Monday, October 10, 2011

ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳಿಂದ ಶಿರಡಿ ಸಾಯಿಬಾಬಾ ಸಂಸ್ಥಾನದ ಶ್ರೀ ಸಾಯಿ ಗಾರ್ಡನ್  ಥೀಮ್ ಪಾರ್ಕ್ ಉತ್ಖನನ ಕಾರ್ಯಕ್ರಮ - ಕೃಪೆ: ಸಾಯಿಅಮೃತಧಾರಾ.ಕಾಂ 

ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ.ಪೃಥ್ವಿರಾಜ್ ಚವಾಣ್ ರವರು ಇದೇ ತಿಂಗಳ 10ನೇ ಅಕ್ಟೋಬರ್ 2011, ಸೋಮವಾರ ಶಿರಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾಯಿಬಾಬಾ ಸಂಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಶ್ರೀ ಸಾಯಿ ಗಾರ್ಡನ್ ಥೀಮ್ ಪಾರ್ಕ್ ನ ಉತ್ಖನನ ಕಾರ್ಯವನ್ನು ನೆರವೇರಿಸಿದರು . ಆ ಸಂದರ್ಭದಲ್ಲಿ ಮಹಾರಾಷ್ಟ್ರದ ಕಂದಾಯ ಸಚಿವರಾದ ಶ್ರೀ.ಬಾಳಾಸಾಹೇಬ್ ತೋರಟ್,  ಕೃಷಿ ಮತ್ತು ಮಾರುಕಟ್ಟೆ ಸಚಿವರಾದ ಶ್ರೀ.ರಾಧಾಕೃಷ್ಣ ವಿಕ್ಹೆ ಪಾಟೀಲ್, ಹಳ್ಳಿಗಾಡು ಅಭಿವೃದ್ಧಿ ಸಚಿವರಾದ ಶ್ರೀ.ಬಾಬನ ರಾವ್ ಪಚ್ಪುಟೆ, ಆಹಾರ, ವಸತಿ ಮತ್ತು ಔಷಧಿಗಳ ರಾಜ್ಯ ಸಚಿವರಾದ ಶ್ರೀ.ಸತೇಜ್ ಪಾಟೀಲ್, ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆ, ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಪಾಂಡುರಂಗ ಅಭಂಗ್, ಡಾ.ಏಕನಾಥ್ ಗೊಂಡ್ಕರ್, ಶ್ರೀ.ಶೈಲೇಶ್ ಕುಟೆ, ಶ್ರೀ.ಸುರೇಶ ವಾಬ್ಲೆ, ಶ್ರೀ.ಕೃಷ್ಣಚಂದ್ರ ಪಾಂಡೆ, ಶ್ರೀ.ಅಶೋಕ್ ಕಂಬೇಕರ್ ಮತ್ತು ಶಿರಡಿ ನಗರ ಪಂಚಾಯತಿಯ ಅಧ್ಯಕ್ಷೆಯಾದ ಶ್ರೀಮತಿ.ಅಲ್ಕಾ ಶೆಜ್ವಾಲ್ ರವರುಗಳು ಕೂಡ ಉಪಸ್ಥಿತರಿದ್ದರು.


ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment