Wednesday, August 24, 2011

ಅನಂತಪುರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಶ್ರೀ ಶಿರಡಿ ಸಾಯಿಬಾಬಾ  ಸೇವಾ ಟ್ರಸ್ಟ್ (ನೋಂದಣಿ), ವಾಣಿ ವಿದ್ಯಾಲಯದ ಹತ್ತಿರ, ಪರಿಗಿ ಅಂಚೆ-515 261, ಹಿಂದೂಪುರ ತಾಲ್ಲೂಕು, ಅನಂತಪುರ ಜಿಲ್ಲೆ, ಆಂಧ್ರಪ್ರದೇಶ  - ಕೃಪೆ: ಸಾಯಿಅಮೃತಧಾರಾ.ಕಾಂ 

ಈ ದೇವಾಲಯವು ಅನಂತಪುರ ಜಿಲ್ಲೆಯ ಹಿಂದೂಪುರ ತಾಲ್ಲೂಕಿನ ಪರಿಗಿಯಲ್ಲಿ ಇರುತ್ತದೆ. ಈ ದೇವಾಲಯವು ಹಿಂದೂಪುರ ಬಸ್ ನಿಲ್ದಾಣದಿಂದ 5 ಕಿಲೋಮೀಟರ್ ದೂರದಲ್ಲಿರುತ್ತದೆ.  ಹಿಂದೂಪುರ ಬಸ್ ನಿಲ್ದಾಣದಿಂದ ಹೇರಳವಾಗಿ ಬಸ್ ಗಳು ಮತ್ತು ಆಟೋಗಳು ಸಿಗುತ್ತವೆ. 

ಈ ದೇವಾಲಯದ ಭೂಮಿ ಪೂಜೆಯನ್ನು  29ನೇ ನವೆಂಬರ್ 2009 ರಂದು ನೆರವೇರಿಸಲಾಯಿತು. 

ಈ ದೇವಾಲಯದ ಉದ್ಘಾಟನೆಯನ್ನು 5ನೇ ಮೇ 2011 ರಂದು ಗುಂಟೂರಿನ ಖ್ಯಾತ ಸಾಯಿ ಭಕ್ತರಾದ  ಶ್ರೀ.ಸಿ.ಕೆ.ನಾಯ್ಡುರವರು ಆರ್.ಎಸ್.ಕೊಂಡಪುರಂ ನ ಸಾಯಿ ಋತ್ವಿಕ್ ಶ್ರೀ.ಜಿ.ರಾಮಮುರ್ತಿ ಪ್ರಸಾದ್ ರವರ ಮಾರ್ಗದರ್ಶನದಲ್ಲಿ ನೆರವೇರಿಸಿದರು. ನಂದ್ಯಾಲದ ಸಾಯಿಭಕ್ತರಾದ  ಶ್ರೀ.ಸಿ.ರಂಗನಾಯಕುಲು ಮತ್ತು ಬೆಂಗಳೂರಿನ ಖ್ಯಾತ ಸಾಯಿಭಕ್ತೆಯಾದ ಶ್ರೀಮತಿ.ಸಾಯಿಮಾತಾರವರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 
 
 
ಸಾಯಿಬಾಬಾ ಮಂದಿರವು 5 ಸೆಂಟ್ ಪ್ರದೇಶದಲ್ಲಿದ್ದು ಈ ಭೂಮಿಯನ್ನು ಸ್ಥಳೀಯ ಅಂಧ ಸಾಯಿಭಕ್ತರಾದ ಶ್ರೀ.ಕೆ.ಆದಿನಾರಾಯಣ ರೆಡ್ಡಿಯವರು ದಾನವಾಗಿ ನೀಡಿರುತ್ತಾರೆ.

ಈ ದೇವಾಲಯವನ್ನು ಶ್ರೀ.ಕೆ.ಗೋಪಾಲ್, ಶ್ರೀಮತಿ.ಆರ್.ಜ್ಯೋತಿ ಮತ್ತು ಶ್ರೀ.ಎಸ್.ಮಲ್ಲಿಕಾರ್ಜುನ ರೆಡ್ಡಿಯವರು ಜಂಟಿಯಾಗಿ ನಿರ್ಮಿಸಿರುತ್ತಾರೆ. ಶ್ರೀ.ಎಸ್.ಮಲ್ಲಿಕಾರ್ಜುನ ರೆಡ್ಡಿಯವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ದಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯವು ಬೆಳಿಗ್ಗೆ 6:00 ಕ್ಕೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಮತ್ತು ರಾತ್ರಿ 8:00 ಕ್ಕೆ ಶೇಜಾರತಿಯೊಂದಿಗೆ ಮುಚ್ಚುತ್ತದೆ. 

ದೇವಾಲಯದ ಗರ್ಭಗುಡಿಯಲ್ಲಿ 5 1/2 ಅಡಿ ಎತ್ತರದ ಅಮೃತ ಶಿಲೆಯ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಅಲ್ಲದೆ, ಒಂದು ಪುಟ್ಟ ಅಮೃತ ಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಕೂಡ ಇರಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಮುಂಭಾಗದಲ್ಲಿ ಅಮೃತ ಶಿಲೆಯ ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿದೆ. 
 
ಮಂದಿರದ ಹೊರಗಡೆ ಶಿರಡಿಯಲ್ಲಿ ಇರುವಂತೆ ಅಮೃತ ಶಿಲೆಯ ನಂದಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. 
 
ಸಾಯಿಬಾಬಾರವರ ಎರಡು ಆಳೆತ್ತರದ ಚಿತ್ರಪಟಗಳನ್ನು ಮತ್ತು ತೆಲುಗಿನಲ್ಲಿ ಸಾಯಿಬಾಬಾರವರ ಹನ್ನೊಂದು ಅಭಿವಚನಗಳನ್ನು ಬರೆದಿರುವ ಫಲಕವನ್ನು ಮಂದಿರದ ಒಳ ಗೋಡೆಗಳ ಮೇಲೆ ತೂಗುಹಾಕಲಾಗಿದೆ.

ಮಂದಿರದ ಆವರಣದ ಬಲಭಾಗದಲ್ಲಿ ಕಪ್ಪು ಶಿಲೆಯ ಗಣಪತಿ, ನಾಗದೇವತೆ ಮತ್ತು ಅಮೃತ ಶಿಲೆಯ ದತ್ತಾತ್ರೇಯ ದೇವರುಗಳ ಪುಟ್ಟ ಆಲಯವನ್ನು ಸ್ಥಾಪಿಸಲಾಗಿದೆ.

ಮಂದಿರದ ಆವರಣದ ಎಡಭಾಗದಲ್ಲಿ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ.
 
ಮಂದಿರದ ಆವರಣದಲ್ಲಿ ನಂದಿಯ ಹಿಂಭಾಗದಲ್ಲಿ "ಸಾಯಿ ಕೋಟಿ ಸ್ಥೂಪ" ವನ್ನು ನಿರ್ಮಿಸಲಾಗಿದ್ದು ಅದರ ಮೇಲ್ಭಾಗದಲ್ಲಿ ಅಮೃತ ಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ.
 













 

 
ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು



ಆರತಿಯ ಸಮಯ: 

ಕಾಕಡಾ ಆರತಿ 
6:00 AM
 ಮಧ್ಯಾನ್ಹ ಆರತಿ
12:00 PM
ಧೂಪಾರತಿ
6:00 PM
ಶೇಜಾರತಿ
8:00 PM


ಪ್ರತಿದಿನ ಬೆಳಿಗ್ಗೆ  7 ಘಂಟೆಯಿಂದ 8 ಘಂಟೆಯವರೆಗೆ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ "ಕ್ಷೀರಾಭಿಷೇಕ" ಮಾಡಲಾಗುತ್ತದೆ. ಯಾವುದೇ ಸೇವಾಶುಲ್ಕ ನಿಗದಿಪಡಿಸಿರುವುದಿಲ್ಲ. 

ಪ್ರತಿ ಗುರುವಾರ,ವಿಶೇಷ ಉತ್ಸವದ ದಿನಗಳಂದು ಮತ್ತು ಸಾಯಿ ಭಕ್ತರು ಸೇವೆಯನ್ನು ಮಾಡಿಸಿದ ದಿನಗಳಲ್ಲಿ ವಿಶೇಷವಾದ ವಿಳ್ಲೇದೆಲೆಯ ಅಲಂಕಾರವನ್ನು ಮಾಡಲಾಗುತ್ತದೆ. ಯಾವುದೇ ಸೇವಾಶುಲ್ಕ ನಿಗದಿಪಡಿಸಿರುವುದಿಲ್ಲ. 


ವಿಶೇಷ ಉತ್ಸವದ ದಿನಗಳು: 

ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ 5ನೇ ಮೇ.
ಶ್ರೀರಾಮನವಮಿ. 
ಗುರುಪೂರ್ಣಿಮೆ
ವಿಜಯದಶಮಿ
 
ದೇಣಿಗೆಗೆ ಮನವಿ: 
ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೊಸ್ಕರ ದೇಣಿಗೆಯನ್ನು ನೀಡಲು ಇಚ್ಚಿಸುವ ಸಾಯಿಭಕ್ತರು ಚೆಕ್ ಅಥವಾ ಡಿಡಿ ಮುಖಾಂತರ "ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ್ (ನೋಂದಣಿ) ,ಬ್ಯಾಂಕ್ ಆಫ್ ಬರೋಡಾ,  ಬಿ.ಟಿ.ಎಂ.ಶಾಖೆ, ಖಾತೆ ಸಂಖ್ಯೆ:29600200000249 RTGS/NEFT IFSC ಕೋಡ್ BARBOBTMBAN" ಗೆ ಸಂದಾಯವಾಗುವಂತೆ ದೇಣಿಗೆಯನ್ನು ನೀಡಬಹುದು.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 



ಸ್ಥಳ: 
ವಾಣಿ ವಿದ್ಯಾಲಯದ ಹತ್ತಿರ, ಪರಿಗಿ, ಹಿಂದೂಪುರ ತಾಲ್ಲೂಕು.

ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ, 
ಶ್ರೀ ಶಿರಡಿ ಸಾಯಿಬಾಬಾ  ಸೇವಾ ಟ್ರಸ್ಟ್ (ನೋಂದಣಿ), 
ವಾಣಿ ವಿದ್ಯಾಲಯದ ಹತ್ತಿರ, 
ಪರಿಗಿ ಅಂಚೆ-515 261, ಹಿಂದೂಪುರ ತಾಲ್ಲೂಕು, 
ಅನಂತಪುರ ಜಿಲ್ಲೆ, ಆಂಧ್ರಪ್ರದೇಶ
 
ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಕೆ.ಗೋಪಾಲ್ - ಅಧ್ಯಕ್ಷರು / ಶ್ರೀಮತಿ.ಆರ್.ಜ್ಯೋತಿ - ಖಚಾಂಚಿ/ ಶ್ರೀ.ಎಸ್.ಮಲ್ಲಿಕಾರ್ಜುನ ರೆಡ್ಡಿ - ಕಾರ್ಯದರ್ಶಿ.

ದೂರವಾಣಿ ಸಂಖ್ಯೆಗಳು: 
+91 8556 248216 (ಸ್ಥಿರದೂರವಾಣಿ) / + 91 98452 70562 / +91 99483 59364 / +91 72591 84944
 
ಈ  ಮೇಲ್ ವಿಳಾಸ:  
 
 
ಮಾರ್ಗಸೂಚಿ:
ಹಿಂದೂಪುರ ಬಸ್ ನಿಲ್ದಾಣದಲ್ಲಿ ಇಳಿಯುವುದು. ಅಲ್ಲಿಂದ ಬಸ್ ಅಥವಾ ಆಟೋ ಹಿಡಿದು ಪರಿಗಿ  ಗ್ರಾಮಕ್ಕೆ ಹೋಗಬಹುದು.  ಹಿಂದೂಪುರ ಮಡಗಶಿರ ರಸ್ತೆಯಲ್ಲಿ ಸುಮಾರು 5 ಕಿಲೋಮೀಟರ್ ಕ್ರಮಿಸಿದರೆ  ಪರಿಗಿ ಸಿಗುತ್ತದೆ. ಅಲ್ಲಿನ ಬಸ್ ನಿಲ್ದಾಣದಲ್ಲಿ ಇಳಿದು 5 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. ಹಿಂದೂಪುರ ಬಸ್ ನಿಲ್ದಾಣದಿಂದ ಹೇರಳವಾಗಿ ಬಸ್ ಗಳು ಮತ್ತು ಆಟೋಗಳು ಸಿಗುತ್ತವೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment