Friday, April 22, 2011

ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿ ಮಂದಿರ, ಶ್ರೀ ಶಿರಡಿ ಸಾಯಿ ಚಾರಿಟಬಲ್ ಟ್ರಸ್ಟ್ (ನೋಂದಣಿ) ಮತ್ತು ಶ್ರೀ.ಶಿರಡಿ ಸಾಯಿ ಕಲ್ಚರಲ್ ಸೆಂಟರ್, ಸಿಎ-2, ಹೆಚ್.ವಿ.ಆರ್.ಲೇಔಟ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಮಾಗಡಿ ಮುಖ್ಯ ರಸ್ತೆ, ಬೆಂಗಳೂರು-560 079, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ 

ದೇವಾಲಯದ ವಿಶೇಷತೆಗಳು:

ಶ್ರೀ.ಶಿರಡಿ ಸಾಯಿ ಕಲ್ಚರಲ್ ಸೆಂಟರ್ ನ್ನು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಲುವಾಗಿ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಒಪ್ಪಿಗೆಯೊಂದಿಗೆ 20ನೇ ಜೂನ್ 2004 ರಂದು ಪ್ರಾರಂಭಿಸಲಾಯಿತು. ಈ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕೇಂದ್ರವನ್ನು ಖ್ಯಾತ ಉದ್ಯಮಿ ಮತ್ತು ಸಮಾಜಸೇವಕ ಶ್ರೀ.ಆರ್.ಏನ್.ಶೆಟ್ಟಿಯವರು ಉದ್ಘಾಟನೆ ಮಾಡಿರುತ್ತಾರೆ. 

ಸಾಯಿಬಾಬಾ ಮಂದಿರದ ಪಕ್ಕದಲ್ಲಿರುವ ಉಚಿತ ವೈದ್ಯಕೀಯ ತಪಾಸಣಾ ಕೊಟಡಿಯನ್ನು 2ನೇ ಜುಲೈ 2006 ರಂದು ಕರ್ನಾಟಕ ಸರ್ಕಾರದ ವಿಧಾನಸಭಾ ಸದಸ್ಯರಾದ ಶ್ರೀ.ಎಂ.ಕೃಷ್ಣಪ್ಪನವರು ಉದ್ಘಾಟಿಸಿದರು. 

ಗ್ರಂಥಾಲಯ ಮತ್ತು ಧ್ಯಾನ ಮಂದಿರದ ಭೂಮಿ ಪೂಜೆ ಮತ್ತು ಶಿಲಾನ್ಯಾಸವನ್ನು 2ನೇ ಜುಲೈ 2006 ರಂದು ಕರ್ನಾಟಕ ಸರ್ಕಾರದ ವಿಧಾನಸಭಾ ಸದಸ್ಯರಾದ ಶ್ರೀ.ಎಂ.ಕೃಷ್ಣಪ್ಪನವರು ಮಾಡಿದರು. 

ಗ್ರಂಥಾಲಯ ಮತ್ತು ಧ್ಯಾನ ಮಂದಿರದ ಉದ್ಘಾಟನೆಯನ್ನು 7ನೇ ಜುಲೈ 2009 ರಂದು ರಂದು ಕರ್ನಾಟಕ ಸರ್ಕಾರದ ವಿಧಾನಸಭಾ ಸದಸ್ಯರಾದ ಶ್ರೀ.ಎಂ.ಕೃಷ್ಣಪ್ಪನವರು ಉದ್ಘಾಟಿಸಿದರು.

ದೇವಾಲಯದ ಮೊದಲನೇ ಮಹಡಿಯಲ್ಲಿ ವಿಶಾಲವಾದ ದ್ವಾರಕಾಮಾಯಿ ಭವನವನ್ನು ನಿರ್ಮಿಸಲಾಗಿದ್ದು ಇದರ ಉದ್ಘಾಟನೆಯನ್ನು 21ನೇ ಫೆಬ್ರವರಿ 2010 ರಂದು ಕರ್ನಾಟಕ ಸರ್ಕಾರದ ಮಾಜಿ ಮಂತ್ರಿಗಳಾದ ಶ್ರೀ.ವಿ.ಸೋಮಣ್ಣನವರು ಮಾಡಿರುತ್ತಾರೆ.

ದೇವಾಲಯದಲ್ಲಿ ಶಿರಡಿ ಸಾಯಿಬಾಬಾರವರ ಸುಂದರವಾದ ಅಮೃತ ಶಿಲೆಯ ವಿಗ್ರಹ ಮತ್ತು ಅಮೃತ ಶಿಲೆಯ ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿದೆ. 











ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು 

ದೇವಾಲಯದ ಸಮಯ: 
ಸೋಮವಾರದಿಂದ ಭಾನುವಾರದವರೆಗೆ ಸಮಯ (ಗುರುವಾರ ಹೊರತುಪಡಿಸಿ) 
6:30 AM to 9:30 AM
6:00 PM to 9:00 PM

 ಗುರುವಾರದ ಸಮಯ: 
5:00 AM to 10:30 AM
5:30 PM to 10:00 PM

ಆರತಿಯ ಸಮಯ:
ಪ್ರತಿದಿನ: ಬೆಳಿಗ್ಗೆ 8 AM ರಾತ್ರಿ 8 PM 
ಗುರುವಾರ: ಬೆಳಿಗ್ಗೆ 6:15 AM ರಾತ್ರಿ 8 PM  

ವಿಶೇಷ ಉತ್ಸವದ ದಿನಗಳು: 
  1. ಪ್ರತಿ ವರ್ಷದ 20ನೇ ಜೂನ್ ದೇವಾಲಯದ ವಾರ್ಷಿಕೋತ್ಸವ.
  2. ಮಹಾಶಿವರಾತ್ರಿ.
  3. ಶ್ರೀರಾಮನವಮಿ. 
  4. ಗುರುಪೂರ್ಣಿಮೆ. 
 ಸಾಮಾಜಿಕ ಕಾರ್ಯಚಟುವಟಿಕೆಗಳು: 

  1. ಆಂಗ್ಲ ಮತ್ತು ಆಯುರ್ವೇದ ತಜ್ಞರಿಂದ ಪ್ರತಿನಿತ್ಯ ಉಚಿತ ವೈದ್ಯಕೀಯ ತಪಾಸಣೆ ಮತ್ತು ಉಚಿತ ಔಷಧ ವಿತರಣೆಯನ್ನು ಸಾಯಿಬಾಬಾ ಮಂದಿರದ ಪಕ್ಕದಲ್ಲಿರುವ ಉಚಿತ ವೈದ್ಯಕೀಯ ತಪಾಸಣಾ ಕೊಟಡಿಯಲ್ಲಿ ನಡೆಸಲಾಗುತ್ತಿದೆ. 
  2. ಜ್ಞಾನ ಜ್ಯೋತಿ ಅಪಾಂಗ ಸಂಸ್ಥೆ (ನೋಂದಣಿ) ಮತ್ತು ಚೆನ್ನೈ ನ ಕಾಗ್ನಿಸೆಂಟ್ ಫೌಂಡೆಶನ್ ನ ಹಣಕಾಸಿನ ನೆರವಿನೊಂದಿಗೆ ದೇವಾಲಯದ ಟ್ರಸ್ಟ್ ನವರು ಶ್ರೀ.ಸಾಯಿ ಚೈತನ್ಯ ಬ್ರೈಲ್ ಪ್ರೆಸ್ ಎಂಬ ಅಂಗ ಸಂಸ್ಥೆಯನ್ನು ಸ್ಥಾಪಿಸಿದ್ದು ಅದರ ಮುಖಾಂತರ ಕರ್ನಾಟಕದ ಅಂಧ ವಿದ್ಯಾರ್ಥಿಗಳಿಗೆ ಬೇಕಾದ ಪುಸ್ತಕಗಳನ್ನು ಉಚಿತವಾಗಿ ನೀಡುತ್ತಾ ಬಂದಿರುತ್ತದೆ. 
  3. ಸಿಂಡಿಕೇಟ್ ಬ್ಯಾಂಕ್ ಕಾಲೋನಿಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ಶಿಕ್ಷಣ ತರಗತಿಗಳನ್ನು ನಡೆಸುತ್ತಿದೆ. 
  4. ಪ್ರತಿವರ್ಷ ಪದವಿಯನ್ನು ವ್ಯಾಸಂಗ ಮಾಡುತ್ತಿರುವ 50 ಅರ್ಹ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿವೇತನವನ್ನು ನೀಡುತ್ತಾ ಬಂದಿರುತ್ತದೆ. 
  5. ದೇವಾಲಯದ ಟ್ರಸ್ಟ್ ನ ವತಿಯಿಂದ ಪ್ರತಿವರ್ಷ ದೇವಾಲಯದ ಆವರಣದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಮತ್ತು ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ. 
  6. ಪ್ರತಿನಿತ್ಯ ದೇವಾಲಯದ ಆವರಣದಲ್ಲಿ ಉಚಿತ ಯೋಗ ತರಗತಿಗಳನ್ನು (3 ಬ್ಯಾಚ್ ಗಳು) ನಡೆಸಲಾಗುತ್ತಿದೆ. 
  7. ದೇವಾಲಯದ ಆವರಣದಲ್ಲಿ ಮಕ್ಕಳ ಬುದ್ಧಿ ವಿಕಸನಕ್ಕಾಗಿ ಉಚಿತ ಶಿಬಿರಗಳನ್ನು ನಡೆಸಲಾಗುತ್ತಿದೆ. ಈ ಶಿಬಿರಗಳಲ್ಲಿ ಚಿತ್ರಕಲೆ, ಭಜನೆ ಮತ್ತು ಶ್ಲೋಕ ತರಗತಿಗಳನ್ನು ನಡೆಸಲಾಗುತ್ತಿದೆ. 
  8. "ಸಾಯಿ ವಿದ್ಯಾನಿಧಿ" ಯ ಅಡಿಯಲ್ಲಿ  ಬಡ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ನೀಡಲಾಗುತ್ತಿದೆ. 
  9. ಕರ್ನಾಟಕದ ರಂಗನಾಥಪುರದ "ಗುಡ್ಡಣ್ಣ ನಗರಸಭಾ ಶಾಲೆ" ಗೆ ಧನಸಹಾಯ ವನ್ನು ಮಾಡುತ್ತಾ ಬಂದಿರುತ್ತದೆ. 
ದೇವಾಲಯದ ಮುಂದಿನ ಯೋಜನೆಗಳು: 

ದೇವಾಲಯದ ಟ್ರಸ್ಟ್ ನ ಆಡಳಿತ ಮಂಡಳಿಯವರು ದೇವಾಲಯದ ಆವರಣದಲ್ಲಿ ಧುನಿಯನ್ನು ಮತ್ತು ದೇವಾಲಯಕ್ಕೆ ರಾಜಗೋಪುರವನ್ನು ನಿರ್ಮಿಸಲು ಯೋಜನೆಯನ್ನು ಸಿದ್ದಪಡಿಸಿರುತ್ತಾರೆ. 

ದೇಣಿಗೆಗೆ ಮನವಿ: 

ದೇವಾಲಯದ ಎಲ್ಲ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಯೋಜನೆಗಳಿಗಾಗಿ ಧನ ಸಹಾಯವನ್ನು ಮಾಡಲು ಇಚ್ಚಿಸುವ ಸಾಯಿ ಭಕ್ತರು ಚೆಕ್ ಅಥವಾ ಡಿಡಿ ಮುಖಾಂತರ "ಸಿಂಡಿಕೇಟ್ ಬ್ಯಾಂಕ್ ಕಾಲೋನಿ ವೆಲ್ಫೇರ್ ಅಸೋಸಿಏಷನ್" ಇವರಿಗೆ ಸಂದಾಯವಾಗುವಂತೆ ಹಣವನ್ನು ಕಳುಹಿಸಬೇಕೆಂದು ದೇವಾಲಯದ ಆಡಳಿತ ಮಂಡಳಿಯವರು ಈ ಮುಖಾಂತರ ಮನವಿಯನ್ನು ಮಾಡಿಕೊಳ್ಳುತ್ತಾರೆ. 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 
ಪ್ರಶಾಂತ ಗಣಪತಿ ದೇವಾಲಯದ ಪಕ್ಕ, ಮಾಗಡಿ ಮುಖ್ಯರಸ್ತೆ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ

ವಿಳಾಸ: 
ಶ್ರೀ ಶಿರಡಿ ಸಾಯಿ ಮಂದಿರ
ಶ್ರೀ ಶಿರಡಿ ಸಾಯಿ ಚಾರಿಟಬಲ್ ಟ್ರಸ್ಟ್ (ನೋಂದಣಿ) ಮತ್ತು ಶ್ರೀ.ಶಿರಡಿ ಸಾಯಿ ಕಲ್ಚರಲ್ ಸೆಂಟರ್, 
ಸಿಎ-2, ಹೆಚ್.ವಿ.ಆರ್.ಲೇಔಟ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, 
ಮಾಗಡಿ ಮುಖ್ಯ ರಸ್ತೆ, ಬೆಂಗಳೂರು-560 079, ಕರ್ನಾಟಕ

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಆರ್.ಕುಪ್ಪುಸ್ವಾಮಿ / ಶ್ರೀ.ಎಂ.ಏನ್.ರವಿಕಿರಣ್ / ಶ್ರೀ.ಮಾಧವ ಕಾಮತ್ / ಶ್ರೀ.ಸಾಯಿ ರಾಘವೇಂದ್ರ ಸ್ವಾಮಿ 

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 
+91 80 23351681/+91 80 23282777/ +91 93437 00712 / +91 98451 16244 / +91 94485 53286/+91 93428 57607



ಈ ಮೇಲ್ ವಿಳಾಸ: 


ಮಾರ್ಗಸೂಚಿ: 
ಮಾಗಡಿ ಮುಖ್ಯರಸ್ತೆಯಲ್ಲಿ ಹೌಸಿಂಗ್ ಬೋರ್ಡ್ ಬಸ್ ನಿಲ್ದಾಣದಲ್ಲಿ ಇಳಿಯುವುದು. 5 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment