Sunday, July 27, 2014

ಶ್ರಾವಣ ಮಾಸದ ಅಂಗವಾಗಿ ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ಹೆಚ್ಚುವರಿ ಶ್ರೀ ಸಾಯಿ ಸತ್ಯವ್ರತ ಪೂಜೆಯ ತಂಡಗಳ ಸೇರ್ಪಡೆ- ಕೃಪೆ: ಸಾಯಿಅಮೃತಧಾರಾ.ಕಾಂ

ಪವಿತ್ರ ಶ್ರಾವಣ ಮಾಸದ ಅಂಗವಾಗಿ ಶಿರಡಿಗೆ ಹರಿದು ಬರುವ ಹೆಚ್ಚುವರಿ  ಗಮನದಲ್ಲಿಟ್ಟುಕೊಂಡು ಹಾಗೂ ಈ ಪವಿತ್ರ ಶ್ರಾವಣ ಮಾಸದಲ್ಲಿ ಸತ್ಯನಾರಾಯಣ ಪೂಜೆಗೆ ಭಕ್ತರು ನೀಡುವ ಹೆಚ್ಚಿನ ಮಹತ್ವವನ್ನು ಮನಗಂಡು ಶ್ರೀ ಸಾಯಿಬಾಬಾ ಸಂಸ್ಥಾನವು ಈ ತಿಂಗಳ  27ನೇ ಜುಲೈ 2014 ರಿಂದ 25ನೇ ಆಗಸ್ಟ್ 2014 ರವರೆಗೆ ಆರು ಶ್ರೀ ಸಾಯಿ ಸತ್ಯವ್ರತ ಪೂಜೆಯ ತಂಡಗಳನ್ನು ಆಯೋಜಿಸಿದೆ ಎಂದು ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ) ನ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆಯವರು ಸುದ್ದಿಗಾರರಿಗೆ ತಿಳಿಸಿದರು. 

ಸಾಮಾನ್ಯವಾಗಿ ಪ್ರತಿನಿತ್ಯ ಬೆಳಿಗ್ಗೆ 7 ರಿಂದ 8, 9 ರಿಂದ 10 ಹಾಗೂ 11 ರಿಂದ 12 ರವರಗೆ ಮೂರು ತಂಡಗಳನ್ನು ಶ್ರೀ ಸಾಯಿ ಸತ್ಯವ್ರತ ಪೂಜೆಗೆಂದು ಶ್ರೀ ಸಾಯಿಬಾಬಾ ಸಂಸ್ಥಾನವು ಆಯೋಜಿಸುತ್ತಿದೆ ಎಂದು ಶ್ರೀ.ಸೋನಾವಾನೆಯವರು ತಿಳಿಸಿದರು.

ಆದರೆ ಪವಿತ್ರ ಶ್ರಾವಣ ಮಾಸದಲ್ಲಿ ಶ್ರೀ ಸಾಯಿ ಸತ್ಯನಾರಾಯಣ ಪೂಜೆಗೆ ಹೆಚ್ಚಿನ ಮಹತ್ವವಿರುವ ಕಾರಣ ಸಾಯಿ ಭಕ್ತರು ಪೂಜೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಸೇವಾ ಪತ್ರಕಕ್ಕಾಗಿ  ಹೆಚ್ಚಿನ ಬೇಡಿಕೆಯನ್ನು ಸಲ್ಲಿಸುತ್ತಾರೆ. 

ಹಾಗಾಗಿ ಅಂತಹ ಭಕ್ತರ ಕೋರಿಕೆಯನ್ನು ಪೂರ್ಣಗೊಳಿಸುವುದಕ್ಕಾಗಿ ಶ್ರೀ ಸಾಯಿಬಾಬಾ ಸಂಸ್ಥಾನವು  ಈ ವರ್ಷ ಶ್ರಾವಣ ಮಾಸದದಲ್ಲಿ ಬೆಳಿಗ್ಗೆ 7 ರಿಂದ 8, 10 ರಿಂದ 11, 11 ರಿಂದ 12, ಮಧ್ಯಾನ್ಹ  1 ರಿಂದ 2, 3 ರಿಂದ 4 ಮತ್ತು ಸಂಜೆ 5 ರಿಂದ 6 ಗಂಟೆಯವರೆಗೆ ಆರು ಶ್ರೀ ಸಾಯಿ ಸತ್ಯವ್ರತಗಳ ತಂಡಗಳನ್ನು ಆಯೋಜಿಸಲಿದೆ.  ಪ್ರತಿ ತಂಡದಲ್ಲಿ 100 ಮಂದಿ ಭಕ್ತರು ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶವಿರುತ್ತದೆ.  ಸಾಯಿಭಕ್ತರು  ಪೂಜೆಗಾಗಿ ಸೇವಾ ಪತ್ರಕಗಳನ್ನು ಸೇವೆಯ ದಿನಕ್ಕೆ  ಒಂದು ದಿನ ಮುಂಚಿತವಾಗಿ ಅಂದರೆ ಹಿಂದಿನ ದಿನ ಮಧ್ಯಾನ್ಹ  2 ಗಂಟೆಗೆ ಶ್ರೀ ಸಾಯಿಬಾಬಾ ಸಂಸ್ಥಾನದ ಕಛೇರಿಯಲ್ಲಿ ಪಡೆಯಬಹುದಾಗಿರುತ್ತದೆ. ಈ ತಾತ್ಕಾಲಿಕ ಬದಲಾವಣೆಗೆ ಸಾಯಿ ಭಕ್ತರು ತುಂಬು ಹೃದಯದಿಂದ ಸಹಕಾರ ನೀಡಬೇಕೆಂದು ಶ್ರೀ ಸೋನಾವಾನೆಯವರು ಕೋರಿಕೊಳ್ಳುತ್ತಾರೆ.(ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು).

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment