Friday, July 25, 2014

ದಕ್ಷಿಣ ಕನ್ನಡ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಕೊಲ್ಕಾಡಿ, ಪಂಜಿನಡ್ಕ ಅಂಚೆ, ಮುಲ್ಕಿ-574 154, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ

ಮಂದಿರದ ವಿಶೇಷತೆಗಳು: 

ಈ ಶಿರಡಿ ಸಾಯಿಬಾಬಾರವರ ಮಂದಿರವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಕೊಲ್ಕಾಡಿ ಎಂಬ ಗ್ರಾಮದಲ್ಲಿದೆ. ಮಂದಿರವು ಕಾರ್ನಾಡ್ ವೃತ್ತದಿಂದ ಸುಮಾರು ಎರಡು ಕಿಲೋಮೀಟರ್ ಹಾಗೂ ಮುಲ್ಕಿ ಬಸ್ ನಿಲ್ದಾಣದಿಂದ ಸುಮಾರು ಮೂರು ಕಿಲೋಮೀಟರ್ ಗಳ ಅಂತರದಲ್ಲಿದೆ. 

ಈ ಮಂದಿರದ ಭೂಮಿಪೂಜೆಯನ್ನು 12ನೇ ಏಪ್ರಿಲ್ 2011 ರಂದು ನೆರವೇರಿಸಲಾಯಿತು.

ಈ ಮಂದಿರದ ಉದ್ಘಾಟನೆಯನ್ನು ಪವಿತ್ರ ರಾಮನವಮಿಯ ದಿನವಾದ 15ನೇ ಏಪ್ರಿಲ್ 2012 ರಂದು ಮಂದಿರದ ಸಂಸ್ಥಾಪಕ ಅಧ್ಯಕ್ಷರಾದ ಮುಂಬೈನ ಶ್ರೀ.ಈಶ್ವರ ಎಲ್.ಶೆಟ್ಟಿಯವರು ಟ್ರಸ್ಟ್ ನ ಸದಸ್ಯರು ಹಾಗೂ ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿದರು. 

ಈ ಮಂದಿರವನ್ನು ಸುಮಾರು ಟ್ರಸ್ಟ್ ನ ಸದಸ್ಯರಾದ  ಶ್ರೀ.ಶ್ರೀಧರ್ ರವರು ದಾನವಾಗಿ ನೀಡಿರುವ 4000 ಚದರ ಅಡಿ ಭೂಮಿಯಲ್ಲಿ ನಿರ್ಮಿಸಲಾಗಿದೆ.

ಶ್ರೀ.ಈಶ್ವರ ಎಲ್. ಶೆಟ್ಟಿಯವರು ಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಶ್ರೀ.ಶ್ರೀಧರ್ ರವರು ಮಂದಿರದ ದಿನನಿತ್ಯದ ಆಗುಹೋಗುಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. 

ಮಂದಿರದಲ್ಲಿ ಶ್ರೀ.ಈಶ್ವರ ಎಲ್. ಶೆಟ್ಟಿಯವರು ನೀಡಿರುವ 3.5 ಅಡಿ ಎತ್ತ್ತರದ ಸುಂದರವಾದ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.  ಅಲ್ಲದೇ ಸಾಯಿಬಾಬಾರವರ  ಬೆಳ್ಳಿಯ ಪಾದುಕೆಗಳನ್ನು ಸಹ ಇರಿಸಲಾಗಿದೆ. 







ದಿನನಿತ್ಯದ ಕಾರ್ಯಕ್ರಮಗಳು: 

ಮಂದಿರದ ಸಮಯ: 

ಮಂದಿರವು ಪ್ರತಿನಿತ್ಯ ಬೆಳಿಗ್ಗೆ 6:00 ಗಂಟೆಯಿಂದ  ರಾತ್ರಿ 8:00 ರವರೆಗೆ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ .

ಆರತಿಯ ಸಮಯ:

ಕಾಕಡಾ ಆರತಿ : 6:00 AM
ಧೂಪಾರತಿ      : 6:00 PM
ಶೇಜಾರತಿ       : 8:00 PM

ಪ್ರತಿ ಗುರುವಾರಗಳಂದು ವಿಶೇಷ ಪೂಜೆಯನ್ನು ನೆರವೇರಿಸಿ  ಮಂದಿರಕ್ಕೆ ಬರುವ ಎಲ್ಲಾ ಸಾಯಿ ಭಕ್ತರಿಗೂ ಅನ್ನದಾನವನ್ನು ಮಾಡಲಾಗುತ್ತಿದೆ. 

ವಿಶೇಷ ಉತ್ಸವದ ದಿನಗಳು:

1.ಶ್ರೀರಾಮನವಮಿ 
2.ಗುರುಪೂರ್ಣಿಮೆ 
3.ವಿಜಯದಶಮಿ 

ಸಾಮಾಜಿಕ ಕಾರ್ಯಚಟುವಟಿಕೆಗಳು:

ಮಂದಿರದ ಟ್ರಸ್ಟ್ ನ ವತಿಯಿಂದ ಪ್ರತಿ ವರ್ಷ ಮಂದಿರದ ಸುತ್ತಮುತ್ತಲೂ ಇರುವ ವೃದ್ಧರಿಗೆ ಹಾಗೂ ಬಡ ಜನರಿಗೆ ಶಿರಡಿ ಯಾತ್ರೆಯನ್ನು ಆಯೋಜಿಸಲಾಗುತ್ತಿದೆ. 

ದೇಣಿಗೆಗೆ ಮನವಿ:

ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಮುಲ್ಕಿಯು ಮಂದಿರದ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಹಾಗೂ ಕಾರ್ಯಚಟುವಟಿಕೆಗಳಿಗಾಗಿ ಸಹೃದಯ ಸಾಯಿಭಕ್ತರಿಂದ ಹಾಗೂ ಸಾರ್ವಜನಿಕರಿಂದ ದೇಣಿಗೆಯನ್ನು ಸ್ವೀಕರಿಸುತ್ತದೆ. ದೇಣಿಗೆಯನ್ನು ಚೆಕ್/ಡಿಡಿ ಮುಖಾಂತರವಾಗಿ “ಶ್ರೀ ಶಿರಡಿ ಸಾಯಿಬಾಬಾ ಮಂದಿರ ಸಮಿತಿ, ಕಾರ್ಪೊರೇಷನ್ ಬ್ಯಾಂಕ್, ಖಾತೆ ಸಂಖ್ಯೆ:019700101010951, ಶಾಖೆ: ಮುಲ್ಕಿ ಐ.ಎಫ್.ಎಸ್.ಸಿ.ಸಂಖ್ಯೆ:Corp0000197" ಗೆ ಸಂದಾಯವಾಗುವಂತೆ ನೀಡಬಹುದಾಗಿದೆ. 

ಮಂದಿರದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 
ಮಂದಿರವು ಮುಲ್ಕಿ ತಾಲೂಕಿನ ಕೊಲ್ಕಾಡಿ ಎಂಬ ಗ್ರಾಮದಲ್ಲಿದೆ. ಮಂದಿರವು ಕಾರ್ನಾಡ್ ವೃತ್ತದಿಂದ ಸುಮಾರು ಎರಡು ಕಿಲೋಮೀಟರ್ ಹಾಗೂ ಮುಲ್ಕಿ ಬಸ್ ನಿಲ್ದಾಣದಿಂದ ಸುಮಾರು ಮೂರು ಕಿಲೋಮೀಟರ್ ಗಳ ಅಂತರದಲ್ಲಿದೆ.

ವಿಳಾಸ: 
ಶ್ರೀ ಶಿರಡಿ ಸಾಯಿಬಾಬಾ ಮಂದಿರ, 
ಕೊಲ್ಕಾಡಿ, ಪಂಜಿನಡ್ಕ ಅಂಚೆ, 
ಮುಲ್ಕಿ-574 154, 
ದಕ್ಷಿಣ ಕನ್ನಡ ಜಿಲ್ಲೆ, 
ಕರ್ನಾಟಕ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಶ್ರೀಧರ್/ಶ್ರೀ.ಯಶವಂತ್/ಶ್ರೀ.ಪ್ರದೀಪ್ ಸಾಲಿಯಾನ್ 

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 
+91 96204 27042 

ಇ-ಮೇಲ್ ವಿಳಾಸ: 
Yashu.mulki@gmail.com,  pradeep_bsalian@yahoo.com

ಮಾರ್ಗಸೂಚಿ: 
ಮಂದಿರವು ಮುಲ್ಕಿ ತಾಲೂಕಿನ ಕೊಲ್ಕಾಡಿ ಎಂಬ ಗ್ರಾಮದಲ್ಲಿದೆ. ಮಂದಿರವು ಕಾರ್ನಾಡ್ ವೃತ್ತದಿಂದ ಸುಮಾರು ಎರಡು ಕಿಲೋಮೀಟರ್ ಹಾಗೂ ಮುಲ್ಕಿ ಬಸ್ ನಿಲ್ದಾಣದಿಂದ ಸುಮಾರು ಮೂರು ಕಿಲೋಮೀಟರ್ ಗಳ ಅಂತರದಲ್ಲಿದೆ. ಮುಲ್ಕಿ ಬಸ್ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಕಟೀಲು ಅಥವಾ ಕಿನ್ನಿಗೋಳಿ ಮಾರ್ಗವಾಗಿ ಹೋಗುವ ರಸ್ತೆಯಲ್ಲಿ ಹೋದರೆ ಕಾರ್ನಾಡ್ ವೃತ್ತ ಸಿಗುತ್ತದೆ. ಅದೇ ರಸ್ತೆಯಲ್ಲಿ ಅಲ್ಲಿಂದ ಮುಂದೆ ಸುಮಾರು 2 ಕಿಲೋಮೀಟರ್ ಗಳಷ್ಟು ದೂರ  ಕ್ರಮಿಸಿದರೆ ಮಂದಿರ ಸಿಗುತ್ತದೆ. (ಕೃಪೆ: ಶ್ರೀ.ಪ್ರದೀಪ್ ಸಾಲಿಯಾನ್, ಮುಲ್ಕಿ ಸಾಯಿಬಾಬಾ ಮಂದಿರ ಮತ್ತು ಶ್ರೀಮತಿ.ಸುಮತಿ ಪೈ, ಮಂಗಳೂರು)

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment