Thursday, November 4, 2010

ಬೆಂಗಳೂರಿನ ಸಾಯಿಬಾಬಾ ಮಂದಿರ - ಓಂ ಶ್ರೀ.ಸಾಯಿ ರಾಮ್ ಟೆಂಪಲ್ ಟ್ರಸ್ಟ್ ( ರಿ ), 4ನೇ "ಟಿ" ಬ್ಲಾಕ್  ಬಡಾವಣೆ, ಜಯನಗರ, ಬೆಂಗಳೂರು-560 041 - ಕೃಪೆ : ಸಾಯಿಅಮೃತಧಾರಾ.ಕಾಂ

ಈ ಮಂದಿರವು ಬೆಂಗಳೂರು ದಕ್ಷಿಣದ ಪ್ರತಿಷ್ಟಿತ ಬಡಾವಣೆಯಾದ ಜಯನಗರದ 4ನೇ "ಟಿ" ಬ್ಲಾಕ್ ನಲ್ಲಿದೆ. ಇದರ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.


ಮಂದಿರದ ವಿಶೇಷತೆಗಳು

  • ಈ ಮಂದಿರವು 10ನೇ ಮಾರ್ಚ್ 2008 ರಂದು ಯಡನೀರು ಮಠದ ಶ್ರೀ.ಶ್ರೀ.ಕೇಶವಾನಂದ ಭಾರತಿ ಸ್ವಾಮೀಜಿಯವರಿಂದ ಉದ್ಘಾಟನೆಯಾಯಿತು. 
  • ಈ ಮಂದಿರದ ಒಳಗಡೆ ಸಾಯಿಬಾಬಾರವರ ಸುಂದರ ಅಮೃತಶಿಲೆಯ ವಿಗ್ರಹ, ಗಣಪತಿ, ರಾಮ ಪರಿವಾರ, ನವಗ್ರಹ ದೇವರುಗಳ  ಕಪ್ಪು ಶಿಲೆಯ ವಿಗ್ರಹಗಳಿವೆ. 
  • ದೇವಾಲಯದ ಹೊರಗಡೆ ಎಡಭಾಗದಲ್ಲಿ ಸಾಯಿಬಾಬಾರವರ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ. 
  • ದೇವಾಲಯದ ಹೊರಗಡೆ ಬಲಭಾಗದಲ್ಲಿ ತುಳಸಿ ಬೃಂದಾವನ ಸ್ಥಾಪಿಸಲಾಗಿದೆ. 
  • ದೇವಾಲಯದ ಹಿಂಭಾಗದಲ್ಲಿ ಪವಿತ್ರ ಅರಳಿ ಮರದ ಕೆಳಗೆ ನಾಗ ದೇವತೆಗಳ ವಿಗ್ರಹವನ್ನು ಸ್ಥಾಪಿಸಲಾಗಿದೆ. 
  • ಪವಿತ್ರ ಬೇವಿನ ಮರವು ಸಾಯಿಬಾಬಾ ಮಂದಿರದ ಹಿಂಭಾಗದಲ್ಲಿ ಅರಳಿ ಮರದ ಪಕ್ಕದಲ್ಲಿ ಸ್ಥಾಪಿಸಲಾಗಿದೆ. 
  • ಗಣಪತಿ, ಸಾಯಿಬಾಬಾ ಮತ್ತು ಶ್ರೀರಾಮ ಪರಿವಾರದ ಪಂಚಲೋಹದ ವಿಗ್ರಹಗಳು ದೇವಾಲಯದಲ್ಲಿ ಇದ್ದು ಇವುಗಳನ್ನು ವಿಶೇಷ ಉತ್ಸವದ ದಿನಗಳಲ್ಲಿ ಉತ್ಸವ ಮುರ್ತಿಗಳಂತೆ ಬಳಸಲಾಗುತ್ತದೆ. 




 ದೇವಾಲಯದ ಹೊರನೋಟ 

 ಸಾಯಿಬಾಬಾರವರ ವಿಗ್ರಹ 
ಗಣಪತಿಯ ವಿಗ್ರಹ 

ಶ್ರೀರಾಮ ಪರಿವಾರದ ವಿಗ್ರಹಗಳು 

ಪವಿತ್ರ ಧುನಿ ಮಾ


ನಾಗ ದೇವತೆಗಳು 


ಉತ್ಸವದ ವಿಗ್ರಹಗಳು 

ದೇವಾಲಯದ ಕಾರ್ಯಚಟುವಟಿಕೆಗಳು 

ದಿನನಿತ್ಯದ ಕಾರ್ಯಕ್ರಮಗಳು:



ಆರತಿಯ ಸಮಯ
ಆರತಿ
ಗುರುವಾರದ ಸಮಯ 
ಬೆಳಿಗ್ಗೆ
8:30 am
ಮಧ್ಯಾನ್ಹ
12:00 pm
ರಾತ್ರಿ
8:00 pm


  • ಗುರುವಾರ ಬಿಟ್ಟು ಉಳಿದ ಎಲ್ಲಾ ದಿನಗಳಲ್ಲಿ ಆರತಿಯನ್ನು ಬೆಳಗ್ಗೆ 8:30 ಕ್ಕೆ ಹಾಗೂ ರಾತ್ರಿ 8 ಘಂಟೆಗೆ ಮಾಡಲಾಗುತ್ತದೆ. 
  •  ಶಿರಡಿ ಸಾಯಿಬಾಬಾ, ಗಣೇಶ ಮತ್ತು ಶ್ರೀರಾಮ ದೇವರುಗಳಿಗೆ ಅರ್ಚನೆಯನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 2/- ರುಪಾಯಿಗಳು.
  • ಪಂಚಾಮೃತ ಅಭಿಷೇಕವನ್ನು ಪ್ರತಿನಿತ್ಯ ಮಾಡಲಾಗುತ್ತದೆ. ಸೇವಾ ಶುಲ್ಕ 101 /- ರುಪಾಯಿಗಳು.
  • ರುದ್ರಾಭಿಷೇಕವನ್ನು ಪ್ರತಿನಿತ್ಯ ಮಾಡಲಾಗುತ್ತದೆ. ಸೇವಾ ಶುಲ್ಕ 100 /- ರುಪಾಯಿಗಳು. 
  • ನವಗ್ರಹ ದೇವರುಗಳಿಗೆ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾಶುಲ್ಕ 101 /- ರುಪಾಯಿಗಳು.
  • ಸಹಸ್ರನಾಮವನ್ನು ಪ್ರತಿನಿತ್ಯ ಮಾಡಲಾಗುತ್ತದೆ. ಸೇವಾ ಶುಲ್ಕ 25/-  ರುಪಾಯಿಗಳು. 

ವಿಶೇಷ ದಿನಗಳು: 

  • ಪ್ರತಿ ತಿಂಗಳ ಹುಣ್ಣಿಮೆಯ ದಿನ ಸತ್ಯನಾರಾಯಣ ಪೂಜೆಯನ್ನು ಮಾಡಲಾಗುವುದು. ಸೇವಾ ಶುಲ್ಕ 101/- ರುಪಾಯಿಗಳು. 
  • ಸಂಕಷ್ಟ ಚತುರ್ಥಿಯನ್ನು ಪ್ರತಿ ತಿಂಗಳು ಮಾಡಲಾಗುವುದು. ಸೇವಾ ಶುಲ್ಕ 51/- ರುಪಾಯಿಗಳು. 
ವಿಶೇಷ ಉತ್ಸವದ ದಿನಗಳು 

  1. ಪ್ರತಿ ವರ್ಷದ 10ನೇ ಮಾರ್ಚ್ ದೇವಾಲಯದ ವಾರ್ಷಿಕೋತ್ಸವ.
  2. ಗುರು ಪೂರ್ಣಿಮೆ.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:

ವಿಳಾಸ :

ಓಂ ಶ್ರೀ.ಸಾಯಿ ರಾಮ್ ಟೆಂಪಲ್ ಟ್ರಸ್ಟ್ ( ರಿ )
ನಂ.1/1, 18ನೇ ಮುಖ್ಯ ರಸ್ತೆ, ಜಿ.ಎನ್.ಆರ್ ಕಲ್ಯಾಣಮಂಟಪದ ಪಕ್ಕ, 
 4ನೇ "ಟಿ" ಬ್ಲಾಕ್  ಬಡಾವಣೆ, ಜಯನಗರ, ಬೆಂಗಳೂರು-560 041.  

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಎಸ್.ಎನ್.ಮೋಹನ್ ಕುಮಾರ್ / ಶ್ರೀ.ಎಸ್.ಎನ್.ಶೇಖರ್

ದೂರವಾಣಿ ಸಂಖ್ಯೆಗಳು: 

94483 85596 / 98451 90322

ಮಾರ್ಗ ಸೂಚಿ: 

ಜಯನಗರ 9ನೇ ಬಡಾವಣೆಯ ಕೊನೆಯ ಬಸ್ ನಿಲ್ದಾಣದ ಹಿಂಭಾಗ 2 ನಿಮಿಷ ನಡೆದರೆ ಈ ಮಂದಿರ ಸಿಗುತ್ತದೆ. ಈ ಮಂದಿರವು ಬಡಾವಣೆಯ ಪ್ರತಿಷ್ಟಿತ ಜಿ.ಎನ್.ಆರ್. ಕಲ್ಯಾಣ ಮಂಟಪ ಮತ್ತು ಕೃಷ್ಣ ಕಲ್ಯಾಣ ಮಂಟಪದ ಪಕ್ಕದಲ್ಲಿ ಇದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment