Saturday, January 22, 2011

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಮಂದಿರ ಟ್ರಸ್ಟ್ (ನೋಂದಣಿ), ಬ್ರಾಹ್ಮಣರ ಬೀದಿ, ಹೊಸಕೋಟೆ - 562 114, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ

ಈ ಮಂದಿರವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಗ್ರಾಮದಲ್ಲಿದೆ.ಈ ಮಂದಿರದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕಳಗೆ ಕೊಡಲಾಗಿದೆ.

ದೇವಾಲಯದ ವಿಶೇಷತೆಗಳು:

  • ಈ ದೇವಾಲಯದ ಭೂಮಿಪೂಜೆಯನ್ನು 2003 ನೇ ಇಸವಿಯ ಅಕ್ಷಯ ತೃತೀಯದಂದು ಮಾಡಲಾಯಿತು. 
  • ಈ ದೇವಾಲಯದ ಉದ್ಘಾಟನೆಯನ್ನು 19ನೇ ಫೆಬ್ರವರಿ 2009 ರಂದು ಆವನಿ ಶಂಕರ ಮಠದ ಜಗದ್ಗುರುಗಳು ನೆರವೇರಿಸಿದರು. ಅಂದಿನ ಕಾರ್ಮಿಕ ಸಚಿವ ಶ್ರೀ.ಬಿ.ಎನ್.ಬಚ್ಚೇಗೌಡ ಮತ್ತಿತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. 
  • ಈ ದೇವಾಲಯದ ಉಸ್ತುವಾರಿಯನ್ನು 10 ಟ್ರಸ್ಟಿಗಳ ತಂಡವು ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಿದೆ. 
  • ಈ ದೇವಾಲಯದಲ್ಲಿ ಶಿರಡಿ ಸಾಯಿಬಾಬಾ, ಶ್ರೀ.ರಾಧಾಕೃಷ್ಣಸ್ವಾಮಿಜೀ, ಶ್ರೀ.ನರಸಿಂಹ ಸ್ವಾಮೀಜಿ ಯವರುಗಳ ಸುಂದರ ಅಮೃತಶಿಲೆಯ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ. 
  • ದೇವಾಲಯದ ಹಿಂಭಾಗಗಲ್ಲಿ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ. 
  • ಕಪ್ಪು ಶಿಲೆಯ ವಿನಾಯಕ, ಈಶ್ವರ, ಪಾರ್ವತಿ, ದತ್ತಾತ್ರೇಯ, ಲಕ್ಷ್ಮೀ ನರಸಿಂಹ ಮತ್ತು ಭಕ್ತಾಂಜನೇಯ ದೇವರುಗಳ ವಿಗ್ರಹಗಳನ್ನು ದೇವಾಲಯದ ಹಿಂಭಾಗದಲ್ಲಿ ಪ್ರತಿಷ್ಟಾಪಿಸಲಾಗಿದೆ. 






ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು

ಆರತಿಯ ಸಮಯ:
ಕಾಕಡಾ ಆರತಿ : ಪ್ರತಿದಿನ ಬೆಳಿಗ್ಗೆ 6:15 ಕ್ಕೆ ಮತ್ತು ಗುರುವಾರ 6:00 ಘಂಟೆಗೆ  
ಮಧ್ಯಾನ್ಹ ಆರತಿ: ಪ್ರತಿದಿನ ಮಧ್ಯಾನ್ಹ 12 ಘಂಟೆಗೆ
ಧೂಪಾರತಿ : ಪ್ರತಿದಿನ ಸಂಜೆ 6 ಘಂಟೆಗೆ
ಶೇಜಾರತಿ: ಪ್ರತಿದಿನ ರಾತ್ರಿ 8:15 ಕ್ಕೆ ಮತ್ತು ಗುರುವಾರ ರಾತ್ರಿ 8:30 ಕ್ಕೆ

ಪ್ರತಿ ತಿಂಗಳ ಹುಣ್ಣಿಮೆಯ ದಿನ ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತದೆ. 
ಪ್ರತಿ ತಿಂಗಳು ದೇವಾಲಯದಲ್ಲಿ ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತದೆ.

ವಿಶೇಷ ಉತ್ಸವದ ದಿನಗಳು:
  1. ದೇವಾಲಯದ ವಾರ್ಷಿಕೋತ್ಸವ ಪ್ರತಿವರ್ಷದ 19ನೇ ಫೆಬ್ರವರಿ ಯಂದು. 
  2. ಗುರುಪೂರ್ಣಿಮೆ.
  3. ನರಸಿಂಹ ಜಯಂತಿ.
  4. ಶಂಕರ ಜಯಂತಿ.
  5. ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ).
  6. ಹನುಮಾನ್ ಜಯಂತಿ. 
  7. ದತ್ತ ಜಯಂತಿ. 
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:

ಸ್ಥಳ:
ಹೊಸಕೋಟೆ ಬಸ್ ನಿಲ್ದಾಣದ ಹತ್ತಿರ.

ವಿಳಾಸ: 
ಶ್ರೀ ಶಿರಡಿ ಸಾಯಿಮಂದಿರ ಟ್ರಸ್ಟ್ (ನೋಂದಣಿ),
ಬ್ರಾಹ್ಮಣರ ಬೀದಿ, ಹೊಸಕೋಟೆ - 562 114,
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕರ್ನಾಟಕ

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಟಿ.ಎಸ್.ರಮೇಶ್ / ಶ್ರೀ.ಹೆಚ್.ಎಸ್.ಲಕ್ಷ್ಮಿಕಾಂತ.

ದೂರವಾಣಿ: 
+91 99002 15194 / +91 91419 44281

ಈ ಮೇಲ್ ವಿಳಾಸ:
tssairamesh@gmail.com

ಮಾರ್ಗಸೂಚಿ:

ಹಳೆಯ ಮದ್ರಾಸ್ ರಸ್ತೆಯಲ್ಲಿ  ಹೊಸಕೋಟೆ ಬಸ್ ನಿಲ್ದಾಣದ ಬಳಿ ಇಳಿಯುವುದು. 3 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. 


ಕನ್ನಡ ಅನುವಾದ: ಶ್ರೀಕಂಠ ಶರ್ಮ  

    No comments:

    Post a Comment