Monday, September 28, 2015

ಮೈಲಾನ್ ಸಂಸ್ಥೆಯಿಂದ ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ಆಂಬುಲೆನ್ಸ್ ವಾಹನದ ಕೊಡುಗೆ - ಕೃಪೆ: ಸಾಯಿಅಮೃತಧಾರಾ.ಕಾಂ

ಮೈಲಾನ್ ಸಂಸ್ಥೆಯು ಇದೇ ತಿಂಗಳ  28ನೇ ಸೆಪ್ಟೆಂಬರ್ 2015, ಸೋಮವಾರದಂದು ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ 12,00,000/- ರೂಪಾಯಿ ಬೆಲೆಬಾಳುವ ಆಂಬುಲೆನ್ಸ್ ವಾಹನವನ್ನು ಕೊಡುಗೆಯಾಗಿ ನೀಡಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಲ್ಲಿಕ್ ಅವರು ವಾಹನದ ಕೀಲಿಯನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಬಾಜಿರಾವ್ ಶಿಂಧೆಯವರಿಗೆ ನೀಡಿದರು. ಆ ಸಂದರ್ಭದಲ್ಲಿ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು  ಕೂಡ ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Friday, September 25, 2015

ಗುಜರಾತ್ ಮುಖ್ಯಮಂತ್ರಿ ಶ್ರೀಮತಿ. ಆನಂದಿ ಬೆನ್ ಪಟೇಲ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.

ಗುಜರಾತ್  ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀಮತಿ.ಆನಂದಿ ಬೆನ್ ಪಟೇಲ್ ರವರು ಇದೇ ತಿಂಗಳ 25ನೇ ಸೆಪ್ಟೆಂಬರ್ 2015, ಶುಕ್ರವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಸಂದರ್ಭದಲ್ಲಿ ಕೋಪರಗಾವ್ ನ ಶಾಸಕಿ ಶ್ರೀಮತಿ.ಸ್ನೇಹಲತಾ ಕೊಲ್ಹೆ ಮತ್ತು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಬಾಜಿರಾವ್ ಶಿಂಧೆಯವರುಗಳು ಕೂಡ ಉಪಸ್ಥಿತರಿದ್ದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ 

Wednesday, September 16, 2015

ಚಂಡೀಘಡದ ಸಾಯಿ ಭಕ್ತರಿಂದ ಸಾಯಿಬಾಬಾ ಸಂಸ್ಥಾನಕ್ಕೆ ಮಾರುತಿ ಇಕೋ ಆಂಬುಲೆನ್ಸ್ ವಾಹನದ ಕೊಡುಗೆ - ಕೃಪೆ: ಸಾಯಿಅಮೃತಧಾರಾ.ಕಾಂ

ಚಂಡೀಘಡದ ಸಾಯಿ ಭಕ್ತರಾದ ಶ್ರೀ.ಕಮಲ್ ಬಾತ್ರಾ ಮತ್ತು ಶ್ರೀಮತಿ.ಅರ್ಚನಾ ಬಾತ್ರಾರವರು ಇದೇ ತಿಂಗಳ  16ನೇ ಸೆಪ್ಟೆಂಬರ್ 2015, ಬುಧವಾರದಂದು ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ 3,59,000/- ರೂಪಾಯಿ ಬೆಲೆಬಾಳುವ ಮಾರುತಿ ಇಕೋ ಆಂಬುಲೆನ್ಸ್ ವಾಹನವನ್ನು ಕೊಡುಗೆಯಾಗಿ ನೀಡಿದರು. ಅವರು ವಾಹನದ ಕೀಲಿಯನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಬಾಜಿರಾವ್ ಶಿಂಧೆಯವರಿಗೆ ನೀಡಿದರು. ಆ ಸಂದರ್ಭದಲ್ಲಿ ಮಂದಿರದ ಪ್ರಮುಖರಾದ ಶ್ರೀ.ನವನಾಥ್ ಕೋತೆ ಮತ್ತು ವಾಹನ ವಿಭಾಗದ ಮುಖ್ಯಸ್ಥರಾದ ಶ್ರೀ.ಶೇಕಡೆ ಮತ್ತಿತರ ಅಧಿಕಾರಿಗಳು ಕೂಡ ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Tuesday, September 15, 2015

ಬೆಂಗಳೂರಿನ ಸಾಯಿ ಭಕ್ತರಿಂದ ಸಾಯಿಬಾಬಾ ಸಂಸ್ಥಾನಕ್ಕೆ ಆಂಬುಲೆನ್ಸ್ ವಾಹನದ ಕೊಡುಗೆ - ಕೃಪೆ: ಸಾಯಿಅಮೃತಧಾರಾ.ಕಾಂ

ಬೆಂಗಳೂರಿನ ಸಾಯಿ ಭಕ್ತರಾದ ಶ್ರೀ.ಅಮಿತ್ ಬಜಾಜ್ ರವರು ಇದೇ ತಿಂಗಳ  15ನೇ ಸೆಪ್ಟೆಂಬರ್ 2015, ಮಂಗಳವಾರ ದಂದು ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ 10,92,000/- ರೂಪಾಯಿ ಬೆಲೆಬಾಳುವ ಆಂಬುಲೆನ್ಸ್ ವಾಹನವನ್ನು ಕೊಡುಗೆಯಾಗಿ ನೀಡಿದರು. ಅವರು ವಾಹನದ ಕೀಲಿಯನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರಿಗೆ ನೀಡಿದರು. ಆ ಸಂದರ್ಭದಲ್ಲಿ ಮಂದಿರದ ಪ್ರಮುಖರಾದ ಶ್ರೀ.ನವನಾಥ್ ಕೋತೆ ಮತ್ತು ವಾಹನ ವಿಭಾಗದ ಮುಖ್ಯಸ್ಥರಾದ ಶ್ರೀ.ಶೇಕಡೆಯವರುಗಳು ಕೂಡ ಉಪಸ್ಥಿತರಿದ್ದರು. 



ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್ 
ಆಂಗ್ಲಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ 

Saturday, September 12, 2015

ನಾಸಿಕ್ ನಲ್ಲಿ ಸಿಂಹಸ್ಥ ಕುಂಭಮೇಳದ ನಡೆಯುತ್ತಿರುವ ಅಂಗವಾಗಿ ಶಿರಡಿಯಲ್ಲಿ ಸಾಯಿಬಾಬಾರವರ ದರ್ಶನಕ್ಕಾಗಿ ಸಾಯಿ ಭಕ್ತರ ಮಹಾಪೂರ - ಕೃಪೆ: ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರದ ನಾಸಿಕ್ ನಲ್ಲಿ ಸಿಂಹಸ್ಥ ಕುಂಭಮೇಳ ನಡೆಯುತ್ತಿರುವ ಅಂಗವಾಗಿ ಇದೇ ತಿಂಗಳ 12ನೇ ಸೆಪ್ಟೆಂಬರ್  2015, ಶನಿವಾರ ದಂದು ಶಿರಡಿಯಲ್ಲಿ ಸಾಯಿಬಾಬಾರವರ ದರ್ಶನಕ್ಕಾಗಿ ಸಾಯಿ ಭಕ್ತರ ಮಹಾಪೂರವೇ ಹರಿದುಬಂದಿತ್ತು. ಆ ಭಕ್ತ ಸಾಗರದ ಕೆಲವು ದೃಶ್ಯಗಳನ್ನು ಈ ಕೆಳಗೆ ನೋಡಬಹುದು. 







ನಾಸಿಕ್ ನಲ್ಲಿ ಸಿಂಹಸ್ಥ ಕುಂಭಮೇಳ ನಡೆಯುತ್ತಿರುವ ಅಂಗವಾಗಿ ಇದೇ ತಿಂಗಳ 13ನೇ ಸೆಪ್ಟೆಂಬರ್  2015, ಭಾನುವಾರ  ದಂದು ಶಿರಡಿಯಲ್ಲಿ ಸಾಯಿಬಾಬಾರವರ ದರ್ಶನಕ್ಕಾಗಿ ಹರಿದು ಬಂದ ಭಕ್ತ ಸಾಗರ ತಮ್ಮ ವಾಹನಗಳನ್ನು ವಾಹನ ನಿಲುಗಡೆ ನಿಲ್ದಾಣದಲ್ಲಿ ನಿಲ್ಲಿಸಿದ್ದರು. ಅದರ ಒಂದು ಪಕ್ಷಿನೋಟವನ್ನು   ಈ ಕೆಳಗೆ ನೋಡಬಹುದು. 


ನಾಸಿಕ್ ನಲ್ಲಿ ಸಿಂಹಸ್ಥ ಕುಂಭಮೇಳ ನಡೆಯುತ್ತಿರುವ ಅಂಗವಾಗಿ ಶಿರಡಿಯಲ್ಲಿ ಸಾಯಿಬಾಬಾರವರ ದರ್ಶನಕ್ಕಾಗಿ ಹರಿದು ಬಂದ ಭಕ್ತರನ್ನು ವಾಹನ ನಿಲುಗಡೆ ತಾಣದಿಂದ ದರ್ಶನದ ಸಾಲಿನ ಬಳಿಗೆ ಕರೆದುಕೊಂಡು ಹೋಗುವ ಸಲುವಾಗಿ ಶ್ರೀ ಸಾಯಿಬಾಬಾ ಸಂಸ್ಥಾನವು 68 ಬಸ್ ಗಳನ್ನು ವ್ಯವಸ್ಥೆ ಮಾಡಿತ್ತು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ