Wednesday, January 20, 2010

ಶ್ರೀ ವಾಸುದೇವಾನಂದ ಸರಸ್ವತಿ ಸ್ವಾಮಿ (ಟೆಂಬೆ ಸ್ವಾಮಿ) - ಕೃಪೆ - ಸಾಯಿಅಮೃತಧಾರಾ.ಕಾಂ


ಶ್ರೀ ವಾಸುದೇವಾನಂದ ಸರಸ್ವತಿಯವರು ದಕ್ಷಿಣ ಮಹಾರಾಷ್ಟ್ರದ ಸಾವಂತವಾಡಿ ಹತ್ತಿರದ ಮನಗಾವ್ ನಲ್ಲಿ ಅವಿಭಕ್ತ ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದರು. ಇವರ ಮನೆಯವರು ದತ್ತಾತ್ರೇಯನ ಔಪಾಸಕರಾಗಿದ್ದರು. ಇವರ ತಾತಾನವರು ಗುರುಚರಿತ್ರೆಯನ್ನು ಸದಾಕಾಲವೂ ಪಾರಾಯಣ ಮಾಡುತ್ತಿದ್ದರು. ಅಲ್ಲದೆ, ಗುರುಚರಿತ್ರೆಯ ಹಸ್ತಪ್ರತಿಗಳನ್ನು ಮಾಡಿ ಜೀವನೋಪಾಯಕ್ಕೊಸ್ಕರ ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ಜೀವನ ಮಾಡುತ್ತಿದ್ದರು. ಇವರ ತಂದೆಯವರಾದ ಶ್ರೀ ಗಣೇಶ್ ಬತಾಜಿ ಟೆಂಬೆಯವರು ಕೂಡ ದತ್ತಾತ್ರೇಯನ ಔಪಾಸಕರಾಗಿದ್ದು ಅನೇಕ ವರ್ಷಗಳ ಕಾಲ ಕರ್ನಾಟಕದ ಗುಲ್ಬರ್ಗ ಜಿಲ್ಲೆಯಲ್ಲಿರುವ ಗಾಣಗಾಪುರ ದತ್ತ ಕ್ಷೇತ್ರದಲ್ಲಿ ವಾಸ ಮಾಡಿರುತ್ತಾರೆ. ಇವರ ತಾಯಿಯವರಾದ ಶ್ರೀಮತಿ ರಮಾಬಾಯಿ ಕೂಡ ಅವರ ಕಾಲವನ್ನು ದತ್ತಾತ್ರೇಯನ ಜಪ, ಪ್ರದಕ್ಷಿಣೆ, ಪವಿತ್ರ ಗ್ರಂಥಗಳ ಪಾರಾಯಣ, ಅನ್ನ ಸಂತರ್ಪಣೆ ಮೂಲಕ ಬಹಳ ಕಾಲ ಮಾಡಿದರೆಂದು ತಿಳಿದುಬಂದಿದೆ. ಈ ರೀತಿ ಅನೇಕ ವರ್ಷಗಳು ಅವಿರತವಾಗಿ ಸೇವೆ ಮಾಡಿದ ಮೇಲೆ ಒಂದು ದಿನ ದತ್ತಾತ್ರೆಯರು ಶ್ರೀ ಗಣೇಶ್ ಬತಾಜಿ ಟೆಂಬೆಯವರ ಕನಸಿನಲ್ಲಿ ಬಂದು ಮನಗವ್ ಗೆ ವಾಪಸಾಗುವಂತೆ ತಿಳಿಸಿದರು ಮತ್ತು ಗೃಹಸ್ಥ  ಜೀವನ ನಡೆಸಲು ನಿರ್ದೇಶಿಸಿ ಸ್ವಲ್ಪ ಕಾಲದಲ್ಲಿಯೇ ಇವರ ಮಗನಾಗಿ ಅವತರಿಸುವೆನೆಂದು ಅಭಯ ನೀಡಿದರೆಂದು ಹೇಳಲಾಗಿದೆ. ಗಾಣಗಾಪುರದಿಂದ ವಾಪಸಾದ ಮೇಲೆ ಶ್ರಾವಣ ಮಾಸದ ಕೃಷ್ಣ ಪಕ್ಷದ ಪಂಚಮಿಯ ದಿವಸ ೧೮೫೪ ರಲ್ಲಿ ಶ್ರೀ ಗಣೇಶ್ ಬತಾಜಿ ಟೆಂಬೆಯವರ ಹಿರಿಯ ಮಗನಾಗಿ ವಾಸುದೇವಾನಂದ ಸರಸ್ವತಿಯವರು ಜನಿಸಿದರು. ಇವರ ವಂಶದಲ್ಲಿ ಆಧ್ಯಾತ್ಮಿಕ ಸಂಪತ್ತು ತುಂಬಿ ತುಳುಕುತ್ತಿತ್ತು. ಆದರೆ, ಕುಟುಂಬದ ಆರ್ಥಿಕ ಪರಿಸ್ಥಿತಿ ಅಷ್ಟು ಸರಿಯಾಗಿರಲಿಲ್ಲ. ಅವರ ಮನೆಗೆ ಪುರೋಹಿತ್ಯದಿಂದ ಬರುತ್ತಿದ್ದ ಆದಾಯ ಜೀವನ ನಡೆಸಲು ಸಾಲುತ್ತಿರಲಿಲ್ಲ. ಅದ್ದರಿಂದ ವಾಸುದೇವಾನಂದ ಸರಸ್ವತಿಯವರ ತಾತಾನವರು ವ್ಯವಸಾಯವನ್ನು ಕೂಡ ಮಾಡುತ್ತಿದ್ದರು.

ಶ್ರೀ ವಾಸುದೇವಾನಂದ ಸರಸ್ವತಿ ಸ್ವಾಮಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಕೆಳಕಂಡ ಜೋಡಣೆಯನ್ನು ಕ್ಲಿಕ್ಕ್ ಮಾಡಿ:

No comments:

Post a Comment