Wednesday, December 28, 2011

ಬೆಂಗಳೂರಿನ ಎಸ್.ಎಂ.ಎಸ್.ಟೂರ್ಸ್ ಅಂಡ್ ಟ್ರಾವಲ್ಸ್ ನ ವತಿಯಿಂದ ಶಿರಡಿ, ಪಂಡರಾಪುರ ಮತ್ತು ಶನಿ  ಶಿಂಗಣಾಪುರ
  ಯಾತ್ರೆಯ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ  


ಬೆಂಗಳೂರಿನ ಎಸ್.ಎಂ.ಎಸ್.ಟೂರ್ಸ್ ಅಂಡ್ ಟ್ರಾವಲ್ಸ್ ಶಿರಡಿ, ಪಂಡರಾಪುರ ಮತ್ತು ಶನಿ  ಶಿಂಗಣಾಪುರ ಯಾತ್ರೆಯನ್ನು ನಿಯಮಿತವಾಗಿ ಆಯೋಜಿಸುತ್ತಾ ಬಂದಿರುತ್ತದೆ. ಅದರ ವಿವರಗಳನ್ನು ಈ ಕೆಳಗೆ ಲಗತ್ತಿಸಿರುವ  ಕರಪತ್ರದಲ್ಲಿ ಸಾಯಿಭಕ್ತರು ಪಡೆಯಬಹುದಾಗಿದೆ. 



ಕನ್ನಡ ಅನುವಾದ: ಶ್ರೀಕಂಠ ಶರ್ಮ


Monday, December 26, 2011

60 ಮಂದಿ ಅಮೇರಿಕಾ ಸಾಯಿಭಕ್ತರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ 

60 ಮಂದಿ ಅಮೇರಿಕಾ ಸಾಯಿಭಕ್ತರುಗಳು ಅವರ ಧರ್ಮಗುರುಗಳಾದ ಶ್ರೀ.ಮುರ್ಶೀದಾ ಕರೋಲ್ ಕಾರ್ನರ್ ರವರೊಂದಿಗೆ ಇದೇ ತಿಂಗಳ 24ನೇ ಡಿಸೆಂಬರ್ 2011, ಶನಿವಾರ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಸಮಾಧಿಯ ದರ್ಶನದ ನಂತರ ಅವರುಗಳನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಪರವಾಗಿ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು ಅಭಿನಂದಿಸಿದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ
ಭಾರತೀಯ ನೌಕಾಪಡೆ ಮುಖ್ಯಸ್ಥರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ 

ಭಾರತೀಯ ನೌಕಾಪಡೆಯ ಮುಖ್ಯಸ್ಥರಾದ ಚೀಫ್ ಅಡ್ಮಿರಲ್ ಶ್ರೀ.ನಿರ್ಮಲ್ ವರ್ಮರವರು ಇದೇ ತಿಂಗಳ 22ನೇ ಡಿಸೆಂಬರ್ 2011, ಗುರುವಾರ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವರಾದ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಶ್ರೀ.ಬಾಳಾಸಾಹೇಬ್ ವಿಕ್ಹೆ ಪಾಟೀಲ್ ರವರು ಕೂಡ ಉಪಸ್ಥಿತರಿದ್ದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

Sunday, December 18, 2011

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಮುಂಬೈನಲ್ಲಿ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಆಯೋಜನೆ - 3ನೇ ದಿನದ ವರದಿ - ಕೃಪೆ:ಸಾಯಿಅಮೃತಧಾರಾ.ಕಾಂ 


ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ 3ನೇ ಹಾಗೂ ಕೊನೆಯ  ದಿನವಾದ 17ನೇ ಡಿಸೆಂಬರ್ 2011, ಶನಿವಾರ ಮೊಸರಿನ ಗಡಿಗೆ (ದಹಿ ಹಂಡಿ) ಒಡೆಯುವ ಕಾರ್ಯಕ್ರಮವನ್ನು ನಡೆಸಲಾಯಿತು.
 

 
ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ 3ನೇ ಹಾಗೂ ಕೊನೆಯ  ದಿನವಾದ 17ನೇ ಡಿಸೆಂಬರ್ 2011, ಶನಿವಾರ  ಶ್ರೀ ಸಾಯಿ ಸಚ್ಚರಿತ್ರೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. 
 
 
 
ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ 3ನೇ ಹಾಗೂ ಕೊನೆಯ  ದಿನವಾದ 17ನೇ ಡಿಸೆಂಬರ್ 2011, ಶನಿವಾರ ದಂದು ಕೇಂದ್ರ ಶಕ್ತಿ ಖಾತೆ ಸಚಿವರಾದ ಶ್ರೀ.ಸುಶೀಲ್ ಕುಮಾರ್ ಶಿಂಧೆಯವರು ಭೇಟಿ ನೀಡಿ ಸಾಯಿಬಾಬಾರವರ ಚಿತ್ರಪಟ ಮತ್ತು ಪವಿತ್ರ ಪಾದುಕೆಗಳ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆ ಮತ್ತು ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ರವರುಗಳು ಕೂಡ ಉಪಸ್ಥಿತರಿದ್ದರು. 
 
 
 
 
ಇದೇ ತಿಂಗಳ 17ನೇ ಡಿಸೆಂಬರ್ 2011, ಶನಿವಾರದಂದು ಮುಂಬೈನಲ್ಲಿ ನಡೆದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನ ಹೊರಡಿಸಿದ ಪತ್ರಿಕಾ ಪ್ರಕಟಣೆಯನ್ನು ಈ ಕೆಳಗೆ ಲಗತ್ತಿಸಲಾಗಿದೆ.  
 
 
 
 ಕನ್ನಡ ಅನುವಾದ: ಶ್ರೀಕಂಠ ಶರ್ಮ 

Saturday, December 17, 2011

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಮುಂಬೈನಲ್ಲಿ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಆಯೋಜನೆ - 3ನೇ ದಿನದ ವರದಿ - ಕೃಪೆ:ಸಾಯಿಅಮೃತಧಾರಾ.ಕಾಂ 

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ 2ನೇ   ದಿನವಾದ 16ನೇ ಡಿಸೆಂಬರ್ 2011, ಶುಕ್ರವಾರ ಸಂಜೆ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ನಡೆದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮದಲ್ಲಿ ಖ್ಯಾತ ಸಾಯಿ ಭಜನ ಗಾಯಕಿ ಶ್ರೀಮತಿ.ಕವಿತಾ ಕೃಷ್ಣಮುರ್ತಿಯವರು ಕಾರ್ಯಕ್ರಮವನ್ನು ನೀಡಿ ನೆರೆದಿದ್ದ ಸಾಯಿ ಭಕ್ತರನ್ನು ರಂಜಿಸಿದರು.  
 

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ 2ನೇ   ದಿನವಾದ 16ನೇ ಡಿಸೆಂಬರ್ 2011, ಶುಕ್ರವಾರ ಸಂಜೆ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ನಡೆದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮದಲ್ಲಿ ಖ್ಯಾತ ಸಾಯಿ ಭಜನ ಗಾಯಕಿ ಶ್ರೀಮತಿ.ಪದ್ಮಜಾ ಫೆನಾನಿಯವರು ಕಾರ್ಯಕ್ರಮವನ್ನು ನೀಡಿ ನೆರೆದಿದ್ದ ಸಾಯಿ ಭಕ್ತರನ್ನು ರಂಜಿಸಿದರು.


ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ 2ನೇ   ದಿನವಾದ 16ನೇ ಡಿಸೆಂಬರ್ 2011, ಶುಕ್ರವಾರ ಸಂಜೆ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ನಡೆದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮದಲ್ಲಿ ಖ್ಯಾತ ಸಾಯಿ ಭಜನ ಗಾಯಕ ಶ್ರೀ.ಸಚ್ಚಿದಾನಂದ ಅಪ್ಪಾರವರು  ಕಾರ್ಯಕ್ರಮವನ್ನು ನೀಡಿ ನೆರೆದಿದ್ದ ಸಾಯಿ ಭಕ್ತರನ್ನು ರಂಜಿಸಿದರು.


ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ 2ನೇ   ದಿನವಾದ 16ನೇ ಡಿಸೆಂಬರ್ 2011, ಶುಕ್ರವಾರ ಸಂಜೆ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ನಡೆದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮದಲ್ಲಿ ಖ್ಯಾತ ಸಾಯಿ ಭಜನ ಗಾಯಕ ಶ್ರೀ.ಸಿದ್ಧಾಂತ್ ಬೋಸ್ಲೆಯವರು ಕಾರ್ಯಕ್ರಮವನ್ನು ನೀಡಿ ನೆರೆದಿದ್ದ ಸಾಯಿ ಭಕ್ತರನ್ನು ರಂಜಿಸಿದರು.


ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ 2ನೇ   ದಿನವಾದ 16ನೇ ಡಿಸೆಂಬರ್ 2011, ಶುಕ್ರವಾರ ಸಂಜೆ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ನಡೆದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮದಲ್ಲಿ ಖ್ಯಾತ ಸಾಯಿ ಭಜನ ಗಾಯಕಿ ಶ್ರೀಮತಿ.ಸಾಧನಾ ಸರ್ಗಮ್ ರವರು ಕಾರ್ಯಕ್ರಮವನ್ನು ನೀಡಿ ನೆರೆದಿದ್ದ ಸಾಯಿ ಭಕ್ತರನ್ನು ರಂಜಿಸಿದರು. 


ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣ ನಡೆದ ಸ್ಥಳದ ಎರಡು ದೃಶ್ಯಾವಳಿಗಳನ್ನು ಸಾಯಿಭಕ್ತರಿಗೊಸ್ಕರ ಈ ಕೆಳಗಡೆ ನೀಡಲಾಗಿದೆ. 



ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ 2ನೇ   ದಿನವಾದ 16ನೇ ಡಿಸೆಂಬರ್ 2011, ಶುಕ್ರವಾರ ಸಂಜೆ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ನಡೆದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮದಲ್ಲಿ ಖ್ಯಾತ ಸಾಯಿ ಭಜನ ಗಾಯಕ ಶ್ರೀ.ಅಭಿಜಿತ್ ಸಾವಂತ್ ರವರು ಕಾರ್ಯಕ್ರಮವನ್ನು ನೀಡಿ ನೆರೆದಿದ್ದ ಸಾಯಿ ಭಕ್ತರನ್ನು ರಂಜಿಸಿದರು.


ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ 2ನೇ   ದಿನವಾದ 16ನೇ ಡಿಸೆಂಬರ್ 2011, ಶುಕ್ರವಾರ ಸಂಜೆ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ನಡೆದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮದಲ್ಲಿ ಖ್ಯಾತ ಸಾಯಿ ಭಜನ ಗಾಯಕ ಶ್ರೀ.ಸುದೇಶ್ ಬೋಸ್ಲೆಯವರು ಕಾರ್ಯಕ್ರಮವನ್ನು ನೀಡಿ ನೆರೆದಿದ್ದ ಸಾಯಿ ಭಕ್ತರನ್ನು ರಂಜಿಸಿದರು.


ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ 2ನೇ   ದಿನವಾದ 16ನೇ ಡಿಸೆಂಬರ್ 2011, ಶುಕ್ರವಾರ ಸಂಜೆ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ನಡೆದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮದಲ್ಲಿ ಖ್ಯಾತ ಸಾಯಿ ಭಜನ ಗಾಯಕ ಶ್ರೀ.ಸುರೇಶ ವಾಡೇಕರ್ ರವರು ಕಾರ್ಯಕ್ರಮವನ್ನು ನೀಡಿ ನೆರೆದಿದ್ದ ಸಾಯಿ ಭಕ್ತರನ್ನು ರಂಜಿಸಿದರು.


ಇದೇ ತಿಂಗಳ 17ನೇ ಡಿಸೆಂಬರ್ 2011, ಶನಿವಾರದಂದು ಮುಂಬೈನಲ್ಲಿ ನಡೆದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನ ಹೊರಡಿಸಿದ ಪತ್ರಿಕಾ ಪ್ರಕಟಣೆಯನ್ನು ಈ ಕೆಳಗೆ ಲಗತ್ತಿಸಲಾಗಿದೆ.  


ಕನ್ನಡ ಅನುವಾದ: ಶ್ರೀಕಂಠ ಶರ್ಮ

Friday, December 16, 2011

ಗೋವಾ ರಾಜ್ಯದ ಕಂದಾಯ ಸಚಿವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ  

ಗೋವಾ ರಾಜ್ಯದ ಕಂದಾಯ ಸಚಿವರಾದ ಶ್ರೀ.ಫಿಲಿಪ್ ಡಿಸೌಜಾರವರು ಇದೇ ತಿಂಗಳ 16ನೇ ಡಿಸೆಂಬರ್ 2011, ಶುಕ್ರವಾರ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ
ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಮುಂಬೈನಲ್ಲಿ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಆಯೋಜನೆ - 2ನೇ ದಿನದ ವರದಿ - ಕೃಪೆ:ಸಾಯಿಅಮೃತಧಾರಾ.ಕಾಂ 
ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷರಾದ ಶ್ರೀ.ರಾಜ್ ಥಾಕ್ರೆಯವರು ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಎರಡನೇ ದಿನವಾದ 16ನೇ ಡಿಸೆಂಬರ್ 2011, ಶುಕ್ರವಾರ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣಕ್ಕೆ ಭೇಟಿ ನೀಡಿ ಸಾಯಿಬಾಬಾರವರ ಚಿತ್ರಪಟ ಮತ್ತು ಪವಿತ್ರ ಪಾದುಕೆಗಳ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ರವರು ಕೂಡ ಉಪಸ್ಥಿತರಿದ್ದರು. 



ದರ್ಶನದ ನಂತರ ಶ್ರೀ.ರಾಜ್ ಥಾಕ್ರೆಯವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆಯವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶ್ರೀಮತಿ.ರಾಜಶ್ರೀ ಸಾಸನೆ, ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ಮತ್ತು ಉಪ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಡಾ.ಯಶವಂತರಾವ್ ಮಾನೆಯವರುಗಳು ಕೂಡ ಉಪಸ್ಥಿತರಿದ್ದರು. 


ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಎರಡನೇ ದಿನವಾದ 16ನೇ ಡಿಸೆಂಬರ್ 2011, ಶುಕ್ರವಾರ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದ ಸಾವಿರಾರು ಸಾಯಿ ಭಕ್ತರು ಪಾಲ್ಗೊಂಡು ಪವಿತ್ರ ಸಚ್ಚರಿತ್ರೆಯ ಪಾರಾಯಣವನ್ನು ಮಾಡಿದರು. 


ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಮೊದಲ  ದಿನವಾದ 15ನೇ ಡಿಸೆಂಬರ್ 2011, ಗುರುವಾರ ಸಂಜೆ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ನಡೆದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮದಲ್ಲಿ ಖ್ಯಾತ ಸಾಯಿ ಭಜನ ಗಾಯಕ ಶ್ರೀ.ಅಜಿತ್ ಕಡ್ಕಡೆಯವರು ಕಾರ್ಯಕ್ರಮವನ್ನು ನೀಡಿ ನೆರೆದಿದ್ದ ಸಾಯಿ ಭಕ್ತರನ್ನು ರಂಜಿಸಿದರು.  


ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಮೊದಲ  ದಿನವಾದ 15ನೇ ಡಿಸೆಂಬರ್ 2011, ಗುರುವಾರ ಸಂಜೆ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ನಡೆದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮದಲ್ಲಿ ಖ್ಯಾತ ಸಾಯಿ ಭಜನ ಗಾಯಕಿ ಶ್ರೀಮತಿ.ಅನುರಾಧಾ ಪೌಡ್ವಾಲ್ ಅವರು ಕಾರ್ಯಕ್ರಮವನ್ನು ನೀಡಿ ನೆರೆದಿದ್ದ ಸಾಯಿ ಭಕ್ತರನ್ನು ರಂಜಿಸಿದರು. 


ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಮೊದಲ  ದಿನವಾದ 15ನೇ ಡಿಸೆಂಬರ್ 2011, ಗುರುವಾರ ಸಂಜೆ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ನಡೆದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮದಲ್ಲಿ ಖ್ಯಾತ ಸಾಯಿ ಭಜನ ಗಾಯಕ ಶ್ರೀ.ಅನುಪ್ ಜಲೋಟಾ ಅವರು  ಕಾರ್ಯಕ್ರಮವನ್ನು ನೀಡಿ ನೆರೆದಿದ್ದ ಸಾಯಿ ಭಕ್ತರನ್ನು ರಂಜಿಸಿದರು. 


ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಮೊದಲ  ದಿನವಾದ 15ನೇ ಡಿಸೆಂಬರ್ 2011, ಗುರುವಾರ ಸಂಜೆ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ನಡೆದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮದಲ್ಲಿ ಖ್ಯಾತ ಸಾಯಿ ಭಜನ ಗಾಯಕ ಶ್ರೀ.ಮನ್ಹರ್ ಉದಾಸ್ ರವರು   ಕಾರ್ಯಕ್ರಮವನ್ನು ನೀಡಿ ನೆರೆದಿದ್ದ ಸಾಯಿ ಭಕ್ತರನ್ನು ರಂಜಿಸಿದರು.  


ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಮೊದಲ  ದಿನವಾದ 15ನೇ ಡಿಸೆಂಬರ್ 2011, ಗುರುವಾರ ಸಂಜೆ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ನಡೆದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮದಲ್ಲಿ ಖ್ಯಾತ ಸಾಯಿ ಭಜನ ಗಾಯಕ ಶ್ರೀ.ರವೀಂದ್ರ ಸಾಥೆಯವರು ಕಾರ್ಯಕ್ರಮವನ್ನು ನೀಡಿ ನೆರೆದಿದ್ದ ಸಾಯಿ ಭಕ್ತರನ್ನು ರಂಜಿಸಿದರು. 


ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಮೊದಲ  ದಿನವಾದ 15ನೇ ಡಿಸೆಂಬರ್ 2011, ಗುರುವಾರ ಸಂಜೆ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ನಡೆದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮದಲ್ಲಿ ಖ್ಯಾತ ಸಾಯಿ ಭಜನ ಗಾಯಕಿ ಶ್ರೀಮತಿ.ಉತ್ತರಾ ಕೇಳ್ಕರ್ ರವರು  ಕಾರ್ಯಕ್ರಮವನ್ನು ನೀಡಿ ನೆರೆದಿದ್ದ ಸಾಯಿ ಭಕ್ತರನ್ನು ರಂಜಿಸಿದರು.  


ಇದೇ ತಿಂಗಳ 16ನೇ ಡಿಸೆಂಬರ್ 2011, ಶುಕ್ರವಾರದಂದು ಮುಂಬೈನಲ್ಲಿ ನಡೆದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನ ಹೊರಡಿಸಿದ ಪತ್ರಿಕಾ ಪ್ರಕಟಣೆಯನ್ನು ಈ ಕೆಳಗೆ ಲಗತ್ತಿಸಲಾಗಿದೆ. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, December 15, 2011

ನೋಯ್ಡಾದ ಸಾಯಿಭಕ್ತರಿಂದ ಸಾಯಿಬಾಬಾ ಸಂಸ್ಥಾನಕ್ಕೆ  ಚಿನ್ನದ ಕಿರೀಟದ ಕಾಣಿಕೆ - ಕೃಪೆ: ಸಾಯಿಅಮೃತಧಾರಾ.ಕಾಂ  

ನೋಯ್ಡಾದ ಸಾಯಿಭಕ್ತರಾದ ಶ್ರೀ.ಮನೋಜ್ ಗೌರ್ ರವರು ಇದೇ ತಿಂಗಳ 15ನೇ ಡಿಸೆಂಬರ್ 2011, ಗುರುವಾರ  ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾ ಸಂಸ್ಥಾನಕ್ಕೆ 839.770 ಗ್ರಾಂ ತೂಕದ 22 ಲಕ್ಷ 81 ಸಾವಿರದ 655 ರುಪಾಯಿ ಬೆಲೆ ಬಾಳುವ ಚಿನ್ನದ ಕಿರೀಟವನ್ನು ಕಾಣಿಕೆಯಾಗಿ ನೀಡಿದರು. 
 
 




ಕನ್ನಡ ಅನುವಾದ: ಶ್ರೀಕಂಠ ಶರ್ಮ
ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಮುಂಬೈನಲ್ಲಿ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಆಯೋಜನೆ - ಕೃಪೆ:ಸಾಯಿಅಮೃತಧಾರಾ.ಕಾಂ  

ಇದೇ ತಿಂಗಳ 15ನೇ ಡಿಸೆಂಬರ್ 2011, ಗುರುವಾರದಂದು ಮುಂಬೈನಲ್ಲಿ ನಡೆದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಅಂಗವಾಗಿ ಶಿರಡಿ ಸಾಯಿಬಾಬಾರವರ ಚಿತ್ರಪಟ, ವೀಣೆ ಮತ್ತು ಶ್ರೀ ಸಾಯಿ ಸಚ್ಚರಿತ್ರೆ (ಪೋತಿ)ಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. 



ಇದೇ ತಿಂಗಳ 15ನೇ ಡಿಸೆಂಬರ್ 2011, ಗುರುವಾರದಂದು ಮುಂಬೈನಲ್ಲಿ ನಡೆದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆಯವರು ಶ್ರೀ ಸಾಯಿ ಸಚ್ಚರಿತ್ರೆ (ಪೋತಿ) ಯ ಪೂಜೆಯನ್ನು ನೆರವೇರಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಶೈಲೇಶ್ ಕುಟೆ, ಶ್ರೀ.ಅಶೋಕ್ ಕಂಬೇಕರ್, ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ.ಕಿಶೋರ್ ಮೋರೆ, ಉಪ ಕಾರ್ಯನಿರ್ವಾಹಕ ಅಧಿಕಾರಿ ಡಾ.ಯಶವಂತ್ ಮಾನೆ ಮತ್ತು ವಿಶೇಷ ಕಾರ್ಯಾಧಿಕಾರಿಗಳಾದ ಶ್ರೀ.ಪ್ರಭಾಕರ್ ಬೋರವಾಕೆಯವರುಗಳು ಕೂಡ ಉಪಸ್ಥಿತರಿದ್ದರು. 



ಇದೇ ತಿಂಗಳ 15ನೇ ಡಿಸೆಂಬರ್ 2011, ಗುರುವಾರದಂದು ಮುಂಬೈನಲ್ಲಿ ನಡೆದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಸಂದರ್ಭದಲ್ಲಿ ಶಿವಸೇನಾ ಕಾರ್ಯಾಧ್ಯಕ್ಷರಾದ ಶ್ರೀ.ಉದ್ಧವ್ ಥಾಕ್ರೆ ಮತ್ತು ಶ್ರೀಮತಿ.ರಶ್ಮಿ ಥಾಕ್ರೆಯವರುಗಳು ಶ್ರೀ ಸಾಯಿ ಸಚ್ಚರಿತ್ರೆ (ಪೋತಿ) ಯ ಪೂಜೆಯನ್ನು ನೆರವೇರಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಶೈಲೇಶ್ ಕುಟೆ ಮತ್ತು ಶ್ರೀ.ಅಶೋಕ್ ಕಂಬೇಕರ್ ಕೂಡ ಉಪಸ್ಥಿತರಿದ್ದರು. 



ಇದೇ ತಿಂಗಳ 15ನೇ ಡಿಸೆಂಬರ್ 2011, ಗುರುವಾರದಂದು ಮುಂಬೈನಲ್ಲಿ ನಡೆದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಸಂದರ್ಭದಲ್ಲಿ ಶಿವಸೇನಾ ಕಾರ್ಯಾಧ್ಯಕ್ಷರಾದ ಶ್ರೀ.ಉದ್ಧವ್ ಥಾಕ್ರೆ ಮತ್ತು ಶ್ರೀಮತಿ.ರಶ್ಮಿ ಥಾಕ್ರೆಯವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆಯವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಶೈಲೇಶ್ ಕುಟೆ ಮತ್ತು ಶ್ರೀ.ಅಶೋಕ್ ಕಂಬೇಕರ್ ಕೂಡ ಉಪಸ್ಥಿತರಿದ್ದರು.


ಇದೇ ತಿಂಗಳ 15ನೇ ಡಿಸೆಂಬರ್ 2011, ಗುರುವಾರದಂದು ಮುಂಬೈನಲ್ಲಿ ನಡೆದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನ ಹೊರಡಿಸಿದ ಪತ್ರಿಕಾ ಪ್ರಕಟಣೆಯನ್ನು ಈ ಕೆಳಗೆ ಲಗತ್ತಿಸಲಾಗಿದೆ. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Tuesday, December 13, 2011

ಸಾಯಿ ಮಹಾಭಕ್ತ - ಶ್ರೀ.ಬಾಳಾರಾಮ್ ಮಾನಕರ - ಕೃಪೆ: ಸಾಯಿಅಮೃತಧಾರಾ.ಕಾಂ  

ಶ್ರೀ.ಬಾಳಾರಾಮ್ ಮಾನಕರ್ ರವರು ಶಿರಡಿ ಸಾಯಿಬಾಬಾರವರ ಪರಮ ಭಕ್ತರಾಗಿದ್ದರು. ತಮ್ಮ ಪತ್ನಿಯು ಕಾಲವಾದ ನಂತರ ಮನೆಯ ಜವಾಬ್ದಾರಿಯನ್ನು ತಮ್ಮ ಮಗನಿಗೆ ಒಪ್ಪಿಸಿ ಶಿರಡಿಗೆ ಬಂದು ನೆಲೆಸಿದರು. ಇವರ ಅಚಲವಾದ ಭಕ್ತಿಯನ್ನು ಕಂಡು ಬಾಬಾರವರಿಗೆ ಬಹಳ ಸಂತೋಷವಾಯಿತು. 

ಸಾಯಿಬಾಬಾರವರು ಬಾಳಾರಾಮ್ ರವರಿಗೆ ಅನುಗ್ರಹ ಮಾಡಬೇಕೆಂದು ಇಚ್ಚಿಸಿ ಅವರಿಗೆ ಹನ್ನೆರಡು ರುಪಾಯಿಗಳನ್ನು ಕೊಟ್ಟು ಮಚ್ಚೀಂದ್ರಗಡದಲ್ಲಿ ವಾಸಿಸುವಂತೆ ಹೇಳಿದರು. ಮಾನಕರರಿಗೆ ಅಲ್ಲಿಗೆ ಹೋಗಲು ಇಷ್ಟವಿರಲಿಲ್ಲ. ಆದರೆ, ಬಾಬಾರವರು ಅಲ್ಲಿಗೆ ಹೋಗುವುದರಿಂದ ಪ್ರಯೋಜನವಿದೆ ಎಂದು ಹೇಳಿ ದಿನಕ್ಕೊಮ್ಮೆಯಾದರೂ ಗಡದ ಮೇಲೆ ಕುಳಿತು ಧ್ಯಾನಾಸಕ್ತರಾಗಲು ಅವರಿಗೆ ಹೇಳಿದರು. ಮಾನಕರರು ಬಾಬಾರವರ ಮಾತಿನಲ್ಲಿ ನಂಬಿಕೆ ಇಟ್ಟು ಮಚ್ಚೀಂದ್ರಗಡಕ್ಕೆ ಬಂದರು. 

ಅಲ್ಲಿನ ಪ್ರಕೃತಿಯ ರಮ್ಯವಾದ ಸೊಬಗನ್ನೂ ಮತ್ತು ಪ್ರಶಾಂತವಾದ ವಾತಾವರಣವನ್ನೂ ನೋಡಿ ಬಾಬಾರವರು ಹೇಳಿದಂತೆ ಧ್ಯಾನ ಮಾಡಲು ಯೋಗ್ಯಸ್ಥಳವೆಂದು ಭಾವಿಸಿದರು. ಕೆಲವು ದಿನಗಳ ನಂತರ ಅವರಿಗೆ ಜ್ಞಾನೋದಯವಾಯಿತು. ಸಾಮಾನ್ಯವಾಗಿ ಭಕ್ತರಿಗೆ ಸಮಾಧಿ ಸ್ಥಿತಿಯಲ್ಲಿ ದೇವರ ಸಾಕ್ಷಾತ್ಕಾರವಾಗುತ್ತದೆ. ಆದರೆ ಮಾನಕರರಿಗೆ ಸಾಮಾನ್ಯ ಸ್ಥಿತಿಯಲ್ಲಿ ದೇವರ ಸಾಕ್ಷಾತ್ಕಾರವಾಯಿತು. ಅವರಿಗೆ ಬಾಬಾರವರ ದರ್ಶನವಾಯಿತು. ಮಾನಕರರು ಬಾಬಾರವರನ್ನು ನೋಡಿ "ನನ್ನನ್ನೇಕೆ ಇಲ್ಲಿಗೆ ಬರಮಾಡಿದಿರಿ?" ಎಂದು ಕೇಳಲು ಬಾಬಾರವರು "ಶಿರಡಿಯಲ್ಲಿದ್ದಾಗ ನಿನ್ನ ಮನಸ್ಸಿನಲ್ಲಿ ಅನೇಕ ಯೋಚನೆಗಳು ಬರಲಾರಂಭಿಸಿದವು; ನಿನ್ನ ಮನಸ್ಸನ್ನು ಸ್ಥಿಮಿತಕ್ಕೆ ತರಲೋಸುಗವೇ ನಿನ್ನನ್ನು ಇಲ್ಲಿಗೆ ಬರಮಾಡಿದೆ. ಪಂಚಭೂತಗಳನ್ನೊಳಗೊಂಡ ಈ 3-1/2 ಅಡಿಯ ವ್ಯಕ್ತಿ ಶಿರಡಿಯಲ್ಲಿ ಮಾತ್ರ ಇರುವನೆಂದು ತಿಳಿದುಕೊಂಡೆಯಾ? ನೀನು ಈಗ ನೋಡುತ್ತಿರುವುದು ಬಾಬಾ ಅವರನ್ನೋ ಅಥವಾ ಬೇರೆಯವರನ್ನೋ ಎಂಬುದನ್ನು ನೀನೇ ನಿರ್ಧರಿಸು" ಎಂದರು.

ಕೆಲವು ದಿನಗಳ ನಂತರ ಮಾನಕರ ಅವರು ಬಾಂದ್ರಾಕ್ಕೆ ಪ್ರಯಾಣ ಬೆಳೆಸಿದರು. ಪುಣೆಯಿಂದ ದಾದರಿಗೆ ರೈಲಿನಲ್ಲಿ ಹೋಗಬೇಕೆಂದು ರೈಲ್ವೇ ನಿಲ್ದಾಣಕ್ಕೆ ಬಂದರು. ಟಿಕೆಟ್ಟು ಕೊಳ್ಳುವ ಜಾಗದಲ್ಲಿ ಬಹಳ ನೂಕುನುಗ್ಗಲಿತ್ತು.ಬೇಗನೆ ಟಿಕೆಟ್ಟು ದೊರೆಯಲಿಲ್ಲ. ಆಗ ಹಳ್ಳಿಯವನೊಬ್ಬನು ಮಾನಕರರ ಹತ್ತಿರ ಬಂದು "ಎಲ್ಲಿಗೆ ಹೋಗಬೇಕು" ಎಂದು ಕೇಳಲು "ದಾದರಿಗೆ" ಎಂದು ಮಾನಕರರು ಹೇಳಿದರು. ಆಗ ಆ ಹಳ್ಳಿಯವನು "ನನಗೆ ಬಹಳ ಜರೂರಾದ ಕೆಲಸವಿದೆ. ನಾನು ಈಗ ಹೋಗಲಾರೆ. ದಯಮಾಡಿ ನನ್ನ ಟಿಕೆಟ್ಟನ್ನು ತೆಗೆದುಕೊಳ್ಳಿರಿ" ಎಂದನು. ಮಾನಕರ ಟಿಕೆಟ್ಟನ್ನು ತೆಗೆದುಕೊಂಡು ಅವನಿಗೆ ಹಣವನ್ನು ಕೊಡುವಷ್ಟರಲ್ಲಿ ಅವನು ಗದ್ದಲದಲ್ಲಿ ಎಲ್ಲಿಯೋ ಮಾಯವಾದನು. ಮಾನಕರ ಹುಡುಕಿದರೂ ಕಾಣಲೇ ಇಲ್ಲ. ರೈಲು ಹೊರಡುವ ತನಕ ಅವನನ್ನು ಹುಡುಕಿದರು. ಆದರೂ ಅವನ ಪತ್ತೆಯೇ ಆಗಲಿಲ್ಲ. ಮಾನಕರರಿಗೆ ಇದು ಎರಡನೇ ಸಾರಿ ಆದ ಸಾಕ್ಷಾತ್ಕಾರ. 

ಮಾನಕರ ತಮ್ಮ ಮನೆಗೆ ಹೋಗಿ ಅಲ್ಲಿ ಕೆಲವು ದಿನಗಳ ಕಾಲ ಇದ್ದು ನಂತರ ಶಿರಡಿಗೆ ಬಂದು ಬಾಬಾರವರ ಬಳಿಯೇ ಇದ್ದು ತಮ್ಮ ಕೊನೆಯ ದಿನಗಳವರೆಗೆ ಅವರ ಸೇವೆ ಮಾಡಹತ್ತಿದರು. ಕೊನೆಗೆ ಬಾಬಾರವರ ಆಶೀರ್ವಾದದಿಂದ ಅವರ ಸಮ್ಮುಖದಲ್ಲಿಯೇ ಇಹಲೋಕವನ್ನು ತ್ಯಜಿಸುವ ಯೋಗ ಅವರಿಗೆ ದೊರಕಿತು.

ಕನ್ನಡ ಅನುವಾದ: ಶ್ರೀಕಂಠ ಶರ್ಮ

Monday, December 12, 2011

ವಿಶಾಖಪಟ್ಟಣದ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಸಾಯಿ ಸಂಸ್ಥಾನ ಚಾರಿಟಬಲ್ ಟ್ರಸ್ಟ್, ಈಸ್ಟ್ ಶಿರಡಿ, ಚಿನ್ನ  ವಾಲ್ಟೈರ್, ವಿಶಾಖಪಟ್ಟಣ-530 017, ಆಂಧ್ರಪ್ರದೇಶ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ  


ದೇವಾಲಯದ ವಿಶೇಷತೆಗಳು: 

ಈ ದೇವಾಲಯವು ಆಂಧ್ರಪ್ರದೇಶದ ವಿಶಾಖಪಟ್ಟಣದ ಬೀಚ್ ರಸ್ತೆಯಲ್ಲಿರುವ ಚಿನ್ನ ವಾಲ್ಟೈರ್ ನ ಈಸ್ಟ್ ಪಾಯಿಂಟ್ ಕಾಲೋನಿಯಲ್ಲಿರುವ ಉಡಾ ಉದ್ಯಾನವನದ ಹತ್ತಿರದಲ್ಲಿರುತ್ತದೆ. 

ಈ ದೇವಾಲಯದ ಭೂಮಿಪೂಜೆಯನ್ನು 19ನೇ ಫೆಬ್ರವರಿ 1977 ರಂದು ನೆರವೇರಿಸಲಾಯಿತು. 

ಈ ದೇವಾಲಯವನ್ನು 18ನೇ ಮಾರ್ಚ್ 1993 ರಂದು ಟ್ರಸ್ಟ್ ನ ಸದಸ್ಯರುಗಳು ಸಾವಿರಾರು ಸಾಯಿ ಭಕ್ತರ ಸಮ್ಮುಖದಲ್ಲಿ ಉದ್ಘಾಟಿಸಿದರು. 

ದೇವಾಲಯವು ಪ್ರತಿದಿನ ಬೆಳಿಗ್ಗೆ 5:15 ಕ್ಕೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಮತ್ತು ರಾತ್ರಿ 8:30 ಕ್ಕೆ ಶೇಜಾರತಿಯಾದ ನಂತರ ಮುಚ್ಚುತ್ತದೆ. 

ದೇವಾಲಯದ ಸಂಕೀರ್ಣದಲ್ಲಿ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹ, ವಿಷಕೇಶ್ವರ (ಶಿವ), ಪಾರ್ವತಿ ದೇವಿ, ಶನೀಶ್ವರ, ಸೂರ್ಯನಾರಾಯಣ ಸ್ವಾಮಿ, ಶ್ರೀರಾಮ, ಹನುಮಾನ್, ಗಣಪತಿ, ಅಯ್ಯಪ್ಪ, ಕುಮಾರಸ್ವಾಮಿ, ದತ್ತಾತ್ರೇಯ, ಪವಿತ್ರ ಧುನಿ ಮತ್ತು ದ್ವಾರಕಾಮಾಯಿಯನ್ನು ಸಾಯಿಭಕ್ತರು ನೋಡಬಹುದು.


















ದೇವಾಲಯದ ನಿತ್ಯ ಕಾರ್ಯ ಚಟುವಟಿಕೆಗಳು: 

ದೈನಂದಿನ ಕಾರ್ಯಕ್ರಮಗಳು: 

ಆರತಿಯ ಸಮಯ: 

ಕಾಕಡಾ ಆರತಿ: ಬೆಳಿಗ್ಗೆ 5:15 ಕ್ಕೆ 
ಮಧ್ಯಾನ್ಹ ಆರತಿ: ಮಧ್ಯಾನ್ಹ 12 ಘಂಟೆಗೆ 
ಧೂಪಾರತಿ: ಸಂಜೆ 6:15 ಕ್ಕೆ 
ಶೇಜಾರತಿ: ರಾತ್ರಿ 8:30 ಕ್ಕೆ 

ದೇವಾಲಯದಲ್ಲಿ ನಿತ್ಯ ಅನ್ನದಾನ ಸೇವೆ ಮಾಡಲು ಅವಕಾಶವನ್ನು ಕಲ್ಪಿಸಲಾಗಿದ್ದು ಇದರ ಸೇವಾಶುಲ್ಕ ಪ್ರತಿನಿತ್ಯ 200/- ರುಪಾಯಿಗಳಾಗಿರುತ್ತದೆ ಮತ್ತು ಗುರುವಾರದಂದು ಮಾತ್ರ ಸೇವಾಶುಲ್ಕ 500/- ರುಪಾಯಿಗಳಾಗಿರುತ್ತದೆ. 

ದೇವಾಲಯದಲ್ಲಿ ಶಾಶ್ವತ ಪೂಜೆಗೆ ಅವಕಾಶವನ್ನು ಕಲ್ಪಿಸಲಾಗಿದ್ದು ಇದರ ಸೇವಾಶುಲ್ಕ 2100/- ರುಪಾಯಿಗಳಾಗಿರುತ್ತದೆ. 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 

ಉಡಾ ಉದ್ಯಾನವನದ ಹತ್ತಿರ, ಬೀಚ್ ರಸ್ತೆ, ಚಿನ್ನ ವಾಲ್ಟೈರ್, ಈಸ್ಟ್ ಪಾಯಿಂಟ್ ಕಾಲೋನಿ

ವಿಳಾಸ: 

ಶ್ರೀ ಸಾಯಿ ಸಂಸ್ಥಾನ ಚಾರಿಟಬಲ್ ಟ್ರಸ್ಟ್,
ಈಸ್ಟ್ ಶಿರಡಿ, ಚಿನ್ನ  ವಾಲ್ಟೈರ್,
ವಿಶಾಖಪಟ್ಟಣ-530 017,
ಆಂಧ್ರಪ್ರದೇಶ, ಭಾರತ.

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಜೀ.ವಿ.ಆರ್.ರೆಡ್ಡಿ (ಕಾರ್ಯದರ್ಶಿ)/ ಶ್ರೀ.ಎಂ.ವೀ.ಆರ್.ಮಣಿಧರ್ (ಟ್ರಸ್ಟಿ) / ಶ್ರೀಮತಿ.ಡಿ.ಶಿರೀಷ (ಆಡಳಿತಾಧಿಕಾರಿ)

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 

+91 891 2552099  / + 91 98663 35527 / +91 98661 60155 / +91 96182 55515 


ಈ ಮೇಲ್ ವಿಳಾಸ: 

sirisha@eastshiridi.org / sirisha_mukesh@yahoo.com 


ಅಂತರ್ಜಾಲ ತಾಣ: 


http://www.eastshiridi.org 


ಮಾರ್ಗಸೂಚಿ: 


ವಿಶಾಖಪಟ್ಟಣದ ಬೀಚ್ ರಸ್ತೆಯಲ್ಲಿರುವ ಚಿನ್ನ ವಾಲ್ಟೈರ್ ನ ಈಸ್ಟ್ ಪಾಯಿಂಟ್ ಕಾಲೋನಿಯಲ್ಲಿರುವ ಉಡಾ ಉದ್ಯಾನವನದ ಬಸ್ ನಿಲ್ದಾಣದ ಬಳಿ ಇಳಿಯುವುದು. ದೇವಾಲಯವು ಬಸ್ ನಿಲ್ದಾಣದಿಂದ 5 ನಿಮಿಷದ ನಡಿಗೆಯ ಅಂತರದಲ್ಲಿರುತ್ತದೆ. ಬಸ್ ನಿಲ್ದಾಣದಿಂದ ಬಸ್ ಸಂಖ್ಯೆಗಳು: 14 ಮತ್ತು 210

ಕನ್ನಡ ಅನುವಾದ:ಶ್ರೀಕಂಠ ಶರ್ಮ