Friday, July 24, 2015

"ಕಾರ್ಗಿಲ್ ಗೌರವ ಕಳಶ" ತಂಡದ ಸದಸ್ಯರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ


"ಕಾರ್ಗಿಲ್ ಗೌರವ ಕಳಶ" ತಂಡದ ಮುಖ್ಯಸ್ಥ ಕಾಪ್ಟನ್ ಭಂಡಾರಿ  ಮತ್ತು ಅವರ ಸಹೋದ್ಯೋಗಿಗಳು ಇದೇ ತಿಂಗಳ 24ನೇ ಜುಲೈ 2015, ಶುಕ್ರವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, July 23, 2015

ಇಪ್ಪತ್ತನಾಲ್ಕು ಹಾಲೆಂಡ್ ದೇಶದ ಸಾಯಿ ಭಕ್ತರ ಶಿರಡಿ ಭೇಟಿ - ಕೃಪೆ:ಸಾಯಿಅಮೃತಧಾರಾ.ಕಾಂ

ಹಾಲೆಂಡ್ ದೇಶದ  ಬೆಲ್ಜಿಯಂನ ಇಪ್ಪತ್ತನಾಲ್ಕು ಸಾಯಿ ಭಕ್ತರು ಇದೇ ತಿಂಗಳ  23ನೇ ಜುಲೈ 2015, ಗುರುವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ  ಅನುವಾದ:  ಶ್ರೀಕಂಠ ಶರ್ಮ 

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಗುರುಪೂರ್ಣಿಮೆ ಉತ್ಸವ -2015 ಆಚರಣೆ - ಪತ್ರಿಕಾ ಪ್ರಕಟಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನವು  ಇದೇ ತಿಂಗಳ 30ನೇ ಜುಲೈ 2015, ಗುರುವಾರದಿಂದ  1ನೇ ಆಗಸ್ಟ್ 2015, ಶನಿವಾರ ದವರಗೆ ಗುರುಪೂರ್ಣಿಮೆ ಉತ್ಸವವನ್ನು ಅತ್ಯಂತ ವೈಭವದಿಂದ ಆಚರಿಸುತ್ತಿದ್ದು ಎಲ್ಲ ಸಾಯಿ ಭಕ್ತರು  ಹೆಚ್ಚಿನ  ಸಂಖ್ಯೆಯಲ್ಲಿ ಈ ಉತ್ಸವದಲ್ಲಿ ಪಾಲ್ಗೊಂಡು ಉತ್ಸವವನ್ನು  ಯಶಸ್ವಿಗೊಳಿಸಬೇಕೆಂದು ಶ್ರೀ ಸಾಯಿಬಾಬಾ ಸಂಸ್ಥಾನದ  ಕಾರ್ಯಕಾರಿ ಅಧಿಕಾರಿಗಳಾದ ಮಾತನಾಡಿದ ಶ್ರೀ.ರಾಜೇಂದ್ರ ಜಾಧವ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು. 

ಸುದ್ಧಿಗಾರರೊಂದಿಗೆ ಮಾತನಾಡಿದ ಶ್ರೀ.ರಾಜೇಂದ್ರ ಜಾಧವ್ ರವರು,  ಅನಾದಿ ಕಾಲದಿಂದಲೂ ಈ ಗುರು-ಶಿಷ್ಯರ ಬಾಂಧವ್ಯವು  ನಡೆದುಕೊಂಡು ಬಂದಿದ್ದು, ಗುರುವಿಗೆ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ  ಪ್ರತಿ ವರ್ಷದ ಆಷಾಢ ಮಾಸದ ಹುಣ್ಣಿಮೆಯ  ದಿನದಂದು ಗುರುಪೂರ್ಣಿಮೆ ಉತ್ಸವವಾಗಿ  ಆಚರಿಸಲಾಗುತ್ತದೆ  ಎಂದು ತಿಳಿಸಿದರು. 

ಬಾಬಾರವರ ಅವತರಣ ಕಾಲದಿಂದಲೂ ಗುರು ಪೂರ್ಣಿಮೆ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ  ಆಚರಿಸಿಕೊಂಡು ಬರಲಾಗುತ್ತಿದೆ. ಅಂತೆಯೇ, ಇಂದಿಗೂ  ಈ  ಉತ್ಸವಕ್ಕೆ ಅಷ್ಟೇ ಹೆಚ್ಚಿನ ಪ್ರಾಮುಖ್ಯತೆಯನ್ನು  ನೀಡಲಾಗುತ್ತಿದ್ದು, ಎಣಿಕೆಯಿಲ್ಲದಷ್ಟು ಸಾಯಿ ಭಕ್ತರು ಸಾಯಿಬಾಬಾರವರ ಸಮಾಧಿಯ ದರ್ಶನಕ್ಕಾಗಿ ಶಿರಡಿಗೆ ಆಗಮಿಸುವ ಪರಿಪಾಠ ಇಟ್ಟುಕೊಂಡಿದ್ದಾರೆ. ಸಾಯಿ ಭಕ್ತರು ಈ ವರ್ಷದ ಉತ್ಸವದ ವಿವರಗಳಿಗಾಗಿ  ಈ  ಕೆಳಗೆ   ನೀಡಲಾಗಿರುವ ಆಮಂತ್ರಣ ಪತ್ರವನ್ನು ನೋಡಬಹುದಾಗಿರುತ್ತದೆ: 


30ನೇ ಜುಲೈ 2015, ಗುರುವಾರದಿಂದ  1ನೇ ಆಗಸ್ಟ್ 2015, ಶನಿವಾರ ದವರಗೆ ನಡೆಯುವ ಗುರುಪೂರ್ಣಿಮೆ ಉತ್ಸವಕ್ಕಾಗಿ ಶಿರಡಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹರಿದು ಬರುವ ಕಾರಣ ಈ ದಿನಗಳಲ್ಲಿ ಆರತಿ ಮತ್ತು ದರ್ಶನದ ಪಾಸ್ ಗಳನ್ನು ವಿತರಿಸಲಾಗುವುದಿಲ್ಲವೆಂದು ಶ್ರೀ ಶ್ರೀ.ರಾಜೇಂದ್ರ ಜಾಧವ್ ಸುದ್ಧಿಗಾರರಿಗೆ ತಿಳಿಸಿದರು 

ರಾಜ್ಯದ ಹಾಗೂ ದೇಶದ ವಿವಿಧ ಭಾಗಗಳಿಂದ ಶಿರಡಿಗೆ ಬರುವ ಭಕ್ತರು ಹಾಗೂ ಮುಂಬೈ ಮತ್ತು ಪುಣೆಯಿಂದ ಶಿರಡಿಗೆ ಪಲ್ಲಕ್ಕಿಯನ್ನು ಹೊತ್ತುಕೊಂಡು ಬರುವ ಭಕ್ತರಿಗೆ ವಸತಿಯನ್ನು ಕಲ್ಪಿಸುವ ಉದ್ದೇಶದಿಂದ ದೇವಾಲಯದ ಆವರಣ, ಸಾಯಿ ಪ್ರಸಾದ ಭಕ್ತ ನಿವಾಸ ವಾಹನ ನಿಲುಗಡೆ ಸ್ಥಳ ಹಾಗೂ ಇನ್ನಿತರ ಕಡೆಗಳಲ್ಲಿ ಶಾಮಿಯಾನದ ವ್ಯವಸ್ಥೆಯನ್ನು ಮಾಡಲಾಗಿದೆ. ಈಗ ಮಳೆಗಾಲದ ಋತುಮಾನವಾಗಿರುವುದರಿಂದ ಶಾಮಿಯಾನಗಳ ಮೇಲೆ ಪ್ಲಾಸ್ಟಿಕ್ ಹಾಳೆಗಳನ್ನು ಹೊದ್ದಿಸಲಾಗುವುದು. ಸಾಯಿ ಆಶ್ರಮ - 2ನೇ ಹಂತದಲ್ಲಿ ಪಾದಯಾತ್ರಿಗಳಿಗೆ ಉಚಿತವಾಗಿ ಉಳಿದುಕೊಳ್ಳಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಉತ್ಸವಕ್ಕೆ ಆಗಮಿಸುವ ಎಲ್ಲ ಸಾಯಿಭಕ್ತರಿಗೂ ಲಾಡು ಪ್ರಸಾದ ದೊರೆಯುವಂತೆ ಮಾಡಲು ಸುಮಾರು  250 ಕ್ವಿಂಟಾಲ್ ಸಕ್ಕರೆಯನ್ನು ಬಳಸಿ ಲಾಡುಗಳನ್ನು ತಯಾರಿಸಲಾಗುತ್ತಿದೆ ಎಂದು ಶ್ರೀ.ಜಾಧವ್ ತಿಳಿಸಿದರು. 

ಉತ್ಸವದ ಮೂರೂ ದಿನಗಳೂ ವಿವಿಧ ಕಲಾವಿದರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಉತ್ಸವದ ಮೊದಲನೇ ದಿನವಾದ 30ನೇ ಜುಲೈ 2015, ಗುರುವಾರ ದಂದು ಸಂಜೆ 4 ರಿಂದ 6 ರವರೆಗೆ ಶ್ರೀ.ಮಾಧವರಾವ್ ಅಜಗಾವಣಕರ್ ರವರಿಂದ ಕೀರ್ತನೆಯನ್ನು ಏರ್ಪಡಿಸಲಾಗಿದೆ. ಸಂಜೆ 7.00 ಗಂಟೆಗೆ ಭೂಪಾಲ್ ನ ಶ್ರದ್ಧಾ ಭಕ್ತಿ ಕಲ್ಯಾಣ್ ಸಂಸ್ಥಾನದ ವತಿಯಿಂದ ಸಾಯಿ ಭಜನೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ರಾತ್ರಿ 8 ಗಂಟೆಗೆ "ಶ್ರೀ ಸಾಯಿ ಮಹಿಮಾ ಗುಣಗಾನ" ಎಂಬ ಹರಿಕಥೆಯನ್ನು ನಾಸಿಕ್ ನ ಹರಿ ಭಕ್ತಪರಾಯಣ ಪಂಡಿತ್ ದೇವರಾವಜಿ ಕುಲಮೇತೆಯವರಿಂದ ಏರ್ಪಡಿಸಲಾಗಿದೆ ಹಾಗೂ ರಾತ್ರಿ 9ಗಂಟೆಗೆ ಹುಬ್ಬಳ್ಳಿಯ ಶ್ರೀ ಸಾಯಿ ದರ್ಬಾರ್ ಆರ್ಕೆಷ್ಟ್ರಾ ತಂಡದಿಂದ "ಏಕ ಶ್ಯಾಮ್ ಸಾಯಿ ಕಾ ನಾಮ್" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

ಉತ್ಸವದ ಎರಡನೇ  ದಿನವಾದ 31ನೇ ಜುಲೈ 2015, ಶುಕ್ರವಾರ ದಂದು ಸಂಜೆ 4 ರಿಂದ 6 ರವರೆಗೆ ಶ್ರೀ.ಮಾಧವರಾವ್ ಅಜಗಾವಣಕರ್ ರವರಿಂದ ಕೀರ್ತನೆಯನ್ನು ಏರ್ಪಡಿಸಲಾಗಿದೆ. ಸಂಜೆ 7.00 ಗಂಟೆಗೆ ಥಾಣೆಯ ಶ್ರೀ ರೇಣುಕಾ ಕಲಾಮಂಚ್ ನ ವತಿಯಿಂದ ಭಜನಿ ಬರೂದ್  ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ರಾತ್ರಿ 8 ಗಂಟೆಗೆ ಕೇರಳದ ಶ್ರೀ.ತಿರುವೈಳವಾಮಲ ಗೋಪಿಯವರಿಂದ ಪಂಚವಾದ್ಯ ಸಂಗೀತವನ್ನು ಏರ್ಪಡಿಸಲಾಗಿದೆ ಹಾಗೂ ರಾತ್ರಿ 9 ಗಂಟೆಗೆ ಮಲೇಶಿಯಾದ ವಿ.ನೌಶಮಿ ತಂಡದಿಂದ "ಏಕ ಶ್ಯಾಮ್ ಸಾಯಿ ಕಾ ನಾಮ್" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

ಉತ್ಸವದ ಕೊನೆಯ ದಿನವಾದ 1ನೇ ಆಗಸ್ಟ್ 2015, ಶುಕ್ರವಾರ ದಂದು ಬೆಳಿಗ್ಗೆ 10.30 ಕ್ಕೆ ಶ್ರೀ.ಮಾಧವರಾವ್ ಅಜಗಾವಣಕರ್ ರವರಿಂದ ಗೋಪಾಲಕಾಲ ಕೀರ್ತನೆ ಮತ್ತು ದಹಿಹಂಡಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸಂಜೆ 7.00 ಗಂಟೆಗೆ ಭೂಪಾಲ್ ನ ಶ್ರೀ.ಸುಮಿತ್ ಪೋಂಡಾರವರಿಂದ ಶ್ರೀ ಸಾಯಿ ಅಮೃತಕಥಾವನ್ನು ಏರ್ಪಡಿಸಲಾಗಿದೆ. ರಾತ್ರಿ 8 ಗಂಟೆಗೆ ನವದೆಹಲಿಯ ಶ್ರೀಮತಿ.ವನಿತಾ ಬಜಾಜ್ ರವರಿಂದ ಸಾಯಿ ಭಜನೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಮತ್ತು ರಾತ್ರಿ 9 ಗಂಟೆಗೆ ನಾಸಿಕ್ ನ ಶ್ರೀ.ಪಂಢರಿನಾಥ್ ರವ್ಜಿ  ಜಾಧವ್ ರವರಿಂದ ಅಭಂಗ್ ಮತ್ತು ಸಾಯಿ ಭಜನೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. 

ಉತ್ಸವದ ಅಂಗವಾಗಿ ದೆಹಲಿಯ ಶ್ರೀ.ಗೌತಮ್ ಸಹಿನಿ ಮತ್ತು ಶ್ರೀ.ಅನುಪ್ ಜೋಷಿಯವರುಗಳು ನೀಡಿರುವ ಉದಾರವಾದ ದೇಣಿಗೆಯ ಸಹಾಯದಿಂದ ಸಮಾಧಿ ಮಂದಿರ ಮತ್ತು ಅದರ ಸುತ್ತಮುತ್ತಲೂ ಹೂವಿನ ಅಲಂಕಾರವನ್ನು ಹಮ್ಮಿಕೊಳ್ಳಲಾಗಿದೆ. ಮುಂಬೈನ ಸಾಯಿರಾಜ್ ಡೆಕೋರೇಟರ್ಸ್ ನ ವತಿಯಿಂದ ದೇವಾಲಯದ ಪ್ರಾಂಗಣವನ್ನು ಸುಂದರ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತಿದೆ.

ಉತ್ಸವದ ಎಲ್ಲಾ ಮೂರು ದಿನಗಳೂ ಬರುವ ಎಲ್ಲಾ ಸಾಯಿ ಭಕ್ತರಿಗೂ ಸಾಯಿ ಪ್ರಸಾದಾಲಯದಲ್ಲಿ ಉಚಿತ ಪ್ರಸಾದ ಭೋಜನವನ್ನು ಏರ್ಪಡಿಸಲಾಗಿದೆ. ಲಕ್ನೌ ನ ಶ್ರೀ.ವಿಕ್ರಮ್ ಕಪೂರ್, ಹೈದರಾಬಾದ್ ನ ಶ್ರೀಮತಿ.ಶಿವಾನಿ ದತ್ತಾ, ಮುಂಬೈನ ಶ್ರೀ.ಅಧ್ಯಾನ್ ನಾರಂಗ್, ಶ್ರೀ.ರಾಜಗೋಪಾಲ್ ನಟರಾಜನ್, ಶ್ರೀಮತಿ.ಗಿರಿಜಾ ದೊರೈಸ್ವಾಮಿ, ಬೆಂಗಳೂರಿನ ಶ್ರೀ.ಮಾಕಂ ರಾಧಾಕೃಷ್ಣ ಅಮರನಾಥ್, ವಿಜಯವಾಡದ ಶ್ರೀಮತಿ.ರತ್ನ ಮಾಣಿಕ್ಯಂ, ಮುಂಬೈನ ಶ್ರೀ.ನವೀನ ಸಿಂಗ್, ಬೆಂಗಳೂರಿನ ಶ್ರೀಮತಿ.ಭಾಗ್ಯವತಿ ಮತ್ತು ಶ್ರೀ ಚತುರ್ಭುಜ ವರ್ಮ ಹಾಗೂ ಶ್ರೀ.ಗೌರವ್ ಭಾರದ್ವಾಜ್ , ಸಿಕಂದರಾಬಾದ್ ನ ಶ್ರೀ.ಕೆ.ರಾಮಮೂರ್ತಿ ಮತ್ತು ಶ್ರೀಮತಿ.ಮಾಧವಿ, ತಿರುಪತಿಯ ಶ್ರೀ.ಭಟ್ಯಾಲಾ ಚಂಗಲ ರಾಯಡು, ಹೈದರಾಬಾದ್ ನ ಶ್ರೀ.ಸುರೇಶ ರೆಡ್ಡಿ, ಮುಂಬೈನ ಶ್ರೀ.ಸುನೀಲ್ ಅಗರವಾಲ್, ಅಹಮದಾಬಾದ್ ನ ಶ್ರೀಮತಿ.ರಾಜಶ್ರೀ ಪಟೇಲ್, ಭೂಪಾಲ್ ನ ಶ್ರೀ.ದೇವ್ ಸುಮನ್ ಶರ್ಮ, ಹೈದರಾಬಾದ್ ನ ಶ್ರೀಮತಿ.ಕಲಾ ಗೋಣಿ ವಾಸು, ದೆಹಲಿಯ ಶ್ರೀ.ದೀಪಕ್ ಸೇರು, ಹೈದರಾಬಾದ್ ನ ಶ್ರೀಮತಿ.ಸುಶೀಲಾದೇವಿ ಜಿ.ಮಸಾನಿ ಗೋಂದಿಯಾ ಮತ್ತು ಶ್ರೀಮತಿ.ಸಹನಾ - ಈ ಎಲ್ಲಾ ಮಹನೀಯರುಗಳು ಈ ಉಚಿತ ಪ್ರಸಾದ ಭೋಜನಕ್ಕೆ ಉದಾರವಾಗಿ ದೇಣಿಗೆಯನ್ನು ನೀಡಿರುತ್ತಾರೆ. ಸಮಾಧಿ ಮಂದಿರದ ಪ್ರಾಂಗಣದ ಮೂರು ಸ್ಥಳಗಳಲ್ಲಿ, ಸರತಿ ಸಾಲಿನ ಕಾಂಪ್ಲೆಕ್ಸ್ ನಲ್ಲಿ ಹಾಗೂ ಸಾಯಿ ಆಶ್ರಮದಲ್ಲಿ ಪ್ರಥಮ ಚಿಕಿತ್ಸಾ ಘಟಕಗಳನ್ನು ಸ್ಥಾಪಿಸಲಾಗಿದೆ. ತುರ್ತು ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ಸಮಾಧಿ ಮಂದಿರದ ಪ್ರಾಂಗಣದಲ್ಲಿ ಆಂಬ್ಯುಲೆನ್ಸ್ ಸೇವೆಯ ವ್ಯವಸ್ಥೆ ಮಾಡಲಾಗಿದೆ ಮತ್ತು ತಜ್ಞ ವೈದ್ಯರ ತಂಡಗಳನ್ನು ರಚಿಸಲಾಗಿದ್ದು ಸರತಿ ಸಾಲಿನ ಕಾಂಪ್ಲೆಕ್ಸ್ ನಲ್ಲಿ ಅವರುಗಳು  ಇಪ್ಪತ್ತನಾಲ್ಕು ಗಂಟೆಗಳೂ ಎರಡು ಪಾಳಿಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. 

ಈ ವರ್ಷದ ಗುರುಪೂರ್ಣಿಮೆ ಉತ್ಸವವನ್ನು ಅತ್ಯಂತ ಯಶಸ್ವಿಯಾಗಿ ನಡೆಯುವಂತೆ  ಮಾಡುವಲ್ಲಿ ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರು ಮತ್ತು  ಮುಖ್ಯ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ವಿನಯ್ ಜೋಷಿ, ಶ್ರೀ ಸಾಯಿಬಾಬಾ ಸಂಸ್ಥಾನದ  ತ್ರಿ-ಸದಸ್ಸ ಸಮಿತಿಯ ಸದಸ್ಯರು ಮತ್ತು ಜಿಲ್ಲಾ ಕಲೆಕ್ಟರ್ ಶ್ರೀ.ಅನಿಲ್ ಕಾವಡೆ, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಎಲ್ಲಾ ಕಾರ್ಯ ನಿರ್ವಾಹಕ ಅಧಿಕಾರಿಗಳು, ಎಲ್ಲಾ ವಿಭಾಗೀಯ ಮುಖ್ಯಸ್ಥರು ಮತ್ತು ಶ್ರೀ  ಶಿರಡಿ ಸಾಯಿಬಾಬಾ ಸಂಸ್ಥಾನದ ಎಲ್ಲಾ ಸಿಬ್ಬಂದಿ ವರ್ಗದವರೂ ಹೆಚ್ಚಿನ ಶ್ರಮವಹಿಸಿ ಕಾರ್ಯ  ನಿರ್ವಹಿಸಿರುತ್ತಾರೆ. 


ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು
ಆಂಗ್ಲ ಭಾಷೆಯಿಂದ ಕನ್ನಡಕ್ಕೆ:  ಶ್ರೀಕಂಠ ಶರ್ಮ



Monday, July 20, 2015

ತುಮಕೂರು ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಇಂಟರ್ ನ್ಯಾಷನಲ್ ಸರ್ವೀಸ್ ಫೌಂಡೆಶನ್ (ನೋಂದಣಿ), ಬೋರನಕಣಿವೆ ಗ್ರಾಮ, ಚಿಕ್ಕನಾಯಕನಹಳ್ಳಿ ತಾಲೂಕು, ತುಮಕೂರು ಜಿಲ್ಲೆ- 572 218,ಕರ್ನಾಟಕ, ಭಾರತ

ಮಂದಿರದ ವಿಶೇಷತೆಗಳು: 

ಈ ಶಿರಡಿ ಸಾಯಿಬಾಬಾ ಮಂದಿರವನ್ನು 1892ನೇ ಇಸವಿಯಲ್ಲಿ  ಅಂದಿನ ಮೈಸೂರು ಮಹಾರಾಜರಾದ ದಿವಂಗತ ಶ್ರೀ.ಜಯಚಾಮರಾಜ ಒಡೆಯರ್ ರವರ ಕಾಲದಲ್ಲಿ ಕರ್ನಾಟಕ ರಾಜ್ಯದ ತುಮಕೂರು  ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನಕಣಿವೆ ಗ್ರಾಮದಲ್ಲಿ ಹರಿಯುವ ಸುವರ್ಣಮುಖಿ  ನದಿಗೆ ಅಡ್ಡವಾಗಿ ನಿರ್ಮಿಸಲಾದ ಬೋರನಕಣಿವೆ ಡ್ಯಾಂನ ಹಿನ್ನೀರಿನ ಹತ್ತಿರದಲ್ಲಿ ನಿರ್ಮಿಸಲಾಗಿದೆ. ಹುಳಿಯಾರ್ ಪಟ್ಟಣದಿಂದ ಸಿರಾ ಪಟ್ಟಣಕ್ಕೆ ತೆರಳುವ  ಮಾರ್ಗದಲ್ಲಿ ಸುಮಾರು 8 ಕಿಲೋಮೀಟರ್ ಕ್ರಮಿಸಿದರೆ ಮಂದಿರ ಸಿಗುತ್ತದೆ .
ಮಂದಿರದ ಭೂಮಿಪೂಜೆಯನ್ನು 10ನೇ ನವೆಂಬರ್ 2008 ರಂದು ನೆರವೇರಿಸಲಾಯಿತು.
ಈ ಮಂದಿರವನ್ನು 1ನೇ ಫೆಬ್ರವರಿ 2015 ದಂದು  ಮಹಾನ್ ಸಾಯಿ ಭಕ್ತರೂ ಹಾಗೂ  ಚನ್ನೈನ ಶಿರಡಿ ಸಾಯಿ ಟ್ರಸ್ಟ್ ನ   ಅಧ್ಯಕ್ಷರೂ ಆದ ಶ್ರೀ.ಕೆ.ವಿ.ರಮಣಿಯವರು ಮಂದಿರದ ಟ್ರಸ್ಟ್ ನ ಸದಸ್ಯರುಗಳು ಹಾಗೂ ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ  ಉದ್ಘಾಟಿಸಿರುತ್ತಾರೆ.
ಶ್ರೀ.ಬಿ. ವಿಠಲ್ ರವರು ಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಮಂದಿರದ ಟ್ರಸ್ಟ್ ಆದ ಶ್ರೀ ಶಿರಡಿ ಸಾಯಿಬಾಬಾ ಇಂಟರ್ ನ್ಯಾಷನಲ್ ಸರ್ವೀಸ್ ಫೌಂಡೆಶನ್ (ನೋಂದಣಿ) ಯ ಸದಸ್ಯರುಗಳು  ಮಂದಿರದ ದಿನ ನಿತ್ಯದ ಆಗುಹೋಗುಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.
ಈ ಮಂದಿರವನ್ನು ಮಂದಿರದ ಟ್ರಸ್ಟ್ ಗೆ ಸೇರಿರುವ 13 ಎಕರೆಯಷ್ಟು ವಿಶಾಲವಾದ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿದ್ದು ಮಂದಿರದ ವಿಸ್ತೀರ್ಣವು 190'x110' ಚದರ ಅಡಿಯಷ್ಟಿರುತ್ತದೆ.

ಮಂದಿರದಲ್ಲಿ 5.6 ಅಡಿ ಎತ್ತರದ ಸುಂದರವಾದ ಅಮೃತಶಿಲೆಯಲ್ಲಿ ಮಾಡಿದ ಸಾಯಿಬಾಬಾರವರ ವಿಗ್ರಹವನ್ನು ಸಾಯಿ ಭಕ್ತರು ನೋಡಬಹುದು.  ಶಿರಡಿಯಲ್ಲಿ ಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಈ ಮಂದಿರದಲ್ಲಿಯೂ  ಸಹ ಬಾಬಾರವರ ವಿಗ್ರಹದ ಎದುರುಗಡೆ ಅಮೃತಶಿಲೆಯ ನಂದಿ ಹಾಗೂ ಪಾದುಕೆಗಳನ್ನು  ಪ್ರತಿಷ್ಟಾಪಿಸಲಾಗಿದೆ. ಅಲ್ಲದೆ ಮಂದಿರದ ಪಕ್ಕದಲ್ಲಿ ನಿರ್ಮಿಸಲಾಗಿರುವ ದ್ವಾರಕಾಮಾಯಿಯಲ್ಲಿರುವ ಧುನಿಯ ಎದುರುಗಡೆ ಸುಂದರವಾದ ಅಮೃತಶಿಲೆಯಲ್ಲಿ ಮಾಡಿದ ಸಾಯಿಬಾಬಾರವರ ದ್ವಾರಕಾಮಾಯಿ ಭಂಗಿಯಲ್ಲಿರುವ  ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. 




ಮಂದಿರದ ದಿನನಿತ್ಯದ ಕಾರ್ಯಕ್ರಮಗಳು 

ಮಂದಿರದ ಸಮಯ:

ಮಂದಿರವನ್ನು  ಪ್ರತಿದಿನ ಬೆಳಿಗ್ಗೆ 6:00 ರಿಂದ ರಾತ್ರಿ 08:30 ರವರೆಗೆ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ.

ಆರತಿಯ ಸಮಯ:

ಕಾಕಡಾ ಆರತಿ   : 6:00 AM
ಮಧ್ಯಾನ್ಹ ಆರತಿ : 12:00 
ಧೂಪಾರತಿ       :  6:00 PM
ಶೇಜಾರತಿ        :  8:00 PM

ಪ್ರತಿದಿನ ಮಂದಿರದಲ್ಲಿ ಧುನಿ ಪೂಜೆಯನ್ನು ನೆರವೇರಿಸಲಾಗುತ್ತದೆ.

ಪ್ರತಿ ಗುರುವಾರದಂದು ಬೆಳಿಗ್ಗೆ 8 ಗಂಟೆಗೆ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ ವಿಶೇಷ ಅಭಿಷೇಕವನ್ನು ನೆರವೇರಿಸಲಾಗುತ್ತದೆ. 

ಪ್ರತಿ ತಿಂಗಳ ಹುಣ್ಣಿಮೆಯ ದಿನದಂದು ಬೆಳಿಗ್ಗೆ 10:30 ರಿಂದ 11:45 ರವರಗೆ ಶ್ರೀ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಸೇವಾ ಶುಲ್ಕ 20/- ರೂಪಾಯಿಯೆಂದು ನಿಗದಿಪಡಿಸಲಾಗಿದೆ.

ವಿಶೇಷ ಉತ್ಸವದ ದಿನಗಳು: 

1.ಪ್ರತಿ ವರ್ಷದ 1ನೇ ಫೆಬ್ರವರಿ ಮಂದಿರದ ವಾರ್ಷಿಕೋತ್ಸವ.
2. ಮಹಾ ಶಿವರಾತ್ರಿ.
3. ಆಷಾಢ ಏಕಾದಶಿ. 
4.ಗುರುಪೂರ್ಣಿಮೆ.
5.ವಿಜಯದಶಮಿ.
6.ದೀಪಾವಳಿ. 
7. ದತ್ತ ಜಯಂತಿ. 

ಮಂದಿರದ ಟ್ರಸ್ಟ್ ನ ಸಾಮಾಜಿಕ ಕಾರ್ಯ ಚಟುವಟಿಕೆಗಳು: 
ಮಂದಿರದ  ಟ್ರಸ್ಟ್ ನ ವತಿಯಿಂದ ನಿಯಮಿತವಾಗಿ ಉಚಿತ ವೈದ್ಯಕೀಯ ಶಿಬಿರ, ವೈದ್ಯಕೀಯ ಜಾಗೃತಿ ಶಿಬಿರ, ಅನಾಥಾಶ್ರಮಗಳಿಗೆ ದೇಣಿಗೆ ನೀಡುವುದು ಹಾಗೂ  ಸುತ್ತಮುತ್ತಲಿನ  ಗ್ರಾಮಗಳಲ್ಲಿ ವಾಸಿಸುತ್ತಿರುವ ಬಡ ಮಕ್ಕಳಿಗೆ ಶೈಕ್ಷಣಿಕ ಸಾಧನಗಳನ್ನು ವಿತರಿಸುವ  ಉತ್ತಮ ಕಾರ್ಯವನ್ನು  ಮಾಡಲಾಗುತ್ತಿದೆ. ಟ್ರಸ್ಟ್ ನ  ಆಡಳಿತ ಮಂಡಳಿಯು  ಅನ್ನ ದಾಸೋಹ ಹಾಲ್ ಒಂದನ್ನು  ನಿರ್ಮಿಸಿ ಅಲ್ಲಿ  ನಿತ್ಯ ಅನ್ನದಾನವನ್ನು ಮಾಡಬೇಕೆಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಹಾಕಿಕೊಂಡಿದೆ. 
ದೇಣಿಗೆಗೆ ಮನವಿ:
ಶ್ರೀ ಶಿರಡಿ ಸಾಯಿಬಾಬಾ ಇಂಟರ್ ನ್ಯಾಷನಲ್ ಸರ್ವೀಸ್ ಫೌಂಡೆಶನ್ (ನೋಂದಣಿ) ಯು ತಾನು ಹಮ್ಮಿಕೊಂಡಿರುವ ಎಲ್ಲ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳಿಗೆ  ಉದಾರವಾದ  ದೇಣಿಗೆಯನ್ನು ನೀಡುವಂತೆ ಸಾಯಿ ಭಕ್ತರನ್ನು ಕೋರಿಕೊಳ್ಳುತ್ತದೆ. ದೇಣಿಗೆಯನ್ನು ನಗದು/ಚೆಕ್/ಡಿಡಿ ರೂಪದಲ್ಲಿ ಈ ಕೆಳಕಂಡ ಬ್ಯಾಂಕ್  ಅಕೌಂಟ್ ಗೆ ಸಂದಾಯ ಮಾಡಬಹುದಾಗಿರುತ್ತದೆ: 

ಅಕೌಂಟ್ ಹೆಸರು: ಶ್ರೀ ಶಿರಡಿ ಸಾಯಿಬಾಬಾ ಇಂಟರ್ ನ್ಯಾಷನಲ್ ಸರ್ವೀಸ್ ಫೌಂಡೆಶನ್ (ನೋಂದಣಿ)
ಬ್ಯಾಂಕ್: ಭಾರತೀಯ ಸ್ಟೇಟ್ ಬ್ಯಾಂಕ್, 
ಖಾತೆ ಸಂಖ್ಯೆ:  30681291749
ಐ.ಎಫ್.ಎಸ್.ಸಿ. ಕೋಡ್: SBIN0011289
ಶಾಖೆ: ಡಾ.ರಾಜಕುಮಾರ್ ರಸ್ತೆ, ರಾಜಾಜಿನಗರ, ಬೆಂಗಳೂರು
 
ಮಂದಿರದ ವಿಳಾಸ ಹಾಗೂ ಮಾರ್ಗಸೂಚಿ: 


ಸ್ಥಳ: 

ಈ ಶಿರಡಿ ಸಾಯಿಬಾಬಾ ಮಂದಿರವು ಕರ್ನಾಟಕ ರಾಜ್ಯದ ತುಮಕೂರು  ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನಕಣಿವೆ ಗ್ರಾಮದಲ್ಲಿ ಹರಿಯುವ ಸುವರ್ಣಮುಖಿ  ನದಿಗೆ ಅಡ್ಡವಾಗಿ ನಿರ್ಮಿಸಲಾದ ಬೋರನಕಣಿವೆ ಡ್ಯಾಂನ ಹಿನ್ನೀರಿನ ಹತ್ತಿರದಲ್ಲಿ ನಿರ್ಮಿಸಲಾಗಿದೆ. ಹುಳಿಯಾರ್ ಪಟ್ಟಣದಿಂದ ಸಿರಾ ಪಟ್ಟಣಕ್ಕೆ ತೆರಳುವ  ಮಾರ್ಗದಲ್ಲಿ ಸುಮಾರು 8 ಕಿಲೋಮೀಟರ್ ಕ್ರಮಿಸಿದರೆ ಮಂದಿರ ಸಿಗುತ್ತದೆ .

ವಿಳಾಸ:

ಶ್ರೀ ಶಿರಡಿ ಸಾಯಿಬಾಬಾ ಇಂಟರ್ ನ್ಯಾಷನಲ್ ಸರ್ವೀಸ್ ಫೌಂಡೆಶನ್ (ನೋಂದಣಿ)
ಬೋರನಕಣಿವೆ ಗ್ರಾಮ, ಚಿಕ್ಕನಾಯಕನಹಳ್ಳಿ ತಾಲೂಕು, 
ತುಮಕೂರು  ಜಿಲ್ಲೆ- 572 218,
ಕರ್ನಾಟಕ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಬಿ.ವಿಠಲ್/ಶ್ರೀ.ಎನ್.ರವೀಂದ್ರ

ದೂರವಾಣಿ ಸಂಖ್ಯೆ: 

98805 12226/90600 45100

ಮಂದಿರದ ಉದ್ಘಾಟನೆಯ ವಿಡಿಯೋಗಳು: 
 
ಕನ್ನಡ ಅನುವಾದ: ಶ್ರೀಕಂಠ ಶರ್ಮ 

Wednesday, July 1, 2015

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ನಿವೃತ್ತ ಅಧಿಕಾರಿಗಳಿಗೆ ಬೀಳ್ಕೊಡುಗೆ ಸಮಾರಂಭದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ 1ನೇ ಜುಲೈ 2015, ಬುಧವಾರ ದಂದು ಇತ್ತೀಚೆಗೆ ನಿವೃತ್ತರಾದ ಸಂಸ್ಥಾನದ ಅಧಿಕಾರಿಗಳಾದ ಶ್ರೀ.ಸುಭಾಷ್ ಗಾರ್ಕಲ್, ಶ್ರೀ.ಸತೀಶ್ ಭಕ್ರೆ, ಶ್ರೀ.ಬಾಬನರಾವ್ ತುರ್ಕಾಣೆ ಹಾಗೂ ಶ್ರೀಮತಿ.ಕಾಂತಾಬಾಯಿ ಆರಣೆಯವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿತ್ತು. ಈ ಸಮಾರಂಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀ.ಸೂರ್ಯ ಭಾನ್ ಗಮೆ, ಶ್ರೀ.ಉತ್ತಮರಾವ್ ಗೋಂದ್ಕರ್, ಶ್ರೀ.ದಿಲೀಪ್ ಉಗಳೆ, ಶ್ರೀ.ಅಶೋಕ್ ಅವುಟಿ ಹಾಗೂ ಎಲ್ಲಾ ವಿಭಾಗೀಯ ಪ್ರಮುಖರು ಉಪಸ್ಥಿತರಿದ್ದರು. 
 
 
ಕನ್ನಡ ಅನುವಾದ: ಶ್ರೀಕಂಠ ಶರ್ಮ

ಮೇಘಾಲಯ ರಾಜ್ಯಪಾಲ ಶ್ರೀ.ವಿ.ಶಣ್ಮುಗನಾಥನ್ ರವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಮೇಘಾಲಯ ರಾಜ್ಯದ ರಾಜ್ಯಪಾಲರಾದ ಶ್ರೀ.ವಿ.ಶಣ್ಮುಗನಾಥನ್ ರವರು ಇದೇ ತಿಂಗಳ 1ನೇ ಜುಲೈ 2015, ಬುಧವಾರ ದಂದು  ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.




ಕನ್ನಡ ಅನುವಾದ: ಶ್ರೀಕಂಠ ಶರ್ಮ