Sunday, January 23, 2011

ಶಿರಡಿ ಮಿಂಚು ಸುದ್ದಿಗಳ ವರದಿಗಾರ - ಶ್ರೀ.ಜ್ಯೋತಿ ಪ್ರಕಾಶ್ ಮಹಾಪಾತ್ರ  - ಕೃಪೆ: ಸಾಯಿ ಅಮೃತಧಾರಾ.ಕಾಂ 


ಶ್ರೀ.ಜ್ಯೋತಿ ಪ್ರಕಾಶ್ ಮಹಾಪಾತ್ರ ರವರು 7ನೇ ಡಿಸೆಂಬರ್ 1962 ರಂದು ಜನಿಸಿದರು. ಇವರ ತಂದೆ ದಿವಂಗತ ಶ್ರೀ.ಸದಾಶಿವ ಮಹಾಪಾತ್ರ. ಇವರು ಗಣಕ ಯಂತ್ರ ವಿಜ್ಞಾನದಲ್ಲಿ ದೆಹಲಿ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಗಳಿಸಿರುತ್ತಾರೆ.  ಸುಮಾರು ಹನ್ನೆರಡು ವರ್ಷಗಳ ಕಾಲ ಭಾರತೀಯ ಲೋಹ ಮತ್ತು ಕಬ್ಬಿಣ ಸಂಸ್ಥೆ (IMFA ಗ್ರೂಪ್) ಯಲ್ಲಿ ವಿವಿಧ ಹುದ್ದೆಗಳಲ್ಲಿ ಮತ್ತು ಭಾರತದ ವಿವಿಧ ಭಾಗಗಳಲ್ಲಿ ಸೇವೆರ್ಯನ್ನು ಸಲ್ಲಿಸಿರುತ್ತಾರೆ. ನಂತರ ಎರಡು ವರ್ಷಗಳ ಕಾಲ OTV ವಾಹಿನಿಯಲ್ಲಿ ಉಪ ಸಂಪಾದಕರಾಗಿ ಕೆಲಸ ನಿರ್ವಹಿಸಿರುತ್ತಾರೆ. 

ಪ್ರಸ್ತುತ ಇವರು ಒರಿಸ್ಸಾ ರಾಜ್ಯದ ಪ್ರಮುಖ ಸುದ್ದಿ ವಾಹಿನಿಯಾದ "ನಕ್ಷತ್ರ ನ್ಯೂಸ್" (http://www.naxatranews.com) ನಲ್ಲಿ ವಿಶೇಷ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಾ ಸಾಯಿಬಾಬಾರವರ ಪುಣ್ಯಕ್ಷೇತ್ರವಾದ ಶಿರಡಿಯಲ್ಲಿ ದಿನನಿತ್ಯ ನಡೆಯುವ ಎಲ್ಲಾ ವಿಷಯಗಳ ವರದಿಯನ್ನು ತಲುಪಿಸುವ ಪುಣ್ಯ ಕಾರ್ಯವನ್ನು ಮಾಡುತ್ತಿದ್ದಾರೆ. ಅಲ್ಲದೇ, ಒರಿಸ್ಸಾ ರಾಜ್ಯದ ಪ್ರಮುಖ ಪತ್ರಿಕೆಯಾದ "ಖಬರಾ" ಪತ್ರಿಕೆಯಲ್ಲಿ ವಿಶೇಷ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಾ ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ಥಾನ ಪ್ರಾಂತ್ಯಗಳನ್ನು ಪ್ರತಿನಿಧಿಸುತ್ತಿದ್ದಾರೆ. 

ಇವರು ಒಂದು ಸೋನಿ 3 ಸಿಸಿಡಿ ಕ್ಯಾಮೆರಾ (PD), ಒಂದು ಕಾರ್, ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಮತ್ತು ಇತರ ಸುದ್ದಿ ಸಂಗ್ರಹಕ್ಕೆ ಬೇಕಾದ ಎಲ್ಲಾ ಅಗತ್ಯ ಸಲಕರಣೆಗಳನ್ನು ಹೊಂದಿದ್ದಾರೆ. 

ಇವರು ಶ್ರೀಮತಿ.ಜಯಂತಿ ಮಹಾಪಾತ್ರ ರವರನ್ನು ವಿವಾಹವಾಗಿ ಶ್ರೀ.ಜಿಗ್ಯಾಂಶು ಎಂಬ ಸುಂದರ ಮಗನೊಡನೆ ಸುಖೀ ಜೀವನವನ್ನು ಶಿರಡಿಯಲ್ಲಿ ನಡೆಸುತ್ತಿದ್ದಾರೆ. ಇವರ ಧರ್ಮಪತ್ನಿಯವರು ಕೂಡ ಉತ್ತಮ ಬರಹಗಾರ್ತಿ ಮತ್ತು ಅನುವಾದಕಿಯಾಗಿದ್ದು ಅನೇಕ ಸಾಯಿಬಾಬಾರವರ ಪುಸ್ತಕಗಳನ್ನು ಓರಿಯಾ ಭಾಷೆಗೆ ಅನುವಾದ ಮಾಡಿದ್ದಾರೆ. 

ಇವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ. 


ವಿಳಾಸ: 
"ಸಾಯಿ ಪುಷ್ಪಂ", ಗುರುಕುಲ ನಗರ, 
ಶ್ರೀಖಂಡ್ ಬಸ್ತಿ, ನಗರ - ಮನಮಾಡ್ ಹೆದ್ದಾರಿ, 
ಸಾಕುರಿ, ಶಿರಡಿ,ಅಹಮದ್ ನಗರ ಜಿಲ್ಲೆ, ಮಹಾರಾಷ್ಟ್ರ.

ದೂರವಾಣಿ:  
+91 94043 24744 

ಈ ಮೇಲ್ ವಿಳಾಸ: 
shirdikhabar@gmail.com, jmshirdi@gmail.com


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment