Monday, August 1, 2011

ಶಿರಡಿ ಸಾಯಿಬಾಬಾರವರ ಹೊಸ ವೀಡಿಯೋ ಸಿಡಿ "ಸಾಯಿ ಚರಣ ವಂದನಾ" ಬಿಡುಗಡೆ ಸಮಾರಂಭ  - ಕೃಪೆ: ಸಾಯಿಅಮೃತಧಾರಾ.ಕಾಂ 

ಖ್ಯಾತ ಸಾಯಿ ಭಜನ ಗಾಯಕ ಶ್ರೀ.ಕೈಲಾಶ್ ಹರೇಕೃಷ್ಣ ದಾಸ್ ರವರು ತಾವೇ ರಚಿಸಿ, ರಾಗ ಸಂಯೋಜನೆ ಮಾಡಿ ಮತ್ತು  ಹಾಡಿರುವ ಹೊಸ ವೀಡಿಯೋ ಸಿಡಿ "ಸಾಯಿ ಚರಣ ವಂದನಾ" ದ ಬಿಡುಗಡೆ ಸಮಾರಂಭ ಕಳೆದ ತಿಂಗಳ ಗುರುಪೂರ್ಣಿಮೆಯ ಶುಭದಿನವಾದ 15ನೇ ಜುಲೈ 2011 ರಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಸಮಾಧಿ ಮಂದಿರದ ಮಧ್ಯದಲ್ಲಿರುವ ಸಭಾಂಗಣದಲ್ಲಿ ನೆರವೇರಿತು. ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿ ಶ್ರೀ.ಅಶೋಕ್ ಕಂಬೇಕರ್ ರವರು ಸಿಡಿಯನ್ನು ಬಿಡುಗಡೆಗೊಳಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿ ಶ್ರೀ.ಕಿಶೋರ್ ಮೋರೆಯವರು ಕೂಡ ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment