Thursday, October 6, 2011

ಶ್ರೀ ಶಿರಡಿ ಸಾಯಿಬಾಬಾರವರ  93ನೇ ಪುಣ್ಯತಿಥಿ ಉತ್ಸವದ ಆಚರಣೆ - ಎರಡನೇ ದಿನದ ವರದಿ -  ಕೃಪೆ: ಸಾಯಿಅಮೃತಧಾರಾ.ಕಾಂ 

ಶ್ರೀ ಶಿರಡಿ ಸಾಯಿಬಾಬಾರವರ  93ನೇ ಪುಣ್ಯತಿಥಿ ಉತ್ಸವದ ಆಚರಣೆಯ ಅಂಗವಾಗಿ ಇದೇ ತಿಂಗಳ 6ನೇ ಅಕ್ಟೋಬರ್ 2011, ಗುರುವಾರ,  ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ರಾಜಶ್ರೀ ಸಾಸನೆಯವರು ಶಿರಡಿಯ ಸಮಾಧಿ ಮಂದಿರದಲ್ಲಿ ಆರಾಧನಾ ವಿಧಿಯನ್ನು ನೆರವೇರಿಸಿದರು.




ಶ್ರೀ ಶಿರಡಿ ಸಾಯಿಬಾಬಾರವರ  93ನೇ ಪುಣ್ಯತಿಥಿ ಉತ್ಸವದ ಆಚರಣೆಯ ಅಂಗವಾಗಿ ಇದೇ ತಿಂಗಳ 6ನೇ ಅಕ್ಟೋಬರ್ 2011, ಗುರುವಾರ,  ಶಿರಡಿ ಗ್ರಾಮದಲ್ಲಿ ಭಿಕ್ಷಾ ಜೋಳಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆ, ಟ್ರಸ್ಟಿಗಳಾದ ಶ್ರೀ.ಕೃಷ್ಣಚಂದ್ರ ಪಾಂಡೆ, ಶ್ರೀ.ಸುರೇಶ ವಾಬ್ಲೆ ಮತ್ತು ಶ್ರೀ.ಅಶೋಕ್ ಕಂಬೇಕರ್ ರವರುಗಳು ಪಾಲ್ಗೊಂಡಿದ್ದರು.



ಶ್ರೀ ಶಿರಡಿ ಸಾಯಿಬಾಬಾರವರ  93ನೇ ಪುಣ್ಯತಿಥಿ ಉತ್ಸವದ ಆಚರಣೆಯ ಅಂಗವಾಗಿ ಇದೇ ತಿಂಗಳ 6ನೇ ಅಕ್ಟೋಬರ್ 2011, ಗುರುವಾರ,  ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂ ತ್ ಸಾಸನೆ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ರಾಜಶ್ರೀ ಸಾಸನೆಯವರು ಶಿರಡಿಯ ಸಮಾಧಿ ಮಂದಿರದಲ್ಲಿ ಸಾಯಿಬಾಬಾರವರ ಸಮಾಧಿ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಡಾ.ಏಕನಾಥ್ ಗೊಂಡಕರ್,  ಶ್ರೀ.ಕೃಷ್ಣಚಂದ್ರ ಪಾಂಡೆ, ಶ್ರೀ.ಸುರೇಶ ವಾಬ್ಲೆ, ಶ್ರೀ.ಅಶೋಕ್ ಕಂಬೇಕರ್, ಶ್ರೀ.ಶೈಲೇಶ್ ಕುಟೆ ಮತ್ತು ಶ್ರೀ.ರಮಾಕಾಂತ್ ಕಾರ್ಣಿಕ್  ರವರುಗಳು ಕೂಡ ಪಾಲ್ಗೊಂಡಿದ್ದರು.



ಶ್ರೀ ಶಿರಡಿ ಸಾಯಿಬಾಬಾರವರ  93ನೇ ಪುಣ್ಯತಿಥಿ ಉತ್ಸವದ ಆಚರಣೆಯ ಅಂಗವಾಗಿ ಇದೇ ತಿಂಗಳ 6ನೇ ಅಕ್ಟೋಬರ್ 2011, ಗುರುವಾರ,  ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂ ತ್ ಸಾಸನೆಯವರು ಒರಿಯಾ ಭಾಷೆಯ ಶ್ರೀ ಸಾಯಿ ಸಚ್ಚರಿತ್ರೆಯನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ  ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಡಾ.ಏಕನಾಥ್ ಗೊಂಡಕರ್,  ಶ್ರೀ.ಕೃಷ್ಣಚಂದ್ರ ಪಾಂಡೆ, ಶ್ರೀ.ಸುರೇಶ ವಾಬ್ಲೆ, ಶ್ರೀ.ಅಶೋಕ್ ಕಂಬೇಕರ್, ಶ್ರೀ.ಶೈಲೇಶ್ ಕುಟೆ ಮತ್ತು ಉಪ ಕಾರ್ಯಕಾರಿ ಅಧಿಕಾರಿಗಳಾದ ಡಾ.ಯಶವಂತ್ ರಾವ್ ಮಾನೆಯವರುಗಳು ಕೂಡ ಪಾಲ್ಗೊಂಡಿದ್ದರು.



ಮುಂಬೈನ ಸಾಯಿ ಭಕ್ತೆ ಶ್ರೀಮತಿ.ಅಂಬಿಕಾ ನಾಯರ್ ರವರು ಶ್ರೀ ಶಿರಡಿ ಸಾಯಿಬಾಬಾರವರ  93ನೇ ಪುಣ್ಯತಿಥಿ ಉತ್ಸವದ ಆಚರಣೆಯ ಅಂಗವಾಗಿ ಸಮಾಧಿ ಮಂದಿರವನ್ನು ವಿವಿಧ ಬಗೆಯ ಹೂವುಗಳಿಂದ ಬಹಳ ಸುಂದರವಾಗಿ ಅಲಂಕರಿಸಿದ್ದರು.


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment