Friday, October 8, 2010

ಶಿರಡಿ ಸಾಯಿಬಾಬಾರವರ ಹಾಡುಗಳ ಹೊಸ ಕನ್ನಡ ಸಿಡಿ "ದ್ವಾರಕಾಮಾಯಿ ಶ್ರೀ ಶಿರಡಿ ಸಾಯಿ" ಬಿಡುಗಡೆ ಸಮಾರಂಭ - 4ನೇ ಅಕ್ಟೋಬರ್ 2010 , ಬೆಂಗಳೂರು. - ಕೃಪೆ - ಶ್ರೀ. ಕೆ.ಎಂ.ಮೈಲಾರಸ್ವಾಮಿ, ಚಂದನ ಕ್ರಿಯೇಷನ್ಸ್ ಮತ್ತು ಸಾಯಿಅಮೃತಧಾರಾ.ಕಾಂ

"ದ್ವಾರಕಾಮಾಯಿ ಶ್ರೀ ಶಿರಡಿ ಸಾಯಿ" ಸಿಡಿ ಬಿಡುಗಡೆಯ ಸಮಾರಂಭದಲ್ಲಿ ಗಣ್ಯರು

"ದ್ವಾರಕಾಮಾಯಿ ಶ್ರೀ ಶಿರಡಿ ಸಾಯಿ" ಸಿಡಿಯ ಹೊರನೋಟ

ಚಂದನ ಕ್ರಿಯೇಷನ್ಸ್ ವತಿಯಿಂದ ದಿನಾಂಕ 4.10.2010 ರಂದು ಸೋಮವಾರ ಸಂಜೆ 5-40 ಕ್ಕೆ ಬೆಂಗಳೂರು ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಶ್ರೀಯುತ.ಕೆ.ಎಂ.ಮೈಲಾರಸ್ವಾಮಿ ರವರ ಸಾಹಿತ್ಯದ "ದ್ವಾರಕಾಮಾಯಿ ಶ್ರೀ ಶಿರಡಿ ಸಾಯಿ" ಸಿಡಿ ಬಿಡುಗಡೆಯನ್ನು ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತರಾದ ಶ್ರೀ.ಹೆಚ್.ಆರ್.ಶ್ರೀನಿವಾಸ್ ರವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಶ್ರೀ.ಟಿ.ನಾರಾಯಣ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ.ಎ.ಬಿ.ಸೂರ್ಯ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ ಶ್ರೀ.ಎಂ.ಸಿ.ಶ್ರೀನಿವಾಸಯ್ಯ, ಶ್ರೀಮತಿ.ಕೆ.ಎಸ್.ಆಶಾ ಮಾನು, ಅಖಂಡ ಸಾಯಿ ನಾಮ ಸಪ್ತಾಹ ಟ್ರಸ್ಟ್ ನ ಚೇರ್ಮನ್ ಶ್ರೀ.ವಿ.ಎಸ್.ಕುಬೇರ ಹಾಗೂ ಸ್ನೇಹ ಬುಕ್ ಹೌಸ್ ನ ಮಾಲೀಕರಾದ ಶ್ರೀ.ಕೆ.ಬಿ.ಪರಶಿವಪ್ಪ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸದರಿ ಆಡಿಯೋ ಹಾಡುಗಳನ್ನು ಶ್ರೀ.ಕೆ.ಎಂ.ಮೈಲಾರಸ್ವಾಮಿ ರವರು ರಚಿಸಿದ್ದು, ಖ್ಯಾತ ಹಿನ್ನೆಲೆ ಗಾಯಕರಾದ ಶ್ರೀ.ರಮೇಶ್ ಚಂದ್ರ, ಶ್ರೀ.ಅಜಯ್ ವಾರಿಯರ್, ಶ್ರೀಮತಿ.ಕೆ.ಎಸ್.ಸುರೇಖ ಹಾಗೂ ಶ್ರೀ.ವಿ.ಪ್ರೇಮರವರು ಹಾಡಿದ್ದು, ಸಂಗೀತ ನಿರ್ದೇಶನ ಶ್ರೀ.ಶರತ್ ಬಿಳಿನೆಲೆ  ನೀಡಿದ್ದಾರೆ.

ಸಾಯಿ ಸಚ್ಚರಿತೆಯ ಭಜನಾಮಾಲಿಕೆಯು 33 ನಿಮಿಷಗಳನ್ನು ಒಳಗೊಂಡಿದ್ದು, 15 ನಿಮಿಷಗಳ ಬೆಳಗಿನ ಕಾಕಡಾ ಆರತಿ ಹಾಡನ್ನು ಶ್ರೀಮತಿ.ಕೆ.ಎಸ್.ಸುರೇಖರವರು ಹಾಡಿದ್ದಾರೆ. ಒಟ್ಟು 8 ಹಾಡುಗಳಿದ್ದು 80 ನಿಮಿಷಗಳ ಭಕ್ತಿ ಪ್ರಧಾನ ಹಾಡುಗಳನ್ನು ಒಳಗೊಂಡಿದೆ. ಈ ಸಿಡಿಯನ್ನು ಕೊಳ್ಳಲು ಇಚ್ಚಿಸುವ ಸಾಯಿಭಕ್ತರು ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸತಕ್ಕದ್ದು.

ಶ್ರೀ.ಕೆ.ಎಂ.ಮೈಲಾರಸ್ವಾಮಿ
ಚಂದನ ಕ್ರಿಯೇಷನ್ಸ್
ನಂ.11, ಗಾಯತ್ರಿ ಬಡಾವಣೆ, ಕೆಂಬ್ರಿಡ್ಜ್ ಶಾಲೆಯ ಹತ್ತಿರ
ಬಸವನಪುರ ಮುಖ್ಯ ರಸ್ತೆ, ದೇವಸಂದ್ರ, ಕೆ.ಆರ್.ಪುರಂ
ಬೆಂಗಳೂರು-560 036.
ಮೊಬೈಲ್ : 99640 62368
ಈ ಮೇಲ್ : mailto:chandanacreations9@gmail.com
ವೆಬ್  ಸೈಟ್ : http://www.chandanacreations.wetpaint.com/

No comments:

Post a Comment