Monday, July 14, 2014

ಶಿರಡಿಯ ಶ್ರೀ ಸಾಯಿನಾಥ ಆಸ್ಪತ್ರೆಯ ವತಿಯಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರದ ಆಯೋಜನೆ- ಒಂದು ವರದಿ- ಕೃಪೆ: ಸಾಯಿಅಮೃತಧಾರಾ. ಕಾಂ

ಶಿರಡಿಯ ಶ್ರೀ ಸಾಯಿನಾಥ ಆಸ್ಪತ್ರೆಯು ಶಿರಡಿಯ ಲಯನ್ಸ್ ಕ್ಲಬ್ ಮತ್ತು ಭಾರತೀಯ ವೈದ್ಯಕೀಯ ಸಂಘದ ಸಹಯೋಗದೊಂದಿಗೆ ಇದೇ ತಿಂಗಳ 1ನೇ ಜುಲೈ 2014, ಮಂಗಳವಾರ ದಂದು ತನ್ನ ಆಸ್ಪತ್ರೆಯ ಆವರಣದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು ಹಾಗೂ ಆ ಶಿಬಿರದಲ್ಲಿ ಒಟ್ಟು 71 ರಕ್ತದಾನಿಗಳು ಭಾಗವಹಿಸಿದ್ದರು ಎಂದು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆಯವರು ಸುದ್ದಿಗಾರರಿಗೆ ತಿಳಿಸಿದರು. 

ರಕ್ತದಾನ ಶಿಬಿರದಲ್ಲಿ ಹಲವು ವೈದ್ಯರುಗಳು ಹಾಗೂ ಮಹಿಳೆಯರೂ ಸಹ ಸ್ವಇಚ್ಛೆಯಿಂದ ಭಾಗವಹಿಸಿದ್ದರು. ಶಿರಡಿಯ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಶ್ರೀ.ವಸಂತ್ ಕದಂ, ಸದಸ್ಯರುಗಳಾದ ಶ್ರೀ.ಸಚಿನ್ ಸಾರಂಗಾರ್, ಶ್ರೀ.ವಿಶಾಲ್ ತಿಡಕೆ, ಶ್ರೀ.ದಿಲೀಪ್ ವಾಕ್ಚುರೆ ಮತ್ತು ಶ್ರೀ.ಬಾವುಸಾಹೇಬ್ ಲವಾಂಡೆಯವರುಗಳು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಎಂದು ಸಹ ಶ್ರೀ.ಸೋನಾವಾನೆಯವರು ಸುದ್ದಿಗಾರರಿಗೆ ತಿಳಿಸಿದರು. 

ಶ್ರೀ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರ ಉತ್ತಮ ಮಾರ್ಗದರ್ಶನದಲ್ಲಿ  ವೈದ್ಯಕೀಯ ನಿರ್ದೇಶಕರಾದ ಡಾ.ಪ್ರಭಾಕರ್ ರಾವ್, ವೈದ್ಯಕೀಯ ಅಧೀಕ್ಷಕರಾದ ಡಾ.ಸಂಜಯ್ ಪಟಾರೆ ಹಾಗೂ ಆಸ್ಪತ್ರೆಯ ಹಲವಾರು ಸಿಬ್ಬಂದಿಗಳು ವಿಶೇಷ ಮುತುವರ್ಜಿ ವಹಿಸಿ ಈ ರಕ್ತದಾನ ಶಿಬಿರ ಯಶಸ್ವಿಯಾಗಲು ದುಡಿದರೆಂದು ಸಹ ಶ್ರೀ.ಸೋನಾವಾನೆಯವರು ತಿಳಿಸಿದರು. 

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ 

No comments:

Post a Comment