತೆಗೆದುಕೊಂಡಿದ್ದಾರೆ. ಈ ಸಾಯಿಬಾಬಾ ಮಂದಿರವು  ಕೊಲಂಬೋ ನಗರದಲ್ಲಿ ತಲೆ ಎತ್ತಲಿದ್ದು ಅತಿ ಶೀಘ್ರದಲ್ಲಿಯೇ ಪೂರ್ಣಗೊಳಿಸಿ ಸಾರ್ವಜನಿಕರ ದರ್ಶನಕ್ಕಾಗಿ ತೆರೆದಿಡಲಾಗುವುದು ಎಂದು ಅವರುಗಳು ಸುದ್ಧಿಗಾರರಿಗೆ ತಿಳಿಸಿದರು. 

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್ 
ಆಂಗ್ಲ ಭಾಷೆಯಿಂದ ಕನ್ನಡಕೆ :ಶ್ರೀಕಂಠ ಶರ್ಮ 

Sunday, October 5, 2014

ಶ್ರೀ ಸಾಯಿಬಾಬಾರವರ 96ನೇ ಮಹಾಸಮಾಧಿ ಉತ್ಸವದ ಅಂಗವಾಗಿ ಅಸ್ಸಾಮಿ ಭಾಷೆಯಲ್ಲಿ ರಚಿಸಲಾದ "ಸಾಯಿ ಚರಿತ್ರ ದರ್ಶನ" ಮತ್ತು "ಶ್ರೀ ಸಾಯಿನಾಥ ಸಗುಣೋಪಾಸನ" ಗ್ರಂಥಗಳ ಲೋಕಾರ್ಪಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾರವರ ಜೀವನ ಚರಿತ್ರೆಯನ್ನು ಕುರಿತು ರಚಿಸಲಾದ ಪವಿತ್ರ ಗ್ರಂಥ ಶ್ರೀ ಸಾಯಿ ಸಚ್ಚರಿತ್ರೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಶ್ರೀ ಸಾಯಿಬಾಬಾ ಸಂಸ್ಥಾನದವರು ಹೊರತಂದಿರುವ ಈ ಪವಿತ್ರ ಗ್ರಂಥವು ಸಾಯಿ ಭಕ್ತರಿಗೆ ಭಗವದ್ಗೀತೆ ಹಾಗೂ ಜ್ಞಾನೇಶ್ವರಿಯಷ್ಟೇ ಮಹತ್ವವಿರುವ ಗ್ರಂಥವಾಗಿರುತ್ತದೆ. ಶ್ರೀ ಸಾಯಿಬಾಬಾರವರ 96ನೇ ಮಹಾಸಮಾಧಿ ಉತ್ಸವದ ಅಂಗವಾಗಿ ಇದೇ ತಿಂಗಳ 3ನೇ ಅಕ್ಟೊಬರ್ 2014,ಶುಕ್ರವಾರ ದಂದ ಸಮಾಧಿ ಮಂದಿರದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ತ್ರಿ-ಸದಸ್ಯ ಸಮಿತಿಯ ಸದಸ್ಯರು ಹಾಗೂ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಅನಿಲ್ ಕಾವಡೆಯವರು ಅಸ್ಸಾಮಿ ಭಾಷೆಯಲ್ಲಿ ರಚಿಸಲಾದ "ಸಾಯಿ ಚರಿತ್ರ ದರ್ಶನ" ಮತ್ತು "ಶ್ರೀ ಸಾಯಿನಾಥ ಸಗುಣೋಪಾಸನ"  ಎಂಬ ಎರಡು ಕೃತಿಗಳನ್ನು ಲೋಕಾರ್ಪಣೆ ಮಾಡಿದರು.  ದಿವಂಗತ ಶ್ರೀ.ಹೇಮಾಡಪಂತರು  ಮರಾಠಿ ಮೂಲ ಕೃತಿಯಾದ ಶ್ರೀ ಸಾಯಿ ಸಚ್ಚರಿತ್ರೆಯನ್ನು ಆಂಗ್ಲ ಭಾಷೆಗೆ ಶ್ರೀ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು ತರ್ಜುಮೆ ಮಾಡಿದ್ದರು. ಅದರ ಅಸ್ಸಾಮಿ ಅನುವಾದವೇ ಈ "ಸಾಯಿ ಚರಿತ್ರ ದರ್ಶನ" ಗ್ರಂಥವಾಗಿರುತ್ತದೆ.  ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಶ್ರೀ.ಕಾವಡೆಯವರು ಶ್ರೀ ಸಾಯಿಬಾಬಾರವರ ಜೀವನ ಹಾಗೂ ಉಪದೇಶಗಳನ್ನು ಇನ್ನೂ ಹೆಚ್ಚು ಭಕ್ತರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಅಸ್ಸಾಮಿ ಗ್ರಂಥವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿದರು. 



ಈ ಕಾರ್ಯಕ್ರಮದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಹಿಂದಿನ ಅಧ್ಯಕ್ಷರಾಗಿದ್ದ ಶ್ರೀ.ಡಿ.ಎಂ.ಸುಕ್ತಾನಕರ್, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾಸಾಹೇಬ್ ಶಿಂಧೆ, ನಿರ್ವಾಹಕ ಅಧಿಕಾರಿಗಳಾದ ಶ್ರೀ.ಬಿ.ಡಿ.ಸಬಲೆ, ಶ್ರೀ.ಎಸ್.ಎನ್.ಗಾರ್ಕಲ್, ಶ್ರೀ.ಎಸ್.ವಿ.ಗಮೆ, ಶ್ರೀ.ಡಿ.ಟಿ.ಉಗಲೆ, ಶ್ರೀ.ಯು.ಪಿ.ಗೋಂದ್ಕರ್, ಎಲ್ಲಾ ವಿಭಾಗದ ಮುಖ್ಯಸ್ಥರೂ ಭಾಗವಹಿಸಿದ್ದರು. ಈ ಸಂಧರ್ಭದಲ್ಲಿ ಮಾತನಾಡಿದ ಶ್ರೀ.ಕಾವಡೆಯವರು ಮಾನವನ ಜೀವನದಲ್ಲಿ ಸದ್ಗುರುವಿನ ಪೂಜೆಗೆ ಹೆಚ್ಚಿನ ಮಹತ್ವವಿರುತ್ತದೆ, ಈ ನಿಟ್ಟಿನಲ್ಲಿ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯು ಮುಂದಿನ ಯುವ ಪೀಳಿಗೆಯು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಅಷ್ಟೇ ಅಲ್ಲದೇ ಈ ಗ್ರಂಥವು ಪ್ರತಿಯೊಬ್ಬರನ್ನೂ ದೇಶದ ಉತ್ತಮ ಪ್ರಜೆಯನ್ನಾಗಿ ರೂಪಿಸುತ್ತದೆ.  ಈ ಗ್ರಂಥವು "ಮಾನವ ಸೇವೆಯೇ ಮಾಧವ ಸೇವೆ" ಎಂಬ ಸಂದೇಶವನ್ನು ಇಡೀ ಜಗತ್ತಿಗೆ ಸ್ಪಷ್ಟವಾಗಿ ಸಾರುತ್ತದೆ ಎಂದು ನುಡಿದರು. ಈ  ಸಂದರ್ಭದಲ್ಲಿ ಮಾತನಾಡಿದ ಸಂಸ್ಥಾನದ ಮಾಜಿ ಅಧ್ಯಕ್ಷರಾದ ಶ್ರೀ.ಸುಕ್ತಾನಕರ್ ರವರು ಈ ಗ್ರಂಥದ ಮರಾಠಿ  ಅವತರಣಿಕೆಯ ಬಿಡುಗಡೆ ಸಮಾರಂಭದಲ್ಲಿ ತಾವು ಭಾಗವಹಿಸಿದ್ದು ಈಗ ಪುನಃ ಇದೇ ಗ್ರಂಥದ ಅಸ್ಸಾಮಿ ಅನುವಾದಿತ ಗ್ರಂಥದ ಬಿಡುಗಡೆ ಸಮಾರಂಭದಲ್ಲೂ ತಾವು ಭಾಗವಹಿಸುವ ಭಾಗ್ಯ ತಮಗೆ ದೊರೆಯುತ್ತಿರುವುದು ತಮಗೆ ಅತ್ಯಂತ ಸಂತೋಷವನ್ನು ತಂದಿದೆ ಎಂದು ನುಡಿದರು. ಅಲ್ಲದೆ, ಈ ಅಸ್ಸಾಮಿ ಗ್ರಂಥವು ಅಸ್ಸಾಂ ರಾಜ್ಯದಲ್ಲಿ ಸಾಯಿ ಪ್ರಚಾರ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು. 

ದಿವಂಗತ ಶ್ರೀ. ಹೇಮಾಡಪಂತರು ಮೂಲ ಮರಾಠಿ ಗ್ರಂಥವನ್ನು ಓವಿ ಶೈಲಿಯಲ್ಲಿ ರಚಿಸಿದರು. ಆ ಓವಿ ಗ್ರಂಥವನ್ನು ಮರಾಠಿ ಗದ್ಯ ಶೈಲಿಯಲ್ಲಿ ಶ್ರೀ.ಕೆ.ಎಲ್.ಕೊಲೊನೆಲ್ ಮತ್ತು ಶ್ರೀ.ನಿಂಬಾಳ್ಕರ್ ರವರು ಹೊರತಂದರು.  ನಂತರ ಇದೇ ಮರಾಠಿ ಗ್ರಂಥವನ್ನು ಸಂಕ್ಷಿಪ್ತ ರೂಪದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು "ಸಾಯಿ ಚರಿತ್ರ ದರ್ಶನ" ಎಂಬ ಹೆಸರಿನಲ್ಲಿ ಹೊರತಂದರು.ಈ ಪುಸ್ತಕವು ಈಗಾಗಲೇ ಗುಜರಾತಿ, ಹಿಂದಿ ಮತ್ತು ಆಂಗ್ಲ ಭಾಷೆಗಳಿಗೆ ತರ್ಜುಮೆಗೊಂಡಿರುತ್ತದೆ. ಪ್ರಸ್ತುತ  ಗೌಹಟಿಯ ಶ್ರೀ.ನಿಶಾಂತ್ ಹಜಾರಿಕಾ ಮತ್ತು ಶ್ರೀಮತಿ.ರೂಮಾ ಗೃಹರವರುಗಳು ಅಸ್ಸಾಮಿ ಭಾಷೆಯಲ್ಲಿ ಇದೇ ಗ್ರಂಥವನ್ನು ತರ್ಜುಮೆ ಮಾಡಿದ್ದು, ಗೌಹಟಿಯ ಅಸ್ಸಾಂ ಬುಕ್ ಡಿಪೋ ನ ಶ್ರೀ. ಅಭಿಜಿತ್ ಗೃಹ ರವರು  ಗ್ರಂಥವನ್ನು ಹೊರತಂದಿರುತ್ತಾರೆ. 

ಈ  ಶುಭ ಸಂದರ್ಭದಲ್ಲಿ ಶ್ರೀ. ಅಭಿಜಿತ್ ಗೃಹ ರವರು ತರ್ಜುಮೆ ಮಾಡಿರುವ ಶ್ರೀ ಸಾಯಿ ಸಗುಣೋಪಾಸನ ಎಂಬ ಮತ್ತೊಂದು ಅಸ್ಸಾಮಿ ಗ್ರಂಥವನ್ನು ಕೂಡ ಬಿಡುಗಡೆ ಮಾಡಲಾಯಿತು. 

ಶ್ರೀ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ವಂದನಾರ್ಪಣೆಯನ್ನು ನೆರವೇರಿಸಿದರು. 

ಮರಾಠಿಯಿಂದ ಅಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್ 
ಕನ್ನಡ ಅನುವಾದ: ಶ್ರೀಕಂಠ ಶರ್ಮ 

Thursday, October 2, 2014

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಶ್ರೀ ಸಾಯಿಬಾಬಾರವರ 96ನೇ ಪುಣ್ಯತಿಥಿ ಉತ್ಸವದ ಆಚರಣೆಯ ಒಂದು ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಚರಿಸಲಾಗುತ್ತಿರುವ ಶ್ರೀ ಸಾಯಿಬಾಬಾರವರ 96ನೇ ಪುಣ್ಯತಿಥಿ ಉತ್ಸವದ ಮೊದಲನೇ ದಿನದ ಕಾರ್ಯಕಲಾಪಗಳು ಇದೇ ತಿಂಗಳ 2ನೇ ಅಕ್ಟೋಬರ್ 2014, ಗುರುವಾರ ದಂದು ಬೆಳಿಗ್ಗೆ ಶ್ರೀ ಸಾಯಿಬಾಬಾರವರ ಭಾವಚಿತ್ರ ಮತ್ತು ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಮೆರವಣಿಗೆಯೊಂದಿಗೆ ಅತ್ಯಂತ ವಿಜೃಂಭಣೆಯಿಂದ ಸಕಲ ಧಾರ್ಮಿಕ ವಿಧಿ ವಿಧಾನಗಳೊಡನೆ ವಿಧ್ಯುಕ್ತವಾಗಿ ಪ್ರಾರಂಭವಾದವು. 

ಮುಂಬೈನ ದ್ವಾರಕಾಮಾಯಿ ಮಂಡಳಿಯವರು ಸಮಾಧಿ ಮಂದಿರದ ಪ್ರಾಂಗಣದ ಮಹಾದ್ವಾರದಲ್ಲಿ ಭಗವಾನ್ ದತ್ತಾತ್ರೇಯ, ಸ್ವಾಮಿ ಸಮರ್ಥ ಹಾಗೂ ಗಜಾನನ ಮಹಾರಾಜ್ ರವರುಗಳ ವಿಗ್ರಹಗಳನ್ನು ಇರಿಸಿದ್ದು, ಎಲ್ಲಾ ಸಾಯಿ ಭಕ್ತರನ್ನು ಬಹಳವೇ ಆಕರ್ಷಿಸುತ್ತಿವೆ.



2ನೇ ಅಕ್ಟೋಬರ್ 2014, ಗುರುವಾರ ದಂದು ಬೆಳಿಗ್ಗೆ 5 ಗಂಟೆಗೆ ಸಮಾಧಿ ಮಂದಿರದಿಂದ ಶ್ರೀ ಸಾಯಿಬಾಬಾರವರ ಭಾವಚಿತ್ರ ಮತ್ತು ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಮೆರವಣಿಗೆಯೊಂದಿಗೆ ಅತ್ಯಂತ ವಿಜೃಂಭಣೆಯಿಂದ ಸಕಲ ಧಾರ್ಮಿಕ ವಿಧಿ ವಿಧಾನಗಳೊಡನೆ ವಿಧ್ಯುಕ್ತವಾಗಿ ಪ್ರಾರಂಭವಾದವು. ಈ ಮೆರವಣಿಗೆಯಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಕಾರ್ಯನಿರ್ವಾಹಕ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಸ್ಥಳೀಯ ಗ್ರಾಮಸ್ಥರು ಭಾಗವಹಿಸಿದ್ದರು. 


ಮೆರವಣಿಗೆಯು ದ್ವಾರಕಾಮಾಯಿಯನ್ನು ತಲುಪಿದ ನಂತರ ಶ್ರೀ ಸಾಯಿ ಸಚ್ಚರಿತೆಯ ಅಖಂಡ ಪಾರಾಯಣವನ್ನು ಪ್ರಾರಂಭಿಸಲಾಯಿತು. ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ಮೊದಲನೇ ಅಧ್ಯಾಯವನ್ನು ಪಾರಾಯಣ ಮಾಡಿದರೆ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಎರಡನೇ ಅಧ್ಯಾಯವನ್ನು ಪಾರಾಯಣ ಮಾಡಿ ಅಖಂಡ ಪಾರಾಯಣಕ್ಕೆ ಚಾಲನೆ ನೀಡಿದರು. 


ಅಖಂಡ ಪಾರಾಯಣದ ಸಲುವಾಗಿ 2ನೇ ಅಕ್ಟೋಬರ್ 2014 ರಂದು ದ್ವಾರಕಾಮಾಯಿಯನ್ನು ರಾತ್ರಿಯಿಡೀ ತೆರೆದಿಡಲಾಗಿತ್ತು. 

ಬೆಳಿಗ್ಗೆ 7.15 ಕ್ಕೆ  ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ ಮತ್ತು ಅವರ ಪತ್ನಿಯವರು ಸಮಾಧಿ ಮಂದಿರದಲ್ಲಿ ಶ್ರೀ ಸಾಯಿಬಾಬಾರವರ ಪಾದ ಪೂಜೆಯನ್ನು ನೆರವೇರಿಸಿದರು. ಮಧ್ಯಾನ್ಹ 12.30 ಕ್ಕೆ ಮಧ್ಯಾನ್ಹ ಆರತಿಯನ್ನು ನೆರವೇರಿಸಲಾಯಿತು. ಸಂಜೆ 4.00 ಗಂಟೆಗೆ ಔರಂಗಾಬಾದ್ ನ ಹರಿ ಭಕ್ತ ಪರಾಯಣ ಶ್ರೀ.ಮನೋಹರ ಬುವಾ ಬಾಲಕೃಷ್ಣ ದೀಕ್ಷಿತ್ ರವರು ಕೀರ್ತನೆಯನ್ನು ಮಾಡಿದರು. ಸಂಜೆ 6.15 ಕ್ಕೆ ಧೂಪಾರತಿಯನ್ನು ನೆರವೇರಿಸಲಾಯಿತು. ನಂತರ 7.30 ರಿಂದ  to 10.00 ಗಂಟೆಯವರೆಗೆ ಸಾಯಿನಗರ ಮೈದಾನದಲ್ಲಿ ನಿರ್ಮಿಸಲಾಗಿರುವ ವಿಶೇಷ ವೇದಿಕೆಯಲ್ಲಿ ಶ್ರೀಮತಿ.ರಾಗಿಣಿ ಜಿತೇಂದ್ರ ಕಾಮಾಟಿಕರ್ ರವರಿಂದ   ಭಕ್ತಿಗೀತೆ ಹಾಗೂ ಭಾವಗೀತೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಸಂಸ್ಥಾನಾದ ವತಿಯಿಂದ ಆಹ್ವಾನಿತ ಕಲಾವಿದರುಗಳನ್ನು ಸನ್ಮಾನಿಸಲಾಯಿತು. ರಾತ್ರಿ 9.15 ಕ್ಕೆ ಶಿರಡಿ ಗ್ರಾಮದ ಸುತ್ತಲೂ ಶ್ರೀ ಸಾಯಿಬಾಬಾರವರ ಪಲ್ಲಕ್ಕಿ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. 



96ನೇ ಪುಣ್ಯತಿಥಿ ಉತ್ಸವದ ಮುಖ್ಯ ದಿನವಾದ ಶುಕ್ರವಾರ, 3ನೇ ಅಕ್ಟೋಬರ್ 2014 ರಂದು ಲಕ್ಷಾಂತರ ಸಾಯಿ ಭಕ್ತರು ಶಿರಡಿಗೆ ಆಗಮಿಸಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.

ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣವು ದ್ವಾರಕಾಮಾಯಿಯಲ್ಲಿ ಸುಸಂಪನ್ನಗೊಂಡಿತು. ನಂತರ ಶ್ರೀ ಸಾಯಿಬಾಬಾರವರ ಭಾವಚಿತ್ರ ಹಾಗೂ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಮೆರವಣಿಗೆಯಲ್ಲಿ ಸಮಾಧಿ ಮಂದಿರಕ್ಕೆ ತರಲಾಯಿತು. ಈ ಮೆರವಣಿಗೆಯಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ತ್ರಿ-ಸದಸ್ಯ ಸಮಿತಿಯ ಸದಸ್ಯರೂ ಹಾಗೂ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಅನಿಲ್ ಕಾವಡೆ, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾಸಾಹೇಬ್ ಶಿಂಧೆ, ನಿರ್ವಾಹಕ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಶಿರಡಿಯ ಗ್ರಾಮಸ್ಥರುಗಳು ಭಾಗವಹಿಸಿದ್ದರು.

ಬೆಳಿಗ್ಗೆ 9.00 ಗಂಟೆಗೆ ಭಿಕ್ಷಾ ಜೋಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಈ ಕಾರ್ಯಕ್ರಮದಲ್ಲಿ  ಶ್ರೀ ಸಾಯಿಬಾಬಾ ಸಂಸ್ಥಾನದ ತ್ರಿ-ಸದಸ್ಯ ಸಮಿತಿಯ ಸದಸ್ಯರೂ ಹಾಗೂ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಅನಿಲ್ ಕಾವಡೆ, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾಸಾಹೇಬ್ ಶಿಂಧೆ, ನಿರ್ವಾಹಕ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಶಿರಡಿಯ ಗ್ರಾಮಸ್ಥರು ಹಾಗೂ ಸಾವಿರಾರು ಮಂದಿ ಸಾಯಿ ಭಕ್ತರು ಭಾಗವಹಿಸಿದ್ದರು. ಬೆಳಿಗ್ಗೆ 10.00 ಗಂಟೆಗೆ ಸಮಾಧಿ ಮಂದಿರದ ವೇದಿಕೆಯಲ್ಲಿ ಶ್ರೀ.ಹೆಚ್.ಬಿ.ಪಿ.ಮನೋಹರ ಬುವಾ ಬಾಲಕೃಷ್ಣ ದೀಕ್ಷಿತ್ ರವರಿಂದ ಕೀರ್ತನೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 10.30 ಕ್ಕೆ ಸಮಾಧಿ ಮಂದಿರದಲ್ಲಿ ಆರಾಧನಾ ವಿಧಿ ಹಾಗೂ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.  ಇದನ್ನು ತ್ರಿ-ಸದಸ್ಯ ಸಮಿತಿಯ ಸದಸ್ಯರೂ ಹಾಗೂ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಅನಿಲ್ ಕಾವಡೆಯವರು ನೆರವೇರಿಸಿದರು. ಮಧ್ಯಾನ್ಹ 12.30 ಕ್ಕೆ ಮಧ್ಯಾನ್ಹ ಆರತಿಯನ್ನು ನೆರವೇರಿಸಲಾಯಿತು. ಆರತಿಯ ನಂತರ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು ಮರಾಠಿ ಭಾಷೆಯಲ್ಲಿ ರಚಿಸಿದ್ದ "ಸಾಯಿ ಚರಿತ್ರ ದರ್ಶನ" ಎಂಬ ಪುಸ್ತಕದ ಅಸ್ಸಾಮಿ ಅನುವಾದಿತ ಗ್ರಂಥವನ್ನು ಲೋಕಾರ್ಪಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಹಿಂದಿನ ಅಧ್ಯಕ್ಷರಾಗಿದ್ದ ಶ್ರೀ.ಡಿ.ಎಂ.ಸುಕ್ತಾನಕರ್, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾಸಾಹೇಬ್ ಶಿಂಧೆ, ನಿರ್ವಾಹಕ ಅಧಿಕಾರಿಗಳಾದ ಶ್ರೀ.ಬಿ.ಡಿ.ಸಬಲೆ, ಶ್ರೀ.ಎಸ್.ಎನ್.ಗಾರ್ಕಲ್, ಶ್ರೀ.ಎಸ್.ವಿ.ಗಮೆ, ಶ್ರೀ.ಡಿ.ಟಿ.ಉಗಲೆ, ಶ್ರೀ.ಯು.ಪಿ.ಗೋಂದ್ಕರ್, ಎಲ್ಲಾ ವಿಭಾಗದ ಮುಖ್ಯಸ್ಥರೂ ಭಾಗವಹಿಸಿದ್ದರು. ಸಂಜೆ 5 ಗಂಟೆಗೆ ಖಂಡೋಬ ಮಂದಿರಕ್ಕೆ ಮೆರವಣಿಗೆ ಹಾಗೂ ಸೀಮೋಲ್ಲಂಘನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಸಂಜೆ 6.15 ಕ್ಕೆ ಧೂಪಾರತಿ ಹಮ್ಮಿಕೊಳ್ಳಲಾಗಿತ್ತು. ಸಂಜೆ 7.30 ರಿಂದ ರಾತ್ರಿ 10.00  ಗಂಟೆಯವರೆಗೆ ಸಾಯಿ ನಗರದ ಮೈದಾನದಲ್ಲಿ ಭೂಪಾಲ್ ನ ಶ್ರೀ.ಸತ್ಯನಾರಾಯಣ ನಾಯರ್ ರವರಿಂದ ಭಜನೆ ಮತ್ತು ಘಜಲ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಾಯಿ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನಂದಿಸಿದರು. ರಾತ್ರಿ 9.15 ಕ್ಕೆ ಶಿರಡಿ ಗ್ರಾಮದ ಸುತ್ತಲೂ ಶ್ರೀ ಸಾಯಿಬಾಬಾರವರ ರಥೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿರಡಿಯ ಗ್ರಾಮಸ್ಥರು  ಹಾಗೂ ಸಾಯಿ ಭಕ್ತರುಗಳು ಭಾಗವಹಿಸಿದ್ದರು.



ಬೆಂಗಳೂರಿನ ಸಾಯಿ ಭಕ್ತರಾದ ಶ್ರೀ.ಸಾಯಿಬಾಬಾ ಪೇಪರ್ ಪ್ರಾಡಕ್ಟ್ಸ್ ನ ಶ್ರೀ.ಆರ್.ಶರವಣರವರು ನೀಡಿದ ಉದಾದ ದೇಣಿಗೆಯ ಸಹಾಯದಿಂದ ಸಮಾಧಿ ಮಂದಿರ ಹಾಗೂ ದೇವಾಲಯದ ಆವರಣವನ್ನು ಸುಂದರವಾದ ಹೂವುಗಳಿಂದ ಅಲಂಕರಿಸಲಾಗಿತ್ತು.



3ನೇ ಅಕ್ಟೋಬರ್ 2014 ಮುಖ್ಯ ದಿನವಾದ ಕಾರಣ ಸಮಾಧಿ ಮಂದಿರವನ್ನು ರಾತ್ರಿಯಿಡೀ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗಿತ್ತು.

2ನೇ ಅಕ್ಟೋಬರ್ 2014, ಗುರುವಾರ ದಂದು ಪ್ರಾರಂಭವಾದ ಶ್ರೀ ಸಾಯಿಬಾಬಾರವರ 96ನೇ ಮಹಾ ಸಮಾಧಿ ಉತ್ಸವವು 4ನೇ ಅಕ್ಟೋಬರ್ 2014, ಶನಿವಾರ ದಂದು ಶ್ರೀ.ಹೆಚ್.ಬಿ.ಪಿ.ಮನೋಹರ ಬುವಾ ಬಾಲಕೃಷ್ಣ ದೀಕ್ಷಿತ್ ರವರ ಕಲ್ಯಾಚ ಕೀರ್ತನೆ ಹಾಗೂ ದಹಿ ಹಂಡಿ ಕಾರ್ಯಕ್ರಮಗಳೊಂದಿಗೆ ಸಂಪೂರ್ಣವಾಯಿತು.

ಆ ದಿನ ಬೆಳಿಗ್ಗೆ ಗುರುಸ್ಥಾನದಲ್ಲಿ ಪ್ರತಿಷ್ಟಾಪಿಸಲಾಗಿರುವ ಶಿವಲಿಂಗಕ್ಕೆ ರುದ್ರಾಭಿಷೇಕವನ್ನು ಹಾಗೂ ಸಮಾಧಿ ಮಂದಿರದಲ್ಲಿ ಪಾದ ಪೂಜೆಯನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ಮತ್ತು ಅವರ ಧರ್ಮಪತ್ನಿಯವರು ನೆರವೇರಿಸಿದರು. ಬೆಳಿಗ್ಗೆ 10.00 ಗಂಟೆಗೆ  ಶ್ರೀ.ಹೆಚ್.ಬಿ.ಪಿ.ಮನೋಹರ ಬುವಾ ಬಾಲಕೃಷ್ಣ ದೀಕ್ಷಿತ್ ರವರಿಂದ ಗೋಪಾಲಕಾಲ ಕೀರ್ತನೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಧ್ಯಾನ್ಹ 12.00 ದಹಿ ಹಂಡಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಧ್ಯಾನ್ಹ 12.10 ಕ್ಕೆ ಮಧ್ಯಾನ್ಹ ಆರತಿಯನ್ನು ನೆರವೇರಿಸಲಾಯಿತು.  ಸಂಜೆ 6.15 ಕ್ಕೆ ಧೂಪಾರತಿಯನ್ನು ನೆರವೇರಿಸಲಾಯಿತು. ಸಂಜೆ 7.30 ರಿಂದ ರಾತ್ರಿ 10.00  ಗಂಟೆಯವರೆಗೆ ಸಾಯಿ ನಗರದ ಮೈದಾನದಲ್ಲಿ  ದೊರ್ಹಾಳೆಯ ಶ್ರೀ.ಶ್ರವಣ್ ಮಾಧವ ಚೌಧರಿಯವರಿಂದ ಸಾಯಿ ಕಥಾಮೃತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.




ಹಲವಾರು ಸಾಯಿ ಭಕ್ತರುಗಳು ನೀಡಿದ ಉದಾರವಾದ ದೇಣಿಗೆಯ ಸಹಾಯದಿಂದ ಉತ್ಸವದ ಮೂರೂ ದಿನಗಳಂದು ಶ್ರೀ ಸಾಯಿ ಪ್ರಸಾದಾಲಯದಲ್ಲಿ ಎಲ್ಲಾ ಸಾಯಿ ಭಕ್ತರಿಗೂ ಉಚಿತ ಮಹಾಪ್ರಸಾದ ಭೋಜನವನ್ನು ಏರ್ಪಡಿಸಲಾಗಿತ್ತು. ಸುಮಾರು ಒಂದು ಲಕ್ಷ ಐವತ್ತು ಸಾವಿರಕ್ಕೂ ಹೆಚ್ಚು ಸಾಯಿ ಭಕ್ತರು ಈ ಉಚಿತ ಪ್ರಸಾದ ಭೋಜನದ ಪ್ರಯೋಜನವನ್ನು ಪಡೆದರು. ಸಾಯಿಬಾಬಾರವರ  ದರ್ಶನವನ್ನು ಪಡೆದ ಸುಮಾರು ಒಂದು ಲಕ್ಷ ನಲವತ್ತು ಸಾವಿರಕ್ಕೂ ಹೆಚ್ಚು ಭಕ್ತರಿಗೆ ಲಾಡು ಪ್ರಸಾದದ ಪೊಟ್ಟಣಗಳನ್ನು  ದರ್ಶನದ ಸಾಲಿನಲ್ಲಿ ವಿತರಿಸಲಾಯಿತು. ಉತ್ಸವದ ಮುಖ್ಯ ದಿನದಂದು ಬೆಳಿಗ್ಗೆ 9.00 ಕ್ಕೆ ಆಯೋಜಿಸಿದ್ದ ಭಿಕ್ಷಾ ಜೋಳಿ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ  ಭಾಗವಹಿಸಿದ್ದ ಸ್ಥಳೀಯರು ಹಾಗೂ ಸಾಯಿಭಕ್ತರು 59,000 ರೂಪಾಯಿ ನಗದು ಹಾಗೂ 61 ಚೀಲಗಳಷ್ಟು ಅಕ್ಕಿ, ರಾಗಿ ಮತ್ತು ಗೋಧಿಯನ್ನು ಭಿಕ್ಷೆಯ ರೂಪದಲ್ಲಿ ನೀಡಿದರು.

ಎಂದಿನಂತೆ ಈ ವರ್ಷವೂ ಶ್ರೀ ಸಾಯಿಬಾಬಾರವರ ಮಹಾಸಮಾಧಿಯ ಮುಖ್ಯ ದಿನದಂದು ಶಿರಡಿಯ ಗ್ರಾಮಷ್ಟರಿಗೆ ಹಾಗೂ ಗಣ್ಯ ವ್ಯಕ್ತಿಗಳಿಗೆ ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ ವಿಶೇಷ ಭೋಜನವನ್ನು ಶ್ರೀ ಸಾಯಿಬಾಬಾ ಪ್ರಸಾದಾಲಯದಲ್ಲಿ ಏರ್ಪಡಿಸಲಾಗಿತ್ತು.

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ ನಾಗರಾಜ್ ಅನ್ವೇಕರ್ 
ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಶಿರಡಿ ಸಮಾಧಿ ಮಂದಿರದಿಂದ ಆರಾಧನಾ ವಿಧಿ ಮತ್ತು ಪೂಜೆಗಳ ನೇರ ಪ್ರಸಾರ - ಕೃಪೆ: ಸಾಯಿಅಮೃತಧಾರಾ. ಕಾಂ

ಸಾಯಿ ಭಕ್ತರು ಹಾಗೂ ಶಿರಡಿಯ ಸ್ಥಳೀಯ ಗ್ರಾಮಸ್ಥರ ಅನೂಕೂಲಕ್ಕಾಗಿ  ಸಿಸಿ ಟಿವಿಯ ಮೂಲಕ 2ನೇ ಅಕ್ಟೋಬರ್ 2014 ರಿಂದ  4ನೇ ಅಕ್ಟೋಬರ್  2014 ರವರೆಗೆ  ಶಿರಡಿ ಸಮಾಧಿ ಮಂದಿರದಲ್ಲಿ ನಡೆಯುವ  ಶ್ರೀ ಸಾಯಿಬಾಬಾರವರ  96ನೇ ಮಹಾಸಮಾಧಿ ಉತ್ಸವದ ಆರಾಧನಾ ವಿಧಿ ಮತ್ತು ಪೂಜೆಗಳ ನೇರ ಪ್ರಸಾರವನ್ನು ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಇದೇ ತಿಂಗಳ  1ನೇ ಅಕ್ಟೋಬರ್ 2014 ರಂದು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಶ್ರೀ ಸಾಯಿಬಾಬಾ ಸಂಸ್ಥಾನವು ಹಲವಾರು ವರ್ಷಗಳಿಂದ ಆರಾಧನಾ ವಿಧಿ ಮತ್ತು ಪೂಜೆಗಳನ್ನು ಸಮಾಧಿ ಮಂದಿರದ ಮೊದಲನೇ ಮಹಡಿಯಲ್ಲಿ ನಡೆಸಿಕೊಂಡು ಬರುತ್ತಿದೆ. ಶ್ರೀ ಸಾಯಿಬಾಬಾರವರ ಸಮಾಧಿಯ ಸ್ಥಳವಾದ ಬೂಟಿವಾಡಾಕ್ಕೆ 2018ನೇ ಇಸವಿಗೆ ಸರಿಯಾಗಿ 100 ಸಂವತ್ಸರಗಳು ತುಂಬಲಿದೆ. ಈ ಪರಮ ಪವಿತ್ರ  ಸ್ಥಳದ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಇಷ್ಟು ವರ್ಷಗಳಿಂದ  ಸಮಾಧಿ ಮಂದಿರದಿಂದ ನೇರ ಪ್ರಸಾರವನ್ನು ಮಾಡುತ್ತಿರಲಿಲ್ಲ. ಆದರೆ, ಈ ವರ್ಷದಿಂದ  ಸಾಯಿ ಭಕ್ತರು ಹಾಗೂ ಶಿರಡಿಯ ಸ್ಥಳೀಯ ಗ್ರಾಮಸ್ಥರ ಅನೂಕೂಲಕ್ಕಾಗಿ  ಸಿಸಿ ಟಿವಿಯ ಮೂಲಕ 2ನೇ ಅಕ್ಟೋಬರ್ 2014 ರಿಂದ  4ನೇ ಅಕ್ಟೋಬರ್  2014 ರವರೆಗೆ  ಶಿರಡಿ ಸಮಾಧಿ ಮಂದಿರದಲ್ಲಿ ನಡೆಯುವ  ಶ್ರೀ ಸಾಯಿಬಾಬಾರವರ 96ನೇ ಮಹಾಸಮಾಧಿ ಉತ್ಸವದ ಆರಾಧನಾ ವಿಧಿ ಮತ್ತು ಪೂಜೆಗಳ ನೇರ ಪ್ರಸಾರವನ್ನು ಮಾಡುತ್ತಿದ್ದೇವೆ. ಆರಾಧನಾ ವಿಧಿ ಮತ್ತು ಪೂಜೆಯನ್ನು ಸಲ್ಲಿಸುತ್ತಿರುವವರು ಹಾಗೂ ನಾಮ ನಿರ್ದೇಶನ ಮಾಡಿದ ಕೆಲವು ಬ್ರಾಹ್ಮಣ ದಂಪತಿಗಳನ್ನು ಹೊರತುಪಡಿಸಿ, ಇತರ ಯಾರಿಗೂ ಆರಾಧನಾ ವಿಧಿ ಮತ್ತು ಪೂಜೆ ನಡೆಯುತ್ತಿರುವ ಸಮಯದಲ್ಲಿ ಸಮಾಧಿ ಮಂದಿರದ ಮೊದಲನೇ ಮಹಡಿಗೆ ಪ್ರವೇಶ ಮಾಡದಂತೆ ನಿರ್ಬಂಧ ಹೇರಲಾಗಿದೆ. ಈ ಆರಾಧನಾ ವಿಧಿ ಮತ್ತು ಪೂಜೆಯನ್ನು ನೆರವೇರಿಸಿದ ಮೇಲಿನ ಎಲ್ಲರಿಗೂ ಹಾಗೂ ಕೆಲವು ಗಣ್ಯ ವ್ಯಕ್ತಿಗಳು ಮತ್ತು ಸ್ಥಳೀಯರಿಗೆ ಸಾಯಿ ಪ್ರಸಾದಾಲಯದ ವಿಐಪಿ ವಿಭಾಗದಲ್ಲಿ ಪ್ರಸಾದ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದ ಕಾರಣ, ಯಾವ ಸಾಯಿ ಭಕ್ತರೂ ದರ್ಶನದ ಸಾಲಿನಲ್ಲಿ ಬರುವಾಗ  ಆರಾಧನಾ ವಿಧಿ ಮತ್ತು ಪೂಜೆ ನಡೆಯುತ್ತಿರುವ  ಸಮಾಧಿ ಮಂದಿರದ ಮೊದಲನೇ ಮಹಡಿಗೆ ಪ್ರವೇಶ ಮಾಡದೇ ಶ್ರೀ ಸಾಯಿಬಾಬಾ ಸಂಸ್ಥಾನದೊಂದಿಗೆ ಸಹಕರಿಸಬೇಕೆಂದು ಶ್ರೀ ಜಾಧವ್ ರವರು ಈ ಮೂಲಕ  ಮನವಿ ಮಾಡಿಕೊಂಡಿದ್ದಾರೆ.  

ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಶ್ರೀ ಸಾಯಿಬಾಬಾರವರ 96ನೇ ಪುಣ್ಯತಿಥಿ ಉತ್ಸವ - 2014 – 2ನೇ ಪತ್ರಿಕಾ ಪ್ರಕಟಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ಕಳೆದ ತಿಂಗಳ 30ನೇ ಸೆಪ್ಟೆಂಬರ್ 2014 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು  2ನೇ ಅಕ್ಟೋಬರ್ 2014 ರಿಂದ 4ನೇ  ಅಕ್ಟೋಬರ್ 2014 ರವರೆಗೆ ನಡೆಯುವ ಶ್ರೀ ಸಾಯಿಬಾಬಾರವರ 96ನೇ ಮಹಾಸಮಾಧಿ ಉತ್ಸವದ ಸಕಲ ಸಿದ್ಧತೆಗಳು ಸಂಪೂರ್ಣಗೊಂಡಿವೆ ಎಂದು ತಿಳಿಸಿದರು. ಉತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಲವಾರು ಸಾಯಿಭಕ್ತರು ನೀಡಿರುವ ಉದಾರ ದೇಣಿಗೆಯ ಸಹಾಯದಿಂದ  ಉತ್ಸವದ 3  ದಿನಗಳೂ ಸಾಯಿಬಾಬಾ ಪ್ರಸಾದಾಲಯದಲ್ಲಿ ಎಲ್ಲಾ ಸಾಯಿ ಭಕ್ತರಿಗೂ ಉಚಿತ ಪ್ರಸಾದ ಭೋಜನವನ್ನು ವಿತರಿಸಲಾಗುವುದು ಎಂದು ಸಹ ಅವರು ಸುದ್ಧಿಗಾರರಿಗೆ ತಿಳಿಸಿದರು. 

ಸಾಧು ಸಂತರ ಹಾಗೂ ಸತ್ಪುರುಷರ ಮಹಾಸಮಾಧಿ ಉತ್ಸವವನ್ನು ಆಚರಿಸುವುದು ಬಹಳ ಪವಿತ್ರವಾದ ಕಾರ್ಯವಾಗಿದ್ದು ಆ ಸಂತರು ಸಮಾಧಿಯಾದ ದಿನವನ್ನು ಮಹಾಸಮಾಧಿ ದಿನವನ್ನಾಗಿ ಆಚರಿಸುವ ಪರಿಪಾಠ ಎಲ್ಲೆಡೆ ಬೆಳೆದುಕೊಂಡು ಬಂದಿದೆ ಎಂದು ಶ್ರೀ.ಜಾಧವ್ ರವರು ತಿಳಿಸಿದರು. 

ಪ್ರಪಂಚದ ಅನೇಕ ಕಡೆಗಳಿಂದ ಲಕ್ಷಾಂತರ ಸಾಯಿ ಭಕ್ತರು ಸಾಯಿಬಾಬಾರವರ ಆಶೀರ್ವಾದವನ್ನು ಪಡೆಯುವ ಸಲುವಾಗಿ ಶಿರಡಿಗೆ ಬರಲಿದ್ದಾರೆ. ಆ ಎಲ್ಲಾ ಭಕ್ತರಿಗೆ  ದೇವಾಲಯದ ಸಂಕೀರ್ಣದಲ್ಲಿ ಹಾಗೂ ಸುತ್ತಮುತ್ತಲಿನ ಸ್ಥಳದಲ್ಲಿ ಒಳ್ಳೆಯ ಅನುಕೂಲತೆಗಳನ್ನು ಮಾಡಿಕೊಡುವ ನಿಟ್ಟಿನಲ್ಲಿ ಹಳೆಯ ಪ್ರಸಾದಾಲಯದ ಪಕ್ಕದಲ್ಲಿ ವಿಶೇಷವಾಗಿ  ಲಾಡು ಕೌಂಟರ್ ಹಾಗೂ ಮೊಬೈಲ್ ಲಾಕರ್ ಗಳನ್ನು ತೆರಯಲಾಗಿದೆ. ಶ್ರೀ ಸಾಯಿಬಾಬಾ ಸಂಸ್ಥಾನವು ದೇವಾಲಯದ ಪ್ರಾಂಗಣ, ಹಳೆಯ ಪಿಂಪಲವಾಡಿ ರಸ್ತೆ, ದರ್ಶನದ ಕ್ಯೂ ಮತ್ತು ಪಾದಚಾರಿ ಮಾರ್ಗ, ಸಾಯಿ ವಾಣಿಜ್ಯ ಸಂಕೀರ್ಣದ ಬಳಿಯಿರುವ 16 ಗುಂಟೆ ಖಾಲಿ ಸ್ಥಳ, ಸಾಯಿ ಪ್ರಸಾದ್ ಸಂಕೀರ್ಣ ಹಾಗೂ ಸಾಯಿನಗರ ಮೈದಾನ ಹಾಗೂ ಇನ್ನೂ ಹಲವಾರು ಸ್ಥಳಗಳಲ್ಲಿ  ಒಟ್ಟು 69,000 ಚದರ ಆಡಿಗಳಷ್ಟು ವಿಶಾಲವಾದ ಟೆಂಟ್ ಗಳನ್ನು ನಿರ್ಮಿಸಿದೆ. ಈ ಎಲ್ಲಾ ಸ್ಥಳಗಳಲ್ಲಿ  24 ತಾಸು ವಿದ್ಯುತ್, ನೀರು ಹಾಗೂ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಮಳೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಈ ಎಲ್ಲಾ ಸ್ಥಳಗಳಲ್ಲಿ  ಟೆಂಟ್ ಗಳನ್ನು  ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಲಾಗಿದೆ. ಸಾಯಿನಗರ ಮೈದಾನದಲ್ಲಿ ಆಹ್ವಾನಿತ ಕಲಾವಿದರ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಬೃಹತ್ ಟೆಂಟ್ ಅನ್ನು ನಿರ್ಮಿಸಲಾಗಿದೆ. ಶ್ರೀ ಸಾಯಿಬಾಬಾರವರ ಮಹಾಸಮಾಧಿಯ ಅಂಗವಾಗಿ ಮುಂಬೈನ ದ್ವಾರಕಾಮಾಯಿ ಮಂಡಳಿಯವರು   ಸಮಾಧಿ ಮಂದಿರದ ಹೊರಭಾಗ, ದೇವಾಲಯದ ಪ್ರಾಂಗಣವನ್ನು ಸುಂದರವಾದ ವಿದ್ಯುತ್ ದೀಪಗಳಿಂದ ಅಲಂಕರಿಸಲಿದ್ದಾರೆ. ಅಲ್ಲದೇ, ಸಮಾಧಿ ಮಂದಿರದ ಮುಖ್ಯದ್ವಾರದಲ್ಲಿ ಭಾಗವನ್ ದತ್ತಾತ್ರೇಯ, ಸ್ವಾಮಿ ಸಮರ್ಥ ಮತ್ತು ಗಜಾನನ ಮಹಾರಾಜ್ ರವರ ವಿಗ್ರಹಗಳನ್ನು ಇರಿಸಿ ಸುಂದರವಾಗಿ ಅಲಂಕರಿಸಲಿದ್ದಾರೆ. ಬೆಂಗಳೂರಿನ ಆರ್.ಶ್ರೀನಿವಾಸ್ ರವರು ನೀಡಿರುವ ಉದಾರ ದೇಣಿಗೆಯ ಸಹಾಯದಿಂದ ಸಮಾಧಿ ಮಂದಿರ, ದ್ವಾರಕಾಮಾಯಿ, ಚಾವಡಿ ಮತ್ತು ಗುರುಸ್ಥಾನವನ್ನು ಸುಂದರವಾದ ಹೂವುಗಳಿಂದ ಅಲಂಕರಿಸಲಾಗುತ್ತಿದೆ ಎಂದು ಶ್ರೀ. ಜಾಧವ್ ರವರು ನುಡಿದರು. 

ಉತ್ಸವದ ಅಂಗವಾಗಿ ಹಲವಾರು ಆಹ್ವಾನಿತ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಉತ್ಸವದ ಮೊದಲ ದಿನದಂದು ಸಂಜೆ 4.00 ಗಂಟೆಗೆ ಔರಂಗಾಬಾದ್ ನ  ಶ್ರೀ.ಮನೋಹರ ಬುವಾ ದೀಕ್ಷಿತ್ ರವರಿಂದ ಕೀರ್ತನೆ, 7.30 ರಿಂದ 10.00 ರವರೆಗೆ ಶ್ರೀಮತಿ.ರಾಗಿಣಿ ಜಿತೇಂದ್ರ ಕಾಮಾಟಿಕರ್ ರವರಿಂದ ಭಕ್ತಿಗೀತೆ ಹಾಗೂ ಭಾವಗೀತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉತ್ಸವದ ಎರಡನೆಯ ದಿನದಂದು ಬೆಳಿಗ್ಗೆ 10.00 ಗಂಟೆಗೆ  ಔರಂಗಾಬಾದ್ ನ  ಶ್ರೀ.ಮನೋಹರ ಬುವಾ ದೀಕ್ಷಿತ್ ರವರಿಂದ ಕೀರ್ತನೆ, ಸಂಜೆ 7.30 ರಿಂದ 10.00 ರವರೆಗೆ ಭೂಪಾಲ್ ನ ಶ್ರೀ.ಸತ್ಯಾನಂದ ನಾಯರ್ ರವರಿಂದ ಭಜನೆ ಮತ್ತು ಘಜಲ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಉತ್ಸವದ ಕೊನೆಯ ದಿನದಂದು ಬೆಳಿಗ್ಗೆ 10.00 ಗಂಟೆಗೆ ಔರಂಗಾಬಾದ್ ನ  ಶ್ರೀ.ಮನೋಹರ ಬುವಾ ದೀಕ್ಷಿತ್ ರವರಿಂದ  ಗೋಪಾಲ ಕಾಲ ಕೀರ್ತನೆ, ಸಾಯಂಕಾಲ 7.30 ರಿಂದ 10.00 ರವರೆಗೆ ದೊರ್ಹಾಳೆಯ ಶ್ರೀ.ಶ್ರವಣ ಮಾಧವ ಚೌಧರಿಯವರಿಂದ ಸಾಯಿ ಕಥಾಮೃತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೀರ್ತನೆಯ ಕಾರ್ಯಕ್ರಮಗಳು ಸಮಾಧಿ ಮಂದಿರದ ಹಿಂಭಾಗದ ವೇದಿಕೆಯಲ್ಲಿ ನಡೆಯುತ್ತವೆ ಹಾಗೂ ಆಹ್ವಾನಿತ ಕಲಾವಿದರ ಕಾರ್ಯಕ್ರಮಗಳು ಸಾಯಿನಗರ ಮೈದಾನದಲ್ಲಿ ನಿರ್ಮಿಸಲಾಗಿರುವ ಬೃಹತ್ ವೇದಿಕೆಯಲ್ಲಿ ನಡೆಯುತ್ತವೆ. ಉತ್ಸವದ ಮೂರು ದಿನಗಳು ಸಾಯಿಪ್ರಸಾದಾಲಯದಲ್ಲಿ ಎಲ್ಲಾ ಸಾಯಿ ಭಕ್ತರಿಗೂ ಉಚಿತವಾಗಿ ಪ್ರಸಾದ ಭೋಜನವನ್ನು ವಿತರಿಸಲಾಗುವುದು. ಈ ಪ್ರಸಾದ ಭೋಜನಕ್ಕೆ ಗುಂಟೂರಿನ ಶ್ರೀ.ಕೆ.ಹೆಚ್.ವಿ.ಗೋಪಿ, ಕನ್ಮರಲಪುಡಿ ಮತ್ತು ವೆಂಕಟಲೀಲಾ ಕುಮಾರಿ, ಹೈದರಾಬಾದ್ ನ ಎಸ್.ಮೋಕ್ಷಘ್ನಚಂದ್ರ, ಕರೂರಿನ ಎನ್.ಅಂಗ ಮುತ್ತು ಕುಮಾರ್, ಇಂದೂರಿನ ಕಮಲ್ ಬಲಾನಿ, ಚೆನ್ನೈ ನ ರಾಜಗೋಪಾಲ್ ನಟರಾಜನ್, ಕೋಪರಗಾವ್ ನ ಸಂಜಯ್ ಶಂಕರ್ ವಾಣಿ, ಗೋಧಿಯಾದ ಜ್ಯೋತಿ ಸಂಜಯ್ ಸಿಂಗ್ ಮಸಾನಿ ಮತ್ತು ಸಂಜಯ್ ಸಿಂಗ್ ಘನಶ್ಯಾಮ ದಾಸ್ ಮಸಾನಿ, ರಾಯಪುರದ ಪಾರ್ಥ ಆಯುಷ್ ಅಗರವಾಲ್, ಮುಂಬೈನ ಗೌತಮ್ ನಾಯಕ್, ಹೈದರಾಬಾದ್ ನ ನಾರಾಯಣ ಅನುಮಾಲ, ಬೆಂಗಳೂರಿನ ಬದರಿನಾರಾಯಣ, ಸಾಯಿ ರಂಜನಿ, ದೆಹಲಿಯ ಶ್ರೀಮತಿ.ದೇವಿ ಮತ್ತು ಶ್ರೀ.ಕೆ.ರಾಮಕುಮಾರ್ ಅಗರವಾಲ್, ಲಕ್ನೌ ನ ವಿಕ್ರಂ ಕಪೂರ್ ಹಾಗೂ ಬೆಂಗಳೂರಿನ ಭಾರತಿ ಶಿರಗುರ್ಕರ್  ರವರುಗಳು ಉದಾರವಾದ ದೇಣಿಗೆಯನ್ನು ನೀಡಿರುತ್ತಾರೆ. 

ಉತ್ಸವಕ್ಕೆ ಹರಿದು ಬರುತ್ತಿರುವ ಹೆಚ್ಚಿನ ಸಾಯಿ ಭಕ್ತ ಸಾಗರವನ್ನು ಗಮನದಲ್ಲಿ ಇಟ್ಟುಕೊಂಡು 135 ಕ್ವಿಂಟಾಲ್ ಸಕ್ಕರೆಯನ್ನು ಬಳಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಲಾಡು ಪ್ರಸಾದ ಪೊಟ್ಟಣಗಳನ್ನು ತಯಾರಿಸಲಾಗುತ್ತಿದೆ. ಭಕ್ತರಿಗೆ ಸುಲಭವಾಗಿ ಚಹಾ, ಕಾಫಿ ಸಿಗಲೆಂದು ಸಾಯಿ ಆಶ್ರಮ 1 ಮತ್ತು 2, ಧರ್ಮಶಾಲೆ, ಭಕ್ತಿ ನಿವಾಸ ಕಟ್ಟಡ, ಕ್ಯೂ ಕಾಂಪ್ಲೆಕ್ಸ್ ನ ಮೊದಲನೇ ಮಹಡಿಗಳಲ್ಲಿ ಹೆಚ್ಚಿನ ಕೌಂಟರ್ ಗಳನ್ನು ತೆರೆಯಲಾಗಿದೆ. ಅಂತೆಯೇ ಸಮಾಧಿ ಮಂದಿರದಿಂದ ಭಕ್ತಿನಿವಾಸಕ್ಕೆ ದಿನದ 24 ತಾಸು ಉಚಿತ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ.  ಈ ಬಸ್ ಗಳು ಸಾಯಿಪ್ರಸಾದ್  ಕಟ್ಟಡದಿಂದ ಹೊರಡಲಿದ್ದು ಬೆಳಿಗ್ಗೆ 10.00 ಗಂಟೆಯಿಂದ ಸಂಚಾರ ಪ್ರಾರಂಭಿಸಲಿವೆ. ಕ್ಯೂ ಕಾಂಪ್ಲೆಕ್ಸ್, ದೇವಾಲಯದ ಆವರಣ, ಹೊಸ ಭಕ್ತಿ ನಿವಾಸ, ಸಾಯಿ ಆಶ್ರಮ  ಮತ್ತು 2, ಧರ್ಮಶಾಲೆ, ಸಾಯಿ ಪ್ರಸಾದಾಲಯದ ಆವರಣಗಳಲ್ಲಿ ಸಾಯಿ ಭಕ್ತರ ಅನುಕೂಲಕ್ಕಾಗಿ ಪ್ರಥಮ ಚಿಕಿತ್ಸಾ ಕೇಂದ್ರವನ್ನು ತೆರೆಯಲಾಗಿದೆ. ದೇವಾಲಯದ ಆವರಣದಲ್ಲಿ ದಿನದ  24 ತಾಸುಗಳೂ ತಜ್ಞ ವೈದ್ಯರುಗಳನ್ನು ಇರಿಸಲಾಗಿದೆ. 

ಶಿರಡಿಗೆ ಹರಿದು ಬರುತ್ತಿರುವ ಹೆಚ್ಚಿನ  ಭಕ್ತರನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ವಿಭಾಗವು ಶಿರಡಿಯ  ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಿದೆ. ಸಮಾಧಿ ಮಂದಿರದಲ್ಲಿ ಬಾಬಾರವರ ವಿಗ್ರಹದ ಎದುರುಗಡೆ, ಪಲ್ಲಕ್ಕಿ ಉತ್ಸವ, ಭಿಕ್ಷಾ ಜೋಳಿ ಕಾರ್ಯಕ್ರಮ, ಸೀಮೋಲ್ಲಂಘನ ಉತ್ಸವ, ರಥೋತ್ಸವ, ಸಾಯಿ ನಗರ ವೇದಿಕೆ, ದೇವಾಲಯದ ಸಂಕೀರ್ಣ, ದರ್ಶನ ಹಾಲ್, ದರ್ಶನದ ಕ್ಯೂ ಕಾಂಪ್ಲೆಕ್ಸ್, ಪ್ರಸಾದಾಲಯದ ಆವರಣ, ಭಕ್ತಿ ನಿವಾಸ, ದ್ವಾರಾವತಿ, ಸಾಯಿ ಆಶ್ರಮ 1 ಮತ್ತು 2, ಧರ್ಮಶಾಲೆ - ಈ ಎಲ್ಲಾ ಸ್ಥಳಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಗಳು ಕರ್ತವ್ಯ ನಿರತರಾಗಿರುತ್ತಾರೆ. 

ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ  ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಈ ವರ್ಷದ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ.ಜಾಧವ್ ರವರು ಈ ಮೂಲಕ ವಿನಂತಿಸಿಕೊಂಡಿದ್ದಾರೆ. 

ಈ ವರ್ಷದ ಉತ್ಸವವನ್ನು ಯಶಸ್ವಿಯಾಗಿ ಆಚರಿಸುವ ನಿಟ್ಟಿನಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರೂ ಹಾಗೂ ಅಹಮದ್ ನಗರ ಜಿಲ್ಲಾ ನ್ಯಾಯಾಧೀಶರೂ ಅದ ಶ್ರೀ.ಶಶಿಕಾಂತ್ ಕುಲಕರ್ಣಿ, ತ್ರಿ-ಸದಸ್ಯ  ಸಮಿತಿಯ ಸದಸ್ಯರು ಹಾಗೂ ಮುಖ್ಯ ಜಿಲ್ಲಾ ನ್ಯಾಯಾಧೀಶರಾದ ಶ್ರೀ.ಅನಿಲ್ ಕಾವಡೆಯವರ ಮಾರ್ಗದರ್ಶನದಲ್ಲಿ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಎಲ್ಲಾ ನಿರ್ವಾಹಕ ಅಧಿಕಾರಿಗಳೂ, ಎಲ್ಲಾ ವಿಭಾಗಗಳ ಮುಖ್ಯಸ್ಥರೂ ಮತ್ತು ಶ್ರೀ ಸಾಯಿಬಾಬಾ ಸಂಸ್ಥಾನದ ಎಲ್ಲಾ ನೌಕರರೂ ಬಹಳ ಶ್ರಮವಹಿಸಿ ಕೆಲಸ ಮಾಡಿರುತ್ತಾರೆ ಎಂದು ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಜಾಧವ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Wednesday, September 24, 2014

ಶಿರಡಿಯಲ್ಲಿ "ಆನಂದಿ ವಾಸ್ತು" ದಿನದರ್ಶಿಕೆಯ ಲೋಕಾರ್ಪಣೆ -ಕೃಪೆ:ಸಾಯಿಅಮೃತಧಾರಾ.ಕಾಂ

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಇದೇ ತಿಂಗಳ 23ನೇ ಸೆಪ್ಟೆಂಬರ್ 2014, ಮಂಗಳವಾರದಂದು ಶಿರಿಡಿ ಸಮಾಧಿ ಮಂದಿರದಲ್ಲಿ  "ಆನಂದಿ ವಾಸ್ತು" ಎಂಬ ಹೆಸರಿನ ದಿನದರ್ಶಿಕೆಯನ್ನು ಲೋಕಾರ್ಪಣೆಯನ್ನು ಮಾಡಿದರು. ಈ ದಿನದರ್ಶಿಯು ವಾಸ್ತು ಶಾಸ್ತ್ರ ಆಧಾರಿತವಾಗಿದ್ದು  ಇದನ್ನು ಖ್ಯಾತ ವಾಸ್ತು ಹಾಗೂ ಜ್ಯೋತಿಷ್ಯ ತಜ್ಞರಾದ ಶ್ರೀ.ಆನಂದ ಪಿಂಪಾಲಕರ್ ರವರು ತಯಾರಿಸಿದ್ದಾರೆ. 


ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ.ಆನಂದ ಪಿಂಪಾಲಕರ್ ರವರು ಈ ದಿನದರ್ಶಿಕೆಯಲ್ಲಿ ಶುಭ ನುಡಿಗಳು, ಭೂಮಿ ಪೂಜೆಯ ಮಹೂರ್ತಗಳು, ವಾಸ್ತು ಶಾಂತಿ ವಿಚಾರ, ವಿವಾಹ, ಪುಂಸವನ, ನಾಮಕರಣ, ಕೇಶ ಮುಂಡನ (ಚೌಲ), ಉಪನಯನ,ದಿನದ ವಿಶೇಷತೆ, ಸಂಖ್ಯಾ ಶಾಸ್ತ್ರ, ದಿನದಲ್ಲಿ ಬರುವ ಒಳ್ಳೆಯ ಮಹೂರ್ತ ಸಮಯಗಳು, ನಕ್ಷತ್ರ ವಿಚಾರ, ದೇವರ ಪೂಜೆಯ ವಿವರಗಳು, ವಾಸ್ತು ಸಲಹೆಗಳು, ಸಂಕಷ್ಟದ ದಿನದಂದು ಚಂದ್ರೋದಯದ ವಿವರಗಳು, ವಾಸ್ತು  ಪ್ರಕಾರವಾಗಿ ಉದ್ಯಾನವನದ ನಿರ್ಮಾಣ - ಹಾಗೂ ಇನ್ನೂ ಹತ್ತು ಹಲವಾರು ವಿಷಯಗಳನ್ನು ಕೂಲಂಕುಶವಾಗಿ ವಿವರಿಸಲಾಗಿದೆ ಎಂದು ಅವರು ತಿಳಿಸಿದರು. ಅಷ್ಟೇ ಅಲ್ಲದೇ ಶ್ರೀ ಸಾಯಿಬಾಬಾ ಸಂಸ್ಥಾನದ ಸಿಬ್ಬಂದಿ ವರ್ಗದವರಿಗೆ ಸುಮಾರು ಒಂಬತ್ತು ಸಾವಿರ ಪ್ರತಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ  ಎಂಬ ವಿಷಯವನ್ನು  ಸಹ ಅವರು ತಿಳಿಸಿದರು. ಅಲ್ಲದೇ, ಈ ದಿನದರ್ಶಿಯನ್ನು ಜನ ಸಾಮಾನ್ಯರು ಓದಿ ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ ಹಾಗೂ ಇಷ್ಟಪಡುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್, ಶ್ರೀ.ಅನಿಲ್ ಸಾಠೆ, ಡಾ.ಸಂದೀಪ್ ಓಸ್ವಾಲ್, ಶ್ರೀಮತಿ.ಪ್ರಿಯಾ ರಣದಿವೆ, ಶ್ರೀ.ಉಮೇಶ್ ಗಂದತ್, ಮತ್ತು ಶ್ರೀ.ಭೂಪೇಂದ್ರ ಸೋನಾವಾನೆಯವರುಗಳು ಕೂಡ ಉಪಸ್ಥಿತರಿದ್ದರು. 

ಮರಾಠಿಯಿಂದ ಆಂಗ್ಲಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಕನ್ನಡ ಅನುವಾದ: ಶ್ರೀಕಂಠ ಶರ್ಮ 

Sunday, September 21, 2014

ಅಮರಾವತಿಯ 25 ಅಂಧ ವಿದ್ಯಾರ್ಥಿಗಳಿಂದ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನ - ಕೃಪೆ: ಸಾಯಿಅಮೃತಧಾರಾ.ಕಾಂ

ಅಮರಾವತಿ ಹೆಲ್ಪಿಂಗ್ ವಿಂಗ್ ಮತ್ತು ಕ್ಲಬ್ ನ ಸಹಾಯದಿಂದ ಶಿಕ್ಷಣವನ್ನು ಕಲಿಯುತ್ತಿರುವ ಅಮರಾವತಿಯ 25 ಅಂಧ ವಿದ್ಯಾರ್ಥಿಗಳು ಇದೇ ತಿಂಗಳ 21ನೇ ಸೆಪ್ಟೆಂಬರ್ 2014, ಭಾನುವಾರ ದಂದು  ಶಿರಡಿಗೆ ಆಗಮಿಸಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ದರ್ಶನದ ನಂತರ ಅವರುಗಳು ಶ್ರೀ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ.ಮೋಹನ್ ಯಾದವ್ ರವರೊಂದಿಗೆ ಫೋಟೋ ಸೆಷನ್ ನಲ್ಲಿ ಭಾಗವಹಿಸಿದ್ದರು. 


ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್ 
ಕನ್ನಡ ಅನುವಾದ: ಶ್ರೀಕಂಠ ಶರ್ಮ 

Saturday, September 20, 2014

ಸಾಯಿ ಮಹಾಭಕ್ತ - ಬಾಪು ಸಾಹೇಬ್ ಜೋಗ್ - ಕೃಪೆ: ಸಾಯಿಅಮೃತಧಾರಾ. ಕಾಂ



ಬಾಪು ಸಾಹೇಬ್ ಜೋಗ್ ಆಲಿಯಾಸ್ ಸಖಾರಾಮ್ ಹರಿಯವರು 1856ನೇ ಇಸವಿಯಲ್ಲಿ ಜನಿಸಿದರು. ಅವರು ಸರ್ಕಾರಿ ಇಲಾಖೆಯೊಂದರಲ್ಲಿ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಹಾಗೂ 1909 ನೇ ಇಸವಿಯಲ್ಲಿ ನಿವೃತ್ತರಾಗಿ ಅದರಿಂದ ಬಂದ ಎಲ್ಲಾ ನಿವೃತ್ತಿ  ಪ್ರಯೋಜನಗಳನ್ನು ಸ್ವೀಕರಿಸಿ ತಮ್ಮ ಪತ್ನಿಯೊಂದಿಗೆ ಶಿರಡಿಗೆ ಬಂದು ನೆಲೆಸಿದರು. ಜೋಗ್ ದಂಪತಿಗಳಿಗೆ ಮಕ್ಕಳ ಯೋಗವಿರಲಿಲ್ಲ. ಅವರು ತಮಗೆ ಬರುತ್ತಿದ್ದ ಪಿಂಚಣಿ ಹಣದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದರು. 

ಮಹಾನ್ ಸತ್ಪುರುಷರಾದ ವಿಷ್ಣು ಬುವಾರವರು ಬಾಪು ಸಾಹೇಬರಿಗೆ ಹತ್ತಿರದ ಬಂಧುಗಳಾಗಿದ್ದರು. ಇವರು ಶಿರಡಿಗೆ ಬರುವುದಕ್ಕೆ ಮುಂಚೆ ಕಬಾಡ ಎಂಬಲ್ಲಿಗೆ ತೆರಳಿ ಅಲ್ಲಿ ವಾಸಿಸುತ್ತಿದ್ದ ಸಂತರಾದ ಸಖಾರಾಮ್ ಮಹಾರಾಜ್ ರವರಿಗೆ ಗೌರವ ಸಲ್ಲಿಸಿ ಅಲ್ಲಿ ಸ್ವಲ್ಪ ದಿನಗಳ ಕಾಲ ತಂಗಿದ್ದು ಅವರ ಸೇವೆಯನ್ನು ಮಾಡಿದರು. ಬಾಪು ಸಾಹೇಬರು ಶಿರಡಿಗೆ ಬರುವುದಕ್ಕೆ ಮುಂಚೆ ಅಲ್ಲಿ ಸ್ವಲ್ಪ ದಿನಗಳು ಮಾತ್ರ ಇದ್ದು ಕಬಾಡಕ್ಕೆ ಹಿಂತಿರುಗಿ ತಮ್ಮ ಜೀವಮಾನವನ್ನು ಅಲ್ಲಿ ಸೇವೆ ಮಾಡುತ್ತಾ  ಕಳೆಯಬೇಕೆಂದು ನಿರ್ಧಾರ ಮಾಡಿಕೊಂಡಿದ್ದರು. ಆದರೆ ಬಾಬಾರವರು ಇವರಿಗೆ ಬೇರೆಯೇ ಯೋಜನೆಯನ್ನು ಸಿದ್ಧಪಡಿಸಿದ್ದರು. ಶಿರಡಿಯಲ್ಲಿ ಜೋಗ್ ರವರು ಸಾಥೇವಾಡಾದಲ್ಲಿ ಉಳಿದುಕೊಂಡಿದ್ದರು. ಕೆಲವು ಭಕ್ತರು ಇವರನ್ನು ಕುರಿತು ಹಾಸ್ಯ ಮಾಡಿದಾಗ ಇವರಿಗೆ  ಇಷ್ಟವಾಗದೆ ಕಬಾಡಕ್ಕೆ ವಾಪಸ್ ತೆರಳುವುದಾಗಿ ಅವರುಗಳಿಗೆ ಹೆದರಿಸಿದರು. ಆಗ ಬಾಬಾರವರು ಮಧ್ಯ ಪ್ರವೇಶಿಸಿ “ಈ ವಾಡಾ ಸಾಥೆಯವರ ಅಪ್ಪನದ್ದೇನು?. ನಾನು ದಾದಾ ಕೇಳ್ಕರನಿಗೆ ನಿನಗೆ ತೊಂದರೆ ನೀಡದಂತೆ ತಾಕೀತು ಮಾಡುತ್ತೇನೆ. ನೀನು ನೆಮ್ಮದಿಯಿಂದ ಇಲ್ಲಿಯೇ ಇರುವಿಯಂತೆ. ಆಗಬಹುದಾ?” ಎಂದು ಕೇಳಿದರು. ಬಾಬಾರವರ ಸಿಹಿ ನುಡಿಗಳಿಗೆ ಮರುಳಾದ ಬಾಪು ಸಾಹೇಬ್  ಶಿರಡಿಯಲ್ಲಿಯೇ ಉಳಿದುಕೊಂಡರು. 

ಬಾಪು ಸಾಹೇಬ್ "ಚಿತ್ಪಾವನ ಕೊಂಕಣಿ ಬ್ರಾಹ್ಮಣ" ಪಂಗಡಕ್ಕೆ ಸೇರಿದವರಾಗಿದ್ದು ಬಹಳ ಸಂಪ್ರದಾಯಬದ್ಧವಾದ ಜೀವನವನ್ನು ನಡೆಸುತ್ತಿದ್ದು "ಸೋವಾಲೆ" ಎಂಬ ಒಂದು ವಿಧವಾದ ಪರಿಶುದ್ಧತೆಯ ಧಾರ್ಮಿಕ ವಿಧಿಯನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು.ಅವರು ನ್ಯಾಯವಂತರೂ, ಪ್ರಮಾಣಿಕರೂ ಆಗಿದ್ದು ತಮ್ಮ ಎಲ್ಲಾ ವ್ಯವಹಾರವನ್ನು ನೇರ ರೀತಿಯಲ್ಲಿ ಮಾಡುತ್ತಿದ್ದರು. ಅವರ ಧರ್ಮಪತ್ನಿಯೂ ಸಹ ಅವರಂತೆಯೇ ಮನೋಧರ್ಮವನ್ನು ಹೊಂದಿದ್ದರು. ಹಾಗಾಗಿ  ಅವರಿಬ್ಬರೂ ಪರಸ್ಪರ ಒಳ್ಳೆಯ ಹೊಂದಾಣಿಕೆಯನ್ನು ಹೊಂದಿದ್ದರು. ಅವರ ಧರ್ಮಪತ್ನಿಯ ಹೆಸರು "ತಾಯಿ" ಎಂದಾಗಿದ್ದು ಬಾಬಾರವರು ಆಕೆಯನ್ನು "ಆಯಿ" ಎಂದು ಕರೆಯುತ್ತಿದ್ದರು. ಬಾಪು ಸಾಹೇಬರು "ದತ್ತಾತ್ರೇಯರ ಉಪಾಸಕ" ರಾಗಿದ್ದ ಕಾರಣ ಅನನ್ಯ ದತ್ತ ಭಕ್ತರಾಗಿ ದತ್ತ ಸಂಪ್ರದಾಯದ ಎಲ್ಲಾ ಸಂಪ್ರದಾಯಗಳನ್ನೂ ಪರಿಪಾಲಿಸುತ್ತಿದ್ದರು. ಅವರು ತಮ್ಮ ಸಾಧನೆಯನ್ನು ಯಾರಿಗೂ ತೋರಿಸಿಕೊಳ್ಳದೇ ರಹಸ್ಯವಾಗಿ ಮಾಡುತ್ತಿದ್ದರು. ಇವರ ಮನೆಯ ಪೂಜಾ ಕೋಣೆಯಲ್ಲಿ ಎಲ್ಲಾ ದೇವರ ವಿಗ್ರಹಗಳೂ ಇದ್ದವು. ಪ್ರತಿ ವರ್ಷ ದತ್ತ ಜಯಂತಿಯ ದಿನದಂದು ಇವರು ದತ್ತಾತ್ರೇಯರಿಗೆ ಒಂದು ಕಫ್ನಿ ಹಾಗೂ ನೈವೇದ್ಯವನ್ನು ಕಾಣಿಕೆಯಾಗಿ ಅರ್ಪಿಸುತ್ತಿದ್ದರು. ಒಮ್ಮೆ ಅವರು ಶಿರಡಿಯಲ್ಲಿದ್ದ ಸಂದರ್ಭದಲ್ಲಿ ದತ್ತ ಜಯಂತಿಯ ದಿನದಂದು ಬಾಬಾರವರಿಗೆ ಕಪ್ನಿಯನ್ನು ಅರ್ಪಿಸುವ ಉತ್ಕಟ ಇಚ್ಛೆ ಅವರ ಮನದಲ್ಲಿ ಬಂದಿತು. ಹಾಗಾಗಿ, ಅವರು ಬಾಳಾ ಶಿಂಪಿಯ ಬಳಿ ಒಂದು ಕಫ್ನಿಯನ್ನು ಹೊಲಿಸಿದರು. ದತ್ತ ಜಯಂತಿಯ ದಿನದಂದು ಆ ಕಪ್ನಿಯನ್ನು ತೆಗೆದುಕೊಂಡು  ಬಾಬಾರವರ ಬಳಿಗೆ ತೆರಳಿ ಅವರಿಗೆ ಪೂಜೆಯನ್ನು ಸಲ್ಲಿಸಿದ ನಂತರ ಆ ಕಫ್ನಿಯನ್ನು ಅವರಿಗೆ ಕಾಣಿಕೆಯಾಗಿ ನೀಡಿದರು. ಅಂತೆಯೇ ಬಾಬಾರವರು ಸಹ ಅ ಕಫ್ನಿಯನ್ನು ಸ್ವೀಕರಿಸಿ ತಮ್ಮ ಬಳಿಯಿದ್ದ ಮತ್ತೊಂದು ಕಫ್ನಿಯನ್ನು ಪ್ರಸಾದವಾಗಿ ಅವರಿಗೆ ನೀಡಿದರು. ಬಾಪು ಸಾಹೇಬರು ಸಂತೋಷದಿಂದ ಆ ಕಫ್ನಿಯನ್ನು ಸ್ವೀಕರಿಸಿ ಅದನ್ನು ಭದ್ರವಾಗಿ ತಮ್ಮ ಬಳಿ ಸಂರಕ್ಷಿಸಿದರು. ಅಲ್ಲದೇ ಪ್ರತಿ ದಿನ ಸಂಜೆಯ ವೇಳೆಯಲ್ಲಿ ಬಾಬಾರವರು ನೀಡಿದ ಆ ಪವಿತ್ರ ಕಫ್ನಿಯನ್ನು  ತಮ್ಮ  ತಲೆಗೆ ಬಿಳಿಯ ಬಟ್ಟೆಯೊಂದನ್ನು ಸುತ್ತಿಕೊಂಡು ಬಾಬಾರವರ ದರ್ಶನಕ್ಕೆ ಹೋಗುತ್ತಿದ್ದರು. ಬಾಪು ಸಾಹೇಬರು ಆ ಕಫ್ನಿಯನ್ನು "ದರ್ಬಾರಿ ಪೋಷಾಕು" (ರಾಜದರ್ಬಾರಿನ ಉಡುಗೆ) ಎಂದು ಕರೆಯುತ್ತಿದ್ದರು.  ಬೇರೆ ಸಮಯದಲ್ಲಿ ಸಾಮಾನ್ಯ ಉಡುಪನ್ನು ಧರಿಸುತ್ತಿದ್ದರು. 

ಬಾಪು ಸಾಹೇಬರು ಬಹಳ ಒಳ್ಳೆಯ ಹೃದಯವಂತಿಕೆಯ ಗುಣವನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು. ಆದರೆ ಇವರು ಸರ್ಕಾರಿ ಹುದ್ದೆಯಲ್ಲಿ ಇದ್ದ ಕಾರಣ ಕೆಲಸಗಾರರೊಂದಿಗೆ ವ್ಯವಹರಿಸುವಾಗ ಬಹಳ ಕಟ್ಟುನಿಟ್ಟಾಗಿ ನಡೆದುಕೊಳ್ಳುವಂತೆ ಕಾಣಿಸುತ್ತಿದ್ದರು. ಆದರೆ ಅವರು ಬಹಳ ಮುಂಗೋಪಿಯಾಗಿದ್ದರು. ಬಾಬಾರವರು ಬಾಪು ಸಾಹೇಬರ ಈ ವರ್ತನೆಯನ್ನು ನಿಧಾನವಾಗಿ ಬದಲಾಯಿಸುವಲ್ಲಿ ಯಶಸ್ವಿಯಾದರು. ಇವರು ಬಹಳ ಲೆಕ್ಕಾಚಾರದ ಜೀವನವನ್ನು ನಡೆಸುತ್ತಿದ್ದ ಕಾರಣ ಸ್ವಲ್ಪ ಹಣವನ್ನು ಉಳಿಸಿದ್ದರು. ಇವರು ತಮ್ಮ ಬಳಿಯಿದ್ದ ಸಂಪತ್ತಿನ ಬಗ್ಗೆ ಅಹಂಕಾರವನ್ನು ಹೊಂದಿದ್ದರೆಂದು ಬಾಬಾರವರಿಗೆ ತಿಳಿದಿತ್ತು. ಹಾಗಾಗಿ ಬಾಬಾರವರು ಅಗಾಗ್ಗೆ ಇವರ ಬಳಿ ದಕ್ಷಿಣೆಯನ್ನು ನೀಡುವಂತೆ ಕೇಳಿ ಇವರು ಕೂಡಿಟ್ಟಿದ್ದ ಹಣವೆಲ್ಲಾ ಖಾಲಿಯಾಗುವಂತೆ ಮಾಡಿದರು. ಇದರಿಂದ ಬಾಪು ಸಾಹೇಬರು ಒಳ್ಳೆಯ ಪಾಠವನ್ನು ಕಲಿತರು. ಇವರು ಪ್ರತಿ ತಿಂಗಳು ತಮ್ಮ ಪಿಂಚಣಿ ಹಣವನ್ನು ಕೋಪರಗಾವ್ ನ ಕಚೇರಿಯಿಂದ ಪಡೆದು, ಕಿರಾಣಿ ಅಂಗಡಿಯವರಿಗೆ ನೀಡಬೇಕಾದ ಬಾಕಿ ಹಣವನ್ನು ನೀಡಿ ಉಳಿದ ಹಣವನ್ನು ತೆಗೆದುಕೊಂಡು ಬಂದು ಬಾಬಾರವರ ಅಡಿದಾವರೆಗಳಲ್ಲಿ ಇರಿಸುತ್ತಿದ್ದರು. ಬಾಬಾರವರು ಜೋಗರವರ ಮೇಲೆ ಬಹಳ ನಂಬಿಕೆಯನ್ನು ಇಟ್ಟಿದ್ದರು. ಹಾಗಾಗಿ  ಭಕ್ತರು ಅವರಿಗೆ ನೀಡುತ್ತಿದ್ದ ದಕ್ಷಿಣೆ ಹಣವನ್ನು ಜೋಪಾನ ಮಾಡುವಂತೆ ಹೇಳಿ ಜೋಗ್ ರವರಿಗೆ ನೀಡುತ್ತಿದ್ದರು.  ಅಂತೆಯೇ ಜೋಗ್ ರವರು ಸಹ ಬಾಬಾರವರ ಹಣವನ್ನು ಭದ್ರವಾಗಿ ಇಟ್ಟುಕೊಂಡು ಕಾಪಾಡುತ್ತಿದ್ದರು. ತಮಗೆ ಏನಾದರೂ ವಸ್ತುವಿನ ಅಗತ್ಯ ಬಿದ್ದಾಗ ಬಾಬಾರವರು ಆ ಹಣದಿಂದ ತಂದುಕೊಡುವಂತೆ ಜೋಗ್ ರವರಿಗೆ ಹೇಳುತ್ತಿದ್ದರು. ಕೆಲವೊಮ್ಮೆ ಬಾಬಾರವರು ಜೋಗ್ ರವರಿಗೆ ನೂರು ರೂಪಾಯಿಗಳನ್ನು ನೀಡಿ ಕೆಲವು ದಿನಗಳ ನಂತರ "ಬಾಪು ಸಾಹೇಬ್, ಕೆಲವು ದಿನಗಳ ಹಿಂದೆ ಇರಿಸಿಕೊಳ್ಳುವಂತೆ ಹೇಳಿ ನೂರಾ ಇಪ್ಪತ್ತೈದು ರೂಪಾಯಿಗಳನ್ನು ನೀಡಿದ್ದೆ. ಹೋಗಿ ಅದನ್ನು ತೆಗೆದುಕೊಂಡು ಬಾ" ಎಂದು ಕೇಳುತ್ತಿದ್ದರು. ಆಗ ಬಾಪು ಸಾಹೇಬರು ಬಾಬಾರವರು ತಮಗೆ ಕೇವಲ ನೂರು ರೂಪಾಯಿಗಳನ್ನು ಮಾತ್ರ ನೀಡಿದರೆಂದು ನೆನಪಿಸುತ್ತಿದ್ದರು. ಈ ರೀತಿ ಹಲವಾರು ಬಾರಿ ಬಾಬಾ ತಮಾಷೆಗಾಗಿ ಮಾಡುತ್ತಿದ್ದರು. ಬಾಬಾರವರು ಹಾಗೆ ಹೇಳಿದಾಗಲೆಲ್ಲಾ ಜೋಗ್ ರವರು "ಬಾಬಾ, ನಿಮ್ಮ ಹಣದ ಗೊಡವೆಯೇ ನನಗೆ ಬೇಡ. ನಿಮ್ಮ ಹಣವನ್ನು ಬೇರೆ ಯಾರ ಬಳಿಯಾದರೂ ಇರಿಸಿಕೊಳ್ಳಿ" ಎಂದು ಖಡಾಖಂಡಿತವಾಗಿ ಹೇಳುತ್ತಿದ್ದರು. ಆಗ ಬಾಬಾರವರು ಸಮಾಧಾನ ಮಾಡುತ್ತಾ "ಬಾಪು ಸಾಹೇಬ, ಕೋಪ ಮಾಡಿಕೊಳ್ಳಬೇಡ. ನನ್ನ ಲೆಕ್ಕಾಚಾರ ತಪ್ಪಾಗಿತ್ತು. ನಾನು ನಿನಗೆ ನೀಡಿದ್ದು ಕೇವಲ ನೂರು ರೂಪಾಯಿ ಮಾತ್ರ" ಎಂದು ಹೇಳುತ್ತಿದ್ದರು. ಒಮ್ಮೆ ಭಕ್ತರೊಬ್ಬರು ಬಾಬಾರವರಿಗೆ ಒಂದು ಗಿನಿಯಾ ನೀಡಿದರು. ಬಾಬಾರವರು ಅದನ್ನು ಬಾಪು ಸಾಹೇಬರಿಗೆ ನೀಡುತ್ತಾ “ಇದೇನಿದು?” ಎಂದು ಪ್ರಶ್ನಿಸಿದರು. ಅದಕ್ಕೆ ಜೋಗ್ ರವರು ಅದು ಒಂದು ಗಿನಿಯಾ ಅಥವಾ ಹದಿನೈದು ರೂಪಾಯಿಗಳಿಗೆ ಸಮ ಎಂದು ಉತ್ತರಿಸಿದರು. ಆಗ ಬಾಬಾರವರು “ಇದು ಬಹಳ ಬೆಲೆ ಬಾಳುವಂತಹದ್ದು. ಇದನ್ನು ಇರಿಸಿಕೊಂಡು ನನಗೆ ಮೂವತ್ತು ರೂಪಾಯಿಗಳನ್ನು ನೀಡು ” ಎಂದು ನುಡಿದರು.

ಮತ್ತೊಬ್ಬ ಮಹಾ ಭಕ್ತರಾದ ಮೇಘಾರವರು 19ನೇ ಜನವರಿ 1912 ರಂದು ಕಾಲವಾದ ನಂತರ ಬಾಬಾರವರ ಎಲ್ಲಾ ಕೆಲಸಗಳನ್ನೂ ಬಾಪು ಸಾಹೇಬರೇ ನೋಡಿಕೊಳ್ಳುತ್ತಿದ್ದರು. ಬಾಬಾರವರು 1918ನೇ ಇಸವಿಯಲ್ಲಿ ಮಹಾಸಮಾಧಿಯಾಗುವವರೆಗೂ ಬಾಪು ಸಾಹೇಬರೇ ಬಾಬಾರವರಿಗೆ ಆರತಿಯನ್ನು ಸಲ್ಲಿಸುತ್ತಿದ್ದರು. 

ಮೇಘಾರವರು  ಮಾಡುತ್ತಿದ್ದ ಎಲ್ಲಾ ಸೇವೆಗಳ ಜವಾಬ್ದಾರಿಯು ಬಾಪು ಸಾಹೇಬರ ಮೇಲೆಯೇ ಬಿಟ್ಟು. ಬಾಬಾರವರಿಗೆ ದ್ವಾರಕಾಮಾಯಿಯಲ್ಲಿ ಆರತಿಯನ್ನು ಸಲ್ಲಿಸುವುದು, ದೀಕ್ಷಿತವಾಡಾದಲ್ಲಿ ಮತ್ತು ಗುರು ಪಾದುಕಾ ಸ್ಥಾನದಲ್ಲಿ ಸಂಜೆಯ ಆರತಿಯನ್ನು ಬೆಳಗುವುದು - ಇವೆಲ್ಲವನ್ನೂ ಬಾಪು ಸಾಹೇಬರೇ ಮಾಡುತ್ತಿದ್ದರು. ಬಾಪು ಸಾಹೇಬರು ಈ ಎಲ್ಲ ಕೆಲಸಗಳನ್ನು ಅತ್ಯಂತ ಶ್ರದ್ಧೆ ವಹಿಸಿ ಮಾಡುತ್ತಿದ್ದರು. ಸಾಮಾನ್ಯವಾಗಿ ಆರತಿಯ ಸಮಯದಲ್ಲಿ ಗಣನೀಯ ಪ್ರಮಾಣದಲ್ಲಿ ಭಕ್ತರು ಸೇರುತ್ತಿದ್ದರು. ಆದರೆ ಕೆಲವೊಮ್ಮೆ ಆರತಿಯ ಸಮಯದಲ್ಲಿ ಬಹಳ ಕಡಿಮೆ ಭಕ್ತರು ಇರುತ್ತಿದ್ದರು. ಇನ್ನು ಕೆಲವೊಮ್ಮೆ ಒಬ್ಬ ಭಕ್ತರೂ ಇರುತ್ತಿರಲಿಲ್ಲ. ಆದರೆ ಜೋಗ್ ರವರು ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಪ್ರತಿನಿತ್ಯ ಆರತಿಯನ್ನು ಅತ್ಯಂತ ಹೆಚ್ಚಿನ ಶ್ರದ್ಧಾ-ಭಕ್ತಿಗಳಿಂದ ಸಲ್ಲಿಸುತ್ತಿದ್ದರು. ಬಾಪು ಸಾಹೇಬ್ ಹಾಗೂ ಅವರ ಪತ್ನಿಯ ತಾಯಿಯವರು ಬಹಳ ಸಾತ್ವಿಕ ಜೀವನವನ್ನು ನಡೆಸುತ್ತಿದ್ದರು. ಪ್ರತಿನಿತ್ಯ ಹೊತ್ತಿಗೆ ಮುಂಚಿತವಾಗಿಯೇ ಎದ್ದು  ತಣ್ಣೀರು ಸ್ನಾನ ಮಾಡಿ ತಮ್ಮ ಮನೆಯಲ್ಲಿನ ದೇವರುಗಳಿಗೆ ಪೂಜೆಯನ್ನು ಸಲ್ಲಿಸಿ, ಇತರ ಧಾರ್ಮಿಕ ವಿಧಿ ವಿಧಾನಗಳನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಿ ಶ್ರೀ ಸಾಯಿ ಸಚ್ಚರಿತ್ರೆ ಪೋತಿಯನ್ನು ಪಾರಾಯಣ ಮಾಡುತ್ತಿದ್ದರು. ನಂತರ ಬಾಬಾರವರ ದರ್ಶನಕ್ಕೆಂದು ದ್ವಾರಕಾಮಾಯಿಗೆ ತೆರಳುತ್ತಿದ್ದರು. ಬಾಪು ಸಾಹೇಬರು ಬಾಬಾರವರ ಜೊತೆಯಲ್ಲಿಯೇ ಇದ್ದು ಅವರ ಎಲ್ಲಾ ಕೆಲಸಗಳನ್ನೂ ಮಾಡುತ್ತಿದ್ದರು. ತಾಯಿಯವರು ಮನೆಗೆ ವಾಪಸ್ ತೆರಳಿ ಮಧಾನ್ಯ ಆರತಿಗಾಗಿ ಪ್ರಸಾದವನ್ನು ತಯಾರು ಮಾಡಿಕೊಳ್ಳುತ್ತಿದ್ದರು ಹಾಗೂ ಬಾಬಾರವರು ಇವರ ಮನೆಗೆ ಕಳುಹಿಸುತ್ತಿದ್ದ ಹಲವಾರು ಭಕ್ತರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದರು. 

ಒಂದು ದಿನ ತಾಯಿಯವರು ಉಪಹಾರ ಪ್ರಸಾದವನ್ನು ತೆಗೆದುಕೊಂಡು ದ್ವಾರಕಾಮಾಯಿಗೆ ತೆರಳಿದರು. ಬಾಬಾರವರು ಆಕೆಯನ್ನು ಹತ್ತಿರಕ್ಕೆ ಕರೆದು "ಆಯಿ ಇಂದು ನಿನ್ನ ಮನೆಯ ಬಾಗಿಲಿಗೆ ಕೋಣವೊಂದು ಬರುತ್ತದೆ.ಹಾಗಾಗಿ ಹೆಚ್ಚು ಪೂರಣ ಪೋಳಿ (ಬೇಯಿಸಿದ ಬೇಳೆ, ಬೆಲ್ಲ ಮತ್ತು ಏಲಕ್ಕಿಯನ್ನು ಚಪಾತಿಯೊಳಗೆ ಇರಿಸಿ ತಯಾರಿಸುವ ಒಂದು ಬಗೆಯ ಖಾದ್ಯ) ಯನ್ನು ತಯಾರಿಸು. ಅದರ ಮೇಲೆ ಹೆಚ್ಚಾಗಿ ತುಪ್ಪವನ್ನು ಹಾಕಿ ಕೋಣಕ್ಕೆ ತಿನ್ನಲು ನೀಡು" ಎಂದು ಹೇಳಿದರು. ಅಂತೆಯೇ ಆಯಿಯವರು ಬಾಬಾರವರ ಆಜ್ಞೆಯನ್ನು ಪಾಲಿಸಲು ಒಪ್ಪಿಕೊಂಡರು.  ಆದರೆ ನಂತರ ಆಕೆ "ಬಾಬಾ, ಹೆಚ್ಚಾಗಿ ತುಪ್ಪವನ್ನು ಹಾಕಿ ಬಹಳ ಪೂರಣ ಪೋಳಿಯನ್ನು ಖಂಡಿತವಾಗಿಯೂ ತಯಾರಿಸುತ್ತೇನೆ. ನಾನೇ ನನ್ನ ಕೈಯಾರೆ ಕೋಣಕ್ಕೆ ಪೂರಣ ಪೋಳಿಯನ್ನು ಸಹ ತಿನ್ನಿಸುತ್ತೇನೆ. ಆದರೆ ಆ ಕೋಣವನ್ನು ಹುಡುಕಿಕೊಂಡು ನಾನು ಎಲ್ಲಿಗೆ ಹೋಗಲಿ. ಹಾಗೂ ಅದೇ ಕೋಣ ಎಂದು ಗುರುತು ಹಿಡಿಯುವುದಾದರೂ ಹೇಗೆ?" ಎಂದು ಪ್ರಶ್ನಿಸಿದರು. ಅದಕ್ಕೆ ಬಾಬಾರವರು "ಆಯಿ, ನೀನು ಏಕೆ ಅದರ ಬಗ್ಗೆ  ಚಿಂತೆ ಮಾಡುವೆ?. ನೀನು ಪೂರಣ ಪೋಳಿಯನ್ನು ಮಾಡಿ ಮುಗಿಸುವುದೇ ತಡ, ಆ ಕೋಣವು ನಿನ್ನ ಮನೆಯ ಬಾಗಿಲಿನಲ್ಲಿ ಬಂದು ನಿಂತಿರುತ್ತದೆ" ಎಂದು ಉತ್ತರಿಸಿದರು. ಆಗ ಆಯಿಯವರು ನಿರಾಶೆಯಿಂದ “ಬಾಬಾ, ನಾನು ವಾಸವಾಗಿರುವ ಮನೆಗೆ ಎರಡು ಬಾಗಿಲುಗಳಿವೆ. ಪ್ರತಿನಿತ್ಯ ಅನೇಕ ಕೋಣಗಳು ,ಮೇಯಲು ಹೋಗುವ ಸಮಯದಲ್ಲಿ ನನ್ನ ಮನೆಯ ಮುಂದೆಯೇ ಹಾದುಹೋಗುತ್ತವೆ. ಹಾಗೂ ನಾನು ಆಹಾರವನ್ನು ನೀಡುವೆನೆಂದು ತಿಳಿದು ಅವು ನನ್ನ ಮನೆಯ ಬಾಗಿಲಿನಲ್ಲಿ ಬಂದು ನಿಲ್ಲುತ್ತವೆ" ಎಂದು ಹೇಳಿದರು. ಅದಕ್ಕೆ ಬಾಬಾರವರು "ಆಯಿ, ನೀನು ಪೂರಣ ಪೋಳಿಯನ್ನು ಮಾಡಿ ಮುಗಿಸಿ ಅದರ ಮೇಲೆ ತುಪ್ಪವನ್ನು ಹಾಕಿದ್ದೇ ತಡ ಒಂದು ಕೋಣವು ಬಂದು ನಿನ್ನ ಮನೆಯ ಬಾಗಿಲಿನಲ್ಲಿ ಬಂದು ನಿಂತುಕೊಂಡು ಕಾಯುತ್ತಿರುತ್ತದೆ" ಎಂದು ನುಡಿದರು. 

ಬಾಬಾರವರು ನೀಡಿದ ಉತ್ತರದಿಂದ ಆಯಿಯವರು ತೃಪ್ತಿಯಿಂದ ಮನೆಗೆ ವಾಪಸಾದರು. ಅಲ್ಲದೆ ವಿಶೇಷ ಆಸಕ್ತಿ ವಹಿಸಿ ತಟ್ಟೆಯ ತುಂಬಾ ಪೂರಣ ಪೋಳಿಯನ್ನು ತಯಾರಿಸಿದರು. ಅಲ್ಲದೆ ಅದರ ಮೇಲೆ ತುಂಬಾ ತುಪ್ಪವನ್ನು ಸಹ ಹಾಕಿದರು. ಅಷ್ಟು ಹೊತ್ತಿಗೆ ಗಂಟೆ 12:30 ಆಗಿತ್ತು. ಆ ಪೂರಣ ಪೋಳಿಗಳನ್ನು ತೆಗೆದುಕೊಂಡು  ಹಿಂದಿನ ಬಾಗಿಲಿಗೆ ಹೋಗುವಷ್ಟರಲ್ಲಿ ಅವರ ಬಾಗಿಲಿನ ಮುಂದೆ ಕೋಣವೊಂದು ಕಾದುಕೊಂಡು ನಿಂತಿತ್ತು. 

ಆಯಿಗೆ ಅಚ್ಚರಿಯಾಯಿತು. ಆದರೆ ಬಾಬಾರವರ ಮಾತುಗಳು ನಿಜವಾಗಿದ್ದು ಕಂಡು ಸಂತೋಷವಾಯಿತು. ಕೂಡಲೇ ಅಡುಗೆ ಮನೆಯೊಳಗೆ ಓಡಿ ಹೋಗಿ ಎಲ್ಲಾ ಪೂರಣ ಪೋಳಿಗಳನ್ನೂ ತಂದು ಆ ಕೋಣಕ್ಕೆ ತಿನ್ನಲು ನೀಡಿದರು. ಆ ಕೋಣವು ಎಲ್ಲಾ ಪೂರಣ ಪೋಳಿಗಳನ್ನು ತಿಂದ ನಂತರ ಅವರ ಎದುರೇ ಪ್ರಾಣ ಬಿಟ್ಟಿತು. ತಮ್ಮ ಕಣ್ಣೆದುರಿಗೆ ನಡೆದಿದ್ದನ್ನು ಕಂಡ ಆಯಿಗೆ ಹೆದರಿಕೆ ಮತ್ತು ದುಃಖ ಎರಡೂ ಒಮ್ಮೆಲೇ ಆಯಿತು. ಆಯಿ ಕೋಣವು ಪ್ರಾಣವನ್ನು ಬಿಟ್ಟಿದ್ದು ತಮ್ಮಿಂದಲೇ ಎಂದು ಭಾವಿಸಿದರು. ಕೂಡಲೇ ಅಡುಗೆ ಮನೆಯೊಳಗೆ ತೆರಳಿ ಅಡುಗೆ ಮಾಡಲು ಬಳಸಿದ್ದ ಎಲ್ಲಾ ಪದಾರ್ಥಗಳನ್ನು ಕೂಲಂಕುಷವಾಗಿ ಪರಿಶೀಲಿಸಿದರು. ಆದರೆ ಯಾವ ಪದಾರ್ಧದಲ್ಲಿಯೂ ತೊಂದರೆ ಕಂಡುಬರಲಿಲ್ಲ. ಹೀಗಾಗಿ ಆಕೆಯ ಮನಸ್ಸು ಪ್ರಕ್ಷುಬ್ಧಕ್ಕೆ ಒಳಗಾಗಿತು. ಆಗ ಆಕೆ ತಮ್ಮ ಮನಸ್ಸಿನಲ್ಲಿಯೇ “ ನಾನು ಈ ಪೂರಣ ಪೋಳಿಗಳನ್ನು ಬಹಳ ಇಷ್ಟಪಟ್ಟು ತಯಾರಿಸಿದೆ. ಆದರೂ ಹೀಗೇಕೆ ಆಯಿತು? ಈ ಕೋಣವು ಸತ್ತಿದ್ದಾದರೂ ಏಕೆ? ನಾನು ಈ ಕೋಣವನ್ನು ಸಾಯಿಸದಿದ್ದರೂ ಎಲ್ಲರೂ ನಾನೇ ಸಾಯಿಸಿದೆನೆಂದು ಆರೋಪ ಮಾಡುತ್ತಾರೆ. ಎಲ್ಲರೂ ನನ್ನ ಬಗ್ಗೆ ಏನು ತಿಳಿದುಕೊಳ್ಳಬಹುದು ಮತ್ತು ಹೇಳಬಹುದು? ನಾನು ಕೇವಲ ಬಾಬಾರವರ ಆಜ್ಞೆಯನ್ನು ಪಾಲಿಸಿದೆ ಅಷ್ಟೆ.  ಇದು ಯಾರ ಕೋಣವೋ ಏನೋ ನಾನರಿಯೆ. ಈ ಕೋಣದ ಒಡೆಯನಿಗೇನಾದರೂ ವಿಷಯ ತಿಳಿದರೆ ಅವನು ನಾನೇ ಕೋಣವನ್ನು ಕೊಂದೆನೆಂದು ಆರೋಪಿಸುತ್ತಾನೆ. ಈ ಕೋಣದ ಒಡೆಯ ಕೋಣದ ಬದಲಿಗೆ ಹಣವನ್ನು ಕೇಳಿದರೆ ಏನು ಮಾಡುವುದು? ಅಥವಾ ಅವನೇನಾದರೂ ದೂರು ನೀಡಿದರೆ ಏನು ಗತಿ? ಅದರ ಫಲಿತಾಂಶ ಏನಾಗುತ್ತದೆಯೋ? ಬಾಬಾರವರು ಈ ಬ್ರಹ್ಮಾಂಡದ ಸೃಷ್ಠಿಕರ್ತರು. ನಾನು ಅವರ ಆಜ್ಞೆಯನ್ನು ಪಾಲಿಸಿದೆ ಅಷ್ಟೆ. ಹಾಗಾಗಿ, ವ್ಯತಿರಿಕ್ತ ಫಲಿತಾಂಶ ಏನಾದರೂ ಹೊರಬಂದಲ್ಲಿ ಅವರು ಖಂಡಿತವಾಗಿಯೂ ನನ್ನನ್ನು ಕ್ಷಮಿಸುತ್ತಾರೆ" ಎಂದು ಯೋಚಿಸುತ್ತಲೇ ತಮಗೆ ತಾವೇ ಸಮಾಧಾನ ಹೇಳಿಕೊಂಡರು. 

ಸ್ವಲ್ಪ ಸಮಯದ ಬಳಿಕ ಅವರು ಬಾಬಾರವರ ಬಳಿಗೆ ಹೋಗಿ ನಡೆದ ವಿಚಾರವನ್ನೆಲ್ಲಾ ಚಾಚೂ ತಪ್ಪದೆ ತಿಳಿಸಿದರು. ಆಗ ಬಾಬಾರವರು “ಆಯಿ ಹೆದರಬೇಡ. ಈಗ ಏನೂ ಕೆಟ್ಟದ್ದು ಆಗಿಯೇ ಇಲ್ಲ. ಏನು ಆಗಬೇಕಾಗಿತ್ತೋ ಅದೇ ಆಗಿದೆ ಅಷ್ಟೆ. ಆ ಕೋಣಕ್ಕೆ  ಅದೊಂದು ಆಸೆ (ವಾಸನೆ) ಉಳಿದುಕೊಂಡಿತ್ತು. ಆ ಆಸೆ ಪೂರ್ಣವಾದ ನಂತರ ಅದು ಬಿಡುಗಡೆ ಹೊಂದಿತು. ಅದು ಮುಂದೆ ಒಳ್ಳೆಯ ಜನ್ಮವನ್ನು ಪಡೆಯುತ್ತದೆ. ಈಗ ಹೆದರದೆ ಮನೆಗೆ ಹೋಗು. ಆ ಕೋಣವು ನಿಕೃಷ್ಟ ಜನ್ಮದಿಂದ ಬಿಡುಗಡೆ ಹೊಂದುವುದಕ್ಕೆ ನೀನು ಕಾರಣಕರ್ತಳಾದೆ ಎಂದು ದುಃಖಪಡಬೇಡ.  ಆ ಕೋಣವು ಮುಂದೆ ಉತ್ತಮ ಜನ್ಮ ಪಡೆಯುವುದಕ್ಕೆ ನೀನು ಅವಕಾಶ ಮಾಡಿಕೊಟ್ಟ ಮೇಲೆ ನೀನು ಏಕೆ ದುಃಖದಿಂದ ಇರಬೇಕು?” ಪ್ರಶ್ನಿಸಿದರು. ಈ ರೀತಿಯಲ್ಲಿ ಬಾಬಾರವರು ಆಕೆಯನ್ನು ಸಂತೈಸಿ ಮನೆಗೆ ಕಳುಹಿಸಿಕೊಟ್ಟರು. 

ಒಮ್ಮೆ ಪವಿತ್ರ ಪರ್ವಾನಿಯ ಪರ್ವ ಕಾಲದಲ್ಲಿ ಬಾಪು ಸಾಹೇಬ್ ಜೋಗ್ ಮತ್ತು ಅವರ ಪತ್ನಿಯವರಿಗೆ ಕೋಪರಗಾವ್ ನ ಬಳಿಯಿರುವ ಗಂಗೆಯಲ್ಲಿ ಸ್ನಾನ ಮಾಡುವ ಆಸೆಯಾಯಿತು. ಬಾಬಾರವರು ಗೋದಾವರಿಯನ್ನು ಗಂಗೆಯೆಂದು ಸಂಬೋಧಿಸುತ್ತಿದ್ದರು. ಹಾಗಾಗಿ ಎಲ್ಲಾ ಭಕ್ತರೂ ಹಾಗೆಯೇ ಕರೆಯುವ ವಾಡಿಕೆ ಇಟ್ಟುಕೊಂಡಿದ್ದರು. 

ಅಂತೆಯೇ ಜೋಗ್ ಬಾಬಾರವರ ಅಪ್ಪಣೆ ಪಡೆಯಲು ಹೋದಾಗ ಬಾಬಾರವರು  “ಬಾಪು ಸಾಹೇಬ್, ಬಘು ತ್ಯಾಚಾ ವಿಚಾರ್ ಉಧ್ಯಾ ಸಕಳಿ" (ಅಂದರೆ: ಬಾಪು ಸಾಹೇಬ್, ಅದರ ಬಗ್ಗೆ ನಾಳೆ ವಿಚಾರ ಮಾಡೋಣ) ಎಂದರು. ಅದಕ್ಕೆ ಉತ್ತರವಾಗಿ ಬಾಪುರವರು "ಬಾಬಾ, ನಾಳೆ ಬೆಳಿಗ್ಗೆ ಏಳು ಗಂಟೆಗೆ ಸಮಯ ಪ್ರಶಸ್ತವಾಗಿರುತ್ತದೆ.  ಹಾಗಾಗಿ, ನಾವು ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಕೋಪರಗಾವ್ ಗೆ ನಡೆದು ಹೊರಟರೆ ಮಾತ್ರ ಏಳು ಗಂಟೆಗೆ ತಲುಪಲು ಸಾಧ್ಯವಾಗುತ್ತದೆ. ಆಗ ಮಾತ್ರ ಗಂಗೆಯಲ್ಲಿ ಮಿಂದು ಪವಿತ್ರ ಸ್ನಾನವನ್ನು ಮಾಡಲು ಸಾಧ್ಯವಾಗುತ್ತದೆ" ಎಂದು ನುಡಿದರು. ಆಗ ಬಾಬಾರವರು ಪುನಃ ಅದೇ ಮಾತನ್ನು ಪುನರುಚ್ಚರಿಸಿದರು. ಜೋಗ್ ಪರಿಪರಿಯಾಗಿ ಬಾಬಾರವರನ್ನು ಬೇಡಿಕೊಂಡರು. ಆದರೆ ಬಾಬಾರವರು "ನಾಳೆ ನೋಡೋಣ"ಎಂಬ ಒಂದೇ ಉತ್ತರವನ್ನು ಮತ್ತೆ ಮತ್ತೆ ಪುನರುಚ್ಚರಿಸಿದರು. ಆ ಪರ್ವ ಕಾಲವು ಜೀವನದಲ್ಲಿ ಒಂದೇ ಬಾರಿ ಬಂದಿತ್ತು. ಹಾಗಾಗಿ ಬಾಬಾರವರ ಉತ್ತರದಿಂದ ಜೋಗ್ ಮತ್ತು ಅವರ ಪತ್ನಿಯವರಿಗೆ ಬಹಳ ನಿರಾಶೆಯಾಯಿತು.  

ಬಾಪು ಸಾಹೇಬರು ಬಾಬಾರವರ ಅನನ್ಯ ಭಕ್ತರಾಗಿದ್ದ ಕಾರಣ ಬಾಬಾರವರ ಮಾತಿಗೆ ವಿರುದ್ಧವಾಗಿ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಆ ರಾತ್ರಿಯೆಲ್ಲಾ ಬಾಪು ಸಾಹೇಬರು ನಿದ್ರೆಯಿಲ್ಲದೆ ಒದ್ದಾಡಿದರು. ಆ ರಾತ್ರಿ ಬಾಬಾರವರು ಚಾವಡಿಯಲ್ಲಿ ಮಲಗುವ ದಿನವಾಗಿತ್ತು. ಮಾರನೇ ದಿನ ಬೆಳಿಗ್ಗೆ ಎಂದಿನಂತೆ ಬಾಪು ಸಾಹೇಬರು ಬಾಬಾರವರಿಗೆ ಕಾಕಡಾ ಆರತಿಯನ್ನು ಸಲ್ಲಿಸಿ ಇತರ ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸಿದ್ದರು. ಆಗ ಶಿರಡಿ ಗ್ರಾಮದ ಜನರು ಓಡುತ್ತಾ ಇವರಿದ್ದೆಡೆಗೆ ಬಂದರು. ಅವರೆಲ್ಲರೂ ಶಿರಡಿಯ ಕೆರೆ-ಕಾಲುವೆಗಳು ಗಂಗೆಯಿಂದ ತುಂಬಿ ಹರಿಯುತ್ತಿವೆ ಎಂದು ಕೂಗಿಕೊಂಡು ಬರುತ್ತಿದ್ದರು. ಆಗ ಬಾಬಾರವರು ಜೋಗ್ ಕಡೆಗೆ ನೋಡುತ್ತಲೇ "ತು  ಸಗ್ಲಿ ರಾತ್  ಲೇಯೆ ಶಿವೆ ದಿಲೆಯಾಸ್, ಪನ್  ದೇವಾಚೆ ದಯಾ, ಗಂಗಾ ಅಪ್ಲಾಪಾಶಿ ಆಲೆ. ಜಾ ಅಥಾ ಅಂಗೋಲೆ ಕರೂನ್ ಕರೂನ್ ಘೇಯೆ”  (ಅಂದರೆ “ಇಡೀ ರಾತ್ರಿ ನೀನು ನನ್ನ ಮೇಲೆ ಬಯ್ಗುಳದ ಸುರಿಮಳೆಯನ್ನೇ ಸುರಿಸಿದೆ. ಆದರೆ ದೇವರ ದಯೆಯಿಂದ ಗಂಗಾ ಶಿರಡಿಗೆ ಆಗಮಿಸಿದೆ. ಈಗ ಹೋಗಿ ಗಂಗೆಯಲ್ಲಿ ಮಿಂದು ಬಾ") ಎಂದರು.  ಈ ರೀತಿಯಲ್ಲಿ ಬಾಪು ಸಾಹೇಬ್, ಅವರ ಪತ್ನಿ ಹಾಗೂ ಶಿರಡಿಯ ಗ್ರಾಮಸ್ಥರೆಲ್ಲರೂ ಪವಿತ್ರ ಗೋದಾವರಿ ನದಿಯಲ್ಲಿ ಸ್ನಾನ ಮಾಡಿದರು.

ಬಾಪು ಸಾಹೇಬರು ಪ್ರತಿದಿನ  ಬೆಳಿಗ್ಗೆ ಮತ್ತು ಮಧ್ಯಾನ್ಹ ಶಿರಡಿಯ ಕಾಲುವೆಯಲ್ಲಿ ಸ್ನಾನ ಮಾಡುವ ಪರಿಪಾಠ ಇಟ್ಟುಕೊಂಡಿದ್ದರು. ಬಾಪು ಸಾಹೇಬರ ಆನಂದವನ್ನು ನೋಡಿದ ಬಾಬಾರವರು "ಅರೇ ಬಾಪು ಸಾಹೇಬ್, ಈ ದೇವರು ಎಷ್ಟು ದಯಾಮಯ ನೋಡು. ಆದರೆ ನಾನು ಅವನಲ್ಲಿ ಸಂಪೂರ್ಣ ನಂಬಿಕೆಯನ್ನು ಇಟ್ಟುಕೊಳ್ಳುವುದಿಲ್ಲ. ಅಲ್ಲದೇ ನಮಗೆ "ತಾಳ್ಮೆ" ಸಹ ಇರುವುದಿಲ್ಲ" ಎಂದರು. ಸಬೂರಿ ಎಂದರೆ ಭಗವಂತನಲ್ಲಿ ಎಡಬಿಡದ ಕೇಂದ್ರೀಕೃತವಾದ ನಂಬಿಕೆ. 

ಬಾಪು ಸಾಹೇಬರು ಊಟ-ಉಪಹಾರದ ವಿಚಾರದಲ್ಲಿ ಕಟ್ಟುನಿಟ್ಟಾದ ಶಿಸ್ತನ್ನು ಪಾಲಿಸುತ್ತಿದ್ದರು ಹಾಗೂ ಸಂಪ್ರದಾಯವನ್ನು ಇಟ್ಟುಕೊಂಡಿದ್ದರು. ಅವರು ಏಕಾದಶಿಯಂದು ಹಾಗೂ ಇತರ ವಿಶೇಷ ಹಬ್ಬದ ದಿನಗಳಂದು ಕಟ್ಟುನಿಟ್ಟಾಗಿ ಉಪವಾಸವನ್ನು ಆಚರಿಸುತ್ತಿದ್ದರು. ಆ ದಿನಗಳಂದು ಅವರು ಈರುಳ್ಳಿಯನ್ನು ಮುಟ್ಟುತ್ತಿರಲಿಲ್ಲ. ಬಾಬಾರವರು ಕೂಡ ಇದನ್ನು ಗೌರವಿಸುತ್ತಿದ್ದರು ಹಾಗೂ ಆ ದಿನಗಳಂದು ಈರುಳ್ಳಿಯನ್ನು ತಿನ್ನುವಂತೆ ಬಲವಂತ ಮಾಡುತ್ತಿರಲಿಲ್ಲ. ನಿಜ ಹೇಳಬೇಕೆಂದರೆ, ಬಾಬಾರವರು ಬಾಪು ಸಾಹೇಬರನ್ನು ಮಧ್ಯಾನ್ಹದ ಊಟಕ್ಕೆ ಮನೆಗೆ ಹೋಗುವಂತೆ ಕಳುಹಿಸುತ್ತಿದ್ದರು. ಕೆಲವೊಮ್ಮೆ ಯಾರಾದರೂ ಭಕ್ತರೊಂದಿಗೆ ಮನೆಗೆ ಹೋಗುವಂತೆ ಹೇಳಿ ಕಳುಹಿಸುತ್ತಿದ್ದರು. ಯಾರಾದರೂ ಭಕ್ತರು ಬಾಬಾರವರಿಗೆ ಸಿಹಿತಿಂಡಿ ಅಥವಾ ಹಣ್ಣುಗಳನ್ನು ಅರ್ಪಿಸಿದರೆ ಬಾಬಾರವರು ಇಡೀ ಬುಟ್ಟಿ ಅಥವಾ ಪೆಟ್ಟಿಗೆಯನ್ನು ಬಾಪು ಸಾಹೇಬರಿಗೆ ಕೊಟ್ಟುಬಿಡುತ್ತಿದ್ದರು. 

ಬಾಪು ಸಾಹೇಬ್ ರವರ ತಾಯಿ ಶಿರಡಿ ಗ್ರಾಮದಲ್ಲಿ ಮೃತರಾದರು. ಹಾಗಾಗಿ ಅವರು ತಮ್ಮ ತಾಯಿಯವರ ಉತ್ತರ ಕ್ರಿಯೆಗಳನ್ನು ಸಕಲ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಮಾಡಬೇಕೆಂದು ಅಂದುಕೊಂಡಿದ್ದರು. ಅದರ ಅಂಗವಾಗಿ ಅವರು ನಾಸಿಕ್ ಗೆ ಹೋಗಬೇಕೆಂದು ನಿರ್ಧರಿಸಿದ್ದರು. ಏಕೆಂದರೆ ಶಿರಡಿಯಲ್ಲಿ ಅವರ ಪಂಗಡಕ್ಕೆ ಸೇರಿದ ಬ್ರಾಹ್ಮಣರಾರೂ ಇರಲಿಲ್ಲ. ಅಂತೆಯೇ ವೈದಿಕವನ್ನು ಆಚರಿಸಲು ನಿರ್ಧರಿಸಿದ್ದ ದಿನಕ್ಕೆ ಬ್ರಾಹ್ಮಣರನ್ನು ಗೊತ್ತು ಮಾಡಿಕೊಂಡು ಬರುವ ಸಲುವಾಗಿ ನಾಸಿಕ್ ಗೆ ತೆರಳುವ ಮೊದಲು ಬಾಬಾರವರ ಒಪ್ಪಿಗೆ ಪಡೆಯಲು ಹೋಗಿದ್ದರು. ಆದರೆ ಬಾಬಾರವರು ಒಪ್ಪಿಗೆ ನೀಡದೆ ಮುಂದೆ ನೋಡೋಣ ಎಂದು ಹೇಳುತ್ತಲೇ ಬಂದರು. ಒಂದು ದಿನ ತೀವ್ರ ಹತಾಶರಾದ ಬಾಪು ಸಾಹೇಬರು ಬಾಬಾರವರಿಗೆ "ಏನಾದರೂ ಅಗಲಿ. ನಾನು ಇಂದು ಹೋಗಿಯೇ ತೀರುತ್ತೇನೆ.ನನ್ನ ಪಂಗಡಕ್ಕೆ ಸೇರಿರುವ ಯಾವ ಬ್ರಾಹ್ಮಣರು ಶಿರಡಿಯಲ್ಲಿ ಇಲ್ಲ" ಎಂದು ಹೇಳಿದರು. ಅದಕ್ಕೆ ಉತ್ತರವಾಗಿ ಬಾಬಾರವರು "ಈ ದಿನ ಸಾಯಂಕಾಲ ಇದರ ಬಗ್ಗೆ ತೀರ್ಮಾನ ಮಾಡೋಣ” ಎಂದು ನುಡಿದರು.

ಬಾಬಾರವರು ಹಾಗೆ ಹೇಳಿ ಇನ್ನೂ ಒಂದು ಗಂಟೆಯೂ ಆಗಿರಲಿಲ್ಲ. ಆಗ ಬಾಪು ಸಾಹೇಬರ ಪಂಗಡಕ್ಕೆ ಸೇರಿದ್ದ ಹಾಗೂ ಬಹಳ ವಿದ್ವಾಂಸರಾಗಿದ್ದ ಬ್ರಾಹ್ಮಣರೊಬ್ಬರು ಬಾಬಾರವರ  ದರ್ಶನಕ್ಕೆಂದು ಶಿರಡಿಗೆ ಆಗಮಿಸಿದರು. ನಂತರ ಅವರು ಜೋಗ್ ರವರ ತಾಯಿಯ ಉತ್ತರ ಕ್ರಿಯಾದಿ ಕರ್ಮಗಳನ್ನು ಜೋಗ್ ರವರಿಗೆ ಇಷ್ಟವಾಗುವಂತೆ ನೆರವೇರಿಸಿದರು. ಹಾಗಾಗಿ, ಜೋಗ್ ನಾಸಿಕ್ ಗೆ ಹೋಗುವ ಪ್ರಮೇಯವೇ ಬರಲಿಲ್ಲ. ಜೋಗ್ ಆ ರೀತಿ ಒಪ್ಪಿಗೆಯನ್ನು ಕೇಳುವ ಸಮಯದಲ್ಲಿ ಕಾಕಾ ಸಾಹೇಬ್ ದೀಕ್ಷಿತರು ಸಹ ಅಲ್ಲಿಯೇ ಇದ್ದರು. ಕಾಕಾರವರು ಬಾಬಾರವರಿಗೆ "ಬಾಬಾ, ನಾನು, ನೀವು ಹಾಗೂ ಬಾಪು ಸಾಹೇಬ ಮೂವರು ಸೇರಿ ನಾಸಿಕ್ ಗೆ ತೆರಳೋಣ. ನಾಸಿಕ್ ನಲ್ಲಿ ಜೋಗ್ ನನ್ನು ಬಿಟ್ಟು ನಾನು ಮತ್ತು ನೀವು ಮುಂಬೈಗೆ ಹೋಗೋಣ" ಎಂದು ಹೇಳಿದರು. ಅದಕ್ಕೆ ಉತ್ತರವಾಗಿ ಬಾಬಾರವರು “ಮೀ ಕಡಿ ಕೊನ್ನಾಲಾ ಸೂಡನಾರ್ ಮನುಷ್ ನಾಹಿ" (ಅಂದರೆ ನಾನು  ಯಾರನ್ನೂ ನಡು ನೀರಿನಲ್ಲಿ ಕೈಬಿಡುವುದಿಲ್ಲ. ನಾನು ಆ ತರಹ ವ್ಯಕ್ತಿಯಲ್ಲ). ಈ ರೀತಿ ಬಾಬಾರವರು ಒಂದು ಸಾಧಾರಣ ಸಂಭಾಷಣೆಗೆ ಅಸಾಧಾರಣ ಅರ್ಥವನ್ನು ತಮ್ಮದೇ ಧಾಟಿಯಲ್ಲಿ ನೀಡಿದ್ದರು. 

ಒಮ್ಮೆ ಬಾಪು ಸಾಹೇಬರು ಬಾಬಾರವರಿಗೆ ತಮಗೆ ಯಾವಾಗ ಸನ್ಯಾಸ ನೀಡುವಿರಿ ಎಂದು ಪ್ರಶ್ನಿಸಿದ್ದರು. ಅದಕ್ಕೆ ಬಾಬಾರವರು “ಈ ಪ್ರಾಪಂಚಿಕ ಜವಾಬ್ದಾರಿಯಿಂದ ನೀನು ಮುಕ್ತನಾದ ದಿನವೇ ನೀಡುವೆ" ಎಂದು ಉತ್ತರಿಸಿದ್ದರು. ಅವರ ತಾಯಿಯವರು ಕಾಲವಾದ ನಂತರ ಬಾಪು ಸಾಹೇಬರು ಜವಾಬ್ದಾರಿಯಿಂದ ಮುಕ್ತರಾದರು. ನಂತರ ಬಾಬಾರವರ ಸಮಾಧಿಯಾಗಿ ಹಲವು ವರ್ಷಗಳ ಕಾಲ ಶಿರಡಿಯಲ್ಲೇ ನೆಲೆಸಿ ಬಾಬಾರವರ  ಸಮಾಧಿಯನ್ನು ನೋಡಿಕೊಳ್ಳುತ್ತಿದ್ದರು. 

ಕಾಕಾ ಸಾಹೇಬ್ ದೀಕ್ಷಿತರ ಮರಣದ ನಂತರ  ಇತರ ಹಲವಾರು ಭಕ್ತರು ಶಿರಡಿಯನ್ನು ತೊರೆದು ಬೇರೆ ಊರುಗಳಿಗೆ ತೆರಳಿದರು. ಯಾರೂ ಇಲ್ಲದೇ ಒಂಟಿತನ ಕಾಡತೊಡಗಿದ್ದರಿಂದ  ಬಾಪು ಸಾಹೇಬರು ಸಾಕೂರಿ ಆಶ್ರಮಕ್ಕೆ ತೆರಳಲು ನಿರ್ಧರಿಸಿದರು. ಅಲ್ಲಿ ಅವರು ಕಫ್ನಿಯನ್ನು ಧರಿಸಿ ಸನ್ಯಾಸವನ್ನು ಸ್ವೀಕರಿಸಿದರು. ಅವರು ಸಾಕೂರಿಗೆ ತೆರಳಲು ನಿರ್ಧರಿಸಿದ್ದು ಇಂದಿಗೂ ಒಂದು ಕಗ್ಗಂಟಾಗಿ ಉಳಿದ ಪ್ರಶ್ನೆಯಾಗಿದೆ. ಏಕೆಂದರೆ ಇವರು ಹಾಗೂ ಬಾಬಾರವರ ಇನ್ನೊಬ್ಬ ಭಕ್ತರಾದ ಉಪಾಸನಿ ಬಾಬಾರವರಿಗೆ ಮಧುರ ಬಾಂಧವ್ಯ ಇರಲಿಲ್ಲ. ಒಮ್ಮೆ ಇವರು ಉಪಾಸನಿಯವರನ್ನು ದರದರನೆ ಎಳೆದುಕೊಂಡು ದ್ವಾರಕಾಮಾಯಿಗೆ ಕರೆದುತಂದು ಬಾಬಾರವರ ಮುಂದೆ ನಿಲ್ಲಿಸಿ ತಮ್ಮಿಬ್ಬರ ಜಗಳದ ವಿಷಯವನ್ನು ಅವರಿಗೆ ತಿಳಿಸಿ ನ್ಯಾಯ ಪಂಚಾಯಿತಿ ಮಾಡುವಂತೆ ಕೇಳಿಕೊಂಡಿದ್ದರು. ಆದಾಗ್ಯೂ ಸಾಕೂರಿಯಲ್ಲಿ ಅವರು ಬಾಬಾರವರಿಗೆ ಮಾಡುತ್ತಿದ್ದಂತೆಯೇ ಉಪಾಸನಿ ಬಾಬಾರವರಿಗೆ ಸೇವೆ ಸಲ್ಲಿಸುತ್ತಿದ್ದರು. 

ತಾಯಿಯವರು ಭಕ್ತಿಯ ಸಾಕಾರ ಮೂರ್ತಿಯಾಗಿದ್ದರು. ಆಕೆ ಬಾಬಾರವರ ಅನನ್ಯ ಭಕ್ತೆಯಾಗಿದ್ದರು. ಬಾಬಾರವರ ಮೇಲೇ ಅವರಿಗೆ ಪ್ರೀತಿ ಹಾಗೂ ಭಕ್ತಿ ಎಷ್ಟಿತ್ತೆಂದರೆ ಬಾಬಾರವರು ಮಹಾಸಮಾಧಿಯಾದ ನಂತರ ತಮ್ಮ ಮನಸ್ಸಿನ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಶಿರಡಿಯ ಬೀದಿ ಬೀದಿಗಳಲ್ಲಿ ಗೊತ್ತು ಗುರಿ ಇಲ್ಲದೇ ತಮ್ಮ ಗುರುವನ್ನು ಹುಡುಕಿಕೊಂಡು ಅಲೆದಾಡುತ್ತಿದ್ದರು. ಆಕೆಯ ಮುಖದಲ್ಲಿ ಶೂನ್ಯ ತುಂಬಿತ್ತು. ಅವರಿಗೆ ತಮ್ಮ ಸುತ್ತಮುತ್ತಲಿನ ಪರಿವೆಯೇ ಇರಲಿಲ್ಲ.  ಅಂತೆಯೇ ಬಾಬಾರವರ ಮಹಾ ನಿರ್ಯಾಣದ ಎರಡು ತಿಂಗಳಿನಲ್ಲೇ ಆಕೆಯೂ ತೀರಿಕೊಂಡರು. 

ಈ ಘಟನೆಯು ಬಾಪು ಸಾಹೇಬರು ಸಮಾಧಿಯಾಗುವುದಕ್ಕೆ ಕೇವಲ ಆರು ತಿಂಗಳಿಗೆ ಮುಂಚೆ ನಡೆದಿತ್ತು. ಕಾಕಾ ಸಾಹೇಬ್ ದೀಕ್ಷಿತರು 1848 (1926) ನೇ ಇಸವಿಯ ಜ್ಯೇಷ್ಠ ಮಾಸದ ಏಕಾದಶಿಯಂದು ಸಮಾಧಿ ಹೊಂದಿದರು. ಬಾಪು ಸಾಹೇಬರು ಇದಾದ ನಂತರ ಆರು ತಿಂಗಳಿಗೆ ಸರಿಯಾಗಿ ಸಮಾಧಿ ಹೊಂದಿದರು. ಇದರ ಬಗ್ಗೆ ಒಬ್ಬ ಭಕ್ತನಿಗೆ ಒಂದು ವಿಶೇಷ ಕನಸು ಬಿತ್ತು. ಆ ಕನಸಿನಲ್ಲಿ ಭಕ್ತರ ಗುಂಪಿನಲ್ಲಿ ಬಾಬಾರವರ ಮುಂದೆ ಕುಳಿತುಕೊಂಡಿದ್ದರು.  ಹಾಗೆ ಕುಳಿತಿದ್ದ ಎಲ್ಲಾ ಭಕ್ತರು ಕಣ್ಣು ಬಿಟ್ಟುಕೊಂಡು ಕುಳಿತಿದ್ದರು. ಅವರ ಪಕ್ಕದಲ್ಲಿ ಕಾಕಾ ಸಾಹೇಬ್ ದೀಕ್ಷಿತರು ಸಹ ಕುಳಿತಿದ್ದರು. ಆದರೆ ಅವರು ಧ್ಯಾನ ಮಾಡುತ್ತಿರುವವರಂತೆ  ಕಣ್ಣು ಮುಚ್ಚಿಕೊಂಡು ಕುಳಿತಿದ್ದರು. ಕಾಕಾರವರ ಪಕ್ಕದ ಜಾಗ ಖಾಲಿಯಿತ್ತು. ಹಾಗಾಗಿ ಆ ಭಕ್ತನು ತನ್ನ ಕನಸಿನಲ್ಲಿಯೇ ಬಾಬಾರವರಿಗೆ ಕಾಕಾರವರ ಪಕ್ಕದ ಜಾಗ ಏಕೆ ಖಾಲಿಯಾಗಿದೆ ಎಂದು ಪ್ರಶ್ನಿಸಿದನು. ಅಲ್ಲದೇ ಕಾಕಾರವರು ಏಕೆ ತಮ್ಮ ಕಣ್ಣನ್ನು ಮುಚ್ಚುಕೊಂಡಿದ್ದಾರೆ ಎಂದೂ ಸಹ ವಿಚಾರಿಸಿದನು. ಅದಕ್ಕೆ ಬಾಬಾರವರು “ದೀಕ್ಷಿತರು ಈಗಷ್ಟೇ ಬಂದಿರುವುದಾಗಿಯೂ ಹಾಗೂ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಇನ್ನು ಆರು ತಿಂಗಳ ನಂತರ ಮತ್ತೊಬ್ಬ ಭಕ್ತರು ಬಂದು ಕುಳಿತುಕೊಳ್ಳುವರೆಂದು ತಿಳಿಸಿದರು. ಈ ರೀತಿಯಲ್ಲಿ ಬಾಬಾರವರು ಬಾಪು ಸಾಹೇಬ್ ಜೋಗ್ ರವರ ಮರಣದ ಮುನ್ಸೂಚನೆಯನ್ನು ನೀಡಿದ್ದರು.

ಬಾಪು ಸಾಹೇಬ್ ಜೋಗ್ ರವರು ಸನ್ಯಾಸಿಯಾಗಿ ತೀರಿಕೊಂಡಿದ್ದರಿಂದ ಅವರ ಸಮಾಧಿಯನ್ನು ಸಾಕೂರಿ ಆಶ್ರಮದ ಪಕ್ಕದಲ್ಲಿರುವ ಖಾಲಿ ಸ್ಥಳದಲ್ಲಿ ಮಾಡಲಾಗಿರುತ್ತದೆ.


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Thursday, September 18, 2014

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಶ್ರೀ ಸಾಯಿಬಾಬಾರವರ 96ನೇ ಪುಣ್ಯತಿಥಿ ಉತ್ಸವದ ಆಚರಣೆ- ಪತ್ರಿಕಾ ಪ್ರಕಟಣೆ - ಕೃಪೆ:ಸಾಯಿಅಮೃತಧಾರಾ.ಕಾಂ

 ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನವು ಮುಂದಿನ ತಿಂಗಳ 2ನೇ ಅಕ್ಟೋಬರ್ 2014, ಗುರುವಾರದಿಂದ 4ನೇ ಅಕ್ಟೋಬರ್ 2014, ಶನಿವಾರದವರೆಗೆ  ಶ್ರೀ ಸಾಯಿಬಾಬಾರವರ 96ನೇ  ಪುಣ್ಯತಿಥಿ ಉತ್ಸವವನ್ನು ಹಮ್ಮಿಕೊಳ್ಳುತ್ತಿದೆ. ಅದರ ಆಹ್ವಾನ ಪತ್ರಿಕೆಯನ್ನು ಸಾಯಿ ಭಕ್ತರ ಅವಗಾಹನೆಗಾಗಿ ಈ ಕೆಳಗೆ ಲಗತ್ತಿಸಲಾಗಿದೆ: 



ಎಲ್ಲಾ  ಸಾಯಿ ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಿ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು  ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆಯವರು ಈ ಮೂಲಕ ವಿನಂತಿ ಮಾಡಿದ್ದಾರೆ.

ಶ್ರೀ ಸಾಯಿಬಾಬಾರವರ ಮಹಾಸಮಾಧಿ ಉತ್ಸವವಿರುವ ಕಾರಣ 12ನೇ ಅಕ್ಟೋಬರ್ 2014, ಗುರುವಾರದಿಂದ 4ನೇ ಅಕ್ಟೋಬರ್ 2014, ಶನಿವಾರದವರೆಗೆ ಯಾವುದೇ ವಿಐಪಿ ದರ್ಶನ/ಆರತಿ ದರ್ಶನ ಪಾಸ್ ಗಳನ್ನು ನೀಡಲಾಗುವುದಿಲ್ಲ.  ಅಲ್ಲದೇ, ಶ್ರೀ ಸಾಯಿ ಸತ್ಯನಾರಾಯಣ ವ್ರತ ಹಾಗೂ ಅಭಿಷೇಕ ಪೂಜೆಗಳ ಸೇವಾ ಚೀಟಿಗಳನ್ನು ಸಹ ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸಾಯಿ ಭಕ್ತರು ಶ್ರೀ ಸಾಯಿಬಾಬಾ ಸಂಸ್ಥಾನದ ಆಡಳಿತ ಕಚೇರಿಯನ್ನು ಸಂಪರ್ಕಿಸಬೇಕಾಗಿ ಕೋರಲಾಗಿದೆ.

ಕಾರ್ಯಕ್ರಮದ ವಿವರಗಳು: 

02-10-2014; ಗುರುವಾರ - ಮೊದಲ ದಿನ 

ಬೆಳಿಗ್ಗೆ: 

4.30 : ಕಾಕಡಾ ಆರತಿ 
5.00 : ಶ್ರೀ ಸಾಯಿಬಾಬಾರವರ  ಭಾವಚಿತ್ರ ಹಾಗೂ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ  ಮೆರವಣಿಗೆ. 
5.15 : ದ್ವಾರಕಾಮಾಯಿಯಲ್ಲಿ  ಶ್ರೀ ಸಾಯಿ ಸಚ್ಚರಿತ್ರೆಯ ಅಖಂಡ ಪಾರಾಯಣದ ಪ್ರಾರಂಭ 
5.20 : ಭಗವಾನ್ ಶ್ರೀ ಸಾಯಿಬಾಬಾರವರಿಗೆ ಮಂಗಳಸ್ನಾನ. ನಂತರ ದರ್ಶನ ಆರಂಭ.  

ಮಧ್ಯಾನ್ಹ: 

12.30 : ಮಧ್ಯಾನ್ಹ ಆರತಿ. ನಂತರ ತೀರ್ಥ ಪ್ರಸಾದ ವಿನಿಯೋಗ. 

ಸಾಯಂಕಾಲ: 

4.00 -6.00 :  ಸಮಾಧಿ ಮಂದಿರದ ಹಿಂಭಾಗದ ವೇದಿಕೆಯ ಮೇಲೆ ಕೀರ್ತನೆಯ ಆರಂಭ. 
6.15          :  ಧೂಪಾರತಿ. 

ರಾತ್ರಿ:
7.30-10.30 : ಸಾಯಿನಗರದ ಬೃಹತ್ ವೇದಿಕೆಯ ಮೇಲೆ ಆಹ್ವಾನಿತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ
9.15           : ಶಿರಡಿ ಗ್ರಾಮದ ಸುತ್ತಾ ಬಾಬಾರವರ ಪಲ್ಲಕ್ಕಿ ಉತ್ಸವದ ಮೆರವಣಿಗೆ. 
10.30         : ಶೇಜಾರತಿ 

ಅಖಂಡ ಪಾರಾಯಣದ ಅಂಗವಾಗಿ ದ್ವಾರಕಾಮಾಯಿಯನ್ನು ರಾತ್ರಿಯಿಡೀ ತೆರೆದಿಡಲಾಗುತ್ತದೆ. 

3-10-2014; ಶುಕ್ರವಾರ  (ಮುಖ್ಯ ದಿವಸ) - ಎರಡನೇ ದಿನ 

ಬೆಳಿಗ್ಗೆ: 

4.30    : ಕಾಕಡಾ ಆರತಿ 
5.00    : ದ್ವಾರಕಾಮಾಯಿಯಲ್ಲಿ ಅಖಂಡ ಪಾರಾಯಣದ ಸಮಾಪ್ತಿ. ಶ್ರೀ ಸಾಯಿಬಾಬಾರವರ  ಭಾವಚಿತ್ರ ಹಾಗೂ                 ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ  ಮೆರವಣಿಗೆ.
5.15    : ಭಗವಾನ್ ಶ್ರೀ ಸಾಯಿಬಾಬಾರವರಿಗೆ ಮಂಗಳಸ್ನಾನ. ನಂತರ ದರ್ಶನ ಆರಂಭ. 
9.00    : "ಭಿಕ್ಷಾ ಜೋಳಿ" ಕಾರ್ಯಕ್ರಮ. 
10.00  : ಕೀರ್ತನೆ ಕಾರ್ಯಕ್ರಮ. 
10.30  : ಆರಾಧನಾ ವಿಧಿ ವಿಧಾನಗಳು ಹಾಗೂ ಪೂಜೆ. 

ಮಧ್ಯಾನ್ಹ: 

12.30 : ಮಧ್ಯಾನ್ಹ ಆರತಿ. ನಂತರ ತೀರ್ಥ ಪ್ರಸಾದ ವಿನಿಯೋಗ. 

ಸಾಯಂಕಾಲ: 

5.00      : ಮೆರವಣಿಗೆ ಹಾಗೂ ಖಂಡೋಬ ಮಂದಿರದ ಬಳಿ ಸೀಮೋಲ್ಲಂಘನ ಕಾರ್ಯಕ್ರಮ. 
6.15      : ಧೂಪಾರತಿ  

ರಾತ್ರಿ: 

7.30-10.0: ಸಾಯಿನಗರದ ಬೃಹತ್ ವೇದಿಕೆಯ ಮೇಲೆ ಆಹ್ವಾನಿತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ
9.15           : ಶಿರಡಿ ಗ್ರಾಮದ ಸುತ್ತಾ ಶ್ರೀ ಸಾಯಿಬಾಬಾರವರ ರಥೋತ್ಸವ.  

ಮುಖ್ಯ ದಿವಸವಾದ ಕಾರಣ , ಸಮಾಧಿ ಮಂದಿರ ರಾತ್ರಿಯಿಡಿ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ. ರಾತ್ರಿ 11.00 ರಿಂದ ಮಾರನೇ ದಿನ ಬೆಳಗಿನ ಜಾವ 5.00 ರವರೆಗೆ  ಸಮಾಧಿ ಮಂದಿರದ ಹಿಂಭಾಗದ ವೇದಿಕೆಯ ಮೇಲೆ ಹಲವಾರು ಸಾಯಿ ಭಕ್ತರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು. 

4-10-2014; ಶನಿವಾರ  ( ಕೊನೆಯ ದಿವಸ) - ಮೂರನೇ ದಿನ 

ಬೆಳಿಗ್ಗೆ: 

5.05      : ಭಗವಾನ್ ಶ್ರೀ ಸಾಯಿಬಾಬಾರವರಿಗೆ ಮಂಗಳಸ್ನಾನ. ನಂತರ ದರ್ಶನ ಆರಂಭ. 
6.45      : ಗುರುಸ್ಥಾನದಲ್ಲಿ ರುದ್ರಾಭಿಷೇಕ ಕಾರ್ಯಕ್ರಮ.  
10:00    : ಗೋಪಾಲ ಕಾಲ ಮತ್ತು ದಹಿ ಹಂಡಿ ಕಾರ್ಯಕ್ರಮ. 

ಮಧ್ಯಾನ್ಹ: 

12.30 : ಮಧ್ಯಾನ್ಹ ಆರತಿ. ನಂತರ ತೀರ್ಥ ಪ್ರಸಾದ ವಿನಿಯೋಗ. 

ಸಾಯಂಕಾಲ: 

6.15 : ಧೂಪಾರತಿ

ರಾತ್ರಿ: 

7.30 -10.00 : ಸಾಯಿನಗರದ ಬೃಹತ್ ವೇದಿಕೆಯ ಮೇಲೆ ಆಹ್ವಾನಿತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ
10.30          : ಶೇಜಾರತಿ. 

ಈ ವರ್ಷದ ಉತ್ಸವವನ್ನು ಯಶಸ್ವಿಯಾಗಿ ಆಚರಿಸುವ ನಿಟ್ಟಿನಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರೂ ಹಾಗೂ ಅಹಮದ್ ನಗರ ಜಿಲ್ಲಾ ನ್ಯಾಯಾಧೀಶರೂ ಅದ ಶ್ರೀ.ಶಶಿಕಾಂತ್ ಕುಲಕರ್ಣಿ, ತ್ರಿ-ಸದಸ್ಯ  ಸಮಿತಿಯ ಸದಸ್ಯರು ಹಾಗೂ ಮುಖ್ಯ ಜಿಲ್ಲಾ ನ್ಯಾಯಾಧೀಶರಾದ ಶ್ರೀ.ಅನಿಲ್ ಕಾವಡೆಯವರ ಮಾರ್ಗದರ್ಶನದಲ್ಲಿ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಎಲ್ಲಾ ನಿರ್ವಾಹಕ ಅಧಿಕಾರಿಗಳೂ, ಎಲ್ಲಾ ವಿಭಾಗಗಳ ಮುಖ್ಯಸ್ಥರೂ ಮತ್ತು ಶ್ರೀ ಸಾಯಿಬಾಬಾ ಸಂಸ್ಥಾನದ ಎಲ್ಲಾ ನೌಕರರೂ ಬಹಳ ಶ್ರಮವಹಿಸಿ  ಮಾಡಿರುತ್ತಾರೆ ಎಂದು ಕಾರ್ಯಕಾರಿ ಅಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ