Monday, December 31, 2012

ಪ್ರಖ್ಯಾತ ಸಾಯಿ ಬರಹಗಾರ ಹಾಗೂ ಶಿಕ್ಷಣತಜ್ಞ ಡಾಕ್ಟರ್ ಸುಬೋಧ್ ಅಗರವಾಲ್  - ಕೃಪೆ: ಸಾಯಿಅಮೃತಧಾರಾ.ಕಾಂ


ಡಾಕ್ಟರ್ ಸುಬೋಧ್ ಅಗರವಾಲ್ ರವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರು. ಇವರು ಪ್ರಖ್ಯಾತ  ಬರಹಗಾರರೂ  ಹಾಗೂ ಶಿಕ್ಷಣತಜ್ಞರಾಗಿದ್ದಾರೆ.

ಡಾಕ್ಟರ್ ಸುಬೋಧ್ ಅಗರವಾಲ್ ರವರು 1ನೇ ಮಾರ್ಚ್ 1950 ರಂದು ಉತ್ತರಖಂಡ ರಾಜ್ಯದ ಹರಿದ್ವಾರ ಜಿಲ್ಲೆಯ ಮಂಗಲೋರ್ ಪಟ್ಟಣದಲ್ಲಿ ಶ್ರೀಮತಿ.ಕಾಂತಾದೇವಿ ಹಾಗೂ ಶ್ರೀ.ಮಹೇಂದ್ರ ಕುಮಾರ್ ರವರ ಪುತ್ರನಾಗಿ ಜನಿಸಿರುತ್ತಾರೆ.

ಇವರು ಎಂ.ಎ.(ಆಂಗ್ಲ ಸಾಹಿತ್ಯ), ಎಂ.ಎ. (ಇತಿಹಾಸ), ಪಿ.ಹೆಚ್.ಡಿ. (ಆಂಗ್ಲ ಸಾಹಿತ್ಯ), ಪಿ.ಹೆಚ್.ಡಿ. (ಇತಿಹಾಸ), ಡಿ.ಲಿಟ್ (ಆಂಗ್ಲ ಸಾಹಿತ್ಯ) ಹಾಗೂ ಡಿ.ಲಿಟ್ (ಇತಿಹಾಸ) ಪದವಿಗಳನ್ನು ಗಳಿಸಿರುತ್ತಾರೆ.

ಇವರು ಡೆಹರಾಡೂನ್ ನ ಡಿ.ಎ.ವಿ.ಸ್ನಾತಕೋತ್ತರ ಕಾಲೇಜಿನಲ್ಲಿ ಹಲವಾರು ವರ್ಷಗಳ ಕಾಲ ಆಂಗ್ಲ ಸಾಹಿತ್ಯ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಪೆಸರ್ ಮತ್ತು ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುತ್ತಾರೆ.

ಇವರು 1985 ನೇ ಇಸವಿಯಲ್ಲಿ ಸಾಯಿಬಾಬಾರವರ ಭಕ್ತರಾಗಿ ರೂಪುಗೊಂಡು ಸಾಯಿಬಾಬಾರವರ ಬಗ್ಗೆ ಪ್ರಕಟವಾಗುವ ಪತ್ರಿಕೆಗಳಾದ ಸಾಯಿ ಅಮೃತ್ (ಗಜಿಯಾಬಾದ್, ಉತ್ತರಪ್ರದೇಶ), ಸಾಯಿ ಸುಧಾ (ಚನ್ನೈ, ತಮಿಳುನಾಡು), ಶ್ರೀ.ಸಾಯಿ ಸೇವಾ (ಅಲಹಾಬಾದ್ ಮತ್ತು ಕಾನ್ಪುರ, ಉತ್ತರಪ್ರದೇಶ) ಸಾಯಿ ಅರ್ಪಣ್ (ಮೊರದಾಬಾದ್, ಉತ್ತರಪ್ರದೇಶ) ಹಾಗೂ ಶಿರಡಿ ಸಾಯಿಬಾಬಾ ಸಂಸ್ಥಾನದಿಂದ ಪ್ರಕಟವಾಗುವ ಶ್ರೀ.ಸಾಯಿಲೀಲಾ ದ್ವೈಮಾಸಿಕ ಪತ್ರಿಕೆಗಳಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ಆಂಗ್ಲ ಭಾಷೆಯಲ್ಲಿ ಸಾಯಿಬಾಬಾರವರ ಬಗ್ಗೆ ಲೇಖನಗಳನ್ನು ಬರೆಯುತ್ತಾ ಬಂದಿದ್ದಾರೆ.

ಇವರು ಶ್ರೀಮತಿ.ಉಷಾ ಅಗರವಾಲ್ ರವರನ್ನು ವಿವಾಹವಾಗಿದ್ದು ಇವರಿಗೆ ಡಾಕ್ಟರ್.ಕುಮಾರಿ.ವಿಭೂತಿ ಅಗರವಾಲ್ ಎಂಬ ಹೆಣ್ಣು ಮಗಳಿದ್ದಾಳೆ.

ಪ್ರಸ್ತುತ ಇವರು ಡೆಹರಾಡೂನ್ ನಗರದ ಸ್ವಗೃಹದಲ್ಲಿ ತಮ್ಮ ಧರ್ಮಪತ್ನಿ ಹಾಗೂ ಮಗಳೊಂದಿಗೆ ಸುಖೀಜೀವನವನ್ನು ನಡೆಸುತ್ತಿದ್ದಾರೆ.

ಡಾಕ್ಟರ್ ಸುಬೋಧ್ ಅಗರವಾಲ್ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:


ವಿಳಾಸ:

ಡಾಕ್ಟರ್ ಸುಬೋಧ್ ಅಗರವಾಲ್
"ಶಿರಡಿ ಸಾಯಿಧಾಮ್",ನಂ.29,  ತಿಲಕ್ ರಸ್ತೆ,
ಡೆಹರಾಡೂನ್ - 248 001, 
ಉತ್ತರಖಂಡ, ಭಾರತ

ದೂರವಾಣಿ ಸಂಖ್ಯೆಗಳು:

+91 135 2622810 (ಫ್ಯಾಕ್ಸ್)/+91 98972 02810 (ಮೊಬೈಲ್)

ಇ-ಮೈಲ್ ವಿಳಾಸ:
subodhagarwal27@gmail.com


ಕನ್ನಡ ಅನುವಾದ: ಶ್ರೀಕಂಠ ಶರ್ಮ
ಸುಪ್ರಸಿದ್ಧ ಶಿರಡಿಯ ಚಾವಡಿ ಉತ್ಯವದ ಬ್ಯಾಂಡ್ ಸೆಟ್ ತಂಡದ ಮುಖ್ಯಸ್ಥ - ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ - ಕೃಪೆ: ಸಾಯಿಅಮೃತಧಾರಾ.ಕಾಂ



ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರು ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಪ್ರತಿ ಗುರುವಾರ ಹಾಗೂ ಹಬ್ಬದ ದಿನಗಳಂದು ನಡೆಸುತ್ತಿರುವ ಸುಪ್ರಸಿದ್ಧ ಚಾವಡಿ ಉತ್ಯವದ ಬ್ಯಾಂಡ್ ಸೆಟ್ ತಂಡದ ಮುಖ್ಯಸ್ಥ. ಇವರದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ.   ಇವರು ಉತ್ತಮ ಗಾಯಕರು, ಡ್ರಮ್ಮರ್, ಗೀತರಚನಕಾರರು ಹಾಗೂ ನಟರೂ ಆಗಿರುತ್ತಾರೆ.  ಇವರು 26ನೇ ಫೆಬ್ರವರಿ 1969 ರಂದು ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ಶಿರಡಿಯಲ್ಲಿ  ಶ್ರೀಮತಿ.ಅಮೀನಾ ಹಾಗೂ ದಿವಂಗತ ಶ್ರೀ.ಗುಲ್ಜಾರ್ ಅನ್ವರ್ ಪಠಾಣ್ ರವರ ಮಗನಾಗಿ ಜನ್ಮ ತಳೆದರು.

ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರು 1980ನೇ ಇಸವಿಯಲ್ಲಿ ತಮ್ಮ 11ನೇ ಎಳೆಯ ವಯಸ್ಸಿಯನಲ್ಲಿಯೇ ಶಿರಡಿಯ ಪ್ರಖ್ಯಾತ ಪಾರ್ಸಿ ಸಂತರಾದ ಶ್ರೀ.ಹೋಮಿಬಾಬಾರವರಿಂದ ಆಕರ್ಷಿತರಾಗಿ ಅವರನ್ನು ತಮ್ಮ ಭೌತಿಕ ಗುರುಗಳನ್ನಾಗಿ ಸ್ವೀಕರಿಸಿ 1985 ನೇ ಇಸವಿಯಲ್ಲಿ ಅವರ ಸಮಾಧಿಯಾಗುವವರೆವಿಗೂ ಅವರ ಸೇವೆಯನ್ನು ನಿಸ್ವಾರ್ಥತೆಯಿಂದ ಮಾಡಿದರು. ಪ್ರಸ್ತುತ ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರು ಹೋಮಿಬಾಬಾ ಅಶ್ರಮದ ಮೇಲ್ವಿಚಾರಣೆಯನ್ನು ಸ್ವಯಂಸೇವಕರಾಗಿ ನಿರ್ವಹಿಸುತ್ತಿದ್ದಾರೆ.

ಇವರು ಡ್ರಮ್ಮಿಂಗ್ ವಿದ್ಯೆಯನ್ನು ಯಾವ ಗುರುಗಳ ಬಳಿಯೂ ತರಬೇತಿ ಪಡೆದಿರದೆ, ಬದಲಿಗೆ ಕೇವಲ ಸಾಯಿಬಾಬಾರವರ ಆಶೀರ್ವಾದದಿಂದಲೇ ಕಲಿತಿರುವುದಾಗಿ ಅತ್ಯಂತ ವಿನಮ್ರ ಭಾವದಿಂದ ಹೇಳುತ್ತಾರೆ.

ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರು ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಪ್ರತಿ ಗುರುವಾರ ಹಾಗೂ ಹಬ್ಬದ ದಿನಗಳಂದು ನಡೆಸುತ್ತಿರುವ ಸುಪ್ರಸಿದ್ಧ ಚಾವಡಿ ಉತ್ಯವದ ಬ್ಯಾಂಡ್ ಸೆಟ್ ತಂಡವನ್ನು ತಯಾರಿ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾ ಬಂದಿದ್ದಾರೆ. ಇವರು ತಮ್ಮ 10ನೇ ವಯಸ್ಸಿನಿಂದಲೇ ತಮ್ಮ ತಂದೆಯವರ ಜೊತೆಯಲ್ಲಿ ಚಾವಡಿ ಉತ್ಸವದಲ್ಲಿ ಪಾಲ್ಗೊಳ್ಳಲು ಪ್ರಾರಂಭಿಸಿದ್ದು ಸುಮಾರು 30 ವರ್ಷಗಳಿಗೂ ಹೆಚ್ಚು ಕಾಲದಿಂದ ಈ ನಿಸ್ವಾರ್ಥ ಸೇವಯನ್ನು ಮಾಡುತ್ತಾ ಬಂದಿದ್ದಾರೆ.

ಚಾವಡಿ ಉತ್ಯವದ ದಿನಗಳಂದು ಇವರ ಬ್ಯಾಂಡ್ ಸೆಟ್ ತಂಡದ ಪ್ರತಿಯೊಬ್ಬ ಸದಸ್ಯರೂ ಬಿಳಿಯ ಪ್ಯಾಂಟ್ ಹಾಗೂ ಕೇಸರಿ ಬಣ್ಣದ ಪಲ್ಲಕ್ಕಿಯ ಚಿತ್ರವನ್ನು ಹೊಂದಿರುವ ಟಿ-ಶರ್ಟ್ ಧರಿಸುತ್ತಾರೆ. ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರು  ತಮ್ಮ ಕಣ್ಣಿನ ಸನ್ನೆಯಿಂದ, ಮುಖದಲ್ಲಿ ತೋರ್ಪಡಿಸುವ ಹಾವ-ಭಾವಗಳಿಂದ ಹಾಗೂ ಕೈಗಳ ಚಲನೆಯಿಂದಲೇ ತಮ್ಮ ತಂಡದ ಎಲ್ಲಾ ಸದಸ್ಯರಿಗೂ ಸೂಚನೆಗಳನ್ನು ಬಹಳ ಸುಂದರವಾಗಿ ನೀಡುತ್ತಾರೆ ಹಾಗೂ ತಂಡದ ಎಲ್ಲಾ ಸದಸ್ಸರುಗಳೂ ಇವರ ಸೂಚನೆಗಳನ್ನು ತಪ್ಪದೇ ಪಾಲಿಸುತ್ತಾರೆ.

ಬ್ಯಾಂಡ್ ಸೆಟ್ ತಂಡದ ಸದಸ್ಯರುಗಳು ಪ್ರತಿ ಗುರುವಾರ ಸಂಜೆ 7 ಗಂಟೆಗೆ ಸರಿಯಾಗಿ ಶಿರಡಿಯ ಸಮಾಧಿ ಮಂದಿರದ ಮಧ್ಯದ ಹಾಲ್ ನಲ್ಲಿ ಸೇರಿ ಬ್ಯಾಂಡ್ ಅನ್ನು ಬಾರಿಸಲು ಪ್ರಾರಂಭಿಸುತ್ತಾರೆ. ಸುಮಾರು 8:30 ಕ್ಕೆ ಚಾವಡಿ ಉತ್ಸವವು ಸಮಾಧಿ ಮಂದಿರದಿಂದ ಪ್ರಾರಂಭವಾಗುತ್ತದೆ. ಉತ್ಸವವು ಸಮಾಧಿ ಮಂದಿರದಿಂದ ಹೊರಟು ದ್ವಾರಕಾಮಾಯಿಗೆ ತೆರಳಿ ಅಲ್ಲಿಂದ ಚಾವಡಿ ಸೇರುತ್ತದೆ. ಚಾವಡಿಯಲ್ಲಿ ಸಾಯಿಬಾಬಾರವರಿಗೆ ಆರತಿ ಮಾಡಲಾಗುತ್ತದೆ. ನಂತರ ಉತ್ಸವವು ಚಾವಡಿಯಿಂದ ಹೊರಟು ಶಿರಡಿ ಗ್ರಾಮದ ಪ್ರದಕ್ಷಿಣೆ ಮಾಡಿದ ನಂತರ ಪುನಃ ಸಮಾಧಿ ಮಂದಿರಕ್ಕೆ ಬಂದು ಸೇರುತ್ತದೆ. ಹೀಗೆ ಸುಮಾರು 3 ಗಂಟೆಯ ಕಾಲ ಉತ್ಸವ ಕಾರ್ಯಕ್ರಮ ನಡೆಯುತ್ತದೆ. ಈ ರೀತಿಯಲ್ಲಿ ಸತತ 3 ಗಂಟೆಗಳ ಕಾಲ ಬ್ಯಾಂಡ್ ಸೆಟ್ ತಂಡದ ಸದಸ್ಯರುಗಳು ಎಡೆಬಿಡದೆ ವೈವಿಧ್ಯಮಯವಾಗಿ ಬ್ಯಾಂಡ್ ಅನ್ನು ಬಾರಿಸುತ್ತಾರೆ. ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರ ಮಾರ್ಗದರ್ಶನದಲ್ಲಿ ಈ ರೀತಿ ವೈವಿಧ್ಯಮಯವಾಗಿ ಬ್ಯಾಂಡ್ ಬಾರಿಸುವ ಆ ತಂಡವನ್ನು ನೋಡಲು ಎರಡು ಕಣ್ಣುಗಳು ಸಾಲದು ಎಂದರೆ ಉತ್ಪ್ರೇಕ್ಷೆಯಲ್ಲ!!!

ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರು ಒಂದು ಹಿಂದಿ ಚಲನಚಿತ್ರ "ಪ್ರಣಾಮ್ ವಾಲೇ ಕುಂ" ಹಾಗೂ ಎರಡು ಹಿಂದಿ ವೀಡಿಯೋಗಳಾದ "ಸಾಯಿನಾಥ ಮೇರೆ" ಮತ್ತು "ಸಾಯಿ ಸಿಮರ್ಲೋ" ಗಳಲ್ಲಿ ನಟರಾಗಿ ಅಭಿನಯಿಸಿದ್ದಾರೆ.

ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರು ಶಿರಡಿ, ಸೂರತ್, ದೆಹಲಿ, ಮೀರತ್, ಬದಾಯೂನ್ ಹಾಗೂ ಗ್ವಾಲಿಯರ್ ನಗರಗಳಲ್ಲಿ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಇವರು ನೀಡಿದ ಸಾಯಿ ಭಜನೆಯ ಕಾರ್ಯಕ್ರಮಕ್ಕಾಗಿ ಸೂರತ್ ನ "ಸಾಯಿ ಸೇವಕ್ ಮಂಡಲ್" ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರನ್ನು ಸನ್ಮಾನಿಸಿರುತ್ತದೆ.

ಪ್ರಸ್ತುತ ಇವರು ತಮ್ಮ ಧರ್ಮಪತ್ನಿ ಹಾಗೂ ತಮ್ಮ ಮಕ್ಕಳೊಂದಿಗೆ ಶಿರಡಿಯ ತಮ್ಮ ನಿವಾಸದಲ್ಲಿ ಸುಖೀಜೀವನವನ್ನು ನಡೆಸುತ್ತಿದ್ದಾರೆ.

 ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:


ವಿಳಾಸ:

ಹೋಮಿಬಾಬಾ ಆಶ್ರಮ,
ಪಿಂಪಲವಾಡಿ ರಸ್ತೆ, ಗೋಬಿಂದ್ ಧಾಮ್ ನ ಪಕ್ಕ,
ಶಿರಡಿ - 423 109,
ರಹತಾ ತಾಲ್ಲೂಕು, ಅಹಮದ್ ನಗರ ಜಿಲ್ಲೆ,
ಮಹಾರಾಷ್ಟ್ರ, ಭಾರತ.

ದೂರವಾಣಿ ಸಂಖ್ಯೆ:

+91 94204 70868 / +91 98504 49728


ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, December 27, 2012

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ದತ್ತ ಜಯಂತಿಯ ಆಚರಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ದತ್ತ ಜಯಂತಿ ಉತ್ಸವದ ಅಂಗವಾಗಿ  27ನೇ ಡಿಸೆಂಬರ್ 2012, ಗುರುವಾರದಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಡಾ.ಯಶವಂತರಾವ್ ಮಾನೆ ಹಾಗೂ ಅವರ ಧರ್ಮಪತ್ನಿಯವರು ಉಯ್ಯಾಲೆಯಲ್ಲಿ ದತ್ತಾತ್ರೇಯರನ್ನು ಇಟ್ಟು ತೂಗುವ  ಮೂಲಕ ದತ್ತ ಜಯಂತಿ ಉತ್ಸವವನ್ನು ಉದ್ಘಾಟಿಸಿದರು.



ದತ್ತ ಜಯಂತಿ ಉತ್ಸವದ ಅಂಗವಾಗಿ  27ನೇ ಡಿಸೆಂಬರ್ 2012, ಗುರುವಾರದಂದು  ದೆಹಲಿಯ ಸಾಯಿ ಭಕ್ತರಾದ ಶ್ರೀ.ರಾಜೇಂದ್ರ ದಾಂಗ್ ರವರು ನೀಡಿದ ಕಾಣಿಕೆಯಿಂದ ಶಿರಡಿ ಸಾಯಿಬಾಬಾ ಸಂಸ್ಥಾನದ ಸಮಾಧಿ ಮಂದಿರ ಹಾಗೂ ಪ್ರಾಂಗಣವನ್ನು ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು.



 ಕನ್ನಡ ಅನುವಾದ: ಶ್ರೀಕಂಠ ಶರ್ಮ 

Wednesday, December 5, 2012

ಬಹುಮುಖ ಪ್ರತಿಭೆಯ ಸಾಯಿಬಂಧು ಶ್ರೀ.ಎಸ್.ಲಕ್ಷ್ಮೀನರಸಿಂಹನ್ - ಕೃಪೆ: ಸಾಯಿಅಮೃತಧಾರಾ.ಕಾಂ




ಶ್ರೀ.ಎಸ್.ಲಕ್ಷ್ಮೀನರಸಿಂಹನ್ ರವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರು ಹಾಗೂ 2002 ರಲ್ಲಿ ಪ್ರಾರಂಭಿಸಲಾಗಿರುವ ತಮಿಳು ತ್ರೈಮಾಸಿಕ ಪತ್ರಿಕೆಯಾದ "ಶ್ರೀ.ಸಾಯಿ ಮಾರ್ಗಮ್" ನ ಸಂಪಾದಕರು.  ಇವರು ಖ್ಯಾತ ಬರಹಗಾರರಾಗಿದ್ದು ಸಾಯಿಬಾಬಾರವರ ಬಗ್ಗೆ ತಮಿಳಿನಲ್ಲಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅಷ್ಟೇ ಅಲ್ಲದೇ, ಚನ್ನೈನ "ಸಾಯಿ ಪ್ರಚಾರ ಸೇವಾ ಟ್ರಸ್ಟ್" ಹಾಗೂ "ಶಿರಡಿ ಸಾಯಿ ಲಿಖಿತ ನಾಮಜಪ ಬ್ಯಾಂಕ್" ನ ಸಂಸ್ಥಾಪಕರೂ ಆಗಿದ್ದಾರೆ.


ಶ್ರೀ.ಎಸ್.ಲಕ್ಷ್ಮೀನರಸಿಂಹನ್ ರವರು 17ನೇ ಡಿಸೆಂಬರ್ 1967 ರಂದು ತಮಿಳುನಾಡಿನ ಪುದುಕೋಟೆ ಪಟ್ಟಣ ಹಾಗೂ ಜಿಲ್ಲೆಯಲ್ಲಿ ಶ್ರೀಮತಿ.ಎಸ್.ಸುಬ್ಬಲಕ್ಷ್ಮೀ ಹಾಗೂ ದಿವಂಗತ ಶ್ರೀ.ಆರ್.ಸುಬ್ರಮಣಿಯನ್ ರವರ ಪುತ್ರನಾಗಿ ಜನಿಸಿರುತ್ತಾರೆ. ಇವರ ತಂದೆಯವರು ಪುದುಕೋಟೆಯ ಪೂಜ್ಯ ಶ್ರೀ.ಅಪ್ಪಾ ಗೋಪಾಲಕೃಷ್ಣ ಭಾಗವತರ್ ರವರ ಪುತ್ರ ಪೂಜ್ಯ ಶ್ರೀ.ಸಂಜೀವಿ ಭಾಗವತರ್ ರವರ ಸಮಕಾಲೀನರಾಗಿದ್ದರು.

ಇವರು 1988 ನೇ ಇಸವಿಯಲ್ಲಿ ತಮಿಳುನಾಡಿನ ತಿರುಚಿಯ ಭಾರತೀದಾಸನ್ ವಿಶ್ವವಿದ್ಯಾಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಬಿ.ಎ.ಪದವಿಯನ್ನು ಗಳಿಸಿರುತ್ತಾರೆ.


ಇವರು ತಮ್ಮದೇ ಸ್ವಂತ ಪತ್ರಿಕೆಯಾದ ಶ್ರೀ ಸಾಯಿ ಮಾರ್ಗಮ್ ನ ಸಂಪಾದಕರಾಗುವುದಕ್ಕೆ ಪೂರ್ವದಲ್ಲಿ ಹಿರಿಯ ಪತ್ರಕರ್ತರಾಗಿ 15 ವರ್ಷಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ.


ಇವರು ಶಿರಡಿ ಸಾಯಿಬಾಬಾರವರ ಸಮಕಾಲೀನ ಭಕ್ತರುಗಳಾದ ಹೇಮಾಡಪಂತ, ಮಹಾಳಸಾಪತಿ, ಶ್ಯಾಮ, ನಿಮೋಣಕರ್, ತರ್ಕಡ್ ಮತ್ತು ಲಕ್ಷ್ಮೀಬಾಯಿ ಶಿಂಧೆಯ ವಂಶಸ್ಥರನ್ನು ಮುಖತಃ ಭೇಟಿ ಮಾಡಿ ಅವರ ಸಂದರ್ಶನವನ್ನು ಮಾಡಿರುತ್ತಾರೆ. 


ಇವರು ಪ್ರಖ್ಯಾತ ಸಾಯಿ ವ್ಯಕ್ತಿಗಳಾದ ಗುರೂಜಿ ಶ್ರೀ.ಸಿ.ಬಿ.ಸತ್ಪತಿ, ನಾರಾಯಣ ಬಾಬಾ, ಕರೂರು ನರಸಿಂಹ ಬಾಬಾ, ಕುಮಾರ ಬಾಬಾ, ಸಾಯಿಮಾತಾ ಶಿವ ಬೃಂದಾದೇವಿ, ಮಲೇಶಿಯಾ ವಾಸುದೇವನ್ ಮತ್ತು ಸಾಯಿಬಾಬಾ ಸಂಸ್ಥಾನದ ಪದಾಧಿಕಾರಿಗಳನ್ನು ಮುಖತಃ ಭೇಟಿ ಮಾಡಿ ಅವರ ಸಂದರ್ಶನವನ್ನು ಮಾಡಿರುತ್ತಾರೆ. 


ಇವರು ಸಾಯಿಬಾಬಾರವರ ಬಗ್ಗೆ ತಮಿಳಿನಲ್ಲಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳೆಂದರೆ: Bayappadadhe Naan Irukkiren, Kadavulidam Pesum Kavidhaihal,Shirdikku Izukkappatta Sittukkuruvihal,Baba Amirtham,Baba Yugam,Sai Madham,Thamizaha Baba Aalayangal,Baba Irukka Bayam Een?,Sainath Bagavatham,Sai Dhyanam ಮತ್ತು Viboothi Baba Parayanam.


ಇವರು ಸಾಯಿಬಾಬಾರವರ ಬಗ್ಗೆ ಅಷ್ಟೇ ಅಲ್ಲದೇ ಇತರ ವಿಷಯಗಳ ಬಗ್ಗೆಯೂ ಅನೇಕ ಪುಸ್ತಕಗಳನ್ನು ಬರಿದಿದ್ದಾರೆ: ಅವುಗಳೆಂದರೆ: Pambu Chuvaduhal - a collection of Poetry,Jayanarasimhan Kathaihal,Ezuththalar Dairy,Penniam Samookam ಮತ್ತು Kelvi Neram.


ಇವರು ಸಾಯಿಬಾಬಾರವರ ಬಗ್ಗೆ ಬರೆಯಲಾದ ಮೂರು ಪುಸ್ತಗಳ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಅವುಗಳೆಂದರೆ: Baba Swami Ponmozihal,Punya Karma by Guruji C.P.Sathpathy ಮತ್ತು Sathguru Charanam.


ಇವರು ತಮ್ಮದೇ ಆದ ಶ್ರೀ ಸಾಯಿ ಮಾರ್ಗಮ್ ಎಂಬ ಹೆಸರಿನ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ ಅದರ ಮುಖಾಂತರ Sath Sarithiram Kattum Padhai,SaiMananam – B.V.Narasimha Swamiji,Sai Sakthiyum Prabancha Sakthiyum ಮತ್ತು Saibaba Kadhaihal ಎಂಬ ನಾಲ್ಕು ಗ್ರಂಥಗಳನ್ನು ಪ್ರಕಾಶನಗೊಳಿಸಿರುತ್ತಾರೆ.


ಇವರು ಸಾಯಿ ಮಾರ್ಗಮ್ ತ್ರೈಮಾಸಿಕ ಪತ್ರಿಕೆಯ ಅಡಿಯಲ್ಲಿ "Sri Sai Marggam Diwali Malarhal Pathham Aandu Sadhanai Malar" ಎಂಬ ದೀಪಾವಳಿ ವಿಶೇಷ ಸಂಚಿಕೆಯನ್ನು ಹೊರತಂದಿದ್ದಾರೆ.


ಇವರು "ಶಿರಡಿ ಸಾಯಿ ಲಿಖಿತ ನಾಮಜಪ ಬ್ಯಾಂಕ್"  ನ ಅಡಿಯಲ್ಲಿ "Arulum Porulum pera…." ಎಂಬ ಹೆಸರಿನ ನಾಮಜಪ ಬ್ಯಾಂಕ್ ಅನ್ನು ಪ್ರಾರಂಭಿಸಿ ಚನ್ನೈ ನಗರದಲ್ಲಿ ಪ್ರತಿ ವರ್ಷ  "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ವಿಶೇಷ ನಾಮಜಪ ಯಜ್ಞಗಳನ್ನು ನಡೆಸುತ್ತಾ ಬಂದಿದ್ದಾರೆ.


ಇವರು ಪ್ರಖ್ಯಾತ ಗಾಯಕ ಮಲೇಶಿಯಾ ವಾಸುದೇವನ್ ರವರು ಹಾಡಿರುವ ಸಾಯಿಬಾಬಾರವರ ಬಗ್ಗೆ ಹಾಡಿರುವ "ಸಾಯಿ ನವಜ್ಯೋತಿ" ಎಂಬ ಆಡಿಯೋ ಸಿಡಿಯನ್ನು ಹೊರತಂದಿದ್ದಾರೆ.


ಇವರು ತಮ್ಮ "ಸಾಯಿ ಪ್ರಚಾರ ಸೇವಾ ಟ್ರಸ್ಟ್" ನ ಅಡಿಯಲ್ಲಿ ದೇಶದ ವಿವಿಧ ಕಡೆಗಳಲ್ಲಿ ವಿಶೇಷ ಹೋಮಗಳು, ಭಜನೆಗಳು, ಮತ್ತು ಅಭಿಷೇಕಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳುತ್ತಿದ್ದಾರೆ; ಹಲವಾರು ಬಡ ವಿದ್ಯಾರ್ಥಿಗಳ ಶಿಕ್ಷಣ ವೆಚ್ಚವನ್ನು ಭರಿಸುತ್ತಿದ್ದಾರೆ; ಸಾಯಿಬಾಬಾರವರ ವಿಶೇಷ ಉತ್ಸವದ ಸಂದರ್ಭಗಳಲ್ಲಿ ಅನ್ನದಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ; ಹಾಗೂ ಪ್ರತಿ ವರ್ಷ ಹಲವಾರು ಬಾರಿ ಶಿರಡಿ ಯಾತ್ರೆಯನ್ನು ಕೈಗೊಂಡು ಅನೇಕ ಹೊಸ ಸಾಯಿಭಕ್ತರು ರೂಪುಗೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ಅತ್ಯುತ್ತಮ ರೀತಿಯಲ್ಲಿ ಸಾಯಿ ಪ್ರಚಾರವನ್ನು ತಮ್ಮದೇ ಆದ ರೀತಿಯಲ್ಲಿ ಮಾಡುತ್ತಾ ಬಂದಿದ್ದಾರೆ.


ಇವರು ಶ್ರೀ ಸಾಯಿ ಮಾರ್ಗಮ್ ಪ್ರಶಸ್ತಿಯನ್ನು ಪ್ರಾರಂಭಿಸಿ ಅದರ ಅಡಿಯಲ್ಲಿ ಅನೇಕ ಪ್ರಸಿದ್ಧ ಸಾಯಿ ವ್ಯಕ್ತಿಗಳ ಸನ್ಮಾನ ಮಾಡಿದ್ದಾರೆ.


ಇವರು ತಮಿಳು ಪತ್ರಿಕಾ ರಂಗಕ್ಕೆ ಸಲ್ಲಿಸಿದ ನಿಸ್ವಾರ್ಥ ಸೇವೆಗಾಗಿ ಇವರಿಗೆ "Idhazial Chemmal" ಎಂಬ ಪ್ರತಿಷ್ಟಿತ ಪ್ರಶಸ್ತಿ ಲಭಿಸಿರುತ್ತದೆ. ಅಲ್ಲದೇ, ಬೆಂಗಳೂರಿನ ಸಾಯಿ ಮಹಾಭಕ್ತರೂ, ಪರಮಪೂಜ್ಯ ಶ್ರೀ.ಬಿ.ವಿ.ನರಸಿಂಹ ಸ್ವಾಮಿಗಳ ಶಿಷ್ಯರೂ ಹಾಗೂ ಬೆಂಗಳೂರಿನ ತ್ಯಾಗರಾಜ ನಗರದಲ್ಲಿರುವ "ಸಾಯಿ ಆಧ್ಯಾತ್ಮಿಕ ಕೇಂದ್ರ" ದ ಸಂಸ್ಥಾಪಕರೂ ಆದ ಸಾಯಿಪಾದಾನಂದ ಶ್ರೀ.ರಾಧಾಕೃಷ್ಣ ಸ್ವಾಮೀಜಿಯವರ ಶಿಷ್ಯರಾದ ದಿವಂಗತ ಶ್ರೀ.ಸಾಯಿಆನಂದರವರಿಂದ "ಸಾಯಿ ಆತ್ಮ ಸ್ವರೂಪಿ" ಎಂಬ ಬಿರುದಿಗೆ ಭಾಜನರಾಗಿದ್ದಾರೆ. 


ಇವರು ತಮ್ಮ "ಸಾಯಿ ಪ್ರಚಾರ ಸೇವಾ ಟ್ರಸ್ಟ್" ನ ಅಡಿಯಲ್ಲಿ ತಮಿಳುನಾಡಿನ ಚನ್ನೈ ನಗರದ ಸಮೀಪದಲ್ಲಿರುವ ಕಂಚೀಪುರಂ ನಲ್ಲಿ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಪಿರಮಿಡ್ ಆಕಾರದಲ್ಲಿ ಹಸಿರು ಅಮೃತಶಿಲೆಯ ಸಾಯಿಬಾಬಾ ಮಂದಿರವನ್ನು ನಿರ್ಮಾಣ ಮಾಡುತ್ತಿದ್ದಾರೆ.




ಇವರು ಶ್ರೀಮತಿ.ಎಲ್.ಪದ್ಮಪ್ರಭಾರವರನ್ನು ವಿವಾಹವಾಗಿದ್ದು ಇವರಿಗೆ ಶ್ರೀಮತಿ.ಎಲ್.ಸುಹೃದ ಹಾಗೂ ಶ್ರೀಮತಿ.ಎಲ್.ಸಾಯೀಶ್ವರೀ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.


ಪ್ರಸ್ತುತ ಇವರು ಚನ್ನೈ ನಗರದ ಸ್ವಗೃಹದಲ್ಲಿ  ತಮ್ಮ ಧರ್ಮಪತ್ನಿ ಹಾಗೂ ಮಕ್ಕಳೊಂದಿಗೆ ಸುಖೀಜೀವನವನ್ನು ನಡೆಸುತ್ತಿದ್ದಾರೆ.

ಶ್ರೀ.ಎಸ್.ಲಕ್ಷ್ಮೀನರಸಿಂಹನ್ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:


ವಿಳಾಸ:

ಶ್ರೀ.ಎಸ್.ಲಕ್ಷ್ಮೀನರಸಿಂಹನ್
ನಂ.2ಎ/2,  ತಾರಾಚಂದ ನಗರ ಮುಖ್ಯರಸ್ತೆ,
ವಿರುಗಂಬಾಕ್ಕಂ, 
ಚನ್ನೈ - 600 092,, 
ತಮಿಳುನಾಡು, ಭಾರತ

ದೂರವಾಣಿ ಸಂಖ್ಯೆಗಳು:

+91 44 2377 3311 (ಮನೆ)/+91 98403 25245 (ಮೊಬೈಲ್)/+91 44 4255 0604 (ಕಛೇರಿ)

ಇ-ಮೈಲ್ ವಿಳಾಸ:

slnsaimarg@yahoo.com/sailakshminarasimhan@gmail.com


ಅಂತರ್ಜಾಲ ತಾಣ:

http://saimarggam.blogspot.in/


ಕನ್ನಡ ಅನುವಾದ: ಶ್ರೀಕಂಠ ಶರ್ಮ