Thursday, October 28, 2010

ಸಾಯಿ ಭಜನ ಗಾಯಕ - ಶ್ರೀ. ಅಜಯ್ ವಾರಿಯರ್ - 28ನೇ ಅಕ್ಟೋಬರ್ 2010 - ಕೃಪೆ : ಸಾಯಿಅಮೃತಧಾರಾ.ಕಾಂ


 ಖ್ಯಾತ ಗಾಯಕ ಶ್ರೀ.ಅಜಯ್ ವಾರಿಯರ್ ರವರು 

ಅಜಯ್ ವಾರಿಯರ್ ರವರು ಪ್ರಖ್ಯಾತ ಚಲನಚಿತ್ರ, ಭಾವಗೀತೆ ಹಾಗೂ ಭಕ್ತಿ ಗೀತೆಗಳ ಗಾಯಕರು. ಇವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದ್ವಾನ್ ಟಿ.ವಿ.ಗೋಪಾಲಕೃಷ್ಣನ್ ರವರ ಬಳಿ ಕಲಿತಿದ್ದಾರೆ. ಇವರು ಕನ್ನಡ, ತಮಿಳು, ಮಲಯಾಳಂ, ತೆಲುಗು, ತುಳು, ಹಿಂದಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಹಲವಾರು ಚಿತ್ರಗೀತೆ, ಭಕ್ತಿ ಗೀತೆಗಳನ್ನು ಹಾಡಿದ್ದಾರೆ. 

ಇವರು ಚಿತ್ರರಂಗದ ದಿಗ್ಗಜರಾದ ಶ್ರೀ.ಎಸ್.ಪಿ.ಬಾಲಸುಬ್ರಮಣ್ಯಂ, ಶ್ರೀಮತಿ.ಕೆ.ಎಸ್.ಚಿತ್ರರವರ ಜೊತೆ ಅನೇಕ ಗೀತೆಗಳನ್ನು ಹಾಡಿರುತ್ತಾರೆ. ಈ ದಿಗ್ಗಜರುಗಳ ಜೊತೆ ಹಾಡಿರುವುದು ತಮ್ಮ ಭಾಗ್ಯವೆಂದು ಇವರು ಹೇಳುತ್ತಾರೆ. ಆಲ್ಲದೇ, ಇವರು ಚಿತ್ರರಂಗದ ಅನೇಕ ಹೆಸರಾಂತ ಸಂಗೀತ ನಿರ್ದೇಶಕರ ಚಿತ್ರಗಳಿಗೆ ಹಾಡಿದ್ದಾರೆ. 

ಸಂಗೀತ ಕ್ಷೇತ್ರದ ಅನೇಕ ಮಜಲುಗಳಲ್ಲಿ ಕೆಲಸ ಮಾಡಿರುವುದು ಅಜಯ್ ವಾರಿಯರ್ ರವರ ವಿಶೇಷತೆ ಮತ್ತು ಇದು ಅವರಿಗೆ ಸಂತಸವನ್ನು ತಂದಿದೆ. ಪ್ರಸಿದ್ದ ರೇಡಿಯೋ ವಾಹಿನಿಗಳಲ್ಲಿ ಮತ್ತು ದೂರದರ್ಶನ ವಾಹಿನಿಗಳಲ್ಲಿ ಇವರು ಅನೇಕ ಕಾರ್ಯಕ್ರಮಗಳನ್ನು ನೀಡಿ ಹೆಸರುವಾಸಿಯಾಗಿದ್ದಾರೆ. ಹೆಸರಾಂತ ಖಾಸಗಿ ಚಾನೆಲ್ ಗಳಾದ ಉದಯ ಟಿವಿ, ಇ ಟಿವಿ, ಏಶಿಯಾನೆಟ್, ಸುವರ್ಣ, ಜೀ ಕನ್ನಡ ಮತ್ತಿತರ ಚಾನೆಲ್ ಗಳಲ್ಲಿ ಇವರು ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅನೇಕ ಧಾರಾವಾಹಿಗಳ ಶೀರ್ಷಿಕೆ ಗೀತೆಗಳನ್ನು ಹಾಡಿದ್ದಾರೆ. 

ಅಜಯ್ ವಾರಿಯರ್ ರವರು ಅನೇಕ ಅಲ್ಬಮ್ ಗಳಲ್ಲಿ ಹಾಡಿದ್ದಾರೆ. ಸುಮಾರು 1300 ಕ್ಕೂ ಹೆಚ್ಚು ಅಲ್ಬಮ್ ಗಳಲ್ಲಿ ಹೆಸರಾಂತ ಸಂಗೀತ ನಿರ್ದೇಶಕರುಗಳಿಗೆ ಹಾಡಿದ ದಾಖಲೆ ಇವರದು.  ಇದರಲ್ಲಿ ಬಹಳಷ್ಟು ಭಕ್ತಿ ಗೀತೆಗಳನ್ನು ಶಿರಡಿ ಸಾಯಿಬಾಬಾರವರ ಮೇಲೆ ಹಾಡಿರುವುದು ಇವರ ವಿಶೇಷತೆ. ಇವರು ಭಾರತದಾದ್ಯಂತ ಸಂಚರಿಸಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆಲ್ಲದೇ, ಇವರು ದಕ್ಷಿಣ ಏಷಿಯಾ ಮತ್ತು ಮಧ್ಯ ಪ್ರಾಚ್ಯ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ಕೂಡ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ತಾವು ನೀಡಿದ ಕಾರ್ಯಕ್ರಮಗಳಿಗಾಗಿ ಅನೇಕ ಪ್ರಶಸ್ತಿಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. 

ಸಂಗೀತ ಕ್ಷೇತ್ರದಲ್ಲಿ ಇನ್ನು ಹೆಚ್ಚು ಹೆಚ್ಹು ಎತ್ತರಕ್ಕೆ ಬೆಳೆಯಬೇಕೆಂಬ ಹಾಗೂ ಸಂಗೀತ ಪ್ರೇಮಿಗಳಿಗೆ ತಮ್ಮ ಗಾಯನದಿಂದ ಇನ್ನು ಹೆಚ್ಚು ಸಂತೋಷವನ್ನು ಕೊಡಬೇಕೆಂಬ ಮಹದಾಸೆ ಅಜಯ್ ವಾರಿಯರ್ ಅವರದು. 

ಅಜಯ್ ರವರ ಸಾಧನೆಯ ಹೆಜ್ಜೆ ಗುರುತುಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕಳಗೆ ಕೊಡಲಾಗಿದೆ:

ಚಲನಚಿತ್ರ ಕ್ಷೇತ್ರ: 

  • ವಿ.ಮನೋಹರ್ ರವರ ಸಂಗೀತ ನಿರ್ದೇಶನದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಕೆ.ಎಸ್.ಚಿತ್ರ  ಅವರೊಂದಿಗೆ ಹಾಡಿದ್ದಾರೆ. 
  • ಪ್ರಸಿದ್ದ ಸಂಗೀತ ನಿರ್ದೇಶಕರುಗಳಾದ ಹಂಸಲೇಖ, ಎಂ.ಎಂ.ಕೀರವಾಣಿ, ಪ್ರವೀಣ್ ಡಿ.ರಾವ್, ಕೆ.ಕಲ್ಯಾಣ್, ಮೋಹನ್, ಸಿತಾರ (ಮಲಯಾಳಂ) ಮತ್ತಿತರರ ಸಂಗೀತ ನಿರ್ದೇಶನದಲ್ಲಿ ಅನೇಕ ಸೋಲೋ ಹಾಗೂ ಯುಗಳ ಗೀತೆಗಳನ್ನು ಹಾಡಿದ್ದಾರೆ. ಅವುಗಳಲ್ಲಿ ಪ್ರಮುಖವಾದ ಚಿತ್ರಗಳು ತನನಂ ತನನಂ, ವೀರ ಮದಕರಿ, ತುತ್ತೂರಿ. 
ರೇಡಿಯೋ ಮತ್ತು ದೂರದರ್ಶನ ಹಾಗೂ ಖಾಸಗಿ ಚಾನೆಲ್ ಗಳು: 

  • ಏಷಿಯಾನೆಟ್ ವಾಹಿನಿಯಲ್ಲಿ ಬರುತ್ತಿರುವ ಪ್ರಸಿದ್ದ ಕಾರ್ಯಕ್ರಮ "ಸಂಗೀತ ಸಾಗರಂ" ನಲ್ಲಿ ಹಾಡಿದ್ದಾರೆ. 
  • ಏಷಿಯಾನೆಟ್ ಮಲಯಾಳಂ ವಾಹಿನಿಯ ಪ್ರಸಿದ್ದ ಕಾರ್ಯಕ್ರಮಗಳಾದ "ಮ್ಯುಸಿಕ್ ಲೈವ್" ಮತ್ತು  "ಲೈಮ್ ಲೈಮ್ ಲೈಟ್" ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. 
  • ಪ್ರಸಿದ್ದ ವಾಹಿನಿಗಳಾದ ಚಂದನ, ಕಾವೇರಿ, ಕೈರಳಿ, ಸುವರ್ಣ, ಉದಯ, ಜೀ ಟಿವಿ, ಇ ಟಿವಿ ಕನ್ನಡ, ಏಷಿಯಾನೆಟ್ ಮಲಯಾಳಂ ಮತ್ತಿತ್ತರ ವಾಹಿನಿಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ ಮತ್ತು ನೀಡುತ್ತಲೂ ಇದ್ದಾರೆ. 
  • ಅನೇಕ ರೇಡಿಯೋ ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ. 
  • ಸುಪ್ಪ್ರಸಿದ್ದ ಕನ್ನಡ ಧಾರಾವಾಹಿಗಳಾದ ಶಿವಲೀಲಾಮೃತ, ಇದು ಕಥೆಯಲ್ಲ ಜೀವನ (ಸುವರ್ಣ ವಾಹಿನಿ) ದಲ್ಲಿ ಶೀರ್ಷಿಕೆ ಗೀತೆಗಳನ್ನು ಹಾಡಿದ್ದಾರೆ. 
ಅಲ್ಬಮ್ ಗಳು (ಕ್ಯಾಸೆಟ್ / ಸಿಡಿಗಳು):

  1. ಇದುವರೆಗೂ ಸರಿ ಸುಮಾರು 7 ಭಾಷೆಗಳಲ್ಲಿ 1300 ಕ್ಕೂ ಹೆಚ್ಚು ಗೀತೆಗಳನ್ನು ಅನೇಕ ಪ್ರಸಿದ್ದ ಸಂಗೀತ ನಿರ್ದೇಶಕರುಗಳ ಮಾರ್ಗದರ್ಶನದಲ್ಲಿ ಹಾಡಿದ್ದಾರೆ. 
  2. ಇವರು ಹಾಡಿದ ಕೆಲವು ಪ್ರಸಿದ್ದ ಸೋಲೋ ಆಲ್ಬಮ್ ಗಳು ಹೀಗಿವೆ: ಹರಿ ಕುಣಿದ, ಸಂಕೀರ್ತನ, ಸ್ತುತಿ ಗೀತಂಗಳ್ , ಶ್ರೀ ಮುಕಾಂಬಿಕಾದೇವಿ ಪುಷ್ಪಾಂಜಲಿ.
ಪ್ರತಿಷ್ಟಿತ ಕಾರ್ಯಕ್ರಮಗಳು: 

  • ಇವರು ಕುವೈತ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಶ್ರೀಮತಿ.ಎಲ್.ಆರ್.ಈಶ್ವರಿ, ಪಿತುಕುಳಿ ಮುರುಗದಾಸ್ ರವರೊಂದಿಗೆ ಹಾಡಿದ್ದಾರೆ. 
  • ಮಲಯಾಳ ಚಿತ್ರರಂಗದ ಪ್ರಸಿದ್ದ ನಟರಾದ ಸುರೇಶ ಗೋಪಿ, ಸಂಯುಕ್ತ ವರ್ಮ, ಚಿಪ್ಪಿ, ಲಾಲು ಅಲೆಕ್ಸ್ ಮತ್ತು ವಿಂದುಜಾ ಮೆನನ್ ರವರೊಂದಿಗೆ ಭೂಮಿಕೆಯನ್ನು ಹಂಚಿಕೊಂಡಿದ್ದಾರೆ. 
  • ದೋಹಾ, ಕತಾರ್ ನ ಕನ್ನಡ ಸಂಘ ಏರ್ಪಡಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕತಾರ್ ನ ಭಾರತೀಯ ರಾಯಭಾರಿ ಕಚೇರಿಯ ಮುಖ್ಯಸ್ಥ ಶ್ರೀ.ರಂಜನ್ ಮಥಾಯ್ ರವರ ಸಮ್ಮುಖದಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಅದೇ ರೀತಿ ಕತಾರ್ ನಲ್ಲಿ ಯ ತುಳು ಕೂಟದ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿದ್ದಾರೆ. 
  • ಬೆಹರೈನ್ ನಲ್ಲಿ ನಡೆದ ಕೀನ್ 4, ಕತಾರ್ ವಿಮಾನಯಾನ ಸಂಸ್ಥೆ ಮತ್ತು ಚಿನ್ಮಯ ಮಿಶನ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. 
  • ಕತಾರ್ ನ ದುಕಾನ್ ದೋಹಾ ನಲ್ಲಿ ನಡೆದ ಖ್ಯಾತ ಗಾಯಕ ಮೊಹಮ್ಮದ್ ರಫಿ ಯವರ ಸ್ಮರಣಾರ್ಥ ಏರ್ಪಡಿಸಿದ್ದ ಸಂಗೀತ ಸಂಜೆಯಲ್ಲಿ ಮೊಹಮ್ಮದ್ ರಫಿಯವರ ಹಳೆಯ ಹಿಂದಿ ಚಿತ್ರ ಗೀತೆಗಳನ್ನು ಹಾಡಿ ಜನರನ್ನು ರಂಜಿಸಿದ್ದಾರೆ. 
  • ಸಿಂಗಪೂರ್ ಮತ್ತು ಮಲೇಶಿಯ ಗಳಲ್ಲಿ ಭಕ್ತಿ ಗೀತೆ ಹಾಗೂ ಭಾವಗೀತೆಗಳ ಕಾರ್ಯಕ್ರಮವನ್ನು ನೀಡಿದ್ದಾರೆ. 
  • ಚಿತ್ರ ಜಗತ್ತಿನ ಖ್ಯಾತರಾದ ಜಯರಾಂ, ಎಸ್.ಜಾನಕಿ, ಪಿ.ಬಿ.ಶ್ರೀನಿವಾಸ್, ರಾಜನ್ ಮತ್ತು ನಾಗೇಂದ್ರ ಇವರೊಡನೆ ಅನೇಕ ಕಾರ್ಯಕ್ರಮಗಳಲ್ಲಿ ಭೂಮಿಕೆಯನ್ನು ಹಂಚಿಕೊಂಡಿದ್ದಾರೆ. 
  • ಮಲಬಾರ್ ಉತ್ಸವ, ಉಡುಪಿ ಉತ್ಸವ, ಕರಾವಳಿ ಉತ್ಸವ ಗಳ ಸಂದರ್ಭದಲ್ಲಿ ಏರ್ಪಡಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನರನ್ನು ರಂಜಿಸಿದ್ದಾರೆ. 
  • ಮಲಯಾಳಮ್ ನ ಪ್ರಸಿದ್ದ ಗಾಯಕರುಗಳಾದ ಎಂ.ಜಿ.ಶ್ರೀಕುಮಾರ್, ವೇಣುಗೋಪಾಲ್, ಮಧು ಬಾಲಕೃಷ್ಣನ್, ಎಸ್.ಪಿ.ಬಾಲಸುಬ್ರಮಣ್ಯಂ, ಕೆ.ಎಸ್.ಚಿತ್ರ ಮತ್ತಿತರರೊಂದಿಗೆ ಇವರು ಹಾಡಿದ್ದಾರೆ. 
ಪ್ರತಿಷ್ಟಿತ ಬಿರುದುಗಳು / ಗೌರವಗಳು:

  • ಕುವೈತ್ ನ ಯು.ಏನ್.ಕ್ಯಾಂಪ್ ರಿಗ್ಗೆ ಯವರು ಕ್ರಿಸ್ಮಸ್ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ "ಶ್ರೇಷ್ಠ ಗಾಯಕ" ಪ್ರಶಸ್ತಿಯನ್ನು ಪಡೆದಿದ್ದಾರೆ. 
  • ಕರ್ನಾಟಕದ ರಾಜ್ಯಪಾಲರ ಎದುರು ಕಾರ್ಯಕ್ರಮವನ್ನು ನೀಡಿ ಅವರಿಂದ ನೆನಪಿನ ಕಾಣಿಕೆ ಹಾಗೂ ಸನ್ಮಾನ ಪತ್ರವನ್ನು ಪಡೆದಿದ್ದಾರೆ. 
  • ಕತಾರ್ ನಲ್ಲಿ ನಡೆದ ಕನ್ನಡ ಸಂಘ ಮತ್ತು ತುಳು ಕೂಟದ ಕಾರ್ಯಕ್ರಮದಲ್ಲಿ "ಸಂಗೀತ ಯೋಗಿ" ಮತ್ತು "ಗಾನ ಸೌರಭ" ಎಂಬ ಪ್ರತಿಷ್ಟಿತ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 
  • ಕತಾರ್ ನ ದೋಹಾ ನಲ್ಲಿ 2008 ರಲ್ಲಿ ನಡೆದ 5ನೇ ವಿಶ್ವ ಕನ್ನಡ ಕೂಟದಲ್ಲಿ "ಗ್ಲೋಬಲ್ ಮ್ಯಾನ್" ಪ್ರಶಸ್ತಿಯನ್ನು ಪಡೆದಿದ್ದಾರೆ. 
  • ಅತಿ ಹೆಚ್ಚು ಕನ್ನಡ ಭಕ್ತಿ ಗೀತೆಗಳನ್ನು ಹಾಡಿದುದಕ್ಕೆ ಕರ್ನಾಟಕ ಸರ್ಕಾರ ನೀಡುವ ಶ್ರೇಷ "ಮಯುರೀ ಪ್ರಶಸ್ತಿ"  ಯನ್ನು ತಮ್ಮದಾಗಿಸಿಕೊಂಡಿದ್ದಾರೆ. 
ಇವರ ಸಂಪರ್ಕದ ವಿವರಗಳು ಈ ಕೆಳಕಂಡಂತೆ ಇವೆ:

ಸಂಪರ್ಕದ ವಿವರಗಳು
ಗಾಯಕರ ಹೆಸರು  ಶ್ರೀ. ಅಜಯ್ ವಾರಿಯರ್
ವಿಳಾಸ ನಂ.156/ 19 , ಗುರು ಕೃಪಾ, 10ನೇ ಮುಖ್ಯ ರಸ್ತೆ, ಶ್ರೀನಗರ, ಬೆಂಗಳೂರು-560 050. ಕರ್ನಾಟಕ.
ದೂರವಾಣಿ
 +91- 98452 29202
ಇ ಮೇಲ್
ಅಂತರ್ಜಾಲ http://www.ajaywarriar.com
ಆಲ್ಬಮ್ ಗಳು ಶ್ರೀ ಸಾಯಿ ಸುಗಂಧ, ದ್ವಾರಕಾಮಾಯಿ ಶ್ರೀ ಶಿರಡಿ ಸಾಯಿ ಮತ್ತು ಇನ್ನು ಹತ್ತು ಹಲವು ಆಲ್ಬಮ್ ಗಳು. 


ಕನ್ನಡ ಅನುವಾದ : ಶ್ರೀಕಂಠ ಶರ್ಮ


No comments:

Post a Comment