Thursday, January 13, 2011

ಬೆಂಗಳೂರಿನ ಸಾಯಿಬಾಬಾ ಮಂದಿರ - ಶ್ರೀ.ಸಂಕಷ್ಟ ಗಣಪತಿ ಮತ್ತು ಶ್ರೀ.ಸಾಯಿಬಾಬಾ ದೇವಸ್ಥಾನ ಟ್ರಸ್ಟ್ (ನೋಂದಣಿ), 3ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಮರಿಯಪ್ಪನ ಪಾಳ್ಯ, ಪ್ರಕಾಶನಗರ, ಬೆಂಗಳೂರು-560 021, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ  

ಈ ದೇವಾಲಯವು ಬೆಂಗಳೂರಿನ ಮಲ್ಲೇಶ್ವರಂ ವೃತ್ತದಿಂದ ನವರಂಗ್ ಚಿತ್ರಮಂದಿರಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಇರುವ ಮರಿಯಪ್ಪನ ಪಾಳ್ಯದಲ್ಲಿ ಇರುತ್ತದೆ. ಈ ದೇವಾಲಯದ ವಿಶೇಷತೆಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

ದೇವಾಲಯದ ವಿಶೇಷತೆಗಳು: 

  • ಈ ದೇವಾಲಯವನ್ನು 31ನೇ ಆಗಸ್ಟ್ 2009 ರಂದು ಬ್ರಹ್ಮ ಶ್ರೀ ಹೋಮ ಕುಂಡ ಶ್ರೀ. ಶ್ರೀ.ನಾರಾಯಣ ಸ್ವಾಮಿಗಳ್ ಮತ್ತು ಶ್ರೀ.ಕಂದಸ್ವಾಮಿ ಶಿವಾಚಾರ್ಯ ವೃಂದ, ರಾಶಿಪುರಂ, ಸೇಲಂ, ತಮಿಳುನಾಡು ಇವರುಗಳು ಉದ್ಘಾಟಿಸಿದರು. 
  • ಈ ದೇವಾಲಯದಲ್ಲಿ ಗಣಪತಿಯ ಸುಂದರ ಕಪ್ಪು ಶಿಲೆಯ ವಿಗ್ರಹ ಮತ್ತು ಅಮೃತಶಿಲೆಯ ಸಾಯಿಬಾಬಾರವರ ಸುಂದರ ವಿಗ್ರಹಗಳನ್ನು ಸಾಯಿಭಕ್ತರು ನೋಡಬಹುದು. 
 ದೇವಾಲಯದ ಹೊರನೋಟ

 ಗಣಪತಿಯ ವಿಗ್ರಹ 

 ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹ 

ದೇವಾಲಯದ ಕಾರ್ಯಚಟುವಟಿಕೆಗಳು:  

ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ:
ಕಾಕಡಾ ಆರತಿ: ಪ್ರತಿದಿನ ಬೆಳಿಗ್ಗೆ 7:45 ಕ್ಕೆ.
ಮಧ್ಯಾನ್ಹ ಆರತಿ: ಪ್ರತಿದಿನ 10:30 ಕ್ಕೆ.
ಧೂಪಾರತಿ: ಪ್ರತಿದಿನ ಸಂಜೆ 6:30 ಕ್ಕೆ.
ಶೇಜಾರತಿ: ಪ್ರತಿದಿನ ರಾತ್ರಿ 8:30 ಕ್ಕೆ.

ಪ್ರತಿದಿನ ಬೆಳಿಗ್ಗೆ 7 ಘಂಟೆಗೆ ಸಾಯಿಬಾಬಾರವರಿಗೆ ಮತ್ತು ಗಣಪತಿಯ ವಿಗ್ರಹಗಳಿಗೆ ಕ್ಷೀರಾಭಿಷೇಕ ಮಾಡಲಾಗುತ್ತದೆ. ಸೇವಾಶುಲ್ಕ 101/- ರುಪಾಯಿಗಳು. 

ಪ್ರತಿ ತಿಂಗಳ ಹುಣ್ಣಿಮೆಯ ದಿನ ಸಂಜೆ 6 ಘಂಟೆಯಿಂದ 8 ಘಂಟೆಯವರೆಗೆ ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತದೆ. ಸೇವಾಶುಲ್ಕ 25/- ರುಪಾಯಿಗಳು.

ಪ್ರತಿ ತಿಂಗಳೂ ಸಂಕಷ್ಟ ಚತುರ್ಥಿಯನ್ನು ಸಂಜೆ 6:30 ರಿಂದ 8:00 ಘಂಟೆಯವರೆಗೆ ಆಚರಿಸಲಾಗುತ್ತದೆ. ಸೇವಾಶುಲ್ಕ 25/- ರುಪಾಯಿಗಳು.

ಪ್ರತಿ ಗುರುವಾರ ಸಂಜೆ 6 ಘಂಟೆಯಿಂದ 8 ಘಂಟೆಯವರೆಗೆ ಸಾಯಿ ಭಜನೆಯ ಕಾರ್ಯಕ್ರಮವಿರುತ್ತದೆ.  

ವಿಶೇಷ ಉತ್ಸವದ ದಿನಗಳು:

  1. ಪ್ರತಿ ವರ್ಷದ 31ನೇ ಆಗಸ್ಟ್ ದೇವಾಲಯದ ವಾರ್ಷಿಕೋತ್ಸವ.
  2. ಶಿವರಾತ್ರಿ. 
  3. ಗುರು ಪೂರ್ಣಿಮಾ. 
  4. ವೈಕುಂಠ ಏಕಾದಶಿ. 
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:

ಸ್ಥಳ: 
ಮರಿಯಪ್ಪನ ಪಾಳ್ಯ  ಬಸ್ ನಿಲ್ದಾಣದ ಹತ್ತಿರ. 

ವಿಳಾಸ: 
ಶ್ರೀ.ಸಂಕಷ್ಟ ಗಣಪತಿ ಮತ್ತು ಶ್ರೀ.ಸಾಯಿಬಾಬಾ ದೇವಸ್ಥಾನ ಟ್ರಸ್ಟ್ (ನೋಂದಣಿ), 
3ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಮರಿಯಪ್ಪನ ಪಾಳ್ಯ, 
ಪ್ರಕಾಶನಗರ, ಬೆಂಗಳೂರು-560 021, ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿಗಳು:  
ಶ್ರೀ.ಮಂಜುನಾಥ್/ ಶ್ರೀ.ಶಿವಕುಮಾರ್/ಶ್ರೀ.ಮೋಹನ್ ಕುಮಾರ್/ ಶ್ರೀ.ರವಿಚಾರ್- ಅರ್ಚಕರು.

ದೂರವಾಣಿ ಸಂಖ್ಯೆಗಳು: 
+91 99025 46834 / +91 99459 38326 / +91 97311 64945 / +91 93412 30361 

ಮಾರ್ಗಸೂಚಿ:  
ಮರಿಯಪ್ಪನ ಪಾಳ್ಯ  ಬಸ್ ನಿಲ್ದಾಣ ಅಥವಾ ಹರಿಶ್ಚಂದ್ರ ಘಾಟ್ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಎರಡು ಬಸ್ ನಿಲ್ದಾಣದಿಂದ ಸಮ ದೂರದಲ್ಲಿ ಇರುತ್ತದೆ. ಬಸ್ ನಿಲ್ದಾಣದಲ್ಲಿ ಇಳಿದು 5 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. 


ಕನ್ನಡ ಅನುವಾದ:ಶ್ರೀಕಂಠ ಶರ್ಮ

No comments:

Post a Comment