Monday, September 19, 2011

ಚಿಕ್ಕಬಳ್ಳಾಪುರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಶ್ರೀ ಸಾಯಿ ಬ್ರಹ್ಮ ಸೇವಾ ಟ್ರಸ್ಟ್ (ನೋಂದಣಿ), ಶಿಲ್ಪಾ ಶಾಲೆ ಎದುರುಗಡೆ, ಟ್ಯಾಂಕ್ ಬಂಡ್ ರಸ್ತೆ (ಪಶ್ಚಿಮ), ಚಿಂತಾಮಣಿ  - 563 125, ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ 

ಈ ದೇವಾಲಯವು ಚಿಕ್ಕಬಳ್ಳಾಪುರ ತಾಲ್ಲೂಕಿನ ಚಿಂತಾಮಣಿಯ ಪಟ್ಟಣದ ಟ್ಯಾಂಕ್ ಬಂಡ್  ರಸ್ತೆಯಲಿರುತ್ತದೆ.  ದೇವಾಲಯವು ಚಿಂತಾಮಣಿ  ಬಸ್ ನಿಲ್ದಾಣದಿಂದ ಸುಮಾರು 10 ನಿಮಿಷಗಳ  ನಡಿಗೆಯ ಅಂತರದಲ್ಲಿರುತ್ತದೆ.

ಈ ದೇವಾಲಯದ ಭೂಮಿ ಪೂಜೆಯನ್ನು 26ನೇ ಸೆಪ್ಟೆಂಬರ್  2009 ರಂದು ನೆರವೇರಿಸಲಾಯಿತು. 

ಈ ದೇವಾಲಯವನ್ನು 5ನೇ  ಮೇ 2011 ರ ಪವಿತ್ರ ಅಕ್ಷಯ ತೃತೀಯ ದಿನದಂದು ಸಾವಿರಾರು ಜನ ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ಬೆಂಗಳೂರಿನ ವೇದ ಬ್ರಹ್ಮ ಶ್ರೀ.ಕೃಷ್ಣಮುರ್ತಿಯವರು (ಬಾಬು) ಉದ್ಘಾಟಿಸಸಿದರು. 

ದೇವಾಲಯವನ್ನು ಸಹೋದರಿಯರಾದ ಶ್ರೀಮತಿ.ಜಿ.ಭಾಗೀರಥಿ ಮತ್ತು ಶ್ರೀಮತಿ..ಜಿ.ಈಶ್ವರಮ್ಮ ರವರುಗಳು ಜಂಟಿಯಾಗಿ  ನಿರ್ಮಿಸಿರುತ್ತಾರೆ. ಶ್ರೀ. ಆರ್.ನಾಗರಾಜ್ ಮತ್ತು ಶ್ರೀಮತಿ.ಅಶ್ವಿನಿಯವರುಗಳು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ದಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ಮಂದಿರದಲ್ಲಿ  5 ಅಡಿ 6 ಅಂಗುಲ ಎತ್ತರದ ಅಮೃತ ಶಿಲೆಯ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಅಮೃತ ಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ.  ಸಾಯಿಬಾಬಾರವರ ವಿಗ್ರಹದ ಎಡಭಾಗದಲ್ಲಿ ಕಪ್ಪು ಶಿಲೆಯ ವಲ್ಲಿ ದೇವಸೇನಾ ಸಮೇತ ಸುಬ್ರಮಣ್ಯ  ದೇವರ ವಿಗ್ರಹ ಮತ್ತು ಬಲಭಾಗದಲ್ಲಿ ಕಪ್ಪು ಶಿಲೆಯ ಗಣಪತಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. 
 
ಶಿರಡಿಯಲ್ಲಿ ಇರುವಂತೆ ಸುಮಾರು 6 ಅಡಿ 2 ಅಂಗುಲದ ಸಮಾಧಿಯ ಮಾದರಿಯನ್ನು ಸಾಯಿಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಸ್ಥಾಪಿಸಲಾಗಿದೆ. 
 
ಸಾಯಿಬಾಬಾರವರ ವಿಗ್ರಹದ ಕೆಳಗಡೆ ಪುಟ್ಟ ಅಮೃತ ಶಿಲೆಯ ರಾಧಾ-ಕೃಷ್ಣ  ಹಾಗೂ ದತ್ತಾತ್ರೇಯ ದೇವರುಗಳ ವಿಗ್ರಹಗಳನ್ನು ಇರಿಸಲಾಗಿದೆ. 

ಸಾಯಿಬಾಬಾರವರ ವಿಗ್ರಹದ ಕೆಳಗಡೆ ದಿನನಿತ್ಯ ಅಭಿಷೇಕಕ್ಕೆ ಬಳಸುವ ಪಂಚಲೋಹದ ಗಣಪತಿ, ಸಾಯಿಬಾಬಾ ದೇವರುಗಳ ವಿಗ್ರಹಗಳನ್ನು ನೋಡಬಹುದು. 

ಪ್ರತಿ ಗುರುವಾರ ಮತ್ತು ವಿಶೇಷ ಉತ್ಸವದ ದಿನಗಳಂದು ಬಳಸಲಾಗುವ ಮರದ ಪಲ್ಲಕ್ಕಿಯನ್ನು ಮಂದಿರದ ಒಳಗಡೆ ಕಾಣಬಹುದು. 

ದೇವಾಲಯದ ಹೊರಭಾಗದಲ್ಲಿ  ಸುಮಾರು ಸಿಮೆಂಟ್ ನಲ್ಲಿ ಮಾಡಿದ  ಗಣಪತಿ  ಹಾಗೂ  ಅದರ ಎದುರುಗಡೆ  ಶಿವಲಿಂಗವನ್ನು ಸ್ಥಾಪಿಸಲಾಗಿದೆ.
 












 
ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 
 
ಆರತಿಯ ಸಮಯ 
 
ಕಾಕಡಾ ಆರತಿ 
6:00 AM
 ಮಧ್ಯಾನ್ಹ ಆರತಿ
12:00 PM
ಧೂಪಾರತಿ
6:00 PM
ಶೇಜಾರತಿ
8:00 PM

ಗುರುವಾರದ ದಿನದಂದು ಮಾತ್ರ ರಾತ್ರಿ 8:30 ಕ್ಕೆ ಶೇಜಾರತಿಯ ಕಾರ್ಯಕ್ರಮವಿರುತ್ತದೆ. 

ಪ್ರತಿದಿನ ದೇವಾಲಯದಲ್ಲಿ ಸಾಯಿಬಾಬಾರವರಿಗೆ ಅರ್ಚನೆಯನ್ನು ಮಾಡಲಾಗುತ್ತದೆ. ಸೇವಾಶುಲ್ಕ 5/- ರುಪಾಯಿಗಳು. 

ಪ್ರತಿದಿನ ಬೆಳಿಗ್ಗೆ  7:30 ಘಂಟೆಯಿಂದ 8:30 ಘಂಟೆಯವರೆಗೆ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ "ಪಂಚಾಮೃತ ಅಭಿಷೇಕ" ಮಾಡಲಾಗುತ್ತದೆ.  ಸೇವಾಶುಲ್ಕ 200/- ರುಪಾಯಿಗಳು. 

ಪ್ರತಿದಿನ ಗುರುವಾರ ಬೆಳಿಗ್ಗೆ  6:30 ಘಂಟೆಯಿಂದ 7:30 ಘಂಟೆಯವರೆಗೆ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ "ಪನ್ನೀರಿನ ಅಭಿಷೇಕ"ಮಾಡಲಾಗುತ್ತದೆ.  ಯಾವುದೇ ಸೇವಾಶುಲ್ಕ ಇರುವುದಿಲ್ಲ. ಮಂದಿರಕ್ಕೆ ಬರುವ ಎಲ್ಲಾ ಸಾಯಿ ಭಕ್ತರಿಗೂ ಪನ್ನೀರಿನ ಅಭಿಷೇಕವನ್ನು ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ.

ಪ್ರತಿ ಭಾನುವಾರ ಗಣಪತಿಗೆ ಹಾಗೂ ಪ್ರತಿ ಮಂಗಳವಾರ ಸುಬ್ರಮಣ್ಯ ದೇವರಿಗೆ ಪಂಚಾಮೃತ ಅಭಿಷೇಕವನ್ನು ಬೆಳಿಗ್ಗೆ 7:30 ಘಂಟೆಯಿಂದ 8:30 ಘಂಟೆಯವರೆಗೆ ಮಾಡಲಾಗುತ್ತದೆ.  ಸೇವಾಶುಲ್ಕ 200/- ರುಪಾಯಿಗಳು.  
 
ಪ್ರತಿ ಗುರುವಾರ ಸಂಜೆ 7:30 ಘಂಟೆಯಿಂದ 8:30 ಘಂಟೆಯವರೆಗೆ ಪಲ್ಲಕ್ಕಿ ಉತ್ಸವವಿರುತ್ತದೆ. ಯಾವುದೇ ಸೇವಾಶುಲ್ಕ ಇರುವುದಿಲ್ಲ. 

ಪ್ರತಿದಿನ ಶೇಜಾರತಿಯ ಸಮಯದಲ್ಲಿ ಸಾಯಿಬಾಬಾರವರಿಗೆ ಚಾಮರ ಸೇವೆಯನ್ನು ಮಾಡಲಾಗುತ್ತದೆ. ಯಾವುದೇ ಸೇವಾ ಶುಲ್ಕ ಇರುವುದಿಲ್ಲ.

ವಿಶೇಷ ಉತ್ಸವದ ದಿನಗಳು: 
 
ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ ಅಕ್ಷಯ ತೃತೀಯ ದಿನ.
ಗುರುಪೂರ್ಣಿಮೆ.
ಶ್ರೀರಾಮನವಮಿ. 
ವಿಜಯದಶಮಿ
ದತ್ತ ಜಯಂತಿ.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 
 

ಸ್ಥಳ: 
 
ಶಿಲ್ಪಾ ಶಾಲೆ ಎದುರುಗಡೆ, ಟ್ಯಾಂಕ್ ಬಂಡ್ ರಸ್ತೆ (ಪಶ್ಚಿಮ),ಚಿಂತಾಮಣಿ.

ವಿಳಾಸ:


ಶ್ರೀ ಶಿರಡಿ ಸಾಯಿಬಾಬಾ ಮಂದಿರ
ಶ್ರೀ ಸಾಯಿ ಬ್ರಹ್ಮ ಸೇವಾ ಟ್ರಸ್ಟ್ (ನೋಂದಣಿ), 
ಶಿಲ್ಪಾ ಶಾಲೆ ಎದುರುಗಡೆ, ಟ್ಯಾಂಕ್ ಬಂಡ್ ರಸ್ತೆ (ಪಶ್ಚಿಮ), 
ಚಿಂತಾಮಣಿ - 563 125, ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀಮತಿ.ಜಿ.ಭಾಗೀರಥಿ - ಅಧ್ಯಕ್ಷೆ  / ಶ್ರೀಮತಿ.ಜಿ.ಈಶ್ವರಮ್ಮ - ಉಪಾಧ್ಯಕ್ಷೆ / ಶ್ರೀ.ಆರ್.ನಾಗರಾಜ್ - ಕಾರ್ಯದರ್ಶಿ / ಶ್ರೀಮತಿ.ಎನ್.ಅಶ್ವಿನಿ - ಖಚಾಂಚಿ / ಶ್ರೀ.ಎನ್.ವಿಜಯಕೃಷ್ಣ - ಸದಸ್ಯರು.

ದೂರವಾಣಿ ಸಂಖ್ಯೆಗಳು: 
 
+ 91 89719 99683 / +91 98454 35026

ಮಾರ್ಗಸೂಚಿ:
ಚಿಂತಾಮಣಿ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಬಸ್ ನಿಲ್ದಾಣದಿಂದ ಸರಿ ಸುಮಾರು 10 ನಿಮಿಷಗಳ ನಡಿಗೆಯ ಅಂತರದಲ್ಲಿರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment