Tuesday, November 30, 2010

ಬೆಂಗಳೂರಿನಲ್ಲಿ ನಡೆದ ಅಖಂಡ ಸಾಯಿನಾಮ ಜಪ ಕಾರ್ಯಕ್ರಮದ ಒಂದು ವರದಿ - 28ನೇ ನವೆಂಬರ್ 2010 - ಕೃಪೆ: ಸಾಯಿಅಮೃತಧಾರಾ.ಕಾಂ 

ಇದೇ ತಿಂಗಳ 28ನೇ ನವೆಂಬರ್ 2010, ಭಾನುವಾರದಂದು ಅನನ್ಯ ಸಾಯಿಭಕ್ತರಾದ ಡಾ.ಗಂಗಾಧರ ಶೆಟ್ಟಿಯವರ ವಿವೇಕಾನಂದ ನಗರದ  ನಿವಾಸದಲ್ಲಿ ಅಖಂಡ ಸಾಯಿನಾಮ ಜಪವಾದ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಗುಂಟೂರಿನಿಂದ ಸಾಯಿಭಾಜನಾ ಮಂಡಳಿಯವರು ಬಂದು ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಅನೇಕ ಸಾಯಿಭಕ್ತರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಾಯಿಭಕ್ತ ಮತ್ತು ದಕ್ಷಿಣ ಭಾರತದಲ್ಲಿ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ತಾರಕ ಮಂತ್ರ ವನ್ನು ಅತ್ಯಂತ ಜನಪ್ರಿಯಗೊಳಿಸುವುದರಲ್ಲಿ ಕಾರಣೀಭೂತರಾದ ಶ್ರೀ.ಡಿ.ಶಂಕರಯ್ಯ ಮತ್ತು ಆಂಧ್ರಪ್ರದೇಶದ ಅತ್ಯಂತ ಜನಪ್ರಿಯ ಸಾಯಿ ಮಾಸ ಪತ್ರಿಕೆಯಾದ "ಶ್ರೀ ಸಾಯಿ ದರ್ಶನ" ದ ಸಂಪಾದಕರಾದ ಶ್ರೀ.ರಾವ್ ಜಿ ಯವರು ಭಾಗವಹಿಸಿದ್ದರು. 

 ದ್ವಾರಕಾಮಾಯಿ ಸಾಯಿಬಾಬಾರವರ ಚಿತ್ರಪಟ 

 ಸಾಯಿ ನಾಮ ಜಪದಲ್ಲಿ ನಿರತರಾಗಿರುವ ಗುಂಟೂರಿನ ಭಜನಾ ತಂಡ

ಶ್ರೀ.ಡಿ.ಶಂಕರಯ್ಯ ನವರು ಡಾ.ಗಂಗಾಧರ ಶೆಟ್ಟಿಯವರ ಕುಟುಂಬ ಮತ್ತು ಗಣ್ಯರೊಂದಿಗೆ ಕಾಣಿಸಿಕೊಂಡಿದ್ದು ಹೀಗೆ!!!!

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment