Friday, August 1, 2014

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಎರಡು ನಿವೃತ್ತ ಅಧಿಕಾರಿಗಳಿಗೆ ಸನ್ಮಾನ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ 31ನೇ ಜುಲೈ 2014, ಗುರುವಾರ ದಂದು ಸಮಾಧಿ ಮಂದಿರದ ಸಭಾಂಗಣದಲ್ಲಿ ಇತ್ತೀಚಿಗೆ ಸೇವೆಯಿಂದ ನಿವೃತ್ತರಾದ ಸಾಯಿಬಾಬಾ ಸಂಸ್ಥಾನದ ಎರಡು ಅಧಿಕಾರಿಗಳನ್ನು ಸನ್ಮಾನಿಸಿತು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಮಾತನಾಡುತ್ತಾ ಶ್ರೀ ಸಾಯಿ ಪ್ರಸಾದಾಲಯದಲ್ಲಿ ಹಲವಾರು ವರ್ಷಗಳ ಕಾಲ ಅತ್ಯುತ್ತಮ ಸೇವೆಯನ್ನು ಸಲ್ಲಿಸಿದ ಶ್ರೀ.ಅಪ್ಪಾ ಸಾಹೇಬ್ ಕೋತೆ ಹಾಗೂ ಶ್ರೀ.ರಾಮದಾಸ ಕೋತೆಯವರ ಅತ್ಯಮೂಲ್ಯವಾದ ಸೇವೆಯನ್ನು ಕೊಂಡಾಡಿದರು. 


ಈ ಸಂದರ್ಭದಲ್ಲಿ ನಿರ್ವಾಹಕ ಅಧಿಕಾರಿಗಳಾದ ಶ್ರೀ.ಬಿ.ಡಿ.ಸಬಲೆ, ಶ್ರೀ.ಎಸ್.ವಿ.ಗಮೆ, ಶ್ರೀ.ಎಸ್.ಎನ್.ಗರ್ಕಲ್, ಶ್ರೀ.ಟಿ.ಡಿ.ಉಗಲೆ, ಶ್ರೀ.ಯು.ಪಿ.ಗೋಂಡ್ಕರ್,ಶ್ರೀ.ದಿಲೀಪ್ ಉಗಲೆ ಆದಿಸಿಂಹ ಮತ್ತು ಎಲ್ಲಾ ವಿಭಾಗದ ಮುಖ್ಯಸ್ಥರೂ ಹಾಗೂ ಅಧಿಕಾರಿಗಳೂ ಉಪಸ್ಥಿತರಿದ್ದರು. 

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ.ಶಿಂಧೆಯವರು ಹೇಗೆ ಶ್ರೀ ಸಾಯಿಬಾಬಾರವರು ತಮ್ಮ ಅವತರಣ ಕಾಲದಲ್ಲಿ ಅನ್ನದಾನಕ್ಕೆ ಹೆಚ್ಚಿನ ಮಹತ್ವ ನೀಡಿದರೆಂಬ ವಿಷಯವನ್ನು ಶ್ರೀ ಸಾಯಿ ಸಚ್ಚರಿತ್ರೆಯ 37ನೇ ಅಧ್ಯಾಯದಲ್ಲಿ ವಿಶೇಷವಾಗಿ ತಿಳಿಸಲಾಗಿದೆ. ಅದನ್ನು ಶ್ರೀ ಸಾಯಿಬಾಬಾ ಸಂಸ್ಥಾನವು ಮುಂದುವರಿಸಿಕೊಂಡು ಬಂದಿರುತ್ತದೆ. ಇಂದು ಶಿರಡಿಯ ಶ್ರೀ ಸಾಯಿಬಾಬಾ  ಪ್ರಸಾದಾಲಯದ ಕೀರ್ತಿಯು ಮಹಾರಾಷ್ಟ್ರ ರಾಜ್ಯದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಹರಡಿರುತ್ತದೆ. ಹಾಗೆಯೇ, ಶ್ರೀ.ಅಪ್ಪ ಸಾಹೇಬ್ ಕೋತೆಯವರು ಮತ್ತು ಶ್ರೀ.ರಾಮದಾಸ್ ಕೋತೆಯವರು ತಮ್ಮ ಸೇವಾವಧಿಯ ಕಾಲದಲ್ಲಿ  ಅತ್ಯಂತ ಹೆಚ್ಚಿನ ಶ್ರಮವಹಿಸಿ ಶ್ರೀ ಸಾಯಿಬಾಬಾ ಸಂಸ್ಥಾನದ ಏಳಿಗೆಗಾಗಿ ಹಗಲಿರುಳೂ ಕಾರ್ಯ ನಿರ್ವಹಿಸುವುದರ  ಮೂಲಕ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದಾರೆ. ಶ್ರೀ ಸಾಯಿಬಾಬಾ ಸಂಸ್ಥಾನದ ಎಲ್ಲಾ ಸಿಬ್ಬಂದಿಗಳಿಗೆ ಅವರು ತೋರಿಸುತ್ತಿದ್ದ ಗೌರವ ಹಾಗೂ ಅವರ ಸ್ನೇಹ ಮನೋಭಾವ ಇತರ ಸಿಬ್ಬಂದಿ ವರ್ಗಕ್ಕೆ ಮಾದರಿಯಾಗಿದೆ ಎಂದು ಹೇಳಬೇಕು. ಈ ಇಬ್ಬರು ಸಿಬ್ಬಂದಿಗಳು ತಾವು ಕಾರ್ಯ ನಿರ್ವಹಿಸಿದ ಸಂಸ್ಥಾನದ ಎಲ್ಲಾ ವಿಭಾಗಗಳಲ್ಲೂ ಬಹಳ ಒಳ್ಳೆಯ ಹೆಸರನ್ನು ಗಳಿಸಿದ್ದಾರೆ ಎಂದು ನಿವೃತ್ತ ಅಧಿಕಾರಿಗಳನ್ನು ಮನಸಾರೆ ಕೊಂಡಾಡಿದರು. ಅಲ್ಲದೇ, ಸಂಸ್ಥಾನದ ಅಧಿಕಾರಿಗಳು ನಿವೃತ್ತರಾದ ನಂತರ ಅವರುಗಳಿಗೆ ಪಿಂಚಣಿ ನೀಡುವ ಸಲುವಾಗಿ ಪಿಂಚಣಿ ಯೋಜನೆಯ ಅಗತ್ಯವಿದೆ ಎಂದೂ  ಹಾಗೂ ಅದಕ್ಕೆ ಸಂಬಂಧಪಟ್ಟ ವಿಭಾಗವು ಅತಿ ಶೀಘ್ರದಲ್ಲಿಯೇ ಸಂಸ್ಥಾನದ ಆಡಳಿತ ಮಂಡಳಿಯ ಮುಂದೆ  ಈ ವಿಷಯವನ್ನು ಪ್ರಸ್ತಾಪಿಸಬೇಕಿದೆ ಎಂಬ ಅಂಶವನ್ನು ಒತ್ತಿ ಹೇಳಿದರು. 

ಈ ಸಂದರ್ಭದಲ್ಲಿ ನಿವೃತ್ತ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಕೋತೆ,ಶ್ರೀ.ರಾಮದಾಸ ಕೋತೆ, ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀ.ಎಸ್.ಎನ್.ಗರ್ಕಲ್, ಶ್ರೀ.ಟಿ.ಡಿ.ಉಗಲೆ, ಪ್ರಾಂಶುಪಾಲರಾದ ಶ್ರೀ.ಪಟಾಣಿ, ಶ್ರೀ ಸಾಯಿಬಾಬಾ ಸಂಸ್ಥಾನದ ನೌಕರರ ಸಂಘದ ಅಧ್ಯಕ್ಷರಾದ ಶ್ರೀ.ರಾಜೇಂದ್ರ ಜಗ್ತಪ್, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ಹಾಗೂ ಶ್ರೀ.ಚಿತ್ರೆಯವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮನಿರ್ವಹಣೆಯನ್ನು ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀ.ಎಸ್.ಡಿ.ಸಬಲೆಯವರು ನಡೆಸಿಕೊಟ್ಟರು. (ಮರಾಠಿಯಿಂದ ಆಂಗ್ಲ ಭಾಷೆಗೆ ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು).

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment