Thursday, January 13, 2011

ಶಿರಡಿ ಸಾಯಿಬಾಬಾನಿಗೆ 100 ಚೀಲ ಸಕ್ಕರೆಯನ್ನು ನೀಡಿದ ಲಾಟೂರ್ ನ ಸಾಯಿ ಭಕ್ತ - 13ನೇ ಜನವರಿ 2011 - ಕೃಪೆ: ಸಾಯಿಅಮೃತಧಾರಾ.ಕಾಂ 

ಲಾಟೂರ್ ನ ಶ್ರೀ ಸಾಯಿಬಾಬಾ ಸಕ್ಕರೆ ಕಾರ್ಖಾನೆಯ ಮಾಲೀಕರಾದ ಶ್ರೀ.ರಾಜೇಶ್ ಬೂಕೆಯವರು ಶಿರಡಿ ಸಾಯಿಬಾಬಾನಿಗೆ 100 ಚೀಲ ಸಕ್ಕರೆಯನ್ನು ಕಾಣಿಕೆಯಾಗಿ ನೀಡಿದರು. ಈ ಉತ್ತಮ ಕಾರ್ಯವನ್ನು ಕಳೆದ ಐದು ವರ್ಷಗಳಿಂದ ಶ್ರೀ.ರಾಜೇಶ್ ಬೂಕೆಯವರು ಅವಿರತವಾಗಿ ನಡೆಸಿಕೊಂಡು ಬಂದಿದ್ದಾರೆ. ಕಾಣಿಕೆ ನೀಡಿದ ನಂತರ ಶ್ರೀಮತಿ ಮತ್ತು ಶ್ರೀ.ರಾಜೇಶ್ ಬೂಕೆಯವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿ ಶ್ರೀ.ಸುರೇಶ ವಾಬ್ಲೆಯವರು ಸನ್ಮಾನಿಸಿದರು.ಆ ಸಮಯದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ.ಮೋಹನ್ ಯಾದವ್ ರವರು ಕೂಡ ಉಪಸ್ಥಿತರಿದ್ದರು. 


ಕನ್ನಡ ಅನುವಾದ:ಶ್ರೀಕಂಠ ಶರ್ಮ

No comments:

Post a Comment