Monday, August 15, 2011

ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ  ಶಿರಡಿ ಸಾಯಿಬಾಬಾ ಶಾಲೆ - ಕೃಪೆ: ಸಾಯಿಅಮೃತಧಾರಾ.ಕಾಂ 
15ನೇ ಆಗಸ್ಟ್ 2011 ರಂದು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆದ ಪಥಸಂಚಲನದಲ್ಲಿ ಸಾಯಿಬಾಬಾ ಶಾಲೆಯ ಮಕ್ಕಳು ಭಾಗವಹಿಸಿದ್ದರು. 




ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರ ಧ್ವಜಕ್ಕೆ ವಂದನೆಯನ್ನು ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿ ಶ್ರೀ.ಕಿಶೋರ್ ಮೋರೆಯವರು ಸಲ್ಲಿಸಿದರು. ಈ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿ ಡಾ.ಏಕನಾಥ್ ಗೊಂಡ್ಕರ್, ಶಿರಡಿ ನಗರಸಭೆಯ ಅಧ್ಯಕ್ಷೆ ಶ್ರೀಮತಿ.ಅಲ್ಕಾ ಶೆಜ್ವಾಲ್, ಶಿರಡಿ ಪೋಲಿಸ್ ಉಪ ಆಯುಕ್ತ ಶ್ರೀ.ಶ್ರೀಕಾಂತ್ ಜವಾಲೆ, ಶಿರಡಿ ನಗರಸಭೆಯ ಉಪಾಧ್ಯಕ್ಷ ಶ್ರೀ.ಶಿವಾಜಿ ಗೊಂಡ್ಕರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. 



ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ  ನಡೆದ ಪಥ ಸಂಚಲನದಲ್ಲಿ ಶಿರಡಿ ಸಾಯಿಬಾಬಾ ಶಾಲೆಯ ಮಕ್ಕಳಿಂದ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿ ಶ್ರೀ.ಕಿಶೋರ್ ಮೋರೆಯವರು ಗೌರವ ವಂದನೆಯನ್ನು ಸ್ವೀಕರಿಸಿದರು. 


ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ಶಿರಡಿ ಮಹಾನಗರ ಪಾಲಿಕೆಯ ಉಪಾಧ್ಯಕ್ಷ ಶ್ರೀ.ಶಿವಾಜಿ ಗೊಂಡ್ಕರ್ ರವರು 10ನೇ ತರಗತಿ ಮತ್ತು 12ನೇ ತರಗತಿಯಲ್ಲಿ ಮೊದಲ 3 ಸ್ಥಾನ ಗಳಿಸಿದ ಶಾಲೆಯ ವಿದ್ಯಾರ್ಥಿಗಳಿಗೆ ಪಾರಿತೋಷಕವನ್ನು ನೀಡಲು  ತಮ್ಮ ತಾಯಿಯವರ ನೆನಪಿನಲ್ಲಿ 1 ಲಕ್ಷ  ರುಪಾಯಿಗಳ ದೇಣಿಗೆಯನ್ನು ನೀಡಿದರು. ಆ ದೇಣಿಗೆಯನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿ ಡಾ.ಏಕನಾಥ್ ಗೊಂಡ್ಕರ್ ರವರು ಸ್ವೀಕರಿಸಿದರು. ದೇಣಿಗೆಯನ್ನು ನೀಡಿದ ನಂತರ ಅವರನ್ನು ಡಾ.ಏಕನಾಥ್ ಗೊಂಡ್ಕರ್ ರವರು ಸನ್ಮಾನಿಸಿದರು. 




ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment