Thursday, November 18, 2010

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಶ್ರೀ.ಅಶೋಕ್ ಚವಾಣ್ ಶಿರಡಿ ಭೇಟಿ - 18ನೇ ನವೆಂಬರ್ 2010 - ಕೃಪೆ: ಸಾಯಿಅಮೃತಧಾರಾ.ಕಾಂ 

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶ್ರೀ.ಅಶೋಕ್ ಚವಾಣ್ ರವರು ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನ ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆಯವರು ಶ್ರೀ.ಅಶೋಕ್ ಚವಾಣ್ ರವರನ್ನು ಸನ್ಮಾನಿಸಿದರು. ಆ ಸಮಯದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟೀಗಳಾದ ಶ್ರೀ.ಸುರೇಶ ವಾಬ್ಲೆ, ಶ್ರೀ.ಕೃಷ್ಣಚಂದ್ರ ಪಾಂಡೆ ಮತ್ತು ಶ್ರೀ. ಅಶೋಕ್ ಕಂಬೇಕರ್ ರವರು ಕೂಡ ಉಪಸ್ಥಿತರಿದ್ದರು. 

ಶಿರಡಿ ಸಾಯಿಬಾಬಾ ಸಮಾಧಿ ದರ್ಶನ ಪಡೆಯುತ್ತಿರುವ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಶ್ರೀ.ಅಶೋಕ್ ಚವಾಣ್ ಮತ್ತು ಅವರ ಧರ್ಮಪತ್ನಿ. ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆಯವರು ಕೂಡ ಉಪಸ್ಥಿತರಿದ್ದರು. 

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶ್ರೀ.ಅಶೋಕ್ ಚವಾಣ್ ರವರನ್ನು ಸನ್ಮಾನಿಸುತ್ತಿರುವ ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment