Wednesday, November 3, 2010

ಬೆಂಗಳೂರಿನ ಸಾಯಿ ಭಜನ ವೃಂದ - ಸದ್ಗುರು ಸಾಯಿ ಭಜನ ಮಂಡಳಿ - ಕೃಪೆ: ಸಾಯಿಅಮೃತಧಾರಾ.ಕಾಂ


ಸದ್ಗುರು ಸಾಯಿ ಭಜನ ಮಂಡಳಿ ಸಂಸ್ಥಾಪಕ ಚಂದ್ರಶೇಖರ್

ಸದ್ಗುರು ಸಾಯಿ ಭಜನ ಮಂಡಳಿಯ ಸಂಸ್ಥಾಪಕರು ಅನನ್ಯ ಸಾಯಿ ಭಕ್ತರಾದ ಶ್ರೀ.ಎಸ್.ಚಂದ್ರಶೇಖರ್ ರವರು. ಇವರು 28 ನೇ ಆಗಸ್ಟ್ 1980 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು ತಮ್ಮ 3ನೇ  ವರ್ಷದಿಂದ ಅಂಗ ವೈಕಲ್ಯದಿಂದ ಬಳಲುತ್ತಿದ್ದರೂ ಕೂಡ ಅದರಿಂದ ಸ್ವಲ್ಪವೂ ಧೃತಿಗೆಡದೇ ತಮ್ಮದೇ ಆದ ರೀತಿಯಲ್ಲಿ ಸಾಯಿಬಾಬಾರವರ ಸೇವೆಯನ್ನು ಮಾಡುತ್ತಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ. ಇವರು ತಮ್ಮ 14ನೇ ವಯಸ್ಸಿನಲ್ಲಿ ಬೆಂಗಳೂರಿನ ನಿವಾಸಿಗಳಾದ ದಿವಂಗತ ಶ್ರೀ.ಗಂಗಾಧರ ಸ್ವಾಮಿಯವರ ಮಾರ್ಗದರ್ಶನದಲ್ಲಿ ಮತ್ತು ಕುಂಡಲಿನಿ ಜ್ಞಾನ ಯೋಗಿ ಮತ್ತು ಅವಧೂತರಾದ ಶ್ರೀ.ಶ್ರೀ.ಶ್ರೀ.ಗೋವಿಂದಗಿರಿ ಸ್ವಾಮಿಗಳ ಕೃಪಾಕಟಾಕ್ಷದೊಂದಿಗೆ ಶಿರಡಿ ಸಾಯಿಬಾಬಾರವರ ಕಡೆಗೆ ಸೆಳೆಯಲ್ಪಟ್ಟರು ಮತ್ತು ಸಾಯಿಬಾಬಾರವರ ಭಕ್ತರಾದರು. ಅಂದಿನಿಂದ ಇಂದಿನವರೆವಿಗೂ ಕೂಡ ಇವರು ಬೆಂಗಳೂರಿನ ಅನೇಕ ಕಡೆಗಳಲ್ಲಿ ಸತತವಾಗಿ 16 ವರ್ಷಗಳಿಂದ ಸಾಯಿ ಭಜನೆಗಳನ್ನು ಹಾಡುತ್ತಾ ಬಂದಿದ್ದಾರೆ. ಅಷ್ಟೇ ಆಲ್ಲದೇ ಇವರು ಅನೇಕ ಸಾಯಿ ಭಜನೆಗಳನ್ನು ಕೂಡ ರಚಿಸಿದ್ದಾರೆ. 

ಇವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ: 

ಸಂಪರ್ಕದ ವಿವರಗಳು:

ವಿಳಾಸ: 
ಎಸ್. ಚಂದ್ರಶೇಖರ್, ನಂ.38, 7ನೇ ಮುಖ್ಯರಸ್ತೆ, 
7ನೇ ಘಟ್ಟ, 6ನೇ  ಅಡ್ಡರಸ್ತೆ, ನಾಯ್ಡು ಬಡಾವಣೆ, 
ಬನಶಂಕರಿ 3ನೇ ಹಂತ, ಬೆಂಗಳೂರು - 560 085.  ಕರ್ನಾಟಕ. 

ದೂರವಾಣಿ ಸಂಖ್ಯೆ:  
+91 99029 35699 


ಕನ್ನಡ ಅನುವಾದ : ಶ್ರೀಕಂಠ ಶರ್ಮ

No comments:

Post a Comment