Saturday, September 24, 2011

ಶಿರಡಿಯ ಸಾಯಿ ಭಕ್ತರಿಂದ ಸಾಯಿಬಾಬನಿಗೆ ಚಿನ್ನದ ಹಾರದ ಅರ್ಪಣೆ - ಕೃಪೆ: ಸಾಯಿಅಮೃತಧಾರಾ.ಕಾಂ 
ಶಿರಡಿಯ ಸಾಯಿ ಭಕ್ತರಾದ ಶ್ರೀ.ಭಾವುಸಾಹೇಬ ಭೋಸ್ಲೆಯವರು 24ನೇ ಸೆಪ್ಟೆಂಬರ್ 2011, ಶನಿವಾರದಂದು ಸಾಯಿಬಾಬಾನಿಗೆ 58 ಗ್ರಾಂ ತೂಕದ 1,44,818 ರುಪಾಯಿ ಬೆಲೆ ಬಾಳುವ ಚಿನ್ನದ ಹಾರವನ್ನು ಕಾಣಿಕೆಯಾಗಿ ಅರ್ಪಿಸಿದರು. ಮಹಾರಾಷ್ಟ್ರ ಸರ್ಕಾರದ ಕೃಷಿ ಮತ್ತು ಮಾರಾಟ ಇಲಾಖೆ ಸಚಿವರಾದ ಶ್ರೀ.ರಾಧಾಕೃಷ್ಣ ವಿಕ್ಹೆ ಪಾಟೀಲ್ ರವರು ಹಾರದ ಪೂಜೆಯನ್ನು ನೆರವೇರಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆ, ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್  ಹಾಗೂ ಶಿರಡಿ ನಗರ ಪಾಲಿಕೆಯ ಅಧ್ಯಕ್ಷೆಯಾದ ಶ್ರೀಮತಿ.ಅಲ್ಕಾ ಶೆಜ್ವಾಲ್ ರವರುಗಳು ಕೂಡ ಉಪಸ್ಥಿತರಿದ್ದರು. 





ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment