Wednesday, January 20, 2010

ಬಾಲಾಜಿ ವಸಂತ್ ತಾಲೀಮ್ (ಬಿ.ವಿ.ತಾಲೀಮ್ - ಶಿರಡಿ ಸಾಯಿಬಾಬಾ ವಿಗ್ರಹ ಕೆತ್ತಿದ ಶಿಲ್ಪಿ)  - ಕೃಪೆ - ಸಾಯಿಅಮೃತಧಾರಾ.ಕಾಂ



ಬಿ.ವಿ.ತಾಲೀಮ್ ರವರು ಸಹಸ್ರಾರು ಭಕ್ತರು ಶಿರಡಿಯ ಸಮಾಧಿ ಮಂದಿರದಲ್ಲಿ ದರ್ಶನ ಪಡೆಯುತ್ತಿರುವ ಸಾಯಿಬಾಬಾ ವಿಗ್ರಹವನ್ನು ಕೆತ್ತಿದ ಶಿಲ್ಪಿ. ಆಗ ಶಿರಡಿಯ ಮಾರುಕಟ್ಟೆಯಲ್ಲಿದ್ದ ಸಾಯಿಬಾಬಾರವರ ಭಾವಚಿತ್ರಗಳಿಂದ ಅವರ ವಿಗ್ರಹ ಕೆತ್ತುವುದು ಕಷ್ಟವಾಗಿತ್ತು. ಏಕೆಂದರೆ ಮುಖವನ್ನು ಭಾವಚಿತ್ರಗಳನ್ನು ನೋಡಿ ಕೆತ್ತುವುದು ಸ್ವಲ್ಪ ಕಷ್ಟದ ಕೆಲಸವೇ ಸರಿ.  ಒಂದೊಂದು ಭಾವಚಿತ್ರಗಳಲ್ಲಿ ಸಾಯಿಬಾಬಾರವರು ಒಂದೊಂದು ರೀತಿ ಕಂಡು ಬರುತ್ತಿದ್ದರು. ಇದರಿಂದ ಬಿ.ವಿ.ತಾಲೀಮ್ ರವರಿಗೆ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ.

ಆದ್ದರಿಂದ ಬಿ.ವಿ.ತಾಲೀಮ್ ರವರು ಸಾಯಿಬಾಬಾರವರನ್ನು ಭಕ್ತಿಯಿಂದ ಪ್ರಾರ್ಥಿಸಿದರು. ಅನೇಕ ಪುಸ್ತಕಗಳಲ್ಲಿ ಸಾಯಿಬಾಬಾರವರು ಬಿ.ವಿ.ತಾಲೀಮ್ ರವರ ಕನಸಿನಲ್ಲಿ ದಿವ್ಯ ದರ್ಶನ ನೀಡಿ ಅವರಿಗೆ ಮಾರ್ಗದರ್ಶನ ನೀಡಿದರು ಎಂದು ಹೇಳಲಾಗಿದೆ. ಆದರೆ, ಬಿ.ವಿ.ತಾಲೀಮ್ ರವರ ಮೊಮ್ಮಗನ ಪ್ರಕಾರ ಸಾಯಿಬಾಬಾರವರು ಒಂದು ದಿನ ಬೆಳಗಿನ ಸಮಯದಲ್ಲಿ ದಿವ್ಯ ಜ್ಯೋತಿಯ ಹಾಗೆ ದರ್ಶನ ನೀಡಿದರು ಮತ್ತು ಆ ಬೆಳಕಿನಲ್ಲಿ ಸಾಯಿಬಾಬಾರವರ ವದನವು ಬಹಳ ಸ್ಪಷ್ಟವಾಗಿ ಕಾಣುತ್ತಿತ್ತು ಹಾಗೂ ಸಾಯಿಬಾಬಾರವರ ದಯೆಯಿಂದ ಮತ್ತು ಮಾರ್ಗದರ್ಶನದಿಂದ ವಿಗ್ರಹದ ಮುಖವನ್ನು ಕೆತ್ತುವುದು ಬಹಳ ಸುಲಭವಾಯಿತು ಎಂದು ತಿಳಿದು ಬರುತ್ತದೆ.  ಅಷ್ಟೇ ಅಲ್ಲದೆ, ಸಾಯಿಬಾಬಾರವರು ತಾಲೀಮ್ ರವರಿಗೆ "ನೀನು ನನ್ನ ವಿಗ್ರಹ ಕೆತ್ತನೆಯ ಕೆಲಸವನ್ನು ಬೇಗನೆ ಮಾಡಿ ಮುಗಿಸು ಮತ್ತು ಮುಂದೆ ನೀನು ಬೇರೆ ಯಾವ ವಿಗ್ರಹವನ್ನು ಕೆತ್ತುವುದಿಲ್ಲ" ಎಂದು ತಿಳಿಸಿದರೆಂದು ಹೇಳಲಾಗಿದೆ. ಬಾಬಾರವರ ಮಾತುಗಳು ಅಕ್ಷರಶಃ ನಿಜವಾಯಿತು.


 

ಸಾಯಿಬಾಬಾರವರ ಸುಂದರ ವಿಗ್ರಹವನ್ನು ಇಟಾಲಿಯನ್ ಮಾರ್ಬಲ್ ನಿಂದ ಕೆತ್ತಲಾಗಿದೆ. ಇದರ ವೀಡಿಯೋ ನೋಡಲು ಈ ಕೆಳಕಂಡ ಜೋಡಣೆಯನ್ನು ಕ್ಲಿಕ್ಕಿಸಿ:



ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment