Thursday, September 15, 2011

ಕೇಂದ್ರ  ರೈಲ್ವೇ  ಖಾತೆ ರಾಜ್ಯ  ಸಚಿವರ ಶಿರಡಿ  ಭೇಟಿ  - ಕೃಪೆ: ಸಾಯಿಅಮೃತಧಾರಾ.ಕಾಂ 
ಕೇಂದ್ರ  ರೈಲ್ವೇ  ಖಾತೆ ರಾಜ್ಯ  ಸಚಿವರಾದ ಶ್ರೀ.ಕೆ.ಹೆಚ್.ಮುನಿಯಪ್ಪನವರು ಇದೇ ತಿಂಗಳ 15ನೇ ಸೆಪ್ಟೆಂಬರ್ 2011, ಗುರುವಾರದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನ ಪಡೆದರು.



ಸಮಾಧಿ ದರ್ಶನದ ನಂತರ ಸಚಿವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆಯವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಂಸತ್ ಸದಸ್ಯರಾದ ಶ್ರೀ.ಬಾವುಸಾಹೇಬ್ ವಾಕ್ಚುರೆ, ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಸುರೇಶ ವಾಬ್ಲೆ ಮತ್ತು ಶ್ರೀ.ಅಶೋಕ್ ಕಂಬೇಕರ್ ರವರುಗಳು ಕೂಡ ಉಪಸ್ಥಿತರಿದ್ದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment