Tuesday, August 9, 2011

ಶಿರಡಿ ಸಾಯಿಬಾಬಾರವರ  "ಶ್ರೀ ಸಾಯಿನಾಥ ಸ್ತವನ ಮಂಜರಿ"  ಕನ್ನಡ ಅವತರಣಿಕೆಯ ಧ್ವನಿಸುರಳಿ  ಬಿಡುಗಡೆ ಸಮಾರಂಭ - ಕೃಪೆ: ಸಾಯಿಅಮೃತಧಾರಾ.ಕಾಂ   

ಸಾಯಿ ಮಹಾಭಕ್ತ ಶ್ರೀ.ದಾಸಗಣು ಮಹಾರಾಜ್ ವಿರಚಿತ "ಶ್ರೀ ಸಾಯಿನಾಥ ಸ್ತವನ ಮಂಜರಿ" ಯ ಕನ್ನಡ ಅವತರಣಿಕೆಯನ್ನು ಸಿ.ಡಿ ರೂಪದಲ್ಲಿ ಇದೇ ತಿಂಗಳ 15ನೇ ಆಗಸ್ಟ್ 2011, ಸೋಮವಾರದಂದು ಸಂಜೆ 5:30 ಕ್ಕೆ ಬೆಂಗಳೂರಿನ ಜಯನಗರ 8ನೇ ಬ್ಲಾಕ್ ನಲ್ಲಿರುವ ಜೆ.ಎಸ್.ಎಸ್.ಸಭಾಂಗಣದಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದೆ. ಶ್ರೀಮತಿ.ಅನುರಾಧ ಭಟ್ ರವರು ಸ್ತವನ ಮಂಜರಿಯನ್ನು ಸುಶ್ರಾವ್ಯವಾಗಿ ಶ್ರೀ.ಬಾಲು ಶರ್ಮರವರ ಮಾರ್ಗದರ್ಶನದಲ್ಲಿ ಹಾಡಿರುತ್ತಾರೆ. ಈ ಧ್ವನಿಸುರಳಿಯನ್ನು ಬೆಂಗಳೂರಿನ ಶ್ರೀ.ಬಿ.ಜೆ.ರಮೇಶ್ ರವರು ಬೆಂಗಳೂರಿನ ಮತ್ತು ಮೈಸೂರಿನ ಹಲವಾರು ಸಾಯಿಭಕ್ತರ ಸಹಯೋಗದೊಂದಿಗೆ  ಹೊರತರುತ್ತಿದ್ದಾರೆ.

ಕಾರ್ಯಕ್ರಮ ವಿವರಗಳನ್ನು ಒಳಗೊಂಡ ಆಹ್ವಾನ ಪತ್ರಿಕೆಯನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಲಗ್ಗತಿಸಲಾಗಿದೆ.



ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment