Monday, July 28, 2014

ದಕ್ಷಿಣ ಕನ್ನಡ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಪುಚಾಡಿ, ಕಟಿಪಲ್ಲ ಮಾರ್ಗ, ಸೂರಿಂಜೆ ಅಂಚೆ, ಮುಲ್ಕಿ-575 030, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ

ಮಂದಿರದ ವಿಶೇಷತೆಗಳು: 

ಈ ಶಿರಡಿ ಸಾಯಿಬಾಬಾರವರ ಮಂದಿರವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸೂರಿಂಜೆ ತಾಲೂಕಿನ ಪುಚಾಡಿ ಎಂಬ ಗ್ರಾಮದಲ್ಲಿದೆ. ಮಂದಿರವು ಮಂಗಳೂರು ಬಸ್ ನಿಲ್ದಾಣದಿಂದ  20 ಕಿಲೋಮೀಟರ್ ಹಾಗೂ ಸೂರತ್ಕಲ್ ಬಸ್ ನಿಲ್ದಾಣದಿಂದ ಸುಮಾರು 7 ಕಿಲೋಮೀಟರ್ ಗಳ ಅಂತರದಲ್ಲಿದೆ.

ಈ ಮಂದಿರದ ಭೂಮಿಪೂಜೆಯನ್ನು 4ನೇ ಜೂನ್ 2012 ರಂದು ನೆರವೇರಿಸಲಾಯಿತು.

ಈ ಮಂದಿರದ ಉದ್ಘಾಟನೆಯನ್ನು 1ನೇ ಜೂನ್ 2014 ರಂದು ಮಂದಿರದ ಟ್ರಸ್ಟ್ ನ ಸದಸ್ಯರು ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿದರು.

ಈ ಮಂದಿರವನ್ನು ಸುಮಾರು ಟ್ರಸ್ಟ್ ಗೆ ಸೇರಿರುವ ಸುಮಾರು 5 ಸೆಂಟ್ ಭೂಮಿಯಲ್ಲಿ ನಿರ್ಮಿಸಲಾಗಿದೆ.

ಶ್ರೀ.ಬಾಲಕೃಷ್ಣ ಶೆಟ್ಟಿಯವರು ಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಇವರು ಮಂದಿರದ ದಿನನಿತ್ಯದ ಆಗುಹೋಗುಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ಮಂದಿರದಲ್ಲಿ ಸುಂದರವಾದ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.




ದಿನನಿತ್ಯದ ಕಾರ್ಯಕ್ರಮಗಳು: 

ಮಂದಿರದ ಸಮಯ: 

ಮಂದಿರವು ಪ್ರತಿನಿತ್ಯ ಬೆಳಿಗ್ಗೆ 7:00 ಗಂಟೆಯಿಂದ  ರಾತ್ರಿ 9:00 ರವರೆಗೆ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ .

ಆರತಿಯ ಸಮಯ:

ಬೆಳಗಿನ ಆರತಿ : 7:00 AM
ರಾತ್ರಿಯ ಆರತಿ: 7:00 AM

ಪ್ರತಿ ಗುರುವಾರಗಳಂದು ವಿಶೇಷ ಪೂಜೆಯನ್ನು ನೆರವೇರಿಸಿ  ಮಂದಿರಕ್ಕೆ ಬರುವ ಎಲ್ಲಾ ಸಾಯಿ ಭಕ್ತರಿಗೂ ಅನ್ನದಾನವನ್ನು ಮಾಡಲಾಗುತ್ತಿದೆ.

ವಿಶೇಷ ಉತ್ಸವದ ದಿನಗಳು:

1.ಶ್ರೀರಾಮನವಮಿ
2.ಗುರುಪೂರ್ಣಿಮೆ


ಸಾಮಾಜಿಕ ಕಾರ್ಯಚಟುವಟಿಕೆಗಳು:


  • ಮಂದಿರದ ಟ್ರಸ್ಟ್ ನ ವತಿಯಿಂದ ಸ್ಥಳೀಯ ಬಡ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವನ್ನು ನೀಡಲಾಗುತ್ತಿದೆ. 
  • ಮಂದಿರದ ಟ್ರಸ್ಟ್ ಸ್ಥಳೀಯ ಬಡ ನಾಗರೀಕರಿಗೆ ನಿಯಮಿತವಾಗಿ ಉಚಿತ ಔಷಧ ವಿತರಣೆಯನ್ನು ಮಾಡುತ್ತಿದೆ. 
  • ಮಂದಿರದ ಟ್ರಸ್ಟ್ ಆಗಿಂದಾಗ್ಗೆ ಸ್ಥಳೀಯ ಬಡ ನಾಗರೀಕರಿಗೆ ಅವರ ಅಗತ್ಯತೆಗೆ ತಕ್ಕಂತೆ ಹಣಕಾಸಿನ ನೆರವು ನೀಡುತ್ತಿದೆ. 

ದೇಣಿಗೆಗೆ ಮನವಿ:

ಶ್ರೀ ಶಿರಡಿ ಸಾಯಿ ಫ್ರೆಂಡ್ಸ್ (ನೋಂದಣಿ), ಸೂರಿಂಜೆಯು ತನ್ನ  ಮಂದಿರದ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಹಾಗೂ ಕಾರ್ಯಚಟುವಟಿಕೆಗಳಿಗಾಗಿ ಸಹೃದಯ ಸಾಯಿಭಕ್ತರಿಂದ ಹಾಗೂ ಸಾರ್ವಜನಿಕರಿಂದ ದೇಣಿಗೆಯನ್ನು ಸ್ವೀಕರಿಸುತ್ತದೆ. ದೇಣಿಗೆಯನ್ನು ಚೆಕ್/ಡಿಡಿ ಮುಖಾಂತರವಾಗಿ “ಶ್ರೀ ಶಿರಡಿ ಸಾಯಿ ಫ್ರೆಂಡ್ಸ್ (ನೋಂದಣಿ), ಭಾರತೀಯ ಸ್ಟೇಟ್ ಬ್ಯಾಂಕ್, ಖಾತೆ ಸಂಖ್ಯೆ:32552388778, ಶಾಖೆ: ಸೂರತ್ಕಲ್  ಐ.ಎಫ್.ಎಸ್.ಸಿ.ಸಂಖ್ಯೆ:SBIN0015314" ಗೆ ಸಂದಾಯವಾಗುವಂತೆ ನೀಡಬಹುದಾಗಿದೆ. 

ಮಂದಿರದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ:  
ಈ ಶಿರಡಿ ಸಾಯಿಬಾಬಾರವರ ಮಂದಿರವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸೂರಿಂಜೆ ತಾಲೂಕಿನ ಪುಚಾಡಿ ಎಂಬ ಗ್ರಾಮದಲ್ಲಿದೆ. ಮಂದಿರವು ಮಂಗಳೂರು ಬಸ್ ನಿಲ್ದಾಣದಿಂದ  20 ಕಿಲೋಮೀಟರ್ ಹಾಗೂ ಸೂರತ್ಕಲ್ ಬಸ್ ನಿಲ್ದಾಣದಿಂದ ಸುಮಾರು 7 ಕಿಲೋಮೀಟರ್ ಗಳ ಅಂತರದಲ್ಲಿದೆ.

ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ,
ಶ್ರೀ ಶಿರಡಿ ಸಾಯಿ ಫ್ರೆಂಡ್ಸ್ (ನೋಂದಣಿ),
ಪುಚಾಡಿ, ಕಟಿಪಲ್ಲ ಮಾರ್ಗ,
ಸೂರಿಂಜೆ ಅಂಚೆ, ಮುಲ್ಕಿ-575 030,
ದಕ್ಷಿಣ ಕನ್ನಡ ಜಿಲ್ಲೆ,
ಕರ್ನಾಟಕ, ಭಾರತ.

ಸಂಪರ್ಕಿಸಬೇಕಾದ ವ್ಯಕ್ತಿ: 
ಶ್ರೀ.ಬಾಲಕೃಷ್ಣ ಶೆಟ್ಟಿ

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 
+ 91 97430 10099

ಇ-ಮೇಲ್ ವಿಳಾಸ:  
shirdisaimandira@gmail.com/ shettybalakrishna@infotech-search.com

ಮಾರ್ಗಸೂಚಿ:  
ಈ ಶಿರಡಿ ಸಾಯಿಬಾಬಾರವರ ಮಂದಿರವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸೂರಿಂಜೆ ತಾಲೂಕಿನ ಪುಚಾಡಿ ಎಂಬ ಗ್ರಾಮದಲ್ಲಿದೆ. ಮಂದಿರವು ಮಂಗಳೂರು ಬಸ್ ನಿಲ್ದಾಣದಿಂದ  20 ಕಿಲೋಮೀಟರ್ ಹಾಗೂ ಸೂರತ್ಕಲ್ ಬಸ್ ನಿಲ್ದಾಣದಿಂದ ಸುಮಾರು 7 ಕಿಲೋಮೀಟರ್ ಗಳ ಅಂತರದಲ್ಲಿದೆ. ಮಂಗಳೂರು ಬಸ್ ನಿಲ್ದಾಣದಿಂದ ಬಸ್ ಸಂಖ್ಯೆ 15 ಹಾಗೂ ಸೂರತ್ಕಲ್ ಬಸ್ ನಿಲ್ದಾಣದಿಂದ ಬಸ್ ಸಂಖ್ಯೆ 53 ಅನ್ನು ಹತ್ತಿ ಪುಚಾಡಿ ಗ್ರಾಮವನ್ನು ತಲುಪಬಹುದಾಗಿರುತ್ತದೆ. (ಕೃಪೆ: ಶ್ರೀ.ಬಾಲಕೃಷ್ಣ ಶೆಟ್ಟಿ ಅಧ್ಯಕ್ಷರು, ಸೂರಿಂಜೆ ಸಾಯಿಬಾಬಾ ಮಂದಿರ  ಮತ್ತು ಶ್ರೀಮತಿ.ಸುಮತಿ ಪೈ, ಮಂಗಳೂರು)

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment