Sunday, March 20, 2016

ಬಾಬಾರವರೊಂದಿಗೆ ಒಂದು ದಿವ್ಯ ಪಯಣ ಗ್ರಂಥದ ಲೋಕಾರ್ಪಣೆ

ಕನ್ನಡ ಸಾಯಿ ಭಕ್ತರಿಗೊಂದು ಸಿಹಿ ಸುದ್ಧಿ!! ಪ್ರಸಿದ್ಧ ಶಿರಡಿ ಸಾಯಿಬಾಬಾರವರ ಗ್ರಂಥಗಳ ಲೇಖಕಿ ಮತ್ತು ಸಂಶೋಧಕಿಯಾದ ವಿನ್ನಿ ಚಿಟ್ಲೂರಿಯವರು ಬಾಬಾರವರ ಹನ್ನೊಂದು ಅಭಿವಚನಗಳ ಒಳಾರ್ಥವನ್ನು ಕುರಿತು ರಚಿಸಿರುವ ಕನ್ನಡದ ಏಕಮೇವಾದ್ವಿತೀಯ “ಬಾಬಾರವರೊಂದಿಗೆ ಒಂದು ದಿವ್ಯ ಪಯಣ”  ಗ್ರಂಥವನ್ನು ಲೇಖಕಿಯವರು ತಮ್ಮ ಸ್ವಹಸ್ತದಿಂದ ಶಿರಡಿ ಸಾಯಿಬಾಬಾರವರ ಪಾದಕಮಲಗಳಲ್ಲಿ ಇರಿಸುವ ಮೂಲಕ ಲೋಕಾರ್ಪಣೆ ಮಾಡಿರುತ್ತಾರೆ. ಈ ಗ್ರಂಥವು ಬಾಬಾರವರ ಹನ್ನೊಂದು ಅಭಿವಚನಗಳನ್ನು ಕುರಿತಂತೆ ರಚಿಸಲಾಗಿರುವ ಪ್ರಪ್ರಥಮ ಗ್ರಂಥವಾಗಿರುತ್ತದೆ.

ಗ್ರಂಥದ ಮೊದಲ ಭಾಗದಲ್ಲಿ ಲೇಖಕಿಯು ಹನ್ನೊಂದು ಅಭಿವಚನಗಳ ಒಳಾರ್ಥವನ್ನು ಬಹಳ ಸುಂದರವಾಗಿ ಎಳೆ ಎಳೆಯಾಗಿ ಬಿಡಿಸಿ ವಿವರಿಸಿರುವುದಷ್ಟೇ ಅಲ್ಲದೆ ಅಭಿವಚನಗಳನ್ನು ಸೂಕ್ತ ಲೀಲೆಗಳ ಮೂಲಕ ದೃಢೀಕರಿಸಿದ್ದಾರೆ. ಗ್ರಂಥದ ಎರಡನೇ ಭಾಗದಲ್ಲಿ ಸಾಯಿ ಮಹಾಭಕ್ತರಾದ ಶ್ರೀ ಸ್ವಾಮಿ ಸಾಯಿ ಶರಣಾನಂದರು ಶಿರಡಿಯಲ್ಲಿ ತಂಗಿದ್ದಾಗ ಅವರ ಜೀವನದಲ್ಲಿ ಘಟಿಸಿದ ಅನೇಕ ಲೀಲೆಗಳನ್ನು ನೀಡಿದ್ದಾರೆ. 

ಎಲ್ಲ ಕನ್ನಡ ಸಾಯಿ ಭಕ್ತರ ಮನೆಯಲ್ಲಿ ಇರಲೇಬೇಕಾದ ಈ ಮಹಾನ್ ಗ್ರಂಥದ ಬೆಲೆ ಕೇವಲ 200/- ರೂಪಾಯಿಗಳಾಗಿದ್ದು ಗ್ರಂಥವನ್ನು ಖರೀದಿಸಲು ಇಚ್ಛಿಸುವ ಸಾಯಿ ಭಕ್ತರು ಶ್ರೀ.ನಾಗರಾಜ್ ಅನ್ವೇಕರ್ - ಮೊಬೈಲ್ ಸಂಖ್ಯೆ: 99023 88699 ಅನ್ನು ಸಂಪರ್ಕಿಸಬಹುದು. ಈ ಗ್ರಂಥದ ಮಾರಾಟದಿಂದ ಬರುವ ಎಲ್ಲ ಹಣವನ್ನು ಶಿರಡಿಗೆ ಕೇವಲ 8 ಕಿಲೋಮೀಟರ್ ದೂರದಲ್ಲಿರುವ ಕೊರಾಳೆ ಶ್ರೀ ಸಾಯಿಬಾಬಾ ಮಂದಿರದ ವತಿಯಿಂದ ನಡೆಸಲಾಗುತ್ತಿರುವ ಸಾಮಾಜಿಕ, ಧಾರ್ಮಿಕ ಕಾರ್ಯಚಟುವಟಿಕೆಗಳಿಗೆ ಬಳಸಲಾಗುತ್ತದೆ.