Saturday, September 24, 2011

ಶ್ರೀ ಸಾಯಿಬಾಬಾ ಚಾರಿಟಬಲ್ ಟ್ರಸ್ಟ್ ಪರಶುರಾಮ್ ಆಶ್ರಮ, ಹರಿದ್ವಾರದ ವತಿಯಿಂದ ಸಾಯಿಬಾಬಾರವರ 93ನೇ ಮಹಾಸಮಾಧಿ ಉತ್ಸವದ ಆಚರಣೆ - ಕೃಪೆ: ಶ್ರೀ.ಎಸ್. ಸಿ.ದತ್ತಾ, ಹರಿದ್ವಾರ 

ಶ್ರೀ ಸಾಯಿಬಾಬಾ ಚಾರಿಟಬಲ್ ಟ್ರಸ್ಟ್ ಪರಶುರಾಮ್ ಆಶ್ರಮ, ಹರಿದ್ವಾರದ ವತಿಯಿಂದ ಸಾಯಿಬಾಬಾರವರ 93ನೇ ಮಹಾಸಮಾಧಿ ಉತ್ಸವವನ್ನು ಮುಂದಿನ ತಿಂಗಳ 6ನೇ ಅಕ್ಟೋಬರ್ 2011, ಗುರುವಾರದಂದು ಅತ್ಯಂತ ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ. 

ಮಂದಿರದಲ್ಲಿ ಪ್ರತಿ ವರ್ಷ ನಡೆಯುವಂತೆ, ಆ ದಿನ ಸುಮಾರು 200 ಕುಷ್ಟ ರೋಗಿಗಳಿಗೆ ಮತ್ತು ಅವರ ಮನೆಯವರಿಗೆ 5 ಕಿಲೋ ಅಕ್ಕಿ, 1 ಕಿಲೋ ಬೇಳೆ, ಉಚಿತ ಭೋಜನ ಹಾಗೂ ದಕ್ಷಿಣೆಯನ್ನು ನೀಡುವ ಮುಖಾಂತರ ವಿಶೇಷವಾಗಿ ಆಚರಿಸಲಾಗುತ್ತಿದೆ. 

ಕಾರ್ಯಕ್ರಮದ ವಿವರ ಈ ಕೆಳಕಂಡಂತೆ ಇದೆ: 

ಕಾಕಡಾ ಆರತಿ : ಬೆಳಿಗ್ಗೆ 6 ಘಂಟೆಗೆ.
ಸಾಯಿಬಾಬಾರವರಿಗೆ ಮಂಗಳ ಸ್ನಾನ : ಬೆಳಿಗ್ಗೆ 7 ಘಂಟೆಗೆ. 
ಸಾಯಿಬಾಬಾರವರಿಗೆ ಅರ್ಚನೆ ಪೂಜೆ : ಬೆಳಿಗ್ಗೆ 8 ಘಂಟೆಗೆ.
ಹೋಮ : ಬೆಳಿಗ್ಗೆ 9 ಘಂಟೆಗೆ. 
ಸಾಯಿ ನಾಮ ಜಪ : ಬೆಳಿಗ್ಗೆ 10 ಘಂಟೆಯಿಂದ 11 ಘಂಟೆಯವರೆಗೆ.
ಶ್ರೀ ಸಾಯಿ ಮಣಿ ಸಂಗೀತ ವೃಂದದ ವತಿಯಿಂದ ಸಾಯಿ ಭಜನೆ: ಬೆಳಿಗ್ಗೆ 11 ಘಂಟೆಯಿಂದ ಮಧ್ಯಾನ್ಹ 3 ಘಂಟೆಯವರೆಗೆ. 
ಮಧ್ಯಾನ್ಹ ಆರತಿ : 12 ಘಂಟೆಗೆ. 
ಸಾಯಿ ಮಹಾಪ್ರಸಾದ ಭೋಜನ : ಮಧ್ಯಾನ್ಹ 1 ಘಂಟೆಯಿಂದ 2 ಘಂಟೆಯವರೆಗೆ.
ಪ್ರಸಾದ ವಿತರಣೆ : ಮಧ್ಯಾನ್ಹ 2 ಘಂಟೆಯಿಂದ 3 ಘಂಟೆಯವರೆಗೆ. 

ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಟ್ರಸ್ಟ್ ನ ಪದಾಧಿಕಾರಿಗಳು ಈ ಮುಖಾಂತರ ನಿವೇದನೆ ಮಾಡಿಕೊಳ್ಳುತ್ತಾರೆ. 

ಕಾರ್ಯಕ್ರಮ ನಡೆಯುವ ಸ್ಥಳ: 

ಶ್ರೀ ಸಾಯಿಬಾಬಾ ಚಾರಿಟಬಲ್ ಟ್ರಸ್ಟ್ ಪರಶುರಾಮ್ ಆಶ್ರಮ
ಹೃಷಿಕೇಶ ಬೈ ಪಾಸ್ ರಸ್ತೆ, 
ದುಧಾಧಾರಿ ಮಂದಿರದ ಎದುರುಗಡೆ, 
ಭೂಪಟ್ವಾಲ ಚೌಕ, 
ಹರಿದ್ವಾರ, ಉತ್ತರಾಂಚಲ. 
ದೂರವಾಣಿ ಸಂಖ್ಯೆಗಳು: +91 1334  260356 / 260158 

ಕನ್ನಡ ಅನುವಾದ: ಶ್ರೀಕಂಠ ಶರ್ಮ  

No comments:

Post a Comment