Saturday, July 19, 2014

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ನೀಲಾದ್ರಿ ನಗರ, ಹುಲಿಮಂಗಲ ಅಂಚೆ, ಬೆಂಗಳೂರು ಗ್ರಾಮಾಂತರ-560 105, ಕರ್ನಾಟಕ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ

ಮಂದಿರದ ವಿಶೇಷತೆಗಳು: 

ಈ ಸಾಯಿಬಾಬಾ ಮಂದಿರವು ಕರ್ನಾಟಕ ರಾಜ್ಯದ  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲೆಕ್ಟ್ರಾನಿಕ್ ಸಿಟಿ ಬಳಿಯಿರುವ ಹುಲಿಮಂಗಲ ಅಂಚೆ ವ್ಯಾಪ್ತಿಯಲ್ಲಿ ಬರುವ ನೀಲಾದ್ರಿ ನಗರದಲ್ಲಿದೆ.  

ಈ ಮಂದಿರದ ಉದ್ಘಾಟನೆಯನ್ನು ಮಹಾಶಿವರಾತ್ರಿಯ ಶುಭ ದಿನವಾದ 27ನೇ  ಫೆಬ್ರವರಿ 2014 ರಂದು ಶ್ರೀ.ಆನಂದ ಗುರೂಜಿಯವರು ಟ್ರಸ್ಟ್ ನ ಸದಸ್ಯರುಗಳು ಹಾಗೂ ಸಾವಿರಾರು ಸ್ಥಳೀಯ ಸಾಯಿಭಕ್ತರ ಸಮ್ಮುಖದಲ್ಲಿ ನೆರವೇರಿಸಿದರು. 

ಶ್ರೀ.ಮಧುರವರು ಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಮಂದಿರದ ಟ್ರಸ್ಟ್ ದಿನನಿತ್ಯದ ಆಗು-ಹೋಗುಗಳನ್ನು ಹಾಗೂ ಅಭಿವೃದ್ಧಿ ಚಟುವಟಿಕೆಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದೆ. 

ಮಂದಿರದಲ್ಲಿ ಸುಮಾರು 4 ಅಡಿ ಎತ್ತರದ ಸುಂದರ ಅಮೃತಶಿಲೆಯ  ಶ್ರೀ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಅಮೃತಶಿಲೆಯ ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿದೆ. ಅಲ್ಲದೆ, ಬಾಬಾರವರ ಎದುರುಗಡೆ ಶಿರಡಿಯಲ್ಲಿ ಇರುವಂತೆ ಅಮೃತಶಿಲೆಯ ನಂದಿಯ ವಿಗ್ರಹವನ್ನೂ  ಸಹ ಪ್ರತಿಷ್ಟಾಪಿಸಲಾಗಿದೆ. 

ಮಂದಿರದ ಆವರಣದಲ್ಲಿ ಪವಿತ್ರ ಧುನಿ, ಕಪ್ಪು ಶಿಲೆಯ ಗಣಪತಿ ಹಾಗೂ ಸುಬ್ರಮಣ್ಯ ದೇವರುಗಳ ವಿಗ್ರಹಗಳನ್ನೂ ಸಹ ಪ್ರತಿಷ್ಟಾಪಿಸಲಾಗಿದೆ. 









ದಿನನಿತ್ಯದ ಕಾರ್ಯಕ್ರಮಗಳು: 

ಮಂದಿರದ ಸಮಯ:

ಬೆಳಿಗ್ಗೆ 5:30 ರಿಂದ ಮಧ್ಯಾನ್ಹ  12:30 ರವರೆಗೆ 
ಸಂಜೆ 6:00 ರಿಂದ ರಾತ್ರಿ 9:00 ರವರೆಗೆ 

ಆರತಿಯ ಸಮಯ:

ಕಾಕಡಾ ಆರತಿ   - ಬೆಳಿಗ್ಗೆ 5:30 ಕ್ಕೆ 
ಮಧ್ಯಾನ್ಹ ಆರತಿ  - ಮಧ್ಯಾನ್ಹ 12:00 ಕ್ಕೆ 
ಧೂಪಾರತಿ        - ಸಂಜೆ 6:00 ಕ್ಕೆ 
ಶೇಜಾರತಿ         - ರಾತ್ರಿ 8:30 ಕ್ಕೆ 

ವಿಶೇಷ ಉತ್ಸವದ ದಿನಗಳು:

1.ಶ್ರೀರಾಮನವಮಿ 
2.ಗುರುಪೂರ್ಣಿಮೆ 
3.ವಿಜಯದಶಮಿ 
4.ದತ್ತ ಜಯಂತಿ 

ಮಂದಿರದ ವಿಳಾಸ ಮತ್ತು ಮಾರ್ಗಸೂಚಿ: 


ಸ್ಥಳ:
ನೀಲಾದ್ರಿ ನಗರ, ಹುಲಿಮಂಗಲ ಅಂಚೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ 

ವಿಳಾಸ: 
ಶ್ರೀ ಶಿರಡಿ ಸಾಯಿಬಾಬಾ ಮಂದಿರ  
ನೀಲಾದ್ರಿ ನಗರ, ಹುಲಿಮಂಗಲ ಅಂಚೆ, 
ಬೆಂಗಳೂರು ಗ್ರಾಮಾಂತರ ಜಿಲ್ಲೆ-560 105,
ಕರ್ನಾಟಕ, ಭಾರತ. 

ಸಂಪರ್ಕಿಸಬೇಕಾದ ವ್ಯಕ್ತಿ: 
ಶ್ರೀ.ಮಧು - ಅಧ್ಯಕ್ಷರು 

ದೂರವಾಣಿ ಸಂಖ್ಯೆಗಳು:
+91 96113 33395/+91 99029 23122

ಮಾರ್ಗಸೂಚಿ: 
ಮಂದಿರವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹುಲಿಮಂಗಲ ಅಂಚೆ ವ್ಯಾಪ್ತಿಯಲ್ಲಿ ಬರುವ ನೀಲಾದ್ರಿ ನಗರದಲ್ಲಿದೆ. 

ಕೃಪೆ: ಶ್ರೀ.ನಾಗರಾಜ ಅನ್ವೇಕರ್, ಬೆಂಗಳೂರು
ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment