Saturday, July 31, 2010

ಬೆಂಗಳೂರಿನ ಶಿರಡಿ ಸಾಯಿಬಾಬಾ ಧ್ಯಾನ ಮಂದಿರ - ಶ್ರೀ.ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರ, ೯ ನೇ ಬಡಾವಣೆ, ರಾಗಿಗುಡ್ಡ ದೇವಸ್ಥಾನದ ಹತ್ತಿರ, ಜಯನಗರ, ಬೆಂಗಳೂರು - ಕೃಪೆ - ಶ್ರೀ.ಆರ್.ಸತೀಶ್

ಧ್ಯಾನ ಮಂದಿರದ ವಿಶೇಷತೆಗಳು
  • ಧ್ಯಾನ ಮಂದಿರದ ಭೂಮಿ ಪೂಜೆಯನ್ನು ೨೨ ನೇ ಜೂನ್ ೨೦೦೭ ರಂದು ಮಾಡಲಾಯಿತು.
  • ಸಾಯಿಬಾಬಾ ಧ್ಯಾನ ಮಂದಿರವು ೧೮ ನೇ ಮಾರ್ಚ್ ೨೦೧೦ ರಂದು ಪರಮ ಪೂಜ್ಯ ಶ್ರೀ.ಶ್ರೀ. ವಿದ್ಯಾ ನಾರಾಯಣ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು.
  • ಈ ಧ್ಯಾನಮಂದಿರವನ್ನು ಶ್ರೀ.ಆರ್.ಸತೀಶ್ ರವರು ಸಾಯಿಬಾಬಾರವರ ಆಶೀರ್ವಾದದಿಂದ ನಿರ್ಮಿಸಿರುತ್ತಾರೆ.
  • ಧ್ಯಾನಮಂದಿರದಲ್ಲಿ ಆಳೆತ್ತರದ ಕಲ್ಲಿನ ಮೇಲೆ ಕುಳಿತಿರುವ ಸುಂದರ ಸಾಯಿಬಾಬಾರವರ ವಿಗ್ರಹವಿದ್ದು ಧ್ಯಾನ ಮಾಡಲು ಬಹಳ ಪ್ರಶಸ್ತವಾಗಿದೆ.
  • ಧ್ಯಾನ ಮಂದಿರದ ಗೋಡೆಗಳ ಮೇಲೆ ಸುತ್ತಲೂ ಸಾಯಿಬಾಬಾರವರ ಜೊತೆಗಿದ್ದ ೫೨ ಸಾಯಿ ಮಹಾಭಕ್ತರ ಚಿತ್ರಗಳಿವೆ.
  • ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ತೆಲುಗು, ತಮಿಳು, ಮರಾಟಿ, ಗುಜರಾತಿ, ಬೆಂಗಾಲಿ, ಪಂಜಾಬಿ, ಮತ್ತು ಸಿಂಧಿ ಸೇರಿದಂತೆ ೧೧ ಭಾಷೆಯ ಸಾಯಿ ಸಚ್ಚರಿತೆಯನ್ನು ಸಾಯಿಭಕ್ತರು ಪಾರಾಯಣ ಮಾಡಲು ಅನುಕೂಲವಾಗುವಂತೆ ಇಡಲಾಗಿದೆ.
  • ಸಣ್ಣ ಮಕ್ಕಳಿಗಾಗಿ ಮಕ್ಕಳ ಸಾಯಿಬಾಬಾ ಪುಸ್ತಕವನ್ನು ಇರಿಸಲಾಗಿದೆ.
  • ಸಾಯಿ ಸಚ್ಚರಿತೆಯ ೫೨ ಅಧ್ಯಾಯಗಳನ್ನು ಒಂದೆಡೆ ಬಿಂಬಿಸುವ ಚಿತ್ರಗಳನ್ನು ಸುಂದರವಾಗಿ ಜೋಡಿಸಿಡಲಾಗಿದೆ.
  • ಕನ್ನಡ, ಇಂಗ್ಲೀಷ್, ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಕುರಾನ್ ಗ್ರಂಥವನ್ನು ಪಾರಾಯಣಕ್ಕೆ ಇಡಲಾಗಿದೆ.
  • ಸಾಯಿಬಾಬಾರವರ ೧೧ ಅಭಿವಚನಗಳನ್ನು ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಲ್ಲಿ ಧ್ಯಾನ ಮಂದಿರದಲ್ಲಿರುವ ೩ ಕಂಭಗಳ ಮೇಲೆ ಸುಂದರವಾಗಿ ಕೆತ್ತಲಾಗಿದೆ.
ಶಿರಡಿ ಸಾಯಿಬಾಬಾರವರು ಕಲ್ಲಿನ ಮೇಲೆ ಕುಳಿತಿರುವ ಆಳೆತ್ತರದ ಚಿತ್ರಪಟ

ಧ್ಯಾನಮಂದಿರದಲ್ಲಿರುವ ವಿವಿಧ ಭಾಷೆಯ ಸಾಯಿ ಸಚ್ಚರಿತೆ ಪುಸ್ತಕಗಳು

ಸಾಯಿಯವರ ಪೂರ್ಣ ಸಚ್ಚರಿತೆ ಚಿತ್ರರೂಪದಲ್ಲಿ

ಧ್ಯಾನ ಮಂದಿರದ ಕಾರ್ಯ ಚಟುವಟಿಕೆಗಳು

ದಿನನಿತ್ಯದ ಕಾರ್ಯಕ್ರಮಗಳು

ಧ್ಯಾನ ಮಂದಿರದ ಸಮಯ
ಪ್ರತಿದಿನ ಬೆಳಗ್ಗೆ ೯:೦೦ ಘಂಟೆಯಿಂದ ೧:೦೦ ಘಂಟೆಯವರೆಗೆ
ಸಂಜೆ ೫:೦೦ ಘಂಟೆಯಿಂದ ರಾತ್ರಿ ೮:೦೦ ಘಂಟೆಯವರೆಗೆ

ವಿಶೇಷ ಉತ್ಸವಗಳು ಮತ್ತು ಹಬ್ಬಗಳು

೧. ಧ್ಯಾನ ಮಂದಿರದ ವಾರ್ಷಿಕೋತ್ಸವ ಪ್ರತಿ ವರ್ಷ ೧೮ ನೇ ಮಾರ್ಚ್.
೨. ಶ್ರೀ ರಾಮನವಮಿ.
೩. ಗುರು ಪೌರ್ಣಮಿ.
೪. ವಿಜಯ ದಶಮಿ ( ಸಾಯಿಬಾಬಾ ಸಮಾಧಿ ದಿವಸ)
೫. ದತ್ತ ಜಯಂತಿ

ಧ್ಯಾನ ಮಂದಿರದ ವಿಳಾಸ ಮತ್ತು ಮಾರ್ಗಸೂಚಿ

ವಿಳಾಸ:

ಶ್ರೀ.ಶಿರಡಿ ಸಾಯಿ ಧನ್ವಂತರಿ ಧ್ಯಾನಮಂದಿರ
ಶ್ರೀ ಸಾಯಿ ಅಮೃತಂ, ೩ ನೇ ಮಹಡಿ (ಕೆಫೆ ಕಾಫಿ ಡೇ ಮೇಲೆ)
ನಂ. ೧೪೮೧, ಸೌತ್ ಎಂಡ್ "ಬಿ" ಅಡ್ಡ ರಸ್ತೆ, ೨೮ ನೇ ಮುಖ್ಯ ರಸ್ತೆ,
ರಾಗಿಗುಡ್ಡ ದೇವಸ್ತಾನದ ಹತ್ತಿರ, ೯ ನೇ ಬಡಾವಣೆ, ಜಯನಗರ
ಬೆಂಗಳೂರು-೫೬೦ ೦೬೯.

ಸಂಪರ್ಕಿಸಬೇಕಾದ ವ್ಯಕ್ತಿ:

ಶ್ರೀ. ಆರ್. ಸತೀಶ್

ದೂರವಾಣಿ ಸಂಖ್ಯೆ:

೯೩೪೧೨ ೬೪೬೯೬

ಮಾರ್ಗಸೂಚಿ:

ಜಯನಗರ ಈಸ್ಟ್ ಎಂಡ್ ವೃತ್ತದ ಬಳಿಯ ಬಸ್ ನಿಲ್ದಾಣದಲ್ಲಿ ಇಳಿದು ೨ ನಿಮಿಷ ಹಿಂದೆ ನಡೆದರೆ ಸಾಯಿ ಧ್ಯಾನ ಮಂದಿರ ಸಿಗುತ್ತದೆ. 
ಬೆಂಗಳೂರಿನ ಸಾಯಿ ಮಂದಿರ - ಶ್ರೀ ನಾಗಸಾಯಿ ಮಂದಿರ, ರಾಮಾಂಜನಪ್ಪ ಲೇಔಟ್, ಆಕಾಶ ನಗರ, ಎ.ನಾರಾಯಣಪುರ, ಬೆಂಗಳೂರು - ಕೃಪೆ - ಪಿ.ವೆಂಕಟರಮಣ ರೆಡ್ಡಿ 

 ದೇವಾಲಯದ ವಿಶೇಷತೆಗಳು

  • ದೇವಾಲಯದ ಭೂಮಿ ಪೂಜೆಯನ್ನು ೧೮ ನೇ ನವೆಂಬರ್ ೨೦೦೨ ರಂದು ಮಾಡಲಾಯಿತು.
  • ಸಾಯಿಬಾಬಾ ಮಂದಿರವು ೨೨ ನೇ ನವೆಂಬರ್ ೨೦೦೯ ರಂದು ಶ್ರೀ.ಅಮ್ಮುಲ ಸಾಂಭಶಿವ ರಾವ್ ರವರಿಂದ ಉದ್ಘಾಟನೆಗೊಂಡಿತು.
  • ಈ ದೇವಾಲಯವನ್ನು ಸಾರ್ವಜನಿಕರ ಸಹಕಾರದಿಂದ ಶ್ರೀ. ಶಿರಡಿ ಸಾಯಿಬಾಬಾ ಸೇವಾ ಸಮಿತಿ (ರಿ) ನಿರ್ಮಿಸಿದರು.
  • ದತ್ತಾತ್ರೇಯ ದೇವರ ವಿಗ್ರಹವು ಸಾಯಿಬಾಬಾ ಮಂದಿರದ ಎದುರುಗಡೆ ಇದೆ.
  • ಶಿರಡಿಯಲ್ಲಿರುವಂತೆ ನಂದಿಯ ವಿಗ್ರಹವನ್ನು ಸಾಯಿಬಾಬಾ ಮಂದಿರದ ಹೊರಗಡೆ ಪ್ರತಿಷ್ಟಾಪಿಸಲಾಗಿದೆ.
  • ಧುನಿಯನ್ನು ಸಾಯಿಬಾಬಾ ಮಂದಿರದ ಬಲಭಾಗದಲ್ಲಿ ಪ್ರತಿಷ್ಟಾಪಿಸಲಾಗಿದೆ. ಪವಿತ್ರ ಅಗ್ನಿಯನ್ನು ಬಿ.ಟಿ.ಎಂ. ಲೇಔಟ್, ಸಾಯಿಬಾಬಾ ಮಂದಿರದಿಂದ ತಂದು ಪ್ರತಿಷ್ಟಾಪಿಸಲಾಗಿದೆ.
  • ಸಾಯಿಬಾಬಾ ಮಂದಿರದ ಕೆಳ ಅಂತಸ್ತಿನಲ್ಲಿ ಧ್ಯಾನ ಮಂದಿರವನ್ನು ಸ್ಥಾಪಿಸಲಾಗಿದ್ದು ಅಲ್ಲಿ ನಂದಾದೀಪವನ್ನು ಕೂಡ ಸ್ಥಾಪಿಸಲಾಗಿದೆ.
  • ಸಾಯಿಬಾಬಾ ಮಂದಿರದ ಹಿಂಭಾಗದಲ್ಲಿ ಒಂದು ನಾಗರ ಹುತ್ತ ಇದೆ.

ಸಾಯಿಬಾಬಾ ವಿಗ್ರಹ

ಧ್ಯಾನ ಮಂದಿರ

 
ಪವಿತ್ರ ಧುನಿ ಮಾ

ನಾಗರ ಹುತ್ತ
  
ದೇವಾಲಯದ ಹೊರನೋಟ

ದೇವಾಲಯದ ಕಾರ್ಯಚಟುವಟಿಕೆಗಳು

 ದಿನನಿತ್ಯದ ಕಾರ್ಯಕ್ರಮಗಳು

ಆರತಿಯ ಸಮಯ

 ಕಾಕಡ ಆರತಿ - ಪ್ರತಿದಿನ ಬೆಳಿಗ್ಗೆ ೬:೩೦ ಕ್ಕೆ 
ಛೋಟಾ ಆರತಿ - ಪ್ರತಿದಿನ ಬೆಳಿಗ್ಗೆ ೮:೩೦ ಕ್ಕೆ 
ಮಧ್ಯಾನ್ಹ ಆರತಿ - ಪ್ರತಿದಿನ ಮಧ್ಯಾನ್ಹ ೧೨:೦೦ ಘಂಟೆಗೆ 
ಧೂಪಾರತಿ - ಪ್ರತಿದಿನ ಸಂಜೆ ೬:೧೫ ಕ್ಕೆ  
ಶೇಜಾರತಿ - ಪ್ರತಿದಿನ ರಾತ್ರಿ ೮:೧೫ ಕ್ಕೆ ಮತ್ತು ಗುರುವಾರದಂದು ೮:೩೦ ಕ್ಕೆ

ಪ್ರತಿ ಗುರುವಾರದಂದು ಬೆಳಿಗ್ಗೆ ೭:೦೦ ಘಂಟೆಯಿಂದ ೮:೦೦ ಘಂಟೆಯವರೆಗೆ ಮಾತ್ರ ಸಾಯಿಬಾಬಾ ವಿಗ್ರಹಕ್ಕೆ ಅಭಿಷೇಕ ಕಾರ್ಯಕ್ರಮವಿರುತ್ತದೆ. ಭಾಗವಹಿಸಲು ಇಚ್ಚಿಸುವ ಸಾಯಿಭಕ್ತರು ೨೫೧/- ರುಪಾಯಿಗಳನ್ನು ಕೊಟ್ಟು ರಶೀದಿಯನ್ನು ಪಡೆಯತಕ್ಕದ್ದು. ಸಾಯಿಭಕ್ತರು ಯಾವುದೇ ಪೂಜಾ ಸಾಮಗ್ರಿ ತರುವ ಅವಶ್ಯಕತೆಯಿಲ್ಲ.

ತಿಂಗಳ ಯಾವುದೇ ದಿನ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ವಿಶೇಷ ಅಭಿಷೇಕ ಸೇವೆಯಿರುತ್ತದೆ. ಅದರ ಸೇವಾ ಶುಲ್ಕ ೧೦೦೧/- ರುಪಾಯಿಗಳಾಗಿದ್ದು, ಅಭಿಷೇಕ ಮಾಡಿಸಲು ಇಚ್ಚಿಸುವ ಸಾಯಿಭಕ್ತರು ಮುಂಚಿತವಾಗಿ ಹಣವನ್ನು ಸಂದಾಯ ಮಾಡಿ ರಶೀದಿಯನ್ನು ಪಡೆಯತಕ್ಕದ್ದು. ಸಾಯಿಭಕ್ತರು ಯಾವುದೇ ಪೂಜಾ ಸಾಮಗ್ರಿ ತರುವ ಅವಶ್ಯಕತೆಯಿಲ್ಲ.  

ಪ್ರತಿ ತಿಂಗಳ ಹುಣ್ಣಿಮೆಯಂದು ಸತ್ಯನಾರಾಯಣ ವ್ರತವನ್ನು ಬೆಳಿಗ್ಗೆ ೯:೦೦ ರಿಂದ ೧೨:೦೦ ಘಂಟೆಯವರೆಗೆ ಹಮ್ಮಿಕೊಳ್ಳಲಾಗುತ್ತದೆ. ಇದರ ಸೇವಾ ಶುಲ್ಕ ೫೧/- ರುಪಾಯಿಗಳಾಗಿದ್ದು ಪೂಜೆಯನ್ನು ಮಾಡಿಸಲು ಇಚ್ಚಿಸುವ ಸಾಯಿಭಕ್ತರು ಮುಂಚಿತವಾಗಿ ಹಣವನ್ನು ಸಂದಾಯ ಮಾಡಿ ರಶೀದಿಯನ್ನು ಪಡೆಯತಕ್ಕದ್ದು. ಸಾಯಿಭಕ್ತರು ಯಾವುದೇ ಪೂಜಾ ಸಾಮಗ್ರಿ ತರುವ ಅವಶ್ಯಕತೆಯಿಲ್ಲ.

ವಿಶೇಷ ಉತ್ಸವಗಳು ಮತ್ತು ಹಬ್ಬಗಳು
 
  1. ಶ್ರೀ ರಾಮನವಮಿ
  2. ಗುರು ಪೂರ್ಣಿಮೆ
  3. ವಿಜಯ ದಶಮಿ (ಸಾಯಿಬಾಬಾ ಸಮಾಧಿ ದಿವಸ)
  4. ದತ್ತ ಜಯಂತಿ
  5. ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ ೨೨ ನೇ ನವೆಂಬರ್.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ

ವಿಳಾಸ:

ಶ್ರೀ ನಾಗಸಾಯಿ ಮಂದಿರ
ಶ್ರೀ ಶಿರಡಿ ಸಾಯಿಬಾಬಾ ಸೇವಾ ಸಮಿತಿ ಟ್ರಸ್ಟ್ (ರಿ)
ನಂ.೧೫-೧, ರಾಮಾಂಜನಪ್ಪ ಲೇಔಟ್, ಆಕಾಶ ನಗರ,
ಎ.ನಾರಾಯಣಪುರ, ದೂರವಾಣಿನಗರ ಅಂಚೆ,
ಬೆಂಗಳೂರು-೫೬೦ ೦೧೬.

ಸಂಪರ್ಕಿಸಬೇಕಾದ ವ್ಯಕ್ತಿ:

ಪಿ. ವೆಂಕಟರಮಣ ರೆಡ್ಡಿ - ದೇವಾಲಯದ ಮ್ಯಾನೇಜರ್

ದೂರವಾಣಿ ಸಂಖ್ಯೆಗಳು:

೦೮೦-೨೮೫೧ ೨೨೯೯ / ೯೯೦೦೩, ೧೮೨೩೬

ಮಾರ್ಗಸೂಚಿ:

ಕೆ. ಆರ್.ಪುರಂ ರೈಲ್ವೆ ನಿಲ್ದಾಣದಿಂದ ೨೫ ನಿಮಿಷದ ನಡಿಗೆ, ಪಿ. ಡಬ್ಲ್ಯು.ಡಿ. ಮುಖ್ಯ ರಸ್ತೆಯ ಹತ್ತಿರ.

Friday, July 30, 2010

ಬೆಂಗಳೂರಿನ ಸಾಯಿ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಸೇವಾ ಕೇಂದ್ರ, ಬೂದಿಗೆರೆ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು - ಕೃಪೆ - ಶ್ರೀ. ಎ. ಕೃಷ್ಣಮುರ್ತಿ

ದೇವಾಲಯದ ವಿಶೇಷತೆಗಳು



  • ದೇವಾಲಯದ ಭೂಮಿ ಪೂಜೆಯನ್ನು ೧೩ ನೇ ಫೆಬ್ರವರಿ ೧೯೯೨ ರಂದು ನೆರವೇರಿಸಲಾಯಿತು. ದೇವಾಲಯವು ೨೦೦೧ ರಲ್ಲಿ ಉದ್ಘಾಟನೆಗೊಂಡಿತು. ದ್ವಾರಕಾಮಾಯಿಯು ೧೧ ನೇ ಮೇ ೨೦೦೫ ರಂದು ಉದ್ಘಾಟನೆಗೊಂಡಿತು.


  • ಈ ಮಂದಿರವನ್ನು ಜನರ ಸಹಾಯದಿಂದ ಶ್ರೀ.ಕೃಷ್ಣಮುರ್ತಿಯವರು ಕಟ್ಟಿದರು.


  • ಈಗ ಚಿಕ್ಕದಾದ ಮತ್ತು ಸುಂದರವಾದ ಸಾಯಿಬಾಬಾರವರ ವಿಗ್ರಹವನ್ನು ಸದ್ಯಕ್ಕೆ ಪ್ರತಿಷ್ಟಾಪಿಸಲಾಗಿದೆ. ಮುಂದೆ ದೊಡ್ಡ ಸಾಯಿಬಾಬಾರವರ ವಿಗ್ರಹವನ್ನು ದೊಡ್ಡದಾದ ಸಾಯಿಮಂದಿರ ನಿರ್ಮಾಣ ಮಾಡಿದ ಮೇಲೆ ಪ್ರತಿಷ್ಠಾಪಿಸಲು ಯೋಚಿಸಲಾಗಿದೆ.


  • ಶಿರಡಿಯಲ್ಲಿರುವಂತೆ ನಂದಿಯ ವಿಗ್ರಹವನ್ನು ಸಾಯಿ ಮಂದಿರದ ಹೊರಗಡೆಯಲ್ಲಿ ಪ್ರತಿಷ್ಟಾಪಿಸಲಾಗಿದೆ.


  • ಗುರುಸ್ಥಾನದಲ್ಲಿ ಸಾಯಿಬಾಬಾ, ದತ್ತಾತ್ರೇಯ, ಬಾಣಲಿಂಗ ಮತ್ತು ನಂದಾದೀಪವನ್ನು ಪ್ರತಿಷ್ಟಾಪಿಸಲಾಗಿದೆ. ಗುರುಸ್ಥಾನವು ೨೯ ನೇ ಸೆಪ್ಟೆಂಬರ್ ೨೦೦೯ ರಂದು ಉದ್ಘಾಟನೆಗೊಂಡಿತು.


  • ಚಾವಡಿಯನ್ನು ೨೯ ನೇ ಸೆಪ್ಟೆಂಬರ್ ೨೦೦೯ ರಂದು ಉದ್ಘಾಟಿಸಲಾಯಿತು. ಇದರಲ್ಲಿ ಭಾರತದ ಅನೇಕ ಸಾಧು-ಸಂತರ ಚಿತ್ರಪಟಗಳನ್ನು ತೂಗುಹಾಕಲಾಗಿದೆ.
ಸಾಯಿಬಾಬಾರವರ ವಿಗ್ರಹ


ಪವಿತ್ರ ಧುನಿ ಮಾ


ಶ್ರೀಯವರ ಚಾವಡಿ


ದತ್ತಾತ್ರೇಯ ವಿಗ್ರಹ


ಬಾಣಲಿಂಗ


ಪವಿತ್ರ ಬೇವಿನ ಮರ

ದೇವಾಲಯದ ಕಾರ್ಯ ಚಟುವಟಿಕೆಗಳು

ದಿನನಿತ್ಯದ ಕಾರ್ಯಕ್ರಮಗಳು

ಆರತಿಯ ಸಮಯ

ಕಾಕಡ ಆರತಿ - ಪ್ರತಿದಿನ ಬೆಳಗ್ಗೆ ೬:೩೦ ಕ್ಕೆ ಮತ್ತು ಗುರುವಾರ ೬:೦೦ ಘಂಟೆಗೆ
ಛೋಟಾ ಆರತಿ - ಪ್ರತಿದಿನ ಬೆಳಗ್ಗೆ ೯:೩೦ ಕ್ಕೆ
ಮದ್ಯಾನ್ಹ ಆರತಿ - ಪ್ರತಿದಿನ ಮದ್ಯಾನ್ಹ ೧೨:೦೦ ಕ್ಕೆ ಮತ್ತು ಗುರುವಾರ ಮದ್ಯಾನ್ಹ ೧೨:೩೦ ಕ್ಕೆ
ಧೂಪಾರತಿ - ಪ್ರತಿದಿನ ಸಂಜೆ ೬:೦೦ ಕ್ಕೆ
ಶೇಜಾರತಿ - ಪ್ರತಿದಿನ ರಾತ್ರಿ ೮:೦೦ ಕ್ಕೆ ಮತ್ತು ಗುರುವಾರ ರಾತ್ರಿ ೮:೩೦ ಕ್ಕೆ



  • ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಪ್ರತಿದಿನ ಬೆಳಗ್ಗೆ ೭:೩೦ ರಿಂದ ೮:೩೦ ರವರೆಗೆ ಅಭಿಷೇಕವನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಾಯಿಭಕ್ತರು ೧೦೧/- ರುಪಾಯಿಗಳನ್ನು ಮುಂಚಿತವಾಗಿ ಕೊಟ್ಟು ರಶೀದಿಯನ್ನು ಪಡೆದು ಅಭಿಷೇಕ ಸೇವೆಯಲ್ಲಿ ಭಾಗವಹಿಸಬಹುದು. ಯಾವುದೇ ಪೂಜಾ ಸಾಮಗ್ರಿಗಳನ್ನು ತರುವ ಅವಶ್ಯಕತೆಯಿರುವುದಿಲ್ಲ.


  • ಧುನಿ ಪೂಜೆಯನ್ನು ಪ್ರತಿದಿನ ಮಾಡಲಾಗುತ್ತದೆ. ಭಾಗವಹಿಸಲು ಇಚ್ಚಿಸುವ ಸಾಯಿಭಕ್ತರು ೨೫/- ರುಪಾಯಿಗಳನ್ನು ಕೊಟ್ಟು ರಶೀದಿಯನ್ನು ಪಡೆಯಬಹುದು. ಯಾವುದೇ ಪೂಜಾ ಸಾಮಗ್ರಿಗಳನ್ನು ತರುವ ಅವಶ್ಯಕತೆಯಿರುವುದಿಲ್ಲ.


  • ಪ್ರತಿ ಗುರುವಾರ ಅನ್ನದಾನ ಸೇವೆಯಲ್ಲಿ ಸಾಯಿಭಕ್ತರು ಭಾಗವಹಿಸಬಹುದು. ಸೇವೆಯಲ್ಲಿ ಭಾಗವಹಿಸಲು ಇಚ್ಚಿಸುವ ಸಾಯಿಭಕ್ತರು ೬೫೦೦/- ರುಪಾಯಿಗಳನ್ನು (ಪ್ರತ್ಯೇಕವಾಗಿ) ಅಥವಾ ೭೫೧/- ರುಪಾಯಿಗಳನ್ನು (ಎಲ್ಲರೊಡಗೂಡಿ) ಕೊಟ್ಟು ರಶೀದಿಯನ್ನು ಪಡೆದು ಸೇವೆಯಲ್ಲಿ ಭಾಗವಹಿಸಬಹುದು.
ವಿಶೇಷ ದಿವಸಗಳು

ಪ್ರತಿ ತಿಂಗಳ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆಯನ್ನು ಬೆಳಗ್ಗೆ ೧೧:೦೦ ಘಂಟೆಯಿಂದ ಮದ್ಯಾನ್ಹ ೧:೦೦ ಘಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ. ಸೇವೆಯಲ್ಲಿ ಭಾಗವಹಿಸಲು ಇಚ್ಚಿಸುವ ಸಾಯಿಭಕ್ತರು ೫೧/- ರುಪಾಯಿಗಳನ್ನು ಕೊಟ್ಟು ರಶೀದಿಯನ್ನು ಪಡೆದು ಸೇವೆಯಲ್ಲಿ ಭಾಗವಹಿಸಬಹುದು. ಯಾವುದೇ ಪೂಜಾ ಸಾಮಗ್ರಿಗಳನ್ನು ತರುವ ಅವಶ್ಯಕತೆಯಿರುವುದಿಲ್ಲ.

ವಿಶೇಷ ಉತ್ಸವಗಳು ಮತ್ತು ಹಬ್ಬದ ದಿನಗಳು

೧. ಅಕ್ಷಯ ತೃತೀಯ 
೨. ಶ್ರೀ ರಾಮನವಮಿ 
೩. ಗುರುಪೂರ್ಣಿಮೆ 
೪. ವಿಜಯದಶಮಿ (ಸಾಯಿಬಾಬಾ ಸಮಾಧಿ ದಿವಸ)
೫. ದತ್ತ ಜಯಂತಿ. 
೬. ಬಲಿಪಾಡ್ಯಮಿ (ಲಕ್ಷದೀಪೋತ್ಸವ) 
೭. ದೇಸನಾರಾಯಣ ಸ್ವಾಮಿ ಬ್ರಹ್ಮ ರಥೋತ್ಸವ ಪ್ರತಿ ಹೋಳಿ ಹುಣ್ಣಿಮೆಯಂದು. ದಿನಪೂರ್ತಿ ಅನ್ನದಾನ ಕಾರ್ಯಕ್ರಮ.
೮. ಶಿವರಾತ್ರಿ ದಿವಸ - ಲಿಂಗೋದ್ಭವ ಪೂಜೆಯನ್ನು ಮಾಡಲಾಗುತ್ತದೆ.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ

ವಿಳಾಸ :

ಶ್ರೀ ಶಿರಡಿ ಸಾಯಿಬಾಬಾ ಸೇವಾ ಕೇಂದ್ರ, ಬೂದಿಗೆರೆ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು-೫೬೦ ೧೨೯.

ಸಂಪರ್ಕಿಸಬೇಕಾದ ವ್ಯಕ್ತಿ:

ಶ್ರೀ. ಎ. ಕೃಷ್ಣಮುರ್ತಿ

ದೂರವಾಣಿ ಸಂಖ್ಯೆಗಳು:

 ೯೯೪೫೫ ೭೭೫೨೭ / ೯೯೮೬೯ ೨೩೮೮೧

ಮಾರ್ಗಸೂಚಿ:

ಬೆಂಗಳೂರು-ಚೆನ್ನೈ (ಎನ್.ಹೆಚ್.೪) ಹೆದ್ದಾರಿಯಲ್ಲಿ ೧೧ ಕಿಲೋಮೀಟರು ಕ್ರಮಿಸಿದರೆ ಬೂದಿಗೆರೆ ಕ್ರಾಸ್ ಸಿಗುತ್ತದೆ. ಬೂದಿಗೆರೆ ಕ್ರಾಸ್ ಬಳಿಯೇ ಸಾಯಿಮಂದಿರವನ್ನು ನೋಡಬಹುದು.

ಮಾರುಕಟ್ಟೆಯಿಂದ ೩೧೬, ೩೧೬ ಎ, ೩೧೬ ಡಿ, ೩೧೬ ಕ್ಯು, ೩೧೬ ಕೆ ಮತ್ತು ೩೧೬ ಟಿ ಬೆಂಗಳೂರು ಬಸ್ ನಿಲ್ಧಾಣದಿಂದ ೩೧೬ ಬಿ, ೩೧೬ ಎಂ - ಈ ಬಸ್ಸುಗಳಿಗೆ ಬೂದಿಗೆರೆ ಕ್ರಾಸ್ ಬಳಿ ನಿಲುಗಡೆ ನೀಡಲಾಗುತ್ತದೆ.
ಬೆಂಗಳೂರಿನ ಸಾಯಿ ಮಂದಿರ - ಶಾಂತಿಧಾಮ ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಜೆ.ಪಿ.ನಗರ, ೩ ನೇ ಹಂತ, ಬೆಂಗಳೂರು - ಕೃಪೆ - ಶ್ರೀ.ಗುರುರಾಜ್ 

ದೇವಾಲಯದ ವಿಶೇಷತೆಗಳು

  • ಮಂದಿರವು ೨೧ ನೇ ಜೂನ್ ೧೯೯೮ ರಂದು ಹೆಬ್ಬೂರು ಕೋದಂಡ ಆಶ್ರಮದ ಹಿಂದಿನ ಗುರುಗಳಾದ ದಿವಂಗತ ವೇದ ಬ್ರಹ್ಮ ಶ್ರೀ.ಗಣಪತಿ ಸೋಮಯಾಜಿಯವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು.
  • ಈ ಮಂದಿರವನ್ನು ಸಾಯಿಭಕ್ತರ ನೆರವಿನಿಂದ ಶಾಂತಿಧಾಮ ಶ್ರೀ ಶಿರಡಿ ಸಾಯಿಬಾಬಾ ಮಂದಿರದವರು ಕಟ್ಟಿರುತ್ತಾರೆ.
  • ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ಪಾದುಕೆಗಳನ್ನು ಸಾಯಿಬಾಬಾರವರ ವಿಗ್ರಹದ ಎದುರುಗಡೆ ಪ್ರತಿಷ್ಟಾಪಿಸಲಾಗಿದೆ.
  • ಪಂಚಲೋಹದ ದತ್ತಾತ್ರೇಯ ದೇವರ ವಿಗ್ರಹವನ್ನು ಸಾಯಿಬಾಬಾರವರ ವಿಗ್ರಹದ ಮುಂದೆ ಇರಿಸಲಾಗಿದೆ.
  • ಬೆಳ್ಳಿಯ ಸಟಕಾ ಮತ್ತು ಬೆಳ್ಳಿಯ ಪಾದುಕೆಗಳು ಮಂದಿರದಲ್ಲಿ ಇರಿಸಲಾಗಿದೆ.
  • ಶ್ರೀರಾಮ ಪರಿವಾರ ವಿಗ್ರಹಗಳು ಮಂದಿರದಲ್ಲಿ ಪ್ರತಿಷ್ಟಾಪಿಸಲಾಗಿದೆ.
  • ಪವಿತ್ರ ಧುನಿಯನ್ನು ಮಂದಿರದ ಒಳಗಡೆ ಪ್ರತಿಷ್ಟಾಪಿಸಲಾಗಿದೆ.
  • ಗಣೇಶ, ಉಮಾ ಮಹೇಶ್ವರ ಮತ್ತು ಸುಬ್ರಮಣ್ಯ ದೇವರ ದೇವಸ್ಥಾನವನ್ನು ೨೨ ನೇ ಫೆಬ್ರವರಿ ೨೦೦೯ ರಂದು ಪ್ರಾರಂಭಿಸಲಾಯಿತು.
  • ಅಮೃತ ಶಿಲೆಯ ನಂದಿಯ ವಿಗ್ರಹವನ್ನು ಸಾಯಿಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಮಂದಿರದ ಒಳಗೆ ಪ್ರತಿಷ್ಟಾಪಿಸಲಾಗಿದೆ. ಮತ್ತೊಂದು ಬೃಹತ್ ನಂದಿಯ ಕಪ್ಪು ಶಿಲೆಯ ವಿಗ್ರಹವನ್ನು ಗಣೇಶ, ಉಮಾ ಮಹೇಶ್ವರ ಮತ್ತು ಸುಬ್ರಮಣ್ಯ ದೇವಾಲಯದ ಹೊರಗಡೆ ಪ್ರತಿಷ್ಟಾಪಿಸಲಾಗಿದೆ.
  • ಸಾಯಿಬಾಬಾ ಮಂದಿರದ ಮುಂದುಗಡೆ ಬೃಹತ್ ತುಳಸಿಯ ಬೃಂದಾವನವನ್ನು ಸ್ಥಾಪಿಸಲಾಗಿದೆ.
  • ದೇವಾಲಯದ ಆವರಣದಲ್ಲಿ ಅಶ್ವಥ ವೃಕ್ಷದ ಕೆಳಗಡೆ ನಾಗ ದೇವರುಗಳ ವಿಗ್ರಹಗಳನ್ನು ಸ್ಥಾಪಿಸಲಾಗಿದೆ.
ಸಾಯಿಬಾಬಾರವರ ವಿಗ್ರಹ

ಧುನಿ ಮಾ

ತುಳಸಿ ಬೃಂದಾವನ

ಗಣೇಶನ ವಿಗ್ರಹ

ಉಮಾ ಮಹೇಶ್ವರ ವಿಗ್ರಹ


ಸುಬ್ರಹ್ಮಣ್ಯೇಶ್ವರ ವಿಗ್ರಹ

ದೇವಾಲಯದ ಕಾರ್ಯಚಟುವಟಿಕೆಗಳು

ದೈನಂದಿನ ಕಾರ್ಯಕ್ರಮಗಳು

ಪ್ರತಿನಿತ್ಯ ಆರತಿಯ ಸಮಯ

ಕಾಕಡ ಆರತಿ    ಬೆಳಗ್ಗೆ  ೭:೦೦ ರಿಂದ ೭:೩೦ ರ ವರೆಗೆ
ಮಧ್ಯಾನ್ಹ ಆರತಿ ಮಧ್ಯಾನ್ಹ ೧೧:೦೦ ರಿಂದ ೧೧:೨೦ ರ ವರೆಗೆ
ಧೂಪಾರತಿ       ಸಂಜೆ ೬:೦೦ ರಿಂದ ೬:೨೦ ರ ವರೆಗೆ
ಶೇಜಾರತಿ        ರಾತ್ರಿ ೮:೦೦ ರಿಂದ ೮:೧೦ ರ ವರೆಗೆ

ಗುರುವಾರ  ಆರತಿಯ ಸಮಯ

ಕಾಕಡ ಆರತಿ ಬೆಳಗ್ಗೆ ೬: ೩೦ ರಿಂದ ೭:೦೦ ರ ವರೆಗೆ
ಮಧ್ಯಾನ್ಹ ಆರತಿ ಮಧ್ಯಾನ್ಹ ೧೨ :೦೦  ರಿಂದ ೧೨:೨೦ ರ ವರೆಗೆ
ಧೂಪಾರತಿ ಸಂಜೆ ೫:೩೦ ರಿಂದ ೫:೫೦ ರ ವರೆಗೆ
ಶೇಜಾರತಿ ರಾತ್ರಿ ೮:೧೫ ರಿಂದ ೮:೩೦ ರ ವರೆಗೆ



  • ಪ್ರತಿನಿತ್ಯ ಸಾಯಿಬಾಬಾರವರಿಗೆ ಮತ್ತು ಧುನಿ ಮಾ ಗೆ ಅಭಿಷೇಕ, ಅಲಂಕಾರ ಹಾಗೂ ನೈವೇದ್ಯವನ್ನು ಬೆಳಗ್ಗೆ ೮:೦೦ ರಿಂದ ೯:೧೫ ರ ವರೆಗೆ ಮಾಡಲಾಗುತ್ತದೆ.


  • ಧುನಿ ಪೂಜೆಯನ್ನು ಪ್ರತಿದಿನ ಬೆಳಗ್ಗೆ ೯:೩೦ ರಿಂದ ೧೦:೩೦ ರ ವರೆಗೆ ಮಾಡಲಾಗುತ್ತದೆ.


  • ಪ್ರತಿದಿನ ಸಂಜೆ ೬:೩೦ ರಿಂದ ೭:೩೦ ರ ವರೆಗೆ ಧುನಿ ಪೂಜಾ ಮತ್ತು ವಿಷ್ಣು ಸಹಸ್ರನಾಮ ಕಾರ್ಯಕ್ರಮವಿರುತ್ತದೆ.


  • ಪ್ರತಿ ಗುರುವಾರ ಬೆಳಗ್ಗೆ ೭:೦೦ ರಿಂದ ೮:೦೦ ಘಂಟೆಯವರೆಗೆ ಸಾಯಿಬಾಬಾರವರಿಗೆ ರುದ್ರಾಭಿಷೇಕ ಮಾಡಲಾಗುತ್ತದೆ. ಇದರಲ್ಲಿ ಎಲ್ಲಾ ಸಾಯಿಭಕ್ತರು ಭಾಗವಹಿಸಬಹುದು.


  • ಪ್ರತಿ ಗುರುವಾರ ಸಂಜೆ ೬:೦೦ ರಿಂದ ೬:೧೫ ರ ವರೆಗೆ ಕನ್ನಡದಲ್ಲಿ ಸಾಯಿ ಸಚ್ಚರಿತೆ ಪಾರಾಯಣ ಕಾರ್ಯಕ್ರಮವಿರುತ್ತದೆ.


  • ಪ್ರತಿ ಗುರುವಾರ ರಾತ್ರಿ ೭:೦೦ ರಿಂದ ೮:೦೦ ಘಂಟೆಯವರೆಗೆ ವಿವಿಧ ಭಜನ ಮಂಡಳಿಗಳಿಂದ ಸಾಯಿ ಭಜನೆ ಕಾರ್ಯಕ್ರಮವಿರುತ್ತದೆ.


  • ಪ್ರತಿ ಗುರುವಾರ ರಾತ್ರಿ ೮:೦೦ ರಿಂದ ೮:೧೫ ರ ವರೆಗೆ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.


  • ಪ್ರತಿ ತಿಂಗಳ ಹುಣ್ಣಿಮೆಯಂದು ಸಂಜೆ ೬:೩೦ ರಿಂದ ೮:೩೦ ರ ವರೆಗೆ ಸತ್ಯನಾರಾಯಣ ಪೂಜೆಯ ಕಾರ್ಯಕ್ರಮವಿರುತ್ತದೆ. ಭಾಗವಹಿಸಲು ಇಚ್ಚಿಸುವ ಸಾಯಿಭಕ್ತರು ೫೧/- ರುಪಾಯಿಗಳನ್ನು ಕೊಟ್ಟು ರಶೀದಿಯನ್ನು ಪಡೆಯಬಹುದು.
ವಿಶೇಷ ಉತ್ಸವ ಮತ್ತು ಹಬ್ಬದ ದಿನಗಳು

೧. ಹೊಸ ವರ್ಷದ ಆಚರಣೆ ಪ್ರತಿ ವರ್ಷದ ೧ ನೇ ತಾರೀಕಿನಂದು.
೨. ಸಂಕ್ರಾಂತಿ ಹಬ್ಬ.
೩. ಶಿವರಾತ್ರಿ ಹಬ್ಬ.
೪. ಗಣೇಶ, ಉಮಾ ಮಹೇಶ್ವರ ಮತ್ತು ಸುಬ್ರಮಣ್ಯ ದೇವಾಲಯದ ವಾರ್ಷಿಕೋತ್ಸವ ಪ್ರತಿವರ್ಷ ೨೨ ನೇ ಫೆಬ್ರವರಿ ಯಂದು.
೫. ಯುಗಾದಿ ಹಬ್ಬ.
೬. ಶ್ರೀ ರಾಮನವಮಿ.
೭. ಶ್ರೀ ಸಾಯಿಬಾಬಾ ಮಂದಿರದ ವಾರ್ಷಿಕೋತ್ಸವ ಪ್ರತಿವರ್ಷ ೨೧ ನೇ ಜೂನ್ ರಂದು. 
೮. ಗುರು ಪೂರ್ಣಿಮಾ ಉತ್ಸವ. 
೯. ವಿಜಯ ದಶಮಿ (ಹತ್ತು ದಿನಗಳ ಉತ್ಸವ)
೧೦.ಗಣೇಶ ಹಬ್ಬ. 
೧೧.ದೀಪಾವಳಿ ಹಬ್ಬ.
೧೨.ಕ್ರಿಸ್ಮಸ್ ಹಬ್ಬ. 
೧೩. ಗೋಕುಲಾಷ್ಟಮಿ ಹಬ್ಬ.

ದೇವಾಲಯದ ಮುಂದಿನ ಯೋಜನೆಗಳು  

೧. ಸಾಯಿಬಾಬಾ ದೇವಾಲಯದ ರಾಜಗೋಪುರ ನಿರ್ಮಾಣ.
೨. ಧ್ಯಾನ ಮಂದಿರ ಮತ್ತು ಯೋಗ ಶಾಲೆ (ಹಿರಿಯರಿಗೆ ಮತ್ತು ಮಹಿಳೆಯರಿಗೆ).

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ

ವಿಳಾಸ :

ಶಾಂತಿಧಾಮ ಶ್ರೀ ಶಿರಡಿ ಸಾಯಿಬಾಬಾ ಮಂದಿರ,
೧೨೯/ಎ, ೧೩ ನೇ ಅಡ್ಡ ರಸ್ತೆ, ೬ ನೇ ಮುಖ್ಯ ರಸ್ತೆ,
ಜೆ.ಪಿ.ನಗರ, ೩ ನೇ ಹಂತ, ಬೆಂಗಳೂರು-೫೬೦ ೦೭೮.

ಸಂಪರ್ಕಿಸಬೇಕಾದ ವ್ಯಕ್ತಿ:

ಶ್ರೀ. ಗುರುರಾಜ್ - ದೇವಾಲಯದ ಮ್ಯಾನೇಜರ್.

ಮಾರ್ಗಸೂಚಿ:

ಜೆ.ಪಿ. ನಗರ ೩ ನೇ ಹಂತದ ಕೊನೆಯ ಬಸ್ ನಿಲ್ಧಾಣದಿಂದ ೨ ನಿಮಿಷ ನಡೆದರೆ ಮಂದಿರ ಸಿಗುತ್ತದೆ. "ಮಿನಿ ಫಾರೆಸ್ಟ್" ನಿಂದ ಕೇವಲ ೨೦೦ ಅಡಿಗಳ ದೂರದಲ್ಲಿ ಮತ್ತು "ಎಸ್ ಹೋಟೆಲ್" ನಿಂದ ೧೦೦ ಅಡಿ ದೂರದಲ್ಲಿ ಮಂದಿರವಿದೆ.

Thursday, July 29, 2010

ಬೆಂಗಳೂರಿನ ಸಾಯಿ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಆನಂದ ಆಶ್ರಮ, ಕೆ.ಇ.ಬಿ.ಲೇಔಟ್, ೧ ನೇ ಹಂತ, ಬಿ.ಟಿ.ಎಂ.ಲೇಔಟ್, ಬೆಂಗಳೂರು - ಕೃಪೆ - ಶ್ರೀ.ಶೇಖರ್ ರಾಜು

ದೇವಾಲಯದ ವಿಶೇಷತೆಗಳು 

  • ಗುರುಸ್ಥಾನವನ್ನು ೨೦ ನೇ ಮಾರ್ಚ್ ೧೯೯೮ ರಂದು ಪ್ರಾರಂಭಿಸಲಾಯಿತು. 
  • ಸಾಯಿಮಂದಿರವು ೧೯ ನೇ ಆಗಸ್ಟ್ ೧೯೯೯ ರಂದು ಅಮ್ಮುಲ ಸಾಂಭಶಿವರಾವ್ ರವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. 
  • ಮಂದಿರವನ್ನು ಸುತ್ತಮುತ್ತಲಿನ ಸಾರ್ವಜನಿಕರ ಸಹಾಯದಿಂದ ಶ್ರೀ.ಸದ್ಗುರು ಸಾಯಿನಾಥ ಸೇವಾ ಸಮಿತಿ (ರಿ) ಪೂರ್ಣಗೊಳಿಸಿತು. 
  • ದೇವಾಲಯದ ಪ್ರಾಂಗಣದ ಎಡಭಾಗದಲ್ಲಿ ಗುರುಸ್ಥಾನವನ್ನು ನಿರ್ಮಿಸಲಾಗಿದ್ದು ಅಲ್ಲಿ ಗಣೇಶ, ದತ್ತಾತ್ರೇಯ ಮತ್ತು ಸುಬ್ರಮಣ್ಯ ದೇವರುಗಳ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. 
  • ಶಿರಡಿಯಲ್ಲಿರುವಂತೆ ನಂದಿಯ ವಿಗ್ರಹವನ್ನು ಸಾಯಿಮಂದಿರದ ಹೊರಭಾಗದಲ್ಲಿ ಪ್ರತಿಷ್ಟಾಪಿಸಲಾಗಿದೆ. 
  • ಸಾಯಿಬಾಬಾ ಮಂದಿರದ ಮುಂಭಾಗದಲ್ಲಿ ಶ್ರೀ ಸಾಯಿ ಕೋಟಿ ಸ್ಥೂಪವನ್ನು ಸ್ಥಾಪಿಸಲಾಗಿದೆ. 
  • ಧುನಿಯನ್ನು ಸಾಯಿಬಾಬಾ ಮಂದಿರದ ಬಲಭಾಗದಲ್ಲಿ ಶಿರಡಿಯಿಂದ ತಂದ ಪವಿತ್ರ ಅಗ್ನಿಯಿಂದ ಸ್ಥಾಪಿಸಲಾಗಿದೆ. 
  • ಧುನಿಯ ಹೊರಗಡೆ ಬಲಭಾಗದಲ್ಲಿ ಶಿರಡಿಯಿಂದ ತಂದ ಪವಿತ್ರ ನಂದಾದೀಪದ ಜ್ವಾಲೆಯಿಂದ ನಂದಾದೀಪವನ್ನು ಸ್ಥಾಪಿಸಲಾಗಿದೆ. 
  • ಗುರುಸ್ಥಾನಕ್ಕೆ ಎದುರಿನಲ್ಲಿ ದೇವಾಲಯದ ಹೊರಭಾಗದಲ್ಲಿ ದತ್ತ ಪಾದುಕೆಗಳನ್ನು ಮತ್ತು ಔದುಂಬರ ವೃಕ್ಷವನ್ನು ಸ್ಥಾಪಿಸಲಾಗಿದೆ. 
  • ಚಾವಡಿಯನ್ನು ದೇವಾಲಯದ ಹೊರಭಾಗದಲ್ಲಿ ಉಚಿತ ಔಷಧಾಲಯದ ಪಕ್ಕದಲ್ಲಿ ಸ್ಥಾಪಿಸಲಾಗಿದೆ. 
  • ಸಾಯಿಬಾಬಾ ಮಂದಿರದ ಕೆಳಭಾಗದ ನೆಲಮಾಳಿಗೆಯಲ್ಲಿ ಧ್ಯಾನಮಂದಿರ ಮತ್ತು ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ. 
  • ಗುರುಸ್ಥಾನದ ಪಕ್ಕದಲ್ಲಿ ಭೋಜನ ಶಾಲೆಯನ್ನು ಸ್ಥಾಪಿಸಲಾಗಿದೆ.

ಸಾಯಿಬಾಬಾರವರ ಸುಂದರ ವಿಗ್ರಹ

ದೇವಾಲಯದ ಹೊರಭಾಗದಲ್ಲಿರುವ ನಂದಿಯ ವಿಗ್ರಹ 

ಗುರುಸ್ಥಾನ

ಶ್ರೀ ಸಾಯಿ ಕೋಟಿ ಸ್ಥೂಪ 

ಪವಿತ್ರ ಧುನಿ ಮಾ 
ನಂದಾ ದೀಪ

ದೇವಾಲಯದ ಕಾರ್ಯಚಟುವಟಿಕೆಗಳು 

ದೈನಂದಿನ ಕಾರ್ಯಕ್ರಮಗಳು 

ಆರತಿಯ ಸಮಯ  

Aarti
Timings
ಕಾಕಡ ಆರತಿ ೬ :೩೦ ಬೆಳಗ್ಗೆ 
ಮಂಗಳಾರತಿ ೮ :೩೦ ಬೆಳಗ್ಗೆ 
ಮಧ್ಯಾನ್ಹ ಆರತಿ ೧೨ :೦೦ ಘಂಟೆ
ಧೂಪಾರತಿ 6.15 ಸಂಜೆ 
ಶೇಜಾರತಿ ೮ :೩೦ ರಾತ್ರಿ (ಗುರುವಾರದಂದು ರಾತ್ರಿ ೧೦:೦೦ ಘಂಟೆಗೆ)

  • ಗುರುಸ್ಥಾನದಲ್ಲಿ ಪ್ರತಿನಿತ್ಯ ಅಭಿಷೇಕವನ್ನು ಬೆಳಗ್ಗೆ ೭ ಘಂಟೆಯಿಂದ ೯ ಘಂಟೆಯವರೆಗೆ ಮಾಡಲಾಗುತ್ತದೆ. ಇದರ ಶುಲ್ಕ ೧೦೧/- ರುಪಾಯಿಗಳಾಗಿದ್ದು ಭಕ್ತರು ಯಾವುದೇ ಪೂಜಾ ಸಾಮಗ್ರಿಗಳನ್ನು ತರುವ ಅವಶ್ಯಕತೆ ಇರುವುದಿಲ್ಲ. 
  • ಸಾಯಿಬಾಬಾರವರ ಪಂಚ ಲೋಹದ ವಿಗ್ರಹಕ್ಕೆ ಪ್ರತಿನಿತ್ಯ ಅಭಿಷೇಕವನ್ನು ಬೆಳಗ್ಗೆ ೯ ಘಂಟೆಯಿಂದ ೧೦.೩೦ ಘಂಟೆಯವರೆಗೆ ಮಾಡಲಾಗುತ್ತದೆ.ಇದರ ಶುಲ್ಕ ೩೫೧/- ಆಗಿದ್ದು ಮುಂಚಿತವಾಗಿ ದೇವಾಲಯದ ಆಫೀಸಿನಲ್ಲಿ ಹೆಸರನ್ನು ನೊಂದಾಯಿಸತಕ್ಕದ್ದು. ಭಕ್ತರು ಯಾವುದೇ ಪೂಜಾ ಸಾಮಗ್ರಿಗಳನ್ನು ತರುವ ಅವಶ್ಯಕತೆ ಇರುವುದಿಲ್ಲ. 
  • ಪ್ರತಿನಿತ್ಯ ಧುನಿ ಪೂಜೆಯನ್ನು ಬೆಳಗ್ಗೆ ೧೧:೪೫, ಸಂಜೆ ೬:೦೦ ಮತ್ತು ರಾತ್ರಿ ೮:೧೫ ಕ್ಕೆ ಮಾಡಲಾಗುತ್ತದೆ. 
  • ಪ್ರತಿ ಗುರುವಾರ ರಾತ್ರಿ ೮:೩೦ ಕ್ಕೆ ಪಲ್ಲಕ್ಕಿ ಸೇವೆಯನ್ನು ಮಾಡಲಾಗುತ್ತದೆ. ಸೇವೆಯನ್ನು ಮಾಡಲು ಇಚ್ಚಿಸುವ ಸಾಯಿಭಕ್ತರು ೧೦೧/- ರುಪಾಯಿಗಳನ್ನು ಕೊಟ್ಟು ರಶೀದಿಯನ್ನು ಪಡೆಯತಕ್ಕದ್ದು. 
  • ಪ್ರತಿ ಗುರುವಾರ ಚಾಮರ ಸೇವೆಯನ್ನು ರಾತ್ರಿ ೮:೩೦ ಕ್ಕೆ ಮಾಡಲಾಗುತ್ತದೆ. ಸೇವೆಯನ್ನು ಮಾಡಲು ಇಚ್ಚಿಸುವ ಸಾಯಿಭಕ್ತರು ೫೧/- ರುಪಾಯಿಗಳನ್ನು ಕೊಟ್ಟು ರಶೀದಿಯನ್ನು ಪಡೆಯತಕ್ಕದ್ದು. 
  ತಿಂಗಳ ವಿಶೇಷ ಕಾರ್ಯಕ್ರಮ 

ಪ್ರತಿ ತಿಂಗಳ ಹುಣ್ಣಿಮೆಯಂದು ಸಂಜೆ ೪:೦೦ ಘಂಟೆಯಿಂದ ೬:೦೦ ಘಂಟೆಯವರೆಗೆ ಸತ್ಯನಾರಾಯಣ ವ್ರತವನ್ನು ಮಾಡಲಾಗುತ್ತದೆ. ಪೂಜೆಯಲ್ಲಿ ಭಾಗವಹಿಸಲು ಇಚ್ಚಿಸುವ ಸಾಯಿಭಕ್ತರು ೧೫೦/- ರುಪಾಯಿಗಳನ್ನು ಕೊಟ್ಟು ರಶೀದಿಯನ್ನು ಪಡೆಯತಕ್ಕದ್ದು. ಸತ್ಯನಾರಾಯಣ ವ್ರತ ಸಂಕಲ್ಪವನ್ನು ಮಾಡಲು ಇಚ್ಚಿಸುವ ಸಾಯಿಭಕ್ತರು ೧೫/- ರುಪಾಯಿಗಳನ್ನು ಕೊಟ್ಟು ರಶೀದಿಯನ್ನು ಪಡೆಯತಕ್ಕದ್ದು. ಭಕ್ತರು ಯಾವುದೇ ಪೂಜಾ ಸಾಮಗ್ರಿಗಳನ್ನು ತರುವ ಅವಶ್ಯಕತೆ ಇರುವುದಿಲ್ಲ.


ವಿಶೇಷ ಉತ್ಸವಗಳು ಮತ್ತು ಹಬ್ಬದ ದಿನಗಳು

೧. ಹೊಸ ವರ್ಷದ ಆಚರಣೆ (ಹೂವಿನ ಅಲಂಕಾರ ಮತ್ತು ಭಜನೆ ಕಾರ್ಯಕ್ರಮ).
೨. ಪ್ರತಿ ವರ್ಷದ ಫೆಬ್ರವರಿ ತಿಂಗಳಿನ ೨ ನೇ ಭಾನುವಾರ ಬೆಳಗ್ಗೆ ೮ ರಿಂದ ರಾತ್ರಿ ೮:೦೦ ರ ವರೆಗೆ ಸಾಯಿನಾಮ ಜಪ ಕಾರ್ಯಕ್ರಮ.
೩. ಶ್ರೀರಾಮ ನವಮಿ.
೪. ಗುರು ಪೌರ್ಣಮಿ.
೫. ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷ ೧೯ ನೇ ಆಗಸ್ಟ್ ರಂದು.
೬. ವಿಜಯ ದಶಮಿ (ಸಾಯಿಬಾಬಾ ಸಮಾಧಿ ದಿನ)
೭. ದತ್ತ ಜಯಂತಿ.

ಸಾಮಾಜಿಕ ಕಾರ್ಯ ಚಟುವಟಿಕೆಗಳು

  • ದೇವಾಲಯದ ಉಚಿತ ವೈದ್ಯಕೀಯ ಕೇಂದ್ರದಲ್ಲಿ ಪ್ರತಿದಿನ ಬೆಳಗ್ಗೆ ೯:೩೦ ರಿಂದ ೧೧:೩೦ ರ ವರೆಗೆ ಮತ್ತು ಸಂಜೆ ೪:೩೦ ರಿಂದ ೬:೩೦ ರ ವರೆಗೆ (ಭಾನುವಾರ ಹೊರತುಪಡಿಸಿ) ಉಚಿತ ವೈದ್ಯಕೀಯ ತಪಾಸಣೆ ಮತ್ತು ಮಾತ್ರೆಗಳನ್ನು ನೀಡಲಾಗುತ್ತದೆ. 
  • ದೇವಾಲಯದ ಉಚಿತ ದಂತ ಚಿಕಿತ್ಸಾ ಕೇಂದ್ರದಲ್ಲಿ ಪ್ರತಿದಿನ ಸಂಜೆ ೪:೩೦ ರಿಂದ ೮:೦೦ ರ ವರೆಗೆ (ಭಾನುವಾರ ಹೊರತುಪಡಿಸಿ) ಉಚಿತ ದಂತ ತಪಾಸಣೆ ಮಾಡಲಾಗುತ್ತದೆ ಮತ್ತು ಮಾತ್ರೆಗಳನ್ನು ನೀಡಲಾಗುತ್ತದೆ.
  • ಪ್ರತಿ ವರ್ಷ ೧೫ ನೇ ಆಗಸ್ಟ್ ರದು ರಕ್ತದಾನ ಶಿಬಿರ ನಡೆಸಲಾಗುತ್ತದೆ. 
  • ಸಮಾಜದ ಹಿಂದುಳಿದ ವರ್ಗದವರ ವೈದ್ಯಕೀಯ ಖರ್ಚಿನ ಸ್ವಲ್ಪ ಭಾಗವನ್ನು ಟ್ರಸ್ಟ್ ನ ಸಲಹೆಯ ಮೇರೆಗೆ ನೀಡಲಾಗುತ್ತದೆ. 
  • ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ಗಳನ್ನು ಮತ್ತು ಸಮವಸ್ತ್ರಗಳನ್ನು  ವಿತರಿಸಲಾಗುತ್ತದೆ. 
  • ಸಮಾಜದ ಬಡ ಜನರಿಗೆ,ವೃದ್ದರಿಗೆ ಮತ್ತು ಮಹಿಳೆಯರಿಗೆ ಉಚಿತವಾಗಿ ಸೀರೆಗಳನ್ನು, ಶಾಲುಗಳನ್ನು ಮತ್ತು ಹೊದಿಕೆಗಳನ್ನು ನೀಡಲಾಗುತ್ತದೆ.
 ದೇವಾಲಯದ ವಿಳಾಸ ಮತ್ತು ಮಾರ್ಗ ಸೂಚಿ

ವಿಳಾಸ :

ಶ್ರೀ ಶಿರಡಿ ಸಾಯಿಬಾಬಾ ಆನಂದ ಆಶ್ರಮ,
ಶ್ರೀ ಸದ್ಗುರು ಸಾಯಿನಾಥ ಸೇವಾ ಸಮಿತಿ (ರಿ)
೭ ನೇ ಮುಖ್ಯ ರಸ್ತೆ, ಕೆ.ಇ.ಬಿ.ಬಡಾವಣೆ
೧ ನೇ ಹಂತ, ಬಿ.ಟಿ.ಎಂ.ಬಡಾವಣೆ
ಬೆಂಗಳೂರು-೫೬೦ ೦೨೯.

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ. ಸುರೇಶ / ಶ್ರೀ. ಶೇಖರ ರಾಜು / ಶ್ರೀ. ಕೃಷ್ಣ ಕುಮಾರ್

ದೂರವಾಣಿ ಸಂಖ್ಯೆಗಳು:

೦೮೦ -೨೬೬೮ ೯೩೯೩ / ೯೮೪೫೦ ೪೯೪೬೮ /೯೯೦೦೦ ೦೦೦೭೨ /೯೪೪೯೦ ೨೯೩೯೩ 

ಇ ಮೇಲ್ ವಿಳಾಸ : 

chandrankrishnakumar@yahoo.com
  
ಮಾರ್ಗ ಸೂಚಿ: 

ಮೈಕೋ ಲೇಔಟ್ ಬಸ್ ನಿಲ್ಧಾಣದಿಂದ ೫ ನಿಮಿಷದ ನಡೆದರೆ ಸಾಯಿಮಂದಿರ ಸಿಕ್ಕುತ್ತದೆ.





    Tuesday, July 27, 2010

    ಬೆಂಗಳೂರಿನ ಸಾಯಿ ಮಂದಿರ - ಶ್ರೀ.ಶಿವಶಕ್ತಿ ಶಿರಡಿ ಸಾಯಿಬಾಬಾ ಮಂದಿರ, ಪುಟ್ಟೇನಹಳ್ಳಿ ಪಾಳ್ಯ, ಜೆ.ಪಿ.ನಗರ, ಬೆಂಗಳೂರು - ಕೃಪೆ - ಶ್ರೀ.ಗುರುಮುರ್ತಿ 

    • ದೇವಾಲಯದ ಹೊರಭಾಗದಲ್ಲಿ ಗಣೇಶನ ಸುಂದರ ವಿಗ್ರಹವಿದೆ.
    • ದೇವಾಲಯದ ಪ್ರವೇಶ ದ್ವಾರದ ಬಲಭಾಗದಲ್ಲಿ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ. 
    • ಅಮೃತ ಶಿಲೆಯ ಸುಂದರ ಸಾಯಿಬಾಬಾರವರ ವಿಗ್ರಹವನ್ನು ದೇವಾಲಯದಲ್ಲಿ ಸಾಯಿಭಕ್ತರು ನೋಡಬಹುದು. 
    • ಶಿವ ಶಕ್ತಿ ಸ್ವರೂಪಿಣಿ ದುರ್ಗಾ ದೇವಿಯ ವಿಗ್ರಹವು ಸಾಯಿಬಾಬಾರವರ ವಿಗ್ರಹದ ಎಡಭಾಗದಲ್ಲಿ ಪ್ರತಿಷ್ಟಾಪಿಸಲಾಗಿದೆ. 
    • ಶಿರಡಿಯಲ್ಲಿರುವಂತೆ ಸಾಯಿಬಾಬಾರವರ ಎದುರಿಗೆ ನಂದಿಯನ್ನು ಪ್ರತಿಷ್ಟಾಪಿಸಲಾಗಿದೆ.
    • ದೇವಾಲಯದ ಎರಡನೇ ಮಹಡಿಯಲ್ಲಿ ಪ್ರತಿ ಗುರುವಾರ ಅನ್ನದಾನ ಕಾರ್ಯಕ್ರಮ ನಡೆಯುತ್ತದೆ. 
    • ಪ್ರತಿ ಗುರುವಾರ ರಾತ್ರಿ ೮ ಘಂಟೆಗೆ ಪಲ್ಲಕ್ಕಿ ಉತ್ಸವ ನಡಯುತ್ತದೆ. 
    • ಮೊದಲನೇ ಮಹಡಿಯಲ್ಲಿ ಧ್ಯಾನ ಮಂದಿರವನ್ನು ಸ್ಥಾಪಿಸಲಾಗಿದೆ. 
    • ಪ್ರತಿ ಗುರುವಾರ ಬೆಳಗ್ಗೆ ೬:೩೦ ಕ್ಕೆ ಸಾಯಿಬಾಬಾರವರಿಗೆ ಅಭಿಷೇಕವನ್ನು ಮಾಡಲಾಗುತ್ತದೆ. ಎಲ್ಲಾ ಸಾಯಿಭಕ್ತರು ಇದರಲ್ಲಿ ಪಾಲ್ಗೊಂಡು ತಾವೇ ಸ್ವತಃ ಸಾಯಿಬಾಬಾರವರ ವಿಗ್ರಹಕ್ಕೆ ಅಭಿಷೇಕ ಮಾಡಲು ಅವಕಾಶ ಮಾಡಿಕೊಡಲಾಗಿದೆ. 

    ಸಾಯಿಬಾಬಾರವರ ವಿಗ್ರಹ


    ದುರ್ಗಾದೇವಿಯ ವಿಗ್ರಹ


     ಪವಿತ್ರ ಧುನಿ




      
     ಗುರುವಾರದ ಅನ್ನದಾನದ ದೃಶ್ಯ

    ದಿನನಿತ್ಯ ನಡೆಯುವ ಕಾರ್ಯಕ್ರಮಗಳು

    ಆರತಿಯ ಸಮಯ
    ಆರತಿ
    ಸಮಯ
    ಕಾಕಡ ಆರತಿ
    ೬:೩೦ ಬೆಳಗ್ಗೆ 
    ಮಹಾಮಂಗಳಾರತಿ 
    ೯:೩೦ ಬೆಳಗ್ಗೆ 
    ಮಧ್ಯಾನ್ಹ ಆರತಿ
    ೧೨:೦೦
    ಧೂಪಾರತಿ
    ೬:೩೦ ಸಂಜೆ 
    ಶೇಜಾರತಿ
    ೯:೩೦ ರಾತ್ರಿ 

    ವಿಶೇಷ ಕಾರ್ಯಕ್ರಮಗಳು 

    ಪ್ರತಿ ಹುಣ್ಣಿಮೆಯ ದಿನ ಸಂಜೆ ೭:೦೦ ಘಂಟೆಯಿಂದ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.

    ವಿಶೇಷ ಉತ್ಸವಗಳು ಮತ್ತು ಹಬ್ಬಗಳು

    ೧. ಹೊಸ ವರ್ಷದ ಆಚರಣೆ
    ೨. ಶ್ರೀರಾಮನವಮಿ
    ೩. ಗುರುಪೌರ್ಣಮಿ
    ೪. ನವರಾತ್ರಿ ಉತ್ಸವಗಳು
    ೫. ದತ್ತಾತ್ರೇಯ ಜಯಂತಿ

    ದೇವಾಲಯವಿರುವ ಸ್ಥಳದ ವಿವರಗಳು

    ವಿಳಾಸ :ನಂ.೫೩, ೧೩ ನೇ ಮುಖ್ಯ ರಸ್ತೆ, ಪುಟ್ಟೇನಹಳ್ಳಿ ಪಾಳ್ಯ, ಪುಟ್ಟೇನಹಳ್ಳಿ ಮುಖ್ಯ ರಸ್ತೆ, ಜೆ.ಪಿ.ನಗರ, ೭ ನೇ ಹಂತ, ಬೆಂಗಳೂರು-೭೮.

    ಸಂಪರ್ಕಿಸಬೇಕಾದ ವ್ಯಕ್ತಿ : ಶ್ರೀ. ಗುರುಮುರ್ತಿ ಗುರೂಜಿ

    ದೂರವಾಣಿ ಸಂಖ್ಯೆಗಳು :   ೯೮೪೫೬೮೪೭೮೩ / ೯೬೮೬೬೮೧೨೩೩ / ೯೬೮೬೬೮೧೨೩೨

    ಈ ಮೇಲ್ ವಿಳಾಸ :  jaiguru6@gmail.comgmurthy06@gmail.com

    ಮಾರ್ಗ ಸೂಚಿ : ಪುಟ್ಟೇನಹಳ್ಳಿ ಪಾಳ್ಯ ಬಸ್ ನಿಲ್ದಾಣದಿಂದ ೨ ನಿಮಿಷ ನಡೆದರೆ ಸಾಯಿಮಂದಿರ ಸಿಕ್ಕುತ್ತದೆ.
    ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ದ್ವಾರಕಾಮಾಯಿ ಸೇವಾ ಚಾರಿಟಬಲ್ ಟ್ರಸ್ಟ್, ಶಿರಡಿ ಸಾಯಿಬಾಬಾ ಲೇಔಟ್, ಕುಲುಮೆಪಾಳ್ಯ, ಶ್ಯಾನುಭೋಗನಹಳ್ಳಿ ಬಸ್ ನಿಲ್ದಾಣದ ಹತ್ತಿರ, ಬನ್ನೇರುಘಟ್ಟ ರಸ್ತೆ, ಬೆಂಗಳೂರು - ಕೃಪೆ - ಸಾಯಿಅಮೃತಧಾರಾ.ಕಾಂ 

    ಶ್ರೀ ದ್ವಾರಕಾಮಾಯಿ ಸೇವಾ ಚಾರಿಟಬಲ್ ಟ್ರಸ್ಟ್, ಬೆಂಗಳೂರು ಸಮಾಜದಲ್ಲಿರುವ ಬಡ ಜನರ ಯೋಗಕ್ಷೇಮಕ್ಕಾಗಿ, ಅವರ ಒಳಿತಿಗಾಗಿ ಶಿರಡಿ ಸಾಯಿಬಾಬಾರವರು ತೋರಿಸಿದ ಮಾರ್ಗದಲ್ಲಿ ನಡೆಯುತ್ತಾ ಬಡ ಜನರ ಮಕ್ಕಳ ಓದು-ಬರಹಕ್ಕೆ ಸಹಾಯ ಮಾಡಲು, ಅವರ ವೈದ್ಯಕೀಯ ಖರ್ಚಿಗೆ ಸಹಾಯವನ್ನು ಮಾಡುವ, ವೃದ್ದರ ವೈದ್ಯಕೀಯ ಖರ್ಚುಗಳಿಗೆ ಸಹಾಯವನ್ನು ಮಾಡುವ ಉನ್ನತ ಧ್ಯೇಯವನ್ನು ಹೊಂದಿರುವ ಸಂಸ್ಥೆಯಾಗಿದೆ. ಈ ಸಂಸ್ಥೆಯ ಟ್ರಸ್ಟ್ ನಲ್ಲಿ ಅನೇಕ ಯುವಕರು ನಿಸ್ವಾರ್ಥದಿಂದ ಕೆಲಸ ಮಾಡುತ್ತಿದ್ದು ಸೇವಾ ಮನೋಭಾವವನ್ನು ಹೊಂದಿದ್ದಾರೆ.




    ಈ ಟ್ರಸ್ಟ್ ನ ಬಗ್ಗೆ ಕೆಲವು ಪ್ರಮುಖ ಮಾಹಿತಿಗಳು ಈ ಕೆಳಕಂಡಂತೆ ಇವೆ. 


    • ಶ್ರೀ.ದ್ವಾರಕಾಮಾಯಿ  ಸೇವಾ ಚಾರಿಟಬಲ್ ಟ್ರಸ್ಟ್ 7ನೇ ಜುಲೈ 2009 ರ ಪವಿತ್ರ ಗುರುಪೂರ್ಣಿಮೆಯಂದು ಪ್ರಾರಂಭವಾಯಿತು. 
    • ಈ ಟ್ರಸ್ಟ್ ಅನ್ನು ಸಾರ್ವಜನಿಕ ಚಾರಿಟಬಲ್ ಟ್ರಸ್ಟ್ ಆಗಿ 27ನೇ ಆಗಸ್ಟ್ 2009 ರಂದು ನೋಂದಣಿ ಮಾಡಲಾಯಿತು. 
    • ಈ ಟ್ರಸ್ಟ್ ನಲ್ಲಿರುವ ದ್ವಾರಕಾಮಾಯಿ ಸಾಯಿಬಾಬಾರವರ ವಿಗ್ರಹವನ್ನು ಶಿರಡಿಯ ಸಮಾಧಿ ಮಂದಿರ, ದ್ವಾರಕಾಮಾಯಿ ಹಾಗೂ ಚಾವಡಿಯಲ್ಲಿ ಪೂಜೆ ಮಾಡಿಸಿ ನಂತರ ತಂದು ವಿಧಿವತ್ತಾಗಿ ಪ್ರತಿಷ್ಟಾಪಿಸಲಾಯಿತು. 
    • ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹವನ್ನು ನಿತ್ಯ ಪೂಜೆ ಮತ್ತು ಅಭಿಷೇಕಗಳಿಗೆ ಬಳಸಲಾಗುತ್ತಿದೆ. 
    • ಪ್ರತಿ ಗುರುವಾರ ಸಂಜೆ ಭಜನೆಯ ಕಾರ್ಯಕ್ರಮವನ್ನು ಸಂಜೆ 6:30 ರಿಂದ 8:30 ರ ವರೆಗೆ ನಡೆಸಲಾಗುತ್ತಿದೆ.
    • ಟ್ರಸ್ಟ್ ನ ಸದಸ್ಯರುಗಳು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.
    ಟ್ರಸ್ಟ್ ನಲ್ಲಿರುವ ಸಾಯಿಬಾಬಾರವರ ವಿಗ್ರಹ ಮತ್ತು ಪಾದುಕೆಗಳು 


    ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ವಸ್ತ್ರವನ್ನು ನೀಡುತ್ತಿರುವ ದೃಶ್ಯ 


    ವೃದ್ಧಾಶ್ರಮದ ವೃದ್ಧರಿಗೆ ಔಷಧ ನೀಡುತ್ತಿರುವ ದೃಶ್ಯ



    ವೃದ್ಧಾಶ್ರಮದ ನಿವಾಸಿಗಳಿಗೆ ಭೋಜನ ನೀಡುತ್ತಿರುವ ದೃಶ್ಯ 

    ಟ್ರಸ್ಟ್ ನ ಧ್ಯೇಯ ಮತ್ತು ಉದ್ದೇಶಗಳು

    • ಶಿರಡಿ ಸಾಯಿಬಾಬಾರವರು ಮತ್ತು ಅವರ ಅಂಕಿತ ಶಿಷ್ಯರುಗಳಾದ ಶ್ರೀ.ರಾಧಾಕೃಷ್ಣ ಸ್ವಾಮೀಜಿ ಹಾಗೂ ಶ್ರೀ.ನರಸಿಂಹ ಸ್ವಾಮೀಜಿಯವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದು ಮತ್ತು ಪ್ರಪಂಚದ ಎಲ್ಲಾ ಜನರ ನಡುವೆ ಸೋದರ ಭಾವನೆಯನ್ನು ಇನ್ನಷ್ಟು ಹೆಚ್ಚಿಸುವುದು. 
    • ಸಾಯಿ ಭಜನೆಗಳು, ಸತ್ಸಂಗಗಳು, ಹೆಸರಾಂತ ವೇದಾಂತ ಪಂಡಿತರಿಂದ ಪ್ರವಚನಗಳನ್ನು ಏರ್ಪಡಿಸುವುದರ ಮುಖೇನ ಎಲ್ಲೆಡೆಯಲ್ಲಿ ಸಾಯಿಬಾಬಾರವರ ಪ್ರಚಾರವನ್ನು ಮತ್ತು ಅವರ ಸಿದ್ದಾಂತವನ್ನು ಪ್ರಚಾರ ಮಾಡುವುದು. 
    • ಬೆಂಗಳೂರಿನ ಯಾವ ಪ್ರದೇಶದಲ್ಲಿ ಸಾಯಿ ಮಂದಿರವಿಲ್ಲವೋ ಅಲ್ಲಿ ಸಾಯಿಬಾಬಾರವರ ಮಂದಿರವನ್ನು ಕಟ್ಟಿ ಅದನ್ನು ಉತ್ತಮವಾಗಿ ನಡೆಸುವುದು ಮತ್ತು ಅಲ್ಲಿನ ಜನರಿಗೆ ಸಾಯಿಬಾಬಾರವರ ದರ್ಶನ ಮತ್ತು ಆಶೀರ್ವಾದ ಲಭಿಸುವಂತೆ ಮಾಡುವುದು. 
    • ಸಾಯಿಬಾಬಾರವರ ಪ್ರಮುಖ ಧ್ಯೇಯವಾದ ಅನ್ನದಾನವನ್ನು ಬೆಂಗಳೂರಿನ ಪ್ರಮುಖ ವೃದ್ಧಾಶ್ರಮಗಳು, ಶಾಲೆಗಳು, ಅಂಗವಿಕಲರ ಸಂಸ್ಥೆಗಳು, ಆಶ್ರಮಗಳಲ್ಲಿ ನಿಯಮಿತವಾಗಿ ನಡೆಸುವುದು ಮತ್ತು ಅಲ್ಲಿರುವ ಜನರ ಯೋಗಕ್ಷೇಮವನ್ನು ಆಗಾಗ್ಗೆ ವಿಚಾರಿಸಿ ಕೈಲಾದ ಸಹಾಯವನ್ನು ಮಾಡುವುದು. 
    • ಸಮಾಜದ ಹಿಂದುಳಿದ ಮತ್ತು ಬಡ ಜನರ ಶಸ್ತ್ರಚಿಕಿತ್ಸೆ, ಔಷಧಗಳಿಗೆ ಹಣಕಾಸಿನ ಸಹಾಯವನ್ನು ಮಾಡುವುದು. 
    • ಟ್ರಸ್ಟ್ ನ ಧ್ಯೇಯ ಮತ್ತು ಉದ್ದೇಶಗಳನ್ನು ತಿಳಿಸುವ ಭಿತ್ತಿ ಪತ್ರಗಳನ್ನು ಜನರಿಗೆ ನೀಡಿ ಟ್ರಸ್ಟ್ ನ ಧ್ಯೇಯಗಳನ್ನು ತಿಳಿಯಪಡಿಸಿ ಟ್ರಸ್ಟ್ ನ ಸದುದ್ದೇಶಗಳಿಗೆ ಬಳಸಲು ಹಣವನ್ನು ಸಂಗ್ರಹ ಮಾಡುವುದು. 
    • ಟ್ರಸ್ಟ್ ನ ಇನ್ನಿತರ ಯಾವುದೇ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಬೇಕಾಗುವ ಎಲ್ಲಾ ಕಾರ್ಯಕ್ರಮಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳುವುದು. 
    ಟ್ರಸ್ಟ್ ನ ವತಿಯಿಂದ ಬೆಂಗಳೂರಿನ ಪ್ರಪ್ರಥಮ ದ್ವಾರಕಾಮಾಯಿ ಸಾಯಿಬಾಬಾ ಮಂದಿರದ ನಿರ್ಮಾಣ:

    ಟ್ರಸ್ಟ್ ಬೆಂಗಳೂರಿನ ಪ್ರಪ್ರಥಮ ದ್ವಾರಕಾಮಾಯಿ ಸಾಯಿಬಾಬಾ ಮಂದಿರವನ್ನು ಬೆಂಗಳೂರು ದಕ್ಷಿಣ ಭಾಗದ ಬನ್ನೇರುಘಟ್ಟ ರಸ್ತೆಯಲ್ಲಿರುವ ಕುಲುಮೆಪಾಳ್ಯದಲ್ಲಿ ನಿರ್ಮಾಣ ಮಾಡುತ್ತಿದ್ದು ಅದಕ್ಕೆ ಸರಿಸುಮಾರು 80 ಲಕ್ಷ ರೂಪಾಯಿಗಳ ವೆಚ್ಚ ತಗಲುತ್ತದೆ ಎಂದು ಅಂದಾಜು ಮಾಡಲಾಗಿದೆ. 

    ಈ ದೇವಾಲಯದ ರೂಪುರೇಷೆ ಹಾಗೂ ಮನವಿ ಪತ್ರವನ್ನು ಸಾಯಿಭಕ್ತರ ಅವಗಾಹನೆಗಾಗಿ ಈ ಕೆಳಗೆ ಲಗತ್ತಿಸಲಾಗಿದೆ: 





    ಟ್ರಸ್ಟ್ ನ ಕಾರ್ಯಕಾರಿ ಸಮಿತಿ ಸದಸ್ಯರು 

    1.ಶ್ರೀ.ಕೆ.ಗೋವಿಂದರಾಜ್          - ಅಧ್ಯಕ್ಷರು
    2. ಶ್ರಿ.ರಾಘವೇಂದ್ರ ಶೆಟ್ಟಿ           - ಉಪಾಧ್ಯಕ್ಷರು
    3. ಶ್ರಿ.ಶ್ರೀ.ಹೆಚ್.ಎನ್.ರಾಜೇಶ್   – ಸಾಮಾನ್ಯ ಕಾರ್ಯದರ್ಶಿ
    4. ಶ್ರೀ. ಅಚ್ಯುತ ರಾವ್              – ಜಂಟಿ ಕಾರ್ಯದರ್ಶಿ 
    5. ಶ್ರಿ. ಕೆ.ಎಸ್.ವೇಣುಗೋಪಾಲ್  - ಖಚಾಂಚಿ 
    6. ಶ್ರಿ.ಬಿ.ಅರ್.ನಾರಾಯಣ          - ಸದಸ್ಯರು 
    7. ಶ್ರೀ.ಹೇಮಂತ್ ಕೊಲೇಕರ್      - ಸದಸ್ಯರು 
    8.ಶ್ರೀ.ಬಿ. ಆನಂದ ಸಿಂಗ್             - ಸದಸ್ಯರು
    9. ಶ್ರಿ.ಬಿ.ಸಿ.ಪ್ರವೀಣ್                    - ಸದಸ್ಯರು

     
    ಟ್ರಸ್ಟ್ ನ ಕಾರ್ಯ ಚಟುವಟಿಕೆಗಳು 

    • ವೃದ್ಧಾಶ್ರಮ ಹಾಗೂ ಅಂಧರ ಶಾಲೆಗಳಲ್ಲಿ ಅನ್ನದಾನ ಕಾರ್ಯಕ್ರಮಗಳು.
    • ವೃದ್ಧಾಶ್ರಮದ ವೃದ್ಧರಿಗೆ ಉಚಿತವಾಗಿ ಔಷಧಗಳನ್ನು ನೀಡುವ ಕಾರ್ಯಕ್ರಮ. 
    • ಅನಾಥಾಶ್ರಮದ ಮಕ್ಕಳಿಗೆ ಉಚಿತವಾಗಿ ಪುಸ್ತಕ, ಶಾಲಾ ಬ್ಯಾಗ್ ಗಳು ಮತ್ತು ತಟ್ಟೆಗಳನ್ನು ನೀಡುವ ಕಾರ್ಯಕ್ರಮ.
    • ಬಡ ಜನರಿಗೆ ಮತ್ತು ಅಶಕ್ತರಿಗೆ ವೈದ್ಯಕೀಯ ಸಹಾಯವನ್ನು ಮಾಡುವ ಕಾರ್ಯಕ್ರಮ.
    • ನಿಯಮಿತವಾಗಿ ಪ್ರತಿ ವರ್ಷ ಶಿರಡಿ ಯಾತ್ರೆಯನ್ನು ಕೈಗೊಳ್ಳುವುದು.
    ವಿಶೇಷ ಉತ್ಸವದ ದಿನಗಳು

    1 . ಗುರು ಪೂರ್ಣಿಮೆ
    2 . ರಾಮನವಮಿ
    3 . ವಿಜಯದಶಮಿ
    4 .ದತ್ತ ಜಯಂತಿ

    ದೇಣಿಗೆಗೆ ಮನವಿ:

    ಟ್ರಸ್ಟ್ ನಿರ್ಮಿಸುತ್ತಿರುವ ಬೆಂಗಳೂರಿನ ಪ್ರಪ್ರಥಮ ದ್ವಾರಕಾಮಾಯಿ ಸಾಯಿಬಾಬಾ ಮಂದಿರದ ಖರ್ಚುಗಳಿಗಾಗಿ ಹಾಗೂ ಆಧ್ಯಾತ್ಮಿಕ ಮತ್ತು ಸಾಮಾಜಿಕ ಕಾರ್ಯ ಚಟುವಟಿಕೆಗಳಿಗಾಗಿ ದೇಣಿಗೆ ನೀಡಲು ಇಚ್ಚಿಸುವ ಸಾಯಿ ಬಂಧುಗಳು ಹಣವನ್ನು  ನಗದು/ಚೆಕ್/ಡಿಮ್ಯಾಂಡ್ ಡ್ರಾಫ್ಟ್ ಮುಖಾಂತರವಾಗಿ "ಶ್ರೀ ದ್ವಾರಕಾಮಾಯಿ ಸೇವಾ ಚಾರಿಟಬಲ್ ಟ್ರಸ್ಟ್, ಬೆಂಗಳೂರು" ಈ ಹೆಸರಿಗೆ ಸಂದಾಯವಾಗುವಂತೆ ನೀಡಬಹುದು. ಟ್ರಸ್ಟ್ ನ ಬ್ಯಾಂಕ್ ಖಾತೆಯ ವಿವರಗಳು ಈ ಕೆಳಕಂಡಂತೆ ಇವೆ: 

    ಖಾತೆ ಸಂಖ್ಯೆ: 2698101011164, - ಕೆನರಾ ಬ್ಯಾಂಕ್, ಡಾ.ರಾಜಕುಮಾರ್ ರಸ್ತೆ, 2ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-21, ಐ.ಎಫ್.ಎಸ್.ಸಿ.ಸಂಖ್ಯೆ: CNRB0002698. 

    ಟ್ರಸ್ಟ್ ಗೆ ನೀಡುವ ಎಲ್ಲಾ ದೇಣಿಗೆಗೆ ಆದಾಯ ತೆರಿಗೆ ಇಲಾಖೆಯ ಸೆಕ್ಷನ್ 80-G ಅನ್ವಯವಾಗುವಂತೆ ಸಂಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ.
    ಟ್ರಸ್ಟ್ ನ ಸಂಪರ್ಕದ ವಿವರಗಳು 

    ಸ್ಥಳ:
    ಶ್ಯಾನುಭೋಗನಹಳ್ಳಿ ಬಸ್ ನಿಲ್ದಾಣದ ಹತ್ತಿರ, ಶಿರಡಿ ಸಾಯಿಬಾಬಾ ಲೇ ಔಟ್, ಕುಲುಮೆ ಪಾಳ್ಯ

    ವಿಳಾಸ:
    ಶ್ರೀ ದ್ವಾರಕಾಮಾಯಿ ಸೇವಾ ಚಾರಿಟಬಲ್ ಟ್ರಸ್ಟ್,  
    ಶಿರಡಿ ಸಾಯಿಬಾಬಾ ಲೇಔಟ್, ಕುಲುಮೆಪಾಳ್ಯ, ಶ್ಯಾನುಭೋಗನಹಳ್ಳಿ ಬಸ್ ನಿಲ್ದಾಣದ ಹತ್ತಿರ, 
    ಬನ್ನೇರುಘಟ್ಟ ರಸ್ತೆ, ಬೆಂಗಳೂರು

    ಸಂಪರ್ಕಿಸಬೇಕಾದ ವ್ಯಕ್ತಿಗಳು:
    ಶ್ರಿ. ವೇಣುಗೋಪಾಲ್ /ಶ್ರಿ.ರಾಜೇಶ್/ಶ್ರಿ.ಪ್ರವೀಣ್/ಶ್ರಿ.ಅಚ್ಯುತ ರಾವ್/ಶ್ರಿ.ಗೋವಿಂದ ರಾಜ್/
     

    ದೂರವಾಣಿ ಸಂಖ್ಯೆಗಳು:
    +91 99805 26642 /+91 94483 62411/+91 90355 56381/+91 99453 73737/+91 99860 32187/+91 94490 64951

    ಇ-ಮೈಲ್ ವಿಳಾಸ:
    sdstblr@gmail.com

    ಅಂತರ್ಜಾಲ ತಾಣ: 
    http://shridwarakamaisevacharitabletrust.webs.com/

    ಮಾರ್ಗಸೂಚಿ:
    ಶ್ಯಾನುಭೋಗನ ಹಳ್ಳಿ ಬಸ್ ನಿಲ್ದಾಣದಲ್ಲಿ ಇಳಿಯುವುದು. ಬಸ್ ನಿಲ್ದಾಣದಲ್ಲಿ ಇಳಿದು 5 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. ದೇವಾಲಯವು ಬನ್ನೇರುಘಟ್ಟ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ಲೇಔಟ್, ಕುಲುಮೆಪಾಳ್ಯದಲ್ಲಿ ಇರುತ್ತದೆ. ಮೆಜಿಸ್ಟಿಕ್ ಹಾಗೂ ಮಾರುಕಟ್ಟೆಯಿಂದ ದೇವಾಲಯಕ್ಕೆ ಹೇರಳವಾಗಿ ಬಸ್ ಗಳು ದೊರೆಯುತ್ತವೆ. 
     
    ಕನ್ನಡ ಅನುವಾದ: ಶ್ರೀಕಂಠ ಶರ್ಮ  

    Saturday, July 24, 2010

    ಸಾಯಿಭಕ್ತರೊಬ್ಬರ "ಹುಳಿತೇಗು" ತೊಂದರೆಯನ್ನು ನಿವಾರಿಸಿದ ಶಿರಡಿ ಸಾಯಿಬಾಬಾ ಲೀಲೆ - ಕೃಪೆ - ಡಾ.ಶಿವಚರಣ್

    ಇದು ನನ್ನ ಸ್ವಂತ ಅನುಭವ. ನಾನು ಚಿಕ್ಕ ವಯಸ್ಸಿನಲ್ಲೇ ಮನೆಯ ಆರ್ಥಿಕ ತೊಂದರೆಯನ್ನು ನಿವಾರಿಸಲು ಸೇಲ್ಸ್ ಕೆಲಸವನ್ನು ಸೇರಿಕೊಂಡೆ. ಕೆಲಸದ ನಿಮಿತ್ತವಾಗಿ ಯಾವಾಗಲೂ ತಿರುಗಾಡುತ್ತಿದ್ದರಿಂದ ಆರೋಗ್ಯ ಹದಗೆಟ್ಟಿತು. ನನಗೆ ತೀವ್ರವಾದ ಹೊಟ್ಟೆ ಉರಿ ಕಾಣಿಸಿಕೊಂಡು ಏನು ತಿನ್ನಲು ಆಗುತ್ತಿರಲಿಲ್ಲ ಮತ್ತು ತಿಂದರೆ ಹುಳಿತೇಗು ಬಂದು ಬಹಳ ಯಾತನೆಯಾಗುತ್ತಿತ್ತು.  ಪ್ರತಿದಿನ ೨೦ ಕ್ಕೂ ಹೆಚ್ಚು "ಜೆಲುಸಿಲ್" ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೆ. ನಾನು ಅನೇಕ ವಿಧವಾದ ಔಷಧಗಳನ್ನು ತೆಗೆದುಕೊಂಡೆ. ಆದರೆ ಯಾವುದೇ ಗುಣ ಕಾಣಲಿಲ್ಲ. ಇದೇ ರೀತಿ ೫ ವರ್ಷಗಳನ್ನು ಕಳೆದೆ.

    ೧೯೯೮ ರಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ನನ್ನ ಸಹೋದ್ಯೋಗಿಯೊಂದಿಗೆ ಶಿರಡಿಗೆ ತೆರಳಿದೆ. ಬೆಳಗಿನ ದರ್ಶನದ ನಂತರ ನಾವು ದ್ವಾರಕಾಮಾಯಿಗೆ ದರ್ಶನಕ್ಕೆ ಹೋದೆವು. ಅಲ್ಲಿ ಸಾಯಿಬಾಬಾರವರ ದೊಡ್ಡ ಫೋಟೋವನ್ನು ತೂಗುಹಾಕಿದ್ದರು. ಆ ಫೋಟೋಕ್ಕೆ ಒಂದು ದೊಡ್ಡ ಗುಲಾಬಿ ಹಾರವನ್ನು ಹಾಕಿದ್ದರು. ಆ ದಿನಗಳಲ್ಲಿ ನಾವು ಫೋಟೋವನ್ನು ಮುಟ್ಟಲು ಹಾಗೂ ಅಲ್ಲಿಯೇ ಕುಳಿತುಕೊಳ್ಳಲು ಕೂಡ ಬಿಡುತ್ತಿದ್ದರು. ಕ್ಯುನಲ್ಲಿ ನನ್ನ ಮುಂದೆ ಕೆಲವು ಹೆಂಗಸರಿದ್ದರು. ಅವರೆಲ್ಲರೂ ಸಾಯಿಬಾಬಾರವರ ಫೋಟೋಕ್ಕೆ ವಂದಿಸಿ ಅಲ್ಲಿದ್ದ ಗುಲಾಬಿ ಹಾರದಿಂದ ಒಂದೊಂದೇ ಎಸಳುಗಳನ್ನು ಕಿತ್ತುಕೊಂಡು ಬಾಯಿಗೆ ಹಾಕಿಕೊಳ್ಳುತ್ತಿದ್ದರು. ನಾನು ಕೂಡ ಅವರೆಲ್ಲ ಮಾಡಿದಂತೆ ಒಂದು ಗುಲಾಬಿ ಎಸಳನ್ನು ಕಿತ್ತುಕೊಂಡು ಸಾಯಿಬಾಬಾರವರ ಪ್ರಸಾದವೆಂದು ತಿಳಿದುಕೊಂಡು ಬಾಯಿಗೆ ಹಾಕಿಕೊಂಡೆ.

    ಅಂದಿನಿಂದ ನನಗೆ ಯಾವುದೇ ಹುಳಿತೇಗು ತೊಂದರೆಯೇ ಇಲ್ಲ. ಈ ಘಟನೆ ನೆಡೆದು ಹಲವಾರು ವರ್ಷಗಳೇ ಕಳೆದಿವೆ. ಈಗಲೂ ಕೂಡ ಏನಾದರು ತಿನ್ನುವಾಗ ಆ ಘಟನೆಯನ್ನು ನೆನಪಿಸಿಕೊಳ್ಳುತ್ತೇನೆ. ನಾನು ಈಗ ಎಲ್ಲಾ ಪದಾರ್ಥಗಳನ್ನು ಕೂಡ ಯಾವುದೇ ಭಯವಿಲ್ಲದೆ ತಿನ್ನುತ್ತಿದ್ದೇನೆ. ನನ್ನ ಹುಳಿತೇಗು ಖಾಯಿಲೆಯನ್ನು ಪವಾಡಸದೃಶ ರೀತಿಯಲ್ಲಿ ವಾಸಿಮಾಡಿದ ಸಾಯಿಬಾಬಾರವರಿಗೆ ನನ್ನ ಅನಂತಾನಂತ ವಂದನೆಗಳು. 

    -ಶ್ರೀ. ಶ್ರವಣ ಕುಮಾರ್ ಹೇಳಿದಂತೆ

    Friday, July 23, 2010

    ಹೈದರಾಬಾದ್ ಭಕ್ತರೊಬ್ಬರ ಕರೆಗೆ ಓಗೊಟ್ಟು ಮನೆಗೆ ಬಂದು ನಿಜರೂಪದಲ್ಲಿ ಆಶೀರ್ವದಿಸಿದ ಶಿರಡಿ ಸಾಯಿಬಾಬಾ - ಕೃಪೆ - ಡಾ.ಶಿವಚರಣ್ 

    ಆಗ ೧೯೮೨ ನೇ ಇಸವಿ. ನಾನು ೬ ನೇ ತರಗತಿಯಲ್ಲಿ ಓದುತ್ತಿದ್ದೆ. ನನ್ನ ತಂದೆಯವರು ನಡೆಸುತ್ತಿದ್ದ ಕಾರ್ಖಾನೆ ಮುಚ್ಚಿಹೋಗಿತ್ತು. ನಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಬಹಳ ಹದಗೆಟ್ಟಿತ್ತು. ನಾವುಗಳು ದಿವಾಳಿಯಾಗುವ ಸ್ಥಿತಿಗೆ ಬಂದು ತಲುಪಿದ್ದೆವು. ಆ ಪರಿಸ್ಥಿತಿಯಿಂದ ಹೊರಬರಲು ಏನು ಮಾಡಬೇಕೋ ತಿಳಿಯದೆ ನಮ್ಮ ತಂದೆ, ತಾಯಿ ಮತ್ತು ನಮ್ಮ ಅಜ್ಜಿಯವರು ಬಹಳ ವ್ಯಾಕುಲರಾಗಿದ್ದರು. ಮನೆಯ ಮಕ್ಕಳಾದ ನಮಗೆ ಮನೆಯ ಪರಿಸ್ಥಿತಿ ಚೆನ್ನಾಗಿಲ್ಲವೆಂಬ ಅರಿವಾಗಿತ್ತು. ಶಾಲೆಯ ತಿಂಗಳ ಫೀಸ್ ಕೂಡ ನೀಡಲು ನಮ್ಮ ತಂದೆಯವರು ಅಸಮರ್ಥರಾಗಿದ್ದ ಕಾರಣ ನಾವುಗಳು ಶಾಲೆಗೆ ಹೋಗುವುದನ್ನು ನಿಲ್ಲಿಸಬೇಕೆಂದು ನಿರ್ಧಾರ ಮಾಡಿದೆವು.

    ನಮ್ಮ ಮನೆಯಲ್ಲಿ ನೀರವ ಮೌನ ಆವರಿಸಿತ್ತು. ಏನು ಮಾಡಲು ತೋಚದೆ ಮನೆಯವರೆಲ್ಲ ಕೈಚೆಲ್ಲಿ ಕುಳಿತಿದ್ದರು. ಅಂದ ಹಾಗೆ ಹೇಳಲು ಮರೆತಿದ್ದೆ. ನಮ್ಮ ಅಜ್ಜಿಯವರು ೧೯೪೦ ನೇ ಇಸವಿಯಿಂದ ಸಾಯಿಬಾಬಾರವರ ಅನನ್ಯ ಭಕ್ತೆಯಾಗಿದ್ದರು. ಅವರು ಸಾಯಿಬಾಬಾರವರನ್ನು ಬಂದು ಸಹಾಯ ಮಾಡುವಂತೆ ಪ್ರಾರ್ಥನೆ ಮಾಡುತ್ತಿದ್ದಿರಬೇಕು ಎಂದೆನಿಸುತ್ತದೆ.

    ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಸಾಯಿಬಾಬಾರವರು ತಮ್ಮನ್ನು ನಂಬಿ ಕರೆದ ಯಾವುದೇ ಸಾಯಿಭಕ್ತರನ್ನು ಕೈಬಿಡದೆ ಸಲಹುತ್ತಿದ್ದಾರೆ. ನಮ್ಮ ಮನೆಯಲ್ಲೂ ಕೂಡ ಹಾಗೆಯೇ ಆಯಿತು. ಸಾಯಿಬಾಬಾರವರು ನಮ್ಮೆಲ್ಲರ ಪ್ರಾರ್ಥನೆಗೆ ಓಗೊಟ್ಟು ಹೈದರಾಬಾದ್ ನಲ್ಲಿದ್ದ ನಮ್ಮ ಮನೆಗೆ ಬಂದೇ ಬಿಟ್ಟರು.

    ಅಂದು ಮಟ ಮಟ ಮಧ್ಯಾನ್ಹ ೨ ಘಂಟೆಯ ಸಮಯ. ಬಿಸಿಲು ತುಂಬಾ ಹೆಚ್ಚಾಗಿಯೇ ಇತ್ತು. ಸಾಯಿಬಾಬಾರವರು ತಮ್ಮ ನಿಜರೂಪದಲ್ಲೇ ನಮ್ಮ ಮನೆಗೆ ಬಂದರು. ಆಗ ಮನೆಯಲ್ಲಿ ನಮ್ಮ ಅಮ್ಮ ಮತ್ತು ನಮ್ಮ ಅಜ್ಜಿ ಮಾತ್ರ ಮನೆಯಲ್ಲಿ ಇದ್ದರು. ಸಂಪೂರ್ಣ ಕಿವುಡರಾದ ನಮ್ಮ ಅಜ್ಜಿಯವರು ಮನೆಯೊಳಗಿನ ರೂಮಿನಲ್ಲಿ ಮಲಗಿದ್ದರು. ನಮ್ಮ ತಾಯಿಯವರು ವರಾಂಡಾದಲ್ಲಿ ಏನೋ ಕೆಲಸ ಮಾಡುತ್ತಿದ್ದರು. ಅವರು ಸಾಯಿಬಾಬಾ ಮನೆಯೊಳಗೆ ಬರುತ್ತಿರುವುದನ್ನು ಕಂಡು ಯಾರೋ ಮುಸ್ಲಿಂ ಫಕೀರರಿರಬೇಕೆಂದು ಕೊಂಡರು. ಅವರು ಫಕೀರನನ್ನು ಮನೆಯೊಳಗೆ ಬಿಡದೆ ಹೊರಗಡೆಯೇ ಇರುವಂತೆ ತಾಕೀತು ಮಾಡಿದರು. ಆದರೆ ಸಾಯಿಬಾಬಾರವರು ತೆಲುಗಿನಲ್ಲಿಯೇ ಮಾತನಾಡಿ ನಮ್ಮ ತಾಯಿಯವರಿಗೆ "ಹೆದರಬೇಡ ಮಗಳೇ, ನಾನು ಇಲ್ಲಿಗೆ ಏನೋ ಹೇಳಬೇಕೆಂದು ಬಂದಿದ್ದೇನೆ" ಎಂದರು.

    ಈ ಮಧ್ಯೆ ಒಳಗಡೆಯ ರೂಮಿನಲ್ಲಿ ಮಲಗಿದ್ದ ನಮ್ಮ ಅಜ್ಜಿಯವರು ಒಳಗಿನಿಂದ ಓಡುತ್ತಾ ಸಾಯಿಬಾಬಾರವರು ತಮ್ಮ ಮನೆಗೆ ಬಂದಿರುವರೆಂದು ಅತ್ಯಂತ ಉತ್ಸಾಹದಿಂದ ಹೇಳುತ್ತಾ ಹೊರಗಡೆಗೆ ಬಂದರು. ನಮ್ಮ ಅಜ್ಜಿಯವರಿಗೆ ಬಾಬಾರವರು ನಮ್ಮ ಮನೆಗೆ ಬಂದಿರುವ ವಿಷಯ ಹೇಗೆ ಗೊತ್ತಾಯಿತು ಎಂಬುದು ಶಿರಡಿ ಸಾಯಿಬಾಬಾರವರಿಗೆ ಮಾತ್ರ ಗೊತ್ತಿರಲು ಸಾಧ್ಯ.

    ಸಾಯಿಬಾಬಾರವರು ಆ ದಿನ ನಮ್ಮ ಮನೆಯಲ್ಲಿ ಮುಂದೆ ನಡೆಯುವ ಕೆಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ನನ್ನ, ನನ್ನ ತಮ್ಮನ ಹಾಗೂ ನನ್ನ ತಂಗಿಯ ವಿಷಯಗಳನ್ನು ಕೂಡ ಹೇಳಿದರು. ಆಲ್ಲದೇ, ಯಾವುದಕ್ಕೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದರು. ನಿಮ್ಮೆಲ್ಲರೊಡನೆ ನಾನಿದ್ದೇನೆ ಎಂದು ಅಭಯವನ್ನು ನೀಡಿದರು.

    ಕಾಲಾನಂತರದಲ್ಲಿ ಬಾಬಾರವರು ಹೇಳಿದಂತೆಯೇ ನಡೆಯಿತು. ಅವರು ಅಂದು ನುಡಿದ ಭವಿಷ್ಯಗಳೆಲ್ಲ ನಿಜವಾಯಿತು. ನಮ್ಮ ಮನೆಗೆ ಬಂದಿದ್ದು ಸಾಯಿಬಾಬಾರವರೇ ಎಂಬುದು ಅವರು ವಾಪಸು ಹೋಗುವಾಗ ತೋರಿಸಿಕೊಟ್ಟರು. ಅದು ಹೇಗೆಂದರೆ, ನಮ್ಮ ತಾಯಿ ಮತ್ತು ಅಜ್ಜಿಯವರು ಬಾಬಾರವರನ್ನು ಬೀಳ್ಕೊಡುತ್ತಿದ್ದರು. ನಮ್ಮ ಮನೆಯ ಮುಂಬಾಗಿಲಿನಿಂದ ಹೊರಕ್ಕೆ ಹೋಗಿ ಕೂಡಲೇ ಸಿಗುವ ಎಡಕ್ಕೆ ತಿರುಗಿದರು. ಕೆಲವೇ ಕ್ಷಣಗಳಲ್ಲಿ ಅದೇ ದಾರಿಯಲ್ಲಿ ನಮ್ಮ ತಂದೆಯವರು ಬಂದರು. ನಮ್ಮ ತಾಯಿ ಮತ್ತು ಅಜ್ಜಿಯವರು ಹೊರಗಡೆ ನಿಂತಿರುವುದನ್ನು ಕಂಡು ಏಕೆ ಹೊರಗಡೆ ನಿಂತಿರುವಿರೆಂದು ಪ್ರಶ್ನಿಸಿದರು. ನಮ್ಮ ತಂದೆಯವರಿಗೆ ಸಾಯಿಬಾಬಾರವರು ನಮ್ಮ ಮನೆಯಿಂದ ಹೋದದ್ದು ಕಾಣಿಸಲೇ ಇಲ್ಲ. ನಮ್ಮ ತಾಯಿ ಮತ್ತು ಅಜ್ಜಿ ನಡೆದ ವಿಷಯವನ್ನು ನಮ್ಮ ತಂದೆಗೆ ತಿಳಿಸಿದರು. ನಮ್ಮ ತಂದೆಯವರು ಹುಚ್ಚರಂತೆ ಅದೇ ದಾರಿಯಲ್ಲಿ ಬಾಬಾರವರನ್ನು ಹುಡುಕಿ ದರ್ಶನ ಪಡೆಯಲು ಓಡಿದರು. ಆದರೆ ಅವರಿಗೆ ಯಾರು ಕಾಣಲಿಲ್ಲ. ನಿಜ ಹೇಳಬೇಕೆಂದರೆ ಆ ಸಮಯದಲ್ಲಿ ಇಡೀ ರಸ್ತೆ ನಿರ್ಜನವಾಗಿದ್ದು ರಸ್ತೆಯಲ್ಲಿ ಯಾವ ಮನುಷ್ಯರೂ ಇರಲಿಲ್ಲ.

    ಸಾಯಿಯವರು ಬಂದ ದಾರಿಯಲ್ಲೇ ಕ್ಷಣ ಮಾತ್ರದಲ್ಲಿ ಮಾಯವಾಗಿದ್ದರು. ಈ ಪವಾಡ ಸಾಯಿಬಾಬಾರವರಿಗಲ್ಲದೇ ಬೇರೆ ಯಾರಿಗೆ ಮಾಡಲು ಸಾಧ್ಯ?

    -ಶ್ರೀ. ಶ್ರವಣ ಕುಮಾರ್ ರವರು ಹೇಳಿದಂತೆ
    ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಸಹಾಯ ಹಸ್ತವನ್ನು ನೀಡಿದ ಕರುಣಾಮಯಿ ಸಾಯಿಬಾಬಾ (ಶ್ರೀಮತಿ.ವಂದನ ಕಾಮತ್ ರವರು ಸಾಯಿಲೀಲಾ ಪತ್ರಿಕೆಯ ಸೆಪ್ಟೆಂಬರ್-ಅಕ್ಟೋಬರ್ ೨೦೦೯ ಸಂಚಿಕೆಯಲ್ಲಿ ತಿಳಿಸಿರುವಂತೆ)

    ಶ್ರೀಮತಿ.ವಂದನ ಕಾಮತ್ ರವರು ಬೆಂಗಳೂರಿನಲ್ಲಿ ಒಂದು ಸಣ್ಣ ಬಾಡಿಗೆ ಮನೆಯಲ್ಲಿ ತಮ್ಮ ಮನೆಯವರೊಂದಿಗೆ ವಾಸಿಸುತ್ತಿದ್ದರು. ಅವರು ಬಹಳ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದರು.

    ಆಗ ಅವರಿಗೆ ಸಾಯಿಬಾಬಾ ಯಾರೆಂದು ಗೊತ್ತಿರಲಿಲ್ಲ. ಆದರೆ ಸಾಯಿಯವರ ದಯೆಯಿಂದ ಇವರ ಮನೆಯ ಮಾಲೀಕರ ಸೊಸೆ ವಂದನಾರವರಿಗೆ ಸಾಯಿ ಸಚ್ಚರಿತೆಯನ್ನು ಕೊಟ್ಟು ಓದಲು ತಿಳಿಸಿದರು ಮತ್ತು ಒಳ್ಳೆಯದಾಗುವುದೆಂದು ಭರವಸೆ ನೀಡಿದರು.

    ಒಂದು ದಿನ ಇದ್ದಕ್ಕಿದ್ದಂತೆ ಮನೆಯ ಮಾಲೀಕರು ಬಂದು ವಂದನಾರವರಿಗೆ ಮನೆಯನ್ನು ಖಾಲಿ ಮಾಡುವಂತೆ ತಿಳಿಸಿದರು. ಇದನ್ನು ಕೇಳಿ ವಂದನಾರವರಿಗೆ ಸಿಡಿಲು ಬಡಿದಂತಾಯಿತು. ಏಕೆಂದರೆ, ಅವರ ಬಳಿ ಬೇರೆ ಮನೆಗೆ ಬಾಡಿಗೆಗೆ ಹೋಗಲು ಹಣದ ಕೊರತೆಯಿತ್ತು. ಅಂತಹ ಸಂದಿಗ್ಧ ಪರಿಸ್ಥಿತಿಯ ಸಮಯದಲ್ಲಿ ವಂದನಾರವರಿಗೆ ಶಿರಡಿಗೆ ಹೋಗಿಬರುವ ಅವಕಾಶ ಒದಗಿ ಬಂದಿತು. ಅದರಂತೆ ಅವರು ಮನೆಯವರೊಂದಿಗೆ ಶಿರಡಿಗೆ ಹೋಗಿ ಬಂದರು. ಶಿರಡಿಯಿಂದ ವಾಪಸಾದ ನಂತರ ತಮ್ಮ ಮನೆಯವರಿಗೆ ಅತ್ಯಂತ ನಿಕಟ ಸಂಪರ್ಕವನ್ನು ಹೊಂದಿದ್ದ ಸ್ನೇಹಿತರೊಂದಿಗೆ ತಮ್ಮ ಕಷ್ಟಗಳನ್ನೆಲ್ಲಾ ತೋಡಿಕೊಂಡರು.

    ಆ ಸ್ನೇಹಿತರು ಇವರಿಗೆ ಒಂದು ಮನೆಯನ್ನು ಕೊಂಡುಕೊಳ್ಳುವಂತೆ ಸಲಹೆ ನೀಡಿದರು. ಆ ಮಾತನ್ನು ಕೇಳಿ ವಂದನಾರವರಿಗೆ ಆ ಕೆಲಸ ತಮ್ಮಿಂದ ಸಾಧ್ಯವಿಲ್ಲ ಎಂದೆನಿಸಿತು. ಏಕೆಂದರೆ ಆಗ ಅವರ ಬಳಿ ಹೊಸ ಮನೆಗೆ ಬಾಡಿಗೆ ಕೊಡಲು ಕೂಡ ಹಣವಿರಲಿಲ್ಲ. ಆದರೆ, ನಾವು ಅಂದುಕೊಳ್ಳುವುದೇ ಒಂದು, ಸಾಯಿಯವರ ನಿರ್ಧಾರವೇ ಬೇರೆಯಾಗಿರುತ್ತದೆ. ಇಲ್ಲಿ ಹಾಗೆಯೇ ಆಯಿತು. ಅವರ ಸ್ನೇಹಿತರು ಬರಿಯ ಸಲಹೆಯನ್ನು ನೀಡಿದ್ದು ಮಾತ್ರವಲ್ಲದೆ ತ್ಯಾಗರಾಜನಗರದ ಸಾಯಿಮಂದಿರದ ಹತ್ತಿರವಿದ್ದ ಒಂದು ಖಾಲಿ ನಿವೇಶನವನ್ನು ತೆಗೆದುಕೂಳ್ಳಲು ೭೫,೦೦೦/- ರೂಗಳನ್ನು ಕೂಡ ನೀಡಿದರು. ವಂದನರವರ ಮನೆಯವರಿಗೆ ಇದರಿಂದ ಬಹಳ ಸಂತೋಷವಾಯಿತು. ಆದರೆ ಆ ನಿವೇಶನದ ಬೆಲೆ ಲಕ್ಷಕ್ಕಿಂತ ಹೆಚ್ಚಾಗಿತ್ತು. ಆದ್ದರಿಂದ ಮಿಕ್ಕ ಹಣವನ್ನು ಹೇಗೆ ಹೊಂದಿಸುವುದು ಎಂಬ ಚಿಂತೆ ಮನೆಯವರನ್ನು ಕಾಡತೊಡಗಿತು.

    ಇದೆಲ್ಲದರ ಮಧ್ಯೆ ವಂದನಾರವರ ಮಾವನವರು ತೀರಿಕೊಂಡರು. ಅವರು ಬರೆದ ಉಯಿಲಿಯಿಂದ ಇವರಿಗೆ ೧ ಲಕ್ಷ ರೂಪಾಯಿಗಳು ದೊರೆಯಿತು. ಉಳಿದ ಹಣವನ್ನು ಇವರಿಗೆ ತಿಳಿದವರಿಂದ ಸಾಲ ಪಡೆದು ಆ ನಿವೇಶನವನ್ನು ಕೊಂಡುಕೊಂಡರು.

    ಇಷ್ಟೆಲ್ಲಾ ನಡೆಯುವ ಹೊತ್ತಿಗೆ ಇವರ ಮನೆಯವರೆಲ್ಲ ಅನನ್ಯ ಸಾಯಿಭಕ್ತರಾಗಿದ್ದರು ಮತ್ತು ತಪ್ಪದೆ ಸಾಯಿಬಾಬಾರವರನ್ನು ಪೂಜಿಸುತ್ತಿದ್ದರು. ನಿವೇಶನವನ್ನು ಕೊಂಡು ಭೂಮಿ ಪೂಜೆಯನ್ನು ಮಾಡಿದರು. ಆದರೆ ಕೈನಲ್ಲಿ ಹಣವಿಲ್ಲದೆ ಒಂದು ವರ್ಷಗಳ ಕಾಲ ಮನೆಯನ್ನು ಕಟ್ಟುವ ಕೆಲಸವನ್ನು ಪ್ರಾರಂಭಿಸಲಿಲ್ಲ. ಆ ಸಮಯದಲ್ಲಿ ವಂದನಾರವರಿಗೆ ಸಾಯಿ ಸಚ್ಚರಿತೆಯಲ್ಲಿ ಬರುವ ಒಂದು ಘಟನೆ ಜ್ಞಾಪಕಕ್ಕೆ ಬಂದಿತು. ಅದೇನೆಂದರೆ, ಒಬ್ಬ ಭಕ್ತರು ಸಾಯಿಬಾಬಾರವರ ಆದೇಶದಂತೆ ಒಂದು ಕರಿ ನಾಯಿಗೆ ಮೊಸರನ್ನವನ್ನು ನೀಡಿದಾಗ ಆ ಭಕ್ತರ ಆಶೆಗಳು ಫಲಿಸಿದ ಘಟನೆ ನೆನಪಿಗೆ ಬಂದಿತು. ಅದರಂತೆ ವಂದನಾರವರು ೭ ಗುರುವಾರಗಳು ತಪ್ಪದೆ ಕರಿ ನಾಯಿಗೆ ಮೊಸರನ್ನ ನೀಡುವುದಾಗಿ ಮತ್ತು ತಮ್ಮ ಮನೆಯನ್ನು ಕಟ್ಟುವ ಆಶೆಯನ್ನು ಪೂರೈಸಬೇಕೆಂದು ಸಾಯಿಬಾಬಾರವರಲ್ಲಿ ಪ್ರಾರ್ಥಿಸಿದರು.

    ಅದರಂತೆ ಮೊದಲನೇ ಗುರುವಾರ ಮೊಸರು ಮತ್ತು ಅನ್ನವನ್ನು ಚೆನ್ನಾಗಿ ಕಲೆಸಿ ಅದನ್ನು ಮನೆಯ ಮುಂದಿತ್ತು ಕರಿ ನಾಯಿಗೊಸ್ಕರ ಕಾಯುತ್ತಿದ್ದರು. ಸ್ವಲ್ಪ ಸಮಯ ಕಳೆದ ಬಳಿಕ ಬಿಳಿಯ ಪಟ್ಟೆಗಳಿದ್ದ ಕರಿಯ ನಾಯಿಯೊಂದು ಇವರು ಇಟ್ಟಿದ್ದ ಊಟದ ತಟ್ಟೆಯ ಹತ್ತಿರ ಬಾಲವನ್ನು ಅಲ್ಲಾಡಿಸುತ್ತಾ ಬಂದಿತು. ಆ ನಾಯಿಯನ್ನು ನೋಡಿ ವಂದನಾರವರಿಗೆ ಯೋಚನೆಯಾಯಿತು. ಏಕೆಂದರೆ ಆ ನಾಯಿಯು ಪೂರ್ತಿ ಕರಿಯ ನಾಯಿಯಾಗಿರಲಿಲ್ಲ. ಆ ಊಟದ ತಟ್ಟೆಯ ಬಳಿ ಬಂದು ವಾಸನೆಯನ್ನು ನೋಡಿದ ಆ ನಾಯಿ ಅದರಲ್ಲಿದ್ದ ಅನ್ನವನ್ನು ತಿನ್ನದೇ ಹಾಗೆಯೇ ಹಿಂದೆ ಮುಂದೆ ತಿರುಗಾಡುತ್ತಿತ್ತು. ಹೀಗೆ ೧೫ ನಿಮಿಷಗಳು ಕಳೆಯಿತು. ಕಡೆಗೂ ಆ ನಾಯಿಯು ತಟ್ಟೆಯಲ್ಲಿದ್ದ ಅನ್ನವನ್ನು ಮುತ್ತದೆ ಹಾಗೆಯೇ ಹೊರಟು ಹೋಯಿತು. ವಂದನಾರವರು ಬಹಳ ಹೊತ್ತು ಕರಿಯ ನಾಯಿಯು ಬರುವುದೆಂಬ ಆಶೆಯಿಂದ ಕಾಯುತ್ತಿದ್ದರು ಮತ್ತು ಬಹಳ ಹೊತ್ತಾದುದರಿಂದ  ಇನ್ನು ಬರುವುದಿಲ್ಲವೆಂದು ನಿರಾಶೆ ಹೊಂದಿದರು.

    ಸ್ವಲ್ಪ ಸಮಯದ ನಂತರ ಹಿಂದೆ ಬಂದ ನಾಯಿಯು ಅದರೊಂದಿಗೆ ಮತ್ತೊಂದು ಕರಿಯ ನಾಯಿಯನ್ನು ಕರೆದುಕೊಂಡು ಬಂದಿತು. ಆ ಕರಿಯ ನಾಯಿಯು ಆತುರದಿಂದ ಓಡಿಬಂದು ತಟ್ಟೆಯಲ್ಲಿದ್ದ ಮೊಸರನ್ನವನ್ನು ತಿಂದು ಸ್ವಲ್ಪ ಮೊಸರನ್ನವನ್ನು ಹಾಗೆಯೇ ಬಿಟ್ಟಿತು. ಉಳಿದ ಮೊಸರನ್ನವನ್ನು ಬಿಳಿಯ ಪಟ್ಟೆಯಿದ್ದ ಕರಿಯ ನಾಯಿಯು ತಿಂದು ಮುಗಿಸಿತು. ಹೀಗೆ ೨ ನಾಯಿಗಳು ಮೊಸರನ್ನವನ್ನು ತಿಂದು ಸಂತೋಷದಿಂದ ಹೊರಟು ಹೋದವು. ಇದನ್ನು ನೋಡಿದ ಮೇಲೆ ವಂದನಾರವರಿಗೆ ಸಾಯಿಯವರು ತಮ್ಮನ್ನು ಅನುಗ್ರಹಿಸಿದ್ದಾರೆಂದು ಮತ್ತು ತಮ್ಮ ಮನೆಯನ್ನು ಕಟ್ಟುವ ಆಶೆಯು ಪೂರ್ಣಗೊಳ್ಳುತ್ತದೆ ಎಂದು ಭರವಸೆ ಬಂದಿತು. ಅದು ನಿಜವೆಂಬಂತೆ ಈ ಘಟನೆ ನಡೆದ ೫ ತಿಂಗಳಲ್ಲಿ ಸಾಯಿಬಾಬಾರವರ ಆಶೀರ್ವಾದದಿಂದ ವಂದನಾವರವರ ಮನೆಯು ಪೂರ್ಣಗೊಂಡಿತು. 

    ಆ ದಿನದಿಂದ ವಂದನ ಕಾಮತ್ ಮತ್ತು ಅವರ ಮನೆಯವರು ತಮ್ಮ ಜೀವನವನ್ನೇ ಸಾಯಿಬಾಬಾರವರ ಸೇವೆಗಾಗಿ ಮೀಸಲಿಟ್ಟಿದ್ದಾರೆ. ವಂದನಾವರು ಕಳೆದ ೧೧ ವರ್ಷಗಳಿಂದ "ಸಾಯಿ ಸ್ಮರಣ್" ಎಂಬ ಭಜನೆಯ ಗುಂಪೊಂದನ್ನು ಕಟ್ಟಿಕೊಂಡು ಪ್ರತಿ ಭಾನುವಾರ ಒಂದೊಂದು ಸಾಯಿಭಕ್ತರ ಮನೆಗಳಲ್ಲಿ ಸಾಯಿಭಜನೆಯನ್ನು ಮಾಡುತ್ತಾ ಬಂದಿದ್ದಾರೆ. ಇಷ್ಟೇ ಆಲ್ಲದೇ, ಪ್ರತಿ ವರ್ಷ ಸುಮಾರು ೧೫೦ ರಿಂದ ೩೦೦ ಜನ ಸಾಯಿಭಕ್ತರೊಂದಿಗೆ ಶಿರಡಿ ಯಾತ್ರೆಯನ್ನು ಕೈಗೊಂಡು ಶಿರಡಿಯಲ್ಲಿ ಭಜನೆ ಮತ್ತು ಪಲ್ಲಕ್ಕಿ ಉತ್ಸವವನ್ನು ಕೂಡ ಮಾಡುತ್ತಾ ಬಂದಿದ್ದಾರೆ. 

    ಇಂದು, ಈ ಮನೆಯ ಮೇಲೆ ೩ ಮಹಡಿಗಳನ್ನು ಕಟ್ಟಿರುತ್ತಾರೆ. ೩ ನೇ ಮಹಡಿಯನ್ನು ಸಂಪೂರ್ಣ ಸಾಯಿ ಮಂದಿರವನ್ನಾಗಿ ಪರಿವರ್ತಿಸಿದ್ದಾರೆ. ಅಲ್ಲಿ ಸಾಯಿಬಾಬಾರವರ ವಿಗ್ರಹ ಮತ್ತು ಫೋಟೋಗಳನ್ನು ಇಟ್ಟಿರುತ್ತಾರೆ ಮತ್ತು ಪ್ರತಿದಿನ ಪೂಜೆ ಮತ್ತು ಆರತಿಯನ್ನು ತಪ್ಪದೆ ಮಾಡುತ್ತಾರೆ. ಆಲ್ಲದೇ, ಪ್ರತಿ ಗುರುವಾರ ಸಂಜೆಯ ವೇಳೆ ಭಜನೆ ಮತ್ತು ಆರತಿಯ ಕಾರ್ಯಕ್ರಮಗಳನ್ನು ಇಟ್ಟುಕೊಂಡಿರುತ್ತಾರೆ. ಇಷ್ಟೇ ಆಲ್ಲದೇ, ಪ್ರಮುಖ ಉತ್ಸವಗಳಾದ ರಾಮನವಮಿ, ಗುರುಪೌರ್ಣಮಿ ಮತ್ತು ವಿಜಯದಶಮಿ ದಿನಗಳಂದು ವಿಶೇಷ ಪೂಜೆ ಮತ್ತು ಭಜನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ನೂರಾರು ಸಾಯಿಭಕ್ತರು ಉತ್ಸವದಲ್ಲಿ ಪಾಲ್ಗೊಂಡು ಸಾಯಿಬಾಬಾರವರ ಕೃಪೆಗೆ ಪಾತ್ರರಾಗಿದ್ದಾರೆ. 

    -ಶ್ರೀಮತಿ. ವಂದನ ಕಾಮತ್ ರವರು ಹೇಳಿದಂತೆ 
    ಬೆಂಗಳೂರಿನ ಸಾಯಿಭಕ್ತನ ಹುಣ್ಣನ್ನು ವಾಸಿಮಾಡಿದ ಸಾಯಿಬಾಬಾರವರ ಲೀಲೆ- ಕೃಪೆ - ಡಾ.ಶಿವಚರಣ್

    ಈ ಘಟನೆ ನಡೆದಿದ್ದು ಅಕ್ಟೋಬರ್ ೨೦೦೯ ರಲ್ಲಿ. ಶ್ರೀ. ಸಂಜೀವ ರವರು ಅನನ್ಯ ಸಾಯಿಭಕ್ತರಾಗಿದ್ದರು. ಅವರಿಗೆ ಇದ್ದಕ್ಕಿದ್ದಂತೆ ದೇಹದಲ್ಲಿ ಒಂದು ಹುಣ್ಣಾಗಿ ಬಹಳ ಯಾತನೆಯನ್ನು ಅನುಭವಿಸುತ್ತಿದ್ದರು. ಇವರು ಖಾಯಿಲೆಗೆ ತಮ್ಮ ಮನೆಯ ವೈದ್ಯರಾದ ಡಾ. ಶ್ರೀನಾಥ್ ಹೆರೂರ್ ರವರ ಬಳಿ ಆಂಗ್ಲ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರು. ಈ ರೀತಿ ಔಷಧಿಯನ್ನು ತೆಗೆದುಕೊಳ್ಳುವಾಗ ನೋವು ಕಡಿಮೆಯಾದಂತೆ ತೋರುತ್ತಿತ್ತು. ಆದರೆ ಔಷಧಿ ಖಾಲಿಯಾದ ಮೇಲೆ ನೋವು ಪುನಃ ಕಾಣಿಸಿಕೊಳ್ಳುತ್ತಿತ್ತು.

    ಕೊನೆಗೆ ಡಾ.ಶ್ರೀನಾಥ್ ಹೆರೂರ್ ರವರು ಇವರಿಗೆ ಮನೆಯ ಸಮೀಪ ಇರುವ ಸಾಗರ್ ಹಾಸ್ಪಿಟಲ್ ಗೆ ಹೋಗಿ ಹುಣ್ಣನ್ನು ತೆಗೆಸಲು ಆಪರೇಶನ್ ಮಾಡಿಸುವಂತೆ ಸಲಹೆ ನೀಡಿದರು. ಶ್ರೀ. ಸಂಜೀವ ಅವರ ಮನಸ್ಸಿಗೆ ಇದರಿಂದ ಬಹಳ ಆಘಾತವಾಯಿತು. 

    ಮರುದಿನ ಬೆಳಗ್ಗೆ ಶಸ್ತ್ರಚಿಕಿತ್ಸಾ ತಜ್ಞರನ್ನು ಭೇಟಿ ಮಾಡುವುದಕ್ಕೆ ಹೋಗುವ ಮೊದಲು ಸಂಜೀವ ರವರು ಸಾಯಿಬಾಬಾರವರನ್ನು ಅನನ್ಯ ಭಕ್ತಿಯಿಂದ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಕೇವಲ ಮಾತ್ರೆ ಔಷಧಗಳಿಂದಲೇ ತಮಗೆ ಬಂದಿರುವ ಹುಣ್ಣು ವಾಸಿಯಾಗುವಂತೆ ಅನುಗ್ರಹ ಮಾಡಬೇಕೆಂದು ಪ್ರಾರ್ಥಿಸಿದರು. 

    ಆ ನಂತರ ತಮ್ಮ ಹೆಂಡತಿಯೊಂದಿಗೆ ಶಸ್ತ್ರಚಿಕಿತ್ಸಾ ತಜ್ಞರನ್ನು ಭೇಟಿ ಮಾಡಲು ಹೋದರು. ಸಂಜೀವ ರವರ ಖಾಯಿಲೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ವೈದ್ಯರು ಯಾವುದೇ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲವೆಂದು ಮತ್ತು ಕೇವಲ ಮಾತ್ರೆಗಳಿಂದಲೇ ಅವರ ಖಾಯಿಲೆಯನ್ನು ಗುಣಪಡಿಸಬಹುದೆಂದು ತಿಳಿಸಿದರು. 

    ಡಾಕ್ಟರರ ಮಾತುಗಳನ್ನು ಕೇಳಿ ಸಂಜೀವ್ ಮತ್ತು ಅವರ ಪತ್ನಿಗೆ ಅಮೃತವನ್ನೇ ಕುಡಿದಷ್ಟು ಸಂತೋಷವಾಯಿತು. ಆಲ್ಲದೇ ಯಾವುದೇ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎಂದು ತಿಳಿದು ಮನಸ್ಸು ನಿರಾಳವಾಯಿತು. ಸಾಯಿ ಸಚ್ಚರಿತ್ರೆಯಲ್ಲಿ ಬಾಬಾರವರು  "ಯಾರು ನನ್ನನ್ನು ನಂಬಿ ಶ್ರದ್ದೆ ಮತ್ತು ತಾಳ್ಮೆಯಿಂದ ಪ್ರಾರ್ಥಿಸುತ್ತಾರೋ ಅವರನ್ನು ತಾವು ಕೈಬಿಡದೆ ಕಾಪಾಡುತ್ತೇನೆ ಮತ್ತು ಅವರಿಗೆ ಬರುವ ಎಲ್ಲಾ ತೊಂದರೆಗಳನ್ನು ನಿವಾರಿಸುತ್ತೇನೆ" ಎಂದು ಹೇಳಿದ್ದಾರೆ. ಈ ಘಟನೆಯಿಂದ ಸಂಜೀವ ಮತ್ತು ಅವರ ಹೆಂಡತಿಗೆ ಸಾಯಿಬಾಬಾರವರಲ್ಲಿದ್ದ ಭಕ್ತಿ ಮತ್ತಷ್ಟು ಹೆಚ್ಚಿತು.

    -ಶ್ರೀ. ಸಂಜೀವ್ ರವರು ಹೇಳಿರುವಂತೆ

    Thursday, July 22, 2010

    ಹಾಲಿನಲ್ಲಿ ಅಂಜೂರದ ಹಣ್ಣುಗಳು ಇರುವಂತೆ ಮಾಡಿದ ಅತ್ಯಾಶ್ಚರ್ಯಕರ ಸಾಯಿ ಲೀಲೆ - ಕೃಪೆ - ಶ್ರೀಮತಿ.ಗಿರಿಜಾ ಶಾಸ್ತ್ರಿ 

    ಸುಮಾರು ೨೦ ವರ್ಷಗಳ ಹಿಂದೆ ನಾವುಗಳು ಚಂಡೀಘಡದಲ್ಲಿ ವಾಸ ಮಾಡುತ್ತಿದ್ದೆವು. ಒಬ್ಬ ಅನನ್ಯ ಸಾಯಿ ಭಕ್ತರ ಮನೆಯಲ್ಲಿ ಪ್ರತಿ ಗುರುವಾರ ಸಾಯಿ ಭಜನೆಯ ಕಾರ್ಯಕ್ರಮ ನಡೆಯುತ್ತಿತ್ತು. ಒಂದು ಗುರುವಾರ ಆ ಮನೆಯ ಒಡತಿಗೆ ಹುಷಾರಿಲ್ಲದ ಕಾರಣ ನನಗೆ ಸಾಯಿಬಾಬಾರವರಿಗೆ ಹಾಲನ್ನು ನೈವೇದ್ಯಕ್ಕೆ ಇಡಲು ಹೇಳಿದರು. ಆಗ ತಾನೇ ಭಜನೆ ಶುರುವಾಗುವುದರಲ್ಲಿತ್ತು. ನಾನು ಅಡಿಗೆ ಮನೆಯೊಳಗೆ ಓಡಿ ಹೋಗಿ ಒಂದು ಲೋಟದಲ್ಲಿ ಹಾಲನ್ನು ಹಾಕಿ ಅದಕ್ಕೆ ಸಕ್ಕರೆಯನ್ನು ಬೆರೆಸಿ ಒಂದು ಚಮಚವನ್ನು ಅದರಲ್ಲಿ ಇಟ್ಟು  ಸಾಯಿಬಾಬಾರವರ ಪಟದ ಮುಂದೆ ನೈವೇದ್ಯಕ್ಕೆ ಇಟ್ಟೆ. ಭಜನೆ ಮುಗಿಯುವುದರ ಒಳಗಾಗಿ ಸಕ್ಕರೆ ಕರಗಿ ಸಿಹಿಯಾಗುತ್ತದೆ ಎಂದು ಭಾವಿಸಿ ನಾನು ಸಕ್ಕರೆಯನ್ನು ಕಲಕದೆ ಹಾಲಿನ ಲೋಟವನ್ನು ಹಾಗೆಯೇ ಇಟ್ಟುಬಿಟ್ಟೆ. ಭಜನೆಯು ಮುಗಿದ ನಂತರ ನಾನು ಹಾಲಿನ ಲೋಟವನ್ನು ತೆಗೆದುಕೊಂಡು ಸಕ್ಕರೆಯನ್ನು ಕರಗಿಸುವ ಸಲುವಾಗಿ ಕಲಕೋಣ ಎಂದು ನೋಡಿದಾಗ ನಮಗೆಲ್ಲ ಒಂದು ಆಶ್ಚರ್ಯ ಕಾದಿತ್ತು. ಹಾಲಿನ ಲೋಟದಲ್ಲಿದ್ದ ಚಮಚ ಸ್ವಲ್ಪವೂ ಅಲುಗಾಡದೆ ಗಟ್ಟಿಯಾಗಿ ಹಿಡಿದುಕೊಂಡಂತೆ ಇತ್ತು. ಒಳಗಡೆ ಏನು ಸೇರಿಕೊಂಡಿದೆ ಎಂದು ಕೈಹಾಕಿ ನೋಡಿದಾಗ ಅದರಲ್ಲಿ ಒಂದು ೩.೫ ಇಂಚು ಉದ್ದದ ಅಂಜೂರದ ಹಣ್ಣು ಸೇರಿಕೊಂಡಿತ್ತು. ಅಷ್ಟು ದೊಡ್ಡ ಅಂಜೂರದ ಹಣ್ಣನ್ನು ನಾನು ನನ್ನ ಜೀವಮಾನದಲ್ಲೇ ನೋಡಿರಲಿಲ್ಲ. ಆ ಹಣ್ಣನ್ನು ಮತ್ತೊಂದು ಸಾಯಿ ಭಕ್ತೆಗೆ ತೋರಿಸಿದೆ. ಆಕೆಯು ಅದನ್ನು ನೋಡಿ "ಈ ತರಹದ ಹಣ್ಣುಗಳು ಬಲುಚಿಸ್ತಾನದಲ್ಲಿ ಮಾತ್ರ ಸಿಕ್ಕುತ್ತದೆ. ಇಲ್ಲೆಲ್ಲೂ ಸಿಗುವುದಿಲ್ಲ" ಎಂದಳು. ನಂತರ ನಾನು ಆ ಹಣ್ಣನ್ನು ಚೂರು ಚೂರಾಗಿ ಮಾಡಿ ಹಾಲಿಗೆ ಬೆರೆಸಿ ಅಂದು ಅಲ್ಲಿ ನರೆದಿದ್ದ ಎಲ್ಲ ಸಾಯಿ ಭಕ್ತರಿಗೂ ಒಂದು ಚೂರು ಹಣ್ಣಿನ ಜೊತೆ ಹಾಲನ್ನು ಸೇರಿಸಿ ತೀರ್ಥವನ್ನು ನೀಡಿದೆ.

    ಸಾಯಿ ಭಕ್ತರೇ ! ಇದಲ್ಲವೇ ಶಿರಡಿ ಸಾಯಿಬಾಬಾರವರ ಲೀಲೆ. ಇಂತಹ ಅನೇಕ ಲೀಲೆಗಳನ್ನು ಸಾಯಿಬಾಬಾರವರು ಮಾಡುತ್ತಿದ್ದರು ಮತ್ತು ಈಗಲೂ ಸಾಯಿಭಕ್ತರು ಇಂತಹ ಆಶ್ಚರ್ಯಕರ ಲೀಲೆಗಳನ್ನು ತಮ್ಮ ಜೀವನದಲ್ಲಿ ಪ್ರತಿನಿತ್ಯ ನೋಡುತ್ತಿದ್ದಾರೆ.

    -ಶ್ರೀಮತಿ. ಗಿರಿಜಾ ಶಾಸ್ತ್ರಿಯವರು ಹೇಳಿದಂತೆ

    Wednesday, July 21, 2010

    ಬೆಂಗಳೂರಿನ ಸಾಯಿಭಕ್ತೆಯ ಪಕ್ಕದಲ್ಲಿ  ಶಿರಡಿ ಸಾಯಿಬಾಬಾ ಬಂದು ಕುಳಿತ ಸಾಯಿಲೀಲೆ - ಕೃಪೆ - ಶ್ರೀಮತಿ. ಗಿರಿಜಾ ಶಾಸ್ತ್ರಿ

    ಅಪರ್ಣ ಮತ್ತು ನಾನು ೨೦೦೧ ನೇ ಇಸವಿಯಲ್ಲಿ ಶಿರಡಿಗೆ ಹೋಗಿದ್ದೆವು. ಅಪರ್ಣ ರವರ ಗಂಡ ಮತ್ತು ಅವರ ಮಕ್ಕಳು ಕೂಡ ಜೊತೆಯಲ್ಲಿ ಬಂದಿದ್ದರು. ಸಮಾಧಿ ಮಂದಿರದಲ್ಲಿ ಸಾಯಿಯವರ ವಿಗ್ರಹದ ದರ್ಶನವನ್ನು ಚೆನ್ನಾಗಿ ಮಾಡಿಕೊಂಡು ಹೊರಬಂದೆವು. ಹೊರಗೆ ಬಂದ ತಕ್ಷಣ ನನಗೆ ಸಾಯಿ ಸತ್ಯನಾರಾಯಣ ವ್ರತ ಮಾಡಬೇಕೆಂದು ಅನಿಸಿತು. ಅಪರ್ಣ ಮತ್ತು ಅವರ ಮನೆಯವರು ಸಮಾಧಿ ಮಂದಿರದ ಹೊರಗಡೆ ಕಲ್ಲಿನ ಮೇಲೆ ಕುಳಿತಿದ್ದರು. ಆಗ ಸಾಯಿ ಸತ್ಯನಾರಾಯಣ ವ್ರತವನ್ನು ಸಮಾಧಿ ಮಂದಿರದ ಎದುರುಗಡೆ ಇರುವ ಖಾಲಿ ಜಾಗದಲ್ಲಿ ಮಾಡುತ್ತಿದ್ದರು. ಆದರೆ ಈಗ ಅದು ಬದಲಾಗಿದೆ. ನಾವೆಲ್ಲರೂ ಸಾಯಿ ಸತ್ಯನಾರಾಯಣ ವ್ರತ ಶುರು ಮಾಡುವ ಸಲುವಾಗಿ ದೀಪಗಳನ್ನು ಹಚ್ಚಬೇಕೆಂದುಕೊಳ್ಳುತ್ತಿರುವಾಗ ಥೇಟ್ ಸಾಯಿಬಾಬಾರವರಂತೆ ಹೋಲುತ್ತಿದ್ದ ಮುದುಕರೊಬ್ಬರು ನಮ್ಮನ್ನೇ ನೋಡುತ್ತಾ ಸಮಾಧಿ ಮಂದಿರದ ಎದುರಿಗಿರುವ ಸ್ಟೇಜ್ ಮೇಲೆ ನಡೆದಾಡುತ್ತಿದ್ದರು ಮತ್ತು ನಾವು ಮಾಡುವ ಎಲ್ಲ ಕೆಲಸಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ವ್ರತವನ್ನು ಮಾಡಿಸುತ್ತಿದ್ದ ಸಾಯಿಬಾಬಾ ಸಂಸ್ಥಾನದ ಪುರೋಹಿತರಾದ ಉಲ್ಲಾಸ್ ವಲಜೋನ್ಕರ್ ರವರು ಇದನ್ನು ಗಮನಿಸಿದಂತೆ ಕಾಣಲಿಲ್ಲ. ನಾನು ಉಲ್ಲಾಸ್ ರವರಿಗೆ ಹೇಳಬೇಕೆಂದು ಬಾಯಿ ತೆರೆಯಲು ಹೋದೆ. ಆದರೆ, ನನಗೆ ಅದು ಸಾಯಿಯವರೇ ಎಂದು ಪೂರ್ಣ ನಂಬಿಕೆ ಇರದಿದ್ದ ಕಾರಣ ಸುಮ್ಮನಾಗಿಬಿಟ್ಟೆ.   ನಾನು ಪೂಜೆ ಮಾಡುವುದನ್ನು ಬಿಟ್ಟು ಅವರನ್ನೇ ನೋಡುತ್ತಿದ್ದೆ. ಆಗ ಆ ಮುದುಕರು ನಮ್ಮನ್ನೆಲ್ಲ ನೋಡಿ ನಗುತ್ತ ತಮ್ಮ ಬಲಗೈಯನ್ನು ಎತ್ತಿ ಆಶೀರ್ವಾದ ಮಾಡುವಂತೆ ಮಾಡಿದರು. ನಾನು ಅವರು ಆಶೀರ್ವದಿಸಿದ್ದಕ್ಕೆ ಮನದಲ್ಲೇ ವಂದಿಸಿದೆ. ಕೆಲವೇ ಕ್ಷಣಗಳಲ್ಲಿ ಆ ಮುದುಕರು ಸಾಯಿಬಾಬಾ ಮಂದಿರದ ಗಂಡಸರ ಕ್ಯೂ ನ ಕಡೆ ನಡೆದರು. ಅವರು ಹೋದ ನಂತರ ನಾನು ಶ್ರದ್ದೆಯಿಂದ ನನ್ನ ಪೂಜೆಯನ್ನು ಮುಂದುವರಿಸಿದೆ. ನಾನು ಪುನಃ ಪೂಜೆ ಪ್ರಾರಂಭ ಮಾಡುವ ಹೊತ್ತಿಗೆ ಬೇರೆ ಎಲ್ಲ ಭಕ್ತರೂ ತಮ್ಮ ತಮ್ಮ ಪೂಜೆಗಳನ್ನು ಮುಗಿಸಿ ಆರತಿ ಮಾಡುತ್ತಿದ್ದರು. ನಾನು ಕೂಡ ಬೇಗ ಬೇಗನೆ ಪೂಜೆಯನ್ನು ಮುಗಿಸಿ ಹೊರಗೆ ಬಂದೆ. 

    ನಾನು ಹೊರಗೆ ಬಂದು ನೋಡಿದಾಗ ಆದೇ ಮುದುಕರು ಅಪರ್ಣ ಮತ್ತು ಮನೆಯವರು ಕುಳಿತಿದ್ದ ಜಾಗದ ಪಕ್ಕದಲ್ಲಿ ಕುಳಿತಿರುವುದನ್ನು ನೋಡಿದೆ. ಅಪರ್ಣ ರವರ ಗಂಡನಿಗೂ ಅವರು ಸಾಯಿಬಾಬಾರವರೇ ಎಂದು ಅನಿಸಿ ಫೋಟೋ ತೆಗೆಯಲು ಪ್ರಯತ್ನಿಸಿದರು ಆದರೆ ಎಲ್ಲಿ ಆ ಮುದುಕರು ಬಯ್ಯುವರೋ ಎಂದು ಹೆದರಿದರು. ಆದುದರಿಂದ ಅಪರ್ಣ ಅವರ ಗಂಡ ಅಪರ್ಣ ಅವರಿಗೆ ಮುದುಕರು ಕುಳಿತಿರುವ ಜಾಗದಿಂದ ಸ್ವಲ್ಪ ದೂರ ಅಂದರೆ ೭ ಅಡಿಯಿಂದ ೧೧ ಅಡಿ ದೂರದಲ್ಲಿ ಕುಳಿತುಕೊಳ್ಳಬೇಕೆಂದು ಮತ್ತು ತಾವು ಫೋಟೋ ಹೇಗಾದರೂ ಮಾಡಿ ತೆಗೆಯಲು ಪ್ರಯತ್ನಪಡುವೆನೆಂದರು.  ಅವರು ಫೋಟೋ ತೆಗೆಯುತ್ತಿದ್ದುದನ್ನು ನಾನು ಕಣ್ಣಾರೆ ನೋಡಿ ನನಗೆ ಮತ್ತು ಅಪರ್ಣ ಮನೆಯವರಿಗೆಲ್ಲ ಬಹಳ ಸಂತೋಷವಾಯಿತು. 

    ನಾವು ಶಿರಡಿ ದರ್ಶನ ಮುಗಿಸಿ ರೈಲಿನಲ್ಲಿ ಹೊರಟು ಬೆಂಗಳೂರಿಗೆ ಬರುತ್ತಿರುವಾಗ ಅಪರ್ಣರವರ ೭ ವರ್ಷದ ಮಗ ತಿಳಿಯದೆ ಕ್ಯಾಮೆರಾ ದಲ್ಲಿದ್ದ ರೀಲನ್ನು ಹೊರತೆಗೆದುಬಿಟ್ಟನು. ಇದರಿಂದ ಅಪರ್ಣರವರಿಗೆ ಬಹಳ ಕೋಪ ಬಂದಿತು. ಏಕೆಂದರೆ ಅವರಿಗೆ ತಾವು ಬಾಬಾರವರ ಜೊತೆ ಕುಳಿತಿರುವ ಫೋಟೋ ಹಾಳಾಗಿಹೋಯಿತಲ್ಲ ಎಂದು ಬಹಳ ಬೇಸರವಾಯಿತು. ಅಪರ್ಣರವರ ಗಂಡ ಮಗನಿಗೆ ಚೆನ್ನಾಗಿ ಹೊಡೆದರು. ನಾನು ಮಧ್ಯೆ ಪ್ರವೇಶಿಸಿ ಹೊಡೆಯಬಾರದೆಂದು ನಿರ್ಬಂಧಿಸಿದೆನು. ಬೆಂಗಳೂರಿಗೆ ವಾಪಸಾದ ಮೇಲೆ ಅಪರ್ಣರವರು ಏನಾದರಾಗಲಿ ನೋಡಿಬಿಡೋಣ ಎಂದು ರೀಲನ್ನು ಸ್ಟೂಡಿಯೋಗೆ ತೆಗೆದುಕೊಂಡು ಹೋಗಿ ಕೊಟ್ಟರು. ಅದನ್ನು ತೊಳೆದು ನೋಡಿದ ಸ್ಟೂಡಿಯೋದವನು ಎಲ್ಲ ಫೋಟೋಗಳು ಹಾಳಾಗಿಹೋಗಿವೆ, ಆದರೆ ಒಂದೇ ಒಂದು ಫೋಟೋ ಚೆನ್ನಾಗಿ ಬಂದಿದೆ ಎಂದು ಆ ಒಂದು ಫೋಟೋವನ್ನು ಅಪರ್ಣರವರಿಗೆ ಕೊಟ್ಟನು. ಆ ಫೋಟೋವೇ ಸಾಯಿಬಾಬಾರವರಂತೆ ಹೋಲುತ್ತಿದ್ದ ಮುದುಕರು ಅಪರ್ಣ ಪಕ್ಕದಲ್ಲಿ ಕುಳಿತುಕೊಂಡಿದ್ದ ಫೋಟೋ ಆಗಿದ್ದಿತು. ಆ ಫೋಟೋವನ್ನು ನೋಡಿ ನಾವೆಲ್ಲರೂ ಬಹಳ ಆನಂದದಿಂದ ಕುಣಿದಾಡಿದೆವು. ಏಕೆಂದರೆ, ೭ ರಿಂದ ೧೧ ಅಡಿ ದೂರದಲ್ಲಿದ್ದ ಮುದುಕರು ಅಪರ್ಣ ಪಕ್ಕದಲ್ಲಿ ಕುಳಿತಂತೆ ಫೋಟೋದಲ್ಲಿ ಬರಲು ಎಂದಾದರೂ ಸಾಧ್ಯವೇ? ಸಾಯಿಯವರಿಗೆ ಬಿಟ್ಟು ಮತ್ಯಾರಿಗೆ ಅದು ಸಾಧ್ಯವಾಗುತ್ತದೆ? ನೀವೇ ಹೇಳಿ? ಜೈ ಬೋಲೋ ಸಮರ್ಥ ಸದ್ಗುರು ಸಾಯಿನಾಥ್ ಮಹಾರಾಜ್ ಕೀ ಜೈ!!!!!!!!!!!

    ಸಾಯಿಭಕ್ತರಿಗೊಸ್ಕರ ಆ ಫೋಟೋವನ್ನು ಈ ಕೆಳಗೆ ನೀಡುತ್ತಿದ್ದೇನೆ.

     ಅಪರ್ಣ ರವರ ಪಕ್ಕದಲ್ಲಿ ಕುಳಿತಿರುವ ಸಾಯಿಬಾಬಾರವರನ್ನು ಹೋಲುವ ಮುದುಕರು

    -ಶ್ರೀಮತಿ.ಗಿರಿಜಾ ಶಾಸ್ತ್ರಿಯವರು ಹೇಳಿದಂತೆ

    Tuesday, July 20, 2010

    ಶಿರಡಿ ಸಾಯಿಬಾಬಾರವರು ರೈಲುಬಂಡಿಯಲ್ಲಿ "3 ಜನರಿಗೆ ಮಲಗಲು ಸ್ಥಳ" ಕೊಡಿಸಿದ್ದು ಮತ್ತು ಸಾಯಿಭಕ್ತರೊಬ್ಬರ ತಾಯಿಯವರನ್ನು ಸಾವಿನ ದವಡೆಯಿಂದ ಪಾರು ಮಾಡಿದ ಸಾಯಿ ಲೀಲೆ - ಕೃಪೆ - ಸಾಯಿಅಮೃತಧಾರಾ.ಕಾಂ 

    ಅಂದು 20ನೇ ಜುಲೈ 2009 ಶ್ರೀಕಂಠ ಅವರ ಸ್ನೇಹಿತ ರಾಜೇಶ್ ರವರು ಫೋನ್ ಮಾಡಿ 22ನೇ ಜುಲೈ 2009 ರಂದು ಅವರು ಮತ್ತು ಅವರ ಸ್ನೇಹಿತರಾದ ಪ್ರವೀಣ್ ರವರು ಶಿರಡಿಗೆ ಹೋಗುತ್ತಿರುವುದಾಗಿ ಜೊತೆಯಲ್ಲಿ ತಾವು ಬರಬೇಕೆಂದು ಆಹ್ವಾನವಿತ್ತರು. ಆಗ ಶ್ರೀಕಂಠರವರು ಚಿಕನ್ ಗುನ್ಯ ಎಂಬ ಭಯಂಕರ ಜ್ವರದಿಂದ ನರಳುತ್ತಿದ್ದರು. ತಮಗೆ ಹುಷಾರಿಲ್ಲದ ಕಾರಣ ಮತ್ತು ಹಣದ ಮುಗ್ಗಟ್ಟಿನ ಕಾರಣ ತಾವು ಬರಲಾಗುವುದಿಲ್ಲ ಎಂದು ಶ್ರೀಕಂಠ ರವರು ರಾಜೇಶ್ ರವರ ಆಹ್ವಾನವನ್ನು ನಿರಾಕರಿಸಿದರು. ಆದರೆ ರಾಜೇಶ್ ರವರು ಶ್ರೀಕಂಠರವರು ಬರಲೇಬೇಕೆಂದು ಪಟ್ಟು ಹಿಡಿದರು ಮತ್ತು ಪ್ರಯಾಣದ ಖರ್ಚನ್ನು ತಾವೇ ವಹಿಸಿಕೊಳ್ಳುತ್ತೇವೆ ಎಂದರು. ಆಲ್ಲದೇ, ತಾವು ಇನ್ನು 15 ಜನರೊಡಗೂಡಿ "ಶ್ರೀ ದ್ವಾರಕಾಮಾಯಿ ಸೇವಾ ಟ್ರಸ್ಟ್" ಎಂಬ ಸಂಸ್ಥೆಯನ್ನು ಬೆಂಗಳೂರಿನ ರಾಜಾಜಿನಗರದಲ್ಲಿ ಸ್ಥಾಪಿಸಿದ್ದು ಅದಕ್ಕಾಗಿ ಒಂದು ದ್ವಾರಕಾಮಾಯಿ ಸಾಯಿಬಾಬಾರವರ ವಿಗ್ರಹ ಮತ್ತು ಪಾದುಕೆಗಳನ್ನು ಶಿರಡಿಗೆ ಹೋಗಿ ತರಲು ಹೊರಟಿರುವುದಾಗಿ ಹೇಳಿದರು. ಶ್ರೀಕಂಠ ರವರು ಸಾಯಿಯವರ ಸೇವೆ ಎಂದು ತಿಳಿದ ತಕ್ಷಣ ಕೂಡಲೇ ಶಿರಡಿಗೆ ತೆರಲು ತಮ್ಮ ಒಪ್ಪಿಗೆ ನೀಡಿದರು. ಕೂಡಲೇ ರಾಜೇಶ್ ರವರು ಪ್ರವೀಣ್ ರವರನ್ನು ಸಂಪರ್ಕ ಮಾಡಿದರು. ಆದರೆ ಪ್ರವೀಣ್ ರವರು 22ನೇ ಜುಲೈ 2009 ರಂದು ಅಮಾವಾಸ್ಯೆ ಮತ್ತು ಸೂರ್ಯ ಗ್ರಹಣವಿದ್ದ ಕಾರಣ ಪ್ರಯಾಣ ಮಾಡುವುದು ಸೂಕ್ತವಲ್ಲ ಎಂದು ಹೇಳಿ ಶಿರಡಿಗೆ ತೆರಳಲು ನಿರಾಕರಿಸಿದರು. ಕೂಡಲೇ ರಾಜೇಶ್ ರವರು ಮತ್ತೊಬ್ಬ ಟ್ರಸ್ಟ್ ನ ಸದಸ್ಯರಾದ ವೇಣುಗೋಪಾಲ್ ರವರನ್ನು ತಮ್ಮೊಡನೆ ಬರಲು ಆಹ್ವಾನ ನೀಡಿದರು. ವೇಣುಗೋಪಾಲ್ ರವರು ಸಾಯಿಯವರ ಅನನ್ಯ ಭಕ್ತರಾಗಿದ್ದರು ಮತ್ತು ಯಾವುದೇ ಕಾರ್ಯ ಮಾಡಬೇಕಾದರೂ ಸಾಯಿಬಾಬಾರವರ ಮುಂದೆ ಚೀಟಿಯನ್ನು ಹಾಕಿ ಅದರಲ್ಲಿ ಬಂದಂತೆ ನಡೆಯುತ್ತಿದ್ದರು. ಆದ್ದರಿಂದ ವೇಣುಗೋಪಾಲ್ ರವರು ತಾವು ಬಾಬಾರವರ ಮುಂದೆ ಚೀಟಿಯನ್ನು ಹಾಕುವುದಾಗಿ ಮತ್ತು ಅದರಲ್ಲಿ ಬಂದಂತೆ ನಡೆಯುವುದಾಗಿ ರಾಜೇಶ್ ರವರಿಗೆ ಹೇಳಿ ಚೀಟಿಯನ್ನು ಹಾಕಿದರು. ಚೀಟಿಯಲ್ಲಿ ಸಾಯಿಯವರು ವೇಣುಗೋಪಾಲ್ ರವರಿಗೆ ಶಿರಡಿಗೆ ತೆರಳಲು ಒಪ್ಪಿಗೆ ನೀಡಿದರು. ಕೂಡಲೇ ರಾಜೇಶ್ ರವರು ರೈಲ್ವೆ ಸ್ಟೇಷನ್ ಗೆ ತೆರಳಿ ಶಿರಡಿಗೆ 3 ತತ್ಕಾಲ್ ಟಿಕೇಟ್ ಬುಕ್ ಮಾಡಿದರು. ಆದರೆ ಹೋಗುವಾಗ ಕರ್ನಾಟಕ ಎಕ್ಷ್ ಪ್ರೆಸ್ ರೈಲಿನ ವೈಟಿಂಗ್ ಲಿಸ್ಟ್ ನಲ್ಲಿ 137, 138 ಮತ್ತು 139 ನೇ ನಂಬರ್ ಆಗಿತ್ತು ಹಾಗೂ ಬರುವಾಗ 25ನೇ ಜುಲೈ 2009 ಕ್ಕೆ ಪುಣೆಯಿಂದ ಉದ್ಯಾನ್ ಎಕ್ಷ್ ಪ್ರೆಸ್ ನಲ್ಲಿ ಟಿಕೆಟ್ ಪಕ್ಕಾ ಆಗಿತ್ತು. ರಾಜೇಶ್ ರವರು ಶ್ರೀಕಂಠರವರಿಗೆ ಫೋನ್ ಮಾಡಿ ವಿಷಯ ತಿಳಿಸಿ ಶಿರಡಿಗೆ ಹೊರಡಲು ತಯಾರಿ ಮಾಡಿಕೊಳ್ಳುವಂತೆ ತಿಳಿಸಿದರು. ಕೊನೆಗೂ ಹೊರಡುವ ದಿನ ಬಂದೇ ಬಿಟ್ಟಿತು. 

    22ನೇ ಜುಲೈ 2009 ರಂದು ಶ್ರೀಕಂಠರವರು ಮನೆಯಿಂದ ಹೊರಟು 5:45 ಕ್ಕೆ ರೈಲು ನಿಲ್ದಾಣ ತಲುಪಿದರು. ಆಗ ಇನ್ನು ರಾಜೇಶ್ ಮತ್ತು ವೇಣುಗೋಪಾಲ್ ಬಂದಿರಲಿಲ್ಲ. ಶ್ರೀಕಂಠ ರವರು ರಾಜೇಶ್ ರವರಿಗೆ ಫೋನ್ ಮಾಡಿ ಪಿ.ಎನ್.ಆರ್. ನಂಬರ್ ತಿಳಿಸಲು ಹೇಳಿದರು. ರಾಜೇಶ್ ರವರು ಪಿ.ಎನ್.ಆರ್. ನಂಬರ್ ಮೆಸೇಜ್ ಮಾಡಿದರು. ರೈಲು ನಿಲ್ದಾಣದ ಚಾರ್ಟ್ ನಲ್ಲಿ ನೋಡಿದಾಗ ವೈಟಿಂಗ್ ಲಿಸ್ಟ್ ನಂಬರ್ 17,18,19 ಕ್ಕೆ ಇಳಿದಿತ್ತು. ಅಂದರೆ, 2ನೇ ದರ್ಜೆಯಲ್ಲಿ ಪ್ರಯಾಣಿಸಲು ಅನುಮತಿಯಿರುವುದಿಲ್ಲ ಮತ್ತು ಸಾಮಾನ್ಯ ದರ್ಜೆಯಲ್ಲಿ ನಿಂತುಕೊಂಡೇ ಪ್ರಯಾಣಿಸಬೇಕಾಗುತ್ತದೆ. ಇದನ್ನು ನೋಡಿ ಬೇಸರಗೊಂಡ ಶ್ರೀಕಂಠ ರವರು ರಾಜೇಶ್ ರವರಿಗೆ ಫೋನ್ ಮಾಡಿದರು. ಆಗ ರಾಜೇಶ್ ಮತ್ತು ವೇಣುಗೋಪಾಲ್ ರವರು ರಾಜಾಜಿನಗರದ ಸಾಯಿ ಮಂದಿರದಲ್ಲಿ ಶಿರಡಿಗೆ ಪ್ರಯಾಣ ಮಾಡುವ ಮೊದಲು ಸಾಯಿಯವರ ದರ್ಶನ ಪಡೆಯಲು ತೆರಳಿದ್ದರು. ರಾಜೇಶ್ ರವರು ಶ್ರೀಕಂಠ ರವರಿಗೆ ಇನ್ನು 15 ನಿಮಿಷಗಳಲ್ಲಿ ರೈಲು ನಿಲ್ದಾಣದಲ್ಲಿರುವುದಾಗಿ ಮತ್ತು ಯೋಚನೆ ಮಾಡದಿರಲು ತಿಳಿಸಿದರು. ರೈಲು ಹೊರಡುವುದಕ್ಕೆ ಇನ್ನು ಬಹಳ ಸಮಯವಿದ್ದುದರಿಂದ ಮತ್ತು ರಾಜೇಶ್ ಮತ್ತು ವೇಣುಗೋಪಾಲ್ ರವರು ಇನ್ನು ಬಂದಿರದಿದ್ದರಿಂದ ಶ್ರೀಕಂಠ ರವರು ಅಖಂಡ ಸಾಯಿ ನಾಮ ಜಪವಾದ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ಯನ್ನು ಜಪಿಸಲು ಪ್ರಾರಂಭಿಸಿದರು. ಕೆಲವೇ ನಿಮಿಷಗಳಲ್ಲಿ ರಾಜೇಶ್ ಮತ್ತು ವೇಣುಗೋಪಾಲ್ ರವರು ರೈಲು ನಿಲ್ದಾಣಕ್ಕೆ ಆಗಮಿಸಿದರು. 3 ಜನ ಕೂಡಲೇ ಟಿ.ಸಿ.ಯ ಬಳಿ ವಿಚಾರಣೆ ಮಾಡಲು ತೆರಳಿದರು. ಟಿ.ಸಿ.ಯವರು ತಮ್ಮ ಬಳಿಯಿದ್ದ ಚಾರ್ಟ್ ನೋಡಿ ವೈಟಿಂಗ್ ಲಿಸ್ಟ್ ನಂ.17,18,19 ಇರುವುದರಿಂದ ಮತ್ತು ಬಂಡಿಯಲ್ಲಿ ಸ್ವಲ್ಪವೂ ಸ್ಥಳವಿಲ್ಲದಿರುವುದರಿಂದ ಏನು ಮಾಡಲು ಸಾಧ್ಯವಿಲ್ಲವೆಂದು ಹೇಳಿ ಯಾವುದಕ್ಕೂ ಮುಂದಿನ ಬೋಗಿಯ ಬಳಿಯಿದ್ದ ಮತ್ತೊಬ್ಬ ಟಿ.ಸಿ.ಯನ್ನು ವಿಚಾರಿಸಲು ಹೇಳಿದರು. 3 ಜನ ಮತ್ತೊಬ್ಬ ಟಿ.ಸಿ.ಯ ಬಳಿ ಓಡಿದರು. ಆ ಟಿ.ಸಿ. ಕೂಡ ಚಾರ್ಟ್ ನೋಡಿ ಏನು ಮಾಡಲು ಆಗುವುದಿಲ್ಲವೆಂದು ಹೇಳಿ, ಒಂದು ಕ್ಷಣ ಯೋಚಿಸಿ ಎಸ್.4 ಬೋಗಿಯನ್ನು ಹತ್ತಿಕೊಳ್ಳುವಂತೆ ಹೇಳಿ ಅಲ್ಲಿ ತಾನು ಬಂದು ಇವರಿಗೆ ಏನಾದರು ಮಾಡಲು ಸಾಧ್ಯವೇ ಎಂದು ನೋಡುವುದಾಗಿ ಭರವಸೆ ನೀಡಿದರು. 3 ಜನ ಬಹಳ ಸಂತೋಷದಿಂದ ತಮ್ಮ ವಸ್ತುಗಳನ್ನು ತೆಗೆದುಕೊಂಡು ಎಸ್.4 ಬೋಗಿಯ ಬಳಿ ತೆರಳಲು ಪ್ರಾರಂಭಿಸಿದರು. ಆ ಕ್ಷಣದಲ್ಲಿ ಶ್ರೀಕಂಠ ರವರು ಏನಾದರಾಗಲಿ ಮತ್ತೊಮ್ಮೆ ಟಿ.ಸಿ.ಯನ್ನು ವಿಚಾರಿಸೋಣವೆಂದು ಯೋಚಿಸಿ ಅದೇ ಟಿ.ಸಿ.ಯ ಬಳಿ ತೆರಳಿ ತಾವುಗಳೆಲ್ಲ ಒಂದು ಒಳ್ಳೆಯ ಕೆಲಸಕ್ಕಾಗಿ ಶಿರಡಿ ಸಾಯಿಬಾಬಾರವರ ದರ್ಶನ ಪಡೆಯಲು ಹೋಗುತ್ತಿರುವುದಾಗಿ ಹೇಳಿ ಏನಾದರು ಮಾಡಿ ಮಲಗಲು ಸ್ಥಳ ನೀಡಿ ಸಹಾಯ ಮಾಡಬೇಕೆಂದು ಕೇಳಿಕೊಂಡರು. ಆ ಕ್ಷಣ ಟಿ.ಸಿ.ಗೆ ಏನಾಯಿತೋ ಸಾಯಿಬಾಬಾರವರೇ ಬಲ್ಲರು. ಆ ಟಿ.ಸಿ.ಯವರು ಶ್ರೀಕಂಠ ರವರಿಗೆ ಎಸ್.4 ಬೋಗಿಯಲ್ಲಿ 41,42,43ನೇ ಸೀಟುಗಳಲ್ಲಿ ಕುಳಿತುಕೊಳ್ಳುವಂತೆ ಹೇಳಿದರು ಮತ್ತು ತಾನು ಬಂದು ಮಲಗಲು ಸ್ಥಳ ಗೊತ್ತು ಮಾಡಿಕೊಡುವುದಾಗಿ ಹೇಳಿದರು. 3 ಜನ ಕೂಡಲೇ ಓಡಿ ಹೋಗಿ ಎಸ್.4 ಬೋಗಿಯಲ್ಲಿ ಟಿ.ಸಿ.ಯವರು ಹೇಳಿದಂತೆ 41,42,43ನೇ ಸೀಟುಗಳಲ್ಲಿ ಕುಳಿತುಕೊಂಡರು. ರೈಲು ಸಮಯಕ್ಕೆ ಸರಿಯಾಗಿ ಅಂದರೆ 7:20 ನಿಮಿಷಕ್ಕೆ ಬೆಂಗಳೂರು ನಿಲ್ದಾಣವನ್ನು ಬಿಟ್ಟು ಹೊರಟಿತು. ಆದರೆ, ಬರುತ್ತೇನೆಂದು ಹೇಳಿದ್ದ ಟಿ.ಸಿ.ಯು ಎಷ್ಟು ಹೊತ್ತಾದರೂ ಬರಲೇ ಇಲ್ಲ. ಮತೊಬ್ಬ ಟಿ.ಸಿ.ಯು ಬಂದು ಟಿಕೆಟ್ ಗಳನ್ನು ಚೆಕ್ ಮಾಡಿ ಏಕೋ ಏನೋ ಏನು ಮಾತನಾಡದೆ ಹೊರಟು ಹೋದರು. 41,42 ಮತ್ತು 43ನೇ ಸೀಟಿನಲ್ಲಿ ಪ್ರಯಾಣಿಸಬೇಕಿದ್ದ 3 ಜನ ಕೊನೆಗೂ ಬರಲೇ ಇಲ್ಲ. ಅವರಿಗೆ ಏನಾಯಿತೋ ಸಾಯಿಬಾಬಾರವರೇ ಬಲ್ಲರು. ಹೀಗೆ ಶ್ರೀಕಂಠ, ರಾಜೇಶ್ ಮತ್ತು ವೇಣುಗೋಪಾಲ್ ರವರು ವೈಟಿಂಗ್ ಲಿಸ್ಟ್ ಟಿಕೇಟ್ ನಲ್ಲಿ ಯಾವುದೇ ತೊಂದರೆಯಿಲ್ಲದೆ, ಹೆಚ್ಚಿಗೆ ಹಣವನ್ನು ಕೂಡ ಟಿ.ಸಿ.ಗೆ ನೀಡದೆ ಮಲಗಲು ಸ್ಥಳ ಕೂಡ ದೊರಕಿ ಶಿರಡಿಗೆ ಬಂದು ಸೇರಿದರು. ಇದು ಸಾಯಿಬಾಬಾರವರ ಪವಾಡವಲ್ಲದೆ ಮತ್ತೇನೆಂದು ಹೇಳಬೇಕು. ಮೂರು ಜನ ಶಿರಡಿ ಸೇರಿ ಅಂದು ಕೊಂಡಂತೆ ಅನೇಕ ಬಾರಿ ಆರತಿ ಮತ್ತು ದರ್ಶನಗಳನ್ನು ಮಾಡಿದರು. 24ನೇ ಜುಲೈ 2009 ರಂದು ಒಂದು ಅಂಗಡಿಯಲ್ಲಿ ದ್ವಾರಕಾಮಾಯಿ ಬಾಬಾರವರ ಸುಂದರ ವಿಗ್ರಹ ಮತ್ತು ಪಾದುಕೆಗಳನ್ನು ಖರೀದಿಸಿ ಅದನ್ನು ದ್ವಾರಕಾಮಾಯಿ, ಚಾವಡಿ ಮತ್ತು ಸಮಾಧಿ ಮಂದಿರದಲ್ಲಿ ಪೂಜೆ ಮಾಡಿಸಿದರು. ಆನಂತರ ತಾವುಗಳು ಇಳಿದುಕೊಂಡಿದ್ದ ಲಾಡ್ಜ್ ಗೆ ತೆರಳಿದರು. 

    ಸುಮಾರು 2:30 ರ ಸಮಯಕ್ಕೆ ಲಾಡ್ಜ್ ಗೆ ತೆರಳಿದಾಗ ರಾಜೇಶ್ ರವರ ಮೊಬೈಲ್ ನಲ್ಲಿ ಅವರ ಅಣ್ಣಾ, ಅಕ್ಕ ಮತ್ತು ಹೆಂಡತಿಯಿಂದ 15 ಕರೆಗಳು ಬಂದಿರುವುದು ಗೊತ್ತಾಯಿತು. ಕೂಡಲೇ ರಾಜೇಶ್ ತಮ್ಮ ಹೆಂಡತಿಗೆ ಫೋನ್ ಮಾಡಿದಾಗ ರಾಜೇಶ್ ರ ತಾಯಿಯವರು ಬಹಳ ಹುಷಾರಿಲ್ಲದೆ ಆಸ್ಪತ್ರೆಗೆ ಸೇರಿಸಿರುವುದಾಗಿಯು,ಅವರು ತುರ್ತು ಚಿಕಿತ್ಸಾ ಘಟಕದಲ್ಲಿ ಇಟ್ಟಿರುವುದಾಗಿ ಮತ್ತು ಅವರು ಯಾವುದೇ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲವೆಂದು ಡಾಕ್ಟರ ಗಳು ಹೇಳುತ್ತಿದ್ದಾರೆಂದು ತಿಳಿಸಿದರು. ಆಲ್ಲದೇ ಎಲ್ಲ ಬಂಧುಗಳಿಗೆ ಹೇಳಿಕಳುಹಿಸಲು ಕೂಡ ಹೇಳಿದ್ದಾರೆಂದು ತಿಳಿಸಿದರು. ದೇಹದಲ್ಲಿ ಸಕ್ಕರೆಯ ಅಂಶ ಬಹಳ ಹೆಚ್ಚಾಗಿದ್ದು ದೇಹಕ್ಕೆ ರಕ್ತವನ್ನಾಗಲಿ ಅಥವಾ ಗ್ಲುಕೋಸ್ ಆಗಲಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಕೂಡ ತಿಳಿಸಿದರು. ರಾಜೇಶ್ ರವರಿಗೆ ಕೂಡಲೇ ಹೊರಟು ಬರುವಂತೆ ಅವರ ಹೆಂಡತಿ ತಿಳಿಸಿದಾಗ ರಾಜೇಶ್ ರವರು ವಿಮಾನದ ಸೌಕರ್ಯವನ್ನು ವಿಚಾರಿಸಿದಾಗ ಸಂಜೆ 5:30 ಕ್ಕೆ ಪುಣೆಯಿಂದ ಬೆಂಗಳೂರಿಗೆ ಕಡೆಯ ವಿಮಾನ ಇರುವುದು ಎಂದು ಗೊತ್ತಾಯಿತು. ಅದು ಬಿಟ್ಟರೆ ಬೇರೆ ಯಾವ ವಿಮಾನವು 5:30 ರ ನಂತರ ಇಲ್ಲವೆಂದು ತಿಳಿಯಿತು. ಆಗಲೇ 2:30 ರ ಸಮಯವಾಗಿದ್ದರಿಂದ ಪುಣೆಗೆ ಹೋಗಲು ಕಮ್ಮಿ ಎಂದರೂ 4 ಘಂಟೆಗಳ ಪ್ರಯಾಣವಿರುವುದರಿಂದ ಅದು ಸಾಧ್ಯವಿಲ್ಲವೆಂದು ಗೊತ್ತಾಯಿತು. ಆ ಕ್ಷಣದಲ್ಲಿ ಶ್ರೀಕಂಠ ರವರಿಗೆ 4 ಘಂಟೆಗೆ ಶಿರಡಿಯಿಂದ ಬೆಂಗಳೂರಿಗೆ ವೋಲ್ವೋ ಬಸ್ ಇರುವುದು ಮನಸ್ಸಿಗೆ ಬಂದಿತು. ಕೂಡಲೇ ರಾಜೇಶ್ ರವರಿಗೆ ವೋಲ್ವೋ ಬಸ್ ನಲ್ಲಿ ಹೊರಟು ಮರುದಿನ ಬೆಳಗ್ಗೆ 10 ಘಂಟೆಗೆ ಬೆಂಗಳೂರು ತಲುಪಬಹುದು ಎಂಬ ವಿಷಯ ತಿಳಿಸಿ ಒಬ್ಬ ಏಜೆಂಟ್ ರನ್ನು ಕರೆಯಿಸಿ ಒಂದು ಟಿಕೆಟ್ ಬುಕ್ ಮಾಡಲು ತಿಳಿಸಿದರು. ಆ ಏಜೆಂಟ್ ವಿಚಾರಿಸಲಾಗಿ ಕೇವಲ ಒಂದೇ ಒಂದು ಟಿಕೆಟ್ ಉಳಿದಿರುವುದಾಗಿ ಗೊತ್ತಾಯಿತು. ಕೂಡಲೇ ಆ ಟಿಕೆಟ್ ಬುಕ್ ಮಾಡಿದರು. ರಾಜೇಶ್ ತಮ್ಮ ಗೆಳೆಯರೊಂದಿಗೆ ಕೂಡಲೇ ಹೊರಟು ಖಂಡೋಬ ಮಂದಿರಕ್ಕೆ ತೆರಳಿ ಅಲ್ಲಿ 15 ನಿಮಿಷಗಳ ಕಾಲ ಭಕ್ತಿಯಿಂದ ಪ್ರಾರ್ಥನೆ ಮಾಡಿ ನಂತರ 3:30 ಕ್ಕೆ ಸರಿಯಾಗಿ ಶಿರಡಿ ಬಸ್ ನಿಲ್ಧಾಣ ತಲುಪಿದರು. ರಾಜೇಶ್ ರವರು 4:00 ಘಂಟೆಗೆ ಸರಿಯಾಗಿ ವೋಲ್ವೋ ಬಸ್ ನಲ್ಲಿ ಹೊರಟು ತಮ್ಮ ಸ್ನೇಹಿತರಿಗೆ ಮರುದಿನ ಪುಣೆಯಿಂದ ಹೊರಟು ಬರುವಂತೆ ತಿಳಿಸಿದರು. ರಾಜೇಶ್ ಮರುದಿನ 10:45 ಕ್ಕೆ ಬೆಂಗಳೂರು ತಲುಪಿದರು ಮತ್ತು ಕೂಡಲೇ ಆಸ್ಪತ್ರೆಗೆ ತೆರಳಿದರು. ಅವರ ತಾಯಿಯವರ ಹಣೆಯ ಮೇಲೆ ಸಾಯಿಬಾಬಾರವರ ಪವಿತ್ರ ಉಧಿಯನ್ನು ಹಚ್ಚಿದರು. ಆ ನಂತರ ಅವರ ತಾಯಿಯವರನ್ನು "ಏನ್ಡೋಸ್ಕೊಪಿ" ಮಾಡಲು ಕರೆದುಕೊಂಡು ಹೋದರು. ಸ್ವಲ್ಪ ಸಮಯದ ನಂತರ ರಿಪೋರ್ಟ್ ಬಂದು ಡಾಕ್ಟರ ಗಳು ನೋಡಿದಾಗ ಯಾವುದೇ ತೊಂದರೆಯು ಕಂಡು ಬರಲಿಲ್ಲ ಮತ್ತು ಯಾವುದೇ ಶಸ್ತ್ರ ಚಿಕಿತ್ಸೆಯ ಅಗತ್ಯವಿಲ್ಲ ಎಂದು ಹೇಳಿದರು. ವಿಷದಂತೆ ಏರಿದ್ದ ಸಕ್ಕರೆಯ ಅಂಶ ಸಾಮಾನ್ಯ ಸ್ಥಿತಿಗೆ ಬಂದಿತ್ತು. ಮತ್ತೆ ಎರಡು ದಿನಗಳು ಆಸ್ಪತ್ರೆಯಲ್ಲಿ ತಂಗಿದ್ದ ನಂತರ 30ನೇ ಜುಲೈ 2009 ರಂದು ಗುರುವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು. 

    ಈ ರೀತಿಯಲ್ಲಿ ಶಿರಡಿ ಸಾಯಿಬಾಬಾರವರು 3 ಜನರ ಜೊತೆಯಲ್ಲಿ ಪ್ರಯಾಣದ ಕಡೆಯವರೆಗೂ ತಾವಿದ್ದರೆಂದು ತೋರಿಸಿದ್ದೇ ಆಲ್ಲದೇ ರಾಜೇಶ್ ರವರ ತಾಯಿಯ ಪ್ರಾಣವನ್ನು ಉಳಿಸಲೆಂದೇ ತಾವು ಅವರನ್ನು ಶಿರಡಿಗೆ ಬರುವಂತೆ ಮಾಡಿದ್ದು ಎಂದು ತೋರಿಸಿಕೊಟ್ಟರು.


    - ಶ್ರೀಕಂಠ ಶರ್ಮ ಮತ್ತು ರಾಜೇಶ್ ರವರು ಹೇಳಿದಂತೆ

    Sunday, July 18, 2010

    ಶಿರಡಿ ಸಾಯಿಬಾಬಾರವರ "ಅದ್ಭುತ ಉಧಿ" ಬೆಂಗಳೂರಿನ ಭಕ್ತರ "ಆಸ್ತಮಾ" ವನ್ನು ಗುಣ ಮಾಡಿದ ಸಾಯಿಲೀಲೆ- ಕೃಪೆ - ಸಾಯಿಅಮೃತಧಾರಾ.ಕಾಂ  

    ಆಗ ಸುಮಾರು 1989ನೇ ಇಸವಿಯು ಪ್ರಾರಂಭವಾಗಿತ್ತು. ಶ್ರೀ.ಶ್ರೀಕಂಠ ಶರ್ಮರವರು ಆಗ ತಾನೇ ಪದವಿಯನ್ನು ಮುಗಿಸಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದರು. ಆಗ ಅವರಿಗೆ ಸಾಯಿಬಾಬಾರವರ ಬಗ್ಗೆ ಗೊತ್ತೇ ಇರಲಿಲ್ಲ. ಅವರಿಗೆ ಮನೆಯ ಹಣಕಾಸಿನ ತೊಂದರೆಯ ಜೊತೆಗೆ ಭಯಂಕರ ಆಸ್ತಮಾ ಖಾಯಿಲೆಯಿಂದ ನರಳುತ್ತಿದ್ದರು. ಅವರ ಕಂಪನಿಯಲ್ಲಿ  ರಾಜೇಶ್ ಎಂಬುವರು ಜೊತೆಗೆ ಕೆಲಸ ಮಾಡುತ್ತಿದ್ದರು. ಶ್ರೀ.ರಾಜೇಶ್ ರವರು ಯಾವಾಗಲೂ ಸಾಯಿಬಾಬಾರವರ ಹೆಸರನ್ನು ಉಚ್ಚರಿಸುತ್ತಿದ್ದರು ಮತ್ತು ಯಾರಿಗಾದರೂ ನಮಸ್ಕಾರ ಮಾಡುವಾಗ "ಸಾಯಿರಾಂ" ಎಂದು ಹೇಳಿ ನಮಸ್ಕರಿಸುತ್ತಿದ್ದರು. ಶ್ರೀ.ರಾಜೇಶ್ ರವರ ಈ ವರ್ತನೆಯನ್ನು ಕಂಡು ಶ್ರೀ.ಶ್ರೀಕಂಠ ಶರ್ಮರವರಿಗೆ ಬಹಳ ಆಶ್ಚರ್ಯ ಮತ್ತು ಕುತೂಹಲವಾಗುತ್ತಿತ್ತು. 

    ಹೀಗಿರುವಾಗ, ಒಂದು ದಿನ ಇದ್ದಕ್ಕಿದ್ದಂತೆ ಶ್ರೀ.ರಾಜೇಶ್ ರವರು ರಮೇಶ್ ರವರಿಗೆ ಶಿರಡಿಗೆ ತಮ್ಮ ಜೊತೆಯಲ್ಲಿ ಬರುವಂತೆ ಒತ್ತಾಯ ಮಾಡಿದರು ಮತ್ತು ಶಿರಡಿಗೆ ಬಂದು ಒಮ್ಮೆ ಸಾಯಿಬಾಬಾರವರ ದರ್ಶನ ಮಾಡಿದರೆ ಅವರ ತೊಂದರೆಗಳೆಲ್ಲ ನಿವಾರಣೆಯಾಗುವುದೆಂದು ಭರವಸೆ ನೀಡಿದರು. ಆದರೆ, ರಮೇಶ್ ರವರ ಬಳಿ ಆಗ ಹಣವಿರಲಿಲ್ಲ ಮತ್ತು ಶಿರಡಿ ಯಾತ್ರೆ ಎಂದರೆ ಕಮ್ಮಿ ಎಂದರೂ ಆಗಿನ ಕಾಲದಲ್ಲಿ 1500/- ರೂಗಳು ಬೇಕಾಗುತ್ತಿತ್ತು. ಆದುದರಿಂದ, ಶ್ರೀಕಂಠ ಶರ್ಮರವರು ತಮ್ಮ ಬಳಿ ಆಗ ಅಷ್ಟು ಹಣವಿಲ್ಲವೆಂದು ಮತ್ತು ಆ ಕಾರಣದಿಂದ ಶಿರಡಿಗೆ ಬರುವುದಿಲ್ಲವೆಂದು ರಾಜೇಶ್ ರವರ ಆಹ್ವಾನವನ್ನು ನಿರಾಕರಿಸಿದರು. ಆದರೆ, ಸಾಯಿಬಾಬಾರವರ ಇಚ್ಛೆ ಬೇರೆಯೇ ಇದ್ದಿತ್ತು. ರಾಜೇಶ್  ಮತ್ತು ಅವರ ಸ್ನೇಹಿತ ಪ್ರವೀಣ್ ರವರು ತಮ್ಮ ಜೊತೆಯಲ್ಲಿ ಬರಲೇಬೇಕೆಂದು ಒತ್ತಾಯ ಮಾಡಿದರಲ್ಲದೇ ಹಣವನ್ನು ಶಿರಡಿಗೆ ಹೋಗಿ ಬಂದ ನಂತರ ನಿಧಾನವಾಗಿ ಕೊಡುವಂತೆ ಹೇಳಿದರು. ಶ್ರೀಕಂಠ ಶರ್ಮರವರು ಸ್ನೇಹಿತರ ಸಲಹೆಗೆ ತಮ್ಮ ಸಮ್ಮತಿ ಸೂಚಿಸಿ ಇತರ 13 ಭಕ್ತರ ಜೊತೆ ಶಿರಡಿಗೆ ತೆರಳಲು ಸಿದ್ದತೆ ನಡೆಸಿದರು. 

    ಎಲ್ಲವು ಅಂದುಕೊಂಡಂತೆ ನಡೆಯಿತು. ಎಲ್ಲ 14 ಸ್ನೇಹಿತರಿಗೂ ಸಾಯಿಬಾಬಾರವರ ದರ್ಶನ ಚೆನ್ನಾಗಿ ಆಯಿತು. ಶ್ರೀಕಂಠ ಶರ್ಮ ರವರು ಶಿರಡಿ ಸಾಯಿಬಾಬಾರವರ ದಿವ್ಯ ವಿಗ್ರಹವನ್ನು ಸಮಾಧಿ ಮಂದಿರದಲ್ಲಿ ನೋಡಿದ ಮರುಕ್ಷಣವೇ ಅವರಿಗೆ ತಮ್ಮ ಸ್ನೇಹಿತರಾದ ರಾಜೇಶ್ ಮತ್ತು ಪ್ರವೀಣ್ ರವರು ಬಾಬಾರವರ ಬಗ್ಗೆ ಹೇಳುತ್ತಿದ್ದುದೆಲ್ಲ ನಿಜ ಎಂದು ಅನ್ನಿಸತೊಡಗಿತು. ಶ್ರೀಕಂಠ ಶರ್ಮರವರ ದೈಹಿಕ ಮತ್ತು ಮಾನಸಿಕ ಸ್ಥಿತಿಯಲ್ಲಿ ಏನೋ ಬದಲಾವಣೆಯಾಗಿದೆ ಎಂದು ಅನ್ನಿಸತೊಡಗಿತು. 


    ಶಿರಡಿಯಲ್ಲಿ 3 ದಿನಗಳು ತಂಗಿದ್ದು ಸುತ್ತಮುತ್ತಲಿನ ಎಲ್ಲ ಪ್ರವಾಸಿ ತಾಣಗಳನ್ನು ಸ್ನೇಹಿತರ ಜೊತೆಗೂಡಿ ಹೋಗಿ ಬಂದರು. 3 ದಿನಗಳು ತಂಗಿದ ನಂತರ ಕರ್ನಾಟಕ ಎಕ್ಷ್ ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ ವಾಪಸಾಗಲು ಹತ್ತಿ ಕುಳಿತರು. ಅದೇ ದಿನ ಬೆಳಗಿನ ಜಾವ 2:00 ಘಂಟೆಯ ವೇಳೆಗೆ ರಮೇಶ್ ರವರಿಗೆ ಆಸ್ತಮಾ ಹೆಚ್ಚಾಗಿ ಉಸಿರಾಡುವುದಕ್ಕೂ ಕಷ್ಟವಾಯಿತು. ಕೂಡಲೇ ಅವರ ಸ್ನೇಹಿತರಾದ ರಾಜೇಶ್  ಮತ್ತು ಪ್ರವೀಣ್ ರವರು ಶ್ರೀಕಂಠ ಶರ್ಮರವರ ಬಾಯಿಗೆ ಸಾಯಿಬಾಬಾರವರ ಪವಿತ್ರ ಉಧಿಯನ್ನು ಹಾಕಿ ಅವರಿಗೆ ಸಾಯಿ ತಾರಕ ಮಂತ್ರವಾದ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ಯನ್ನು ಮನದಲ್ಲೇ ಹೇಳಿಕೊಳ್ಳಲು ಸಲಹೆ ನೀಡಿದರು. ಸ್ನೇಹಿತರು ಹೇಳಿದಂತೆ ಸಾಯಿ ತಾರಕ ಮಂತ್ರ ಹೇಳುತ್ತಾ ಯಾವಾಗಲೋ ಶ್ರೀಕಂಠ ಶರ್ಮರವರು ನಿದ್ರೆಗೆ ಜಾರಿದರು ಮತ್ತು ಆ ರಾತ್ರಿ ಯಾವುದೇ ತೊಂದರೆಯಾಗದೆ ಸುಖವಾಗಿ ನಿದ್ರಿಸಿದರು. ಬೆಳಗಿನ ಜಾವ 7:00 ಘಂಟೆಗೆ ಶ್ರೀಕಂಠ ಶರ್ಮರವರಿಗೆ ಎಚ್ಚರವಾಯಿತು. ಆದರೆ ಅವರ ದೇಹಸ್ಥಿತಿ ಎಂದಿನಂತೆ ಇರಲಿಲ್ಲ. ಶಿರಡಿಗೆ ಬರುವ ಮೊದಲು ಪ್ರತಿನಿತ್ಯ 3 ಡೆರಿಫಿಲಿನ್ ಮಾತ್ರೆಗಳನ್ನು ಆಸ್ತಮಾಕ್ಕೋಸ್ಕರವಾಗಿ ತೆಗೆದುಕೊಳ್ಳುತ್ತಿದ್ದರು. ಆದರೆ ಅಂದು ಮಾತ್ರೆ ತೆಗೆದುಕೊಳ್ಳಬೇಕೆಂದು ಅನಿಸಲೇ ಇಲ್ಲ. ಅವರಿಗೆ ಯಾವುದೇ ಉಸಿರಾಟದ ತೊಂದರೆಯು ಕಂಡು ಬರಲಿಲ್ಲ. ಅಂದಿನಿಂದ ಶ್ರೀಕಂಠ ಶರ್ಮರವರು ಯಾವುದೇ ಉಸಿರಾಟದ ತೊಂದರೆಯಿಲ್ಲದೆ ಗುಣಮುಖರಾಗತೊಡಗಿದರು. ಪ್ರತಿದಿನ ಮಾತ್ರೆ ತೆಗೆದುಕೊಳ್ಳುವುದನ್ನು ಕೂಡ ನಿಲ್ಲಿಸಿದರು. ಆಗೊಮ್ಮೆ ಈಗೊಮ್ಮೆ  ತೊಂದರೆಯಾದಾಗ ಅದಕ್ಕೆ ಮಾತ್ರೆಯನ್ನು ತೆಗೆದುಕೊಳ್ಳದೆ ಅದರ ಬದಲಾಗಿ ಸಾಯಿಬಾಬಾರವರ ಪವಿತ್ರ ಉಧಿಯನ್ನು ಬಾಯಿಗೆ ಹಾಕಿಕೊಳ್ಳುತ್ತಿದ್ದರು ಮತ್ತು ಸಾಯಿ ತಾರಕ ಮಂತ್ರವಾದ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ಯನ್ನು ಜಪಿಸುತ್ತಿದ್ದರು. 

    ಈ ರೀತಿಯಲ್ಲಿ ಶಿರಡಿ ಸಾಯಿಬಾಬಾರವರು ಶ್ರೀಕಂಠ ಶರ್ಮ ರವರ ಆಸ್ತಮಾ ಖಾಯಿಲೆಯನ್ನು ಸಂಪೂರ್ಣ ಗುಣ ಮಾಡಿದರು. ಆ ದಿನದಿಂದ ಶ್ರೀಕಂಠ ಶರ್ಮ ರವರು ಸಾಯಿಬಾಬಾರವರ ಅನನ್ಯ ಭಕ್ತರಾದರು ಮತ್ತು ಪ್ರತಿ ವರ್ಷ ಶಿರಡಿಗೆ ಹೋಗುವುದಕ್ಕೆ ಪ್ರಾರಂಭಿಸಿದರು. ಆಲ್ಲದೇ, ತಮ್ಮ ಜೀವನದಲ್ಲಿ ನಡೆದ ಸಾಯಿ ಲೀಲೆಯನ್ನು ತಮ್ಮ ಸುತ್ತ ಮುತ್ತಲಿನ ಎಲ್ಲರಿಗೂ ಹೇಳಿ ಅವರನ್ನು ಸಾಯಿಭಕ್ತರಾಗುವಂತೆ ಪ್ರೇರೇಪಿಸುತ್ತಿದ್ದರು. ಆಲ್ಲದೇ, ಶಿರಡಿಗೆ  ಹೋಗಲು ಇಚ್ಚೆಯಿದ್ದು, ಆದರೆ ಅಲ್ಲಿಗೆ ಹೋಗುವ ಬಗೆ ತಿಳಿಯದೆ ಇರುವಂತಹ ಭಕ್ತರಿಗೆ ಮಾರ್ಗದರ್ಶಕರಂತೆ ಶಿರಡಿಗೆ ಅವರನ್ನು ಕರೆದುಕೊಂಡು ಹೋಗಿ ಅವರಿಗೆ ಸಾಯಿಬಾಬಾರವರ ದರ್ಶನವನ್ನು ಮಾಡಿಸಲು ಪ್ರಾರಂಭಿಸಿದರು. 
    ಬ್ಲಾಗ್ ಸೃಷ್ಟಿಕರ್ತರ ಸ್ವಂತ ಅನುಭವ