Thursday, July 17, 2014

ಕರ್ನಾಟಕದ ಶಿರಡಿ ಸಾಯಿಬಾಬಾ ಮಂದಿರ-ಓಂ ಸಾಯಿ ಸಮಾಜ, ಕಾರ್ಪೊರೇಷನ್ ಕ್ವಾರ್ಟರ್ಸ್ ನ ಹತ್ತಿರ, ತಿಲಕವಾಡಿ, ಬೆಳಗಾಂ, ಕರ್ನಾಟಕ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ


ಈ ಪ್ರಸಿದ್ಧ ಸಾಯಿಬಾಬಾ ಮಂದಿರವು ಕರ್ನಾಟಕ ರಾಜ್ಯದ ಬೆಳಗಾಂ ಪಟ್ಟಣದ ತಿಲಕವಾಡಿಯ ಕಾರ್ಪೊರೇಷನ್  ಕ್ವಾರ್ಟರ್ಸ್ ನ ಹತ್ತಿರ ಇದೆ.

ಈ ಪುರಾತನ ಸಾಯಿಬಾಬಾ ಮಂದಿರವನ್ನು 5ನೇ ಡಿಸೆಂಬರ್ 1953 ರಂದು ಆಂಧ್ರಪ್ರದೇಶದ ಅಂಧ ಸ್ವಾಮೀಜಿಯೊಬ್ಬರು ತಮಿಳುನಾಡಿನ ಪ್ರೊದತ್ತೂರ್ ನ ಬಾಬಾ  ಶ್ರೀ ಸಾಯಿಗಾರು ಚರಣಾನಂದ ಸರಸ್ವತಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಉದ್ಘಾಟಿಸಿದರು. 

ಕೆಲ ವರ್ಷಗಳ ನಂತರ ಹಳೆಯ ಮಂದಿರವನ್ನು ಜೀರ್ಣೋದ್ಧಾರ ಮಾಡಿ ಅದೇ ಸ್ಥಳದಲ್ಲಿ ಹೊಸ ಮಂದಿರವನ್ನು ನಿರ್ಮಾಣ ಮಾಡಲಾಯಿತು. ಈ ಹೊಸ ಮಂದಿರವನ್ನು 5ನೇ ಮೇ 1975 ರಂದು ದೇವಾಲಯದ ಸಂಸ್ಥಾಪಕರಾದ ಶ್ರೀ.ವಕೀಲ್ ಜವಳಿಯವರು ಮಂದಿರದ ಟ್ರಸ್ಟ್ ನ ಸದಸ್ಯರುಗಳು ಹಾಗೂ ಸಾವಿರಾರು ಸ್ಥಳೀಯ ಸಾಯಿಭಕ್ತರ ಸಮ್ಮುಖದಲ್ಲಿ ಉದ್ಘಾಟಿಸಿದರು.  

ಪ್ರಸ್ತುತ ಮಂದಿರದ ಆಡಳಿತವನ್ನು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯು ವಹಿಸಿಕೊಂಡಿದ್ದು ಮಂದಿರದ ನಿರ್ವಾಹಕರು ಮಂದಿರದ ದಿನನಿತ್ಯದ ಆಗು ಹೋಗುಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದಾರೆ. 

ಮಂದಿರದಲ್ಲಿ 4 ಅಡಿ ಎತ್ತರದ ಸುಂದರವಾದ ಅಮೃತಶಿಲೆಯ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಅಲ್ಲದೇ, ಶ್ರೀ ಸಾಯಿಬಾಬಾರವರ ವಿಗ್ರಹದ ಮುಂದೆ ಇರುವಂತೆ ಅಮೃತಶಿಲೆಯ ಪಾದುಕೆಗಳನ್ನು ಸಹ ಪ್ರತಿಷ್ಟಾಪಿಸಲಾಗಿದೆ. 

ಪವಿತ್ರ ಧುನಿ, ಗುರುಸ್ಥಾನ, ದತ್ತ ಮಂದಿರ (ಒಂದು ಅಡಿ ಎತ್ತರದ ಸುಂದರ ಅಮೃತ ಶಿಲೆಯ ದತ್ತಾತ್ರೇಯ), ನಂದಾದೀಪ, ಶ್ರೀ ಸಾಯಿಬಾಬಾರವರ ಪ್ರೀತಿಯ ಅಶ್ವವಾದ ಶ್ಯಾಮಕರ್ಣನ ಪ್ರತಿರೂಪ, ಕಪ್ಪು ಶಿಲೆಯ ನಾಗದೇವತೆಗಳ ವಿಗ್ರಹಗಳು, ದಕ್ಷಿಣಮುಖಿ ಹನುಮಾನ್ ಮಂದಿರ ಹಾಗೂ ಗೋಶಾಲೆಗಳನ್ನು ಸಹ ಮಂದಿರದ ಆವರಣದಲ್ಲಿ ಪ್ರತಿಷ್ಟಾಪಿಸಲಾಗಿದೆ. 



 




ದಿನನಿತ್ಯದ ಕಾರ್ಯಕ್ರಮಗಳು: 

ಮಂದಿರದ ಸಮಯ:

6:00 AM to 1:00 PM
4:00 PM to 8:30 PM

ಗುರುವಾರದಂದು ಮಂದಿರವನ್ನು ದಿನವಿಡೀ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ.


ಆರತಿಯ ಸಮಯ:

ಕಾಕಡಾ ಆರತಿ    - 6:00 
ಮಧ್ಯಾನ್ಹ ಆರತಿ  - 12:00 
ಧೂಪಾರತಿ        - 7:00 
ಶೇಜಾರತಿ         - 8:00 

ಗುರುವಾರದಂದು ಮಂದಿರವನ್ನು ದಿನವಿಡೀ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ ಹಾಗೂ ರಾತ್ರಿಯ ಶೇಜಾರತಿಯನ್ನು 10:00 ಗಂಟೆಗೆ ಮಾಡಲಾಗುತ್ತದೆ.

ಪ್ರತಿ ತಿಂಗಳ ಹುಣ್ಣಿಮೆಯ ದಿನದಂದು ಮಂದಿರದಲ್ಲಿ ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತದೆ. 

ವಿಶೇಷ ಉತ್ಸವದ ದಿನಗಳು:

1.ಶ್ರೀರಾಮನವಮಿ 
2.ಗುರುಪೂರ್ಣಿಮೆ 
3.ವಿಜಯದಶಮಿ 
4.ದತ್ತ ಜಯಂತಿ 
5.ಹನುಮಾನ್ ಜಯಂತಿ 

ಮಂದಿರದ ಸಾಮಾಜಿಕ ಕಾರ್ಯಚಟುವಟಿಕೆಗಳು:

ಹನುಮಾನ್ ಮಂದಿರದಲ್ಲಿ ಹಾಗೂ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪ್ರತಿನಿತ್ಯ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

ಮಂದಿರದ ವಿಳಾಸ ಹಾಗೂ ಮಾರ್ಗಸೂಚಿ: 

ಸ್ಥಳ: 
 ಕಾರ್ಪೊರೇಷನ್  ಕ್ವಾರ್ಟರ್ಸ್ ನ ಹತ್ತಿರ, ಮೊದಲನೇ ರೈಲ್ವೇ ಗೇಟ್, ತಿಲಕವಾಡಿ, ಬೆಳಗಾಂ. 

ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ 
ಓಂ ಸಾಯಿ ಸಮಾಜ, 
ಮೊದಲನೇ ರೈಲ್ವೇ ಗೇಟ್, 
ಕಾರ್ಪೋರೇಷನ್ ಕ್ವಾರ್ಟರ್ಸ್ ನ ಹತ್ತಿರ, 
ತಿಲಕವಾಡಿ, 
ಬೆಳಗಾಂ-590 006,
ಕರ್ನಾಟಕ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿ: 
ಶ್ರೀ.ರವಿ - ನಿರ್ವಾಹಕರು 

ದೂರವಾಣಿ ಸಂಖ್ಯೆಗಳು: 
+91 831 2464920/+91 94481 58115

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment