Saturday, April 2, 2011

ಶ್ರೀ ಸಾಯಿಪಾದಾನಂದ ಸತ್ಸಂಗದ ವತಿಯಿಂದ 10ನೇ ಏಪ್ರಿಲ್ 2011 ರಂದು  ಶ್ರೀ ವಿಷ್ಣು ಸಹಸ್ರನಾಮ ಹೋಮ ಕಾರ್ಯಕ್ರಮ  - 2ನೇ ಏಪ್ರಿಲ್ 2011 - ಕೃಪೆ: ಸಾಯಿಅಮೃತಧಾರಾ.ಕಾಂ 

ಸದ್ಗುರುವಿಗೆ ಗುರುದಕ್ಷಿಣೆಯಾಗಿ 11 ಲಕ್ಷ ಶ್ರೀ.ವಿಷ್ಣು ಸಹಸ್ರನಾಮ ಪಾರಾಯಣಗಳನ್ನು ಅರ್ಪಿಸಲು ಸಂಕಲ್ಪಿಸಿರುವ ಶ್ರೀ.ಸಾಯಿಪಾದಾನಂದ ಸತ್ಸಂಗವು ಶ್ರೀ.ವಿಷ್ಣು ಸಹಸ್ರನಾಮ ಹೋಮವನ್ನು 10ನೇ ಏಪ್ರಿಲ್ 2011, ಭಾನುವಾರ, ಬೆಳಿಗ್ಗೆ 9 ರಿಂದ ಸಾಮುಹಿಕ ಶ್ರೀ.ವಿಷ್ಣು ಸಹಸ್ರನಾಮ ಪಾರಾಯಣದೊಡಗೂಡಿ ಮಾಡುವಂತೆ ಏರ್ಪಡಿಸಿದೆ.  ಪೂರ್ಣಾಹುತಿ ಕಾರ್ಯಕ್ರಮ ಮಧ್ಯಾನ್ಹ 12 ಘಂಟೆಗೆ ಇರುತ್ತದೆ.  ಪೂರ್ಣಾಹುತಿya ನಂತರ ಶ್ರೀ.ವಿಷ್ಣು ಸಹಸ್ರನಾಮದ ಬಗ್ಗೆ ವಿದ್ಯಾ ವಾಚಸ್ಪತಿ ಡಾ.ಅರಳು ಮಲ್ಲಿಗೆ ಪಾರ್ಥಸಾರಥಿಯವರಿಂದ ಪ್ರವಚನ ಕಾರ್ಯಕ್ರಮವಿರುತ್ತದೆ.
ಕಾರ್ಯಕ್ರಮ ನಡೆಯುವ ಸ್ಥಳ ಈ ಕೆಳಕಂಡಂತೆ ಇದೆ: 

ಶ್ರೀ.ಕುಚಲಾಂಬ ಕಲ್ಯಾಣ ಮಹಲ್, 
9ನೇ "ಎ" ಮುಖ್ಯರಸ್ತೆ, 2ನೇ ಬ್ಲಾಕ್,
ಜಯನಗರ, ಬೆಂಗಳೂರು-560 011. 

ಶ್ರೀ.ವಿಷ್ಣು ಸಹಸ್ರನಾಮ ಪಾರಾಯಣದಲ್ಲಿ ಇದುವರೆಗೆ ಭಾಗವಹಿಸಿರುವ ಭಕ್ತರೆಲ್ಲಾ ತಪ್ಪದೆ ಈ ಕಾರ್ಯಕ್ರಮಕ್ಕೆ ಆಗಮಿಸಿ ಭಗವತ್ಕಾರ್ಯವನ್ನು ಯಶಸ್ವಿಗೊಳಿಸಿ, ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ.ಸಾಯಿಪಾದಾನಂದ ಸತ್ಸಂಗವು ಮನವಿ ಮಾಡಿಕೊಳ್ಳುತ್ತದೆ. 

ಹೆಚ್ಚಿನ ವಿವರಗಳಿಗೆ ಶ್ರೀ ಸಾಯಿಪಾದಾನಂದ ಸತ್ಸಂಗದ ಸಂಪರ್ಕದ ವಿವರಗಳನ್ನು ಈ ಕೆಳಗೆ ಕೊಡಲಾಗಿದೆ:

ಶ್ರೀ ಸಾಯಿಪಾದಾನಂದ ಸತ್ಸಂಗ
ನಂ.29/1, ಭಗವತಿ ನಿಲಯ, 6ನೇ ಮುಖ್ಯರಸ್ತೆ,
8ನೇ ಮತ್ತು 9ನೇ ಅಡ್ಡ ರಸ್ತೆ ನಡುವೆ,
ನರಸಿಂಹರಾಜ ಕಾಲೋನಿ,
ಬೆಂಗಳೂರು-560 019.
ಕರ್ನಾಟಕ
ದೂರವಾಣಿ: +91 80 2677 0695
ಈ ಮೇಲ್: saipadananda@gmail.com

ಕನ್ನಡ ಅನುವಾದ:ಶ್ರೀಕಂಠ ಶರ್ಮ

No comments:

Post a Comment