Thursday, October 21, 2010

ಬೆಂಗಳೂರಿನ ಸಾಯಿ ಮಂದಿರ - ಶ್ರೀ ಸದ್ಗುರು ಶಿರಡಿ ಸಾಯಿಬಾಬಾ ಮಠ - ಎನ್.ಜಿ.ಆರ್.ಬಡಾವಣೆ, ರೂಪೇನ ಅಗ್ರಹಾರ - ಕೃಪೆ : ಸಾಯಿಅಮೃತಧಾರಾ.ಕಾಂ 

ಶ್ರೀ ಸದ್ಗುರು ಶಿರಡಿ ಸಾಯಿಬಾಬಾ ಮಠವು ಬೆಂಗಳೂರಿನ ದಕ್ಷಿಣ ಭಾಗದಲ್ಲಿನ ರೂಪೇನ ಅಗ್ರಹಾರದ ಎನ್.ಜಿ.ಆರ್ ಬಡಾವಣೆಯಲ್ಲಿದೆ. ಮಡಿವಾಳದಿಂದ ಹೊಸೂರಿಗೆ ಹೋಗುವ ಮಾರ್ಗದಲ್ಲಿ ಬಲಭಾಗದಲ್ಲಿ ಈ ಮಂದಿರವಿರುತ್ತದೆ. ಈ ದೇವಾಲಯದ ವಿಶೇಷತೆಗಳನ್ನು ಈ ಕೆಳಗೆ ಸಾಯಿಭಕ್ತರ ಅನುಕೂಲಕ್ಕಾಗಿ ಕೊಡಲಾಗಿದೆ.
ದೇವಾಲಯದ ರಾಜಗೋಪುರ 

ದೇವಾಲಯದ ನಾಮಫಲಕ

ಈ ದೇವಾಲಯವು 3 ದೇವಾಲಯಗಳನ್ನು ಒಳಗೊಂಡಿದ್ದು ಅದರ ವಿವರಗಳು ಈ ರೀತಿಯಿದೆ:

ದೇವಾಲಯದ ಪ್ರಾಂಗಣದಲ್ಲಿ ಸಿಗುವ ಮೊದಲನೇ ದೇವಾಲಯವನ್ನು 20ನೇ  ಮೇ 1970 ರಂದು ಸಾಯಿ ಮಹಾಭಕ್ತೆಯಾದ ಶ್ರೀಮತಿ.ಶಿವಮ್ಮ ತಾಯಿಯವರು ಅವರ ಭಕ್ತರ ಸಹಕಾರದೊಂದಿಗೆ ಉದ್ಘಾಟಿಸಿದರು.  ಈ ದೇವಾಲಯದ ಭೂಮಿಯನ್ನು ದಿವಂಗತ ನಾರಾಯಣ ರೆಡ್ಡಿಯವರು ದಾನವಾಗಿ ನೀಡಿದ್ದಾರೆ. ಈ ದೇವಾಲಯದ ಪ್ರವೇಶ ದ್ವಾರದಲ್ಲಿ ಶಿರಡಿಯಲ್ಲಿ ಇರುವಂತೆ ನಂದಿಯ ವಿಗ್ರಹವಿದೆ. ನಂದಿಯ ವಿಗ್ರಹದ ಬಲಭಾಗಕ್ಕೆ ನವಗ್ರಹ ದೇವರುಗಳನ್ನು ಸ್ಥಾಪಿಸಲಾಗಿದೆ. ದೇವಾಲಯದ ಗರ್ಭಗುಡಿಯಲ್ಲಿ ಕಪ್ಪು ಶಿಲೆಯ ಶಿರಡಿ ಸಾಯಿಬಾಬಾ, ಗಣಪತಿ ಮತ್ತು ಸುಬ್ರಮಣ್ಯ ದೇವರುಗಳ ವಿಗ್ರಹವಿದೆ. ಸಾಯಿಬಾಬಾರವರ ವಿಗ್ರಹದ ಕೆಳಭಾಗಕ್ಕೆ ಸರಿಯಾಗಿ ನೆಲಮಾಳಿಗೆಯಲ್ಲಿ ಶಿವಮ್ಮ ತಾಯಿಯವರ ಸಮಾಧಿಯನ್ನು ನಿರ್ಮಿಸಲಾಗಿದೆ. 

ದೇವಾಲಯದ ಹೊರನೋಟ 

ನಂದಿಯ ವಿಗ್ರಹ 

ನವಗ್ರಹಗಳು

ಗರ್ಭಗುಡಿಯಲ್ಲಿರುವ ಕಪ್ಪು ಶಿಲೆಯ ಗಣಪತಿ, ಸಾಯಿಬಾಬಾ ಮತ್ತು ಸುಬ್ರಮಣ್ಯ ದೇವರ ವಿಗ್ರಹಗಳು 

ಶಿವಮ್ಮ ತಾಯಿಯವರ ಸಮಾಧಿ 

ದೇವಾಲಯದ ಪ್ರಾಂಗಣದಲ್ಲಿ ಸಿಗುವ ಎರಡನೇ ದೇವಾಲಯವು ಸುಮಾರು 50 ವರ್ಷಗಳಷ್ಟು ಹಳೆಯದಾಗಿದ್ದು ನಿರ್ಮಾಣದ ವರ್ಷದ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಈ ಮಂದಿರವನ್ನು ಕೂಡ ಶಿವಮ್ಮ ತಾಯಿಯವರು ಭಕ್ತರ ಸಹಕಾರದೊಂದಿಗೆ ಉದ್ಘಾಟಿಸಿರುತ್ತಾರೆ. ಈ ದೇವಾಲಯದ ಮುಂಭಾಗದಲ್ಲಿ ತುಳಸಿ ಬೃಂದಾವನವಿದೆ. ದೇವಾಲಯದ ದ್ವಾರದಲ್ಲಿ ಶಿವಮ್ಮ ತಾಯಿಯವರು ಕುಳಿತುಕೊಳ್ಳುತ್ತಿದ್ದ ಜಗುಲಿಯಿದೆ. ದೇವಾಲಯದ ಒಳಗಡೆ ಎಡಭಾಗದಲ್ಲಿ ಶಿವಮ್ಮ ತಾಯಿಯವರು ಸದಾಕಾಲ ಇರುತ್ತಿದ್ದ ಹಾಗೂ ಮಲಗಿಕೊಳ್ಳುತ್ತಿದ್ದ ಜಾಗದಲ್ಲಿ ಶಿವಮ್ಮ ತಾಯಿಯವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಈ ಸ್ಥಳದಲ್ಲಿ ಶಿವಮ್ಮ ತಾಯಿಯವರು 9 ವರ್ಷಗಳ ಕಾಲ ತಪಸ್ಸು ಮಾಡಿರುವರೆಂದು ಹೇಳಲಾಗುತ್ತದೆ. ಈ ಮಂದಿರದ ಗರ್ಭಗುಡಿಯಲ್ಲಿ ನಾಗಸಾಯಿಯ ಬೆಳ್ಳಿಯ ವಿಗ್ರಹವಿದೆ.
ತುಳಸಿ ಬೃಂದಾವನ 

ಶಿವಮ್ಮ ತಾಯಿ ಕುಳಿತುಕೊಳ್ಳುತ್ತಿದ್ದ ಜಗುಲಿ


ಶಿವಮ್ಮ ತಾಯಿಯವರು ತಂಗಿದ್ದ ಮತ್ತು ಮಲಗಿಕೊಳ್ಳುತ್ತಿದ್ದ ಸ್ಥಳದಲ್ಲಿರುವ ಅವರ ವಿಗ್ರಹ

ಗರ್ಭಗುಡಿಯಲ್ಲಿರುವ ಬೆಳ್ಳಿಯ ನಾಗಸಾಯಿಯ ವಿಗ್ರಹ

ದೇವಾಲಯದ ಪ್ರಾಂಗಣದಲ್ಲಿ ಸಿಗುವ 3ನೇ ಮಂದಿರವೇ ದ್ವಾರಕಾಮಾಯಿ. ಈ ಪವಿತ್ರ ಸ್ಥಳವನ್ನು 10 ನೇ ಫೆಬ್ರವರಿ 1989 ರಂದು ಸ್ವತಃ ಶಿವಮ್ಮ ತಾಯಿಯವರೇ ಉದ್ಘಾಟನೆ ಮಾಡಿರುತ್ತಾರೆ. ಈ ಸ್ಥಳದಲ್ಲಿ ಪ್ರಪಂಚದಲ್ಲಿ ಎಲ್ಲೂ ಕೂಡ ಕಾಣಸಿಗದ ಸಾಯಿಬಾಬಾರವರ "ಅಮೃತ ಶಿಲೆಯ ಭಿಕ್ಷಾಟನ ವಿಗ್ರಹ" ವನ್ನು ಸ್ಥಾಪಿಸಲಾಗಿದೆ. ಶಿವಮ್ಮ ತಾಯಿಯವರು 1918 ನೇ ಇಸವಿಯಲ್ಲಿ ಸಾಯಿಬಾಬಾರವರು ಜೀವಂತರಾಗಿದ್ದಾಗ ಅವರನ್ನು ಭೇಟಿ ಮಾಡುವ ಸೌಭಾಗ್ಯವನ್ನು ಪಡೆದಿದ್ದ ಸಾಯಿ ಮಹಾಭಕ್ತೆ. ಉದ್ಘಾಟನಾ ಭಾಷಣವನ್ನು ಚಿನ್ಮಯ ಮಿಶನ್ ನ ಸ್ವಾಮಿ ಬ್ರಹ್ಮಾನಂದ ರವರು ಮತ್ತು ದ್ವಾರಕಾ ಬದರಿಕಾಶ್ರಮದ ಸ್ವಾಮಿ ವಿದ್ಯಾ ನಾರಾಯಣ ತೀರ್ಥರವರು ಮಾಡಿದರು. ಸಾಯಿ ಆಧ್ಯಾತ್ಮಿಕ ಕೇಂದ್ರದ ಶ್ರೀ.ಆರ್.ಶೇಷಾದ್ರಿಯವರು ಮತ್ತು ಶ್ರೀ.ಪಿ.ಎಸ್.ನಾರಾಯಣ ರಾವ್ ರವರು ನೆರೆದಿದ್ದ ಸಾಯಿಭಕ್ತರನ್ನು ಉದ್ದೇಶಿಸಿ ಈ ಮಂದಿರದ ವಿಶೇಷತೆಯ ಬಗ್ಗೆ ನುಡಿದರು. ಖ್ಯಾತ ಸಾಯಿ ಭಜನ ಗಾಯಕ ಶ್ರೀ.ಹರಿಹರನ್ ರವರಿಂದ ಸುಶ್ರಾವ್ಯವಾದ ಭಜನ ಕಾರ್ಯಕ್ರಮ ನಡೆಯಿತು. ದ್ವಾರಕಾಮಾಯಿಯಲ್ಲಿ ಅಮೃತಶಿಲೆಯ ಭಿಕ್ಷಾಟನ ವಿಗ್ರಹವಲ್ಲದೇ ಮರದ ಪಲ್ಲಕ್ಕಿ, ಆಳೆತ್ತರದ ದ್ವಾರಕಾಮಾಯಿ ಸಾಯಿಬಾಬಾರವರ ಚಿತ್ರಪಟ, ಸಾಯಿಬಾಬಾ ಮತ್ತು ಉಪಾಸಿನಿ ಬಾಬಾರವರ ತೈಲ ಚಿತ್ರಗಳು ಕಂಡುಬರುತ್ತವೆ. 

ದ್ವಾರಕಾಮಾಯಿಯ ಹೊರನೋಟ 

ಶಿವಮ್ಮ ತಾಯಿಯವರು ಭಿಕ್ಷಾಟನೆ ವಿಗ್ರಹದ ಪ್ರತಿಷ್ಟಾಪನೆ ನೆರವೇರಿಸುತ್ತಿರುವುದು

ಪ್ರಪಂಚದ ಏಕೈಕ ಭಿಕ್ಷಾಟನೆ ವಿಗ್ರಹದ ಮನೋಹರ ನೋಟ 

 ಸಾಯಿಬಾಬಾರವರ ಮರದ ಪಲ್ಲಕ್ಕಿ 

ದ್ವಾರಕಾಮಾಯಿ ಸಾಯಿಬಾಬಾನ ಆಳೆತ್ತರದ ಭಾವಚಿತ್ರ 

ಶಿವಮ್ಮ ತಾಯಿ, ಸಾಯಿಬಾಬಾ ಮತ್ತು ಉಪಾಸಿನಿ ಬಾಬಾರವರ ತೈಲಚಿತ್ರಗಳು 

ದೇವಾಲಯದ ಕಾರ್ಯಚಟುವಟಿಕೆಗಳು: 

ಆರತಿಯ ಸಮಯ 
ಆರತಿ
ಸಮಯ
ಕಾಕಡ ಆರತಿ
6:30 am
ಮಧ್ಯಾನ್ಹ ಆರತಿ
12:00 pm
ಧೂಪಾರತಿ
6.15 pm
ಶೇಜಾರತಿ
8:00 pm


ವಿಶೇಷ ಉತ್ಸವದ ದಿನಗಳು: 

೧. ಶಿವರಾತ್ರಿ
೨. ಶ್ರೀರಾಮನವಮಿ
೩. ಶಿವಮ್ಮ ತಾಯಿಯವರ ಹುಟ್ಟಿದ ದಿನ ಪ್ರತಿ ವರ್ಷದ 29ನೇ ಮೇ
೪. ಶಿವಮ್ಮ ತಾಯಿಯವರ ಸಮಾಧಿ ದಿವಸ ಪ್ರತಿ ವರ್ಷದ 11ನೇ ಜುಲೈ
೫. ಗುರುಪೂರ್ಣಿಮೆ
೬. ವಿಜಯದಶಮಿ
೭ ಪ್ರತಿ ವರ್ಷದ ಕಾರ್ತೀಕ ಮಾಸದ ಹುಣ್ಣಿಮೆಯ ದಿನ ಲಕ್ಷದೀಪೋತ್ಸವ

ಸಾಮಾಜಿಕ ಕಾರ್ಯ ಚಟುವಟಿಕೆಗಳು:

೧. ಶ್ರೀ ಸದ್ಗುರು ಶಿರಡಿ ಸಾಯಿಬಾಬಾ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಶಿವಮ್ಮ ತಾಯಿಯವರು ಆರಂಭಿಸಿದ್ದು ಈಗ ರಾಜ್ಯ ಸರ್ಕಾರದ ಅನುದಾನದೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.

ಶಾಲೆಯ ಹೊರನೋಟ 

೨. ಶ್ರೀಮತಿ ಮುನಿಯಮ್ಮ ತಾಯಿ ವೃದ್ಧಾಶ್ರಮವನ್ನು ಈ ದೇವಾಲಯದ ವತಿಯಿಂದ ನಡೆಸಲಾಗುತ್ತಿದ್ದು 14 ಮಂದಿ ವಯೋವೃದ್ದರಿಗೆ ಉಚಿತ ಊಟ ವಸತಿಯೊಂದಿಗೆ ಆಶ್ರಯ ಕಲ್ಪಿಸಲಾಗಿದೆ.

ವೃದ್ದಾಶ್ರಮದ ಹೊರನೋಟ 

೩. ಪ್ರತಿ ಗುರುವಾರದಂದು ಮಹಾಪ್ರಸಾದ ವ್ಯವಸ್ಥೆ ಇರುತ್ತದೆ.

೪. ಪ್ರತಿ ವಿಶೇಷ ಹಬ್ಬದ ಮತ್ತು ಉತ್ಸವದ ದಿನಗಳಂದು ಅನ್ನದಾನ ಕಾರ್ಯಕ್ರಮವಿರುತ್ತದೆ.

ದೇವಾಲಯದ ಸಂಪರ್ಕದ ವಿವರಗಳು: 

ವಿಳಾಸ: 

ಶ್ರೀ ಸದ್ಗುರು ಶಿರಡಿ ಸಾಯಿಬಾಬಾ ಮಠ
ಎನ್.ಜಿ.ಆರ್.ಬಡಾವಣೆ, ರೂಪೇನ ಅಗ್ರಹಾರ
ಹೊಸೂರು ಮುಖ್ಯ ರಸ್ತೆಯ ಪಕ್ಕ
ಮಡಿವಾಳ ಅಂಚೆ, ಬೆಂಗಳೂರು-560 068.

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀಮತಿ ಶಾರದಮ್ಮ (ದಿವಂಗತ ನಾರಾಯಣ ರೆಡ್ಡಿಯವರ ಧರ್ಮಪತ್ನಿ) / ಶ್ರೀ ಗೋಪಾಲ ರೆಡ್ಡಿ / ಶ್ರೀಮತಿ ಕಮಲಮ್ಮ / ಶ್ರೀ.ಸಂಪಂಗಿ (ರಾಮು) / ಶ್ರೀ.ವೆಂಕಟರಾಜು

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 

080 - 25732522 / 080 - 22226465 / 9880133408 / 9945531187

ಈ ಮೇಲ್ ವಿಳಾಸ: 

venkataraju71@gmail.com
 
ಮಾರ್ಗಸೂಚಿ: 

ರೂಪೇನ ಅಗ್ರಹಾರದ ಬಸ್ ನಿಲ್ದಾಣದಲ್ಲಿ ಇಳಿದು 5 ನಿಮಿಷ ನಡೆದರೆ ಈ ದೇವಾಲಯ ಸಿಗುತ್ತದೆ.

ಕನ್ನಡ ಅನುವಾದ : ಶ್ರೀಕಂಠ ಶರ್ಮ


No comments:

Post a Comment