Monday, August 29, 2011

ಸಾಯಿ ಮಹಾಭಕ್ತ ಪುರುಷೋತ್ತಮ ಆರ್.ಅವಸ್ಥೆ - ಕೃಪೆ: ಸಾಯಿಅಮೃತಧಾರಾ.ಕಾಂ  



ಶ್ರೀ.ಪುರುಷೋತ್ತಮ ಆರ್.ಅವಸ್ಥೆ ಬಿ.ಎ., ಎಲ್.ಎಲ್.ಬಿ.ಪದವೀಧರರು. ಇವರು ಗ್ವಾಲಿಯರ್ ನ ನಿವೃತ್ತ ನ್ಯಾಯಾಧೀಶರು. ಇವರು ಓರ್ವ ಮಹಾನ್ ಸಾಯಿ ಭಕ್ತರು. ಇವರ ಸಹಾಯವಿಲ್ಲದಿದ್ದರೆ ಪರಮ ಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿಯವರು ಬಾಬಾರವರ ಪ್ರಚಾರ ಕಾರ್ಯವನ್ನು ಸಮರ್ಪಕವಾಗಿ ಸಾಧಿಸಲಾಗುತ್ತಿರಲಿಲ್ಲ. ಶ್ರೀ.ಅವಸ್ಥೆಯವರು ಒಂದು ಶಾಸ್ತ್ರೀಯ ಕುಟುಂಬದಲ್ಲಿ 1870 ನೇ ಇಸವಿಯಲ್ಲಿ ಜನ್ಮ ತಾಳಿದರು. ಅವರು ಧಾರ್ಮಿಕ ಸಂಪರ್ಕವನ್ನಿಟ್ಟುಕೊಂಡಿದ್ದರು. ಅವರು ತಮ್ಮ 6 ನೇ ವಯಸ್ಸಿನಲ್ಲಿಯೇ "ದೇವ ಮಾಮಲ್ತೆದಾರ್" (ಶ್ರೀ.ಯಶವಂತ ರಾವ್ ಭಾಸ್ಕರ ಸತಾರಾಂ ಮಾಮಲ್ತೆದಾರ್) ರವರ ಸಂಪರ್ಕವನ್ನು ಬೆಳೆಸಿದ್ದರು. ಅವಸ್ಥೆಯವರು ದೇವ ಮಾಮಲ್ತೆದಾರ್ ಅವರನ್ನು ಗುರುವಾಗಿ ಸ್ವೀಕರಿಸಿದ್ದರು. ದೇವ ಮಾಮಲ್ತೆದಾರ್ ರವರು ನಿವೃತ್ತಿಯಾದ ಮೇಲೆ ಧಾರ್ಮಿಕ ಜೀವನವನ್ನು ನಡೆಸುತ್ತಾ ವೃದ್ದರು ಮತ್ತು ಯುವಕರನ್ನು ಪ್ರೇರೇಪಿಸುತ್ತಿದ್ದರು. ಅವಸ್ಥೆಯವರಿಗೆ ದೇವ ಮಾಮಲ್ತೆದಾರ್ ರವರಲ್ಲಿ ಆಸಕ್ತಿ ಉಂಟಾಗಿ 1887-1890 ರಲ್ಲಿ ಅಂದರೆ 17-20 ನೇ ವಯಸ್ಸಿನಲ್ಲಿ ತಂದೆಯೊಡಗೂಡಿ ಅನೇಕ ಸಾರಿ ಅವರ ದರ್ಶನ ಪಡೆದು ಧಾರ್ಮಿಕ ಪ್ರಭಾವಕ್ಕೆ ಒಳಗಾದರು. ಇದು ಒಳ್ಳೆಯ ತಳಹದಿಗೆ ನಾಂದಿಯಾಯಿತು. ಅವರು ಕಾಲೇಜ್ ವಿದ್ಯಾಭ್ಯಾಸದ ನಂತರ ಜಾನ್ ಸ್ಟುವರ್ಟ್ ಮಿಲ್ ಮತ್ತು ಸ್ಪೆನ್ಸರ್ ಕಾಲೇಜಿನಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳಿದರು. ಪಾಶ್ಚಿಮಾತ್ಯ ದೇಶಗಳ ನಾಸ್ತಿಕ ತತ್ವಗಳು ಅವರ ಮನಸ್ಸನ್ನು ಆಕರ್ಷಿಸಿ ಅವರು ಅಹಂಕಾರ ಸ್ವಭಾವವನ್ನು ಬೆಳೆಸಿಕೊಂಡರು. ಅವರು ಒಳ್ಳೆಯ ತರ್ಕವಾದಿಯಾಗಿ, ವಾಗ್ಮಿಯಾಗಿ ಹೆಚ್ಚು ಹಣವನ್ನು ಸಂಪಾದಿಸುವ ಕಡೆ ತಮ್ಮ ಗಮನವನ್ನು ಹರಿಸಿದರು. ದೇವ ಮಾಮಲ್ತೆದಾರ್ ರವರ ಪ್ರಭಾವ ಅವರಿಂದ ಸ್ವಲ್ಪ ದೂರವಾದಂತಿತ್ತು. ಅವರ ಅದೃಷ್ಟವೋ ಎಂಬಂತೆ 1889 ರಲ್ಲಿ ಅವರ 19ನೇ ವಯಸ್ಸಿನಲ್ಲಿ ಅಂಗಡಿ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಒಂದು ಭಗವದ್ಗೀತೆಯ ಚಿಕ್ಕ ಪ್ರತಿಯನ್ನು 1/2 ಆಣೆಗೆ ಕೊಂಡುಕೊಂಡು ಕಿಸೆಯಲ್ಲಿ ಭದ್ರವಾಗಿಟ್ಟುಕೊಂಡರು ಮತ್ತು ತಮ್ಮ ವಿರಾಮದ ಸಮಯದಲ್ಲಿ ಪ್ರತಿದಿನ ಭಗವದ್ಗೀತೆ ಓದುವ ಅಭ್ಯಾಸ ಮಾಡಿಕೊಂಡರು. ಇದು ಅವರ ಕೊನೆಯ ದಿನಗಳ ಭವಿಷ್ಯಕ್ಕೆ ಒಳ್ಳೆಯದನ್ನು ಮಾಡಿತು. ಅವರು ನಾಸ್ತಿಕರಾಗಿ ಸುಮಾರು 8 ವರ್ಷಗಳು ಕಳೆದರು. ಏಕೆಂದರೆ ಅವರು ತುಂಬು ಯೌವನದಲ್ಲಿದ್ದರು. ಆಗಲೂ ಕೂಡ ಅವರಿಗೆ ತಮ್ಮ ನಾಸ್ತಿಕತ್ವಕ್ಕೆ ಹೊಡೆತ ಬಿದ್ದಿತು. ಇದು ಗಣನೀಯವಾಗಿತ್ತು. ಅವರು ಒಮ್ಮೆ ಭಗವದ್ಗೀತೆಯ ಯಾವುದೋ ಒಂದು ಪುಟವನ್ನು ತೆಗೆದು ಓದಿದರು. ಅದರಲ್ಲಿ ದೇವರಿಂದ ದೂರವಾಗಿ ಮಾಯೆಯ ಹಿಡಿತದಲ್ಲಿ ಸಿಕ್ಕಿಕೊಂಡು ದೈವತ್ವ ಉಂಟಾಗಿ ಭಯ ಉಂಟಾಗುವ ಸ್ಥಿತಿಯ ಬಗ್ಗೆ ತಿಳಿಸಲಾಗಿತ್ತು. ಇನ್ನೊಂದು ಸಂದರ್ಭದಲ್ಲಿ ಅವರು ಓರ್ವ ದಕ್ಷಿಣ ಭಾರತದ ಮಹಿಳೆ ಶ್ರೀರಾಮನ ಚಿತ್ರಪಟದ ಮುಂದೆ ಕುಳಿತು ಮೀರಾಬಾಯಿ, ಮುಕ್ತಾಬಾಯಿ ಮತ್ತು ಇತರ ಮಹಾಭಕ್ತರುಗಳು ಶ್ರೀರಾಮನ ಬಗ್ಗೆ ಹಾಡಿದ ಭಕ್ತಿ ಗೀತೆಗಳನ್ನು ಆಕೆ ಹಾಡುತ್ತಿರುವುದನ್ನು ಕೇಳಿದರು.  ಶ್ರೀ.ಅವಸ್ಥೆಯವರು ಆ ಮಹಿಳೆಯ ಹಾಡಿನಿಂದ ಪ್ರಭಾವಿತರಾಗಿ ಆಕೆಯ ಭಕ್ತಿಗೆ ಮನಸೋತರು. ಮತ್ತೊಂದು ಬಾರಿ, ಅವರು ತಮ್ಮ ಸಹೋದರರೊಂದಿಗೆ ದೇವರ ಅಸ್ತಿತ್ವದ ಬಗ್ಗೆ ಚರ್ಚೆ ಮಾಡುತ್ತಿದ್ದಾಗ ಅವರ ಸೋದರ ಮಾವ ಶ್ರೀ. ಬಲರಾಮ ಬವಲಾ ಥಾಕೂರ್ ದಾಸ್ ಅವರು ಜಡ್ಜ್ ಆಗಿ ಆರಿಸಲ್ಪಟ್ಟರು. ಚರ್ಚೆ ಬಿರುಸಾಗಿ ನಡೆಯುತ್ತಿತ್ತು ಮತ್ತು ಯಾರೊಬ್ಬರೂ ತೀರ್ಪುಗಾರನ ನಿರ್ಣಯವನ್ನು ಒಪ್ಪದೇ ವಾದ ವಿವಾದ ಮಾಡುತ್ತಲೇ ಇದ್ದರು. ಶ್ರೀ.ಅವಸ್ಥೆಯವರು ಕೀರ್ತನೆ ಮತ್ತು ಪುರಾಣಗಳಲ್ಲಿ ನಂಬಿಕೆ ಇದ್ದ ಒಬ್ಬ ನಿರ್ಣಾಯಕರನ್ನು ಸಂಧಿಸಿ ಸಂತರುಗಳು ನಿಜವಾಗಿ ಪ್ರಾಮಾಣಿಕರಾಗಿದ್ದರೆ ಅದನ್ನು ನನಗೆ ನಿರೂಪಿಸಿ ಎಂದು ಕೇಳಿಕೊಂಡರು. ಆಗ ಅವರ ಸೋದರಮಾವ ಅವಸ್ಥೆ ಅವರನ್ನು ದೇವಸ್ಥಾನದಲ್ಲಿದ್ದ ಶ್ರೀರಾಮನ ಪ್ರತಿಮೆ ಮುಂದೆ ನಿಲ್ಲಿಸಿದರು ಮತ್ತು ಅವರು ಪವಿತ್ರ ಗ್ರಂಥಗಳಲ್ಲಿ ಉತ್ತಮವಾಗಿರುವ ಎಲ್ಲವನ್ನೂ ಸಂಪೂರ್ಣವಾಗಿ ನಂಬಿ ಅವಸ್ಥೆಯವರು ಓರ್ವ ಸಂತನನ್ನು ಭೇಟಿಯಾಗಿ ಅವರಿಂದ ನೇರವಾದ ಅನುಭವ ಪಡೆದು ಅವರನ್ನು ತನ್ನ ಗುರುವೆಂದು ಸ್ವೀಕರಿಸಲು ಸಿದ್ಧ ಎಂದು ಮಾತು ಕೊಡಲು ಹೇಳಿದರು. ಆಲ್ಲದೆ, ಅವರ ಸೋದರಮಾವ ಪಾಲುಸ್ ನ ದೊಂಡಿ ಬುವಾ, ಫಲ್ಟಾನ್ ನ ಹರಿ ಮಹಾರಾಜ್, ಕೊಲ್ಹಾಪುರದ ಕುಂಬಾರ ಸ್ವಾಮಿ ಅವರುಗಳನ್ನು ಹೆಸರಿಸಿದರು. ಅಲ್ಲದೆ, ಅವರ ಸೋದರ ಮಾವ ಈ ಮೇಲೆ ತಿಳಿಸಿದ ಸಂತರುಗಳನ್ನು ದರ್ಶಿಸಿ ಅವರುಗಳನ್ನು ಪರೀಕ್ಷಿಸಿ ಖಾತ್ರಿ ಮಾಡುವೆನು ಎಂದು ಇವರಿಂದ ಭಾಷೆ ತೆಗೆದುಕೊಂಡರು.

 ಅದೃಷ್ಟವಶಾತ್, ಶ್ರೀ.ಅವಸ್ಥೆಯವರು ಈ ಮೇಲೆ ತಿಳಿಸಿದ ಎಲ್ಲಾ ಸಂತರುಗಳ ದರ್ಶನ ಮಾಡಿದರು. ಶ್ರೀ.ಅವಸ್ಥೆಯವರು ಬೆಸಂತ್ ಮತ್ತು ರಿಚರ್ಡ್ಸನ್ ಅವರ ತತ್ವಜ್ಞಾನದ ಉಪನ್ಯಾಸಗಳನ್ನು ಕೇಳಿ ತತ್ವಜ್ಞಾನದ ಮತ್ತು ಧರ್ಮದ ಪುಸ್ತಕಗಳನ್ನು ಓದಿದರು. ಆಗ ಪುಣೆಯಲ್ಲಿ 1896ರ ಕೊನೆಯಲ್ಲಿ ಪ್ಲೇಗ್ ಸಾಂಕ್ರಾಮಿಕ ರೋಗ ಹರಡಿ ಅನೇಕ ಸಾವು ನೋವುಗಳಾಗಿ ಇವರಿಗೆ ಧರ್ಮ ಮತ್ತು ದೇವರೆಡೆಗೆ ಹೋಗಲು ಅನುವಾಯಿತು. ಅವರು ಮಹಾರಾಷ್ಟ್ರದ ಸಂತರಾದ ಜ್ಞಾನೇಶ್ವರ, ನಾಮದೇವ, ತುಕಾರಾಮ, ರಾಮದಾಸ ಮತ್ತು ಇನ್ನು ಅನೇಕ ಸಂತರುಗಳ ಜೀವನ ಚರಿತ್ರೆಯನ್ನು ಓದಿದರು. ಅವರು ತಾರಗಾವ್ ನಲ್ಲಿದ್ದ ಚಿಕ್ಕಪ್ಪನ ಮನೆಗೆ ಹೋಗಿ ಕೃಷ್ಣನ ಪವಿತ್ರ ಗ್ರಂಥಗಳನ್ನು ಓದಿದರು. ದೊಂಡಿಬುವಾ ಅವರ ಬಗ್ಗೆ ವಿಚಾರಿಸಿ ಪಾಲುಸ್ ಗೆ ಹೇಗೆ ಹೋಗಬೇಕೆಂದು ತಿಳಿದುಕೊಂಡರು. ಅವರು ಪಾಲುಸ್ ನ ದೊಂಡಿಬುವಾ ದರ್ಶನ ಪಡೆದರು ಮತ್ತು ಅವರನ್ನು ಕೂಲಂಕುಷವಾಗಿ ಪರೀಕ್ಷಿಸಿದರು. ಆದರೆ, ಅವರನ್ನು ತಮ್ಮ ಗುರುವಾಗಿ ಸ್ವೀಕರಿಸಲು ಸಿದ್ಧರಿರಲಿಲ್ಲ. ಅಂತೆಯೇ, ದೊಂಡಿಬುವಾರವರು ಕೂಡ "ತಾವು ಯಾರಿಗೂ ಗುರುವಾಗಲು ಇಷ್ಟ ಪಡುವುದಿಲ್ಲ" ಎಂದರು. ಆದರೂ ಅವರು ಅವಸ್ಥೆಯವರನ್ನು ಆಶೀರ್ವದಿಸಿದರು.

ಮುಂದೆ ಇವರು ಬ್ರಾಹ್ಮಣ ಕುಲಕ್ಕೆ ಸೇರಿದ ಸಂತ ಪರಮಹಂಸರವರನ್ನು ಭೇಟಿ ಮಾಡಿದರು ಮತ್ತು ಅವರಲ್ಲಿ ಬ್ರಹ್ಮಜ್ನಾನದ ಬಗ್ಗೆ ಪ್ರಶ್ನೆಯನ್ನು ಮಾಡಿದರು. ಆಗ ಪರಮಹಂಸರು ಅವಸ್ಥೆಯವರನ್ನು ಕೆಳಗೆ ಮಲಗಲು ಹೇಳಿ ತಾವು ಪಕ್ಕದಲ್ಲಿ ಮಲಗಿ "ಹೆದರಬೇಡ" ಎಂದರು. ಆದರೆ, ಆ ಸಂತ ಅವರ ಕೊರಳಿಗೆ ಕೈ ಹಾಕಿದಾಗ ಅವರ ಗಂಟಲು ಕಟ್ಟಿತು. ಅವಸ್ಥೆ ಹೆದರಿದರು ಮತ್ತು ಅವರಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದರು. ಆಗ ಆ ಸಂತರು "ನೀನೊಬ್ಬ ಹೇಡಿ. ಇಲ್ಲಿಂದ ಹೊರಟುಹೋಗು. ನೀನು ಬ್ರಹ್ಮನನ್ನು ತಿಳಿಯಲಾರೆ" ಎಂದರು.

ಮುಂದೆ ಅವಸ್ಥೆಯವರು ಸತಾರಾದ ದೇವಿ ಬುವಾರವರ ಬಳಿಗೆ ಬಂದರು. ಅನಂತರ ಅವರು ಪೂನಾದ ಸೋಮೇಶ್ವರ ದೇವಸ್ಥಾನದ ಧರ್ಮಶಾಲೆಯಲ್ಲಿ ತಂಗಿದ್ದ ವೃದ್ಧ ಮಹಿಳೆಯನ್ನು ಸಂಧಿಸಲು ಬಂದರು. ಅವರು ತಮ್ಮ ಸ್ನೇಹಿತರೊಂದಿಗೆ ಆ ಮಹಿಳೆಯನ್ನು ಭೇಟಿಯಾದರು. ಅವರು ಇವರಿಗೆ "ಪಂಚಾಕ್ಷರಿ" ಮಂತ್ರವನ್ನು ಉಪದೇಶಿಸಿದರು ಮತ್ತು ತಾನು ಅವಸ್ಥೆಯ ಗುರುವಾಗುವುದಿಲ್ಲ ಎಂದು ತಿಳಿಸಿದಳು. ಅವಸ್ಥೆಯವರಿಗೆ ಪಂಚಾಕ್ಷರಿ ಮಂತ್ರ ದೀಕ್ಷೆಯಾಗಿದ್ದು 1898 ರಲ್ಲಿ. ಇವರು ಶ್ರೀರಾಮನ ದರ್ಶನವನ್ನು 1912 ರಲ್ಲಿ ಪಡೆದರು. 1914 ರಲ್ಲಿ ಇವರು ಪಂಡರಾಪುರಕ್ಕೆ ಹೋಗಿ ಆ ಮಹಿಳಾ ಗುರುವಿಗೆ ಮಾತು ಕೊಟ್ಟಂತೆ ಪಂಡರೀನಾಥನ ದರ್ಶನ ಮಾಡಬೇಕೆಂದುಕೊಂಡರು. ಆಗ ಸಾಯಿಬಾಬಾರವರ ಭಕ್ತರಾದ ನ್ಯಾಯಮೂರ್ತಿ ರೀಗಿಯವರು ಇವರ ಬಳಿ ಬಂದು ಇವರ ಪಂಡರಾಪುರದ ಯಾತ್ರೆಯ ವಿಷಯವನ್ನು ತಿಳಿದು ಅವರಿಗೆ ಶಿರಡಿಯಲ್ಲಿ ನಿಲ್ಲಬೇಕೆಂದು ಹೇಳಿದರು. ಏಕೆಂದರೆ ಶಿರಡಿಯು ಇಂದೂರಿನಿಂದ ಪಂಡರಾಪುರಕ್ಕೆ ಹೋಗುವ ಮಾರ್ಗದಲ್ಲಿ ಇರುತ್ತದೆ. ಅವಸ್ಥೆಯವರು ರೀಗೆ ಸಮೇತರಾಗಿ ಶಿರಡಿಗೆ ಹೋಗುವುದಾಗಿ ಮಾತು ನೀಡಿದರು. 1914ನೇ ಕ್ರಿಸ್ ಮಸ್ ದಿನದಂದು ಪ್ರಯಾಣ ಹೊರಟರು. ಆಗ ಇವರಿಗೆ ಮಹೂನಲ್ಲಿ ಪ್ರಯಾಣಕ್ಕೆ ತಡೆಯುಂಟಾಯಿತು. ಟ್ರೈನನ್ನು ಮಿಲಿಟರಿ ವಶಕ್ಕೆ ತೆಗೆದುಕೊಂಡ ಮಿಲಿಟರಿ ಕಮಾಂಡರ್ ಅವಸ್ಥೆ ಮತ್ತು ರೀಗೆಯವರಿಗೆ ತಮ್ಮ ಡಬ್ಬಿಯಲ್ಲಿಯೇ ಕುಳಿತು ಪ್ರಯಾಣವನ್ನು ಮುಂದುವರಿಸುವಂತೆ ಹೇಳಿದರು. ರೀಗೆಯವರು ಪ್ರಯಾಣದ ಉದ್ದಕ್ಕೂ ಸಾಯಿಬಾಬಾರವರನ್ನು ಕುರಿತು ಹಾಡುತ್ತಾ ಶಿರಡಿಯನ್ನು ತಲುಪಿದರು. ಅವರುಗಳು ಶ್ರೀಮತಿ.ರಾಧಾಕೃಷ್ಣ ಆಯಿಯವರನ್ನು ಸಂಧಿಸಿ ಅಲ್ಲಿ ತಂಗಿದರು. ರಾಧಾಕೃಷ್ಣ ಆಯಿ ಅವರುಗಳಿಗೆ ಸದ್ಗುರುವಾಗಿ ಕಂಡರು. ಅವಳು ಅವರ ಮಹಿಳಾ ಗುರುವಿನಲ್ಲಿ ನಡೆದ ಸಂಗತಿಯನ್ನು ನೆನಪು ಬರುವಂತೆ ಮಾಡಿದರು ಮತ್ತು ಅವಸ್ಥೆಯವರನ್ನು ಒಬ್ಬ ಅಸಾಧಾರಣ ಮನುಷ್ಯ ಎಂದು ಗುರುತಿಸಿದರು. ಅವರು ರಾಧಾಕೃಷ್ಣ ಆಯಿಯನ್ನು ತಮ್ಮ ಮಹಿಳಾ ಗುರುವಿನ ಸಹೋದರಿ ಎಂದು ಭಾವಿಸಲು ಒಪ್ಪಿದರು. ಆದರೆ ಅವಳಿಗೆ ಬದಲಾಗಿ ಅಲ್ಲ ಎಂದು ಕೂಡ ತಿಳಿಸಿದರು. ಆಗ ಆಯಿಯವರು "ನಾನು ಸತ್ತರೂ ನೀನು ಒಪ್ಪಲಾರೆಯಾ" ಎಂದು ಕೇಳಿದರು. ಅವರು "ಇಲ್ಲ" ಎಂದರು. ಆ ಕ್ಷಣವೇ ಆಯಿಯವರು ಸತ್ತಂತೆ ಕೂಗಿಕೊಂಡರು ಮತ್ತು ನೆಲದ ಮೇಲೆ ಸತ್ತಂತೆ ಮಲಗಿದರು. ಅವರು ಮೊದಲಿಗೆ ಗುರುವನ್ನು ಸಂಧಿಸಿದಾಗಲೂ ಇದೇ ರೀತಿ ಆಗಿತ್ತು. ಅವರಿಗೆ ಎನೂ ತೋಚದೆ ಅವಳ ಹತ್ತಿರ ಹೋಗಿ ಅವಳ ತಲೆಯನ್ನು ತಮ್ಮ ತೊಡೆಯ ಮೇಲಿಟ್ಟುಕೊಂಡು ಅಳಲು ಪ್ರಾರಂಭಿಸಿದರು. ಅವಳನ್ನು ಪುನರ್ಜೀವಗೊಳಿಸಲು ಪಂಚಾಕ್ಷರಿ ಮಂತ್ರವನ್ನು ಜೋರಾಗಿ ಹೇಳಲು ಪ್ರಾರಂಭಿಸಿದರು. ಅವಳು ಬದುಕಿದರೆ ತಮ್ಮ 16 ವರ್ಷಗಳು ಜಪಿಸಿದ ಮಂತ್ರದಿಂದ ಗಳಿಸಿದ ಪುಣ್ಯವನ್ನು ಧಾರೆಯೆರೆಯುವಂತೆ ಪ್ರಾರ್ಥಿಸಿದರು. ಆ ಕೂಡಲೆ ಆಯಿಯವರು ಎದ್ದು ಕುಳಿತರು ಮತ್ತು "ನೀನು ಹೋಗಿ ನಿನ್ನ ಕೆಲಸ ನೋಡು" ಎಂದು ಹೇಳಿದಳು. ತಮ್ಮ ಗುರುಗಳು ಮಂತ್ರವನ್ನು ಜೋರಾಗಿ ಉಚ್ಚರಿಸಬೇಡವೆಂದು ಹೇಳಿದ್ದನ್ನು ತಾವು ಪಾಲಿಸದಿದ್ದಕ್ಕಾಗಿ ವ್ಯಥೆಪಟ್ಟುಕೊಂಡರು. ಅವರ ಮನಸ್ಸು ಅಲ್ಲೋಲ ಕಲ್ಲೋಲವಾಗಿ ಮಂತ್ರವನ್ನು ಪುನರುಚ್ಚಾರಣೆ ಮಾಡುತ್ತಲೇ ಇದ್ದರು. ಒಂದೆರಡು ನಿಮಿಷದ ನಂತರ ಆಯಿಯವರು ಅವರಿಗೆ ಮಂತ್ರೋಚ್ಚಾರಣೆ ನಿಲ್ಲಿಸೆಂದರು ಮತ್ತು ಮಲಗಿಕೊಂಡು ನಿದ್ರೆ ಮಾಡಲು ಹೇಳಿದರು. ಅವರು ಆಯಿಯವರು ಆದೇಶವನ್ನು ಪಾಲಿಸಿದರು. ಮರುದಿನವೂ ಇದೇ ತರಹದ ಅನುಭವವಾಯಿತು. ಕೊನೆಯ ದಿನ ಅವರು ಶಿರಡಿಗೆ ಬಂದಿದ್ದೇ ತಪ್ಪಾಯಿತೆಂದು ತಿಳಿದರು. ತಮ್ಮ ಗುರುವಿನ ಸಲಹೆಯನ್ನು ಪಾಲಿಸದೇ ಇದ್ದುದ್ದಕ್ಕಾಗಿ ವ್ಯಥೆಪಟ್ಟರು. ಅವರ ಗುರುವು "ನೀನು ಯಾವ ಸಂತನ ಬಳಿಗೂ ಹೋಗಬೇಡ. ಅವರು ನಿನ್ನನ್ನು ಪೀಡಿಸುವರು" ಎಂದಿದ್ದರು. ಆಗ ಅವಸ್ಥೆಯವರು ತಾವು ಶಿರಡಿಯಲ್ಲಿ ಇರುವುದರಿಂದ ತೊಂದರೆ ಆಗಿ ಮಂತ್ರಶಕ್ತಿ ಕಳೆದು ಹೋಗುವುದೆಂದು ಭಾವಿಸಿದರು. ಈ ಮನೋಭಾವದಲ್ಲಿ ಅವರು ಸಾಯಿಯವರು ರಾಧಾಕೃಷ್ಣ ಆಯಿ ಮತ್ತು ಇತರ ಭಕ್ತರನ್ನು ಈ ಮಾರ್ಗಕ್ಕೆಳೆದು, ಈ ಶಿರಡಿಯ ವೃದ್ಧ ಫಕೀರ ತಾನೇ ದೇವರು ಎಂದು ಹೇಳಿಕೊಳ್ಳುತ್ತಿದ್ದಾರೆಂದು ಭಾವಿಸಿದರು. ಕೂಡಲೆ ಅವರು ಸಾಯಿಯವರ ಪ್ರಭಾವದಿಂದ ತಪ್ಪಿಸಿಕೊಳ್ಳಬೇಕೆಂದು "ಶ್ರೀರಾಮ್, ಶ್ರೀರಾಮ್" ಎಂದು ನಾಮಜಪವನ್ನು ಮುಂದುವರಿಸಿದರು. ಆಯಿ ಮತ್ತು ರೀಗೆಯವರು ಬಾಬಾರವರ ಬಳಿಗೆ ಬಂದು ಅವಸ್ಥೆಯವರನ್ನು ಈ ಸ್ಥಿತಿಯಿಂದ ಬಿಡುಗಡೆ ಮಾಡಬೇಕೆಂದು ಕೇಳಿಕೊಂಡರು. ಇಡೀ ರಾತ್ರಿ ಈ ರೀತಿ ಇದ್ದ ಅವಸ್ಥೆಯವರಿಗೆ ಬೆಳಗಾಗುತ್ತಲೇ ಚಾವಡಿಯಿಂದ ಬಾಬಾರವರು "ಅಲ್ಲಾ ಮಾಲಿಕ್" ಎಂದು ಮೃದುವಾಗಿ ಹೇಳಿದ ಧ್ವನಿ ಕೇಳಿಸಿತು. ಸಾಯಿಯವರ ಆ ಧ್ವನಿಯನ್ನು ಕೇಳಿ ಅವರ ಹುಚ್ಚುತನ ಹೊರಟುಹೋಯಿತು. ಅವರು ಮಾನಸಿಕವಾಗಿ ಬಾಬಾರವರಲ್ಲಿ ಕ್ಷಮೆ ಯಾಚಿಸಿದರು. ಬಾಬಾರವರು ರೀಗೆ ಅವರನ್ನು ಕರೆಸಿ ಅವಸ್ಥೆಯನ್ನು ಶಿರಡಿಯಿಂದ ಅಂದೇ ಕರೆದುಕೊಂಡು ಹೋಗಲು ಹೇಳಿದರು. ಟಾಂಗಾವನ್ನು ತರಿಸಿ ರೀಗೆ ಮತ್ತು ಅವಸ್ಥೆ ಶಿರಡಿಯಿಂದ ಹೊರಟರು. ಆ ಹಳ್ಳಿಯ ದ್ವಾರದಲ್ಲಿ ಬಾಬಾರವರಿಗೆ ನಮಸ್ಕರಿಸಿ ಅವರು ಹೊರಡಲು ಆಶೀರ್ವಾದ ಪಡೆದರು. ದಾರಿಯುದ್ದಕ್ಕೂ ಅವಸ್ಥೆಯವರಿಗೆ ಪ್ರತಿಯೊಂದು ಗಂಡು ಪಕ್ಷಿಯೂ, ಪ್ರಾಣಿಯೂ ಬಾಬಾರವರಂತೆ ಕಂಡುಬಂದಿತು. ಪ್ರತಿಯೊಂದು ಹೆಣ್ಣು ಪಕ್ಷಿಯೂ, ಪ್ರಾಣಿಯೂ ರಾಧಾಕೃಷ್ಣ ಆಯಿಯವರಂತೆ ಕಂಡು ಬಂದಿತು. ಆವರು ಲೇಂಡಿ ತಲುಪುವ ತನಕ ಈ ತರಹ ಅನುಭವವಾಯಿತು. ಇದಾದ ನಂತರ ಅವರ ಮಂತ್ರ ಶಕ್ತಿ ಅವರನ್ನು ಬಿಟ್ಟಿತು. ಅವರು ತಮ್ಮ ಸ್ನೇಹಿತನ ತೊಡೆಯ ಮೇಲೆ ಸಮಾಧಾನವಾಗಿ ಮಲಗಿದರು ಮತ್ತು ಕ್ಷೇಮವಾಗಿ ಮನೆಯನ್ನು ಸೇರಿದರು.

ಶಿರಡಿಗೆ ಬಂದ ಮೇಲಿನಿಂದ ಅವರಿಗೆ ಪಂಡರಾಪುರಕ್ಕೆ ಹೋಗುವ ಆಸೆ ಹೊರಟುಹೋಯಿತು. ಈ ಘಟನೆಯಾದ ನಂತರದಿಂದ ಅವಸ್ಥೆಯವರು ಶಿರಡಿಗೆ ತಮ್ಮ ಕುಟುಂಬ ಸಮೇತರಾಗಿ ಬಾಬಾರವರ ಮಹಾಸಮಾಧಿಯ ತನಕವೂ ವರ್ಷಕ್ಕೆ 2-3 ಬಾರಿ ಬರುತ್ತಿದ್ದರು.
ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment