Friday, October 29, 2010

ಬೆಂಗಳೂರಿನ ಸಾಯಿಬಾಬಾ ಮಂದಿರ - ಸದ್ಗುರು ಶ್ರೀ.ಶ್ರೀ.ಶ್ರೀ.ಶಿರಡಿ ಸಾಯಿಬಾಬಾ ಮಂದಿರ, ತೊಕತಿಮ್ಮನ ದೊಡ್ಡಿ, ರಾವಗೊಡ್ಲು ಗೇಟ್, ಕನಕಪುರ ರಸ್ತೆ, ಬೆಂಗಳೂರು.

ಈ ಸಾಯಿ ಮಂದಿರವು ಕನಕಪುರ ಮುಖ್ಯ ರಸ್ತೆಯಲ್ಲಿ 30 ಕಿಲೋಮೀಟರ್ ಸಾಗಿದರೆ ಬಲಭಾಗದಲ್ಲಿ ರಾವಗೊಡ್ಲು ಗೇಟ್ ಬಳಿ ಇದೆ. ಈ ಮಂದಿರದ ವಿಶೇಷತೆಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

ಮಂದಿರದ ವಿಶೇಷತೆಗಳು: 

  • ಈ ಮಂದಿರವು 22ನೇ ಫೆಬ್ರವರಿ 2009 ರಂದು ಉದ್ಘಾಟನೆಗೊಂಡಿತು. 
  • ಈ ಮಂದಿರವನ್ನು ಯಾವುದೇ ಜನಸಹಾಯವನ್ನು ಪಡೆಯದೇ ನಿರ್ಮಿಸಲಾಗಿದೆ. 
  • ಈ ಮಂದಿರದಲ್ಲಿರುವ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹವು ಶಿರಡಿಯ ಸಮಾಧಿ ಮಂದಿರದಲ್ಲಿರುವ ವಿಗ್ರದಂತೆಯೇ ಕಂಡುಬರುತ್ತದೆ. 
  • ಈ ಮಂದಿರವನ್ನು ಶಿರಡಿಯಲ್ಲಿರುವಂತೆ ಅದೇ ಮಾದರಿಯ ಕಲ್ಲುಗಳಿಂದ ನಿರ್ಮಿಸಲಾಗಿದೆ. 
  • ಶಿರಡಿಯ ಸಮಾಧಿಮಂದಿರದಲ್ಲಿರುವಂತೆ ಸಾಯಿಬಾಬಾರವರ ವಿಗ್ರಹದ ಎದುರಿಗೆ ದೇವಾಲಯದ ಮುಂಭಾಗದಲ್ಲಿ ನಂದಿಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. 
  • ದೇವಾಲಯದ ಹೊರಭಾಗದ ಬಲಭಾಗದಲ್ಲಿ ಗಣೇಶ, ದತ್ತಾತ್ರೇಯ ಮತ್ತು ಸುಬ್ರಮಣ್ಯಸ್ವಾಮಿಯ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ. 
  • ಪವಿತ್ರ ಧುನಿಯನ್ನು ದೇವಾಲಯದ ಹೊರಭಾಗದ ಎಡಭಾಗದಲ್ಲಿ ನಿರ್ಮಿಸಲಾಗಿದೆ. ಧುನಿಯಿರುವ ಪ್ರಾಕಾರದಲ್ಲಿ ಆಳೆತ್ತರದ ದ್ವಾರಕಾಮಾಯಿ ಸಾಯಿಬಾಬಾರವರ ಭಾವಚಿತ್ರವನ್ನು ತೂಗುಹಾಕಲಾಗಿದೆ. 
  • ಧುನಿಯ ಪಕ್ಕದಲ್ಲಿ ಒಂದು ಔದುಂಬರ ವೃಕ್ಷವು ತಾನೇ ತಾನಾಗಿ ಉದ್ಭವವಾಗಿದೆ. 
  • ದೇವಾಲಯದ ಪಕ್ಕದಲ್ಲಿ ಮತ್ತು ಹಿಂಭಾಗದಲ್ಲಿ ಬೇವಿನ ಮರಗಳು ತಾವಾಗಿಯೇ ಉದ್ಭವವಾಗಿವೆ. 
  • ಪಂಚಲೋಹದ ಸುಂದರ ಸಾಯಿಬಾಬಾರವರ ವಿಗ್ರಹವಿದ್ದು ಅದನ್ನು ನಿತ್ಯ ಅಭಿಷೇಕಕ್ಕೆ ಬಳಸಲಾಗುತ್ತದೆ. 
  • ದೇವಾಲಯದ ಆವರಣದ ಹೊರಭಾಗದ ಮಧ್ಯ ಭಾಗದಲ್ಲಿ ಸ್ಥೂಪವನ್ನು ನಿರ್ಮಿಸಲಾಗಿದೆ. 
 ದೇವಾಲಯದ ಹೊರನೋಟ 

 ಗಣೇಶ, ದತ್ತಾತ್ರೇಯ ಮತ್ತು ಸುಬ್ರಮಣ್ಯ ದೇವರ ವಿಗ್ರಹಗಳು 

ಶಿರಡಿ ಸಾಯಿಬಾಬಾರವರ ಸುಂದರ ಅಮೃತಶಿಲೆಯ ವಿಗ್ರಹ 

ಪವಿತ್ರ ಧುನಿ ಮಾ ಮತ್ತು ದ್ವಾರಕಾಮಾಯಿ ಬಾಬಾರವರ ಭಾವಚಿತ್ರ 

ಧುನಿಯ ಪಕ್ಕದಲ್ಲಿರುವ ಬೇವಿನ ಮರ 

ದೇವಾಲಯದ ಕಾರ್ಯಚಟುವಟಿಕೆಗಳು 

ಪ್ರತಿನಿತ್ಯದ ಕಾರ್ಯಕ್ರಮಗಳು:

ಆರತಿಯ ಸಮಯ  
ಆರತಿ
ಸಮಯ
ಕಾಕಡಾ ಆರತಿ 6:30am
ಚೋಟ ಆರತಿ 9:30am
ಮಧ್ಯಾನ್ಹ ಆರತಿ 12:00pm
ಧೂಪಾರತಿ 6.00pm
ಶೇಜಾರತಿ 8:00pm

ಪ್ರತಿದಿನ ಬೆಳಗ್ಗೆ 10 ಘಂಟೆಯಿಂದ 11 ಘಂಟೆಯವರೆಗೆ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಅಭಿಷೇಕ ಮಾಡಲು ಇಚ್ಚಿಸುವ ಸಾಯಿಭಕ್ತರು ಮುಂಚಿತವಾಗಿ 250 /- ರುಪಾಯಿಗಳನ್ನು ಕೊಟ್ಟು ರಸೀದಿ ಪಡೆಯತಕ್ಕದ್ದು. ಸಾಯಿಭಕ್ತರು ಯಾವುದೇ ಪೂಜಾಸಾಮಗ್ರಿಗಳನ್ನು ತರುವ ಅವಶ್ಯಕತೆಯಿಲ್ಲ. 

ಧುನಿ ಪೂಜೆಯನ್ನು ಪ್ರತಿದಿನ ಬೆಳಗ್ಗೆ 10 ಘಂಟೆಯಿಂದ 12 ಘಂಟೆಯ ವರೆಗೆ ಮತ್ತು ಸಂಜೆ 5 ಘಂಟೆಯಿಂದ 6 ಘಂಟೆಯವರೆಗೆ ಮಾಡಲಾಗುತ್ತದೆ. ಧುನಿ ಪೂಜೆ ಮಾಡಲು ಇಚ್ಚಿಸುವ ಸಾಯಿಭಕ್ತರು 51 /- ರುಪಾಯಿಗಳನ್ನು ನೀಡಿ ರಸೀದಿಯನ್ನು ಪಡೆಯತಕ್ಕದ್ದು. ಸಾಯಿಭಕ್ತರು ಯಾವುದೇ ಪೂಜಾಸಾಮಗ್ರಿಗಳನ್ನು ತರುವ ಅವಶ್ಯಕತೆಯಿಲ್ಲ.              

ವಿಶೇಷ ದಿನಗಳು:


ಪ್ರತಿ ತಿಂಗಳ ಹುಣ್ಣಿಮೆಯಂದು ಮಧ್ಯಾನ್ಹ 3 ಘಂಟೆಯಿಂದ 5 ಘಂಟೆಯವರೆಗೆ ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ. ಸೇವೆ ಮಾಡಿಸಲು ಇಚ್ಚಿಸುವ ಸಾಯಿಭಕ್ತರು 250 /- ರುಪಾಯಿಗಳನ್ನು ಮುಂಗಡವಾಗಿ ನೀಡಿ ರಸೀದಿಯನ್ನು ಪಡೆಯತಕ್ಕದ್ದು. ಸಾಯಿಭಕ್ತರು ಯಾವುದೇ ಪೂಜಾಸಾಮಗ್ರಿಗಳನ್ನು ತರುವ ಅವಶ್ಯಕತೆಯಿಲ್ಲ. 

ವಿಶೇಷ ಉತ್ಸವದ ದಿನಗಳು:  

ಪ್ರತಿವರ್ಷದ 22 ನೇ ಫೆಬ್ರವರಿ ದೇವಾಲಯದ ವಾರ್ಷಿಕೋತ್ಸವ 
ಶ್ರೀರಾಮನವಮಿ 
ಗುರುಪೂರ್ಣಿಮೆ 
ವಿಜಯದಶಮಿ 
ದತ್ತಜಯಂತಿ                                     

ಮೇಲಿನ ಎಲ್ಲಾ ವಿಶೇಷ ಉತ್ಸವದ ದಿನಗಳಂದು ಬೆಳಗಿನಿಂದ ರಾತ್ರಿಯವರೆಗೂ ವಿವಿಧ ಭಜನೆ ಮಂಡಳಿಯವರಿಂದ ವಿಶೇಷ ಭಜನೆ ಕಾರ್ಯಕ್ರಮಗಳು ಮತ್ತು ಮಹಾಪ್ರಸಾದದ ವ್ಯವಸ್ಥೆ ಇರುತ್ತದೆ. 


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:

ವಿಳಾಸ:
ಸದ್ಗುರು ಶ್ರೀ.ಶ್ರೀ.ಶ್ರೀ.ಶಿರಡಿ ಸಾಯಿಬಾಬಾ ಮಂದಿರ
ತೊಕತಿಮ್ಮನ ದೊಡ್ಡಿ, 30ನೇ ಕಿಲೋಮೀಟರ್ ಮೈಲಿಗಲ್ಲು,  
ರಾವಗೊಡ್ಲು ಗೇಟ್, ಕನಕಪುರ ರಸ್ತೆ, ಬೆಂಗಳೂರು.

ಸಂಪರ್ಕಿಸಬೇಕಾದ ವ್ಯಕ್ತಿ:


ಶ್ರೀ.ಗೋಪಿಕುಮಾರ್ 


ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:


93412-13523 / 98457-71188

ಮಾರ್ಗಸೂಚಿ:

ಕನಕಪುರ ರಸ್ತೆಯ 30ನೇ ಕಿಲೋಮೀಟರ್ ಮೈಲಿಗಲ್ಲಿನ ಬಳಿ ರಾವಗೊಡ್ಲು ಬಸ್ ನಿಲ್ಧಾಣದಲ್ಲಿ ಇಳಿದು ಸುಮಾರು ಅರ್ಧ ಕಿಲೋಮೀಟರ್ ಕ್ರಮಿಸಿದರೆ ದೇವಾಲಯ ಸಿಗುತ್ತದೆ. ಈ ಮಂದಿರಕ್ಕೆ ಬೆಂಗಳೂರು ಬಸ್ ನಿಲ್ದಾಣ ಮತ್ತು ರೈಲ್ವೇ ನಿಲ್ದಾಣದಿಂದ ನೇರ ಬಸ್ ಸೌಕರ್ಯವಿದೆ.

 ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment